Homeಕರ್ನಾಟಕಪ್ರಯಾಣಿಕನ ಸೊಂಟಕ್ಕೆ ಕಂಪ್ಯೂಟರ್ ನಲ್ಲೇ ಬೆಲ್ಟ್ ಬಾಂಬ್ ಕಟ್ಟಿದ ಚಾನೆಲ್‍ಗಳು 

ಪ್ರಯಾಣಿಕನ ಸೊಂಟಕ್ಕೆ ಕಂಪ್ಯೂಟರ್ ನಲ್ಲೇ ಬೆಲ್ಟ್ ಬಾಂಬ್ ಕಟ್ಟಿದ ಚಾನೆಲ್‍ಗಳು 

ಮಾಧ್ಯಮ ಭಯೋತ್ಪಾದಕರಿಗೆ ಶಿಕ್ಷೆಯಿಲ್ಲವೇ? ನಮ್ಮ ಬೆಂಗಳೂರಿನಲ್ಲಿ ನಡೆದ ಆತಂಕಕಾರಿ ವಿದ್ಯಮಾನ

- Advertisement -
- Advertisement -

| ನಾನುಗೌರಿ ಡೆಸ್ಕ್ |

ತಮ್ಮ ಬದುಕಿನ ಜಂಜಾಟಗಳಲ್ಲಿ ಮುಳುಗಿ ಹೋಗಿರುವ ವ್ಯಕ್ತಿಗಳಿಬ್ಬರು ಎಲ್ಲೋ ಪ್ರಯಾಣಿಸುತ್ತಿರುತ್ತಾರೆ. ಎಲ್ಲರಂತೆ ಉದ್ಯೋಗ, ಸಂಸಾರ, ಕಷ್ಟ ಸುಖ ಎಲ್ಲ ಇರುವ ಸಾಮಾನ್ಯ ಜನ ಅವರು. ಇದ್ದಕ್ಕಿದ್ದಂತೆ ಅವರ ಕುರಿತು ಟಿವಿ ವಾಹಿನಿಗಳಲ್ಲಿ ಅವರು ಭಯೋತ್ಪಾದಕ ಎಂಬ ಸುದ್ದಿ ಬರುತ್ತಿದೆ ಎಂಬುದನ್ನು ನೆರೆಮನೆಯವರು ತಿಳಿಸುತ್ತಾರೆ. ಅಷ್ಟೇ ಅಲ್ಲದೇ ಅಂದಿನ ಹೊಟ್ಟೆಪಾಡಿನ ಕೆಲಸ ಮುಗಿಸಿ ತಮ್ಮಂತೆ ತಾವೇ ರೈಲಿನಲ್ಲಿ ಪ್ರಯಾಣ ಮಾಡಿ ಮನೆ ಸೇರಿಕೊಂಡವರ ವಿಡಿಯೋ ಚಿತ್ರದಲ್ಲಿನ ಆಕೃತಿಯ ಸೊಂಟಕ್ಕೆ ಬೆಲ್ಟ್ ಬಾಂಬನ್ನು ಕಂಪ್ಯೂಟರ್‍ನಲ್ಲಿ ಜೋಡಿಸಿ, ಇವರು ಬಾಂಬ್ ಕಟ್ಟಿಕೊಂಡು ಬಂದಿದ್ದರು ಎಂಬ ಸುದ್ದಿ ಪ್ರಕಟವಾದರೆ? ಅದರಲ್ಲೂ ಆ ವ್ಯಕ್ತಿ ನಿರ್ದಿಷ್ಟ ಧರ್ಮಕ್ಕೆ ಸೇರಿದವರಾಗಿದ್ದು, ಸಮಾಜದಲ್ಲಿ ಈಗಾಗಲೇ ಅಶಾಂತಿ ಇದ್ದು ಟಿವಿ ನೋಡಿದ ಜನ ರೊಚ್ಚಿಗೇಳುವ ಸಾಧ್ಯತೆ ಇರುವಾಗ ಇಂತಹ ಕೆಲಸ ಮಾಡಿದರೆ ನಾಗರಿಕ ಸರ್ಕಾರವೊಂದು ಏನು ಮಾಡಬೇಕು? ಈ ಪ್ರಶ್ನೆಗಳು ನಮ್ಮ ಬೆಂಗಳೂರಿನ ನಮ್ಮ ಮೆಟ್ರೋದಲ್ಲೇ ನಡೆದಿದೆ. ವಿವರಗಳು ನಮ್ಮೆಲ್ಲರನ್ನೂ ಬೆಚ್ಚಿ ಬೀಳಿಸುತ್ತವೆ.

