Homeಮುಖಪುಟಭಾಷಾತೀತವಾಗಿ ಏಕಭಾಷೆಯಾಗುತ್ತಿರುವ “Hate Speech” - ದ್ವೇಷದ ಭಾಷೆ

ಭಾಷಾತೀತವಾಗಿ ಏಕಭಾಷೆಯಾಗುತ್ತಿರುವ “Hate Speech” – ದ್ವೇಷದ ಭಾಷೆ

- Advertisement -
- Advertisement -

ಇಂಗ್ಲಿಷಿನಲ್ಲಿ ಒಂದು ಗಾದೆ ಮಾತಿದೆ- “Taste Yours Words Before Spitting”- “ಉಗುಳುವ ಮೊದಲು ನೀನಾಡುವ ಶಬ್ದಗಳ ರುಚಿ ನೋಡು” ಎಂದು. ಅತ್ಯಂತ ಸರಳವಾಗಿ ಮಾತಿನಿಂದಾಗುವ ಅನಾಹುತಗಳ ಬಗ್ಗೆ ಎಚ್ಚರಿಸಲು ಬಳಸಬಹುದಾದ ಗಾದೆ. ಆದರೆ ಇಂದಿನ ವಿಪರ್ಯಾಸವೆಂದರೆ ಮಾತಾಡುವ ಮೊದಲು ಯೋಚಿಸುವ ವ್ಯವಧಾನ ಯಾರಿಗೂ ಇಲ್ಲ ಅಥವಾ ಅಗತ್ಯ ಅವರಿಗೆ ಕಂಡು ಬರುತ್ತಿಲ್ಲ.

ದ್ವೇಷದ ಭಾಷೆ ಅಥವಾ ಹಗೆನುಡಿಯ ಪ್ರತಿಪಾದಕರು ಶೀಘ್ರ ಖ್ಯಾತಿಹೊಂದುವ ಅತ್ಯಂತ ಸುಲಭವಾಗಿ ಸುದ್ದಿ ಮಾಧ್ಯಮಗಳಲ್ಲಿ ಮಿಂಚುವ ಖಯಾಲಿಯಿಂದ ಆಡುವ ಮಾತುಗಳು ಒಂದು ಇಡೀ ಸಮಾಜದ ಸ್ವಾಸ್ಥ್ಯವನ್ನು ಅದೆಷ್ಟು ಹದಗೆಡಿಸಬಹುದು ಎಂಬುದು ಇಂದು ಕಾಣದಿದ್ದರೂ ಭವಿಷ್ಯದ ದಿನಗಳಲ್ಲಿ ಹೆಚ್ಚು ಸ್ಪಷ್ಟವಾಗಲಿದೆ. ಜಗತ್ತಿನಾದ್ಯಂತ ಇಂಥದೇ ಜನಾಂಗೀಯ ಭೇದ ಅಥವಾ ಕೋಮುದ್ವೇಷ ಕಾರುವ ರಾಜಕೀಯದಿಂದ ಅನೇಕ ದೊಡ್ಡ ಮತ್ತು ಚಿಕ್ಕ ದೇಶಗಳು ನಮ್ಮ ಕಣ್ಣೆದುರೇ ಹಾಳಾಗುತ್ತಿರುವುದನ್ನು ನೋಡಿಯೂ ನಾವು ಕಣ್ಣು ತೆರೆಯದಿದ್ದರೆ ಇತಿಹಾಸ ಈ ಹೊಣೆಗೇಡಿತನವನ್ನು ಎಂದಿಗೂ ಕ್ಷಮಿಸದು.

ಪೂಜಾ ಶಕುನ್ ಪಾಂಡೆ

Hate Speech ಎಂಬುದು ಹೊಸದೇನಲ್ಲ ಅಥವಾ ನಮ್ಮ ದೇಶಕ್ಕೆ ಮಾತ್ರ ಸೀಮಿತವಾದದ್ದೂ ಅಲ್ಲ. ಹಿಟ್ಲರ್, ಮುಸಲೋನಿ, ಈದಿ ಅಮೀನರಂತಹ ಜನಾಂಗ ದ್ವೇಷದ ಹರಿಕಾರರು ಲಕ್ಷಾಂತರ ಜನರ ಮೆದುಳುಗಳನ್ನು ನಿಷ್ಕ್ರಿಯಗೊಳಿಸಲು ಯಶಸ್ವಿಯಾಗಿದ್ದು, ಜನರು ತಮ್ಮತಮ್ಮಲ್ಲೇ ಹೊಡೆದಾಡಿ ಸಾಯುವಂತೆ ಮಾಡಲು ಸಾಧ್ಯವಾದದ್ದು ಈ Hate Speech ಅಥವಾ ಹಗೆನುಡಿಯಿಂದಲೇ. ಇಂದು ಶ್ರೀಲಂಕಾದ ಜನತೆ ಊಟಕ್ಕೂ ಗತಿ ಇಲ್ಲದೆ ದೋಣಿಗಳಲ್ಲಿ ಅಕ್ರಮವಾಗಿ ಭಾರತ ಅಥವಾ ಇತರ ದೇಶಗಳಿಗೆ ತೆರಳಿ ನಿರಾಶ್ರಿತರ ಕ್ಯಾಂಪ್‌ಗಳಲ್ಲಿ ಬದುಕುವಂತೆ ಮಾಡುತ್ತಿರುವುದು ಇಂಥದೇ ಜನಾಂಗ ದ್ವೇಷದ ಕಾರಣದಿಂದ.

