Homeಮುಖಪುಟಇದು ನಮ್ಮ ಚಿಂತನಾ ವಲಯದ ಸೋಲೂ ಹೌದು – ರಾಜಶೇಖರ್ ಅಕ್ಕಿ

ಇದು ನಮ್ಮ ಚಿಂತನಾ ವಲಯದ ಸೋಲೂ ಹೌದು – ರಾಜಶೇಖರ್ ಅಕ್ಕಿ

ಕಾರ್ಪೊರೇಟ್ ಹೋಂಚೋಗಳಂತೆ ಇವರೂ ದಿನನಿತ್ಯದ ಬೆಳವಣಿಗೆಗಳನ್ನು ಗಮನಿಸಿ ಅಪ್‍ಡೇಟ್ ಆಗಬೇಕಿತ್ತು. ಆಗಲಿಲ್ಲ. ಏಕೆಂದರೆ, ಇವರ ಇಂಟಲೆಕ್ಚುಯಲ್ ವಲಯಗಳಲ್ಲಿ ಇದನ್ನೂ ಮೀರಿಸಿ, ಅವರ ಸ್ಥಾನಕ್ಕೇ ಕುತ್ತು ತರುವವರು ಇರಲಿಲ್ಲ.

- Advertisement -
- Advertisement -

| ರಾಜಶೇಖರ್ ಅಕ್ಕಿ |

ಕಾರ್ಪೊರೇಟ್ ಹೋಂಚೊಗಳು ಎನ್ನುವರಿರ್ತಾರೆ. ಇವರು ಕಾರ್ಪೊರೇಟ್ ಜಗತ್ತಿನಲ್ಲಿ ಇತರರೊಂದಿಗೆ ಸೆಣೆಸಿ ಯಶಸ್ಸಿನ ಏಣಿ ಹತ್ತಿದವರು. ಇವರು ಜೀವನವನ್ನು ಅತಿಯಾಗಿ ಎಂಜಾಯ್ ಮಾಡುತ್ತಾರೆ ಎಂದು ಹೇಳಲಾಗುತ್ತದೆ. ಆದರೆ, ಒಂದೇ ಒಂದು ತಪ್ಪು ಮಾಡಿದಲ್ಲಿ ಇವರು ಸರ್ರನೇ ಕೆಳಗಿಳಿಯುತ್ತಾರೆ. ತಂತ್ರಜ್ಞಾನದಲ್ಲಿ ಮತ್ತು ಆ ತಂತ್ರಜ್ಞಾನವನ್ನು ಬಳಸುವವರಲ್ಲಿ ವಿಶ್ವಾದಾದ್ಯಂತ ಯಾವುದೇ ಬದಲಾವಣೆ ಆಗಲಿ ಇವರಿಗೆ ಗೊತ್ತಿರಲೇಬೇಕು.

ಇಂದು 17ನೇ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಮೋದಿಯ ಬಿಜೆಪಿ ಇನ್ನೊಮ್ಮೆ ಗೆಲ್ಲುತ್ತಿದೆ. ಅಧಿಕಾರದ ಎರಡನೇ ಅವಧಿಯಲ್ಲಿ ಅವರು ಏನೆಲ್ಲಾ ಮಾಡಬಹುದು, ನಮ್ಮ ಪ್ರಜಾಪ್ರಭುತ್ವಕ್ಕೆ ಕಾದಿರುವ ಗಂಡಾಂತರ, ನಮ್ಮ ಬಹುತ್ವದ ಸಂಸ್ಕೃತಿಗೆ ಕಾದಿರುವ ಗಂಡಾಂತರ, ಅಲ್ಪಸಂಖ್ಯಾತರು, ದಲಿತರು ಮತ್ತು ಮುಖ್ಯವಾಗಿ ಮಹಿಳೆಯರು ಅನುಭವಿಸಬೇಕಾದ ಸಂಕಷ್ಟಗಳ ಬಗ್ಗೆಯೂ ನಾವೆಲ್ಲ ಚರ್ಚಿಸಿದ್ದೇವೆ. ಇದರ ಬಗ್ಗೆ ನಮ್ಮ ಬುದ್ಧಿಜೀವಿಗಳು ಬರೆದಿದ್ದಾರೆ, ನಮ್ಮನ್ನು ಎಚ್ಚರಗೊಳಿಸಲು ಪ್ರಯತ್ನಿಸಿದ್ದಾರೆ.