ಘಟನೆ 1: ಮೇ 6ರ ಸೋಮವಾರ ಸಂಜೆ 7.18ಕ್ಕೆ ರಾಜಸ್ಥಾನ ಮೂಲದ ಸಾಜಿದ್ ಖಾನ್ ಎಂಬುವವರು ಬೆಂಗಳೂರಿನ ಮೆಜೆಸ್ಟಿಕ್ ಮೆಟ್ರೊದಲ್ಲಿ ಪ್ರಯಾಣಿಸಲು ಬಂದಿದ್ದಾರೆ. ಇವರು ಪ್ರತಿ ವರ್ಷ ರಂಜಾನ್ ಸಮಯದಲ್ಲಿ ಮಸೀದಿಗಳ ಎದುರು ದಾನ (ಝಕಾತ್) ಪಡೆಯುವುದನ್ನು ರೂಢಿಸಿಕೊಂಡಿದ್ದಾರೆ. ಈ ರೀತಿ ದಾನವಾಗಿ ಪಡೆದಿದ್ದ ಕೆಲವು ನಾಣ್ಯಗಳು ಮತ್ತು ತಾಯತ ಇವರ ಜೇಬಿನಲ್ಲಿದ್ದ ಕಾರಣ ಮೆಟ್ರೊ ಪ್ರವೇಶದ್ವಾರದಲ್ಲಿ ಬೀಪ್ ಶಬ್ದ ಬಂದಿದೆ. ಸೆಕ್ಯುರಿಟಿ ಗಾರ್ಡ್‍ಗಳು ಹೆಚ್ಚಿನ ತಪಾಸಣೆ ನಡೆಸಲು ಮುಂದಾದಾಗ ಸಾಜಿದ್‍ರವರಿಗೆ ಕನ್ನಡ ಭಾಷೆ ಬಾರದ ಕಾರಣ ಗೊಂದಲ ಉಂಟಾಗಿದೆ. ಇದರಿಂದ ಸಾಜಿದ್‍ರವರು ಮೆಟ್ರೊ ಪ್ರವೇಶಿಸದೇ ವಾಪಸ್ ಹೋಗಿದ್ದಾರೆ.

ಇದರ ಮಾರನೆಯ ದಿನ ಎಲ್ಲಾ ಪತ್ರಿಕೆ ಮತ್ತು ಟಿ.ವಿಗಳಲ್ಲಿ ಭಯೋತ್ಪಾದನೆ ಆರಂಭವಾಯಿತು. ಈತ ಆತ್ಮಾಹುತಿ ಬಾಂಬರ್ ಇರಬೇಕು, ಈತನ ಬಳಿ ಗನ್ ಇತ್ತು, ಮೆಟ್ರೊ ಸ್ವಚ್ಚತ ಸಿಬ್ಬಂದಿಗೆ ಸಹಕರಿಸಿದರೆ ಒಂದು ಕೋಟಿ ರೂ ಕೊಡುವುದಾಗಿ ಹೇಳಿದ್ದ, ಶ್ರೀಲಂಕಾದಿಂದ ಉಗ್ರರು ಬೆಂಗಳೂರಿಗೆ ಬಂದಿದ್ದಾರೆ ಎಚ್ಚರವಾಗಿರಿ, ಗಡ್ಡಬಿಟ್ಟ, ಜುಬ್ಬ ಧರಿಸಿದ ವ್ಯಕ್ತಿಗಳು ಕಂಡರೆ ಪೊಲೀಸರಿಗೆ ತಿಳಿಸಿ ಅಥವಾ ನಮಗೆ ತಿಳಿಸಿ ಎಂದೆಲ್ಲಾ ಟಿ.ವಿಗಳಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದಾರೆ. ಈ ಮೆಟ್ರೊ ಸಿಬ್ಬಂದಿಗಳು ಸಹ ಟಿವಿಯಲ್ಲಿ ಬರುವ ಕೀಳುಮಟ್ಟದ ಆಸೆಗೆ ಹೌದು ಆತನ ಮುಖಕ್ಕೆ ಬಟ್ಟೆ ಕಟ್ಟಿದ್ದ, ಆತ ಭಯೋತ್ಪದಾಕನೇ ಇರಬೇಕು ಎಂದೆಲ್ಲಾ ಬೂಸಿ ಬಿಟ್ಟಿದ್ದಲ್ಲದೇ ಸಿಸಿಟಿವಿಯ ಫೂಟೇಜ್‍ಗಳನ್ನು ಟಿ.ವಿ ಮಾಧ್ಯಮದವರಿಗೆ ನೀಡಿ ತಾವೇನೊ ಮಹಾನ್ ಸಾಧನೆ ಮಾಡಿದವರಂತೆ ಸಂಭ್ರಮಿಸಿದ್ದಾರೆ.

