Homeಮುಖಪುಟಸಿಎಸ್‌ಕೆ ಬ್ಯಾಟಿಂಗ್ ಕ್ರಮಾಂಕ ಬದಲಿಸಿ ರಾಬಿನ್‌ಗೆ ವಂಚನೆ: ಜಾಲತಾಣದಲ್ಲಿ ಚರ್ಚೆ

ಸಿಎಸ್‌ಕೆ ಬ್ಯಾಟಿಂಗ್ ಕ್ರಮಾಂಕ ಬದಲಿಸಿ ರಾಬಿನ್‌ಗೆ ವಂಚನೆ: ಜಾಲತಾಣದಲ್ಲಿ ಚರ್ಚೆ

ಆರಂಭಿಕ ಆಟಗಾರರಾಗಿ ಕ್ರಿಸ್‌ಗೆ ಬರುತ್ತಿದ್ದ ರಾಬಿನ್‌ ಉತ್ತಪ್ಪ ಉತ್ತಮ ಪ್ರದರ್ಶನವನ್ನೂ ನೀಡಿದ್ದಾರೆ. ಕ್ರಮಾಂಕ ಬದಲಾದಾಗ ವಿಫಲರಾಗಿದ್ದಾರೆ

- Advertisement -
- Advertisement -

ಈ ಬಾರಿಯ ಐಪಿಎಲ್‌ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ನೀಡುತ್ತಿರುವ ಚೆನ್ನೈ ಸೂಪರ್‌ ಕಿಂಗ್ಸ್‌ (ಸಿಎಸ್‌ಕೆ) ತಂಡಕ್ಕೆ ಆರಂಭದಲ್ಲಿ ರವೀಂದ್ರ ಜಡೇಜಾ ನಾಯಕರಾಗಿದ್ದರು. ಜಡೇಜಾ ನಾಯಕತ್ವ ತೊರೆದ ಬಳಿಕ ಮತ್ತೆ ಸಿಎಸ್‌ಕೆಗೆ ಮಹೇಂದ್ರ ಸಿಂಗ್‌ ಧೋನಿ ನಾಯಕತ್ವ ವಹಿಸಿದರು. ನಂತರದಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಸಿಎಸ್‌ಕೆ ಎರಡು ಪಂದ್ಯಗಳಲ್ಲಿ ಗೆದ್ದಿದೆ. ಆದರೆ ನಾಯಕ ಧೋನಿ ಧೋರಣೆ ಕುರಿತು ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.

ಜಡೇಜಾ ನಾಯಕತ್ವದಲ್ಲಿ ತಂಡ ಮುನ್ನಡೆಯುತ್ತಿದ್ದಾಗ ಆರಂಭಿಕ ಆಟಗಾರರಾಗಿ ಅಥವಾ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದು ಮಿಂಚುತ್ತಿದ್ದ, ಕೆಲವು ಪಂದ್ಯಗಳ ಗೆಲುವಿಗೂ ಕಾರಣರಾಗಿದ್ದ ಕೊಡಗಿನ ರಾಬಿನ್‌ ಉತ್ತಪ್ಪ ಅವರ ಬ್ಯಾಟಿಂಗ್ ಕ್ರಮಾಂಕ ಬದಲಾಯಿಸಿರುವುದು ಕೆಲವರ ಆಕ್ರೋಶಕ್ಕೆ ಕಾರಣವಾಗಿದೆ. ಕೆಳ ಕ್ರಮಾಂಕದಲ್ಲಿ ರಾಬಿ‌ನ್ ಅವರನ್ನು ಬ್ಯಾಟಿಂಗ್‌ಗೆ ಇಳಿಸುತ್ತಿರುವ ನಾಯಕ ಧೋನಿ, ‘ಕ್ರಿಕೆಟ್ ರಾಜಕಾರಣ’ ಮಾಡುತ್ತಿದ್ದಾರೆಂಬ ಆರೋಪ ಕೇಳಿಬಂದಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಈ ಬಾರಿಯ ಐಪಿಎಲ್‌ನಲ್ಲಿ ಕೆಕೆಆರ್‌ ವಿರುದ್ಧ ಮಾರ್ಚ್ 26ರಂದು ಮೊದಲ ಪಂದ್ಯವನ್ನಾಡಿದ್ದ ಸಿಎಸ್‌ಕೆ ಕಡಿಮೆ ಮೊತ್ತವನ್ನು ಗಳಿಸಿತ್ತು. ಧೋನಿ ಅರ್ಧ ಶತಕ (50*/38) ಸಿಡಿಸಿದ್ದರು. 21 ಬಾಲ್‌ಗಳಲ್ಲಿ 28 ರನ್‌ ಗಳಿಸುವ ಮೂಲಕ ರಾಬಿನ್‌ ಉತ್ತಪ್ಪ ಅತಿ ಹೆಚ್ಚು ರನ್‌ ಗಳಿಸಿದ ಎರಡನೇ ಆಟಗಾರರಾಗಿದ್ದರು.

