Homeಕರ್ನಾಟಕ‘ನನ್ನಪ್ಪ ಒಬ್ಬ ಪರಿಪೂರ್ಣ ಕಮ್ಯುನಿಸ್ಟ್’: ಕ್ರಾಂತಿಕಾರಿ ‘ಚೆ’ ಮಗಳು ಅಲಿಡಾ ಗುವೆರಾ

‘ನನ್ನಪ್ಪ ಒಬ್ಬ ಪರಿಪೂರ್ಣ ಕಮ್ಯುನಿಸ್ಟ್’: ಕ್ರಾಂತಿಕಾರಿ ‘ಚೆ’ ಮಗಳು ಅಲಿಡಾ ಗುವೆರಾ

- Advertisement -
- Advertisement -

‘ಚೆ’ ಎಷ್ಟು ಕ್ರಾಂತಿಕಾರಿಯು ಅಷ್ಟೆ ರೊಮ್ಯಾಂಟಿಕ್ ಕೂಡಾ ಆಗಿದ್ದರು. ಮನುಕುಲವನ್ನು ಪ್ರೀತಿಸುವ ಸಾಮರ್ಥ್ಯ ಇದ್ದರೆ ಮಾತ್ರ ಅವರು ಸಮರ್ಥ ವ್ಯಕ್ತಿ ಎಂದೆಣಿಸಿಕೊಳ್ಳಬಹುದು. ನನ್ನಪ್ಪ ಒಬ್ಬ ಪರಿಪೂರ್ಣ ಕಮ್ಯುನಿಸ್ಟ್ ಎಂದು ಕ್ರಾಂತಿಕಾರಿ ಚೆ ಗೆವಾರ ಅವರ ಮಗಳು, ಮಕ್ಕಳ ವೈದ್ಯೆ, ಮಾನವ ಹಕ್ಕುಗಳ ಹೋರಾಟಗಾರ್ತಿ ಡಾ. ಅಲಿಡಾ ಗೆವಾರ ಅಭಿಪ್ರಾಯಪಟ್ಟರು. ಅವರು ಗುರುವಾರ ಸಂಜೆ ಬೆಂಗಳೂರಿನಲ್ಲಿ ನಡೆದ ‘ಪ್ರಗತಿಪರ ಸಂಘಟನೆಗಳು’ ಹಾಗೂ ‘ಕ್ಯೂಬಾ ಸೌಹಾರ್ದತಾ ಸಮಿತಿ’ ಆಯೋಜಿಸಿದ್ದ ‘ನಾಗರೀಕ ಸನ್ಮಾನ’ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ತಂದೆ ಚೆ ಗೆವೆರಾ ಅವರ ಒಡನಾಟವನ್ನು ಸ್ಮರಿಸಿದ ಅಲಿಡಾ ಗುವೆರಾ,“ನನ್ನ ತಂದೆ ಕವನಗಳೆಂದರೆ ಬಹಳ ಪ್ರೀತಿ. ಕವಿತೆಗಳನ್ನು ಹಾಡುತ್ತಿದ್ದರು ಮತ್ತು ಬರೆಯುತ್ತಿದ್ದರು. ಅವರ ಬರಹಗಳಿಗೆ ಅವರೇ ವಿಮರ್ಶಕರೂ ಆಗಿರುತ್ತಿದ್ದರು. ಹಾಗಾಗಿ ಅವರು ಅವರೇ ಬರೆದ ಕವಿತೆಗಳನ್ನು ಓದುತ್ತಿರಲಿಲ್ಲ. ಆದರೆ ರಾತ್ರಿ ಹೊತ್ತಿನಲ್ಲಿ ನನ್ನ ತಾಯಿಗಾಗಿ ನನ್ನ ತಂದೆ ಚೆ ಗುವೆರಾ ಕವಿತೆಗಳನ್ನು ಓದುತ್ತಿದ್ದರು. ಅಪ್ಪ ಕ್ರಾಂತಿಗಾಗಿ ಕಾಂಗೋಗೆ ಹೊರಡುವಾಗ ನನ್ನ ತಾಯಿಗಾಗಿ ಅವರೇ ವಾಚನ ಮಾಡಿದ ಕವನಗಳನ್ನು ರೆಕಾರ್ಡ್ ಮಾಡಿ ಕೊಟ್ಟು ಹೋಗಿದ್ದರು” ಎಂದು ತಂದೆಯನ್ನು ನೆನಪಿಸಿಕೊಂಡರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ನಿಜವಾದ ಕ್ರಾಂತಿಯಲ್ಲಿ ಯಾವತ್ತೂ ಕೂಡಾ ಪುರುಷ ಮತ್ತು‌ ಮಹಿಳೆ ಸಮಾನವಾಗಿ ಒಳಗೊಂಡಿರಬೇಕು. ಕ್ರಾಂತಿಯಲ್ಲಿ ಪುರುಷ ಮತ್ತು ಮಹಿಳೆಯರ ಸಮಾನ ಪಾಲುದಾರಿಕೆ ಇರಬೇಕು ಎಂದು ತಂದೆ ಚೆಗುವೆರಾ ನಂಬಿದ್ದರು” ಎಂದು ಅವರು ಹೇಳಿದರು.

