Homeಫ್ಯಾಕ್ಟ್‌ಚೆಕ್ಫ್ಯಾಕ್ಟ್‌ಚೆಕ್: ಇಸ್ಕಾನ್‌‌ನ ಈ ಚಿತ್ರ ಉಕ್ರೇನಿದ್ದಲ್ಲ; ದಾರಿ ತಪ್ಪಿಸಿದ ಬಿಟಿವಿ ವರದಿ!

ಫ್ಯಾಕ್ಟ್‌ಚೆಕ್: ಇಸ್ಕಾನ್‌‌ನ ಈ ಚಿತ್ರ ಉಕ್ರೇನಿದ್ದಲ್ಲ; ದಾರಿ ತಪ್ಪಿಸಿದ ಬಿಟಿವಿ ವರದಿ!

- Advertisement -
- Advertisement -

ಯುದ್ಧ ಪೀಡಿತ ಉಕ್ರೇನ್‌ನಲ್ಲಿ ‘ಇಸ್ಕಾನ್‌’ ವತಿಯಿಂದ ಜನರಿಗೆ ಆಹಾರ ಒದಗಿಸಲಾಗುತ್ತಿದೆ ಎಂದು ಪ್ರತಿಪಾದಿಸಿ ಚಿತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಈ ಚಿತ್ರದೊಂದಿಗೆ ವೈರಲ್ ಆಗಿರುವ ಬರಹವು ಕೋಮುದ್ವೇಷ ಬಿತ್ತುತ್ತಿದ್ದು, ಹಿಂದೂ ಮತವನ್ನು ಬಿಟ್ಟು ಉಳಿದ ಧರ್ಮಗಳು ಸಹಾಯ ಮಾಡುವ ನೆಪದಲ್ಲಿ ಆಮಿಷ ಒಡ್ಡುತ್ತದೆ ಎಂಬ ಅರ್ಥದಲ್ಲಿ ಈ ಬರಹವನ್ನು ಬರೆಯಲಾಗಿದೆ.

ವೈರಲ್‌ ಚಿತ್ರದ ಜೊತೆಗೆ, “ಉಕ್ರೇನ್‌ನಲ್ಲಿ ಸುಮಾರು 54 ಇಸ್ಕಾನ್ ದೇವಾಲಯಗಳಿಂದ ಹಸಿದವರಿಗೆ ಅನ್ನ ನೀಡಲಾಗುತ್ತಿದ್ದು, ಅಲ್ಲಿ ಅನ್ನ ನೀಡುವ ಮೊದಲು ಅನ್ಯ ಧರ್ಮಿಯರಿಗೆ ನೀವು ನಮ್ಮ ಮತಕ್ಕೆ ಬನ್ನಿ ಎಂದು ಯಾರೂ ಒತ್ತಾಯ ಮಾಡುತ್ತಿಲ್ಲ. ಇದುವೆ ನನ್ನ ಹೆಮ್ಮೆಯ ಸನಾತನ ಮತ” ಎಂಬ ಇತರ ಧರ್ಮಗಳನ್ನು ಕೀಳಾಗಿ ಬಿಂಬಿಸುವ ಬರಹಗಳನ್ನೂ ವೈರಲ್‌ ಮಾಡಲಾಗುತ್ತಿದೆ.

ಡಮರುಗ ಎಂಬ ಬಿಜೆಪಿ ಬೆಂಬಲಿಗ ಪೇಜ್‌ ಒಂದು ಈ ರೀತಿಯ ಪೋಸ್ಟ್‌ ಅನ್ನು ರಚಿಸಿ ಹಂಚಿಕೊಂಡಿದೆ. ಇದೇ ಪ್ರತಿಪಾದನೆಯಿಂದಿಗೆ ಸಾಮಾಜಿಕ ಮಾಧ್ಯಮಗಳು ಹಲವಾರು ಬಳಕೆದಾರರು ಚಿತ್ರವನ್ನು ಹಂಚಿಕೊಂಡಿದ್ದಾರೆ. ಇದನ್ನು ನೀವು ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್‌: ‘ಮಸೀದಿ ಕಟ್ಟಿಸು’ ಎಂದು ಅಖಿಲೇಶ್‌ಗೆ ವೃದ್ಧ ಛೀಮಾರಿ ಹಾಕಿಲ್ಲ; ಅವರು ಹೇಳಿದ್ದು EVM ಬದಲಾಯಿಸು ಎಂದು

