Homeಮುಖಪುಟಚುನಾವಣಾ ಬಾಂಡ್ ಯೋಜನೆ; ತಿನ್ನುವೆ, ತಿನ್ನಲು ಬಿಡುವೆ, ಅದೂ ಕಾನೂನಿನ ಆಧಾರದ ಮೇಲೆಯೇ!

ಚುನಾವಣಾ ಬಾಂಡ್ ಯೋಜನೆ; ತಿನ್ನುವೆ, ತಿನ್ನಲು ಬಿಡುವೆ, ಅದೂ ಕಾನೂನಿನ ಆಧಾರದ ಮೇಲೆಯೇ!

- Advertisement -
- Advertisement -

ಆಡಳಿತ ನಡೆಸುವವರು ಮತ್ತು ವ್ಯಾಪಾರಿ ವರ್ಗದ ನಡುವೆ ಇರುವ ಸಹಕಾರ, ಸಹಯೋಗ, ಸಮನ್ವಯ ಹಾಗೂ ಅದರೊಂದಿಗೆ ನಡೆಯುವ ರಹಸ್ಯ ಒಪ್ಪಂದಗಳ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಆದರೆ ಇಂತಹ ಏರ್ಪಾಡುಗಳು ಅತ್ಯಂತ ಅನೌಪಚಾರಿಕವಾಗಿರುತ್ತವೆ ಹಾಗೂ ಕಾನೂನಿನ ಪರಿಭಾಷೆಯೊಳಗೆ ಬರದಂತಹ ಏರ್ಪಾಡುಗಳಾಗಿರುತ್ತವೆ ಹಾಗೂ ಇಂತಹ ಏರ್ಪಾಡುಗಳಾಗಿವೆ ಅಥವಾ ಅಂತಹ ಸಾಧ್ಯತೆಗಳಿವೆ ಎನ್ನುವ ಸಮಯದಲ್ಲಿ ಇನ್ನೂ ಹೆಚ್ಚಿನ ನಿರ್ಬಂಧಗಳಿರುತ್ತವೆ. ಈ ಮುನ್ನ ಯಾವುದೇ ಉದ್ದಿಮೆ ಅಥವಾ ವ್ಯಾವಹಾರಿಕ ಸಂಸ್ಥೆ ತನ್ನ ಆಡಳಿತ ಹಾಗೂ ನೀತಿಗಳಲ್ಲಿ ಸರ್ಕಾರವನ್ನು ದೊಡ್ಡ ಮಟ್ಟದಲ್ಲಿ ಪ್ರಭಾವಿಸದಂತೆ ತಡೆಯೊಡ್ಡಲು ಹೆಚ್ಚು ಕಟ್ಟುನಿಟ್ಟಾದ ನಿಯಂತ್ರಣ ಮತ್ತು ನಿರ್ಬಂಧನೆಗಳನ್ನು ಹೇರಲಾಗಿತ್ತು. ಉದಾಹರಣೆಗೆ, ರಾಜಕೀಯ ಪಕ್ಷಗಳಿಗೆ ಯಾವುದೇ ಕಂಪನಿಯು ದೇಣಿಗೆ ನೀಡಬೇಕೆಂದಿದ್ದರೆ ಅವುಗಳು ತಮ್ಮ ಕಳೆದ ಮೂರು ಹಣಕಾಸು ವರ್ಷಗಳಲ್ಲಿ ಆದ ಸರಾಸರಿ ನಿವ್ವಳ ಲಾಭದಲ್ಲಿ ಗರಿಷ್ಠ 7.5% ಮಾತ್ರ ನೀಡಬಹುದಾಗಿತ್ತು.

