Homeಅಂಕಣಗಳುಚುನಾವಣಾ ಅಕ್ರಮ ತಡೆಯುವ ವಿಧಾನ ಸರಿಯಿದೆಯೇ?

ಚುನಾವಣಾ ಅಕ್ರಮ ತಡೆಯುವ ವಿಧಾನ ಸರಿಯಿದೆಯೇ?

- Advertisement -
- Advertisement -

ಚುನಾವಣಾ ಆಯೋಗ ಪೋಲೀಸ್ ಇಲಾಖೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಲ್ಲವೂ ಚುನಾವಣಾ ಭ್ರಷ್ಟಾಚಾರ ತಡೆಯುವುದರಲ್ಲಿ ಸೋತಿವೆ. ಇಲ್ಲವೇ ಚುನಾವಣೆಗೆ ನಿಲ್ಲುವ ಅಭ್ಯರ್ಥಿಗಳಿಗೆ ಸಹಾಯಕವಾಗಿವೆ ಎಂದು ಖಚಿತವಾಗಿ ಹೇಳಬಹುದು.

ನಾನು ನನ್ನ ಅನುಭವದಿಂದ ಈ ಗುರುತರ ಆಪಾದನೆಯನ್ನು ಮಾಡುತ್ತಿದ್ದೇನೆ. ದಿವಂಗತ ಪ್ರಭಾಕರ ರೆಡ್ಡಿ ಮತ್ತು ನಾನು ಕೂಡಿಕೊಂಡು ಕರ್ನಾಟಕ ಭ್ರಷ್ಟಾಚಾರ ನಿರ್ಮೂಲನಾ ಸಮಿತಿ ರಚಿಸಿದ್ದೆವು. ನಾವು ಒಮ್ಮೆ ರಾಜ್ಯದ ಚುನಾವಣಾ ಆಯೋಗದ ಕಚೇರಿ ಮುಂದೆ ಧರಣಿ ನಡೆಸಿದೆವು. ಆ ನಂತರ ಒಂದು ಡಿಮ್ಯಾಂಡ್ ಅವರ ಮುಂದಿಟ್ಟೆವು. ಡಿಮ್ಯಾಂಡ್ ಇದು – ನೀವು ಚುನಾವಣೆ ಸಮಯದಲ್ಲಿ ಇಷ್ಟು ಬ್ಯಾರಲ್ ಮದ್ಯ ಹಿಡಿದೆವು, ಇಷ್ಟು ಕೋಟಿ ಸಾಗಿಸುತ್ತಿದ್ದ ಹಣ ಜಪ್ತಿ ಮಾಡಿದೆವು, ಸೀರೆ-ಪಂಚೆ ಸಾವಿರ ಗಟ್ಟಲೆ ಹಿಡಿದೆವು, ಚಿನ್ನ-ಬೆಳ್ಳಿ ಸಾಮಾನು ಹಿಡಿದೆವು ಎಂದು ಚುನಾವಣೆ ಮುಗಿಯುವವರೆಗೆ ಪತ್ರಿಕೆಗೆ ವರದಿ ಮಾಡುತ್ತೀರಿ. ಆದರೆ ಮುಂದೆ ಹಿಡಿದ ಹಣ, ಮದ್ಯ, ಜವಳಿ, ಚಿನ್ನ-ಬೆಳ್ಳಿ ಸಾಮಾನುಗಳು ಏನಾದವು? ಎಲ್ಲಿ ಹೋದವು, ಹಿಡಿದವರನ್ನು ನ್ಯಾಯಾಲಯದ ಮುಂದೆ ನಿಲ್ಲಿಸಿದಿರಾ? ನೀವು ಹಿಡಿದವರಲ್ಲಿ ಎಷ್ಟು ಜನಕ್ಕೆ ಏನು ಶಿಕ್ಷೆಯಾಗಿದೆ? ಯಾವುದನ್ನೂ ನೀವು ಪ್ರಕಟಿಸುವುದಿಲ್ಲ. ಹಿಡಿದ ಎಲ್ಲ ಹಣ, ಮದ್ಯ ಇತರ ಸಾಮಗ್ರಿಗಳು ನಿಮ್ಮ ಮನೆಗಳಲ್ಲಿದೆಯೇ? ಖಜಾನೆಯಲ್ಲಿದೆಯೇ? ನ್ಯಾಯಾಲಯದ ವಶದಲ್ಲಿದೆಯೇ? ಪೋಲೀಸ್ ಠಾಣೆಗಳಲ್ಲಿದೆಯೇ? ಒಂದೂ ಗೊತ್ತಾಗುವುದಿಲ್ಲ. ಆದ್ದರಿಂದ ಪ್ರತಿ ಒಂದು ಸಾರಿ ಸಾರ್ವತ್ರಿಕ ಚುನಾವಣೆಗಳು ನಡೆದಾಗಲೂ ಈ ಕುರಿತು ಒಂದು ಶ್ವೇತ ಪತ್ರ ಹೊರಡಿಸಿ ಎಂದು ಪಟ್ಟು ಹಿಡಿದೆವು.