ಮಾರ್ಚ್‌ 31ರಂದು ಎಲ್‌ಎಸ್‌ಜಿ ವಿರುದ್ಧ ನಡೆದ ಪಂದ್ಯದಲ್ಲಿ 27 ಬಾಲ್‌ಗಳಲ್ಲಿ 50 ರನ್‌ ಸಿಡಿಸಿದ್ದ ರಾಬಿ‌ನ್‌ ಉತ್ತಪ್ಪ ಸಿಎಸ್‌ಕೆ ಅತ್ಯುತ್ತಮ ಮೊತ್ತ ಗಳಿಸಲು ಕಾರಣವಾಗಿದ್ದರು. ಸಿಎಸ್‌ಕೆ ಪರ ಈ ಪಂದ್ಯದಲ್ಲಿ ಅತಿಹೆಚ್ಚು ರನ್‌ ಸಿಡಿಸಿದ ಆಟಗಾರರಾಗಿಯೂ ಹೊಮ್ಮಿದ್ದರು.

ಇದನ್ನೂ ಓದಿರಿ: ಐಪಿಎಲ್‌: ಪಂಜಾಬ್‌ ವಿರುದ್ಧದ ಪಂದ್ಯದಲ್ಲಿ ಕ್ರೀಡಾಸ್ಫೂರ್ತಿ ಮೆರೆದ ಕ್ವಿಂಟನ್ ಡಿಕಾಕ್‌

ಏಪ್ರಿಲ್‌ 12ರಂದು ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಸಿಎಸ್‌ಕೆ ಪರ ಶಿವ ದುಬೆ 46 ಬಾಲ್‌ಗಳಲ್ಲಿ 95 ರನ್‌ ಸಿಡಿಸಿ ಅಜೇಯರಾಗಿ ಉಳಿದರೆ, ರಾಬಿನ್ ಉತ್ತಪ್ಪ 50 ಬಾಲ್‌ಗಳಲ್ಲಿ 88 ರನ್‌ ಗಳಿಸಿ ಪಂದ್ಯದ ಗೆಲುವಿನಲ್ಲೂ ಮುಖ್ಯಪಾತ್ರ ವಹಿಸಿದ್ದರು.

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಆಂಬಟಿ ರಾಯುಡು (40/35) ಬಿಟ್ಟರೆ ಅತಿ ಹೆಚ್ಚು ರನ್‌ ಗಳಿಸಿದ್ದು ರಾಬಿನ್ ಉತ್ತಪ್ಪ (30/25). ಇತರ ಆಟಗಾರರಂತೆಯೇ ರಾಬಿನ್‌ ಕೆಲವು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿರುವುದು ನಿಜ. ಆದರೆ ಧೋನಿ ನಾಯಕತ್ವ ವಹಿಸಿಕೊಂಡ ಬಳಿಕ ರಾಬಿನ್ ಉತ್ತಪ್ಪರನ್ನು ಕೆಳಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಕಳುಹಿಸಿದ್ದಾರೆ. ಆಡಿರುವ ಮೂರು ಪಂದ್ಯಗಳಲ್ಲೂ ಇದು ನಿಚ್ಚಳವಾಗಿ ಕಾಣುತ್ತಿದೆ ಎಂಬ ಆರೋಪಗಳು ಬಂದಿವೆ.

ಧೋನಿ ನಾಯಕತ್ವ ವಹಿಸಿಕೊಂಡ ಬಳಿಕ ನಡೆದ ಮೊದಲ ಪಂದ್ಯದಲ್ಲಿ ಎಸ್‌ಆರ್‌ಎಚ್‌ ವಿರುದ್ಧ ಸಿಎಸ್‌ಕೆ ಗೆಲವು ಗಳಿಸಿತ್ತು. ಋತುರಾಜ್‌ ಗಾಯಕ್ವಾಡ್‌, ದೇವನ್‌ ಕಾನ್ವೆ ಉತ್ತಮ ಆರಂಭ ನೀಡಿದರು. 99 ರನ್‌ ಗಳಿಸಿ ಋತುರಾಜ್‌ ಔಟ್ ಆದ ಬಳಿಕ ಧೋನಿ ಕ್ರೀಸ್‌ಗೆ ಬಂದರು. 7 ಬಾಲ್‌ ಆಡಿ 8 ರನ್‌ ಗಳಿಸಿದರು. ಇನ್ನಿಂಗ್ಸ್‌ ಮುಗಿಯುವ ಹಂತದಲ್ಲಿದ್ದಾಗ ಧೋನಿ ಔಟ್ ಆದರು. ಆದರೆ ನಂತರದಲ್ಲಿ ಕ್ರೀಸ್‌ಗೆ ಬಂದಿದ್ದು ರವೀಂದ್ರ ಜಡೇಜಾ. ಈ ಭಾರಿಯ ಐಪಿಎಲ್‌ನಲ್ಲಿ ಜಡೇಜಾ ಉತ್ತಮ ಪ್ರದರ್ಶನವನ್ನೇನೂ ನೀಡಿಲ್ಲ ಎಂಬುದು ಗಮನಾರ್ಹ.