ಆದರೆ, ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆಯ ವಿಷಯದಲ್ಲಿ ಪಾರದರ್ಶಿಕತೆಯನ್ನು ತರುವ ನೆಪದಲ್ಲಿ ನ್ಯಾಷನಲ್ ಡೆಮಾಕ್ರೆಟಿಕ್ ಅಲಾಯನ್ಸ್ (ಎನ್‌ಡಿಎ) ಸರಕಾರವು ಮೋದಿಯ ನೇತೃತ್ವದಲ್ಲಿ ಈ ನಿಯಂತ್ರಣ ಕಾನೂನು ಮತ್ತು ನೀತಿಗಳಲ್ಲಿ ಕೆಲವು ತಿದ್ದುಪಡಿಗಳನ್ನು ಮಾಡಿತು. ಅದರಿಂದ ಆಗಿದ್ದೇನೆಂದರೆ, ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ಒಟ್ಟಾರೆ ಪ್ರಕ್ರಿಯೆಯು ಇನ್ನಷ್ಟು ಅಪಾರದರ್ಶಕವಾಯಿತು. ವಿರೋಧ ಪಕ್ಷಗಳ ಮೇಲೆ ಅನಧಿಕೃತ ನಿಯಂತ್ರಣಕ್ಕೆ ಮತ್ತು ಅವುಗಳನ್ನು ಮ್ಯಾನಿಪುಲೇಟ್ ಮಾಡುವುದಕ್ಕೆ ಎಡೆಮಾಡಿಕೊಟ್ಟಿತು, ಅಷ್ಟೇ ಅಲ್ಲದೇ, ದಾನಿಗಳ ಮೇಲೆಯೂ ನಿಯಂತ್ರಣ ಸಾಧಿಸಿದಂತಾಯಿತು ಹಾಗೂ ಶೆಲ್ ಕಂಪನಿಗಳ ಮೂಲಕ ಮನಿ ಲಾಂಡರಿಂಗ್‌ನ ಕೆಲಸವನ್ನು ಕಾನೂನುಬದ್ಧಗೊಳಿಸಿದಂತಾಯಿತು.