ಚುನಾವಣಾ ಕಚೇರಿಯವರು ಚುನಾವಣಾ ಸಂದರ್ಭದಲ್ಲಿ ಹಿಡಿಯಲಾದ ಎಲ್ಲವನ್ನೂ ನಾವು ಪೋಲೀಸರ ವಶಕ್ಕೆ ಕೊಡುತ್ತೇವೆ. ಅವರೇ ಕೇಸುಗಳನ್ನು ಹಾಕುತ್ತಾರೆ. ನಾನು ಎಲ್ಲಾ ಎಸ್‌ಪಿಗಳಿಗೆ ಪತ್ರ ಬರೆದು ನಿಮಗೆ ನೀವು ಕೇಳಿರುವ ಎಲ್ಲಾ ವಿವರಗಳನ್ನು ಕೊಡಲು ತಿಳಿಸುತ್ತೇನೆ ಎಂದು ಹೇಳಿ ಜವಾಬ್ದಾರಿಯಿಂದ ಜಾರಿಕೊಂಡರು. ನಾಲ್ಕಾರು ತಿಂಗಳ ಮೇಲೆ ನಮಗೆ ಎರಡು ಜಿಲ್ಲೆಗಳ ಎಸ್‌ಪಿಗಳಿಂದ ‘ನಮ್ಮ ಜಿಲ್ಲೆಯಲ್ಲಿ ಇಂತಹ ಪ್ರಸಂಗಗಳು ನಡೆದೇ ಇಲ್ಲ’ ಎಂಬ ಉತ್ತರ ಬಂದಿತ್ತು. ಉಳಿದ ಜಿಲ್ಲೆಗಳ ಯಾವ ಎಸ್‌ಪಿಯೂ ಉತ್ತರ ನೀಡುವ ಗೋಜಿಗೆ ಹೋಗಲಿಲ್ಲ. ಪೋಲೀಸ್ ವರಿಷ್ಠರ ಕಚೇರಿಗೆ ಹೋಗಿ ಅವರಿಗೆ ಎಸ್‌ಪಿಗಳ ಬೇಜವಬ್ದಾರಿಯುತ ಮೌನದ ಬಗೆಗೆ ತಿಳಿಸಿದೆವು.

ಮಾತುಕತೆಯೆಲ್ಲ ಆದಮೇಲೆ ಅವರು ತಿಳಿಸಿದ್ದು ಹೀಗೆ;- ‘ಚುನಾವಣೆಯ ಸಂದರ್ಭದಲ್ಲಿ ವಶಪಡಿಸಿಕೊಳ್ಳುವ ಎಲ್ಲಾ ಹಣವನ್ನು ಖಜಾನೆಗೆ ಕಟ್ಟಲಾಗುತ್ತದೆ, ಮದ್ಯವನ್ನು ನಾಶ ಮಾಡಲಾಗುತ್ತದೆ. ಆದರೆ ಇತರ ವಸ್ತುಗಳ ಬಗೆಗೆ ನಮಗೆ ಮಾಹಿತಿ ಇಲ್ಲ’ ಎಂದರು. ಜಪ್ತಿಯಾದ ಉಳಿಕೆ ಸಾಮಾನುಗಳು ಏನಾದವು? ಅದನ್ನು ಹೊಂದಿದ್ದವರ ಮೇಲೆ ಖಟ್ಲೆ ಹೂಡಲಾಯಿತೆ? ಅವರಿಗೆ ಶಿಕ್ಷೆ ಆಯಿತೆ? ಅವರು ಯಾವ ಅಭ್ಯರ್ಥಿಗಾಗಿ ಹಣ ತೆಗೆದುಕೊಂಡು ಹೋಗುತ್ತಿದ್ದರು? ಅಭ್ಯರ್ಥಿಯನ್ನು ನ್ಯಾಯಾಲಯದ ಮುಂದೆ ನಿಲ್ಲಿಸಲಾಯಿತೆ? ಅವರಿಗಾದ ಶಿಕ್ಷೆ ಏನು? ಇದರ ಮಾಹಿತಿಯನ್ನು ಯಾರೂ ಒದಗಿಸಲಿಲ್ಲ.