ಈ ಸಿಸಿಟಿವಿ ಫೂಟೆಜ್ ಸಿಕ್ಕ ಕೂಡಲೇ ಆತನ ದೃಶ್ಯವನ್ನು ಎಡಿಟ್ ಮಾಡಿದ ಕೆಲ ಚಾನೆಲ್‍ಗಳು ಆತನ ಮುಖಕ್ಕೆ ಬಟ್ಟೆ ಕಟ್ಟಿರುವ ರೀತಿ ಎಡಿಟ್ ಮಾಡಿದರು. ಆತನ ಸೊಂಟಕ್ಕೂ ಕೂಡ ಬೆಲ್ಟ್ ಹಾಕಿ ಇದೇ ನೋಡಿ ಬಾಂಬ್ ಎಂದೆಲ್ಲಾ ಗಂಟೆಗಟ್ಟಲೇ ಪ್ರಸಾರ ಮಾಡಿದ್ದಾರೆ.

ವಿಶ್ವಾಸಾರ್ಹ ಪತ್ರಿಕೆ ಎಂದು ಕರೆದುಕೊಳ್ಳುವವರು ಸಹ ‘ಅನುಮಾನಾಸ್ಪದವಾಗಿ ಕಾಣಿಸಿಕೊಂಡ ವ್ಯಕ್ತಿಯು ಆತ್ಮಾಹುತಿ ಬಾಂಬರ್’ ಎಂದು ಮೆಟ್ರೊ ಸಿಬ್ಬಂದಿ ಶಂಕೆ ವ್ಯಕ್ತಪಡಿಸಿದ್ದಾರೆ, ‘ಪ್ರಯಾಣಿಕರ ಸೋಗಿನಲ್ಲಿ ಬಂದಿದ್ದ ವ್ಯಕ್ತಿಯೊಬ್ಬ ಭದ್ರತಾ ತಪಾಸಣೆಗೆ ಒಳಗಾಗಲು ನಿರಾಕರಿಸಿ ಕಾಲ್ಕಿತ್ತಿದ್ದಾನೆ’, ಉತ್ತರ ದ್ವಾರದಲ್ಲಿ ಪ್ರವೇಶಿಸಲು ವಿಫಲವಾದ ಮೇಲೆ 15 ನಂತರ ಪಶ್ಚಿಮ ದ್ವಾರದಲ್ಲಿ ಕಾಣಿಸಿಕೊಂಡಿದ್ದ, ಆಟೋರಿಕ್ಷಾ ಚಾಲಕರು ಮತ್ತು ಮೆಟ್ರೋ ಭದ್ರತಾ ಸಿಬ್ಬಂದಿ ಹಿಡಿಯಲು ಯತ್ನಿಸಿದಾಗ ತಪ್ಪಿಸಿಕೊಂಡಿದ್ದಾನೆ ಎಂದೆಲ್ಲಾ ರೋಚಕ ವರದಿ ಮಾಡಿ ಆತಂಕ ಸೃಷ್ಟಿಸಿದರು.

