Homeಚಳವಳಿಮುಟ್ಟಿನ ಬಗ್ಗೆ ಭೈರಪ್ಪನವರ ಹೇಳಿಕೆಗೆ ಬಿಸಿಮುಟ್ಟಿಸಿದ ನೆಟ್ಟಿಗರು.. ಇಲ್ಲಿವೆ ನೋಡಿ ಕೆಲ ಸ್ಯಾಂಪಲ್ಸ್..

ಮುಟ್ಟಿನ ಬಗ್ಗೆ ಭೈರಪ್ಪನವರ ಹೇಳಿಕೆಗೆ ಬಿಸಿಮುಟ್ಟಿಸಿದ ನೆಟ್ಟಿಗರು.. ಇಲ್ಲಿವೆ ನೋಡಿ ಕೆಲ ಸ್ಯಾಂಪಲ್ಸ್..

- Advertisement -
- Advertisement -

ದಸರಾ ಉದ್ಘಾಟನಾ ಭಾಷಣದಲ್ಲಿ “ಮಹಿಳೆ ಮುಟ್ಟಾದಾಗ ಆಫೀಸಿಗೆ ಹೋಗೋದು ಬೇರೆ ದೇವಸ್ಥಾನಕ್ಕೆ ಹೋಗೋದು ಬೇರೆ” ಎಂದು ಹೇಳುವ ಮೂಲಕ ಮಹಿಳೆಯರ ಸಹಜ ಮುಟ್ಟನ್ನು ಅವಮಾನಿಸಿದ್ದ ಎಸ್.ಎಲ್ ಭೈರಪ್ಪನವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.

ಸಾಹಿತಿ ಭೈರಪ್ಪನವರ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆಗಳು ಬಂದಿದ್ದು ಆಯ್ದ ಕೆಲವು ಇಲ್ಲಿವೆ.

ಎಡಗಡೆ ಮುಖ್ಯಮಂತ್ರಿ ಯಡಿಯೂರಪ್ಪ, ಬಲಗಡೆ ಕೇಂದ್ರ ಸಚಿವ ಸದಾನಂದರನ್ನು ಕೂರಿಸಿಕೊಂಡಿದ್ದ ಬೈರಪ್ಪ ನಾಡಿನ ಬಗ್ಗೆ ಕಾಳಜಿ ಇರುವ ಮನುಷ್ಯನೇ ಆಗಿದ್ದರೆ, ಪ್ರವಾಹದಿಂದ ಬದುಕು ಕಳೆದುಕೊಂಡು ಬೀದಿಗೆ ಬಿದ್ದಿರುವ ಉತ್ತರ ಕರ್ನಾಟಕ, ಉತ್ತರ ಕನ್ನಡ, ಕರಾವಳಿಯ ಜನರ ಬದುಕಿನ ಬಗ್ಗೆ‌ ಮಾತನಾಡಬೇಕಿತ್ತು. ಅವರು ಬದುಕು ಕಟ್ಟಿಕೊಳ್ಳಲು ಸರ್ಕಾರ ಏನು ಮಾಡಬೇಕು ಎಂಬ ಸಲಹೆ ಕೊಡಬಹುದಿತ್ತು.

ಅಲ್ಲಿ ಕೂತು ಬೆಂಡೆತ್ತಬೇಕಾಗಿರುವುದು ಪ್ರವಾಹ ಪರಿಹಾರಕ್ಕೆಂದು ಚಿಕ್ಕಾಸೂ ಕೊಡದ ಕೇಂದ್ರ ಸರ್ಕಾರವನ್ನು. ವಿಚಾರವಾದಿಗಳು, ಮುಟ್ಟಾಗುವ ಮಹಿಳೆಯರ ಬಗ್ಗೆ ಮಾತಾಡಿದರೆ ಯಾರಿಗೆ ಏನು ಪ್ರಯೋಜನ?