ಈ ಮೊದಲು ಈ ದೇಶದಲ್ಲಿದ್ದ ಹಗೆನುಡಿಯ ಕಾರಣದಿಂದ ಅನೇಕ ಬಾರಿ ದಂಗೆಗಳಾಗಿವೆ, ಹತ್ಯಾಕಾಂಡಗಳು ನಡೆದಿವೆ. ಆದರೆ ಸುರಂಗದಾಚೆಗಿನ ಬೆಳಕಿನಂತೆ ಅವೆಲ್ಲ ಅಂದಿನ ಮುತ್ಸದ್ಧಿ ನಾಯಕರು ಅಥವಾ ನಿಷ್ಟುರ ನ್ಯಾಯಾಂಗದ ಮಧ್ಯಸ್ಥಿಕೆಯಿಂದ ಅಂತ್ಯ ಕಂಡಿವೆ. ಸ್ವಾತಂತ್ರ್ಯಾನಂತರ ನಡೆದ ನೌಖಾಲಿ ಗಲಭೆಗಳ ಸಮಯದಲ್ಲಿ ಗಾಂಧೀಜಿ ಸ್ವತಃ ಅಲ್ಲಿಗೆ ತೆರಳಿ, ಗಲಭೆ ನಿಲ್ಲುವವರೆಗೂ ಉಪವಾಸ ಇರುವುದಾಗಿ ಹೇಳಿ ಕೊನೆಗೂ ಶಾಂತಿ ನೆಲೆಸುವಂತೆ ಮಾಡಿದರು. ಆದರೆ ಇವತ್ತು ಅದೇ ಗಾಂಧೀಜಿ ಭಾವಚಿತ್ರಕ್ಕೆ ಚುನಾಯಿತ ಜನಪ್ರತಿನಿಧಿ ಗನ್ ಹಿಡಿದು ಅಣಕು ಕೊಲೆ ಮಾಡುತ್ತಾಳೆ, ಸುತ್ತನೆರೆದ ಜನರು ನಗುತ್ತಾ ಚಪ್ಪಾಳೆ ತಟ್ಟುತ್ತಾರೆ, ಇನ್ನೊಬ್ಬ ಸಂತನೆನೆಸಿಕೊಂಡ ಕಾವಿಧಾರಿ ವ್ಯಕ್ತಿ ಧರ್ಮದ ಹೆಸರಲ್ಲಿ ನಡೆದ ಸಂಸತ್ತಿನಲ್ಲಿ ಗಾಂಧೀಜಿಯನ್ನು “ಹರಾಮ್ ಖೋರ್” ಎನ್ನುತ್ತಾನೆ.

ಗಾಂಧಿ ಹತ್ಯೆ ಮಾಡಿದ ಗೋಡ್ಸೆ ಇವತ್ತು ಅನೇಕರಿಗೆ ಹೀರೋ ಆಗಿ ಕಾಣುತ್ತಾನೆ. ಅವನಿಗೆ ಸೈದ್ಧಾಂತಿಕ ಗುರುಗಳಾದವರು ಭಾರತಕ್ಕೆ ದಾವೆದಾರರಾಗುತ್ತಾರೆ. ಒಟ್ಟಿನಲ್ಲಿ ಜನಾಂಗೀಯ ಅಥವಾ ದ್ವೇಷದ ಉರಿಯಲ್ಲಿ ಅಧಿಕಾರದ ಬೇಳೆ ಬೇಯಿಸುಕೊಳ್ಳುವ ಕೆಲಸ ಮಾತ್ರ ನಿರಂತರವಾಗಿ ನಡೆಯುತ್ತಲೇ ಇದೆ.

