Homeಮುಖಪುಟಇದು ನಮ್ಮ ಚಿಂತನಾ ವಲಯದ ಸೋಲೂ ಹೌದು – ರಾಜಶೇಖರ್ ಅಕ್ಕಿ

ಇದು ನಮ್ಮ ಚಿಂತನಾ ವಲಯದ ಸೋಲೂ ಹೌದು – ರಾಜಶೇಖರ್ ಅಕ್ಕಿ

ಕಾರ್ಪೊರೇಟ್ ಹೋಂಚೋಗಳಂತೆ ಇವರೂ ದಿನನಿತ್ಯದ ಬೆಳವಣಿಗೆಗಳನ್ನು ಗಮನಿಸಿ ಅಪ್‍ಡೇಟ್ ಆಗಬೇಕಿತ್ತು. ಆಗಲಿಲ್ಲ. ಏಕೆಂದರೆ, ಇವರ ಇಂಟಲೆಕ್ಚುಯಲ್ ವಲಯಗಳಲ್ಲಿ ಇದನ್ನೂ ಮೀರಿಸಿ, ಅವರ ಸ್ಥಾನಕ್ಕೇ ಕುತ್ತು ತರುವವರು ಇರಲಿಲ್ಲ.

- Advertisement -
- Advertisement -

| ರಾಜಶೇಖರ್ ಅಕ್ಕಿ |

ಕಾರ್ಪೊರೇಟ್ ಹೋಂಚೊಗಳು ಎನ್ನುವರಿರ್ತಾರೆ. ಇವರು ಕಾರ್ಪೊರೇಟ್ ಜಗತ್ತಿನಲ್ಲಿ ಇತರರೊಂದಿಗೆ ಸೆಣೆಸಿ ಯಶಸ್ಸಿನ ಏಣಿ ಹತ್ತಿದವರು. ಇವರು ಜೀವನವನ್ನು ಅತಿಯಾಗಿ ಎಂಜಾಯ್ ಮಾಡುತ್ತಾರೆ ಎಂದು ಹೇಳಲಾಗುತ್ತದೆ. ಆದರೆ, ಒಂದೇ ಒಂದು ತಪ್ಪು ಮಾಡಿದಲ್ಲಿ ಇವರು ಸರ್ರನೇ ಕೆಳಗಿಳಿಯುತ್ತಾರೆ. ತಂತ್ರಜ್ಞಾನದಲ್ಲಿ ಮತ್ತು ಆ ತಂತ್ರಜ್ಞಾನವನ್ನು ಬಳಸುವವರಲ್ಲಿ ವಿಶ್ವಾದಾದ್ಯಂತ ಯಾವುದೇ ಬದಲಾವಣೆ ಆಗಲಿ ಇವರಿಗೆ ಗೊತ್ತಿರಲೇಬೇಕು.

ಇಂದು 17ನೇ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಮೋದಿಯ ಬಿಜೆಪಿ ಇನ್ನೊಮ್ಮೆ ಗೆಲ್ಲುತ್ತಿದೆ. ಅಧಿಕಾರದ ಎರಡನೇ ಅವಧಿಯಲ್ಲಿ ಅವರು ಏನೆಲ್ಲಾ ಮಾಡಬಹುದು, ನಮ್ಮ ಪ್ರಜಾಪ್ರಭುತ್ವಕ್ಕೆ ಕಾದಿರುವ ಗಂಡಾಂತರ, ನಮ್ಮ ಬಹುತ್ವದ ಸಂಸ್ಕೃತಿಗೆ ಕಾದಿರುವ ಗಂಡಾಂತರ, ಅಲ್ಪಸಂಖ್ಯಾತರು, ದಲಿತರು ಮತ್ತು ಮುಖ್ಯವಾಗಿ ಮಹಿಳೆಯರು ಅನುಭವಿಸಬೇಕಾದ ಸಂಕಷ್ಟಗಳ ಬಗ್ಗೆಯೂ ನಾವೆಲ್ಲ ಚರ್ಚಿಸಿದ್ದೇವೆ. ಇದರ ಬಗ್ಗೆ ನಮ್ಮ ಬುದ್ಧಿಜೀವಿಗಳು ಬರೆದಿದ್ದಾರೆ, ನಮ್ಮನ್ನು ಎಚ್ಚರಗೊಳಿಸಲು ಪ್ರಯತ್ನಿಸಿದ್ದಾರೆ.

