HomeUncategorizedಈಕ್ವೆಡಾರ್‌ ದೇಶದ ಮಹಿಳೆಯರಿಗೆ ಅವರ ಗರ್ಭಕೋಶದ ಮೇಲೆ ಹಕ್ಕಿಲ್ಲ

ಈಕ್ವೆಡಾರ್‌ ದೇಶದ ಮಹಿಳೆಯರಿಗೆ ಅವರ ಗರ್ಭಕೋಶದ ಮೇಲೆ ಹಕ್ಕಿಲ್ಲ

- Advertisement -
- Advertisement -

ತಾಯ್ತನ ಎನ್ನುವುದು ಹೆಣ್ಣಿನ ಹೊಣೆಯೂ ಹೌದು, ಅದರ ಆಯ್ಕೆ ಅವಳ ಹಕ್ಕೂ ಹೌದು. ಆದರೆ `ಅದು ಅವಳ ಹೊಣೆ ಮಾತ್ರ’ ಎಂದು ಜಗತ್ತಿನ ಅನೇಕ ದೇಶಗಳು ಕಟ್ಟುನಿಟ್ಟು ಮಾಡಿವೆ. ಹೆಣ್ಣಿನ ಸಮ್ಮತಿ ಇಲ್ಲದೆ ಸಂಭೋಗ ನಡೆದಿರಬಹುದು, ಅತ್ಯಾಚಾರ ಆಗಿರಬಹುದು, ಬಲಾತ್ಕಾರ ನಡೆದಿರಬಹುದು- ಗಂಡಸು ಏನಾದರೂ ಮಾಡಿರಲಿ, ಅದರಿಂದ ಅವಳು ಬಸಿರಾದರೆ ಒಂಬತ್ತು ತಿಂಗಳು ಹೊತ್ತು ಮಗುವನ್ನು ಹೆರಲೇಬೇಕೇ ಹೊರತು, ಗರ್ಭಪಾತ ಮಾಡಿಸಲು ಅವಳಿಗೆ ಹಕ್ಕಿಲ್ಲ ಎಂದು ಆ ದೇಶಗಳ ಕಾನೂನುಗಳು ಹೇಳುತ್ತವೆ. ಕೆಲವೇ ದಿನಗಳ ಹಿಂದೆ, ಈಕ್ವೆಡಾರ್ ದೇಶ ಇದನ್ನು ಮತ್ತೊಮ್ಮೆ ಗಟ್ಟಿಗೊಳಿಸಿತು. ಅತ್ಯಾಚಾರದಿಂದ ಆಗುವ ಬಸಿರನ್ನು ತೆಗೆಸಿಕೊಳ್ಳಲು ಅನುಮತಿ ನೀಡುವ ತಿದ್ದುಪಡಿ ಪ್ರಸ್ತಾವನೆ ಅಲ್ಲಿನ ಸಂಸತ್ತಿನಲ್ಲಿ ಕೇವಲ ಐದು ಮತಗಳಿಂದ ಸೋಲು ಕಂಡಿತು.

ಈಕ್ವೆಡಾರ್ ದೇಶದಲ್ಲಿ 1938 ರಿಂದ ಜಾರಿಯಲ್ಲಿರುವ ಅತ್ಯಂತ ಹಳೆಯ ಕೊಳೆತ ಕಾನೂನಿನ ಪ್ರಕಾರ, ಮಾನಸಿಕ ಅಸ್ವಾಸ್ಥ್ಯ ಇರುವ ಹೆಣ್ಣಿನ ಮೇಲೆ ಅತ್ಯಾಚಾರ ನಡೆದು ಬಸಿರಾದರೆ ಮಾತ್ರ ಗರ್ಭ ತೆಗೆಸಲು ಅವಕಾಶವಿದೆ. ಇದು ಬಿಟ್ಟರೆ ಗರ್ಭದಿಂದ ಹೆಣ್ಣಿನ ಜೀವಕ್ಕೇ ತೊಂದರೆ ಇದ್ದರೆ ಮಾತ್ರ ಗರ್ಭಪಾತ ಮಾಡಿಸಬಹುದು. ಇವೆರಡು ಬಿಟ್ಟರೆ ಇನ್ನಾವ ಕಾರಣಕ್ಕೂ ಗರ್ಭಪಾತ ಮಾಡಿಸಲು ಅವಕಾಶವಿಲ್ಲ. ಏನಾದರೂ ಗರ್ಭ ತೆಗೆಸಿದರೆ, ಅದನ್ನು ಅಪರಾಧ ಎಂದು ಪರಿಗಣಿಸಿ ಸೆರೆಮನೆಗೆ ದೂಡಲಾಗುತ್ತದೆ. ಅಂದರೆ ಹೆಣ್ಣಿನ ಗರ್ಭಕೋಶ, ತಾಯ್ತನದ ಆಯ್ಕೆ ಯಾವುವೂ ಅವಳಿಗೆ ಸೇರಿಲ್ಲ, ಎಲ್ಲವೂ ಪುರುಷಾಧಿಪತ್ಯ, ಅದು ರೂಪಿಸುವ ಕಾನೂನು, ಮತ್ತು ಧರ್ಮವನ್ನು ಹೊದ್ದುಕೊಂಡ ಪುರುಷ ಅಹಂಕಾರದ ಹಿಡಿತದಲ್ಲಿ ಇವೆ. ಹೆಣ್ಣನ್ನು ಬಸಿರು ಮಾಡುವುದೂ ಅದನ್ನು ಉಳಿಸುವುದೂ ಗಂಡಸಿನ ಧರ್ಮ ಎಂದು ಧರ್ಮದ ಹೆಸರಿನಲ್ಲೂ ಹೇಳಲಾಗಿದೆ. ಕೆಥೊಲಿಕ್ ಕ್ರೈಸ್ತ ಧರ್ಮದ ಪ್ರಾಬಲ್ಯ ಇರುವ ಈಕ್ವೆಡಾರ್ ಇದನ್ನೇ ಎತ್ತಿ ಹಿಡಿದಿದೆ.

