Homeಮುಖಪುಟಭಾಷಾತೀತವಾಗಿ ಏಕಭಾಷೆಯಾಗುತ್ತಿರುವ “Hate Speech” - ದ್ವೇಷದ ಭಾಷೆ

ಭಾಷಾತೀತವಾಗಿ ಏಕಭಾಷೆಯಾಗುತ್ತಿರುವ “Hate Speech” – ದ್ವೇಷದ ಭಾಷೆ

- Advertisement -
- Advertisement -

ಇಂಗ್ಲಿಷಿನಲ್ಲಿ ಒಂದು ಗಾದೆ ಮಾತಿದೆ- “Taste Yours Words Before Spitting”- “ಉಗುಳುವ ಮೊದಲು ನೀನಾಡುವ ಶಬ್ದಗಳ ರುಚಿ ನೋಡು” ಎಂದು. ಅತ್ಯಂತ ಸರಳವಾಗಿ ಮಾತಿನಿಂದಾಗುವ ಅನಾಹುತಗಳ ಬಗ್ಗೆ ಎಚ್ಚರಿಸಲು ಬಳಸಬಹುದಾದ ಗಾದೆ. ಆದರೆ ಇಂದಿನ ವಿಪರ್ಯಾಸವೆಂದರೆ ಮಾತಾಡುವ ಮೊದಲು ಯೋಚಿಸುವ ವ್ಯವಧಾನ ಯಾರಿಗೂ ಇಲ್ಲ ಅಥವಾ ಅಗತ್ಯ ಅವರಿಗೆ ಕಂಡು ಬರುತ್ತಿಲ್ಲ.

ದ್ವೇಷದ ಭಾಷೆ ಅಥವಾ ಹಗೆನುಡಿಯ ಪ್ರತಿಪಾದಕರು ಶೀಘ್ರ ಖ್ಯಾತಿಹೊಂದುವ ಅತ್ಯಂತ ಸುಲಭವಾಗಿ ಸುದ್ದಿ ಮಾಧ್ಯಮಗಳಲ್ಲಿ ಮಿಂಚುವ ಖಯಾಲಿಯಿಂದ ಆಡುವ ಮಾತುಗಳು ಒಂದು ಇಡೀ ಸಮಾಜದ ಸ್ವಾಸ್ಥ್ಯವನ್ನು ಅದೆಷ್ಟು ಹದಗೆಡಿಸಬಹುದು ಎಂಬುದು ಇಂದು ಕಾಣದಿದ್ದರೂ ಭವಿಷ್ಯದ ದಿನಗಳಲ್ಲಿ ಹೆಚ್ಚು ಸ್ಪಷ್ಟವಾಗಲಿದೆ. ಜಗತ್ತಿನಾದ್ಯಂತ ಇಂಥದೇ ಜನಾಂಗೀಯ ಭೇದ ಅಥವಾ ಕೋಮುದ್ವೇಷ ಕಾರುವ ರಾಜಕೀಯದಿಂದ ಅನೇಕ ದೊಡ್ಡ ಮತ್ತು ಚಿಕ್ಕ ದೇಶಗಳು ನಮ್ಮ ಕಣ್ಣೆದುರೇ ಹಾಳಾಗುತ್ತಿರುವುದನ್ನು ನೋಡಿಯೂ ನಾವು ಕಣ್ಣು ತೆರೆಯದಿದ್ದರೆ ಇತಿಹಾಸ ಈ ಹೊಣೆಗೇಡಿತನವನ್ನು ಎಂದಿಗೂ ಕ್ಷಮಿಸದು.

ಪೂಜಾ ಶಕುನ್ ಪಾಂಡೆ

Hate Speech ಎಂಬುದು ಹೊಸದೇನಲ್ಲ ಅಥವಾ ನಮ್ಮ ದೇಶಕ್ಕೆ ಮಾತ್ರ ಸೀಮಿತವಾದದ್ದೂ ಅಲ್ಲ. ಹಿಟ್ಲರ್, ಮುಸಲೋನಿ, ಈದಿ ಅಮೀನರಂತಹ ಜನಾಂಗ ದ್ವೇಷದ ಹರಿಕಾರರು ಲಕ್ಷಾಂತರ ಜನರ ಮೆದುಳುಗಳನ್ನು ನಿಷ್ಕ್ರಿಯಗೊಳಿಸಲು ಯಶಸ್ವಿಯಾಗಿದ್ದು, ಜನರು ತಮ್ಮತಮ್ಮಲ್ಲೇ ಹೊಡೆದಾಡಿ ಸಾಯುವಂತೆ ಮಾಡಲು ಸಾಧ್ಯವಾದದ್ದು ಈ Hate Speech ಅಥವಾ ಹಗೆನುಡಿಯಿಂದಲೇ. ಇಂದು ಶ್ರೀಲಂಕಾದ ಜನತೆ ಊಟಕ್ಕೂ ಗತಿ ಇಲ್ಲದೆ ದೋಣಿಗಳಲ್ಲಿ ಅಕ್ರಮವಾಗಿ ಭಾರತ ಅಥವಾ ಇತರ ದೇಶಗಳಿಗೆ ತೆರಳಿ ನಿರಾಶ್ರಿತರ ಕ್ಯಾಂಪ್‌ಗಳಲ್ಲಿ ಬದುಕುವಂತೆ ಮಾಡುತ್ತಿರುವುದು ಇಂಥದೇ ಜನಾಂಗ ದ್ವೇಷದ ಕಾರಣದಿಂದ.