ಆದರೆ ನಮ್ಮ ಲೀಡಿಂಗ್ ಬುದ್ಧಿಜೀವಿಗಳು ಬಿಜೆಪಿ ಮತ್ತು ಸಂಘಪರಿವಾರ ಎಸೆದ ಸವಾಲನ್ನು ಎದುರಿಸಲು ಸಶಕ್ತರಾಗಿದ್ದಾರೆಯೇ? ಇದು ಚುನಾವಣೆಯಲ್ಲಿನ ಗೆಲುವು ಸೋಲಿನ ಪ್ರಶ್ನೆಯಲ್ಲ. ಅವರು ದೇಶದ ಮುಂದೆ ಇರಿಸಿದ ಸೈದ್ಧಾಂತಿಕ ಸವಾಲಿಗೆ ಸೈದ್ಧಾಂತಿಕ ಉತ್ತರಗಳು ನಮ್ಮ ಬುದ್ಧಿಜೀವಿಗಳು ಕಂಡುಕೊಂಡಿದ್ದಾರೆಯೇ? ಕಳೆದ ಎರಡೂವರೆ ದಶಕಗಳಲ್ಲಿ ಬಿಜೆಪಿ ಮತ್ತು ಬಲಪಂಥೀಯ ಶಕ್ತಿಗಳು ಅಪಾರ ಯಶಸ್ಸನ್ನು ಕಂಡಿದ್ದಾರೆ. ಅದರೆದುರಿಗೆ ಇವರ ಪಾತ್ರವೇನಾಗಿತ್ತು?

ಇಂಟಲೆಕ್ಚುವಲಿಸಂ ಎನ್ನುವುದೂ ರಾಜಕೀಯದ ಒಂದು ಭಾಗ. ನಮ್ಮ ಬುದ್ಧಿಜೀವಿಗಳು ರಾಜಕೀಯಕ್ಕೆ ತಮ್ಮ ಕೊಡುಗೆ ನೀಡುತ್ತಲೇ ಬಂದಿದ್ದಾರೆ. ಸ್ವಾತಂತ್ರಪೂರ್ವದ ಸಂದರ್ಭದಲ್ಲಿ ಬುದ್ಧಿಜೀವಿಗಳೇ ರಾಜಕಿಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಅನೇಕ ರಾಜಕಾರಣಿಗಳು ಹಲವಾರು ಪುಸ್ತಕಗಳನ್ನು ಬರೆದಿದ್ದರು. ಸ್ವಾತಂತ್ರ್ಯಾ ನಂತರದ ಮೊದಲ ಕೆಲವು ದಶಕಗಳವರೆಗೆ ದೇಶದ ರಾಜಕಾರಣಿಗಳಲ್ಲಿ ಅನೇಕ ಚಿಂತಕರು ಮತ್ತು ಬುದ್ಧಿಜೀವಿಗಳಿದ್ದರು.