ಪೊಲೀಸರು ತನಿಖೆ ನಡೆಸಿದಾಗ ಆತ ಅಮಾಯಕ. ಆತ ಎಲ್ಲಿಯೂ ಓಡಿ ಹೋಗಿಲ್ಲ ಬದಲಿಗೆ ಆರ್.ಟಿ ನಗರದ ಮಸೀದಿ ಎದುರು ದಾನ ಪಡೆಯಲು ಕೂತಿದ್ದ ಎಂದು ಸ್ಪಷ್ಟಪಡಿಸಿ ಆತಂಕಪಡಬೇಡಿ ಎಂದಿದ್ದಾರೆ. ಇದ್ಯಾವುದರ ಪರಿವೆಯೂ ಪಾಪ ಸಾಜಿದ್ ಖಾನ್‍ಗಿಲ್ಲ. ಒಂದು ವೇಳೆ ಆತ ಪೊಲೀಸರಿಗೆ ಸಿಗುವ ಬದಲು ಟಿವಿ ಚಾನಲ್‍ನವರಿಗೆ ಸಿಕ್ಕಿದ್ದರೆ ಖಂಡಿತಾ ಆತನನ್ನು ಸ್ಟುಡಿಯೋದಲ್ಲಿ ಕೂಡಿಹಾಕಿ ಏನೆಲ್ಲಾ ಅವಾಂತರ ಮಾಡುತ್ತಿದ್ದರೋ ಏನೋ?

ಘಟನೆ 2: ಮೇ 7ರ ಮಂಗಳವಾರ ಸಂಜೆ 5.45ಕ್ಕೆ 57 ವರ್ಷದ ಗಡಿಯಾರ ವ್ಯಾಪಾರಿಯಾದ ರಿಯಾಝ್ ಅಹ್ಮದ್ ಎಂಬುವವರು ಮೆಜೆಸ್ಟಿಕ್‍ನ ಸುರಂಗ ಮಾರ್ಗದಲ್ಲಿ ಕೆಲಸ ಮುಗಿಸಿ ಮೆಟ್ರೊದಲ್ಲಿ ಮನೆಗೆ ಹೋಗಲು ಬಂದಿದ್ದಾರೆ. ತಪಾಸಣೆ ನಡೆಸಿದ್ದ ಸಿಬ್ಬಂದಿ ಜೇಬಿನಲ್ಲಿರುವುದನ್ನು ಹೊರತೆಗೆಯುವಂತೆ ಹೇಳಿದಾಗ ಅವರು ತೋರಿಸಿ ನಂತರ ಮೆಟ್ರೊದಲ್ಲಿ ಪ್ರಯಾಣಿಸಿ ನಾಯಂಡಹಳ್ಳಿಯ ಮನೆ ತಲುಪಿದ್ದಾರೆ.

ಆಗ ಸ್ವಲ್ಪ ಹೊತ್ತಿನಲ್ಲೇ ಮಾಧ್ಯಮ ಭಯೋತ್ಪಾದನೆ ಆರಂಭವಾಯಿತು. ಮುಖ್ಯವಾಗಿ ಪಬ್ಲಿಕ್ ಟಿ.ವಿ ಗಡ್ಡಬಿಟ್ಟು ಪೈಜಾಮ ಹಾಕಿ ವ್ಯಕ್ತಿ, ಆಹ್ಮಾಹುತಿ.. ಬ್ಲ ಬ್ಲ ಬ್ಲ ಇತ್ಯಾದಿ ಅರಚಾಡಿ ಕೂಗಾಡಿದ್ದಾರೆ. ಟಿವಿ 5 ಎಂಬ ಅವಿವೇಕಿ ಚಾನಲ್ ತಾವು ಮಾಡಿದ ವರದಿಯಿಂದ ರಾ, ಐಬಿ, ಎನ್‍ಐಎ ಸೇರಿದಂತೆ ದೇಶದ ಪ್ರಮುಖ ತನಿಖಾ ಸುದ್ದಿ ಸಂಸ್ಥೆಗಳು ಹೈ ಅಲರ್ಟ್ ಆಗಿವೆ ಎಂದು ಅರಚಿಕೊಂಡಿದೆ. ಈ ಸುದ್ದಿ ನಾವೇ ಮೊದಲು ಪ್ರಸಾರ ಮಾಡಿದ್ದು ಎಂದು ಮತ್ತೆ ಪೈಪೋಟಿಗೆ ಬಿದ್ದಿವೆ.

