Homeಅಂಕಣಗಳುಚುನಾವಣಾ ಅಕ್ರಮ ತಡೆಯುವ ವಿಧಾನ ಸರಿಯಿದೆಯೇ?

ಚುನಾವಣಾ ಅಕ್ರಮ ತಡೆಯುವ ವಿಧಾನ ಸರಿಯಿದೆಯೇ?

- Advertisement -
- Advertisement -

ಚುನಾವಣಾ ಆಯೋಗ ಪೋಲೀಸ್ ಇಲಾಖೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಲ್ಲವೂ ಚುನಾವಣಾ ಭ್ರಷ್ಟಾಚಾರ ತಡೆಯುವುದರಲ್ಲಿ ಸೋತಿವೆ. ಇಲ್ಲವೇ ಚುನಾವಣೆಗೆ ನಿಲ್ಲುವ ಅಭ್ಯರ್ಥಿಗಳಿಗೆ ಸಹಾಯಕವಾಗಿವೆ ಎಂದು ಖಚಿತವಾಗಿ ಹೇಳಬಹುದು.

ನಾನು ನನ್ನ ಅನುಭವದಿಂದ ಈ ಗುರುತರ ಆಪಾದನೆಯನ್ನು ಮಾಡುತ್ತಿದ್ದೇನೆ. ದಿವಂಗತ ಪ್ರಭಾಕರ ರೆಡ್ಡಿ ಮತ್ತು ನಾನು ಕೂಡಿಕೊಂಡು ಕರ್ನಾಟಕ ಭ್ರಷ್ಟಾಚಾರ ನಿರ್ಮೂಲನಾ ಸಮಿತಿ ರಚಿಸಿದ್ದೆವು. ನಾವು ಒಮ್ಮೆ ರಾಜ್ಯದ ಚುನಾವಣಾ ಆಯೋಗದ ಕಚೇರಿ ಮುಂದೆ ಧರಣಿ ನಡೆಸಿದೆವು. ಆ ನಂತರ ಒಂದು ಡಿಮ್ಯಾಂಡ್ ಅವರ ಮುಂದಿಟ್ಟೆವು. ಡಿಮ್ಯಾಂಡ್ ಇದು – ನೀವು ಚುನಾವಣೆ ಸಮಯದಲ್ಲಿ ಇಷ್ಟು ಬ್ಯಾರಲ್ ಮದ್ಯ ಹಿಡಿದೆವು, ಇಷ್ಟು ಕೋಟಿ ಸಾಗಿಸುತ್ತಿದ್ದ ಹಣ ಜಪ್ತಿ ಮಾಡಿದೆವು, ಸೀರೆ-ಪಂಚೆ ಸಾವಿರ ಗಟ್ಟಲೆ ಹಿಡಿದೆವು, ಚಿನ್ನ-ಬೆಳ್ಳಿ ಸಾಮಾನು ಹಿಡಿದೆವು ಎಂದು ಚುನಾವಣೆ ಮುಗಿಯುವವರೆಗೆ ಪತ್ರಿಕೆಗೆ ವರದಿ ಮಾಡುತ್ತೀರಿ. ಆದರೆ ಮುಂದೆ ಹಿಡಿದ ಹಣ, ಮದ್ಯ, ಜವಳಿ, ಚಿನ್ನ-ಬೆಳ್ಳಿ ಸಾಮಾನುಗಳು ಏನಾದವು? ಎಲ್ಲಿ ಹೋದವು, ಹಿಡಿದವರನ್ನು ನ್ಯಾಯಾಲಯದ ಮುಂದೆ ನಿಲ್ಲಿಸಿದಿರಾ? ನೀವು ಹಿಡಿದವರಲ್ಲಿ ಎಷ್ಟು ಜನಕ್ಕೆ ಏನು ಶಿಕ್ಷೆಯಾಗಿದೆ? ಯಾವುದನ್ನೂ ನೀವು ಪ್ರಕಟಿಸುವುದಿಲ್ಲ. ಹಿಡಿದ ಎಲ್ಲ ಹಣ, ಮದ್ಯ ಇತರ ಸಾಮಗ್ರಿಗಳು ನಿಮ್ಮ ಮನೆಗಳಲ್ಲಿದೆಯೇ? ಖಜಾನೆಯಲ್ಲಿದೆಯೇ? ನ್ಯಾಯಾಲಯದ ವಶದಲ್ಲಿದೆಯೇ? ಪೋಲೀಸ್ ಠಾಣೆಗಳಲ್ಲಿದೆಯೇ? ಒಂದೂ ಗೊತ್ತಾಗುವುದಿಲ್ಲ. ಆದ್ದರಿಂದ ಪ್ರತಿ ಒಂದು ಸಾರಿ ಸಾರ್ವತ್ರಿಕ ಚುನಾವಣೆಗಳು ನಡೆದಾಗಲೂ ಈ ಕುರಿತು ಒಂದು ಶ್ವೇತ ಪತ್ರ ಹೊರಡಿಸಿ ಎಂದು ಪಟ್ಟು ಹಿಡಿದೆವು.

