Homeನಿಜವೋ ಸುಳ್ಳೋ‘ಡುಪ್ಲಿಕೇಟ್ ಗಂಭೀರ್’ ಪ್ರಕರಣ: ಸತ್ಯವನ್ನು ಸುಳ್ಳಾಗಿಸಲು ಬಿಜೆಪಿ ಹರಸಾಹಸ

‘ಡುಪ್ಲಿಕೇಟ್ ಗಂಭೀರ್’ ಪ್ರಕರಣ: ಸತ್ಯವನ್ನು ಸುಳ್ಳಾಗಿಸಲು ಬಿಜೆಪಿ ಹರಸಾಹಸ

ಫೇಸ್‍ಬುಕ್ ಬಿಜೆಪಿ ಪರ ಬ್ಯಾಟಿಂಗ್ ಮಾಡುತ್ತಿದೆಯ

- Advertisement -
- Advertisement -

| ನಾನುಗೌರಿ ಡೆಸ್ಕ್ |

ದೆಹಲಿ ಪೂರ್ವ ಕ್ಷೇತ್ರದಿಂದ ಕಣಕ್ಕಿಳಿದಿರುವ ಬಿಜೆಪಿಯ ಗೌತಮ್ ಗಂಭೀರ್ ಸಾಕಷ್ಟು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ತೀರಾ ಹೊಸ ವಿವಾದವೆಂದರೆ ಅವರ ಡುಪ್ಲಿಕೇಟ್ ಗಂಭೀರ್ ಪ್ರಕರಣ. ಬಿಸಿಲಿನ ಝಳ ತಡೆಯಲಾರದೇ ಗೌತಮ್ ಕಾರಿನ ಒಳಗೆ ಕುಳಿತಿದ್ದರೆ, ಕಾರಿನ ತೆರೆದ ಮೇಲ್ಭಾಗದಲ್ಲಿ ಗೌತಮ್ ಗಂಭೀರ್‍ನ್ನು ಹೋಲುವ ಇನ್ನೊಬ್ಬ ವ್ಯಕ್ತಿ ಮತಯಾಚನೆ ಮಾಡುತ್ತಿರುವುದು ಫೋಟೊ ಒಂದು ಸೆರೆಯಾಗಿದೆ. ಇದು ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿರುವುದು ನಿಮಗೆಲ್ಲಾ ಗೊತ್ತೇ ಇದೆ.


ಆಮ್ ಆದ್ಮಿ ಪಕ್ಷದ ಮನೀಶ್ ಸಿಸೋಡಿಯಾ ಸೇರಿದಂತೆ ನೂರಾರು ಜನರು ಆ ಫೋಟೊವನ್ನು ಟ್ವಿಟ್ಟರ್ ಮತ್ತು ಫೇಸ್‍ಬುಕ್‍ನಲ್ಲಿ ಪ್ರಕಟಿಸಿ ‘ಬಿಸಿಲಿಗೆ ಹೆದರುವ ಗಂಭೀರ್, ಯಾವ ರೀತಿ ಜನರ ಕಷ್ಟಗಳನ್ನು ಅರಿಯುತ್ತಾರೆ?’ ಎಂದು ವ್ಯಂಗ್ಯವಾಡಿದ್ದರು. ಇದರಿಂದಾಗುವ ಅಪಾಯವನ್ನರಿತ ಬಿಜೆಪಿ ತಕ್ಷಣ ಎಚ್ಚೆತ್ತುಕೊಂಡಿದೆ. ಈ ಕುರಿತು ಟ್ವೀಟ್ ಮಾಡಿರುವ ಗೌತಮ್ ಗಂಭೀರ್ ‘ಸೋಲಿನ ಭಯದಿಂದ ಆಪ್ ಪ್ರತಿದಿನ ನನ್ನ ಮೇಲೆ ಒಂದೊಂದು ಆರೋಪ ಮಾಡುತ್ತದೆ’ ಎಂದು ಆರೋಪಿಸಿದ್ದಾರೆ.