2018ರಲ್ಲಿ ಚುನಾವಣಾ ಬಾಂಡ್‌ಗಳನ್ನು ತರುವುದಕ್ಕೆ ಮುನ್ನ ಮೋದಿ ಸರಕಾರವು 2017ರಲ್ಲಿ ಕಂಪನೀಸ್ ಆಕ್ಟ್‌ಗೆ ತಿದ್ದುಪಡಿ ತಂದಿತು. ಅದರಿಂದ ಆಗಿದ್ದು, ರಾಜಕೀಯದಲ್ಲಿನ ಮತ್ತು ಕಾರ್ಪೊರೆಟ್ ಜಗತ್ತಿನ ನೀತಿಬಾಹಿರ ಶಕ್ತಿಗಳೆಲ್ಲವೂ ಒಂದೆಡೆ ಬಂದು, ಕಾನೂನುಬದ್ಧವಾಗಿರುವ ಒಂದು ರೀತಿಯ ಅಪವಿತ್ರ ಮೈತ್ರಿಯನ್ನು ರಚಿಸಿಕೊಳ್ಳಲು ಅನುವು ಮಾಡಿಕೊಟ್ಟಿತು; ಆಗ ಕಾರ್ಪೊರೆಟ್ ಕಂಪನಿಗಳಿಂದ, ಆ ಕಂಪನಿಗಳ ಅಮಾಯಕ ಷೇರುದಾರರಿಂದ ಮೌಲ್ಯದಿಂದ ಲೂಟಿ ಹೊಡೆಯಲು, ಕಪ್ಪುಹಣವನ್ನು ಬಿಳಿಹಣವಾಗಿ ಮಾರ್ಪಾಡಾಗಿಸಿ ದೇಶದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಮರಳಿ ತರಲು ರೌಂಡ್ ಟ್ರಿಪಿಂಗ್ ಮಾಡಲು ಮಾರಾಟ ಕಡಿಮೆ ತೋರಿಸುವುದು ಮುಂತಾದ ಕೃತ್ಯಗಳಿಗೆ ಎಡೆಮಾಡಿಕೊಟ್ಟಂತಾಯಿತು; ಇದು ಆಗಿದ್ದಕ್ಕೆ ಒಂದು ಮುಖ್ಯ ಕಾರಣ, ಆಯಾ ಕಂಪನಿಗಳ ಹಿಂದಿನ ಮೂರು ವರ್ಷಗಳಲ್ಲಿ ಸರಾಸರಿ ನಿವ್ವಳ ಲಾಭದಲ್ಲಿ 7.5% ಮಾತ್ರ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಬೇಕೆಂಬ ನಿಯಮವನ್ನು ತೆಗೆದುಹಾಕಿದ್ದಕ್ಕೆ. ಇದರಿಂದ ನಿಜವಾಗಿ ಆಗಿದ್ದೇನೆಂದರೆ, ಆದಾಯದ ದಾಖಲೆಗಳಲ್ಲಿ ವಿಂಡೋ ಡ್ರೆಸಿಂಗ್ (ತೆರಿಗೆ ಉಳಿಸಲು ತಮ್ಮ ಬ್ಯಾಲೆನ್ಸ್ ಶೀಟ್‌ಅನ್ನು ತಿರುಚುವುದು) ಮಾಡುವುದರಲ್ಲಿ ನಿರತವಾಗುವುದು ಹೆಚ್ಚಿತು ಹಾಗೂ ರಾಜಕೀಯ ಪಕ್ಷಗಳಿಗೆ ಎಲ್ಲೆ ಇಲ್ಲದೇ ದೇಣಿಗೆ ನೀಡುವ ಹೆಸರಿನಲ್ಲಿ ಬ್ಯಾಲೆನ್ಸ್ ಶೀಟ್‌ಗಳಿಂದ ಹಣವನ್ನು ತೆಗೆದುಕೊಳ್ಳುವ ಪ್ರಕ್ರಿಯೆ ಶುರುವಾಯಿತು. ಈ ತಿದ್ದುಪಡಿಯ ಪರಿಣಾಮವಾಗಿ ಶೆಲ್ ಕಂಪನಿಗಳಲ್ಲಿ ಹಣ ತೊಡಗಿಸಲೆಂದೇ ಇನ್ನೊಂದು ಶೆಲ್ ಕಂಪನಿಯನ್ನು ಸೃಷ್ಟಿಸಿ, ಆಡಳಿತಾರೂಢ ರಾಜಕೀಯ ಪಕ್ಷಗಳಿಗೆ ಯಾವುದೇ ನಿಯಂತ್ರಣವಿಲ್ಲದೇ, ಮುಂಚೆ ಇದ್ದ ಒಟ್ಟಾರೆ ಲಾಭದ 7.5%ನ ಮಿತಿಯ ನಿಯಂತ್ರಣವಿಲ್ಲದೇ ಲಂಚ ನೀಡಲು ದಾರಿ ಮಾಡಿಕೊಟ್ಟಂತಾಯಿತು.

ನಂತರ 2018ರಲ್ಲಿ ಇಂತಹ ಕಾನೂನುಬಾಹಿರವಾಗಿ ಹಣವನ್ನು ವರ್ಗಾವಣೆ ಮಾಡುವ ಪ್ರಕ್ರಿಯೆಯನ್ನು ಸರಳಗೊಳಿಸಲು (ಸಕ್ರಮಗೊಳಿಸಲು) ’ಚುನಾವಣಾ ಬಾಂಡ್‌ಗಳ ವ್ಯವಸ್ಥೆ’ಯನ್ನು ಪರಿಚಯಿಸಲಾಯಿತು. 2017ರ ಫೆಬ್ರುವರಿ 1ರಂದು ಒಕ್ಕೂಟ ಬಜೆಟ್ ಭಾಷಣದಲ್ಲಿ ಆಗಿನ ಹಣಕಾಸು ಸಚಿವ ಅರುಣ್ ಜೇಟ್ಲಿಯು ಅತ್ಯಂತ ವ್ಯಂಗ್ಯವಾಗಿ ಹೇಳಿದ್ದೇನೆಂದರೆ, ಭಾರತದಲ್ಲಿ ರಾಜಕೀಯ ದೇಣಿಗೆ ನೀಡುವ ವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ಈ ಕ್ರಮ ತರಲಾಗುತ್ತಿದೆ ಎಂದರು. ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ಪ್ರಕ್ರಿಯೆಯಲ್ಲಿ ಪಾರದರ್ಶಿಕತೆ ಮತ್ತು ಹೊಣೆಗಾರಿಕೆಯನ್ನು ತರಲು ಈ ಚುನಾವಣಾ ಬಾಂಡ್ ಯೋಜನೆಯನ್ನು ತರಲಾಗಿದ್ದರೂ, ಈ ಯೋಜನೆಯ ವಿನ್ಯಾಸವು ತನ್ನ ಗುರಿಯ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂಬುದು ಸ್ಪಷ್ಟ.