ಚುನಾವಣಾ ಕಚೇರಿಯವರು ಚುನಾವಣಾ ಸಂದರ್ಭದಲ್ಲಿ ಹಿಡಿಯಲಾದ ಎಲ್ಲವನ್ನೂ ನಾವು ಪೋಲೀಸರ ವಶಕ್ಕೆ ಕೊಡುತ್ತೇವೆ. ಅವರೇ ಕೇಸುಗಳನ್ನು ಹಾಕುತ್ತಾರೆ. ನಾನು ಎಲ್ಲಾ ಎಸ್‌ಪಿಗಳಿಗೆ ಪತ್ರ ಬರೆದು ನಿಮಗೆ ನೀವು ಕೇಳಿರುವ ಎಲ್ಲಾ ವಿವರಗಳನ್ನು ಕೊಡಲು ತಿಳಿಸುತ್ತೇನೆ ಎಂದು ಹೇಳಿ ಜವಾಬ್ದಾರಿಯಿಂದ ಜಾರಿಕೊಂಡರು. ನಾಲ್ಕಾರು ತಿಂಗಳ ಮೇಲೆ ನಮಗೆ ಎರಡು ಜಿಲ್ಲೆಗಳ ಎಸ್‌ಪಿಗಳಿಂದ ‘ನಮ್ಮ ಜಿಲ್ಲೆಯಲ್ಲಿ ಇಂತಹ ಪ್ರಸಂಗಗಳು ನಡೆದೇ ಇಲ್ಲ’ ಎಂಬ ಉತ್ತರ ಬಂದಿತ್ತು. ಉಳಿದ ಜಿಲ್ಲೆಗಳ ಯಾವ ಎಸ್‌ಪಿಯೂ ಉತ್ತರ ನೀಡುವ ಗೋಜಿಗೆ ಹೋಗಲಿಲ್ಲ. ಪೋಲೀಸ್ ವರಿಷ್ಠರ ಕಚೇರಿಗೆ ಹೋಗಿ ಅವರಿಗೆ ಎಸ್‌ಪಿಗಳ ಬೇಜವಬ್ದಾರಿಯುತ ಮೌನದ ಬಗೆಗೆ ತಿಳಿಸಿದೆವು.

ಮಾತುಕತೆಯೆಲ್ಲ ಆದಮೇಲೆ ಅವರು ತಿಳಿಸಿದ್ದು ಹೀಗೆ;- ‘ಚುನಾವಣೆಯ ಸಂದರ್ಭದಲ್ಲಿ ವಶಪಡಿಸಿಕೊಳ್ಳುವ ಎಲ್ಲಾ ಹಣವನ್ನು ಖಜಾನೆಗೆ ಕಟ್ಟಲಾಗುತ್ತದೆ, ಮದ್ಯವನ್ನು ನಾಶ ಮಾಡಲಾಗುತ್ತದೆ. ಆದರೆ ಇತರ ವಸ್ತುಗಳ ಬಗೆಗೆ ನಮಗೆ ಮಾಹಿತಿ ಇಲ್ಲ’ ಎಂದರು. ಜಪ್ತಿಯಾದ ಉಳಿಕೆ ಸಾಮಾನುಗಳು ಏನಾದವು? ಅದನ್ನು ಹೊಂದಿದ್ದವರ ಮೇಲೆ ಖಟ್ಲೆ ಹೂಡಲಾಯಿತೆ? ಅವರಿಗೆ ಶಿಕ್ಷೆ ಆಯಿತೆ? ಅವರು ಯಾವ ಅಭ್ಯರ್ಥಿಗಾಗಿ ಹಣ ತೆಗೆದುಕೊಂಡು ಹೋಗುತ್ತಿದ್ದರು? ಅಭ್ಯರ್ಥಿಯನ್ನು ನ್ಯಾಯಾಲಯದ ಮುಂದೆ ನಿಲ್ಲಿಸಲಾಯಿತೆ? ಅವರಿಗಾದ ಶಿಕ್ಷೆ ಏನು? ಇದರ ಮಾಹಿತಿಯನ್ನು ಯಾರೂ ಒದಗಿಸಲಿಲ್ಲ.