ಸಮಯ ಕಳೆದಂತೆ ಪರಿಸ್ಥಿತಿ ಬದಲಾಗಿ ಬುದ್ಧಿಜೀವಿಗಳೆಂದರೆ ಯುನಿವರ್ಸಿಟಿಗಳಲ್ಲಿ ಕೆಲಸ ಮಾಡುವವರು, ಪತ್ರಕರ್ತರು, ಬರಹಗಾರರೇ ವೃತ್ತಿಪರ ಬುದ್ಧಿಜೀವಿಗಳಾದರು. ಈ ಬುದ್ಧಿಜೀವಿಗಳು ನೀಡಿದ ಕೊಡುಗೆಯೂ ಕಡಿಮೆಯೇನಿಲ್ಲ. ಆದರೆ ಕಳೆದೆರಡು ದಶಕಗಳಿಂದ ಇವರೆಲ್ಲರು ತಮ್ಮನ್ನು ತಾವು ಅಪ್‍ಡೇಟ್ ಮಾಡಿಕೊಂಡಿದ್ದಾರೆಯೇ? ತಮ್ಮ ಕೆಲಸ ಮಾಡುವಲ್ಲಿ ವಿಫಲರಾಗಿದ್ದಾರೆಯೇ? ಹೌದು ಮತ್ತು ಇಲ್ಲ.

ನಮ್ಮ ಬುದ್ಧಿಜೀವಿಗಳು ಬಿಜೆಪಿ ಸಂಘಪರಿವಾರದ ಮಾರಕ ಅಜೆಂಡಾಗೆ ವಿರುದ್ಧವಾಗಿ ದಿಟ್ಟವಾಗಿ ಎದ್ದು ನಿಂತಿದ್ದಾರೆ. ಬಿಜೆಪಿಯ ಕಥನವನ್ನು ಮುರಿಯಲು, ಅವರ ಕಥನದ ಪೊಳ್ಳುತನ ಮತ್ತು ಸುಳ್ಳುಗಳನ್ನು ಬಯಲಿಗೆಳೆದಿದ್ದಾರೆ. ಅದಕ್ಕಾಗಿ ಅವರು ತೆಗೆದುಕೊಂಡ ರಿಸ್ಕ್ ಸಹ ಅಂತಿಂಥದ್ದಲ್ಲ. ಅಕ್ಷರಶಃ ಪ್ರಾಣವನ್ನೇ ತೆತ್ತಿದ್ದಾರೆ. ಮುಖ್ಯವಾಹಿನಿ ರಾಜಕೀಯ ಪಕ್ಷಗಳು ದನಿ ಕಳೆದುಕೊಂಡಾಗ ಗಟ್ಟಿಯಾಗಿ ಮಾತನಾಡಿದ್ದಾರೆ. ಆದರೂ ಸೋತಿದ್ದಾರೆ.

ಇದನ್ನು ಓದಿ: ದೇಶವನ್ನು ಕಾಂಗ್ರೆಸ್ ಏಕೆ ರಕ್ಷಿಸಲಾರದು? – ಯೋಗೇಂದ್ರ ಯಾದವ್

ಅದಕ್ಕೆ ಎರಡು ಕಾರಣಗಳಿವೆ. ಮೊದಲನೆಯದು, ನಮ್ಮ ಬುದ್ಧಿಜೀವಿಗಳಿಗೆ ತಮ್ಮ ಮಾತುಗಳು ಜನರ ತನಕ ತಲುಪಿಸುವ ಜವಾಬ್ದಾರಿ ಇದ್ದಿಲ್ಲ. ತಮ್ಮ ಸಂದೇಶವನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡಿದರೂ, ತಲುಪುತ್ತಿದೆಯೋ, ಇಲ್ಲವೋ ಎನ್ನುವುದರ ಬಗ್ಗೆ ತಲೆಕೆಡಿಸಿಕೊಂಡರೆ? ಹಾಗೂ ಈ ಪ್ರಗತಿಪರ ಬುದ್ಧಿಜೀವಿಗಳ ಮಾತುಗಳು ಜನರಿಗೆ ತಲುಪಿದರೂ, ಇವರ ಮಾತುಗಳು ಜನರಿಗೆ ಅರ್ಥವಾಗುವ ಮಾತುಗಳಾಗಿದ್ದವೇ? ಖಂಡಿತವಾಗಿಯೂ ಇಲ್ಲ.

