ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾಗೆ ಸರ್ಕಾರಿ ಶಾಲೆಗಳ ಅಭಿವೃದ್ದಿ ಕುರಿತು ಬಹಿರಂಗ ಚರ್ಚೆಗೆ ಆಹ್ವಾನ ನೀಡಿದ್ದ ಉತ್ತರ ಪ್ರದೇಶದ ಸಚಿವರು ಇಂದು ಚರ್ಚೆಗೆ ಬಾರದೆ ನಾಪತ್ತೆಯಾಗಿರುವ ಘಟನೆ ಲಕ್ನೋದಲ್ಲಿ ಜರುಗಿದೆ.
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿರುವ ಆಮ್ ಆದ್ಮಿ ಪಕ್ಷದ ವಿರುದ್ಧ ಉತ್ತರ ಪ್ರದೇಶದ ಮುಖ್ಯಮಂತ್ರಿ, ಸಚಿವರು ಎಲ್ಲರೂ ವಾಕ್ಸಮರ ಆರಂಭಿಸಿದ್ದರು. ಯೋಗಿ ಆದಿತ್ಯನಾಥ್ ಆಡಳಿತದಲ್ಲಿ ಸರ್ಕಾರಿ ಶಾಲೆಗಳು ಮತ್ತು ಅರವಿಂದ್ ಕೇಜ್ರಿವಾಲ್ ಆಡಳಿತದಲ್ಲಿ ಸರ್ಕಾರಿ ಶಾಲೆಗಳ ಹೋಲಿಕೆ ಎಂಬ ಚರ್ಚೆ ಆರಂಭವಾಗಿತ್ತು.
ಉತ್ತರ ಪ್ರದೇಶದ ಸಚಿವರ ಸವಾಲು ಸ್ವೀಕರಿಸಿದ್ದೇನೆ ಎಂದು ಡಿಸೆಂಬರ್ 16 ರಂದು ತಿಳಿಸಿದ್ದ ಸಿಸೋಡಿಯಾ ಇಂದು ಲಕ್ನೋಗೆ ತೆರಳಿದ್ದರು. ಕೇಜ್ರಿವಾಲ್ ಆಡಳಿತ ಮತ್ತು ಯೋಗಿ ಆಡಳಿತ ಮಾದರಿ ಕುರಿತು ಮುಕ್ತ ಚರ್ಚೆಗಾಗಿ ಮನೀಶ್ ಸಿಸೋಡಿಯಾ ಬಂದಿದ್ದರು. ಆದರೆ ಯೋಗಿ ಆದಿತ್ಯನಾಥ್ ಸರ್ಕಾರದ ಯಾವುದೇ ಸಚಿವರು ಚರ್ಚೆಗೆ ಹಾಜರಾಗಿಲ್ಲ.
मै आपकी चुनौती को स्वीकार करते हुए केजरीवाल मॉडल बनाम योगी मॉडल पर बहस करने लखनऊ आया था @SidharthNSingh जी लेकिन आप तो बहस से पीछे हट गए.
अब मै UP के शिक्षामंत्री @drdwivedisatish जी के निमंत्रण पर लखनऊ का ही एक स्कूल देखने जा रहा हूँ. pic.twitter.com/6tNxWlpPWO— Manish Sisodia (@msisodia) December 22, 2020
“ನಾನು ನಿಮ್ಮ ಸವಾಲನ್ನು ಸ್ವೀಕರಿಸಿ ಲಕ್ನೋಗೆ ಕೇಜ್ರಿವಾಲ್ ಮಾದರಿ ಮತ್ತು ಯೋಗಿ ಮಾದರಿಯನ್ನು ಚರ್ಚಿಸಲು ಬಂದೆ. ಆದರೆ ನೀವು ಚರ್ಚೆಯಿಂದ ಹಿಂದೆ ಸರಿದಿದ್ದೀರಿ. ಈಗ ನಾನು ಯುಪಿಯ ಶಿಕ್ಷಣ ಸಚಿವ ಸತೀಶ್ ದ್ವಿವೇದಿ ಅವರ ಆಹ್ವಾನದ ಮೇರೆಗೆ ಲಕ್ನೋ ಶಾಲೆಯನ್ನು ನೋಡಲು ಹೋಗುತ್ತಿದ್ದೇನೆ” ಎಂದು ಸಿಸೋಡಿಯಾ ಟ್ವೀಟ್ ಮಾಡಿದ್ದರು.