ಕನ್ನಡದ ಸುದ್ದಿ ಮಾಧ್ಯಮ ಬಿಟಿವಿ ಕೂಡಾ ಇದೇ ಚಿತ್ರವನ್ನು ಬಳಸಿ ಸುದ್ದಿಯೊಂದನ್ನು ವರದಿಯೊಂದನ್ನು ಮಾಡಿದೆ. ಈ ಸುದ್ದಿಯಲ್ಲಿ ಬಿಟಿವಿ, “ಉಕ್ರೇನ್‍ನಲ್ಲಿ ಇಸ್ಕಾನ್ 54 ಕ್ಕೂ ಅಧಿಕ ದೇವಾಲಯಗಳನ್ನು ಹೊಂದಿದ್ದು, ರಷ್ಯಾ ದಾಳಿಯಿಂದ ಉಕ್ರೇನ್ ತತ್ತರಿಸುತ್ತಿರುವ ಉಕ್ರೇನ್​ ಜನರಿಗೆ ಇಸ್ಕಾನ್ ಸೇವೆ ಸಲ್ಲಿಸುತ್ತಿದೆ. ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿರುವ ಉಕ್ರೇನ್​ ಜನರಿಗೆ ಆಹಾರ ಪೂರೈಕೆ ಮಾಡುವ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಸದ್ಯ ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಮೆಚ್ಚುಗೆಯ ಮಹಾಪೂರವೇ ಹರಿಸುತ್ತಿದ್ದಾರೆ” ಎಂದು ಎರಡು ಚಿತ್ರಗಳನ್ನು ಬಳಸಿಕೊಂಡಿದೆ.

ಆರ್ಕೈವ್ ಲಿಂಕ್‌ ಇಲ್ಲಿ ಕ್ಲಿಕ್‌ ಮಾಡಿ

ಫ್ಯಾಕ್ಟ್‌ಚೆಕ್:

ವೈರಲ್ ಫೋಟೊವನ್ನು ನಾನುಗೌರಿ.ಕಾಂ ರಿವರ್ಸ್ ಇಮೇಜ್ ಸರ್ಚ್‌ ಮೂಲಕ ಹುಡುಕಾಡಿದಾಗ ಇಸ್ಕಾನ್ ಸಂಸ್ಥೆಯು ಉಕ್ರೇನ್‌ನಲ್ಲಿ ಆಹಾರ ನೀಡುತ್ತಿದೆ ಎಂದು ವೈರಲ್ ಆದ ಈ ಚಿತ್ರಗಳನ್ನು ಹೋಲುವ ಹಲವು ಫೋಟೊಗಳು ನಮಗೆ ಲಭ್ಯವಾಗಿವೆ.

ಇದರ ಜಾಡನ್ನು ಹಿಡಿದು ನಾನುಗೌರಿ.ಕಾಂ ಮತ್ತಷ್ಟು ಹುಡುಕಾಟ ನಡೆಸಿದಾಗ ಅದು ಇಸ್ಕಾನ್ ಸಂಸ್ಥೆ ತನ್ನ ವೆಬ್ ಸೈಟ್‌ಗಾಗಿ ರೂಪಿಸಿರುವ ಹಳೆಯ ಫೋಟೋ ಎಂದು ಖಚಿತವಾಗಿದೆ.