ಅತ್ತ ಆ ವ್ಯಕ್ತಿ ರಿಯಾಝ್ ಅಹ್ಮದ್‍ರ ಪಕ್ಕದ ಮನೆಯ ವ್ಯಕ್ತಿ ಬಂದು ನಿಮ್ಮ ಪೋಟೊ ಟಿವಿಯಲ್ಲಿ ಬರುತ್ತಿದೆ, ಭಯೋತ್ಪಾದಕ ಎಂದೆಲ್ಲಾ ತೋರಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾನೆ. ಭಯಬಿದ್ದ ರಿಯಾಝ್‍ರವರು ಸ್ನೇಹಿತರ ಜೊತೆ ಸೇರಿ ನೇರ ಉಪ್ಪಾರಪೇಟೆ ಪೊಲೀಸ್ ಸ್ಟೇಷನ್‍ಗೆ ತೆರಳಿ ಪಬ್ಲಿಕ್ ಟಿವಿಯ ವಿರುದ್ಧ ಕಂಪ್ಲೈಂಟ್ ನೀಡಿದ್ದಾರೆ. ತಾನು 30 ವರ್ಷಗಳಿಂದಲೂ ಮೆಜೆಸ್ಟಿಕ್ ಕೆಳಗೆ ರಸ್ತೆ ಬದಿಯಲ್ಲಿ ವಾಚ್ ವ್ಯಾಪಾರ ಮಾಡುತ್ತೇನೆ. ಬಿಬಿಎಂಪಿಯವರು ಕೊಟ್ಟಿರುವ ಪರವಾನಗಿ ಕಾರ್ಡ್ ಕೂಡ ನನ್ನ ಬಳಿ ಇದೆ. ಹೀಗೆಲ್ಲಾ ಇಲ್ಲಸಲ್ಲದ ಸುದ್ದಿ ಹಬ್ಬಿಸಿರುವುದರಿಂದ ನನ್ನ ಗೌರವಕ್ಕೆ ಧಕ್ಕೆ ಉಂಟಾಗಿದೆ. ಗಡ್ಡಬಿಟ್ಟು ಜುಬ್ಬಾ ಪೈಜಾಮ ಹಾಕಿದವರೆಲ್ಲಾ ಭಯೋತ್ಪಾದಕರ? ಎಂದು ಪ್ರಶ್ನಿಸಿದ್ದಾರೆ.

ರಿಯಾಜ್ ಅಹ್ಮದ್

ಪೊಲೀಸ್ ಕಮಿಷನರ್ ಟಿ.ಸುನೀಲ್ ಕುಮಾರ್ ಮತ್ತು ರವಿ ಚನ್ನಣ್ಣನವರ್ ‘ಈ ವಿಚಾರದಲ್ಲಿ ಇವರಿಬ್ಬರು ಮುಗ್ಧರಾಗಿದ್ದು ಟಿವಿ ಚಾನೆಲ್‍ನವರೆ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ’ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಇಂತ ಘೋರ ಅಪರಾಧ ನಡೆಸಿರುವ ಟಿವಿ ಚಾನೆಲ್‍ಗಳ ಮೇಲೆ ಕ್ರಮ ಕೈಗೊಂಡಿಲ್ಲ. ಯಾರೊಬ್ಬರ ಬಂಧನವೂ ಆಗಿಲ್ಲ.

ಆ ಸಿಸಿಟಿವಿ ದೃಶ್ಯಾವಳಿಗಳನ್ನು ಟಿವಿಯವರಿಗೆ ಕಾನೂನುಬಾಹಿರವಾಗಿ ಕೊಟ್ಟಿದ್ದು ಯಾರು ಮತ್ತು ಏಕೆ? ಈ ರೀತಿ ತಪ್ಪು ಸುದ್ದಿ ಪ್ರಕಟಿಸಿ ಜನರಲ್ಲಿ ಆತಂಕವನ್ನು ಹೆಚ್ಚಿಸುವುದಲ್ಲದೇ ಕೆಲವರು ರೊಚ್ಚಿಗೆದ್ದು ಶಂಕಿತರು ಎಂದು ಸಿಕ್ಕ ಸಿಕ್ಕವರನ್ನು ಥಳಿಸಿ ಕೊಲೆಗೈಯಲು ಮುಂದಾದರೆ ಗತಿ ಏನು? ಈ ಸಮಾಜದಲ್ಲಿ ಶಾಂತಿ ಸಾಮರಸ್ಯ ಉಳಿಯುತ್ತದೆಯೇ? ಈ ಮಾಧ್ಯಮಗಳ ಭಯೋತ್ಪಾದನೆಗೆ ಶಿಕ್ಷೆ ಇಲ್ಲವೇ ಎಂಬ ಪ್ರಶ್ನೆಗಳು ಸಹಜವಾಗಿ ಏಳುತ್ತವೆ. ಹಾಗಾಗಿ ಕೆಲವು ಸಾಮಾಜಿಕ ಚಿಂತಕರನ್ನು ನಾನುಗೌರಿ.ಕಾಂ ಮಾತಾಡಿಸಿತು.