ನನ್ನ ಸಂಪರ್ಕದಲ್ಲಿರುವ ಯಾರಿಗೂ (ಚಳವಳಿಯ ಬಳಗದವರನ್ನು ಹೊರತುಪಡಿಸಿ) ಕೋಮುವಾದ ಮತ್ತು ಜಾತ್ಯತೀತತೆ ಎನ್ನುವಂತಹ ಪದಗಳ ಅರ್ಥಗಳೇ ಗೊತ್ತಿಲ್ಲ. ಇಂತಹ ಸಂದರ್ಭಗಳಲ್ಲಿ ಹಲವಾರು ದಶಕಗಳಿಂದ ಬಳಸುತ್ತಿರುವ ಪದಗಳನ್ನೇ, ಭಾಷೆಯನ್ನೇ ಬಳಸುತ್ತ ಬಂದ ಬುದ್ಧಿಜೀವಿಗಳು ಈ ನಿಟ್ಟಿನಲ್ಲಿ ವಿಫಲರಾಗಿದ್ದಾರೆ.

ಎರಡನೆಯದು, ಬಿಜೆಪಿ ಎಸೆದ ಸವಾಲಿಗೆ ತಕ್ಕ ಉತ್ತರಗಳನ್ನಾದರೂ ಕಂಡುಕೊಂಡಿದ್ದಾರೆಯೇ? ಇದು ಚಿಂತಕರ ಮೂಲಕರ್ತವ್ಯ. ಕಳೆದೆರಡು ದಶಕಗಳಲ್ಲಿ ನಮ್ಮ ದೇಶಕ್ಕೆ ಒದಗಿರುವ ವಿಪತ್ತನ್ನು ಎದುರಿಸಲು ಯಾವುದೇ ಹೊಸ ಉತ್ತರಗಳನ್ನು ಕಂಡುಕೊಂಡಿದ್ದಾರೆಯೇ? ಮೂಲಭೂತವಾದದ ವಿರುದ್ಧ ಸೈದ್ಧಾಂತಿಕವಾಗಿ ಹಲವು ದಶಕಗಳ ಹಿಂದಿನ ನಮ್ಮ ಉತ್ತರಗಳು ಹೇಗೆ ಕೆಲಸ ಮಾಡಿಯಾವು?

ಕಾರ್ಪೊರೇಟ್ ಹೋಂಚೋಗಳಂತೆ ಇವರೂ ದಿನನಿತ್ಯದ ಬೆಳವಣಿಗೆಗಳನ್ನು ಗಮನಿಸಿ ಅಪ್‍ಡೇಟ್ ಆಗಬೇಕಿತ್ತು. ಆಗಲಿಲ್ಲ. ಏಕೆಂದರೆ, ಇವರ ಇಂಟಲೆಕ್ಚುಯಲ್ ವಲಯಗಳಲ್ಲಿ ಇದನ್ನೂ ಮೀರಿಸಿ, ಅವರ ಸ್ಥಾನಕ್ಕೇ ಕುತ್ತು ತರುವವರು ಇರಲಿಲ್ಲ. ಹೊಸ ತಲೆಮಾರೂ ಅದನ್ನು ಕೈಗೆತ್ತಿಕೊಳ್ಳಲಿಲ್ಲ. ಪ್ರಾಣ ಬೆದರಿಕೆ, ಕ್ಯಾಂಪಸ್ಸುಗಳಲ್ಲೇ ದಾಳಿ, ಟ್ರೋಲಿಂಗ್ ಎಲ್ಲವನ್ನೂ ಎದುರಿಸಿ ನಿಂತ ಇವರುಗಳು ತಮ್ಮ ಬುದ್ಧಿಜೀವಿತ್ವಕ್ಕೇ ಒದಗಿ ಬಂದ ಕುತ್ತನ್ನು, ಇಂಟಲೆಕ್ಚುಯಲಿಸಂ ಮೂಲಕವೇ ಪರಿಣಾಮಕಾರಿಯಾಗಿ ಎದುರಿಸಲಿಲ್ಲ. ಪರ್ಯಾಯ ಕಥನದ ನಿರ್ಮಾಣ ಮತ್ತು ಅದನ್ನು ಸಾಮಾನ್ಯ ಜನರಿಗೆ ತಲುಪಿಸುವ ಪರಿ ಎರಡನ್ನೂ ಶೋಧಿಸುವ ಕೆಲಸ ಅವರಿಂದ ನಡೆಯಲಿಲ್ಲ.