ಅಂದರೆ ಚುನಾವಣೆಯ ಸಂದರ್ಭದಲ್ಲಿ ಯಾವತ್ತೂ ನಡೆಯುವ ಪ್ರಹಸನ ಇದು. ಚುನಾವಣಾ ಆಯೋಗ ಚುನಾವಣೆಯ ಸಂದರ್ಭದಲ್ಲಿ ನಡೆಯುವ ದುರ್ವ್ಯವಹಾರಗಳನ್ನು ತಡೆಗಟ್ಟುವ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತದೆ ಎಂಬುದಕ್ಕೆ ಇದಕ್ಕಿಂತ ಉತ್ತಮ ನಿದರ್ಶನ ಬೇಕೆ? ಚುನಾವಣಾ ಆಯೋಗಕ್ಕೆ, ಪೋಲಿಸರಿಗೆ, ಚುನಾವಣಾಧಿಕಾರಿಗಳಿಗೆ ನಿಜವಾಗಿ ಚುನಾವಣೆಯನ್ನು ಪರಿಶುದ್ಧಗೊಳಿಸಬೇಕೆಂಬ ಕಾತರವಿದ್ದಿದ್ದರೆ ಅವರು ಇಷ್ಟು ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿರಲಿಲ್ಲ. ಚುನಾವಣೆಯನ್ನು ಸುಧಾರಿಸಬೇಕೆಂಬ ಉತ್ಕಟೇಚ್ಛೆ ಇವರಿಗೆಲ್ಲ ಇದ್ದಿದ್ದರೆ ಈ ಎಲ್ಲಾ ಬಗೆಯ ಭ್ರಷ್ಟಾಚಾರವನ್ನು ತಡೆಗಟ್ಟಲು ಅವರು ಆದ್ಯತೆ ನೀಡುತ್ತಿದ್ದರು. ಅವರೆಲ್ಲ ಕಾಟಾಚಾರಕ್ಕೆ, ಜನರ ಕಣ್ಣಿಗೆ ಮಣ್ಣೆರಚುವುದಕ್ಕೆ ಕಾಟಾಚಾರದ ತಪಾಸಣೆ ಮಾಡುತ್ತಾರೆ. ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗದ ಹಾಗೂ ಪೋಲೀಸರ ಬೇಜವಾಬ್ದಾರಿತನ ಒಂದು ವರವಾಗಿ ಪರಿಣಮಿಸಿದೆ.

ನಾನು ಈ ಬಗೆಗೆ ಚುನಾವಣಾ ಆಯೋಗಕ್ಕೆ, ಒಂದು ಪತ್ರ ಬರೆದಿದ್ದೆ. ಅವರು ಆ ಪತ್ರಕ್ಕೆ ಉತ್ತರ ನೀಡುವ ಸೌಜನ್ಯವನ್ನು ತೋರಲಿಲ್ಲ.