ಈ ಮೊದಲು ಈ ದೇಶದಲ್ಲಿದ್ದ ಹಗೆನುಡಿಯ ಕಾರಣದಿಂದ ಅನೇಕ ಬಾರಿ ದಂಗೆಗಳಾಗಿವೆ, ಹತ್ಯಾಕಾಂಡಗಳು ನಡೆದಿವೆ. ಆದರೆ ಸುರಂಗದಾಚೆಗಿನ ಬೆಳಕಿನಂತೆ ಅವೆಲ್ಲ ಅಂದಿನ ಮುತ್ಸದ್ಧಿ ನಾಯಕರು ಅಥವಾ ನಿಷ್ಟುರ ನ್ಯಾಯಾಂಗದ ಮಧ್ಯಸ್ಥಿಕೆಯಿಂದ ಅಂತ್ಯ ಕಂಡಿವೆ. ಸ್ವಾತಂತ್ರ್ಯಾನಂತರ ನಡೆದ ನೌಖಾಲಿ ಗಲಭೆಗಳ ಸಮಯದಲ್ಲಿ ಗಾಂಧೀಜಿ ಸ್ವತಃ ಅಲ್ಲಿಗೆ ತೆರಳಿ, ಗಲಭೆ ನಿಲ್ಲುವವರೆಗೂ ಉಪವಾಸ ಇರುವುದಾಗಿ ಹೇಳಿ ಕೊನೆಗೂ ಶಾಂತಿ ನೆಲೆಸುವಂತೆ ಮಾಡಿದರು. ಆದರೆ ಇವತ್ತು ಅದೇ ಗಾಂಧೀಜಿ ಭಾವಚಿತ್ರಕ್ಕೆ ಚುನಾಯಿತ ಜನಪ್ರತಿನಿಧಿ ಗನ್ ಹಿಡಿದು ಅಣಕು ಕೊಲೆ ಮಾಡುತ್ತಾಳೆ, ಸುತ್ತನೆರೆದ ಜನರು ನಗುತ್ತಾ ಚಪ್ಪಾಳೆ ತಟ್ಟುತ್ತಾರೆ, ಇನ್ನೊಬ್ಬ ಸಂತನೆನೆಸಿಕೊಂಡ ಕಾವಿಧಾರಿ ವ್ಯಕ್ತಿ ಧರ್ಮದ ಹೆಸರಲ್ಲಿ ನಡೆದ ಸಂಸತ್ತಿನಲ್ಲಿ ಗಾಂಧೀಜಿಯನ್ನು “ಹರಾಮ್ ಖೋರ್” ಎನ್ನುತ್ತಾನೆ.

ಗಾಂಧಿ ಹತ್ಯೆ ಮಾಡಿದ ಗೋಡ್ಸೆ ಇವತ್ತು ಅನೇಕರಿಗೆ ಹೀರೋ ಆಗಿ ಕಾಣುತ್ತಾನೆ. ಅವನಿಗೆ ಸೈದ್ಧಾಂತಿಕ ಗುರುಗಳಾದವರು ಭಾರತಕ್ಕೆ ದಾವೆದಾರರಾಗುತ್ತಾರೆ. ಒಟ್ಟಿನಲ್ಲಿ ಜನಾಂಗೀಯ ಅಥವಾ ದ್ವೇಷದ ಉರಿಯಲ್ಲಿ ಅಧಿಕಾರದ ಬೇಳೆ ಬೇಯಿಸುಕೊಳ್ಳುವ ಕೆಲಸ ಮಾತ್ರ ನಿರಂತರವಾಗಿ ನಡೆಯುತ್ತಲೇ ಇದೆ.