ಚುನಾವಣಾ ಬಾಂಡ್‌ನ ಯೋಜನೆಯ ವಿನ್ಯಾಸದಲ್ಲಿ ಇರುವ ಅತ್ಯಂತ ಗಮನಾರ್ಹ ಲಕ್ಷಣವೆಂದರೆ 1000 ರೂಪಾಯಿಗಳಿಂದ 1 ಕೋಟಿ ರೂಪಾಯಿಗಳವರೆಗಿನ ಮೌಲ್ಯದಲ್ಲಿ ಬೀಯರರ್ ಇನ್‌ಸ್ಟ್ರುಮೆಂಟ್‌ನ್ನು ನೀಡುವ ಸ್ವರೂಪ; ಅದು ಪಾರದರ್ಶಿಕತೆ ಮತ್ತು ಹೊಣೆಗಾರಿಕೆಯ ನಿಟ್ಟಿನಲ್ಲಿ ಅತ್ಯಂತ ಗಂಭೀರವಾದ ಸಂಶಯಗಳನ್ನು ಸೃಷ್ಟಿಸುತ್ತದೆ. (ಬೀಯರರ್ ಇನ್‌ಸ್ಟ್ರುಮೆಂಟ್- ಆ ಇನ್‌ಸ್ಟ್ರುಮೆಂಟ್‌ಅನ್ನು ಹೊಂದಿರುವರಿಗೆ ಅದರ ಮೌಲ್ಯವು ಅನಾಮಧೇಯವಾಗಿ ಸಲ್ಲುತ್ತದೆ. ಅದು ಅದರ ಮೇಲೆ ದುಡ್ಡು ಕೊಟ್ಟಿದ್ದವರ ಅಥವಾ ಸ್ವೀಕರಿಸಿದ್ದವರ ಹೆಸರು ಇರುವುದಿಲ್ಲ.) ಅಂದರೆ ಈ ಪ್ರಕ್ರಿಯೆಗೂ ಮತ್ತು ಒಂದು ಪಕ್ಷಕ್ಕೆ ನಗದು ರೂಪದಲ್ಲಿ ಹಣ ಕೊಡುವುದಕ್ಕೂ ವ್ಯತ್ಯಾಸವಿಲ್ಲ. ಏಕೆಂದರೆ ನಗದು ಹಣವೂ ಬೀಯರರ್ ಇನ್‌ಸ್ಟ್ರುಮೆಂಟ್ ಆಗಿದೆ. ಆದರೆ ಹಣವನ್ನು ನಗದು ರೂಪದಲ್ಲಿ ನೀಡಲು ಗರಿಷ್ಠ 2000/- ರೂಪಾಯಿಯ ಮಿತಿ ಇದೆ. ಆದರೆ ಚುನಾವಣಾ ಬಾಂಡ್‌ಗಳ ಗರಿಷ್ಠ ಮಿತಿ 1 ಕೋಟಿ ರೂಪಾಯಿ. ನಗದು ಹಣ ಮತ್ತು ಚುನಾವಣಾ ಬಾಂಡ್‌ನಲ್ಲಿ ಇರುವ ಅನಾಮಧೇಯತೆಯ ಸ್ವರೂಪದಿಂದ ರಾಜಕೀಯ ಪಕ್ಷಗಳಿಗೆ ಅದರಲ್ಲೂ ಆಡಳಿತಾರೂಢ ಪಕ್ಷಗಳಿಗೆ ಲಂಚ ನೀಡುವುದು ಅತ್ಯಂತ ಸುಲಭವಾಗಿದೆ. ಈಗ ಚುನಾವಣಾ ಬಾಂಡ್ ಇಲ್ಲದೇ ಇರುವ ಸನ್ನಿವೇಶ ಕಲ್ಪಿಸಿಕೊಳ್ಳಿ; ಒಬ್ಬ ವ್ಯಕ್ತಿಯೋ ಅಥವಾ ಕಾರ್ಪೊರೆಟ್ ಕಂಪನಿಯೋ ಒಂದು ರಾಜಕೀಯ ಪಕ್ಷಕ್ಕೆ ನೂರು ಕೋಟಿ ರೂಪಾಯಿಯ ಲಂಚ ಕೊಡಬೇಕಾದರೆ, ಆಗ ಅವರು ಲಭ್ಯವಿರುವ 2000ದ ಅಥವಾ 500ರ ಅತ್ಯಂತ ದೊಡ್ಡ ಸಂಖ್ಯೆಯ ನೋಟುಗಳನ್ನು ಏರ್ಪಾಡು ಮಾಡಿ, ಅವುಗಳನ್ನು ಸೂಟ್‌ಕೇಸ್‌ನಲ್ಲಿ ಭದ್ರಗೊಳಿಸಿ ತಲುಪಿಸಬೇಕಾಗಬಹುದು; ಅದು ಸ್ವಾಭಾವಿಕವಾಗಿ ಅಪಾಯಕಾರಿ ನಡೆ. ಆದರೆ, ಮೋದಿ ಸರಕಾರ ತಂದ ಚುನಾವಣಾ ಬಾಂಡ್‌ಗಳು ಬಂದನಂತರ ಒಂದು ಪುಟ್ಟ ಚೀಲದಲ್ಲಿ 1 ಕೋಟಿಯ ಮೌಲ್ಯದ ನೂರು ಚುನಾವಣಾ ಬಾಂಡ್‌ಗಳನ್ನು ತೆಗೆದುಕೊಂಡು ಹೋದರೆ 100 ಕೋಟಿ ರೂಪಾಯಿಗಳನ್ನು ಅಕ್ರಮವಾಗಿ ಸುಲಭವಾಗಿ ತಲುಪಿಸಬಹುದು. ಬಾಂಡ್ ನೀಡಿದವರ ಹೆಸರು ಇರುವುದಿಲ್ಲವಾದ್ದರಿಂದ ಅವನ್ನು ಅನಾಮಧೇಯವಾಗಿ ರಾಜಕೀಯ ಪಕ್ಷಗಳು ನಗದು ಮಾಡಿಕೊಳ್ಳಬಹುದು.