ಚುನಾವಣಾ ಪದ್ದತಿಯಲ್ಲಿ ರೂಢಮೂಲ ಬದಲಾವಣೆಗಳನ್ನು ತರಬೇಕೆಂದು ನ್ಯಾ.ತಾರ್ಕುಂಡೆಯವರು ಮೊದಲುಗೊಂಡು ನೂರಾರು ಮಂದಿ ಸಲಹೆಗಳನ್ನು ನೀಡಿದ್ದಾರೆ. ಚುನಾವಣೆಯಲ್ಲಿ ಸುಧಾರಣೆ ಚುನಾವಣಾ ಆಯೋಗಕ್ಕೂ ಬೇಕಾಗಿಲ್ಲ, ಸರ್ಕಾರಕ್ಕೂ ಬೇಕಾಗಿಲ್ಲ. ಪಾರ್ಲಿಮೆಂಟ್ ಸದಸ್ಯರಿಗೆ ಈ ಸುಧಾರಣೆ ಆದರೆ ತಮಗೆ ಅಸ್ತಿತ್ವವಿಲ್ಲದೆ ಹೋಗುವುದೆಂಬ ಭಯವಿರುವುದರಿಂದ ಅವರು ಮೌನವನ್ನವಲಂಬಿಸುತ್ತಾರೆ.

ಶೇಷನ್ ಚುನಾವಣಾ ಆಯೋಗದ ಅಧ್ಯಕ್ಷರಾಗಿದ್ದಾಗ ಈಗ ಇರುವ ಕಾಯ್ದೆಗಳನ್ನೇ ಬಳಸಿಕೊಂಡು ಚುನಾವಣೆಯ ಅನೇಕ ಅಕ್ರಮಗಳನ್ನು ತಡೆದರು. ಪಾರ್ಲಿಮೆಂಟ್ ಸದಸ್ಯರಿಗೆ ಸರ್ಕಾರಗಳಿಗೆ ನಡುಕ ಹುಟ್ಟಿಸಿದ್ದರು. ಶೇಷನ್‌ರವರಾದ ಮೇಲೆ ಅಧಿಕಾರಕ್ಕೆ ಬಂದ ಯಾವ ಚುನಾವಣಾ ಆಯೋಗದ ಸದಸ್ಯರಿಗೂ ಶೇಷನ್‌ರವರ ಗಟ್ಸ್ ಇಲ್ಲವಾದ್ದರಿಂದ ಬದಲಾಗಿದ್ದ ಚುನಾವಣಾ ಪದ್ಧತಿ, ರಿವರ್ಸ್ಗೇರ್ ಹೊಡೆಯಿತು. ಅಪ್ಪ ಹಾಕಿದ ಆಲದಮರಕ್ಕೇ ನೇಣು ಹಾಕಿಕೊಳ್ಳುತ್ತಿದ್ದಾರೆ, ಶೇಷನ್ ನಂತರ ಬಂದ ಚುನಾವಣಾ ಆಯೋಗದ ಸದಸ್ಯರು.

ಸರ್ಕಾರ ನಡೆಸುವವರು ಯಾವ ಪಕ್ಷದವರಾದರೂ ಸರಿಯೇ ಚುನಾವಣೆಗೆ ಸ್ವಲ್ಪ ಮೊದಲು ತಮ್ಮ ಮಾತನ್ನು ಕೇಳುವ ಎಸ್‌ಪಿಗಳನ್ನು, ಜಿಲ್ಲಾಧಿಕಾರಿಗಳನ್ನು ತಮಗೆ ಬೇಕಾದ ಜಿಲ್ಲೆಗೆ ವರ್ಗಾಯಿಸುತ್ತಾರೆ. ಮುಖ್ಯವಾಗಿ ಎಸ್‌ಪಿಯ ಜವಾಬ್ದಾರಿ ಅವರ ಅಧೀನದ ಎಲ್ಲಾ ಠಾಣೆಗಳಿಗೂ ಫರ್ಮಾನು ನೀಡುವುದು. ಇಷ್ಟನೇ ನಂಬರ್ ಕಾರು ಅಥವಾ ಟ್ಯಾಕ್ಸಿ ನಮ್ಮ ಜಿಲ್ಲೆಗೆ ಬಂದರೆ ಅದರ ತಂಟೆಗೆ ಹೋಗಬಾರದು. ಚುನಾವಣೆ ಸಮಯದಲ್ಲಿ ಅವರು ಹಣ ತರಲಿ, ಏನೇ ತರಲಿ ಅದರ ತನಿಖೆ ಮಾಡಬಾರದು.