ಈಗ ಅಸಲಿ ವಿಚಾರ ಏನೆಂದರೆ ಯಾರಾದರೂ ಆ ಫೋಟೊವನ್ನು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದರೆ ಸಾಕು ಕ್ಷಣಾರ್ಧದಲ್ಲಿ ಅದರ ಮೇಲೇಯೇ ಇದು ಫೇಕ್ ಫೋಟೊ ಎಂದು ಬರುತ್ತಿದೆ. ಆ ಪೋಸ್ಟಿನ ಕೆಳಗಡೆಯೇ ರಿಲೇಟೆಡ್ ಆರ್ಟಿಕಲ್ ಎಂದು ಬೂಮ್‍ನವರು ನಡೆಸಿರುವ ಫ್ಯಾಕ್ಟ್ ಚೆಕ್‍ನ ಲಿಂಕ್ ಬರುತ್ತದೆ. ಇದನ್ನು ಬಿಜೆಪಿಯವರು ಫೇಸ್ ಬುಕ್‍ನಿಂದ ಮಾಡಿಸಿಕೊಂಡಿದ್ದಾರೆಯೇ ಎಂಬ ಪ್ರಶ್ನೆ ಏಳುತ್ತದೆ. ಫೇಸ್‍ಬುಕ್ ಈ ರೀತಿ ಬಿಜೆಪಿ ಪರ ಬ್ಯಾಟಿಂಗ್ ಮಾಡುತ್ತಿದೆಯೇ ಎಂದು ಭಾವನೆ ಬಂದರೆ ಆಶ್ಚರ್ಯವಿಲ್ಲ. ಏಕೆಂದು ತಿಳಿಯಲು ಮುಂದೆ ಓದಿ.


ಆದರೆ ಇದು ಫೇಕ್ ಫೋಟೊ ಅಲ್ಲ. ಅದನ್ನು ತಿಳಿಯಲು ನೀವು ದೂರ ಹೋಗಬೇಕಿಲ್ಲ. ಅದರ ಕೆಳಗಡೆಯೇ ಕೊಟ್ಟಿರುವ ಲಿಂಕ್, ಬೂಮ್ ವೆಬ್‍ಸೈಟ್ ನೋಡಿದರೆ ಸಾಕು. ಬೂಮ್‍ನವರು ಹೇಳಿರುವಂತೆ ಅವರು ಗಂಭೀರ್‍ರವರ ತದ್ರೂಪವಲ್ಲ. ಅವರು ಗಂಭೀರ್‍ರವರ ಗೆಳೆಯ ಗೌರವ್ ಅರೋರ ಆಗಿದ್ದಾರೆ. ದೆಹಲಿಯ ಸ್ಥಳೀಯ ನಾಯಕರಾಗಿರುವ ಅರೋರ ಹಲವು ವರ್ಷಗಳಿಂದ ಗಂಭೀರ್ ಪರ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದು ಈಗ ಇಬ್ಬರೂ ಸಹ ಒಟ್ಟಿಗೆ ರೋಡ್ ಶೋಗಳಲ್ಲಿ ಕ್ಯಾಂಪೇನ್ ಮಾಡುತ್ತಿದ್ದಾರೆ. ಆ ವ್ಯಕ್ತಿ ಯಾರು, ಏನು ಕೆಲಸ ಮಾಡುತ್ತಿದ್ದಾನೆ ಎಂಬುದನ್ನು ಬೂಮ್ ಪತ್ತೆ ಹಚ್ಚಿದೆಯೇ ವಿನಃ ಗೌತಮ್ ಗಂಭೀರ್ ಬಿಸಿಲು ತಡೆಯಲಾರದೇ ಕಾರಿನ ಒಳಗೆ ಕೂತಿರುವುದು ಸುಳ್ಳು ಎಂದಾಗಲಿ, ಅದು ಫೋಟೋ ಶಾಪ್ ಫೋಟೊ ಎಂದಾಗಲಿ ಎಲ್ಲಿಯೂ ಹೇಳಿಲ್ಲ.

ಹೀಗಿರುವಾಗ ಬಹಳಷ್ಟು ನೆಟ್ಟಿಗರು ಮಾಡಿರುವ ಟ್ರೋಲ್ ಸರಿಯಾಗಿಯೇ ಇದೆ. ಅವರ್ಯಾರು ಫೋಟೊದಲ್ಲಿರುವ ವ್ಯಕ್ತಿ ಗೌರವ್ ಅರೋರ ಅವರಲ್ಲ ಎಂದು ಹೇಳಿಲ್ಲ. ಗಂಭೀರ್ ಬಿಸಿಲಿಗೆ ಬಾರದೇ ಕಾರಿನಲ್ಲಿ ಕುಳಿತು ಅವರನ್ನು ಹೋಲುವವರಿಂದ ಪ್ರಚಾರ ಮಾಡಿಸುತ್ತಿದ್ದಾರೆ ಎಂದು ಸರಿಯಾಗಿಯೇ ದೂರಿದ್ದಾರೆ. ವಾಸ್ತವದಲ್ಲಿ ಆಪ್ ಪಕ್ಷದವರು ಮೇಲೆ ನಿಂತಿರುವ ವ್ಯಕ್ತಿ ಗೌರವ್ ಅರೋರ ಎಂದೇ ಹೇಳಿದ್ದಾರೆ. ಆದರೂ ಫೇಸ್ ಬುಕ್ ಅದು ಫೇಕ್ ಫೋಟೊ ಅಂತಲೂ, ಅದರ ಮೇಲೆ ಮತ್ತು ಕೆಳಗೆ ಫ್ಯಾಕ್ಟ್ ಚೆಕ್ ಲಿಂಕ್ ಬರುವಂತೆಯೂ ಮಾಡಿದೆ. ಆ ಮೂಲಕ ಡ್ಯಾಮೇಜ್ ಕಂಟ್ರೋಲ್ ಮಾಡಲು ಬಿಜೆಪಿಗೆ ನೆರವಾಗಿದೆ.