“ನಾಡಹಬ್ಬ ಉದ್ಘಾಟಕರಾಗಿ ಯಾವ ವಿಷಯ ಮಾತನಾಡಬೇಕು ಎಂಬ ಕನಿಷ್ಠ ಜ್ಞಾನವಿಲ್ಲದ ಬೈರಪ್ಪನವರಿಗೇನಾದರೂ, ಈ ಎಲ್ಲಾ ಘನಂದಾರಿ ಸಾಧನೆಗೆ ಜ್ಞಾನಪೀಠ ಕೊಟ್ಟರೆ ಅಲ್ಲಿಗೆ ಜ್ಞಾನಪೀಠದ ಮಾನ ಮೂರ್ಕಾಸಿಗೆ ಹರಾಜಾದಂತೆಯೇ ಸರಿ” ಎಂದು ಪತ್ರಕರ್ತೆ ಹೇಮಾವತಿ ವೆಂಕಟ್‌ರವರು ಕಿಡಿಕಾರಿದ್ದಾರೆ.

ಮುಟ್ಟು ಎಂಬ ಪ್ರಕೃತಿ ವಿಸ್ಮಯ ಪುರುಷರ ದೇಹದಲ್ಲಿ ಆಗಿರುತ್ತಿದ್ದರೆ, ಇಲ್ಲ ಶಿಶ್ನವೇ ತಿಂಗಳಿಗೆ ನಾಲ್ಕೈದು ದಿನಗಳ ಕಾಲ ರಕ್ತ ಕಾರುವಂತೆ ಇದ್ದಿದ್ದರೆ ಅದಕ್ಕೆಂದೇ ಹಬ್ಬ, ವೃತಗಳು ಹುಟ್ಟಿರುತ್ತಿದ್ದವು. ಹಾಗಾಗಿ ಭೈರಪ್ಪನಂಥವರ ವಿರೋಧ ಕೇವಲ ಮುಟ್ಟಿಗಲ್ಲ ಬದಲಾಗಿ ಅದು ಪುರುಷ ಪ್ರಧಾನ ಸಮಾಜ ಮಹಿಳಾ ವಿರೋಧಿ ಧೋರಣೆಗಳ ಒಂದು ಭಾಗವಷ್ಟೇ. ಒಂದಂತೂ ಸತ್ಯ. ಮುಟ್ಟು ಪುರುಷರ ದೇಹದಲ್ಲಾಗಿರುತ್ತಿದ್ದರೂ ಮನೆಯಿಂದ ಆಚೆ ಹೆಣ್ಮಕ್ಕಳೇ ಹೋಗಬೇಕಾಗಿತ್ತು. ಮುಟ್ಟು ಪವಿತ್ರ. ಮುಟ್ಟಾದ ಪುರುಷರು Holy of Holies Periodನಲ್ಲಿರುವಾಗ ಮುಟ್ಟಾಗದ ಅಪವಿತ್ರ ಮಹಿಳೆಯರು ಪುರುಷರಿಂದ ದೂರವಿರಬೇಕೆಂದು ಕಟ್ಟಳೆಗಳನ್ನು ಮಾಡಿ ಮಹಿಳೆಯರನ್ನೇ ಮನೆಯಿಂದ ಹೊರಗಿಡುತ್ತಿದ್ದರು. ಪುರುಷ ಪ್ರಧಾನ ವ್ಯವಸ್ಥೆಯ ನೀಚತನಕ್ಕೆ ಪರಿಧಿಗಳಿಲ್ಲ. ಎಂದು ಆಲ್‌ಮೀಡಿಯಾ ಗ್ಲಾಡ್‌ಸನ್ ಅಭಿಪ್ರಾಯಪಟ್ಟಿದ್ದಾರೆ.