ಅಂದರೆ ಚುನಾವಣೆಯ ಸಂದರ್ಭದಲ್ಲಿ ಯಾವತ್ತೂ ನಡೆಯುವ ಪ್ರಹಸನ ಇದು. ಚುನಾವಣಾ ಆಯೋಗ ಚುನಾವಣೆಯ ಸಂದರ್ಭದಲ್ಲಿ ನಡೆಯುವ ದುರ್ವ್ಯವಹಾರಗಳನ್ನು ತಡೆಗಟ್ಟುವ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತದೆ ಎಂಬುದಕ್ಕೆ ಇದಕ್ಕಿಂತ ಉತ್ತಮ ನಿದರ್ಶನ ಬೇಕೆ? ಚುನಾವಣಾ ಆಯೋಗಕ್ಕೆ, ಪೋಲಿಸರಿಗೆ, ಚುನಾವಣಾಧಿಕಾರಿಗಳಿಗೆ ನಿಜವಾಗಿ ಚುನಾವಣೆಯನ್ನು ಪರಿಶುದ್ಧಗೊಳಿಸಬೇಕೆಂಬ ಕಾತರವಿದ್ದಿದ್ದರೆ ಅವರು ಇಷ್ಟು ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿರಲಿಲ್ಲ. ಚುನಾವಣೆಯನ್ನು ಸುಧಾರಿಸಬೇಕೆಂಬ ಉತ್ಕಟೇಚ್ಛೆ ಇವರಿಗೆಲ್ಲ ಇದ್ದಿದ್ದರೆ ಈ ಎಲ್ಲಾ ಬಗೆಯ ಭ್ರಷ್ಟಾಚಾರವನ್ನು ತಡೆಗಟ್ಟಲು ಅವರು ಆದ್ಯತೆ ನೀಡುತ್ತಿದ್ದರು. ಅವರೆಲ್ಲ ಕಾಟಾಚಾರಕ್ಕೆ, ಜನರ ಕಣ್ಣಿಗೆ ಮಣ್ಣೆರಚುವುದಕ್ಕೆ ಕಾಟಾಚಾರದ ತಪಾಸಣೆ ಮಾಡುತ್ತಾರೆ. ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗದ ಹಾಗೂ ಪೋಲೀಸರ ಬೇಜವಾಬ್ದಾರಿತನ ಒಂದು ವರವಾಗಿ ಪರಿಣಮಿಸಿದೆ.

ನಾನು ಈ ಬಗೆಗೆ ಚುನಾವಣಾ ಆಯೋಗಕ್ಕೆ, ಒಂದು ಪತ್ರ ಬರೆದಿದ್ದೆ. ಅವರು ಆ ಪತ್ರಕ್ಕೆ ಉತ್ತರ ನೀಡುವ ಸೌಜನ್ಯವನ್ನು ತೋರಲಿಲ್ಲ.