 

ಸೋಶಿಲ್‌ ಮೀಡಿಯಾದಲ್ಲಿ ವೈರಲ್ ಮಾಡಲಾಗುತ್ತಿರುವ ಫೋಟೊವನ್ನು ಇಸ್ಕಾನ್ ಸಂಸ್ಥೆಯು ತನ್ನ ವೆಬ್‌ಸೈಟ್‌ನಲ್ಲಿ ಈ ಫೋಟೊವನ್ನು ಬಳಸಿ ಡೊನೇಟ್ ಮಾಡಿ ಎಂದು ಹಣದ ಮೊತ್ತವನ್ನು ನಮೂದಿಸಿದೆ. ಅದನ್ನು ಇಲ್ಲಿ ನೋಡಬಹುದು.

ಇಸ್ಕಾನ್ ಸಂಸ್ಥೆಯು 2015ರಲ್ಲಿ ಅಪ್‌ಲೋಡ್ ಮಾಡಿದ ಫೋಟೋವನ್ನು ಬಲಪಂಥೀಯ ಪ್ರತಿಪಾದಕ ಡಮರುಗ ಎಂಬ ಫೇಸ್‌ಬುಕ್ ಪೇಜ್‌ನಲ್ಲಿ ವೈರಲ್ ಪೋಸ್ಟ್‌ನೊಂದಿಗೆ ಹಂಚಿಕೊಳ್ಳಲಾಗಿದೆ.

ಕೂಡಾ ಕೊಲ್ಕತ್ತಾದ ಇಸ್ಕಾನ್‌ ಉಪಾಧ್ಯಕ್ಷ ರಾಧಾರಮಣ್‌ ದಾಸ್ ಎಂಬವರು, “ಇಸ್ಕಾನ್‌ನಲ್ಲಿ 54 ದೇವಾಲಯಗಳು ಇವೆ. ಎಲ್ಲಾ ದೇವಾಲಯಗಳು ಸೇವೆಗೆ ಸನ್ನದ್ಧವಾಗಿದೆ” ಎಂದು ಬರೆದಿದ್ದರು.

ಅವರ ಈ ಮಾತನ್ನು ತಪ್ಪಾಗಿ ತಿಳಿದಿರುವ ಬಿಟಿವಿ, “ಉಕ್ರೇನ್‍ನಲ್ಲಿ ಇಸ್ಕಾನ್ 54 ಕ್ಕೂ ಅಧಿಕ ದೇವಾಲಯಗಳನ್ನು ಹೊಂದಿದ್ದು,  ರಷ್ಯಾ ದಾಳಿಯಿಂದ ಉಕ್ರೇನ್ ತತ್ತರಿಸುತ್ತಿರುವ ಉಕ್ರೇನ್​ ಜನರಿಗೆ  ಇಸ್ಕಾನ್ ಸೇವೆ ಸಲ್ಲಿಸುತ್ತಿದೆ. ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿರುವ ಉಕ್ರೇನ್​ ಜನರಿಗೆ ಆಹಾರ ಪೂರೈಕೆ ಮಾಡುವ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗುತ್ತಿದೆ” ಎಂದು ಎಲ್ಲಾ ದೇವಾಲಯಗಳು ಸೇವೆ ಮಾಡುತ್ತಿವೆ ಎಂಬ ಅರ್ಥದಲ್ಲಿ ಬರೆದಿದೆ. ಜೊತೆಗೆ ಹಳೆಯ ಚಿತ್ರವನ್ನು ಕೂಡಾ ಇದು ಪೋಸ್ಟ್‌ ಮಾಡಿದೆ.

ಇದನ್ನೂ ಓದಿ: BJP ಸದಸ್ಯರನ್ನೆ ‘ಬಿಜೆಪಿ ಬೆಂಬಲಿಸುವ ಸಾಮಾನ್ಯ ಮುಸ್ಲಿಮರು’ ಎಂದು ಚಿತ್ರಿಸಿದ ‘ಟಿವಿ9 ಭಾರತವರ್ಷ’

ಇಸ್ಕಾನ್ ಸೇವೆ ಸಲ್ಲಿಸುತ್ತಿವುದು ನಿಜವೇ?