ಕರುಳಿನಲ್ಲಿ ಮಲವಿರುತ್ತದೆ. ಮೂತ್ರಾಶಯದಲ್ಲಿ ಮೂತ್ರ ಇರುತ್ತದೆ. ಅದನ್ನೆಲ್ಲ ಭರ್ತಿ ಇರಿಸಿಕೊಂಡು ದೇವಸ್ಥಾನಕ್ಕೆ ಹೋಗಬಹುದು. ಆದರೆ ಋತುಸ್ರಾವ ಅನುಭವಿಸುತ್ತಿರುವ ಹೆಣ್ಣುಮಗಳು ಮಾತ್ರ ದೇವಸ್ಥಾನ ಪ್ರವೇಶಿಸಕೂಡದು ಅಲ್ವಾ ಬೈರಪ್ಪನವರೇ?!
ಸಾಹಿತಿಯಾದವರಲ್ಲಿ ಜೀವಪರ ಸಂವೇದನೆ ಇರುತ್ತದೆ ಅಂದುಕೊಂಡಿದ್ದೆವು, ವಯಸ್ಸಾಗುತ್ತಿದ್ದಂತೆ ಬುದ್ಧಿ ಬೆಳೆಯುತ್ತದೆ ಅಂದುಕೊಂಡಿದ್ದೆವು! ತಪ್ಪು ನಮ್ಮದೇ…

ಒಬ್ಬ ಅತ್ಯಾಚಾರಿ ದೇವಸ್ಥಾನ ಪ್ರವೇಶಿಸಬಹುದು. ಕೊಲೆಗಡುಕ, ಕಳ್ಳ, ಭ್ರಷ್ಟ, ವಂಚಕ, ದರೋಡೆಕೋರ ದೇವಸ್ಥಾನ ಪ್ರವೇಶಿಸಬಹುದು. ಜಗತ್ತಿಗೆ ಜೀವ ಕೊಟ್ಟ ಹೆಣ್ಣುಮಗಳು ಮಾತ್ರ ಋತುಸ್ರಾವ ಕಾರಣಕ್ಕೆ ದೇವಸ್ಥಾನ ಪ್ರವೇಶಿಸಬಾರದು!.
ವಾವ್! ಅದ್ಭುತ ವಾದ ಬೈರಪ್ನೋರೆ!-
ಎಂದು  ಶ್ರೀನಿವಾಸ ಕಾರ್ಕಳರವರು ಬರೆದಿದ್ದಾರೆ.

ಅದೇ ರೀತಿ ಶ್ರೀನಿವಾಸ ಕಾರ್ಕಳರವರು ಮುಟ್ಟಿನ ಬಗ್ಗೆ ಬರೆದಿದ್ದ ಜಾಗೃತಿ ಹಾಡು ಕೂಡ ವೈರಲ್ ಆಗಿದೆ.

ಮುಟ್ಟುಮುಟ್ಟೆಂದೇಕೆ ಕೀಳಾಗಿ ಕಾಣುವಿರಿ
ಮುಟ್ಟಿನಿಂದಲ್ಲವೇ ನಮ್ಮೆಲ್ಲರ ಹುಟ್ಟು
ಮುಟ್ಟುಮುಟ್ಟೆಂದೇಕೆ ಕೀಳರಿಮೆ ಹೊಂದುವಿರಿ
ಮುಟ್ಟಲ್ಲವೇ ನಮ್ಮ ಸೃಷ್ಟಿಯ ಗುಟ್ಟು //

ಮುಟ್ಟು ಕಾಣದ ಹೆಣ್ಣು ಬಸಿರು ಹೊಂದುವುದಿಲ್ಲ
ತಾಯಿಯಾಗುವುದಿನ್ನು ಸಾಧ್ಯವೇನು?
ನಮ್ಮನ್ನು ಹೆತ್ತವಳು ಮುಟ್ಟಾಗದಿರುತಿದ್ರೆ
ಭೂಮಿಯಲಿ ನಾವು ಇರುತ್ತಿದ್ದೆವೇನು //

ಮುಟ್ಟುಸ್ರಾವಗಳೆಲ್ಲ ಪ್ರಕೃತಿಯ ಸಹಜ ಕ್ರಿಯೆ
ಬೆವರು ಬಾಧೆಗಳಂತೆ ಅಲ್ಲವೇನು?
ಮುಟ್ಟಾದ ಹೆಣ್ಣನ್ನು ದೂರ ಅಟ್ಟುವುದೇಕೆ
ಅವಳು ಮಾಡಿದ ಘೋರ ಪಾಪವೇನು //