ಚುನಾವಣಾ ಪದ್ದತಿಯಲ್ಲಿ ರೂಢಮೂಲ ಬದಲಾವಣೆಗಳನ್ನು ತರಬೇಕೆಂದು ನ್ಯಾ.ತಾರ್ಕುಂಡೆಯವರು ಮೊದಲುಗೊಂಡು ನೂರಾರು ಮಂದಿ ಸಲಹೆಗಳನ್ನು ನೀಡಿದ್ದಾರೆ. ಚುನಾವಣೆಯಲ್ಲಿ ಸುಧಾರಣೆ ಚುನಾವಣಾ ಆಯೋಗಕ್ಕೂ ಬೇಕಾಗಿಲ್ಲ, ಸರ್ಕಾರಕ್ಕೂ ಬೇಕಾಗಿಲ್ಲ. ಪಾರ್ಲಿಮೆಂಟ್ ಸದಸ್ಯರಿಗೆ ಈ ಸುಧಾರಣೆ ಆದರೆ ತಮಗೆ ಅಸ್ತಿತ್ವವಿಲ್ಲದೆ ಹೋಗುವುದೆಂಬ ಭಯವಿರುವುದರಿಂದ ಅವರು ಮೌನವನ್ನವಲಂಬಿಸುತ್ತಾರೆ.

ಶೇಷನ್ ಚುನಾವಣಾ ಆಯೋಗದ ಅಧ್ಯಕ್ಷರಾಗಿದ್ದಾಗ ಈಗ ಇರುವ ಕಾಯ್ದೆಗಳನ್ನೇ ಬಳಸಿಕೊಂಡು ಚುನಾವಣೆಯ ಅನೇಕ ಅಕ್ರಮಗಳನ್ನು ತಡೆದರು. ಪಾರ್ಲಿಮೆಂಟ್ ಸದಸ್ಯರಿಗೆ ಸರ್ಕಾರಗಳಿಗೆ ನಡುಕ ಹುಟ್ಟಿಸಿದ್ದರು. ಶೇಷನ್‌ರವರಾದ ಮೇಲೆ ಅಧಿಕಾರಕ್ಕೆ ಬಂದ ಯಾವ ಚುನಾವಣಾ ಆಯೋಗದ ಸದಸ್ಯರಿಗೂ ಶೇಷನ್‌ರವರ ಗಟ್ಸ್ ಇಲ್ಲವಾದ್ದರಿಂದ ಬದಲಾಗಿದ್ದ ಚುನಾವಣಾ ಪದ್ಧತಿ, ರಿವರ್ಸ್ಗೇರ್ ಹೊಡೆಯಿತು. ಅಪ್ಪ ಹಾಕಿದ ಆಲದಮರಕ್ಕೇ ನೇಣು ಹಾಕಿಕೊಳ್ಳುತ್ತಿದ್ದಾರೆ, ಶೇಷನ್ ನಂತರ ಬಂದ ಚುನಾವಣಾ ಆಯೋಗದ ಸದಸ್ಯರು.

ಸರ್ಕಾರ ನಡೆಸುವವರು ಯಾವ ಪಕ್ಷದವರಾದರೂ ಸರಿಯೇ ಚುನಾವಣೆಗೆ ಸ್ವಲ್ಪ ಮೊದಲು ತಮ್ಮ ಮಾತನ್ನು ಕೇಳುವ ಎಸ್‌ಪಿಗಳನ್ನು, ಜಿಲ್ಲಾಧಿಕಾರಿಗಳನ್ನು ತಮಗೆ ಬೇಕಾದ ಜಿಲ್ಲೆಗೆ ವರ್ಗಾಯಿಸುತ್ತಾರೆ. ಮುಖ್ಯವಾಗಿ ಎಸ್‌ಪಿಯ ಜವಾಬ್ದಾರಿ ಅವರ ಅಧೀನದ ಎಲ್ಲಾ ಠಾಣೆಗಳಿಗೂ ಫರ್ಮಾನು ನೀಡುವುದು. ಇಷ್ಟನೇ ನಂಬರ್ ಕಾರು ಅಥವಾ ಟ್ಯಾಕ್ಸಿ ನಮ್ಮ ಜಿಲ್ಲೆಗೆ ಬಂದರೆ ಅದರ ತಂಟೆಗೆ ಹೋಗಬಾರದು. ಚುನಾವಣೆ ಸಮಯದಲ್ಲಿ ಅವರು ಹಣ ತರಲಿ, ಏನೇ ತರಲಿ ಅದರ ತನಿಖೆ ಮಾಡಬಾರದು.