ಉತ್ತರ ಪ್ರದೇಶ ಸರ್ಕಾರದಿಂದ ಯಾವ ಮಂತ್ರಿಯೂ ಚರ್ಚೆಗೆ ಬಾರದೆ, ಮನೀಶ್ ಸಿಸೋಡಿಯಾ ಅವರನ್ನು ಲಕ್ನೋದಲ್ಲಿನ ಸರ್ಕಾರಿ ಶಾಲೆಗಳನ್ನು ನೋಡಲು ಬಿಡದೆ ಯೋಗಿ ಸರ್ಕಾರ ಪೊಲೀಸರನ್ನು ನಿಯೋಜಿಸಿತ್ತು. ಇದನ್ನು ಮೀರಿ ಸಿಸೋಡಿಯಾ ಲಕ್ನೋ ಶಾಲೆಗಳನ್ನು ನೋಡಲು ಹೊರಟಿದ್ದರು.
ಇದನ್ನೂ ಓದಿ: ದೆಹಲಿ ಡಿಸಿಎಂ ಸಿಸೋಡಿಯಾ ಮನೆ ಮೇಲೆ ಬಿಜೆಪಿ ಗೂಂಡಾಗಳಿಂದ ಹಲ್ಲೆ: ಆಪ್ ಆರೋಪ
क्या आप मुझे लखनऊ के सरकारी स्कूल देखने जाने के आरोप में अरेस्ट करवा रहे हैं @myogiadityanath जी? @drdwivedisatish जी आपने तो मुझे invite किया था अपने स्कूल देखने के लिए! https://t.co/T0INs9S3VV pic.twitter.com/jNCryAofqD
— Manish Sisodia (@msisodia) December 22, 2020
ಜೊತೆಗೆ ಶಾಲೆಗಳನ್ನು ನೋಡಲು ಹೋದ ಆರೋಪದ ಮೇಲೆ ಜೈಲಿಗೆ ಹಾಕುವಿರಾ..?, ಸತೀಶ್ ದ್ವಿವೇದಿ ಅವರೇ ನೀವು ತಾನೇ ನನ್ನನ್ನು ಶಾಲೆ ನೊಡಲು ಆಹ್ವಾನ ನೀಡಿದ್ದು ಎಂದು ಸಿಸೋಡಿಯಾ ಟ್ವಿಟರ್ನಲ್ಲಿ ವ್ಯಂಗ್ಯವಾಡಿದ್ದಾರೆ.
ಈ ಬೆಳವಣಿಗಳ ಹಿನ್ನೆಲೆ ಸಾಮಾಜಿಕ ಜಾಲತಾಣಗಳಲ್ಲಿ #DarrGayaYogi ಎಂಬ ಹ್ಯಾಶ್ಟ್ಯಾಗ್ ಟ್ರೆಂಡಿಂಗ್ನಲ್ಲಿದೆ. ವಿಧ ವಿಧವಾದ ಮಿಮ್ಸ್ಗಳು ಟ್ವಿಟರ್ನಲ್ಲಿ ಓಡಾಡುತ್ತಿವೆ.
That's the school in Lucknow, merely 8 Kms from his office, for which U.P. CM sent the Cops to stop @msisodia from visiting.
Well, looking at d condition, his fear seems right ?#DarrGayaYogi pic.twitter.com/l5aIJthSkX— Aarti (@aartic02) December 22, 2020
ಬಿಜೆಪಿ ನಾಯಕರ ಹಳೆಯ ವಿಡಿಯೋ ತುಣುಕುಗಳನ್ನು ಟ್ಯಾಗ್ ಮಾಡಿ, ಚರ್ಚೆಗೆ ಬಾರದ ಉತ್ತರ ಪ್ರದೇಶ ಸಚಿವರನ್ನು #DarrGayaYogi ಹ್ಯಾಶ್ಟ್ಯಾಗ್ ಬಳಸಿ ವ್ಯಂಗ್ಯವಾಡುತ್ತಿದ್ದಾರೆ.
Yogi Supporter's ??#DarrGayaYogi pic.twitter.com/PFIEc709p7
— FARMER??? (@imtaara) December 22, 2020
ಇದನ್ನೂ ಓದಿ: ಗೋದಿ ಮೀಡಿಯಾಗಳಿಗೆ ಸೆಡ್ಡು: ಸ್ವಂತ ಚಾನೆಲ್ ಆರಂಭಿಸಿದ ದೆಹಲಿಯ ಹೋರಾಟನಿರತ ರೈತರು!
