Homeಮುಖಪುಟಜಾಗತಿಕ ಭೂ-ರಾಜಕೀಯದಲ್ಲಿ ಮಧ್ಯಪ್ರಾಚ್ಯ ರಾಜಮನೆತನಗಳ ಆಟಗಳು

ಜಾಗತಿಕ ಭೂ-ರಾಜಕೀಯದಲ್ಲಿ ಮಧ್ಯಪ್ರಾಚ್ಯ ರಾಜಮನೆತನಗಳ ಆಟಗಳು

- Advertisement -
- Advertisement -

ಅಮೆರಿಕದ ಖ್ಯಾತ ಸ್ಟಾಂಡ್‌ಅಪ್ ಕಮೆಡಿಯನ್ ಜಾರ್ಜ್ ಕಾರ್ಲಿನ್ ಮಾತು ಹೀಗಿದೆ: “ಕೋತಿ ನಿನ್ನ ಬೆನ್ನು ಬಿಟ್ಟಿತು ಎಂದ ಕ್ಷಣ ಸರ್ಕಸ್ ಪಟ್ಟಣ ಬಿಟ್ಟಿದೆ ಎಂದು ಅರ್ಥ ಅಲ್ಲ. ಇದು ರಾಜಕೀಯ ಆಯ್ಕೆಗಳ ಬಗ್ಗೆ ಮಾಡುವ ತಮಾಷೆ. ಈ ವ್ಯಂಗ್ಯ ಟ್ರಂಪ್ ಅಧಿಕಾರದಿಂದ ಕೆಳಗಿಳಿದ ಖುಷಿಗೆ ಅನ್ವಯಿಸಿದರು, ಆಳುವ ವರ್ಗಗಳು ಮತದಾರರಿಗೆ ಸೃಷ್ಟಿಸುವ ರಾಜಕೀಯ ಆಯ್ಕೆಯ ಹೇಗಿರುತ್ತವೆ ಎಂಬುದರ ಎಚ್ಚರಿಕೆ ಕೂಡ. ಟ್ರಂಪ್ ಬದಲಿಗೆ ಬಂದಿರುವ ಜೋ ಬೈಡೆನ್ ಕೂಡ ತನ್ನ ಯುದ್ಧಪರ ನೀತಿಗಳಲ್ಲಿ, ವಿದೇಶಿ ನೀತಿಗಳಲ್ಲಿ, ಕಾರ್ಪೊರೇಟ್ ಪರ ನೀತಿಗಳಲ್ಲಿ ಟ್ರಂಪ್ ಹಾಗೆಯೆ. ಟ್ರಂಪ್ ಮಾದರಿ ಜೋಕೆರ್ ರೀತಿ ವರ್ತಿಸುವುದಿಲ್ಲ ಎನ್ನುವ ವ್ಯತ್ಯಾಸವಷ್ಟೆ.