ಸದ್ಯದ ಕ್ಯೂಬಾ ಸ್ಥಿತಿಗಳನ್ನು ವಿವರಿಸಿದ ಅವರು,“ಕೋವಿಡ್ ಸಾಂಕ್ರಾಮಿಕದಿಂದಾಗಿ ಕಳೆದ ಎರಡು ವರ್ಷಗಳಿಂದ ಕ್ಯೂಬಾ ದೊಡ್ಡ ಪ್ರಮಾಣದಲ್ಲಿ ಅರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ. ಸಂಪನ್ಮೂಲಗಳ ಕೊರತೆ ಎದುರಾಗಿದೆ. ಅಲ್ಲಿನ ಸರ್ಕಾರ ಚೇತರಿಕೆಗಾಗಿ ಶ್ರಮಿಸುತ್ತಿದೆ” ಎಂದು ತಿಳಿಸಿದರು.

“ಚೆ ಗುವೆರಾ ಎಷ್ಟು ಕ್ರಾಂತಿಕಾರಿಯೋ ಅಷ್ಟೆ ರೊಮ್ಯಾಂಟಿಕ್ ಕೂಡಾ ಆಗಿದ್ದರು. ಹೇಗೆ ಪ್ರೀತಿಸಬೇಕು ಎಂದು ಅವರು ತಿಳಿದಿದ್ದರು. ಹೇಗೆ ಒಬ್ಬ ವ್ಯಕ್ತಿ ತನ್ನ ಮಗಳು ಮತ್ತು ಪತ್ನಿಯ ಜೊತೆ ಬದುಕುತ್ತಲೇ, ಅವರನ್ನೂ ಕ್ರಾಂತಿಯ ಭಾಗವಾಗಿಸಿಕೊಂಡು ಜಗತ್ತಿಗಾಗಿ ಹೇಗೆ ಹೋರಾಡಬೇಕು ಎಂದು ತಿಳಿಸಿಕೊಟ್ಟರು. ಮನುಕುಲವನ್ನು ಪ್ರೀತಿಸುವ ಸಾಮರ್ಥ್ಯ ಇದ್ದರೆ ಮಾತ್ರ ಅವರು ಸಮರ್ಥ ವ್ಯಕ್ತಿ. ನನ್ನಪ್ಪ ಚೆಗುವೆರಾ ಒಬ್ಬ ಪರಿಪೂರ್ಣ ಕಮ್ಯುನಿಸ್ಟ್” ಎಂದು ಅವರು ಹೆಮ್ಮೆಪಟ್ಟುಕೊಂಡರು

“ನಾವು ಮಾತನಾಡುವಾಗ ಹೆಚ್ಚು ಜಾಗರೂಕರಾಗಿರಬೇಕು. ಸರಿಯಾದುದನ್ನೇ ಹೇಳಿದರೂ ಹೇಗೆ ಹೇಳಬೇಕು ಎಂಬ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು. ಮಾಹಿತಿಗಳ ತಿರುಚುವಿಕೆ ಮತ್ತು ತಪ್ಪಾಗಿ ಪ್ರಸಾರ ಮಾಡುವಿಕೆಯೂ ಈಗಿನ ಮನುಕುಲವನ್ನು ಕಾಡುತ್ತಿರುವ ದೊಡ್ಡ ಸಮಸ್ಯೆಗಳಲ್ಲಿ ಒಂದು” ಎಂದು ಹೇಳಿದ ಅವರು ‘ಚೆ’ ಹೇಳದ ಮಾತುಗಳನ್ನು ಅವರ ಹೆಸರಿನಲ್ಲಿ ಹರಿದಾಡಿದ ಘಟನೆಯೊಂದನ್ನು ಹಂಚಿಕೊಂಡರು.