ಅನುರಾಗ್ ಠಾಕೂರ್

ಭಾರತದಲ್ಲಿ ಪ್ರಸಕ್ತ ದಿನಗಳಲ್ಲಿ ಹೆಚ್ಚಾಗುತ್ತಿರುವ Hate Speech ಬಗೆಗಿನ ಬಿಬಿಸಿ ವರದಿಯಲ್ಲಿ NDTV ಸರ್ವೇ ರೀಪೋರ್ಟನ್ನು ಉಲ್ಲೇಖಿಸಿ “ಭಾರತದಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ದ್ವೇಷದ ಭಾಷೆಯ ಪ್ರಯೋಗ ಅತ್ಯಂತ ಹೆಚ್ಚಾಗಿದೆ” ಎಂದು ಹೇಳುತ್ತದೆ. ಅಲ್ಲದೆ ಇಲ್ಲಿ ಕಾನೂನುಗಳು ಇದ್ದಾಗ್ಯೂ ಹಗೆನುಡಿಯಾಡುವವರು ಹೇಗೆ ಸುಲಭವಾಗಿ ಬಚಾವಾಗುತ್ತಾರೆ ಎಂಬುದನ್ನೂ ಹೇಳುತ್ತದೆ. ನಮ್ಮ ದೇಶದ ಕಾನೂನಿನಲ್ಲಿ ಹಗೆನುಡಿ Hate Speech ಎಂಬ ಶಬ್ದದ ಉಲ್ಲೇಖ ಎಲ್ಲೂ ಇಲ್ಲ ಆದರೆ ’Speech’ ಎಂದರೆ ಎಂಥ ಮಾತು ಎಂಬುದನ್ನು ಅರ್ಥಮಾಡಿಕೊಳ್ಳಲು ಪರಿಶಿಷ್ಟ ಜಾತಿ/ ಜನಾಂಗ ದೌರ್ಜನ್ಯ ನಿಷೇಧ ಕಾಯ್ದೆಯನ್ನು ನೋಡಬಹುದು. “ಅಪಮಾನ ಮಾಡುವ, ಅವಹೇಳನಕಾರಿಯಾದ ಮಾತು” ಇದನ್ನು ಅಪರಾಧ ಸಂಹಿತೆಯ (Penal Code) 153ಎ, 153ಬಿ, 295ಎ, 298, 505(1) ಅಡಿಯಲ್ಲಿ ಸಮಾಜದ ಶಾಂತಿ ಕದಡುವ, ದ್ವೇಷ ಉಂಟುಮಾಡುವ ಎಲ್ಲ ಮಾತುಗಳನ್ನೂ ಅಪರಾಧದ ವ್ಯಾಖ್ಯಾನದಲ್ಲಿ ತರಬಹುದು.

ಆದರೆ ವಿಚಿತ್ರವೆಂದರೆ ನಿರಂತರವಾಗಿ ಸಂವಿಧಾನವನ್ನು ವಿರೋಧಿಸುವ ಈ ವಿಚ್ಛಿದ್ರಕಾರಿ ಶಕ್ತಿ ಮತ್ತು ವ್ಯಕ್ತಿಗಳು ಇದೇ ಸಂವಿಧಾನದ ಮೂಲಭೂತ ಹಕ್ಕಿನ ಅಡಿ ಅಭಿವ್ಯಕ್ತಿ ಸ್ವಾತಂತ್ರ್ಯದ ಗುರಾಣಿ ಹಿಡಿದು ತಪ್ಪಿಸಿಕೊಳ್ಳುತ್ತಾರೆ. ಅದೇ ಗುರಾಣಿ ಈ ವಿಚ್ಛಿದ್ರಕಾರಿ ವ್ಯಕ್ತಿಗಳನ್ನು ವಿರೋಧಿಸಿದವರಿಗೆ ಅನ್ವಯವಾಗುವುದಿಲ್ಲ. ಅವರು ಸುಧಾ ಭಾರದ್ವಾಜ್, ಗೌತಮ್ ನೌಲಖಾ ಅಥವಾ ಜೈಲಿನಲ್ಲೇ ಸತ್ತುಹೋದ ಸ್ಟ್ಯಾನ್ ಸ್ವಾಮಿ ಇರಬಹುದು ಅಥವಾ ಪ್ರಜಾತಂತ್ರದಲ್ಲಿ ಜನರಿಂದ ಆಯ್ಕೆಯಾದ ಜಿಗ್ನೇಶ್ ಮೇವಾನಿ ಇರಬಹುದು. ಕೇವಲ ಟ್ವೀಟ್ ಮಾಡಿದ್ದಕ್ಕೆ ಒಂದು ರಾಜ್ಯದ ಶಾಸಕರನ್ನು ಇನ್ನೊಂದು ರಾಜ್ಯದ ಪೊಲೀಸರು ಅರೆಸ್ಟ್ ಮಾಡಿ ಕರೆದೊಯ್ಯುತ್ತಾರೆ. ಶಾಂತಿಯ ಅಪೀಲ್ ಮಾಡಿದ ಉಮರ್ ಖಾಲಿದ್‌ನನ್ನು ಬಂಧಿಸಿ ಜೈಲಿಗೆ ಹಾಕುತ್ತಾರೆ. ಆದರೆ ಮಾಧ್ಯಮಗಳು ಪ್ರಜಾಪ್ರಭುತ್ವದ ಸತ್ವವನ್ನು ಎತ್ತಿಹಿಡಿಯುವವರನ್ನು ವಿಲನ್‌ಗಳನ್ನಾಗಿ ಮಾಡುತ್ತದೆ. ಅದಕ್ಕಿಂತಲೂ ದುಃಖಕರವಾದದ್ದೆಂದರೆ ಈ ಸುದ್ದಿ ನೋಡುವ ಜನ ನಿಜ ಎಂದು ಅದನ್ನು ನಂಬುತ್ತಾರೆ. ಇದು ಹೇಗೆ ಸಾಧ್ಯ ಎಂಬ ಪ್ರಶ್ನೆಯೇ ಜನರಲ್ಲಿ ಮೂಡುವುದಿಲ್ಲ. ಕಾರಣ ಇಷ್ಟೆ ನಿಜವಾದ ಸಮಸ್ಯೆಗಳಿಂದ ದೂರಮಾಡಿ ಕಲ್ಪಿತ ಶತ್ರುಗಳನ್ನು ನಿರ್ಮಾಣ ಮಾಡಿ ಜನರನ್ನು ನಿರಂತರವಾಗಿ ಮರಳು ಮಾಡುವ ಕೆಲಸ ಭರದಿಂದ ನಡೆದಿದೆ.