ಅನುರಾಗ್ ಠಾಕೂರ್

ಭಾರತದಲ್ಲಿ ಪ್ರಸಕ್ತ ದಿನಗಳಲ್ಲಿ ಹೆಚ್ಚಾಗುತ್ತಿರುವ Hate Speech ಬಗೆಗಿನ ಬಿಬಿಸಿ ವರದಿಯಲ್ಲಿ NDTV ಸರ್ವೇ ರೀಪೋರ್ಟನ್ನು ಉಲ್ಲೇಖಿಸಿ “ಭಾರತದಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ದ್ವೇಷದ ಭಾಷೆಯ ಪ್ರಯೋಗ ಅತ್ಯಂತ ಹೆಚ್ಚಾಗಿದೆ” ಎಂದು ಹೇಳುತ್ತದೆ. ಅಲ್ಲದೆ ಇಲ್ಲಿ ಕಾನೂನುಗಳು ಇದ್ದಾಗ್ಯೂ ಹಗೆನುಡಿಯಾಡುವವರು ಹೇಗೆ ಸುಲಭವಾಗಿ ಬಚಾವಾಗುತ್ತಾರೆ ಎಂಬುದನ್ನೂ ಹೇಳುತ್ತದೆ. ನಮ್ಮ ದೇಶದ ಕಾನೂನಿನಲ್ಲಿ ಹಗೆನುಡಿ Hate Speech ಎಂಬ ಶಬ್ದದ ಉಲ್ಲೇಖ ಎಲ್ಲೂ ಇಲ್ಲ ಆದರೆ ’Speech’ ಎಂದರೆ ಎಂಥ ಮಾತು ಎಂಬುದನ್ನು ಅರ್ಥಮಾಡಿಕೊಳ್ಳಲು ಪರಿಶಿಷ್ಟ ಜಾತಿ/ ಜನಾಂಗ ದೌರ್ಜನ್ಯ ನಿಷೇಧ ಕಾಯ್ದೆಯನ್ನು ನೋಡಬಹುದು. “ಅಪಮಾನ ಮಾಡುವ, ಅವಹೇಳನಕಾರಿಯಾದ ಮಾತು” ಇದನ್ನು ಅಪರಾಧ ಸಂಹಿತೆಯ (Penal Code) 153ಎ, 153ಬಿ, 295ಎ, 298, 505(1) ಅಡಿಯಲ್ಲಿ ಸಮಾಜದ ಶಾಂತಿ ಕದಡುವ, ದ್ವೇಷ ಉಂಟುಮಾಡುವ ಎಲ್ಲ ಮಾತುಗಳನ್ನೂ ಅಪರಾಧದ ವ್ಯಾಖ್ಯಾನದಲ್ಲಿ ತರಬಹುದು.

ಆದರೆ ವಿಚಿತ್ರವೆಂದರೆ ನಿರಂತರವಾಗಿ ಸಂವಿಧಾನವನ್ನು ವಿರೋಧಿಸುವ ಈ ವಿಚ್ಛಿದ್ರಕಾರಿ ಶಕ್ತಿ ಮತ್ತು ವ್ಯಕ್ತಿಗಳು ಇದೇ ಸಂವಿಧಾನದ ಮೂಲಭೂತ ಹಕ್ಕಿನ ಅಡಿ ಅಭಿವ್ಯಕ್ತಿ ಸ್ವಾತಂತ್ರ್ಯದ ಗುರಾಣಿ ಹಿಡಿದು ತಪ್ಪಿಸಿಕೊಳ್ಳುತ್ತಾರೆ. ಅದೇ ಗುರಾಣಿ ಈ ವಿಚ್ಛಿದ್ರಕಾರಿ ವ್ಯಕ್ತಿಗಳನ್ನು ವಿರೋಧಿಸಿದವರಿಗೆ ಅನ್ವಯವಾಗುವುದಿಲ್ಲ. ಅವರು ಸುಧಾ ಭಾರದ್ವಾಜ್, ಗೌತಮ್ ನೌಲಖಾ ಅಥವಾ ಜೈಲಿನಲ್ಲೇ ಸತ್ತುಹೋದ ಸ್ಟ್ಯಾನ್ ಸ್ವಾಮಿ ಇರಬಹುದು ಅಥವಾ ಪ್ರಜಾತಂತ್ರದಲ್ಲಿ ಜನರಿಂದ ಆಯ್ಕೆಯಾದ ಜಿಗ್ನೇಶ್ ಮೇವಾನಿ ಇರಬಹುದು. ಕೇವಲ ಟ್ವೀಟ್ ಮಾಡಿದ್ದಕ್ಕೆ ಒಂದು ರಾಜ್ಯದ ಶಾಸಕರನ್ನು ಇನ್ನೊಂದು ರಾಜ್ಯದ ಪೊಲೀಸರು ಅರೆಸ್ಟ್ ಮಾಡಿ ಕರೆದೊಯ್ಯುತ್ತಾರೆ. ಶಾಂತಿಯ ಅಪೀಲ್ ಮಾಡಿದ ಉಮರ್ ಖಾಲಿದ್‌ನನ್ನು ಬಂಧಿಸಿ ಜೈಲಿಗೆ ಹಾಕುತ್ತಾರೆ. ಆದರೆ ಮಾಧ್ಯಮಗಳು ಪ್ರಜಾಪ್ರಭುತ್ವದ ಸತ್ವವನ್ನು ಎತ್ತಿಹಿಡಿಯುವವರನ್ನು ವಿಲನ್‌ಗಳನ್ನಾಗಿ ಮಾಡುತ್ತದೆ. ಅದಕ್ಕಿಂತಲೂ ದುಃಖಕರವಾದದ್ದೆಂದರೆ ಈ ಸುದ್ದಿ ನೋಡುವ ಜನ ನಿಜ ಎಂದು ಅದನ್ನು ನಂಬುತ್ತಾರೆ. ಇದು ಹೇಗೆ ಸಾಧ್ಯ ಎಂಬ ಪ್ರಶ್ನೆಯೇ ಜನರಲ್ಲಿ ಮೂಡುವುದಿಲ್ಲ. ಕಾರಣ ಇಷ್ಟೆ ನಿಜವಾದ ಸಮಸ್ಯೆಗಳಿಂದ ದೂರಮಾಡಿ ಕಲ್ಪಿತ ಶತ್ರುಗಳನ್ನು ನಿರ್ಮಾಣ ಮಾಡಿ ಜನರನ್ನು ನಿರಂತರವಾಗಿ ಮರಳು ಮಾಡುವ ಕೆಲಸ ಭರದಿಂದ ನಡೆದಿದೆ.