“ಭಾರತ ಮತ್ತು ಕ್ಯೂಬಾ ಭಾವನಾತ್ಮಕವಾಗಿ ದೂರವೇನಿಲ್ಲ. ಭಾರತದ ಜನರು ಕ್ಯೂಬಾ ಬೆಂಬಲಕ್ಕೆ ನಿಂತಿದ್ದರು. ಈಗಲೂ ಭಾರತ-ಕ್ಯೂಬಾ ಜೊತೆಯಲ್ಲೇ ಇದ್ದೇವೆ. ಇದೇ ಭಾರತ-ಕ್ಯೂಬಾ ಸೌಂದರ್ಯ. ‘ಭಾರತ-ಕ್ಯೂಬಾ ಭಾವನಾತ್ಮಕ ಒಗ್ಗಟ್ಟು’ ಎನ್ನುವುದು ಮಾನವತೆಯ ಸೌಂದರ್ಯವಾಗಿದೆ ಎಂದು ನಾನು ನಂಬಿದ್ದೇನೆ” ಎಂದು ಅವರು ಹೇಳಿದರು.

“ಎರಡು ವರ್ಷ ಕೊರೋನಾ ಸಾಂಕ್ರಾಮಿಕ ರೋಗದಿಂದ ನಾವು ಕಷ್ಟಕ್ಕೀಡಾದೆವು. ಕ್ಯೂಬಾ ಆಗ ಆರ್ಥಿಕತೆಯಿಂದಲೂ ಬಳಲಿತ್ತು. ಆದರೆ ನಾವು ಜನರ ಬದುಕನ್ನು ರಕ್ಷಣೆ ಮಾಡಲೇಬೇಕಿತ್ತು ಮತ್ತು ಅದನ್ನು ನಾವು ಮಾಡಿದೆವು ಕೂಡ. ಗಂಭೀರ ಆರ್ಥಿಕ‌ ಸಮಸ್ಯೆ ಎದುರಾದಾಗಲೂ ಅದನ್ನು ನಿಭಾಯಿಸಿದೆವು. ನಾವು ಬಹಿಷ್ಕಾರದ ಬಗ್ಗೆ ಸುಲಭವಾಗಿ ಮಾತಾಡಬಹುದು‌. ಆದರೆ ಬಹಿಷ್ಕಾರವನ್ನೇ ಬದುಕುವುದು ಅಷ್ಟು ಸುಲಭವಲ್ಲ. ನಮ್ಮಲ್ಲಿದ್ದ ಎಲ್ಲಾ ಅನುದಾನವನ್ನು ನಾವು ನಾಗರಿಕರಿಗಾಗಿ ಬಳಸಿದ್ದೇವೆ” ಎಂದು ತಿಳಿಸಿದರು.

“ಜಗತ್ತಿನ ದುರಂತ ಏನೆಂದರೆ ಎಲ್ಲಾ ಜೀವರಕ್ಷಕ ಔಷಧಿಗಳ ಪೇಟೆಂಟ್ ಅಮೇರಿಕಾದ ಬಳಿ ಇದೆ. ನಾವು ಹಣ ಕೊಟ್ಟರೂ ಅಮೇರಿಕಾ ನಮಗೆ ಔಷಧಿಗಳನ್ನು ಕೊಡುವುದಿಲ್ಲ. ಬೇರೆ ಯಾರಾದರೂ ಕೊಂಡು, ಅವರ ಬಳಿ ನಾವು ಕೊಂಡರೆ ಅವರಿಗೂ ಅಮೇರಿಕಾ ತೊಂದರೆ ಕೊಡುತ್ತದೆ. ಅದಕ್ಕೆ ನಾವು ಉಪಾಯವಾಗಿ ಕನಿಷ್ಠ ಐದು ದೇಶದ ಕೈದಾಟಿದ ಮೇಲೆ ಅವರಿಂದ ನಾವು ಔಷಧಿ ಕೊಳ್ಳುವ ವ್ಯವಸ್ಥೆ ಮಾಡಿದೆವು. ಆಗ ಔಷದಿಯ ಬೆಲೆ ಐದು ಪಟ್ಟು ಹೆಚ್ಚಾಗುತ್ತದೆ. ಇಷ್ಟಾದರೂ ನಾವು ನಮ್ಮ ಜನರಿಗೆ ಸಂಪೂರ್ಣ ಉಚಿತವಾದ ವೈದ್ಯಕೀಯ ಸೌಲಭ್ಯ ಕೊಡುತ್ತೇವೆ” ಎಂದು ಅವರು ಹೇಳಿದರು.