How it started: How it's going:
Challenged ?? #SiddarthNathSingh @ArvindKejriwal Missing@msisodia@AamAadmiParty pic.twitter.com/4Q0VAujIjX— Anurag K S (@AnuragIsTheName) December 22, 2020
ಟ್ವಿಟರ್ ಬಳಕೆದಾರರೊಬ್ಬರು ಇಬ್ಬರು ಶಿಕ್ಷಣ ಮಂತ್ರಿಗಳ ಚಿತ್ರಗಳನ್ನು ಹಂಚಿಕೊಂಡು, ಇಬ್ಬರ ನಡುವಿನ ವ್ಯತ್ಯಾಸ ಎಲ್ಲವನ್ನೂ ಹೇಳುತ್ತಿದೆ ಎಂದಿದ್ದಾರೆ. ಚಿತ್ರದಲ್ಲಿ ಮನೀಶ್ ಸಿಸೋಡಿಯಾ ಮಕ್ಕಳಿಗೆ ಪಾಠ ಮಾಡುತ್ತಿದ್ದರೆ, ಯುಪಿ ಸಚಿವರು ಹಸುಗಳಿಗೆ ಹುಲ್ಲು ನೀಡುತ್ತಿದ್ದಾರೆ.
See the difference between 2 education minister. It reflects everything ? #DarrGayaYogi pic.twitter.com/KGUu26izP4
— ? The Villains Of Democracy ? (@TheVillianGangs) December 22, 2020
ಇದನ್ನೂ ಓದಿ: ರಾಮನಗರ ಅರವಿಂದ್ ಫ್ಯಾಶನ್ ಕಾರ್ಖಾನೆ ಲಾಕೌಟ್: 17ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ
LIVE Visuals from Education Model Debate ???????????#DarrGayaYogi pic.twitter.com/8WvI566PB6
— Post Truth? (@PostTruthIndia) December 22, 2020
ಚರ್ಚೆಗೆ ಬರಲು ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶದಲ್ಲಿ ಶಾಲೆಗಳನ್ನು ನಿರ್ಮಿಸಿಲ್ಲ. ಅವರು ನಿರ್ಮಿಸಿರುವುದು ಕೇವಲ ಅಸ್ಥಿ ಪಂಜರಗಳನ್ನು ಎಂದು ನೆಟ್ಟಿಗರು ಟೀಕಿಸಿದ್ದಾರೆ.
Schools have not been built by @myogiadityanath Govt. those all are SKULLS.@msisodia will show the strongest Education Model to people of Uttar Pradesh.#DarrGayaYogi #DarrGayaYogi pic.twitter.com/E3W2yKp2rd
— आप का सेवादार (@ketan_sarkar_) December 22, 2020
ಸರ್ಕಾರಿ ಶಾಲೆಗಳ ಅಭಿವೃದ್ಧಿ ಮತ್ತು ಆಡಳಿತದ ಮಾದರಿ ಎಂದು ಆಮ್ ಆದ್ಮಿ ಪಾರ್ಟಿ, #SelfieWithSarkaariSchool ಅಭಿಯಾನ ಆರಂಭಿಸಿತ್ತು. ಅಭಿಯಾನದ ಮೂಲಕ ಉತ್ತರ ಪ್ರದೇಶದ ಶಾಲೆಗಳ ಚಿತ್ರಣವನ್ನು ಬಯಲಿಗೆಳೆಯಲಾಗಿತ್ತು. ಉತ್ತರ ಪ್ರದೇಶದ ಪಾಳುಬಿದ್ದ ಶಾಲೆಗಳು, ದನದ ಕೊಟ್ಟಿಗೆಗಳಾಗಿ ಬದಲಾಗಿರುವ ಶಾಲೆಗಳು, ಸ್ವಚ್ಛತೆ ಮಾಯವಾಗಿರುವ, ಸುಣ್ಣ-ಬಣ್ಣ ಕಾಣದೇ ಅದೇಷ್ಟೋ ವರ್ಷಗಳಾಗಿರುವ ಶಾಲೆಗಳ ಚಿತ್ರಗಳನ್ನು ಈ ಅಭಿಯಾನದಲ್ಲಿ ಇನ್ನು ಹಂಚಿಕೊಳ್ಳಲಾಗುತ್ತಿದೆ.
ಇದನ್ನೂ ಓದಿ: ದೆಹಲಿ V/s ಉತ್ತರ ಪ್ರದೇಶ: ಸರ್ಕಾರಿ ಶಾಲೆಗಳ ವಾಸ್ತವತೆ ಬಿಚ್ಚಿಡಲು ಆಪ್ ಅಭಿಯಾನ