ಈ ಸುದ್ದಿ ಬರೆಯುವ 22 ಗಂಟೆಗಳ ಮುಂಚೆ ಇಸ್ಕಾನ್ ನ್ಯೂಸ್‌, “ಘರ್ಷಣೆಯಿಂದ ನಿರಾಶ್ರಿತರಾದವರಿಗೆ ಭಕ್ತರು ಅನ್ನದಾನ ಮಾಡಲು ಆರಂಭಿಸಿದ್ದೇವೆ. ಉಕ್ರೇನಿಯನ್-ರಷ್ಯನ್ ಸಂಘರ್ಷದಿಂದ ಸ್ಥಳಾಂತರಗೊಂಡವರಿಗೆ ಸಹಾಯ ಮಾಡುವಲ್ಲಿ ‘ಇಸ್ಕಾನ್ ಹಂಗೇರಿ’ ಸಕ್ರಿಯವಾಗಿ ಭಾಗವಹಿಸುತ್ತಿದೆ. ಇಸ್ಕಾನ್ ಹಂಗೇರಿ ಪ್ರಸ್ತುತ ವಾರದ ದಿನಗಳಲ್ಲಿ 600 ಪ್ಲೇಟ್ ಪ್ರಸಾದವನ್ನು ಮತ್ತು ವಾರಾಂತ್ಯದಲ್ಲಿ 1200 ಪ್ಲೇಟ್‌ಗಳನ್ನು ವಿತರಿಸುವ ಸಾಮರ್ಥ್ಯವನ್ನು ಹೊಂದಿದೆ” ಎಂದು ಬರೆದಿದೆ.

ಈ ಮಧ್ಯೆ, ತಪ್ಪಾದ ಚಿತ್ರಗಳು ಮತ್ತು ಉಕ್ರೇನ್‌ನಲ್ಲಿರುವ ಇಸ್ಕಾನ್‌ ಎಲ್ಲಾ ದೇವಸ್ಥಾನಗಳಲ್ಲಿ ಆಶ್ರಯ ನೀಡಲಾಗುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದ್ದಂತೆ, ಸ್ವತಃ ಇಸ್ಕಾನ್‌‌‌ ನ್ಯೂಸ್‌ ಈ ಬಗ್ಗೆ ಸ್ಪಷ್ಟೀಕರಣ ನೀಡಿದೆ.

ಇಸ್ಕಾನ್‌ ನ್ಯೂಸ್‌ ಹೇಳುವಂತೆ, “ಉಕ್ರೇನ್‌ನಲ್ಲಿರುವ ಐವತ್ತಕ್ಕೂ ಹೆಚ್ಚು ಇಸ್ಕಾನ್ ದೇವಾಲಯಗಳು ಮತ್ತು ಕೇಂದ್ರಗಳು ಸಾರ್ವಜನಿಕರಿಗೆ ಆಹಾರ ಪರಿಹಾರ ಮತ್ತು ಆಶ್ರಯವನ್ನು ಒದಗಿಸುತ್ತಿವೆ ಎಂದು ಸಾಮಾಜಿಕ ಮಾಧ್ಯಮ ಮತ್ತು ಇತರ ಮಾಧ್ಯಮಗಳಲ್ಲಿ ತಪ್ಪು ಮಾಹಿತಿ ಹರಡುತ್ತಿದೆ. ಈ ಮಾಹಿತಿ ಸುಳ್ಳು” ಎಂದು ಸ್ಪಷ್ಟೀಕರಣ ನೀಡಿದೆ.