2014 ಅಕ್ಟೋಬರ್ ತಿಂಗಳ ಮೊದಲ ವಾರ. ಒಬಾಮ ಅಧಿಕಾರಾವಧಿಯ ಸಮಯ. ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಅಂದು ಅಮೆರಿಕದ ಉಪಾಧ್ಯಕ್ಷರಾಗಿದ್ದ ಜೋ ಬಿಡೆನ್ ಒಬ್ಬ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, ’ಅವರ ಮಿತ್ರ ರಾಷ್ಟ್ರಗಳಾದ ಟರ್ಕಿ, ಸೌದಿ, ಯುಏಇ ಇನ್ನಿತರೆ ಅರಬ್ ರಾಷ್ಟ್ರಗಳು ಸಿರಿಯಾದಲ್ಲಿ ಅಧ್ಯಕ್ಷ ಅಸ್ಸಾದ್‌ನನ್ನು ಶತಾಯಗತಾಯ ಕೆಳಗಿಳಿಸಲು ಕೋಟಿಗಟ್ಟಲೆ ಹೇಗೆ ಹಣ ಮತ್ತು ಶಸ್ತ್ರಾಸ್ತ್ರಗಳನ್ನು ಪೂರೈಸಿ ಇಸ್ಲಾಮಿಕ್ ಸ್ಟೇಟ್ ಎಂಬ ಭಯೋತ್ಪಾದನೆ ಸೃಷ್ಟಿಸಿದವು ಮತ್ತು ಹೇಗೆ ಅಮೆರಿಕ ಈ ಎಲ್ಲದರ ಭಾಗವಾಗಿತ್ತು, ಆದ್ದರಿಂದ ಸುನ್ನಿ ನೆರೆಹೊರೆಯವರ ಒಕ್ಕೂಟವನ್ನು ಹೇಗೆ ಒಟ್ಟುಗೂಡಿಸಲು ಸಾಧ್ಯವಾಯಿತು’ ಎಂಬ ವಿಷಯಗಳನ್ನು ಬಹಿರಂಗಪಡಿಸಿದ್ದಲ್ಲದೆ ’ಇದೆಲ್ಲಾ ಆಗಿದ್ದು ಏಕೆಂದರೆ ಅಮೆರಿಕಕ್ಕೆ ಮತ್ತೊಮ್ಮೆ ಮುಸ್ಲಿಂ ರಾಷ್ಟ್ರಕ್ಕೆ ಹೋಗಿ ಆಕ್ರಮಣಕಾರರಾಗಲು ಸಾಧ್ಯವಿಲ್ಲ. ಅದರ ನೇತೃತ್ವವನ್ನು ಸುನ್ನಿಗಳು ವಹಿಸಬೇಕಾಗಿದೆ’ ಎಂದು ಹೇಳುತ್ತಾರೆ. ಅಷ್ಟರಲ್ಲೇ ಮೈಕ್ ಆಫ್ ಆಗುತ್ತದೆ ಮತ್ತು ನಂತರದ ಧ್ವನಿ ಕೆಲವಷ್ಟೇ ಮಾಧ್ಯಮಗಳಿಗೆ ಸಿಗುತ್ತವೆ. ನಂತರದಲ್ಲಿ ಈ ಸುದ್ದಿ ದೊಡ್ಡದಾಗುವಷ್ಟರಲ್ಲಿ ಬಿಡೆನ್ ತನ್ನ ಮಿತ್ರರಾಷ್ಟ್ರಗಳ ಕ್ಷಮೆ ಕೇಳುತ್ತಾರೆ.

ಟ್ರಂಪ್ ಆಡಳಿತದ ಇತ್ತೀಚಿನ ರಾಜತಾಂತ್ರಿಕ ಸಾಧನೆಯೆಂದರೆ ಕಚ್ಚಾ ತೈಲದೊರೆಗಳಾದ ಸೌದಿ, ಎಮಿರಾಟಿ, ಬ್ರಹರೈನ್, ಕುವೈಟ್, ಕತಾರ್, ಒಮನ್ ರಾಷ್ಟ್ರಗಳ ಆಳುವ ವರ್ಗಗಳನ್ನು ಇಸ್ರೇಲ್ ಜತೆಗೆ ಕೂಡಿಸಿದ್ದು. ವರ್ಷಗಳಿಂದ ಯುಎಇ, ಸೌದಿ ಮತ್ತು ಇತರ ಕೊಲ್ಲಿ ರಾಜಪ್ರಭುತ್ವಗಳು ಕದ್ದು ಮುಚ್ಚಿ ಇಸ್ರೇಲ್ ಜೊತೆ ಭದ್ರತೆ, ಗುಪ್ತಚರ ಮತ್ತು ಮಿಲಿಟರಿ ಕ್ಷೇತ್ರಗಳಲ್ಲಿ ಸಹಕರಿಸುತ್ತಿದ್ದವು. ಅರಬ್ ರಾಷ್ಟ್ರಗಳ ಸುತ್ತಲಿನಲ್ಲಿ ಬೆಳೆಯುತ್ತಿರುವ ಇರಾನಿನ ಪ್ರಭಾವ ಮತ್ತು ಕ್ಷೀಣಿಸುತ್ತಿರುವ ಅಮೆರಿಕ ಇಸ್ರೇಲ್ ಪ್ರಭಾವ ಈ ಅಸಾಮಾನ್ಯ ಒಕ್ಕೂಟಕ್ಕೆ ಕಾರಣವಾಗಿದೆ. ಇರಾನ್ ಬಹುತೇಕವಾಗಿ ಶಿಯಾ ಇಸ್ಲಾಂ ಅನುಸರಿಸಿದರೆ, ಅರಬ್ ರಾಜಮನೆತನಗಳು ಬಹುತೇಕವಾಗಿ ಸುನ್ನಿ ಇಸ್ಲಾಂ ಅನುಸರಿಸುತ್ತದೆ.