ಟ್ಯಾಕ್ಸಿಯಲ್ಲಿ ಮೈಸೂರಿಗೆ ಹೋಗುವಾಗ ಆ ಟ್ಯಾಕ್ಸಿ ಡ್ರೈವರ್ ತನ್ನ ಘನಂದಾರಿ ಕೆಲಸ ಕುರಿತು ನನಗೆ ಹೇಳಿದ ನನ್ನ ಹತ್ತಿರ ಹಣ ಕೊಟ್ಟು ಕಳಿಸುತ್ತಾರೆ. ಚುನಾವಣೆ ಸಂದರ್ಭದಲ್ಲಿ ಎಲ್ಲೂ ನನ್ನನ್ನು ತಡೆದು ಕಾರು ತಪಾಸಣೆ ಮಾಡುವ ಕೆಲಸ ನಡೆಯುವುದಿಲ್ಲ. ಅಲ್ಲಿಗೆ ಚುನಾವಣೆಗೆ ಸ್ವಲ್ಪ ಮೊದಲು ವರ್ಗಾವಣೆಯಾಗಿರುವಾಗ ಎಸ್‌ಪಿ ಎಲ್ಲಾ ಠಾಣೆಗಳಿಗೂ ನನ್ನ ಟ್ಯಾಕ್ಸಿ ಹಿಡಿಯದಂತೆ ತಾಕೀತು ಮಾಡಿರುತ್ತಾರೆ. ನಾನು ಆ ಸಂದರ್ಭದಲ್ಲಿ ನಾಲ್ಕಾರು ಸಲ ಜಿಲ್ಲಾ ಕೇಂದ್ರಗಳಿಗೆ ಹಣ ತೆಗೆದುಕೊಂಡು ಹೋಗಿ ತಲುಪಿಸಬೇಕಾಗುತ್ತದೆ ಎಂದು ಹೆಮ್ಮೆಯಿಂದ ಹೇಳಿದೆ.

ಈ ಲೇಖನ ಬರೆದ ಉದ್ದೇಶ ಇಷ್ಟೇ;- ಪ್ರತಿ ಒಂದು ಸಾರ್ವತ್ರಿಕ ಚುನಾವಣೆ ನಡೆದ ಒಂದು ವರ್ಷದ ಒಳಗೆ ಚುನಾವಣಾ ಆಯೋಗ ಒಂದು ಶ್ವೇತ ಪತ್ರ ಹೊರಡಿಸಿ ಅದನ್ನು ವ್ಯಾಪಕವಾಗಿ ಪ್ರಚಾರ ಮಾಡಬೇಕು. ಆ ಶ್ವೇತ ಪತ್ರದಲ್ಲಿ ಆ ವರ್ಷ ನಡೆದ ಚುನಾವಣೆ ಸಂದರ್ಭದಲ್ಲಿ ಆಗಿರುವ ಹಣಕಾಸಿನ ಇತರೆ ಸಾಮಗ್ರಿಗಳ ಸಾಗಾಣಿಕೆಯ ದಂಧೆಯಲ್ಲಿ ಸಿಕ್ಕಿಬಿದ್ದವರು ಯಾರು? ಯಾವ ಅಭ್ಯರ್ಥಿಗಾಗಿ ಆ ಹಣ ಸಾಗಾಣಿಕೆಯಾಯಿತು. ಅವರಿಗೆ ಶಿಕ್ಷೆ ಆಯಿತೇ ಮುಂತಾದ ವಿವರಗಳನ್ನು ಪ್ರಕಟಿಸಬೇಕು. ಮತದಾರರಿಗೆ ಇದು ಗೊತ್ತಾದರೆ ಅವರು ಜಾಗೃತರಾಗುತ್ತಾರೆ. ಚುನಾವಣೆಗೆ ನಿಲ್ಲುವ ಕ್ರಿಮಿನಲ್‌ಗಳ ಸಂಖ್ಯೆ ಇಳಿಮುಖವಾಗುತ್ತದೆ. ಚುನಾವಣಾ ಆಯೋಗ ಇದರ ಜೊತೆ ಜೊತೆಗೇ ಚುನಾವಣಾ ಪದ್ಧತಿಯಲ್ಲಿ ರೂಢಮೂಲ ಬದಲಾವಣೆ ಮಾಡಿದರೆ ಪ್ರಜಾಪ್ರಭುತ್ವ ಬಲಗೊಳ್ಳುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....