ಹಾಗೇ ನೋಡಿದರೆ ಫೇಕ್ ಫೋಟೊಶಾಪ್‍ಗಳನ್ನು ಶುರುಮಾಡಿದ್ದು, ದೊಡ್ಡ ಮಟ್ಟದಲ್ಲಿ ಸುಳ್ಳು ಹರಡಿದ್ದು ಬಿಜೆಪಿಯ ಕಾರ್ಯಕರ್ತರೆ ಎಂಬುದು ಎಲ್ಲರಿಗೂ ಗೊತ್ತಿದೆ. ವಾಟ್ಸಾಪ್ ಯೂನಿವರ್ಸಿಟಿ ಎಂದು ವ್ಯಂಗ್ಯದಿಂದ ಕರೆಸಿಕೊಳ್ಳುವುದನ್ನು ಆರಂಭಿಸಿರುವುದು ಸಹ ಬಿಜೆಪಿಯೇ. ಹೀಗಿರುವಾಗ ಒಂದು ಕಹಿ ಸತ್ಯವನ್ನು ಒಪ್ಪಿಕೊಳ್ಳಲು ಬಿಜೆಪಿ ಸಿದ್ದವಿಲ್ಲ. ಅದು ಏನಾದರೂ ಮಾಡಿ ಆ ಸತ್ಯ ಹರಡದಂತೆ ತಡೆಯಲು ಮುಂದಾಗುತ್ತಿದೆ ಎಂಬುದಕ್ಕೆ ಗಂಭೀರ್ ಪ್ರಕರಣ ಒಂದು ಉದಾಹರಣೆ. ಈ ಹಿಂದೆ ಪಟೇಲ್ ಪ್ರತಿಮೆ ಅನಾವರಣವಾದಾಗ ಒಂದು ಕಡೆ ದೊಡ್ಡ ಪಟೇಲ್ ಪ್ರತಿಮೆ ಇನ್ನೊಂದು ಕಡೆ ಬಡಕುಟುಂಬ ಹೊಟ್ಟೆಗಿಲ್ಲದೆ ಇರುವ ಫೋಟೊವೊಂದನ್ನು ಫೋಟೊಶಾಪ್ ಮಾಡಲಾಗಿತ್ತು. ಆಗಲೂ ಇದೇ ರೀತಿ ಆ ಫೋಟೊವನ್ನು ಯಾರಾದರೂ ಷೇರ್ ಮಾಡಿದರೆ ಅದು ಫೇಕ್ ಪೋಟೊ ಅಂತ ಬರುತ್ತಿತ್ತು. ಕೆಳಗೆ ಬೂಮ್ ಫ್ಯಾಕ್ಟ್ ಚೆಕ್ ಸಹ. ಆಗ ಅದು ಫೋಟೊಶಾಪ್ ಆದ್ದರಿಂದ ಪರವಾಗಿಲ್ಲ ಎನ್ನಬಹುದು. ಆದರೆ ಈಗ ನಿಜ ಫೋಟೊಗೂ ಫೇಕ್ ಎಂದು ಬರುತ್ತಿರುವುದು ಅಕ್ಷಮ್ಯವಾಗಿದೆ.
ಇದರಿಂದ ಫೇಸ್‍ಬುಕ್ ಬಿಜೆಪಿ ಪರವಾಗಿ, ಮೋದಿ ಪರವಾಗಿ ಬ್ಯಾಟಿಂಗ್ ಮಾಡುತ್ತಿದೆಯೇ ಎಂಬ ಪ್ರಶ್ನೆ ಸಹಜವಾಗಿ ಹೇಳುತ್ತದೆ. ಏಕೆಂದರೆ ಬಿಜೆಪಿಯ ಸುಳ್ಳುಗಳಿಗೆ ಯಾವುದೇ ಕಡಿವಾಣ ಹಾಕದೇ ಇತರ ಪಕ್ಷಗಳ ಸತ್ಯಗಳನ್ನು ಸಹ ಸುಳ್ಳು ಎಂದು ಹೇಳುವುದು ಯಾವ ರೀತಿ ಸರಿ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...