ಆದರೆ ನಮ್ಮ ಲೀಡಿಂಗ್ ಬುದ್ಧಿಜೀವಿಗಳು ಬಿಜೆಪಿ ಮತ್ತು ಸಂಘಪರಿವಾರ ಎಸೆದ ಸವಾಲನ್ನು ಎದುರಿಸಲು ಸಶಕ್ತರಾಗಿದ್ದಾರೆಯೇ? ಇದು ಚುನಾವಣೆಯಲ್ಲಿನ ಗೆಲುವು ಸೋಲಿನ ಪ್ರಶ್ನೆಯಲ್ಲ. ಅವರು ದೇಶದ ಮುಂದೆ ಇರಿಸಿದ ಸೈದ್ಧಾಂತಿಕ ಸವಾಲಿಗೆ ಸೈದ್ಧಾಂತಿಕ ಉತ್ತರಗಳು ನಮ್ಮ ಬುದ್ಧಿಜೀವಿಗಳು ಕಂಡುಕೊಂಡಿದ್ದಾರೆಯೇ? ಕಳೆದ ಎರಡೂವರೆ ದಶಕಗಳಲ್ಲಿ ಬಿಜೆಪಿ ಮತ್ತು ಬಲಪಂಥೀಯ ಶಕ್ತಿಗಳು ಅಪಾರ ಯಶಸ್ಸನ್ನು ಕಂಡಿದ್ದಾರೆ. ಅದರೆದುರಿಗೆ ಇವರ ಪಾತ್ರವೇನಾಗಿತ್ತು?

ಇಂಟಲೆಕ್ಚುವಲಿಸಂ ಎನ್ನುವುದೂ ರಾಜಕೀಯದ ಒಂದು ಭಾಗ. ನಮ್ಮ ಬುದ್ಧಿಜೀವಿಗಳು ರಾಜಕೀಯಕ್ಕೆ ತಮ್ಮ ಕೊಡುಗೆ ನೀಡುತ್ತಲೇ ಬಂದಿದ್ದಾರೆ. ಸ್ವಾತಂತ್ರಪೂರ್ವದ ಸಂದರ್ಭದಲ್ಲಿ ಬುದ್ಧಿಜೀವಿಗಳೇ ರಾಜಕಿಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಅನೇಕ ರಾಜಕಾರಣಿಗಳು ಹಲವಾರು ಪುಸ್ತಕಗಳನ್ನು ಬರೆದಿದ್ದರು. ಸ್ವಾತಂತ್ರ್ಯಾ ನಂತರದ ಮೊದಲ ಕೆಲವು ದಶಕಗಳವರೆಗೆ ದೇಶದ ರಾಜಕಾರಣಿಗಳಲ್ಲಿ ಅನೇಕ ಚಿಂತಕರು ಮತ್ತು ಬುದ್ಧಿಜೀವಿಗಳಿದ್ದರು.