ಕೇಂದ್ರದ ಮಂತ್ರಿ ಅನುರಾಗ್ ಠಾಕೂರ್ “ಗೋಲಿಮಾರೋ ಸಾಲೋಂಕೀ” ಎಂದರು, ಆದರೆ ಕೋರ್ಟು “ನಗುತ್ತಾ ದ್ವೇಷದ ಮಾತು ಹೇಳಿದ್ದರೆ ಅದು ಅಪರಾಧ ಅಲ್ಲ” ಎಂದಿತು.

ದೇಶದ ಪ್ರಧಾನಿ ಮೋದಿ “ದೇಶದ್ರೋಹಿಗಳನ್ನು ಅವರು ಹಾಕಿಕೊಳ್ಳುವ ಬಟ್ಟೆಯಿಂದಲೇ ಕಂಡು ಹಿಡಿಯಬಹುದು” ಎಂದರು. ಅಲ್ಲೊಬ್ಬ ಕೇಸರಿ ಹಾಕಿಕೊಂಡ ವಿಭೃತಿ ಮುಸ್ಲಿಂ ಹೆಣ್ಣುಮಕ್ಕಳನ್ನು ರೇಪ್ ಮಾಡಲು ಕರೆಕೊಟ್ಟ. ಇನ್ನೊಬ್ಬ ಧರ್ಮದ ಉಳಿವಿಗಾಗಿ ಹಿಂದೂಗಳೆಲ್ಲ ಹೆಚ್ಚುಹೆಚ್ಚು ಮಕ್ಕಳನ್ನು ಹೆರಬೇಕು ಎನ್ನುತ್ತಾನೆ. ಇನ್ನೊಬ್ಬ ಕಾವಿ ಮುಖ್ಯಮಂತ್ರಿ ಹೆಚ್ಚು ಮಕ್ಕಳಿದ್ದವರ ಹಕ್ಕು ಕಿತ್ತುಕೊಳ್ತೀವಿ ಅಂತಾನೆ. ಈ ಇಬ್ಬರ ಟಾರ್ಗೆಟ್ ಕಮ್ಯೂನಿಟಿಗಳೇ ಬೇರೆ, ಆದರೆ ಈ ಎಲ್ಲದರ ನಡುವೆ ಕುಟುಂಬ ಯೋಜನೆ ಎಂಬ ದೇಶದ ವ್ಯವಸ್ಥೆ ಅತಂತ್ರವಾಗುತ್ತದೆ.