ಕೇಂದ್ರದ ಮಂತ್ರಿ ಅನುರಾಗ್ ಠಾಕೂರ್ “ಗೋಲಿಮಾರೋ ಸಾಲೋಂಕೀ” ಎಂದರು, ಆದರೆ ಕೋರ್ಟು “ನಗುತ್ತಾ ದ್ವೇಷದ ಮಾತು ಹೇಳಿದ್ದರೆ ಅದು ಅಪರಾಧ ಅಲ್ಲ” ಎಂದಿತು.

ದೇಶದ ಪ್ರಧಾನಿ ಮೋದಿ “ದೇಶದ್ರೋಹಿಗಳನ್ನು ಅವರು ಹಾಕಿಕೊಳ್ಳುವ ಬಟ್ಟೆಯಿಂದಲೇ ಕಂಡು ಹಿಡಿಯಬಹುದು” ಎಂದರು. ಅಲ್ಲೊಬ್ಬ ಕೇಸರಿ ಹಾಕಿಕೊಂಡ ವಿಭೃತಿ ಮುಸ್ಲಿಂ ಹೆಣ್ಣುಮಕ್ಕಳನ್ನು ರೇಪ್ ಮಾಡಲು ಕರೆಕೊಟ್ಟ. ಇನ್ನೊಬ್ಬ ಧರ್ಮದ ಉಳಿವಿಗಾಗಿ ಹಿಂದೂಗಳೆಲ್ಲ ಹೆಚ್ಚುಹೆಚ್ಚು ಮಕ್ಕಳನ್ನು ಹೆರಬೇಕು ಎನ್ನುತ್ತಾನೆ. ಇನ್ನೊಬ್ಬ ಕಾವಿ ಮುಖ್ಯಮಂತ್ರಿ ಹೆಚ್ಚು ಮಕ್ಕಳಿದ್ದವರ ಹಕ್ಕು ಕಿತ್ತುಕೊಳ್ತೀವಿ ಅಂತಾನೆ. ಈ ಇಬ್ಬರ ಟಾರ್ಗೆಟ್ ಕಮ್ಯೂನಿಟಿಗಳೇ ಬೇರೆ, ಆದರೆ ಈ ಎಲ್ಲದರ ನಡುವೆ ಕುಟುಂಬ ಯೋಜನೆ ಎಂಬ ದೇಶದ ವ್ಯವಸ್ಥೆ ಅತಂತ್ರವಾಗುತ್ತದೆ.