ಇದನ್ನೂ ಓದಿರಿ: IPL2022: ಸಿಎಸ್‌ಕೆ ನಾಯಕತ್ವ ತ್ಯಜಿಸಿದ ಜಡೇಜಾ – ಫಾಫ್ ಡು ಪ್ಲೆಸಿಸ್ ಕೂಡ ಅದೇ ಹಾದಿ ಹಿಡಿಯುವರೆ?

ಆರ್‌ಸಿಬಿ ವಿರುದ್ಧದ ಎರಡನೇ ಪಂದ್ಯದಲ್ಲಿ ರಾಬಿ‌ನ್‌  ಮೂರನೇ ಕ್ರಮಾಂಕದಲ್ಲಿ ಬಂದರೂ ಮೂರು ಬಾಲ್‌ಗಳಲ್ಲಿ ಒಂದು ರನ್‌ ಗಳಿಸಿ ಔಟ್‌ ಆದರು. ಆದರೆ ನಂತರದ ಪಂದ್ಯದಲ್ಲಿ ಏಳನೇ ಕ್ರಮಾಂಕದಲ್ಲಿ ರಾಬಿನ್‌ ಅವರಿಗೆ ಬ್ಯಾಟಿಂಗ್ ನೀಡಲಾಗಿದೆ. ಡೆಲ್ಲಿ ಕ್ಯಾಪಿಟಲ್‌ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ ಸಿಎಸ್‌ಕೆ ಗೆದ್ದಿದೆ. ದೇವನ್ ಕಾನ್ವೆ, ಶಿವಂ ದೂಬೆ, ಋತುರಾಜ್‌ ಉತ್ತಮ ರನ್‌ ಗಳಿಸಿದ್ದರು. ಆದರೆ ಮೊಯಿನ್ ಅಲಿ ಬಳಿಕ ರಾಬಿನ್‌ ಅವರನ್ನು ಕ್ರೀಸ್‌ಗಿಳಿಸಲಾಗಿತ್ತು. ಇನ್ನಿಂಗ್ಸ್‌ ಅಂತ್ಯದಲ್ಲಿ ಆಡಲು ಬಂದ ರಾಬಿನ್‌ ಉತ್ತಪ್ಪ ಕೇವಲ 1 ಬಾಲ್‌ ಆಡಿ ಡಕ್‌ಔಟ್‌ ಆದರು.

ಉತ್ತಪ್ಪ ಅವರನ್ನು ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿರುವ ಲೇಖಕ ಅಲ್ಮೇಡಾ ಗ್ಲಾಡ್‌ಸನ್‌, “ಈತ ಭಾರತದ ಕ್ಯಾಪ್ಟನ್ ಆಗಿದ್ದಾಗಲೂ ಓಪನರ್ ಆಗಿರುವ ರಾಬಿನ್ ಉತ್ತಪ್ಪರನ್ನು ಆರನೇ, ಏಳನೇ ಕ್ರಮಾಂಕದಲ್ಲಾಡಿಸಿ ಆತನ ಕರಿಯರನ್ನೇ ಹಾಳು ಮಾಡಿದ್ದ. ಇದೀಗ ಸಿಎಸ್ಕೆಯಲ್ಲೂ ಅದೇ ಮಾಡುತ್ತಿದ್ದಾನೆ. ಜಡೇಜಾ ಕ್ಯಾಪ್ಟನ್ ಆಗಿರುವತನಕ ಓಪನರ್ ಆಗಿ ಚೆನ್ನಾಗಿಯೇ ಪರ್ಫಾಮ್ ಮಾಡಿದ್ದ ರಾಬಿನ್ಗೆ ಈತ ಕ್ಯಾಪ್ಟನ್ ಆಗುತ್ತಲೇ ಬ್ಯಾಟಿಂಗೇ ಸಿಗುತ್ತಿಲ್ಲ. ಮತ್ತದೇ ನಾಟಕ, ಆರು, ಏಳನೇ ಕ್ರಮಾಂಕ. ಇವರು ಕಳೆದ ಹದಿನೈದು ವರುಷಗಳಲ್ಲಿ ಒಬ್ಬನೇ ಒಬ್ಬ ವಿಕೆಟ್-ಕೀಪರ್‌ನ ಕರಿಯರ್ ಸೆಟ್ ಆಗಲು ಬಿಡಲಿಲ್ಲ. ರಾಬಿನ್, ಪಾರ್ಥೀವ್, ಕಾರ್ತಿಕ್ ಎಲ್ಲರ ಅಂತಾರಾಷ್ಟ್ರೀಯ ಕರಿಯರ್ ಬ್ಲಾಕ್ ಮಾಡ್ಬಿಟ್ಟ. Without doubt, he is by far the greatest politician to have ever played cricket” ಎಂದು ಆರೋಪಿಸಿದ್ದಾರೆ.