Hate Speechಗೆ ವ್ಯವಸ್ಥೆಯ ರಕ್ಷಣೆ ಸಿಕ್ಕಾಗ ಅದು ನಿಧಾನವಾಗಿ ಸಾಂಸ್ಥೀಕರಣಗೊಳ್ಳುತ್ತ ಸಾಗುತ್ತದೆ. ಹರಿದ್ವಾರ ಮತ್ತು ದೆಹಲಿಯ ಧರ್ಮ ಸಂಸತ್ತುಗಳಲ್ಲಿ ಸಂತರೆನಿಸಿಕೊಂಡವರು “ಹೊಡಿ, ಬಡಿ, ಕಡಿ” ಎಂಬ ಕರೆಕೊಟ್ಟಿದ್ದು ಎಲ್ಲರಿಗೂ ಕಂಡಿದ್ದರೂ ಯಾವುದೇ ಕ್ರಮಗಳನ್ನು ಕೈಗೊಳ್ಳಲಿಲ್ಲ. ಇತ್ತೀಚೆಗೆ ಸುಪ್ರೀಂಕೋರ್ಟ್‌ನ ಜಡ್ಜ್ ಖಾನ್‌ವಿಲ್ಕರ್ ಮತ್ತು ಎ.ಎಸ್ ಓಕಾ ಅವರ ಪೀಠ ದೆಹಲಿಯ ಡೆಪ್ಯುಟಿ ಕಮೀಷನರ್ ಆಫ್ ಪೊಲೀಸ್‌ಗೆ ಮಾಹಿತಿ ಕೇಳಿದಾಗ ಅವರು ಅಫಿಡವಿಟ್ ಸಲ್ಲಿಸಿ “ಅಂಥ ಮಾಹಿತಿಗಳು ಸಿಕ್ಕಿಲ್ಲ” ಎಂದಿದ್ದು ನ್ಯಾಯಮೂರ್ತಿಗಳಿಗೆ ಸಿಟ್ಟು ತಂದು ಅದಕ್ಕೆ ವಿವರಣೆ ಕೇಳಿದ್ದಾರೆ. ಸರ್ಕಾರಿ ವಕೀಲರು ಇವರ ಮರುವಿಚಾರಣೆ ಮಾಡುವ ಭರವಸೆ ನೀಡಿದ್ದಾರೆ.

ಸುಪ್ರೀಂಕೋರ್ಟ್ ಮುಂದಿನ ದಿನಗಳಲ್ಲಿ ನಡೆಯಲಿರುವ ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ ಧರ್ಮ ಸಂಸತ್ತಿನಲ್ಲಿ ಯಾವುದೇ Hate Speech ಆಗದಂತೆ ನಿಗಾವಹಿಸಲು ಸೂಚಿಸಿದೆ. ರಾಜ್ಯದ ಮುಖ್ಯ ಕಾರ್ಯದರ್ಶಿ ಈ ಕುರಿತು ಒಪ್ಪಿ ಅಫಿಡವಿಟ್ ಸಲ್ಲಿಸಬೇಕು, ಮುಂದೇನಾದರೂ ಉಲ್ಲಂಘನೆಗಳಾದರೆ ಅವರೇ ಹೊಣೆಗಾರರು ಎಂದಿದೆ. ಈ ನಿಟ್ಟಿನಲ್ಲಿ ನೋಡಿದಾಗ ಇದೊಂದು ಒಳ್ಳೆಯ ಬೆಳವಣಿಗೆ, ಇಲ್ಲದಿದ್ದರೆ ಸುಪ್ರೀಂಕೋರ್ಟಿಗೆ ಸುಳ್ಳು ಮಾಹಿತಿ ನೀಡುವ ಈ ಪ್ರವೃತ್ತಿ ದೇಶದ ಕಾನೂನು ವ್ಯವಸ್ಥೆಯನ್ನು ಕೇವಲ ಅಣಕು ಮಾದರಿ ಮಾಡುವ ದಿನಗಳು ದೂರವಿಲ್ಲ.

ರಾಜಲಕ್ಷ್ಮಿ ಅಂಕಲಗಿ

ರಾಜಲಕ್ಷ್ಮಿ ಅಂಕಲಗಿ
ಹೈಕೋರ್ಟ್ ವಕೀಲರು, ಹಲವು ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ. ಕಾನೂನು ವಿಷಯಗಳ ಮೇಲೆ ಹಲವು ಲೇಖನಗಳನ್ನು ಪ್ರಕಟಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

 


ಇದನ್ನೂ ಓದಿ: 8 ತಿಂಗಳ ಅವಧಿಯ ಬೊಮ್ಮಾಯಿ ಆಡಳಿತದಲ್ಲಿ ಕರ್ನಾಟಕ ಕಂಡ 7 ಕೋಮುದ್ವೇಷ ಪ್ರಕರಣಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...