2018ರ ಜನವರಿ 2ರಂದು ಭಾರತ ಸರಕಾರದ ಬಜೆಟ್ ಡಿವಿಷನ್ ಆಫ್ ಮಿನಿಸ್ಟ್ರಿ ಆಫ್ ಫೈನಾನ್ಸ್ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯ ಪ್ರಕಾರ, “ಚುನಾವಣಾ ಬಾಂಡ್‌ಗಳಿಗೆ ಕೇವಲ 15 ದಿನಗಳ ಅವಧಿ ಇದ್ದು, ಆ ಅವಧಿಯಲ್ಲಿ ಅದನ್ನು ರೆಪ್ರಸೆಂಟೇಷನ್ ಆಫ್ ಪೀಪಲ್ಸ್ ಆಕ್ಟ್, 1951ರ (1951ರ 43ನೇ) ಸೆಕ್ಷನ್ 29ಎ ಅಡಿಯಲ್ಲಿ ನೋಂದಾಯಿಸಲಾದ ಹಾಗೂ ಲೋಕಸಭೆ ಅಥವಾ ವಿಧಾನಸಭೆಗೆ ನಡೆದ ಕಳೆದ ಚುನಾವಣೆಯಲ್ಲಿ ಒಟ್ಟು ಮತದಾನದ 1% ಗಿಂತಲೂ ಕಡಿಮೆ ಮತ ಪಡೆಯದೇ ಇದ್ದ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಲು ಬಳಸಬಹುದಾಗಿದೆ”. ಇದರರ್ಥ ಬಿಜೆಪಿ, ಕಾಂಗ್ರೆಸ್, ಎಸ್‌ಪಿ, ಬಿಎಸ್‌ಪಿ, ಜೆಡಿಎಸ್ ಮುಂತಾದ ದೊಡ್ಡ ಪಕ್ಷಗಳು ಮಾತ್ರ ದೇಣಿಗೆ ಪಡೆಯಲು ಅರ್ಹರಾಗಿರುತ್ತವೆ ಹಾಗೂ ಇದರಿಂದ ಸಾಮಾನ್ಯ ಜನರ ಸಮಸ್ಯೆಗಳನ್ನು ಬಗೆಹರಿಸಲು ಹಾಗೂ ಅವರನ್ನು ಪ್ರತಿನಿಧಿಸುವ ಪರ್ಯಾಯ, ಹೊಸ ಪಕ್ಷಗಳು ಈ ಬಾಂಡ್‌ಗಳ ಲಾಭ ಪಡೆಯದೇ ಅವುಗಳು ಬೆಳೆಯುವ ಸಾಧ್ಯತೆಗಳನ್ನು ತಡೆದಂತಾಗುತ್ತದೆ.

