Homeಅಂತರಾಷ್ಟ್ರೀಯಜಾರ್ಜ್ ಫ್ಲಾಯ್ಡ್ ಹತ್ಯೆಯ ಪ್ರಧಾನ ಆರೋಪಿ ‘ಡೆರೆಕ್ ಚೌವಿನ್’‌ ವಿಚಾರಣೆ ಪ್ರಾರಂಭ

ಜಾರ್ಜ್ ಫ್ಲಾಯ್ಡ್ ಹತ್ಯೆಯ ಪ್ರಧಾನ ಆರೋಪಿ ‘ಡೆರೆಕ್ ಚೌವಿನ್’‌ ವಿಚಾರಣೆ ಪ್ರಾರಂಭ

- Advertisement -
- Advertisement -

ಅಮೆರಿಕದಲ್ಲಿ ಕಳೆದ ಮೇನಲ್ಲಿ ಆಫ್ರಿಕನ್-ಅಮೆರಿಕನ್ ವ್ಯಕ್ತಿ ಜಾರ್ಜ್ ಫ್ಲಾಯ್ಡ್‌ನನ್ನು ಹತ್ಯೆ ಮಾಡಿದ ಆರೋಪಿ ಮಿನ್ನಿಯಾಪೋಲಿಸ್‌ನ ಮಾಜಿ ಪೊಲೀಸ್ ಅಧಿಕಾರಿ ಡೆರೆಕ್ ಚೌವಿನ್‌ ವಿಚಾರಣೆ ಅಧಿಕೃತವಾಗಿ ಪ್ರಾರಂಭವಾಗಿದೆ ಎಂದು ಐಎಎನ್‌ಎಸ್ ವರದಿ ಮಾಡಿದೆ.

ಸೋಮವಾರದ ವಿಚಾರಣೆಯಲ್ಲಿ ಆರಂಭಿಕ ಹೇಳಿಕೆಗಳನ್ನು ಪಡೆಯಲಾಗಿದೆ. ಹತ್ಯೆಗೀಡಾದ ಫ್ಲಾಯ್ಡ್ ಕುಟುಂಬದ ಸದಸ್ಯರು ಮತ್ತು ಅವರ ಕಾನೂನು ತಂಡದ ತಂಡವು ಮಿನ್ನಿಯಾಪೋಲಿಸ್ ನ್ಯಾಯಾಲಯದ ಮುಂದೆ ಎಂಟು ನಿಮಿಷ 46 ಸೆಕೆಂಡುಗಳ ಕಾಲ ಹೇಳಿಕೆ ನೀಡಿತು.

ಇದನ್ನೂ ಓದಿ: ಟ್ರಂಪ್ ಸೋತರೂ, ಟ್ರಂಪ್‌ಯಿಸಂ ಉಳಿದಿದೆ: ಆದರೂ ಯುವ ಅಮೆರಿಕ ಭರವಸೆ ಮೂಡಿಸಿದೆ

ಆರೋಪಿ ಡೆರೆಕ್ ಚೌವಿನ್‌ ಜಾರ್ಜ್ ಫ್ಲಾಯ್ಡ್‌ ಅವರ ಕುತ್ತಿಗೆಗೆ ಮಂಡಿಯನ್ನುಟ್ಟು ಹತ್ಯೆ ಮಾಡಿದ್ದನು. ಘಟನೆ ನಡೆಯುತ್ತಿದ್ದಾಗ ಜಾರ್ಜ್ ಫ್ಲಾಯ್ಡ್‌ ನನಗೆ ಉಸಿರಾಡಲು ಸಾಧ್ಯವಾಗುತ್ತಿಲ್ಲ ಎಂದು ಮನವಿ ಮಾಡಿದ್ದರು. ಘಟನಾ ಸ್ಥಳದಲ್ಲಿ ಇದ್ದ ಸಾರ್ವಜನಿಕರು ಕೂಡಾ ಈ ಬಗ್ಗೆ ಅವರಿಗೆ ಹೇಳಿದ್ದರು. ಆದರೆ ಪೊಲೀಸ್ ಅಧಿಕಾರಿಯೂ ಇದನ್ನು ಗಣನೆಗೆ ತೆಗೆದುಕೊಂಡಿರಲಿಲ್ಲ.