‘ಭಯವನ್ನು ಉತ್ಪಾದಿಸುವುದೇ ಭಯೋತ್ಪಾದನೆಯಾಗಿದೆ. ಇದಕ್ಕೆ ಹಲವಾರು ಕಾರಣಗಳಿವೆ. ಧರ್ಮ – ಜಾತಿಯ ಹೆಸರಿನಲ್ಲಿ ಕೆಲವರು ಭಯವನ್ನು ಉತ್ಪಾದಿಸಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಇನ್ನು ಕೆಲವರು ತಮ್ಮ ಟಿಆರ್‍ಪಿ ಹೆಚ್ಚಿಸಿಕೊಳ್ಳಲು, ಒಂದು ಸಮುದಾಯವನ್ನು ದೂಷಿಸಿ, ಆ ಸಮುದಾಯದ ಬಗ್ಗೆ ಸಾರ್ವಜನಿಕವಾಗಿ ಕೆಟ್ಟ ಅಭಿಪ್ರಾಯ ಬರುವಂತೆ ಮಾಡಲು ಭಯವನ್ನು ಉತ್ಪಾದಿಸುತ್ತಾರೆ. ಇದು ಕೇವಲ ಟಿಆರ್‍ಪಿ ವಿಷಯ ಮಾತ್ರವಾಗಿರದೇ ಬಿಜೆಪಿ ಪಕ್ಷಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶವೂ ಮಾಧ್ಯಮಗಳಿಗಿದ್ದಂತಿದೆ. ಅಂತಿಮವಾಗಿ ದೇಶ ಒಡೆದು ಹೋದರೂ ರಾಜಕೀಯ ಅಧಿಕಾರ ಗಿಟ್ಟಿಸುವುದು ಇವರ ಹಿಂದಿನ ಉದ್ದೇಶವಾಗಿದೆ. ಇದರಲ್ಲಿ ಅಮಾಯಕರು, ಮುಗ್ಧರು ಬಲಿಪಶುಗಳಾಗುವುದು ದುರಂತ.’ ಎನ್ನುತ್ತಾರೆ ಸಾಮಾಜಿಕ ಹೋರಾಟಗಾರ ಮತ್ತು ಚಿಂತಕ ಕೆ.ಎಲ್.ಅಶೋಕ್.

‘ಇತ್ತೀಚೆಗಿನ ದಿನಗಳಲ್ಲಿ ಈ ಮಾಧ್ಯಮ ಭಯೋತ್ಪಾದನೆ ತೀವ್ರ ರೀತಿಯ ವೇಗವನ್ನು ಪಡೆದುಕೊಳ್ಳುತ್ತಿದೆ. ಎರಡು ಘಟನೆಗಳು ಅದನ್ನು ನಿರೂಪಿಸುತ್ತವೆ. ಇದನ್ನು ಇಲ್ಲಿಯೇ ನಿಯಂತ್ರಿಸದಿದ್ದರೆ ಯಾರ ಹಿಡಿತಕ್ಕೂ ಸಿಗದೇ ದೊಡ್ಡ ಅರಾಜಕ ವಾತಾವರಣ ಸೃಷ್ಟಿಯಾಗಿಬಿಡುತ್ತದೆ. ನೈತಿಕತೆ ಕಳೆದುಕೊಂಡು ಜೀವವಿರೋಧಿಗಳಂತೆ ವರ್ತಿಸುತ್ತಿರುವ ಇವರಿಗೆ ಶಿಕ್ಷೆಯಾಗದೆ ಹೋದರೆ ಈ ರೀತಿಯ ಪತ್ರಿಕೋದ್ಯಮವೆ  ಮಾದರಿಯಾಗಿವ ಅಪಾಯವಿದೆ  ಹಾಗಾಗಿ ಕೂಡಲೇ ಆ ಚಾನೆಲ್‍ನವರ ಮೇಲೆ ತನಿಖೆ ನಡೆಸಿ, ತಪ್ಪಿತಸ್ಥರನ್ನು ಬಂಧಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು. ಸರಿಯಾಗಿ ಪರಿಶೀಲಿಸದೇ, ಸಮರ್ಪಕ ದಾಖಲೆಗಳಿಲ್ಲದೇ ಸುದ್ದಿ ಪ್ರಕಟಿಸಬಾರದೆಂದು ಎಚ್ಚರಿಕೆ ನೀಡುವ ಅಗತ್ಯವಿದೆ’ ಎಂದು ರಾಜಕೀಯ ವಿಶ್ಲೇಷಕ ಮತ್ತು ಬರಹಗಾರ ಬಿ. ಶ್ರೀಪಾದ್ ಭಟ್ ಹೇಳುತ್ತಾರೆ.