ಲಿಂ‌ಕ್‌ಗೆ ಇಲ್ಲಿ ಕ್ಲಿಕ್ ಮಾಡಿ 

ಇಸ್ಕಾನ್‌ ನ್ಯೂಸ್‌‌ ಖಚಿತವಾಗಿ ಹೇಳುವಂತೆ, “ಈ ಸಮಯದಲ್ಲಿ ಉಕ್ರೇನ್‌ನಲ್ಲಿರುವ ನಮ್ಮ ದೇವಾಲಯಗಳಲ್ಲಿ ಆಶ್ರಯ ಅಥವಾ ಆಹಾರ ವಿತರಣೆಯನ್ನು ಒದಗಿಸಲು ISKCON ಗೆ ಸಾಧ್ಯವಾಗುತ್ತಿಲ್ಲ. ಉಕ್ರೇನ್ ಮತ್ತು ಇಡೀ ಪ್ರದೇಶದ ಎಲ್ಲಾ ಜನರಿಗೆ ಶಾಂತಿಗಾಗಿ ನಾವು ಪ್ರಾರ್ಥಿಸುತ್ತೇವೆ” ಎಂದು ಬರೆದಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗುತ್ತಿರುವ ಚಿತ್ರವೂ ತಪ್ಪಾದ ನಿರೂಪಣೆಯೊಂದಿಗೆ ಹರಿದಾಡುತ್ತಿದೆ. ಈ ಪೋಸ್ಟ್‌ ಇತರ ಧರ್ಮವರನ್ನು ಕೀಳಾಗಿ ಕಾಣಲು ಮಾಡಿರುವ ದ್ವೇಷಪೂರಿತ ಚಿತ್ರವಾಗಿದೆ. ಇಸ್ಕಾನ್ ಸಂಸ್ಥೆಯು 2015ರಲ್ಲಿ ಈ ಚಿತ್ರವನ್ನು ಹಂಚಿಕೊಂಡಿದೆ. ಜೊತೆಗೆ ಬಿಟಿವಿ ವರದಿಯಲ್ಲಿ ತಪ್ಪುಗಳಿದ್ದು, ಅದು ಹಳೆಯ ಚಿತ್ರವನ್ನು ಬಳಸಿದೆ. ಅದರ ವರದಿ ಹೇಳುವಂತೆ ಉಕ್ರೇನ್‌ನಲ್ಲಿರುವ ಎಲ್ಲಾ 54 ದೇವಾಲಯಗಳಲ್ಲಿ ನಿರಾಶ್ರಿತರಿಗೆ ಆಹಾರ ಮತ್ತು ಆಶ್ರಯವನ್ನು ನೀಡಲಾಗುತ್ತಿಲ್ಲ.

ಹಂಗೇರಿಯ ಇಸ್ಕಾನ್‌‌ನ ಕೇವಲ ಒಂದು ದೇವಸ್ಥಾನದ ವತಿಯಿಂದ ಮಾತ್ರ ಆಹಾರ ವಿತರಣೆಯನ್ನು ಹಂಗೇರಿಯ ಏರ್‌ಪೋರ್ಟ್‌ನಲ್ಲಿ ಮಾಡಲಾಗುತ್ತಿದೆ ಎಂದು ಸ್ವತಃ ಇಸ್ಕಾನ್‌ ಹೇಳಿಕೊಂಡಿದೆ.


ಇದನ್ನೂ ಓದಿ: ಫ್ಯಾಕ್ಟ್‌ಚೆಕ್‌: ಇಸ್ಲಾಂ ವಿರುದ್ಧ ದ್ವೇಷ ಹರಡುವ ಈ ಲೇಖನ ತೋಂಟದಾರ್ಯ ಮಠದ ನಿಜಗುಣಾನಂದ ಸ್ವಾಮಿ ಬರೆದಿಲ್ಲ


ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. BTV ಈಗಾಗಲೇ ಹಲವು ಸಲ ಮರ್ಯಾದೆ ಕಳೆದುಕೊಂಡಿದೆ. ಇತ್ತೀಚೆಗಂತೂ ಈ ದಿವ್ಯ ವಸಂತ ಟ್ರೋಲ್ನಿಂದ TRP ಕಳೆದುಕೊಂಡು ಸುಸ್ತಾಗಿದೆ. ಇಷ್ಟಾದರೂ ಬುದ್ಧಿ ಬಂದಿಲ್ಲ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...