Homeಚಳವಳಿರೈತ ಹೋರಾಟದಲ್ಲಿ ಜ್ಞಾನ ಪ್ರಸರಣ: ಗಮನ ಸೆಳೆದ ಕಿಸಾನ್ ಗ್ರಂಥಾಲಯಗಳು!

ರೈತ ಹೋರಾಟದಲ್ಲಿ ಜ್ಞಾನ ಪ್ರಸರಣ: ಗಮನ ಸೆಳೆದ ಕಿಸಾನ್ ಗ್ರಂಥಾಲಯಗಳು!

ಇಲ್ಲಿ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಲಾಗುತ್ತದೆ. ಮಕ್ಕಳಿಗೆ ದಿನವೂ ಬೆಳಗ್ಗೆ ಇಂಗ್ಲೀಷ್, ಗಣಿತ, ಸಮಾಜ, ವಿಜ್ಞಾನ, ಚಿತ್ರಕಲೆ ವಿಷಯಗಳನ್ನು ಹೇಳಿಕೊಡಲಾಗುತ್ತದೆ. ಪ್ರತಿಭಟನೆಯಲ್ಲಿ ಇಷ್ಟು ಸೇವೆ ಮಾಡಲು ಅವಕಶ ಸಿಕ್ಕಿದೆ. ಅಷ್ಟು ಸಾಕು- ರಮಣೀಕ್

- Advertisement -
- Advertisement -

ಹೋರಾಟ ಸಂಘಟಿತವಾಗಲು ಯಾಕೆ ಹೋರಾಟ ನಡೆಸುತ್ತಿದ್ದೇವೆ ಎಂಬುದರ ಅರಿವು ಹೆಚ್ಚು ಅವಶ್ಯಕತೆಯಿದೆ. ಅಂತಹ ಒಂದು ಹೋರಾಟ ಗಟ್ಟಿಯಾಗಿ ನಿಲ್ಲಲು ಅದಕ್ಕೆ ಸಂವಿಧಾನ ನೀಡಿರುವ ಹಕ್ಕುಗಳ ಅರಿವಿರಬೇಕು. ಈ ಅರಿವು ತುಂಬುವ ಕೆಲಸವನ್ನು ಕಿಸಾನ್ ಗ್ರಂಥಾಲಯಗಳು ಮಾಡುತ್ತಿವೆ ಎನ್ನುತ್ತಾರೆ ಪಂಜಾಬ್‌ನ ನರೇಶ್.

ಹೌದು, ಐತಿಹಾಸಿಕ ರೈತ ಹೋರಾಟದಲ್ಲಿ ಸಿಂಘು ಗಡಿಯಲ್ಲಿ ಒಂದರಲ್ಲೇ ಪುಸ್ತಕಗಳ ಮಳಿಗೆಗಳನ್ನು ಇಟ್ಟುಕೊಂಡು, ಪ್ರತಿಭಟನಾಕಾರರಿಗೆ ಉಚಿತವಾಗಿ ಓದಲು ನೀಡುತ್ತಿರುವ ನೂರಕ್ಕೂ ಹೆಚ್ಚು ಗ್ರಂಥಾಲಯಗಳಿವೆ. ಇವುಗಳು ರೈತ ಹೋರಾಟದಲ್ಲಿ ಭಾಗವಹಿಸಿರುವವರಿಗೆ ಜ್ಞಾನದ ಎರಕ ಹೊಯ್ಯುತ್ತಿವೆ.

ಕಿಸಾನ್ ಹೋರಾಟದಲ್ಲಿ ಅಮೆರಿಕಾ ಮೂಲದ power in education international org. ಎಂಬ ಸಂಘಟನೆ ತಮ್ಮ ಗ್ರಂಥಾಲಯದಲ್ಲಿ ಸಂವಿಧಾನದ ಕುರಿತು ತಿಳವಳಿಕೆ ಮೂಡಿಸುವ ಕೆಲಸಕ್ಕೆ ಕೈ ಹಾಕಿದೆ. ಪಂಜಾಬಿ, ಹಿಂದಿ, ಆಂಗ್ಲ ಭಾಷೆಗಳಲ್ಲಿ ಸಂವಿಧಾನದ ಪ್ರತಿಗಳನ್ನು, ಪುಸ್ತಕಗಳನ್ನು ಓದಲು ನೀಡುತ್ತಿವೆ.