ಜಗದ ಜೀವಿಗಳೆಲ್ಲ ದೈವ ಸೃಷ್ಟಿ ಆದರೆ
ಮುಟ್ಟು ಕೂಡಾ ಪವಿತ್ರ ಹೌದು ತಾನೇ?
ದೇವರದೇ ಸೃಷ್ಟಿಯು ಶುಭದ ಕಾರ್ಯಗಳಲ್ಲಿ
ವರ್ಜ್ಯ ಅನ್ನುವುದೆಲ್ಲ ತಪ್ಪು ತಾನೇ //

ಮುಟ್ಟಿನ ಕುರಿತಾಗಿ ಸತ್ಯ ಸಂಗತಿ ಅರಿತು
ಹೊಸ ದೃಷ್ಟಿಯನು ನಾವು ಹೊಂದಬೇಕು
ಕುರುಡು ನಂಬಿಕೆಗಳನು ಇಲ್ಲವಾಗಿಸಿ ನಾವು
ಮಾನವೀಯತೆಯಿಂದ ಬದುಕಬೇಕು //..

“ಮುಟ್ಟಾಗುವುದು ಅಪವಿತ್ರ ಅನ್ನೋ ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವ ಈ ಭೈರಪ್ಪನಿಗೆ ತನ್ನ ಮನೆಯಲ್ಲಿರುವ ಹೆಣ್ಮಕ್ಳು ನೆನಪಾಗುವುದೇ ಇಲ್ವಾ?” ಎಂದು ಮಹಾಲಿಂಗಪ್ಪ ಆಲಬಾಳರವರು ಪ್ರಶ್ನಿಸಿದ್ದಾರೆ.

“ಹೆಣ್ಣು ಮಕ್ಳ ಮುಟ್ಟಿನ ಸ್ರಾವ ಅವರ ಗರ್ಭಕೋಶದಲ್ಲಿ ಮಾತ್ರ ಇರುತ್ತೆ.
(ಕೆಲವು) ಗಂಡಸರಿಗೆ ಸದಾ ಕಾಲ ತಲೇಲೆ ಇರುತ್ತೆ. ಯಾರಪ್ಪಾ ಹೆಚ್ಚು ಮೈಲಿಗೆ ಈಗ?” ಎಂದು ಪ್ರೀತಿ ನಾಗರಾಜ್ ಪ್ರಶ್ನೆ ಹಾಕಿದ್ದಾರೆ..

“ಮುಟ್ಟಾದ ಹೊಲೆಯೊಳಗೆ ಹುಟ್ಟಿಹುದು ಜಗವೆಲ್ಲಾ
ಮುಟ್ಟಬೇಡವೆಂದು ತೊಲಗುವ ಹಾರುವನು
ಹುಟ್ಟಿದನು ಎಲ್ಲಿ ಸರ್ವಜ್ಞ?” ಎಂದು ನೀಲಾ ಕೆ ಗುಲಬರ್ಗಾ ರವರು ಬರೆದುಕೊಂಡಿದ್ದಾರೆ.

“ಭೈರಪ್ಪನವರೇ ನಮ್ಗೆ ‘ಕಾಯಕವೇ ಕೈಲಾಸ’
ಕೈಲಾಸದಂತ ಆಫೀಸ್ಗೆ ಮುಟ್ಟಾದಾಗ ನಾವು ಹೋಗೋದು ಬೇಡ.
ನಿಮ್ ಹೆಸರಲ್ಲಿ ತಿಂಗ್ಳಿಗೆ ಮೂರ್ ದಿನ ರಜೆ ಕೊಡಿಸ್ಬಿಡಿ ಪ್ಲೀಸ್” ಎಂದು ಚೈತ್ರ ಕೋಟುರುರವರು ಟ್ರೋಲ್ ಮಾಡಿದ್ದಾರೆ.

ತಕಳ್ರಪ್ಪಾ… ಮುಟ್ಟಲ್ಲೇ ಹುಟ್ಟಿದವರು ಮುಟ್ಟಿನ ಬಗ್ಗೆ ಮಾತಾಡುತ್ತಾರೆ! ಎಂದು ಕಾದಂಬಿನಿ ರಾವಿಯವರು ಕಿಚಾಯಿಸಿದ್ದಾರೆ.