ಇನ್ನೊಂದು ವಿಷಯವೇನೆಂದರೆ, ಇಲ್ಲಿಯವರೆಗೆ ಆದ ಒಟ್ಟಾರೆ ಚುನಾವಣಾ ಬಾಂಡ್‌ಗಳಲ್ಲಿ 75% ಬಾಂಡ್‌ಗಳು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಜೆಪಿ ಪಕ್ಷಕ್ಕೇ ಹೋಗಿವೆ. ಮೋದಿ ಸರಕಾರದ ’ನಾ ಖಾವೂಂಗಾ, ನಾ ಖಾನೆದೂಂಗಾ’ (ತಿನ್ನಲ್ಲ, ತಿನ್ನಕ್ಕೆ ಬಿಡುವುದಿಲ್ಲ) ಎಂಬ ಘೋಷಣೆ, ಚುನಾವಣಾ ಬಾಂಡ್ ಪರಿಚಯಿಸುವ ಮತ್ತು ಕಂಪನಿಗಳ ರಾಜಕೀಯ ದೇಣಿಗೆಗೆ ಇದ್ದ 7.5% ಮಿತಿಯನ್ನು ತೆಗೆದುಹಾಕುವ ಕ್ರಮಗಳಿಗೆ ಹೊಂದಾಣಿಕೆಯಾಗುವುದಿಲ್ಲ. ಈ ಕ್ರಮಗಳು ಸೂಚಿಸುತ್ತಿರುವುದು ಸ್ಪಷ್ಟವಾಗಿದೆ – ಖಾವೂಂಗಾ, ಖಾನೆದೂಂಗಾ, ಕಾನೂನ್‌ಕೆ ಆಧಾರ್‌ಪೆ’ (ತಿನ್ನುವೆ, ತಿನ್ನಲು ಬಿಡುವೆ, ಅದೂ ಕಾನೂನಿನ ಆಧಾರದ ಮೇಲೆ”.

ಆದರ್ಶ ಐಯ್ಯರ್

ಆದರ್ಶ ಐಯ್ಯರ್
ಸಹ ಅಧ್ಯಕ್ಷರು, ಜನಾಧಿಕಾರ ಸಂಘರ್ಷ ಪರಿಷತ್ತು (ಜೆಸ್‌ಪಿ)


ಇದನ್ನೂ ಓದಿ: ಚುನಾವಣಾ ಬಾಂಡ್‌‌ ಪ್ರಕರಣದ ವಿಚಾರಣೆಗೆ ಒಪ್ಪಿಕೊಂಡ ಸುಪ್ರೀಂಕೋರ್ಟ್‌; ಏನಿದು ಚುನಾವಣಾ ಬಾಂಡ್‌?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...