ಇದನ್ನೂ ಓದಿ: ಖಾಲಿಸ್ತಾನಿ, ಅಲ್‌ಖೈದ ಭಯೋತ್ಪಾದಕರನ್ನು ಹುಡುಕಿಕೊಡಿ: ದೆಹಲಿಯಲ್ಲಿ ಪೋಸ್ಟರ್ ಅಂಟಿಸಿದ ಪೊಲೀಸರು!

“ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಬರೆದಿರುವ ಸಂವಿಧಾನದ ಓದು ನಮ್ಮ ಹಕ್ಕುಗಳನ್ನು ನಮಗೆ ಮತ್ತಷ್ಟು ತಿಳಿಯಲು ಸಹಾಯಕವಾಗಿದೆ. ಹಾಗಾಗಿ ಸಂವಿಧಾನದ ಓದು ಅತೀ ಅವಶ್ಯಕವಾಗಿದೆ. ನಾವು ಸಿಂಘು ಗಡಿಯಲ್ಲಿ ಇರುವುದರಿಂದ, ಇಲ್ಲಿ ಪಂಜಾಬಿ ಮಾತನಾಡುವವರ ಸಂಖ್ಯೆ ಹೆಚ್ಚಿರುವ ಕಾರಣ ಪಂಜಾಬಿ ಭಾಷೆಯಲ್ಲಿರುವ ಸಂವಿಧಾನದ ಪ್ರತಿಗಳನ್ನು ಇಡಲಾಗಿದೆ. ಇಲ್ಲೇ ಓದುವವರಿಗೆ ಉಚಿತವಾಗಿ ನೀಡಲಾಗುತ್ತದೆ. ಟ್ಯ್ರಾಲಿಯಲ್ಲಿ ಇರುವವರಿಗೆ 2 ದಿನಗಳು ನೀಡಲಾಗುತ್ತದೆ. ಕೊಂಡುಕೊಳ್ಳುವವರಿಗೆ ಕಡಿಮೆ ದರದಲ್ಲಿ ಮಾರಾಟ ಮಾಡಲಾಗುತ್ತದೆ ಎಂದು ನರೇಶ್ ಮಾಹಿತಿ ನೀಡಿದ್ದಾರೆ.

ಇದರ ಜೊತೆಗೆ ಅಂಬೇಡ್ಕರ್‌ ಸ್ಟೂಡೆಂಟ್ಸ್ ಅಸೋಸಿಯೇಷನ್ ಕೂಡ ಸಂವಿಧಾನ ಮತ್ತು ಅಂಬೇಡ್ಕರ್ ಕುರಿತ ಪುಸ್ತಕಗಳನ್ನು ಜನರಿಗೆ ನೀಡುತ್ತಿದ್ದು. ತಮ್ಮ ಟೆಂಟ್ ಹೊರಗೆಯೂ ಈ ವಿಚಾರಗಳ ಕುರಿತು ಹಲವು ಮಾಹಿತಿ ನೀಡುತ್ತಿವೆ. ಜೊತೆಗೆ ಪ್ರತಿದಿನ ವಿದ್ಯಾರ್ಥಿಗಳು ಚರ್ಚೆಗಳನ್ನು ನಡೆಸುತ್ತಾರೆ.