ಟ್ಯಾಕ್ಸಿಯಲ್ಲಿ ಮೈಸೂರಿಗೆ ಹೋಗುವಾಗ ಆ ಟ್ಯಾಕ್ಸಿ ಡ್ರೈವರ್ ತನ್ನ ಘನಂದಾರಿ ಕೆಲಸ ಕುರಿತು ನನಗೆ ಹೇಳಿದ ನನ್ನ ಹತ್ತಿರ ಹಣ ಕೊಟ್ಟು ಕಳಿಸುತ್ತಾರೆ. ಚುನಾವಣೆ ಸಂದರ್ಭದಲ್ಲಿ ಎಲ್ಲೂ ನನ್ನನ್ನು ತಡೆದು ಕಾರು ತಪಾಸಣೆ ಮಾಡುವ ಕೆಲಸ ನಡೆಯುವುದಿಲ್ಲ. ಅಲ್ಲಿಗೆ ಚುನಾವಣೆಗೆ ಸ್ವಲ್ಪ ಮೊದಲು ವರ್ಗಾವಣೆಯಾಗಿರುವಾಗ ಎಸ್‌ಪಿ ಎಲ್ಲಾ ಠಾಣೆಗಳಿಗೂ ನನ್ನ ಟ್ಯಾಕ್ಸಿ ಹಿಡಿಯದಂತೆ ತಾಕೀತು ಮಾಡಿರುತ್ತಾರೆ. ನಾನು ಆ ಸಂದರ್ಭದಲ್ಲಿ ನಾಲ್ಕಾರು ಸಲ ಜಿಲ್ಲಾ ಕೇಂದ್ರಗಳಿಗೆ ಹಣ ತೆಗೆದುಕೊಂಡು ಹೋಗಿ ತಲುಪಿಸಬೇಕಾಗುತ್ತದೆ ಎಂದು ಹೆಮ್ಮೆಯಿಂದ ಹೇಳಿದೆ.

ಈ ಲೇಖನ ಬರೆದ ಉದ್ದೇಶ ಇಷ್ಟೇ;- ಪ್ರತಿ ಒಂದು ಸಾರ್ವತ್ರಿಕ ಚುನಾವಣೆ ನಡೆದ ಒಂದು ವರ್ಷದ ಒಳಗೆ ಚುನಾವಣಾ ಆಯೋಗ ಒಂದು ಶ್ವೇತ ಪತ್ರ ಹೊರಡಿಸಿ ಅದನ್ನು ವ್ಯಾಪಕವಾಗಿ ಪ್ರಚಾರ ಮಾಡಬೇಕು. ಆ ಶ್ವೇತ ಪತ್ರದಲ್ಲಿ ಆ ವರ್ಷ ನಡೆದ ಚುನಾವಣೆ ಸಂದರ್ಭದಲ್ಲಿ ಆಗಿರುವ ಹಣಕಾಸಿನ ಇತರೆ ಸಾಮಗ್ರಿಗಳ ಸಾಗಾಣಿಕೆಯ ದಂಧೆಯಲ್ಲಿ ಸಿಕ್ಕಿಬಿದ್ದವರು ಯಾರು? ಯಾವ ಅಭ್ಯರ್ಥಿಗಾಗಿ ಆ ಹಣ ಸಾಗಾಣಿಕೆಯಾಯಿತು. ಅವರಿಗೆ ಶಿಕ್ಷೆ ಆಯಿತೇ ಮುಂತಾದ ವಿವರಗಳನ್ನು ಪ್ರಕಟಿಸಬೇಕು. ಮತದಾರರಿಗೆ ಇದು ಗೊತ್ತಾದರೆ ಅವರು ಜಾಗೃತರಾಗುತ್ತಾರೆ. ಚುನಾವಣೆಗೆ ನಿಲ್ಲುವ ಕ್ರಿಮಿನಲ್‌ಗಳ ಸಂಖ್ಯೆ ಇಳಿಮುಖವಾಗುತ್ತದೆ. ಚುನಾವಣಾ ಆಯೋಗ ಇದರ ಜೊತೆ ಜೊತೆಗೇ ಚುನಾವಣಾ ಪದ್ಧತಿಯಲ್ಲಿ ರೂಢಮೂಲ ಬದಲಾವಣೆ ಮಾಡಿದರೆ ಪ್ರಜಾಪ್ರಭುತ್ವ ಬಲಗೊಳ್ಳುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...