ಒಂದು ಕಡೆ ಬಹಿರಂಗಗೊಳ್ಳುತ್ತಿರುವ ಈ ಒಕ್ಕೂಟವಾದರೆ ಇನ್ನೊಂದೆಡೆ ಅರಬ್ ವಸಂತದ ಪ್ರಭಾವ ಇಳಿಮುಖವಾಗಿ ಅಲ್ಲಿನ ಬಹುತೇಕ ರಾಷ್ಟ್ರಗಳಲ್ಲಿ ಸರ್ವಾಧಿಕಾರ (ಈಜಿಪ್ಟ್), ಅರಾಜಕತೆ, ಗುಲಾಮರ ಮಾರಾಟ(ಲಿಬಿಯಾ), ಆಂತರಿಕ ಯುದ್ದ (ಸಿರಿಯಾ), ಯುದ್ಧದ ನಂತರ ಮರುನಿರ್ಮಾಣದ ಹೆಜ್ಜೆಗಳು (ಇರಾಕ್), ಅತ್ಯಂತ ದೊಡ್ಡ ಮಾನವ ನಿರ್ಮಿತ ದುರಂತದ ನರಮೇಧ (ಯೆಮೆನ್) ಮತ್ತು ಅಮೆರಿಕದ ಸಾಮ್ರಾಜ್ಯಶಾಹಿ ಕುತಂತ್ರ ತಾಂಡವವಾಡಿತ್ತಿದೆ. ಸತತ 40 ವರ್ಷಗಳಿಗಿಂತ ಹೆಚ್ಚು ಅಂತಾರಾಷ್ಟ್ರೀಯ ನಿರ್ಬಂಧಗಳಿಂದ ತತ್ತರಿಸಿಯೂ ಅಮರಿಕಗೆ ಮಣಿಯದೆ ಸೆಟೆದು ನಿಂತಿರುವ ಇರಾನ್ ಈಗ ಹೊಸ ಶತ್ರು. ಇರಾನಿನ ಪ್ರಭಾವ ಇರಾಕ್, ಸಿರಿಯಾ ಮತ್ತು ಯೆಮೆನ್ ಯುದ್ಧದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಗೋಚರಿಸುತ್ತಿದೆ. ಇಸ್ರೇಲ್, ಇರಾನ್, ಸಿರಿಯಾ, ಲೆಬನಾನ್, ಯೆಮೆನ್ ದೇಶದ ಕಲಹಗಳಲ್ಲಿ ಪರೋಕ್ಷ ಯುದ್ಧ ಸಾರಿವೆ.