“ಉತ್ತಪ್ಪ ಅವರ ಸ್ಥಾನವನ್ನು ವಿದೇಶಿ ಆಟಗಾರನಿಗೆ ಬಿಟ್ಟುಕೊಟ್ಟಿದ್ದು ಏಕೋ ಸರಿ ಕಾಣಲಿಲ್ಲ. ನಮ್ಮಲ್ಲೆ ಪ್ರತಿಭೆಗಳಿರುವಾಗ ಹೊರಗಿನ ಪ್ರತಿಭೆಗಳಿಗೆ ಮಣೆ ಹಾಕುವುದು ಎಷ್ಟು ಸರಿ?” ಎಂದು ಹಕೀಂ ತೀರ್ಥಹಳ್ಳಿ ಪ್ರಶ್ನಿಸಿದ್ದಾರೆ.

ಇದನ್ನೂ ಓದಿರಿ: IPL2022: ಸತತ ಮುಗ್ಗರಿಸುತ್ತಿರುವ ದಿಗ್ಗಜ ತಂಡಗಳು – ಗೆಲುವಿನ ಅಲೆಯಲ್ಲಿ ಹೊಸ ತಂಡಗಳು

“ರಾಬಿನ್ ಉತ್ತಪ್ಪ ಟಿಟ್ವೆಂಟಿ ಫಾರ್ಮಾಟಿಗೆ ಅತ್ಯುತ್ತಮ ಆರಂಭಿಕ ಆಟಗಾರ. ಕೊಟ್ಟ ಅವಕಾಶ ಕಡಿಮೆ; ಆಯ್ಕೆ ಮಾಡಿದರೂ, ಆತನನ್ನು ಸರಿಯಾಗಿ‌ ಬಳಸಿಕೊಳ್ಳಲಿಲ್ಲ. ರಾಬಿನ್ ತರಹ ಕೆಲವು ಉತ್ತಮ ಆಟಗಾರರಿಗೂ ತಮ್ಮ ಪ್ರತಿಭೆಯನ್ನು ಸಂಪೂರ್ಣವಾಗಿ ಬಳಸಲು ಸಾಕಷ್ಟು ಅವಕಾಶಗಳು ದೊರೆಯಲಿಲ್ಲ. ಇದಕ್ಕೆ ಧೋನಿ ಹೊಣೆಯೋ ಅಥವಾ ಬಿಸಿಸಿಐ ಮ್ಯಾನೇಜ್ಮೆಂಟ್ ಅವರ ತೀರ್ಮಾನವೋ ತಿಳಿಯದು. ಬಿಸಿಸಿಐ ಎಂಬ ವ್ಯಾಪಾರೀಕರಣದ ಸಂಸ್ಥೆಯ ಪಾರದರ್ಶಕತೆಯ ಕುರಿತು ಸಾಕಷ್ಟು ಅನುಮಾನಗಳಿವೆ” ಎಂದು ಪವನ್‌ ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.

“ಧೋನಿಯ ಬಗ್ಗೆ ಹಾಗೇ ಹೇಳುವುದನ್ನು ನಾನು ಒಪ್ಪಲಾರೆ, ಒಬ್ಬ ಅತ್ಯುತ್ತಮ ಕ್ರಿಕೆಟರ್ ನಾಯಕನ ಸ್ಥಾನ ಹೊತ್ತು ತನ್ನ ಟಾಪ್ ಆರ್ಡರ್ ಬ್ಯಾಟಿಂಗ್ ಅನ್ನೇ ಫಿನಿಷರ್ ಮಾಡಿಕೊಳ್ಳಲಿಲ್ಲವೇ? ತಂಡದ ಅಗತ್ಯಕ್ಕೆ ತಕ್ಕ ಹಾಗೆ ಆಡಿಸುವವರು ಸ್ವಾರ್ಥದ ಲೇಪ ಹಚ್ಚುವುದು ನಾನು ಒಪ್ಪಲಾರೆ” ಎಂದು ಆದರ್ಶ‌ ಎಂಬವರು ಅಭಿಪ್ರಾಯಪಟ್ಟಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...