ಹಿರಿಯ ಸಾಹಿತಿಯೊಬ್ಬರು ಬರೆದ ಈ ಹೇಳಿಕೆ ಸಾಕಷ್ಟು ಮೆಚ್ಚುಗೆ ಗಳಿಸಿದೆ. ಇದನ್ನು ಕಾದಂಬಿನಿ ರಾವಿಯವರು ಮೊದಲು ಷೇರ್ ಮಾಡಿಕೊಂಡಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಬಸವಣ್ಣ ಅಂತರ್ಜಾತೀಯ ವಿವಾಹ ಮಾಡಿಸಿದ ಸಂದರ್ಭದಲ್ಲಿ ಸಮಾಜದಲಿ ಆರಥಿಕತೆ ಪಕವವಾಗಿರಲಿಲ ಎಂದು ಹೇಳಿದ ಭೈರಪ್ಪನವರೆ ನಿಮ್ಮ ಬುದ್ಧಿಗೆ ಸವಲಪ ಸಗಣಿ ಹಾಕಿಕೊಳ್ಳಿ. ಬಸವಣ್ಣನವರು ಆ ಇಬ್ಬರು ಗಂಡು ಹೆಣ್ಣು ಪೃಕೃತಿ ಸಹಜ ಆಕರ್ಷಣೆಗೊಂಡಿದರಿಂದ ಅವರಿಬ್ಬರಿಗೂ ಮುತಸದಿಯ ಜಾಗೃತೆ ವಹಿಸಿ ಆಗಿನ ಕಾಲದ ಸಮಾಜ ಹಾಕಿಕೊಂಡ ಜಾತಿಯತೆಯ ಸಾಮಾಜಿಕ ಕಟ್ಟಳೆಯಿಂದ ಇವರಿಬ್ಬರಿಗೂ ತೊಂದರೆಯಾಗಬಾರದೆಂಬ ಕಳಕಳಿಯಿಂದ ಇಬ್ಬರಿಗೂ ಸಾಂಕೇತಿಕವಾಗಿ ಲಿಂಗ ದೀಕ್ಷೆ ಕೊಟ್ಟು ಸತಿಪತಿ ಗಳಾಗಿ ಬಾಳುವಂತೆ ಮದುವೆ ಮಾಡಿಸಿ ಜಾತ್ಯತೀತದ ಆದರ್ಶ ವನ್ನು ಎತ್ತಿ ಹಿಡಿದರು. ವಸ್ತು ಸ್ಥಿತಿ ವಿಷಯದ ಅಜಾನಿಗಳಾದ ನೀವು ನಿಮ್ಮ ಗೊಮುಖ ವಾಘೃದ ಮುಖವಾಡ ಹಾಕಿ ಕೊಂಡು ಕೈಗೆ ಮೈಕ್ ಮತ್ತು ನಿಂತು ಕೊಳಲು ಪುಕ್ಕಟೆಯ ವೇದಿಕೆ ಸಿಕಿದರಿಂದ ನಾನು ಹೇಳುವೆನೊ ಜನ ಅದನ್ನು ಕೇಳುತ್ತಾರೆ ಎಂಬ ಅಹಂನಿಂದ ಬಸವಣ್ಣನವರ ಮಾಡಿಸಿದ ಮದುವೆಯನ್ನು ಆರಥಿಕತೆ ರೂಪಕ್ಕೆ ಹೋಗಿ ಜೊಡಿಸಿದಿರಲ ನಿಮ್ಮ ಅಪೃಬುದತೆಗೆ ಛೀ ಮಾರಿ ಹಾಕುತಿದೆನೆ.
    ಹಾಗಾದರೆ ಇವತಿಗೆ ಆರಥಿಕತೆ ಪಕವವಾಗಿದೆ ಎನುವುದಾದರೆ ಒಬ್ಬರಿಗೂಬಬರಿಗೂ ಯಾವ ಆಕರ್ಷಣೆ ಇಲ್ಲದೇ ಕೇವಲ ಆರಥಿಕ ಆಕರ್ಷಣೆ ಗೊಸಕರ ಮದುವೆ ಯಾಗಬೇಕಾ. ಛೀ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...