‘ಜೊತೆಗೆ ಮುಸ್ಲಿಂ ಸಮುದಾಯಕ್ಕೂ ಸಾಂತ್ವನ ನೀಡಬೇಕಿದೆ. ನೊಂದ ಆ ವ್ಯಕ್ತಿಗಳಿಗೆ ಧೈರ್ಯ ತುಂಬಬೇಕಿದೆ. ಸಮಾಜದಲ್ಲಿ ದೊಡ್ಡ ಜಾಗೃತಿ ಮೂಡಿಸಬೇಕಿದೆ. ವದಂತಿಗಳು ಹರಡದಂತೆ ಕ್ರಮಗಳನ್ನು ಕೈಗೊಳ್ಳಬೇಕಿದೆ. ಪೊಲೀಸರು ಮತ್ತು ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ವಹಿಸುವುದಿಲ್ಲ. ಜಾತ್ಯಾತೀತ ಎಂದು ಹೇಳಿಕೊಳ್ಳುವ ಪಕ್ಷಗಳು ಅಧಿಕಾರದಲ್ಲಿದ್ದಾಗಲೂ ಅಂಥದನ್ನು ಮಾಡುವುದಿಲ್ಲ, ಬದಲಿಗೆ ಅಲ್ಪಸಂಖ್ಯಾತರ ಓಟುಗಳು ಸಿಕ್ಕರೆ ಸಾಕು ಎಂಬ ಮಾನಸಿಕತೆ ಅವರದ್ದು’ ಎಂದು ಎಸ್‍ಐಓದ ಅಧ್ಯಕ್ಷ ನಿಹಾಲ್ ನೊಂದು ನುಡಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಹಿಂಗೆ ಟೈಪ್ ಮಾಡುವ ಬದಲು ಹೋಗಿ ಕಂಪ್ಲೇಂಟ್ ಕೊಡಿ.ಓಹ್ ನಮ್ಮದೇನಿದ್ದರೂ ಬರೀ ತೋರ್ಪಡಿಕೆ ಅಲ್ಲವೇ ?
    ಸತ್ಯತೆ ಇದ್ದರೆ ಹೋಗಿ ಚಾನೆಲ್ ಗಳ ವಿರುದ್ಧ ಕಂಪ್ಲೇಂಟ್ ಮಾಡಿ …….