ಸಮಯ ಕಳೆದಂತೆ ಪರಿಸ್ಥಿತಿ ಬದಲಾಗಿ ಬುದ್ಧಿಜೀವಿಗಳೆಂದರೆ ಯುನಿವರ್ಸಿಟಿಗಳಲ್ಲಿ ಕೆಲಸ ಮಾಡುವವರು, ಪತ್ರಕರ್ತರು, ಬರಹಗಾರರೇ ವೃತ್ತಿಪರ ಬುದ್ಧಿಜೀವಿಗಳಾದರು. ಈ ಬುದ್ಧಿಜೀವಿಗಳು ನೀಡಿದ ಕೊಡುಗೆಯೂ ಕಡಿಮೆಯೇನಿಲ್ಲ. ಆದರೆ ಕಳೆದೆರಡು ದಶಕಗಳಿಂದ ಇವರೆಲ್ಲರು ತಮ್ಮನ್ನು ತಾವು ಅಪ್‍ಡೇಟ್ ಮಾಡಿಕೊಂಡಿದ್ದಾರೆಯೇ? ತಮ್ಮ ಕೆಲಸ ಮಾಡುವಲ್ಲಿ ವಿಫಲರಾಗಿದ್ದಾರೆಯೇ? ಹೌದು ಮತ್ತು ಇಲ್ಲ.

ನಮ್ಮ ಬುದ್ಧಿಜೀವಿಗಳು ಬಿಜೆಪಿ ಸಂಘಪರಿವಾರದ ಮಾರಕ ಅಜೆಂಡಾಗೆ ವಿರುದ್ಧವಾಗಿ ದಿಟ್ಟವಾಗಿ ಎದ್ದು ನಿಂತಿದ್ದಾರೆ. ಬಿಜೆಪಿಯ ಕಥನವನ್ನು ಮುರಿಯಲು, ಅವರ ಕಥನದ ಪೊಳ್ಳುತನ ಮತ್ತು ಸುಳ್ಳುಗಳನ್ನು ಬಯಲಿಗೆಳೆದಿದ್ದಾರೆ. ಅದಕ್ಕಾಗಿ ಅವರು ತೆಗೆದುಕೊಂಡ ರಿಸ್ಕ್ ಸಹ ಅಂತಿಂಥದ್ದಲ್ಲ. ಅಕ್ಷರಶಃ ಪ್ರಾಣವನ್ನೇ ತೆತ್ತಿದ್ದಾರೆ. ಮುಖ್ಯವಾಹಿನಿ ರಾಜಕೀಯ ಪಕ್ಷಗಳು ದನಿ ಕಳೆದುಕೊಂಡಾಗ ಗಟ್ಟಿಯಾಗಿ ಮಾತನಾಡಿದ್ದಾರೆ. ಆದರೂ ಸೋತಿದ್ದಾರೆ.

ಇದನ್ನು ಓದಿ: ದೇಶವನ್ನು ಕಾಂಗ್ರೆಸ್ ಏಕೆ ರಕ್ಷಿಸಲಾರದು? – ಯೋಗೇಂದ್ರ ಯಾದವ್

ಅದಕ್ಕೆ ಎರಡು ಕಾರಣಗಳಿವೆ. ಮೊದಲನೆಯದು, ನಮ್ಮ ಬುದ್ಧಿಜೀವಿಗಳಿಗೆ ತಮ್ಮ ಮಾತುಗಳು ಜನರ ತನಕ ತಲುಪಿಸುವ ಜವಾಬ್ದಾರಿ ಇದ್ದಿಲ್ಲ. ತಮ್ಮ ಸಂದೇಶವನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡಿದರೂ, ತಲುಪುತ್ತಿದೆಯೋ, ಇಲ್ಲವೋ ಎನ್ನುವುದರ ಬಗ್ಗೆ ತಲೆಕೆಡಿಸಿಕೊಂಡರೆ? ಹಾಗೂ ಈ ಪ್ರಗತಿಪರ ಬುದ್ಧಿಜೀವಿಗಳ ಮಾತುಗಳು ಜನರಿಗೆ ತಲುಪಿದರೂ, ಇವರ ಮಾತುಗಳು ಜನರಿಗೆ ಅರ್ಥವಾಗುವ ಮಾತುಗಳಾಗಿದ್ದವೇ? ಖಂಡಿತವಾಗಿಯೂ ಇಲ್ಲ.