ಇದನ್ನೂ ಓದಿ:  ‘ಪಿಎಂಒ ಮಾತ್ರವಲ್ಲ ಎನ್‌ಎಸ್‌ಎ ಕೂಡ ಅರ್ನಾಬ್ ಜೊತೆಯಿತ್ತು’: ಅರ್ನಾಬ್ ವಾಟ್ಸಾಪ್ ಲೀಕ್ ಸಂಪೂರ್ಣ ವಿವರ

ಸಿಂಘು ಗಡಿಯಲ್ಲಿರುವ ಮತ್ತೊಂದು ವಿಶೇಷ ಗ್ರಂಥಾಲಯ ಸಾಂಜಿ ಸಾತ್. ಸಾಂಜಿ ಎಂದರೆ ಚರ್ಚೆ, ಸಾತ್ ಎಂದರೆ ಜೊತೆಗೆ ಎಂದರ್ಥ. ಒಟ್ಟಾಗಿ ಕುಳಿತು ಹಲವಾರು ವಿಚಾರಗಳ ಬಗ್ಗೆ ಚರ್ಚೆ ನಡೆಸುವ ಸ್ಥಳ ಇದಾಗಿದೆ. ಏಳು ಮಂದಿ ಯುವಕರು ಈ ಸಾಂಜಿ ಸಾತ್ ಎನ್ನುವ ಗ್ರಂಥಾಲಯ ಮತ್ತು ಚರ್ಚಾ ಸ್ಥಳವನ್ನು ಆರಂಭಿಸಿದ್ದಾರೆ.

ಮೊದಲಿಗೆ ಚಿಕ್ಕದಾಗಿ ಗ್ರಂಥಾಲಯ ಆರಂಭ ಮಾಡಿದ್ದ ಈ ತಂಡಕ್ಕೆ, ಪುಸ್ತಕಗಳು, ಹೆಚ್ಚು ದೇಣಿಗೆಯಿಂದ ಇದು ಇಂದು ದೊಡ್ಡ ಗ್ರಂಥಾಲಯವಾಗಿ ಮಾರ್ಪಟ್ಟಿದೆ. ಈ ಸ್ಥಳದಲ್ಲಿ ಪುಸ್ತಕ ಪ್ರೇಮಿಗಳು, ಚರ್ಚೆಗಳಲ್ಲಿ ಭಾಗವಹಿಸುವವರು, ಕ್ರಾಂತಿ ಗೀತೆಗಳನ್ನು ಹಾಡುವವರು, ಬರೆಯುವವರು, ಕೇಳಿಸಿಕೊಳ್ಳುವವರು ಮತ್ತು ಮಕ್ಕಳು ಎಲ್ಲರೂ ಭಾಗವಹಿಸುತ್ತಾರೆ.

“ಪ್ರತಿಭಟನೆಯಲ್ಲಿ ಭಾಗವಹಿಸಿರುವ ಸುಮಾರು 100ಕ್ಕೂ ಹೆಚ್ಚು ಮಕ್ಕಳಿಗೆ ದಿನವೂ ಬೆಳಗ್ಗೆ ಇಂಗ್ಲೀಷ್, ಗಣಿತ, ಸಮಾಜ, ವಿಜ್ಞಾನ, ಚಿತ್ರಕಲೆ ವಿಷಯಗಳನ್ನು ಹೇಳಿಕೊಡಲಾಗುತ್ತದೆ. ಸಂಜೆ 50-60 ಮಂದಿ, ‘ಪ್ರತಿಭಟನೆ ಯಾವ ರೀತಿ ನಡೆಯುತ್ತಿದೆ. ಯಾವ ರೀತಿ ನಡೆಸಬಹುದು’ ಎಂಬ ವಿಚಾರಗಳ ಜೊತೆಗೆ ಸೈದ್ಧಾಂತಿಕ ವಿಚಾರಗಳನ್ನು ಚರ್ಚೆ ಮಾಡಲಾಗುತ್ತದೆ” ಎಂದು ಸಾಂಜಿ ಸಾತ್‌ ನೋಡಿಕೊಳ್ಳುವ ರಮಣೀಕ್ ಹೇಳುತ್ತಾರೆ.

ಇದನ್ನೂ ಓದಿ: ರೈತಹೋರಾಟದ ಮೈಲಿಗಲ್ಲುಗಳು ಈ ಪಿಲ್ಲರ್‌ ನಂಬರ್‌ಗಳು: ರೈತರ ಹೊಸ ಪಿಲ್ಲರ್‌ ವಿಳಾಸಗಳ ಬಗ್ಗೆ ನಿಮಗೆ ಗೊತ್ತೆ?