“ಇದು ಜಾರ್ಜ್ ಫ್ಲಾಯ್ಡ್ ವಿಚಾರಣೆಯಲ್ಲ. ಇದು ಡೆರೆಕ್ ಚೌವಿನ್ ಅವರ ವಿಚಾರಣೆಯಾಗಿದೆ. ನಾವು ಅದರ ಬಗ್ಗೆ ಮಾತನಾಡುವಾಗಲೆಲ್ಲಾ ಅದನ್ನು ಉಲ್ಲೇಖಿಸಬೇಕು ಮತ್ತು ಮಾತನಾಡಬೇಕು” ಎಂದು ಅಟಾರ್ನಿ ಜಸ್ಟಿನ್ ಮಿಲ್ಲರ್ ಹೇಳಿದ್ದಾರೆ.

“ಇಂದು ಮಹತ್ವದ ವಿಚಾರಣೆ ಪ್ರಾರಂಭವಾಗುತ್ತಿದೆ. ಎಲ್ಲರಿಗೂ ಸಮಾನತೆ ಮತ್ತು ನ್ಯಾಯಕ್ಕಾಗಿ ಅಮೆರಿಕ ಎಷ್ಟು ದೂರ ಬಂದಿದೆ ಎಂಬುದರ ಬಗ್ಗೆ ಜನಾಭಿಪ್ರಾಯ ಸಂಗ್ರಹವಾಗಲಿದೆ” ಎಂದು ನಾಗರಿಕ ಹಕ್ಕುಗಳ ವಕೀಲ ಬೆನ್ ಕ್ರಂಪ್ ಸೋಮವಾರ ನ್ಯಾಯಾಲಯದ ಹೊರಗೆ ಹೇಳಿದ್ದಾರೆ.

ಇದನ್ನೂ ಓದಿ: ‘ಮೇಕ್ ಅಮೆರಿಕ ಗ್ರೇಟ್ ಅಗೈನ್’ v/s ‘ಬ್ಲ್ಯಾಕ್ಸ್ ಲೈವ್ಸ್ ಮ್ಯಾಟರ್’

“ಈ ಕೊಲೆ ಪ್ರಕರಣವು ವಾದಿಸಲು ಅಷ್ಟೇನೂ ಕಠಿಣವಲ್ಲ, ಜಾರ್ಜ್ ಫ್ಲಾಯ್ಡ್ ಅವರ ಚಿತ್ರಹಿಂಸೆ ವೀಡಿಯೊವನ್ನು ನೋಡಿದರೆ ಸಾಕು” ಎಂದು ಬೆನ್ ಕ್ರಂಪ್ ಹೇಳಿದ್ದಾರೆ.

ಮೇ 25, 2020 ರಂದು ಈ ಅಮಾನವೀಯ ನಡೆದಿದ್ದು, ಘಟನೆಯ ನಂತರ ಆರೋಪಿಯನ್ನು ಪೊಲೀಸ್ ಇಲಾಖೆಯಿಂದ ವಜಾ ಮಾಡಿತ್ತು. ಘಟನೆಯ ವೀಡಿಯೋ ವೈರಲ್ ಆಗಿದ್ದು ವಿಶ್ವದಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗಿ ‘ಬ್ಲಾಕ್‌ ಲೈವ್ಸ್ ಮ್ಯಾಟರ್‌’ ಚಳವಳಿ ಪ್ರಾರಂಭವಾಗಿತ್ತು.

ಘಟನಾ ಸ್ಥಳದಲ್ಲಿದ್ದ ಇತರ ಮೂವರು ಮಾಜಿ ಅಧಿಕಾರಿಗಳಾದ ಜೆ. ಅಲೆಕ್ಸಾಂಡರ್ ಕುಯೆಂಗ್, ಥಾಮಸ್ ಲೇನ್ ಮತ್ತು ಟೌ ಥಾವೊ ಕೂಡ ಹತ್ಯೆಗೆ ಸಹಾಯ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಅವರ ವಿಚಾರಣೆ ಆಗಸ್ಟ್‌ನಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ: ವರ್ಣಬೇಧ ನೀತಿಯ ಬಲಿಪಶು ಜಾರ್ಜ್ ಫ್ಲಾಯ್ಡ್ ಕುಟುಂಬಕ್ಕೆ 196 ಕೋಟಿ ರೂ. ಪರಿಹಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...