ನನ್ನ ಸಂಪರ್ಕದಲ್ಲಿರುವ ಯಾರಿಗೂ (ಚಳವಳಿಯ ಬಳಗದವರನ್ನು ಹೊರತುಪಡಿಸಿ) ಕೋಮುವಾದ ಮತ್ತು ಜಾತ್ಯತೀತತೆ ಎನ್ನುವಂತಹ ಪದಗಳ ಅರ್ಥಗಳೇ ಗೊತ್ತಿಲ್ಲ. ಇಂತಹ ಸಂದರ್ಭಗಳಲ್ಲಿ ಹಲವಾರು ದಶಕಗಳಿಂದ ಬಳಸುತ್ತಿರುವ ಪದಗಳನ್ನೇ, ಭಾಷೆಯನ್ನೇ ಬಳಸುತ್ತ ಬಂದ ಬುದ್ಧಿಜೀವಿಗಳು ಈ ನಿಟ್ಟಿನಲ್ಲಿ ವಿಫಲರಾಗಿದ್ದಾರೆ.

ಎರಡನೆಯದು, ಬಿಜೆಪಿ ಎಸೆದ ಸವಾಲಿಗೆ ತಕ್ಕ ಉತ್ತರಗಳನ್ನಾದರೂ ಕಂಡುಕೊಂಡಿದ್ದಾರೆಯೇ? ಇದು ಚಿಂತಕರ ಮೂಲಕರ್ತವ್ಯ. ಕಳೆದೆರಡು ದಶಕಗಳಲ್ಲಿ ನಮ್ಮ ದೇಶಕ್ಕೆ ಒದಗಿರುವ ವಿಪತ್ತನ್ನು ಎದುರಿಸಲು ಯಾವುದೇ ಹೊಸ ಉತ್ತರಗಳನ್ನು ಕಂಡುಕೊಂಡಿದ್ದಾರೆಯೇ? ಮೂಲಭೂತವಾದದ ವಿರುದ್ಧ ಸೈದ್ಧಾಂತಿಕವಾಗಿ ಹಲವು ದಶಕಗಳ ಹಿಂದಿನ ನಮ್ಮ ಉತ್ತರಗಳು ಹೇಗೆ ಕೆಲಸ ಮಾಡಿಯಾವು?

ಕಾರ್ಪೊರೇಟ್ ಹೋಂಚೋಗಳಂತೆ ಇವರೂ ದಿನನಿತ್ಯದ ಬೆಳವಣಿಗೆಗಳನ್ನು ಗಮನಿಸಿ ಅಪ್‍ಡೇಟ್ ಆಗಬೇಕಿತ್ತು. ಆಗಲಿಲ್ಲ. ಏಕೆಂದರೆ, ಇವರ ಇಂಟಲೆಕ್ಚುಯಲ್ ವಲಯಗಳಲ್ಲಿ ಇದನ್ನೂ ಮೀರಿಸಿ, ಅವರ ಸ್ಥಾನಕ್ಕೇ ಕುತ್ತು ತರುವವರು ಇರಲಿಲ್ಲ. ಹೊಸ ತಲೆಮಾರೂ ಅದನ್ನು ಕೈಗೆತ್ತಿಕೊಳ್ಳಲಿಲ್ಲ. ಪ್ರಾಣ ಬೆದರಿಕೆ, ಕ್ಯಾಂಪಸ್ಸುಗಳಲ್ಲೇ ದಾಳಿ, ಟ್ರೋಲಿಂಗ್ ಎಲ್ಲವನ್ನೂ ಎದುರಿಸಿ ನಿಂತ ಇವರುಗಳು ತಮ್ಮ ಬುದ್ಧಿಜೀವಿತ್ವಕ್ಕೇ ಒದಗಿ ಬಂದ ಕುತ್ತನ್ನು, ಇಂಟಲೆಕ್ಚುಯಲಿಸಂ ಮೂಲಕವೇ ಪರಿಣಾಮಕಾರಿಯಾಗಿ ಎದುರಿಸಲಿಲ್ಲ. ಪರ್ಯಾಯ ಕಥನದ ನಿರ್ಮಾಣ ಮತ್ತು ಅದನ್ನು ಸಾಮಾನ್ಯ ಜನರಿಗೆ ತಲುಪಿಸುವ ಪರಿ ಎರಡನ್ನೂ ಶೋಧಿಸುವ ಕೆಲಸ ಅವರಿಂದ ನಡೆಯಲಿಲ್ಲ.