ಇದನ್ನು ಓದಿ: ಸಂಪಾದಕೀಯ | ಕೊಲೆ, ಅತ್ಯಾಚಾರದ ಬೆದರಿಕೆಗಳಿಗೆ ರಾಜಾಶ್ರಯವಿದ್ದಾಗ…?

ದೇಶದಲ್ಲಿ ಹೆಣ್ಣುಮಕ್ಕಳ ಮೇಲೆ ಎಗ್ಗುಸಿಗ್ಗಿಲ್ಲದೆ ಸಾಂಕ್ರಾಮಿಕ ರೋಗದಂತೆ ಅತ್ಯಾಚಾರ ನಡೆಯುತ್ತಿದೆ, ತೀರಾ ಕಿರಿಯ ವಯಸ್ಸಿನ ಹುಡುಗಿಯರು ಬಸುರಿಯರಾಗುತ್ತಿದ್ದಾರೆ, ಪ್ರತಿದಿನ ಕನಿಷ್ಠ ಹನ್ನೊಂದು ಅತ್ಯಾಚಾರಗಳಾದರೂ ವರದಿಯಾಗುತ್ತವೆ. ಲೈಂಗಿಕ ಸಂಪರ್ಕಕ್ಕೆ ಸಮ್ಮತಿ ನೀಡಲು ಹದಿನಾಲ್ಕು ವರ್ಷ ಆಗಿರಬೇಕು ಎಂಬ ನಿಯಮ ಆ ದೇಶದಲ್ಲಿದೆ, ಆದರೆ ಪ್ರತಿದಿನ ಆ ವಯಸ್ಸಿಗಿಂತ ಚಿಕ್ಕವರಾದ ಏಳು ಹುಡುಗಿಯರು ಮಗುವಿಗೆ ಜನ್ಮ ನೀಡುತ್ತಾರೆ. 15 ರಿಂದ 19 ವಯಸ್ಸಿನೊಳಗೆ ಮಗು ಹೆರುವ ಹುಡುಗಿಯರಲ್ಲಿ ಬಹುಪಾಲು ಅತ್ಯಾಚಾರದ ಬಲಿಪಶುಗಳೇ ಆಗಿರುತ್ತಾರೆ. ಇಂಥ ಹೀನ ಕೃತ್ಯದಿಂದ ಬೇಡದ ಬಸಿರು ಹೊರುವ ಹೆಣ್ಣು ಮಕ್ಕಳಿಗೆ ಗರ್ಭಪಾತದ ಹಕ್ಕು ನೀಡಬೇಕು ಎಂಬ ಆಂದೋಲನವೇ ಶುರುವಾಗಿ, ತಿದ್ದುಪಡಿಗೆ ಒತ್ತಾಯಿಸಲಾಗಿತ್ತು.

ಆದರೆ ಈ ತಿದ್ದುಪಡಿ ಪ್ರಸ್ತಾವನೆಗೆ ಉಗ್ರ ವಿರೋಧವೂ ಇತ್ತು. ಇದು ಧರ್ಮದ್ರೋಹ, ದೇವರು ಕೊಟ್ಟ ಜೀವವನ್ನು ಹೊಸಕಿಹಾಕಬಾರದು, ಆ ಕಾರಣ ಗರ್ಭಪಾತಕ್ಕೆ ಮುಕ್ತ ಅವಕಾಶ ಕೊಡಬಾರದು ಎಂದು ಅದರ ವಿರೋಧಿಗಳು ಆಗ್ರಹಿಸಿದ್ದರು. ಇದಕ್ಕೆ ಅವಕಾಶ ಕೊಡಬೇಡಿ ಎಂದು ಕ್ಯಾಥೊಲಿಕ್ ಚರ್ಚಿನ ಆರ್ಚ್‍ಬಿಷಪ್ ಬೇರೆ ಕರೆನೀಡಿದ್ದರು. ಹೆಣ್ಣಿನ ಹಕ್ಕನ್ನು ಹತ್ತಿಕ್ಕಿ ಅವಳಿಗೆ ಬೇಡದ ಮಗುವನ್ನು ಉಳಿಸುವುದು ಜೀವಪ್ರೀತಿ ಎನ್ನುವ ಧರ್ಮಾಧಿಕಾರಿಗಳು ಮತ್ತು ಸನಾತನವಾದಿಗಳು ಜಗತ್ತಿನಾದ್ಯಂತ ನಡೆಯುವ ಯುದ್ಧಗಳಲ್ಲಿ ಆಗುವ ಸಾವುನೋವುಗಳ ಬಗ್ಗೆ ಸೊಲ್ಲೆತ್ತುವುದಿಲ್ಲ. ಒಟ್ಟಿನಲ್ಲಿ ಅವರ ಕೈಮೇಲಾಯಿತು. ರಾಜಧಾನಿ ಕ್ವಿಟೋದಲ್ಲಿರುವ ಸಂಸತ್ತಿನಲ್ಲಿ ಮತದಾನ ಆಗುತ್ತಿದ್ದಾಗ ಅದರ ಹೊರಗೆ ಸೇರಿದ್ದ ಗರ್ಭಪಾತ ನಮ್ಮ ಹಕ್ಕು ಎನ್ನುತ್ತಿದ್ದ ಮಹಿಳೆಯರ ಮೇಲೆ ಪೊಲೀಸರು ಮೆಣಸಿನಪುಡಿ ಎರಚಿ ಅವರನ್ನು ದೂರ ಅಟ್ಟಿದರು.