ಬಿಜೆಪಿಯ ಸವಾಲಿಗೆ ನಮ್ಮಲ್ಲಿ ಕೆಲವರು ತಂತ್ರಗಾರಿಕೆಯಿಂದ ಎದುರಿಸುವ ಪ್ರಯತ್ನ ಮಾಡಿದರು. ಖಂಡಿತ ಶ್ಲಾಘನೀಯವೇ. ಅದರಲ್ಲಿ ಕೆಲವರು ಸರ್ಕಾರವು ಜನರ ಕುತ್ತಿಗೆಗೆ ತಂದ ಕೆಲವು ಆರ್ಥಿಕ ವಿಷಯಗಳನ್ನು ಇಟ್ಟುಕೊಂಡು ಹೋರಾಟ ಮಾಡಿದರು. ಕೆಲವರು ಬಿಜೆಪಿ ಧರ್ಮವನ್ನು ಬಳಸಿದರೆ ಜಾತಿ ಸಮೀಕರಣವನ್ನು ಬಳಸುವ ತಂತ್ರಗಾರಿಕೆ ಮಾಡಿದರು. ಆದರೆ ತಂತ್ರಗಾರಿಕೆ ಸೈದ್ಧಾಂತಿಕ ಉತ್ತರವಲ್ಲ. ಅವರು ಒಡ್ಡಿರುವ ಸೈದ್ಧಾಂತಿಕ ಸವಾಲಿಗೆ ಹೊಸ ಸೈದ್ಧಾಂತಿಕ ಉತ್ತರವನ್ನು ಕಂಡುಕೊಂಡ ನಂತರವೇ ತಂತ್ರಗಾರಿಕೆಯ ಉಪಾಯಗಳನ್ನು ಹುಡುಕಬಹುದು.

ನಮ್ಮಲ್ಲಿ ಅನೇಕರು ಇಂಟಲೆಕ್ಚುವಲಿಸಂ ಅನ್ನು ಹೋರಾಟ ಮತ್ತು ತಂತ್ರಗಾರಿಕೆಯೊಂದಿಗೆ ಕನ್ಫೂಸ್ ಮಾಡಿಕೊಳ್ಳುವ ಸಾಧ್ಯತೆ ಇದೆ. ಈ ಮೂರು ಬೇರೆ ಬೇರೆ ವಿಷಯಗಳೆಂದು ತಿಳಿದುಕೊಳ್ಳುವುದು ಅತ್ಯವಶ್ಯಕ.

ಇದನ್ನು ಓದಿ: ಈ ಚುನಾವಣೆಯಲ್ಲಿ ಮಹಿಳೆಯರಿಗೆ ಸಿಕ್ಕಿದ್ದೆಷ್ಟು? ಮಮತಾ ಮತ್ತು ನವೀನ್ ಪಟ್ನಾಯಕ್ ಮಾದರಿ ಮೆಚ್ಚುವಂತದ್ದು..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಹೌದು. ಬುದ್ಧಿ ಜೀವಿಗಳು ಜನರನ್ನು ತಲುಪಲು ವಿಫಲರಾಗಿದ್ದಾರೆ.
    ಬುದ್ಧಿ ಜೀವಿಗಳು ಕೇವಲ ಬೌದ್ಧಿಕ ಚರ್ಚೆಯಲ್ಲಿ ತೃಪ್ತಿ ಪಡೆಯುತ್ತಿದ್ದಾರೆ.
    ಜೂನ್ ಸಾಮಾನ್ಯರೊಡನೆ ಬದುಕದ ಬುದ್ಧಿ ಜೀವಿಗಳು ನಿರಾಸೆಗೊಳಿಸಿದ್ದಾರೆ.

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....