ಬಿಜೆಪಿಯ ಸವಾಲಿಗೆ ನಮ್ಮಲ್ಲಿ ಕೆಲವರು ತಂತ್ರಗಾರಿಕೆಯಿಂದ ಎದುರಿಸುವ ಪ್ರಯತ್ನ ಮಾಡಿದರು. ಖಂಡಿತ ಶ್ಲಾಘನೀಯವೇ. ಅದರಲ್ಲಿ ಕೆಲವರು ಸರ್ಕಾರವು ಜನರ ಕುತ್ತಿಗೆಗೆ ತಂದ ಕೆಲವು ಆರ್ಥಿಕ ವಿಷಯಗಳನ್ನು ಇಟ್ಟುಕೊಂಡು ಹೋರಾಟ ಮಾಡಿದರು. ಕೆಲವರು ಬಿಜೆಪಿ ಧರ್ಮವನ್ನು ಬಳಸಿದರೆ ಜಾತಿ ಸಮೀಕರಣವನ್ನು ಬಳಸುವ ತಂತ್ರಗಾರಿಕೆ ಮಾಡಿದರು. ಆದರೆ ತಂತ್ರಗಾರಿಕೆ ಸೈದ್ಧಾಂತಿಕ ಉತ್ತರವಲ್ಲ. ಅವರು ಒಡ್ಡಿರುವ ಸೈದ್ಧಾಂತಿಕ ಸವಾಲಿಗೆ ಹೊಸ ಸೈದ್ಧಾಂತಿಕ ಉತ್ತರವನ್ನು ಕಂಡುಕೊಂಡ ನಂತರವೇ ತಂತ್ರಗಾರಿಕೆಯ ಉಪಾಯಗಳನ್ನು ಹುಡುಕಬಹುದು.

ನಮ್ಮಲ್ಲಿ ಅನೇಕರು ಇಂಟಲೆಕ್ಚುವಲಿಸಂ ಅನ್ನು ಹೋರಾಟ ಮತ್ತು ತಂತ್ರಗಾರಿಕೆಯೊಂದಿಗೆ ಕನ್ಫೂಸ್ ಮಾಡಿಕೊಳ್ಳುವ ಸಾಧ್ಯತೆ ಇದೆ. ಈ ಮೂರು ಬೇರೆ ಬೇರೆ ವಿಷಯಗಳೆಂದು ತಿಳಿದುಕೊಳ್ಳುವುದು ಅತ್ಯವಶ್ಯಕ.

ಇದನ್ನು ಓದಿ: ಈ ಚುನಾವಣೆಯಲ್ಲಿ ಮಹಿಳೆಯರಿಗೆ ಸಿಕ್ಕಿದ್ದೆಷ್ಟು? ಮಮತಾ ಮತ್ತು ನವೀನ್ ಪಟ್ನಾಯಕ್ ಮಾದರಿ ಮೆಚ್ಚುವಂತದ್ದು..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಹೌದು. ಬುದ್ಧಿ ಜೀವಿಗಳು ಜನರನ್ನು ತಲುಪಲು ವಿಫಲರಾಗಿದ್ದಾರೆ.
    ಬುದ್ಧಿ ಜೀವಿಗಳು ಕೇವಲ ಬೌದ್ಧಿಕ ಚರ್ಚೆಯಲ್ಲಿ ತೃಪ್ತಿ ಪಡೆಯುತ್ತಿದ್ದಾರೆ.
    ಜೂನ್ ಸಾಮಾನ್ಯರೊಡನೆ ಬದುಕದ ಬುದ್ಧಿ ಜೀವಿಗಳು ನಿರಾಸೆಗೊಳಿಸಿದ್ದಾರೆ.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...