ಇದನ್ನು ಓದಿ: ಮುಟ್ಟಿನ ಬಗ್ಗೆ ಭೈರಪ್ಪನವರ ಹೇಳಿಕೆಗೆ ಬಿಸಿಮುಟ್ಟಿಸಿದ ನೆಟ್ಟಿಗರು.. ಇಲ್ಲಿವೆ ನೋಡಿ ಕೆಲ ಸ್ಯಾಂಪಲ್ಸ್..

ಅತ್ಯಾಚಾರದಿಂದ ಬಸಿರಾದರೆ ಮಾತ್ರ ಅದನ್ನು ತೆಗೆಸಲು ಮೆಕ್ಸಿಕೋ, ಬ್ರೆಜಿಲ್, ಚಿಲಿ, ಅರ್ಜೆಂಟೀನ ಮುಂತಾದ ದೇಶಗಳಲ್ಲಿ ಅವಕಾಶವಿದೆ. ಇನ್ನುಳಿದಂತೆ ಗರ್ಭಪಾತ ಹೆಣ್ಣಿನ ಆಯ್ಕೆ ಆಗಿಲ್ಲ. ಆದರೆ, ಹೊಂಡುರಾಸ್, ಎಲ್ ಸಾಲ್ವಡಾರ್, ನಿಕರಾಗುವ ಮುಂತಾದ ದೇಶಗಳಲ್ಲಿ ಅದಕ್ಕೂ ಅವಕಾಶವಿಲ್ಲ. ಅದನ್ನು ಹೊತ್ತು, ಹೆತ್ತು, ಜೀವನವಿಡೀ ಅವಳು ನಿರ್ವಹಿಸಬೇಕು. ಆದ್ದರಿಂದ ಈ ದೇಶಗಳೂ ಸೇರಿ ಜಗತ್ತಿನ ಹಲವು ಭಾಗಗಳಲ್ಲಿ ಹೆಣ್ಣುಮಕ್ಕಳು, ವೈದ್ಯಕೀಯ ತರಬೇತಿ ಇಲ್ಲದ ಜನರಿಂದ ಗುಟ್ಟಾಗಿ ಗರ್ಭಪಾತ ಮಾಡಿಸಿಕೊಂಡು ಸೋಂಕು, ಶಸ್ತ್ರಗಳ ದುರ್ಬಳಕೆ ಮತ್ತಿತರ ಕಾರಣಗಳಿಂದ ಸಾವಿಗೀಡಾಗುತ್ತಾರೆ. ಹೆಣ್ಣಿನ ದೇಹ ತನಗೆ ಸೇರಿದ್ದು ಎಂಬ ಪುರುಷ ಮನೋಭಾವದಿಂದ ಕಾನೂನು ಕೂಡ ಅವಳಿಗೆ ಶತ್ರುವಾಗಿರುತ್ತದೆ. ಆ ಮನೋಭಾವ ಬದಲಾಯಿಸಲು ಪ್ರಯತ್ನಗಳು ನಡೆದರೆ ಮಾತ್ರ ಅವಳ ದುಸ್ಥಿತಿ ಬದಲಾಗಬಹುದು.

ಕೃಪೆ: ಹಿತೈಷಿಣಿ ಮಹಿಳಾ ಪತ್ರಿಕೆ

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಮಹಿಳೆಯರ ಗರ್ಭದ ಮೇಲೆ ಅವರಿಗೇ ಹಕ್ಕಿಲ್ಲದಿರುವುದು ಖಂಡನಾರ್ಹ. ಇಂತಹ ಅಮಾನವೀಯ ಕಾನೂನುಗಳನ್ನು ತೊಲಗಿಸಲು ವಿಶ್ವಸಂಸ್ಥೆಯು ಪ್ರಯತ್ನ ಮಾಡಿಬೇಕು

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...