ಸಿರಿಯಾ ಯುದ್ಧದ ನಂತರ ಇರಾನಿನ ಸೈನಿಕರು ಈಗ ಇಸ್ರೇಲ್ ಗಡಿಯವರೆಗೂ ವಿಸ್ತರಿಸಿದ್ದಾರೆ. ಇಸ್ಲಾಮಿಕ್ ಸ್ಟೇಟ್ ಎಂಬ ಭಯೋತ್ಪಾದಕ ಪೆಡಂಭೂತವನ್ನು ಮಣಿಸುವಲ್ಲಿ ಇರಾನಿಯ ಕ್ರಾಂತಿಕಾರಿ ಸೈನಿಕರು ಬಹುಮುಖ್ಯ ಪಾತ್ರ ವಹಿಸಿದ್ದರು. ಮುಖ್ಯವಾಗಿ ಜನವರಿ 3, 2020ರಲ್ಲಿ ಅಂತಾರಾಷ್ಟ್ರೀಯ ಕಾನೂನುಗಳ ಉಲ್ಲಂಘಿಸಿ ಕೊಲ್ಲಲ್ಪಟ್ಟ ಇರಾನಿ ಕ್ರಾಂತಿಕಾರಿ ಸೈನಿಕ ಪಡೆಯ ಮುಖ್ಯಸ್ಥ ಜನರಲ್ ಸೊಲೈಮಾನಿ ಪಾತ್ರ ಬಹು ದೊಡ್ಡದು. ಒಂದು ಕಡೆ ಇರಾನ್ ದೇಶವನ್ನು ಅಮೆರಿಕ, ಇಸ್ರೇಲ್ ಮತ್ತು ಹೊಸ ಒಕ್ಕೂಟದ ಪಡೆಗಳು ಸುತ್ತುವರೆದರೆ. ಇರಾನಿನ ಸೈನಿಕರು ಇಸ್ರೇಲ್ ಮತ್ತು ಅರಬ್ಬೀ ರಾಜಪ್ರಭುತ್ವಗಳನ್ನೂ ಸುತ್ತುವರೆದಿದ್ದಾರೆ. ಸಾಂಪ್ರದಾಯಿಕ ಯುದ್ಧದಲ್ಲಿ ಇರಾನ್, ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಗೆಲ್ಲಲಾಗುವುದಿಲ್ಲ. ಆದರೆ ಅಸಂಪ್ರದಾಯಕ ಯುದ್ಧದಲ್ಲಿ ಇರಾನ್ ಮೇಲುಗೈ ಸಾಧಿಸಿದೆ. ಇರಾನ್‌ಗೆ ಸಾಮ್ರಾಜ್ಯಶಾಹಿ ರಶಿಯಾ ಮತ್ತು ಚೀನಾ ಬೆಂಬಲವಿಲ್ಲದೆ ಯಾವುದೇ ತರಹದ ಗೆಲುವು ಅಸಾಧ್ಯ. ಆದ್ದರಿಂದ ಪ್ರತಿರೋಧದ ಶಕ್ತಿಯಾಗಿ ಇರಾನ್, ರಶಿಯಾ ಮತ್ತು ಚೀನಾ ಒಂದಾಗುತ್ತಿದ್ದಾರೆ, ತನ್ನ ದುರಹಂಕಾರಿ, ಸರ್ವಾಧಿಕಾರಿ, ದಮನಕಾರಿ ನಡೆಗಳಿಂದ ಅರಬ್ ಒಕ್ಕೊಟ ಅಮೇರಿಕ ಮತ್ತು ಇಸ್ರೇಲ್ ಜೊತೆ ಗುರುತಿಸಿಕೊಳ್ಳುತ್ತಿದೆ.

ಸಾಮ್ರಾಜ್ಯಶಾಹಿ ಶಕ್ತಿಗಳ ಪೈಪೋಟಿ ಮತ್ತು ಇಸ್ಲಾಮಿಕ್ ಪ್ರಪಂಚದ ಮೇಲೆ ಬೆಳೆಯುತ್ತಿರುವ ಚೀನಾದ ಪ್ರಭಾವ
ಸೋವಿಯೆತ್ ಯೂನಿಯನ್ ಪತನದ ನಂತರ ಏಕಪಕ್ಷೀಯವಾಗಿದ್ದ ಜಾಗತಿಕ ರಾಜಕೀಯ ಚೀನಾ ಪ್ರಗತಿಯಿಂದ ಮತ್ತೊಮ್ಮೆ ಬಹುಮುಖ ಜಾಗತಿಕ ರಾಜಕೀಯಕ್ಕೆ ನಾಂದಿಯಾಗಿದೆ. ಚೀನಾ ತನ್ನ ರಾಜತಾಂತ್ರಿಕತೆ ಮತ್ತು ಆರ್ಥಿಕ ಶಕ್ತಿಯಿಂದ ಇಸ್ಲಾಮಿಕ್ ರಾಷ್ಟ್ರಗಳತ್ತ ಒಳ್ಳೆಯ ಸ್ನೇಹ ಮತ್ತು ಬಾಂಧವ್ಯವನ್ನು ಸಾಧಿಸಿ ಕ್ಷಿಪ್ರಗತಿಯಲ್ಲಿ ಅಭಿವೃದ್ಧಿಗೆ ನೆರವಾಗುತ್ತಿದೆ. ಚೀನಾ ತನ್ನ ಎರಡನೆ ಸಿಲ್ಕ್ ರೋಡ್ ಯೋಜನೆಯಡಿ ಪಾಕಿಸ್ತಾನ, ಇರಾನ್, ಇರಾಕ್, ಸಿರಿಯಾ, ಈಜಿಪ್ಟ್, ಸೌದಿ, ಎಮಿರಾಟಿ, ಓಮನ್, ಕತಾರ್, ಟರ್ಕಿ, ಆಫ್ರಿಕಾದ ಉತ್ತರ ಭಾಗದ ಮುಸ್ಲಿಂ ರಾಷ್ಟ್ರಗಳು ಮತ್ತು ಆಗ್ನೇಯ ಏಷ್ಯಾದ, ಬಾಂಗ್ಲಾದೇಶ, ಮಲೇಷ್ಯಾ, ಇಂಡೋನೇಷ್ಯಾ ಬ್ರುನೈ ರಾಷ್ಟ್ರಗಳೊಂದಿಗೆ ಸ್ನೇಹ ಸಂಬಂಧಗಳನ್ನು ಹೆಚ್ಚಿಸಿಕೊಳ್ಳುತ್ತಿದೆ.