Hate Speechಗೆ ವ್ಯವಸ್ಥೆಯ ರಕ್ಷಣೆ ಸಿಕ್ಕಾಗ ಅದು ನಿಧಾನವಾಗಿ ಸಾಂಸ್ಥೀಕರಣಗೊಳ್ಳುತ್ತ ಸಾಗುತ್ತದೆ. ಹರಿದ್ವಾರ ಮತ್ತು ದೆಹಲಿಯ ಧರ್ಮ ಸಂಸತ್ತುಗಳಲ್ಲಿ ಸಂತರೆನಿಸಿಕೊಂಡವರು “ಹೊಡಿ, ಬಡಿ, ಕಡಿ” ಎಂಬ ಕರೆಕೊಟ್ಟಿದ್ದು ಎಲ್ಲರಿಗೂ ಕಂಡಿದ್ದರೂ ಯಾವುದೇ ಕ್ರಮಗಳನ್ನು ಕೈಗೊಳ್ಳಲಿಲ್ಲ. ಇತ್ತೀಚೆಗೆ ಸುಪ್ರೀಂಕೋರ್ಟ್‌ನ ಜಡ್ಜ್ ಖಾನ್‌ವಿಲ್ಕರ್ ಮತ್ತು ಎ.ಎಸ್ ಓಕಾ ಅವರ ಪೀಠ ದೆಹಲಿಯ ಡೆಪ್ಯುಟಿ ಕಮೀಷನರ್ ಆಫ್ ಪೊಲೀಸ್‌ಗೆ ಮಾಹಿತಿ ಕೇಳಿದಾಗ ಅವರು ಅಫಿಡವಿಟ್ ಸಲ್ಲಿಸಿ “ಅಂಥ ಮಾಹಿತಿಗಳು ಸಿಕ್ಕಿಲ್ಲ” ಎಂದಿದ್ದು ನ್ಯಾಯಮೂರ್ತಿಗಳಿಗೆ ಸಿಟ್ಟು ತಂದು ಅದಕ್ಕೆ ವಿವರಣೆ ಕೇಳಿದ್ದಾರೆ. ಸರ್ಕಾರಿ ವಕೀಲರು ಇವರ ಮರುವಿಚಾರಣೆ ಮಾಡುವ ಭರವಸೆ ನೀಡಿದ್ದಾರೆ.

ಸುಪ್ರೀಂಕೋರ್ಟ್ ಮುಂದಿನ ದಿನಗಳಲ್ಲಿ ನಡೆಯಲಿರುವ ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ ಧರ್ಮ ಸಂಸತ್ತಿನಲ್ಲಿ ಯಾವುದೇ Hate Speech ಆಗದಂತೆ ನಿಗಾವಹಿಸಲು ಸೂಚಿಸಿದೆ. ರಾಜ್ಯದ ಮುಖ್ಯ ಕಾರ್ಯದರ್ಶಿ ಈ ಕುರಿತು ಒಪ್ಪಿ ಅಫಿಡವಿಟ್ ಸಲ್ಲಿಸಬೇಕು, ಮುಂದೇನಾದರೂ ಉಲ್ಲಂಘನೆಗಳಾದರೆ ಅವರೇ ಹೊಣೆಗಾರರು ಎಂದಿದೆ. ಈ ನಿಟ್ಟಿನಲ್ಲಿ ನೋಡಿದಾಗ ಇದೊಂದು ಒಳ್ಳೆಯ ಬೆಳವಣಿಗೆ, ಇಲ್ಲದಿದ್ದರೆ ಸುಪ್ರೀಂಕೋರ್ಟಿಗೆ ಸುಳ್ಳು ಮಾಹಿತಿ ನೀಡುವ ಈ ಪ್ರವೃತ್ತಿ ದೇಶದ ಕಾನೂನು ವ್ಯವಸ್ಥೆಯನ್ನು ಕೇವಲ ಅಣಕು ಮಾದರಿ ಮಾಡುವ ದಿನಗಳು ದೂರವಿಲ್ಲ.

ರಾಜಲಕ್ಷ್ಮಿ ಅಂಕಲಗಿ

ರಾಜಲಕ್ಷ್ಮಿ ಅಂಕಲಗಿ
ಹೈಕೋರ್ಟ್ ವಕೀಲರು, ಹಲವು ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ. ಕಾನೂನು ವಿಷಯಗಳ ಮೇಲೆ ಹಲವು ಲೇಖನಗಳನ್ನು ಪ್ರಕಟಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

 


ಇದನ್ನೂ ಓದಿ: 8 ತಿಂಗಳ ಅವಧಿಯ ಬೊಮ್ಮಾಯಿ ಆಡಳಿತದಲ್ಲಿ ಕರ್ನಾಟಕ ಕಂಡ 7 ಕೋಮುದ್ವೇಷ ಪ್ರಕರಣಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....