“ನಮ್ಮ ವಿಜ್ಞಾನಿಗಳು ಕ್ಯೂಬಾದಲ್ಲಿ ಒಟ್ಟು ಐದು ಬಗೆಯ ಕೋವಿಡ್ ವ್ಯಾಕ್ಸಿನ್‌ಗಳನ್ನು ಕಂಡುಹಿಡಿದರು. ಆದರೆ ಅದಕ್ಕೆ ಬೇಕಾದ ಸಿರಿಂಜ್‌ಗಳ ಮೇಲೂ ಅಮೇರಿಕಾ ನಿರ್ಬಂಧ ಹೇರಿತ್ತು. ಕಡೆಗೆ ನಾವು ಮೂಗಿನ ಹೊಳ್ಳೆಗಳ ಮೂಲಕ ವ್ಯಾಕ್ಸಿನ್ ಅನ್ನು ಜನರಿಗೆ ನೀಡಿ ಯಶಸ್ಸು ಗಳಿಸಿದೆವು. ಇದೀಗ ಕ್ಯೂಬಾ ಮತ್ತೊಂದು ಹೊಸ ವ್ಯಾಕ್ಸಿನ್ ಕಂಡು ಹಿಡಿದಿದ್ದು, ಅದನ್ನೂ ಕೂಡಾ ಮೂಗಿನ ಮೂಲಕ ಕೊಡಲಾಗುತ್ತದೆ. ಹಾಗಾಗಿ ನಮಗೆ ಅಮೇರಿಕಾದ ಸಿರೀಂಜು ಅಗತ್ಯವಿಲ್ಲ” ಎಂದು ಹೇಳಿದರು.

“ಕ್ಯೂಬಾ ಜೊತೆಗೆ ಕೇರಳ ತನ್ನ ಬೆಂಬಲವನ್ನು ನೀಡಿತು. ಕ್ಯೂಬಾ ಒಂದು ದೇಶವಾಗಿ ಕೇರಳದ ಜೊತೆ ಜೊತೆಗೆ ಸಾಗುತ್ತಿದ್ದೇವೆ. ಇದಕ್ಕೆ ನಾವು ಒಗ್ಗಟ್ಟು ಎನ್ನುತ್ತೇವೆ. ಆಯುರ್ವೇದಿಕೆ ಮೆಡಿಸಿನ್ ಗಳನ್ನು ಕ್ಯೂಬಾದಲ್ಲಿ ಅಭಿವೃದ್ದಿಪಡಿಸಲು ಕೇರಳದ ಸಹಕಾರ ನೀಡಿದೆ. ಕೇರಳ ಮತ್ತು ಕ್ಯೂಬಾದ ಮನೋಧರ್ಮ ಒಂದೇ ಆಗಿದೆ. ಹಾಗಾಗಿ ಕೇರಳ ಮತ್ತು ಕ್ಯೂಬಾದಲ್ಲಿ ಒಂದೇ ರೀತಿಯ ಯೋಜನೆ ಮತ್ತು ಯೋಚನೆಗಳಿವೆ. ಕ್ಯೂಬಾ ಮತ್ತು ಕೇರಳದ ಈ ಸಂಬಂಧದಿಂದ ಜಗತ್ತು ಕಲಿಯುವಂತದ್ದು ಬಹಳ ಇದೆ” ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ, ಅಲಿಡಾ ಗೆವಾರ ಅವರ ಪುತ್ರಿ ಅರ್ಥಶಾಸ್ತ್ರಜ್ಞೆ ಎಸ್ತೆಫಾನಿಯಾ, ಹಿರಿಯ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ, ಕೇರಳದ ಮಾಜಿ ಸಚಿವ, ಕ್ಯೂಬಾ ಸೌಹಾರ್ದ ಸಮಿತಿ ಅಧ್ಯಕ್ಷ ಎಂ.ಎ. ಬೇಬಿ, ನಿವೃತ್ತ ನ್ಯಾಯಮೂರ್ತಿ ಎಚ್.ಎಸ್. ನಾಗಮೋಹನ ದಾಸ್, ದಲಿತ ಹಕ್ಕುಗಳ ಹೋರಾಟಗಾರ ಹಿರಿಯ ಮುಖಂಡ ಮಾವಳ್ಳಿ ಶಂಕರ್, ಹಿರಿಯ ಪತ್ರಕರ್ತೆ ಡಾ. ವಿಜಯಾ, ಲೇಖಕಿಯರ ಸಂಘದ ಅಧ್ಯಕ್ಷೆ ಎಚ್.ಎಲ್. ಪುಷ್ಪ, ಸಿಪಿಐ ಮುಖಂಡ ಸಿದ್ದನಗೌಡ ಪಾಟೀಲ್, ಹಿರಿಯ ವಿಧ್ವಾಂಸ ಜಿ. ರಾಮಕೃಷ್ಣ, ಸಿಪಿಐಎಂಎಲ್‌‌ ನಾಯಕಿ ಮೈತ್ರೇಯಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಇದನ್ನೂ ಓದಿ: ಬಹುತ್ವ ನಾಶ ಮಾಡಲು ಹೊರಟವರಿಗೆ ‘ಚೆ’ ಅಭಿಮಾನಿಗಳು ಉತ್ತರಿಸುತ್ತೇವೆ: ಪ್ರೊ. ಬರಗೂರು ರಾಮಚಂದ್ರಪ್ಪ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...