    ಕೈಲಾಗದ ಕಡಿಮೆ nistaru

  2. ನೀವ್ ರಿಪೋರ್ಟ್ ಮಾಡ್ತಿರೋದು ಎಲ್ಲಾ ಕ್ಲಾರಿಫಿಕೇಷನ್ ಸಿಕ್ಕ‌ಮೇಲೆ. ಟಿವಿ ಅವರು ರಿಪೋರ್ಟ್ ಮಾಡಿದ್ದು ಅನುಮಾನ ಬಂದ ಕೂಡಲೇ. ವ್ಯತ್ಯಾಸ ಇಲ್ಲೇ ಇರೋದು. ನೀವು ಬರೆದಿದ್ದು ನೋಡದಿದ್ರೂ ಜನ ಕಳೆದುಕೊಳ್ಳೋದು ಏನೂ ಇಲ್ಲ.‌ ಆದ್ರೆ‌ ಒಂದು ವೇಳೆ, ಬಂದಿದ್ದ ಆಗುಂತಕ ನಿಜಕ್ಕೂ ಸಮಸ್ಯೆ ಆಗಿದ್ದರೆ ಆಗೇನು ಮಾಡ್ತಿದ್ರಿ? ಆ ಆಗುಂತಕ ಬಂದು ಹೋದ ನಂತರ ಶ್ವಾನದಳ, ಬಾಂಬ್ ಸ್ಕ್ವಾಡ್ ಮತ್ತು ಡಿಸಿಪಿ ಸ್ಪೆಷಲ್ ಸ್ಕ್ವಾಡ್ ಮೆಟ್ರೋ ನಿಲ್ದಾಣಕ್ಕೆ ಬಂದು‌ ಕಡ್ಲೇಪುರಿ ತಿನ್ನೋಕೆ ಬಂದಿದ್ರಾ? ಅಷ್ಟಕ್ಕೂ ಆತ ಭಯೋತ್ಪಾದಕ ಇಲ್ಲದೇ ಇರಬಹುದು. ಆದ್ರೆ ಅದರಿಂದ ಒಳ್ಳೇಯದೇ ಆಗಿದೆ‌. ಭದ್ರತೆ ಇಲ್ಲದೇ ಇದ್ದ ಮಜೆಸ್ಟಿಕ್ ನಲ್ಲಿ ಈಗ ಫುಲ್ ಸೆಕ್ಯುರಿಟಿ ಕೊಡೋ ಯೋಜನೆ ಬಂದಿದೆ. ಬೆಂಗಳೂರು ಸ್ಲೀಪರ್ ಸೆಲ್ ಗಳ ತವರು ಅನ್ನೋದು ನಿಮ್ಮಂತ ಚಿಂತಕರಿಗೆ ಹೇಗೆ ಗೊತ್ತಾಗಬೇಕು. ನಿಜವಾಗ್ಲೂ ಉಗ್ರರು ಬೆಂಗಳೂರಿನಲ್ಲಿ ಬಾಂಬ್ ಬ್ಲಾಸ್ಟ್ ಮಾಡಿದಾಗ ನೀವು ಮಾತಾಡಿದ್ರಾ? ಹಂತಕರು ಅರೆಸ್ಟ್ ಆದಾಗಲೂ‌ ಅವರನ್ನ ಅಮಾಯಕರು ಎಂದು ಕರೆದವರು ನೀವು. ತನಿಖಾಧಿಕಾರಿಗಳನ್ನೆ ಅನುಮಾನದ ದೃಷ್ಟಿಯಿಂದ ನೋಡುವವರು‌ ನೀವು. ನಿಮ್ಮಿಂದ ಹೆಚ್ಚಿನದ್ದೇನನ್ನು‌ ನಿರೀಕ್ಷೆ ಮಾಡಲು ಸಾಧ್ಯ.
    ಸುಖಾಸುಮ್ನೆ ಕೈ ಫ್ರೀ ಇದೆ ಅಂತ‌ ಏನೇನೋ‌ ಗೀಚೋದಲ್ಲ. ಸಮಸ್ಯೆ ಆದ ಮೇಲೆ ವ್ಯವಸ್ಥೆಯ ಬಗ್ಗೆ ಗೂಬೆ ಕೂರಿಸೋದು ಬಿಟ್ಟು ಸಮಸ್ಯೆ ಆಗದಂತೆ ತಡೆಯೋದರ ಬಗ್ಗೆ ಯೋಚಿಸಿ. ಒಳ್ಳೆಯದಾಗುತ್ತೆ

LEAVE A REPLY

Please enter your comment!
Please enter your name here

- Advertisment -

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...

ಜಿರಳೆ ಜನತಾ ಪಕ್ಷದ ಖಾತೆಗೆ ನಿರ್ಬಂಧ; ದೆಹಲಿ ಹೈಕೋರ್ಟ್‌ನಿಂದ ಕೇಂದ್ರ-ಎಕ್ಸ್‌ಗೆ ನೋಟಿಸ್

ಜಿರಳೆ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ಬಂಧಿಸಿದ್ದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದು, ದೆಹಲಿ ಹೈಕೋರ್ಟ್ (ಮೇ 29) ಕೇಂದ್ರ ಸರ್ಕಾರ ಮತ್ತು ಸಾಮಾಜಿಕ...