ಸಾಂಜಿ ಸಾತ್ ಕಟ್ಟಿದ ಬಗ್ಗೆ ಮಾತನಾಡಿದ ರಮಣೀಕ್, “ಪ್ರತಿಭಟನೆಗೆ ಬೆಂಬಲ ನೀಡಲು ಬಂದ ನಮ್ಮ ಏಳು ಜನರ ತಂಡ, ಯಾವ ರೀತಿಯಲ್ಲಿ ಇಲ್ಲಿ ಸೇವೆ ಮಾಡುವುದು ಎಂದು ಯೋಚಿಸುತ್ತಿದ್ದೇವು. ಆಗ ನಮಗೆ ಗ್ರಂಥಾಲಯ ಇಡುವ ಯೋಜನೆ ಹೊಳೆಯಿತು. ಕೆಲವು ಪುಸ್ತಕಗಳಿಂದ ಶುರುವಾದ ಈ ಗ್ರಂಥಾಲಯ ಇಂದು ಸಾಂಜಿ ಸಾತ್ ಆಗಿ ಮಾರ್ಪಟ್ಟಿದೆ. ಇಲ್ಲಿ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಲಾಗುತ್ತದೆ. ಮಕ್ಕಳಿಗೆ ದಿನವೂ ಬೆಳಗ್ಗೆ ಇಂಗ್ಲೀಷ್, ಗಣಿತ, ಸಮಾಜ, ವಿಜ್ಞಾನ, ಚಿತ್ರಕಲೆ ವಿಷಯಗಳನ್ನು ಹೇಳಿಕೊಡಲಾಗುತ್ತದೆ. ಪ್ರತಿಭಟನೆಯಲ್ಲಿ ಇಷ್ಟು ಸೇವೆ ಮಾಡಲು ಅವಕಶ ಸಿಕ್ಕಿದೆ. ಅಷ್ಟು ಸಾಕು” ಎನ್ನುತ್ತಾರೆ.

ಗ್ರಂಥಾಲಯಗಳಲ್ಲಿ ಹಲವು ಪುಸ್ತಕಗಳನ್ನು ಓದುಗರಿಗೆ ಉಚಿತವಾಗಿ ಹಂಚಲಾಗುತ್ತಿದೆ. ಈಗಾಗಲೇ ರೈತ ಹೋರಾಟದ ಕುರಿತು ಹಲವು ಪುಸ್ತಕಗಳು ಪ್ರಕಟವಾಗಿದ್ದು, ಇವುಗಳನ್ನು ಸ್ಟಾಲ್‌ಗಳಲ್ಲಿ ಇಡಲಾಗುತ್ತಿದೆ. ಹೊರಗಿನಿಂದ ಬಂದವರು, ಇಲ್ಲಿಯೇ ಓದುವವರಿಗೂ ಇವುಗಳನ್ನು ಹಂಚಲಾಗುತ್ತಿದೆ.

ಕೃಷಿ ಕಾನೂನುಗಳ ರದ್ದತಿಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟ 60 ದಿನಗಳಾಗುತ್ತಾ ಬಂದರು ಇನ್ನು ತನ್ನ ಕಾವು ಕಳೆದುಕೊಳ್ಳದಿರಲು ಇರುವ ಪ್ರಮುಖ ಅಂಶಗಳಲ್ಲಿ ಈ ಗ್ರಂಥಾಲಯಗಳೂ ಪ್ರಮುಖ ಪಾತ್ರವಹಿಸಿವೆ.


ಇದನ್ನೂ ಓದಿ: ಹೋರಾಟ ನಿರತ ರೈತರ ಸೇವೆಗಾಗಿ ವಿದೇಶಿ ಕೆಲಸದ ಅವಕಾಶ ತೊರೆದ ಯುವಕ..!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...