ತನ್ನ ತಂತ್ರಜ್ಞಾನ, ಮೂಲಸೌಕರ್ಯ ಯೋಜನೆಗಳು, ಬಂದರುಗಳು, ರೈಲ್ವೆ ಸಂಪರ್ಕ, ವ್ಯಾಪಾರ ವಹಿವಾಟು ಮೂಲಕ ತನ್ನ ಶಕ್ತಿಯನ್ನು ಶರವೇಗದಲ್ಲಿ ಬಲಪಡಿಸಿಕೊಳ್ಳುತ್ತಿದೆ. ಹೆಚ್ಚಾಗಿ ಮುಸ್ಲಿಂ ರಾಷ್ಟ್ರಗಳಲ್ಲಿ ಚೀನಾ ’ಪಾಲುದಾರಿಕೆ’, ’ರಾಜಕೀಯ ಸಮಾನತೆ’, ಮತ್ತು ’ಇಬ್ಬರ ಸಹಭಾಗಿತ್ವದ ಗೆಲುವು’ ಸಿದ್ಧಾಂತದ ಸಹಕಾರಿಯಂತೆ ಕಂಡರೆ, ಅದೇ ಪಾಶ್ಚಾತ್ಯ ಅಮೆರಿಕದ ಅಫ್ಘಾನಿಸ್ತಾನ, ಇರಾಕ್, ಸಿರಿಯಾ, ಲಿಬಿಯಾ, ಸುಡಾನ್, ಯೆಮೆನ್ ಯುದ್ಧಗಳ ನಂತರ ಹಸ್ತಕ್ಷೇಪವಾದಿ ವೈರಿಯಾಗಿ ಕಾಣತೊಡಗಿದೆ. ಸೋವಿಯೆತ್ ಪತನದ ನಂತರ ಸುಮ್ಮನಿದ್ದ ರಶಿಯಾ ಮತ್ತೆ ತನ್ನ ಮಿಲಿಟರಿ ಸಾಮರ್ಥ್ಯನನ್ನು ಸಿರಿಯಾದಲ್ಲಿ ನಿರೂಪಿಸಿದೆ. ಆದರೆ ರಷ್ಯಾಗೆ ತನ್ನದೇ ಆದ ಆರ್ಥಿಕ ಸವಾಲುಗಳಿವೆ. ಆದ್ದರಿಂದ ಅದು ಚೀನಾಗೆ ಹತ್ತಿರವಾಗುತ್ತಿದೆ.

ಇವೆಲ್ಲದರಲ್ಲಿ ಹೆಚ್ಚಾಗಿ ನಷ್ಟ ಅನುಭವಿಸುತ್ತಿರುವುದೇ ಭಾರತ. ಮೋದಿ ಸರ್ಕಾರ ತನ್ನೆಲ್ಲ ಸಾಂಪ್ರದಾಯಿಕ ಸ್ನೇಹಗಳನ್ನು ಬದಿಗಿಟ್ಟು ಅಮೆರಿಕ ಇಸ್ರೇಲ್ ಮತ್ತು ಅರಬ್ಬೀ ರಾಜಮನೆತನಗಳ ಸ್ನೇಹಕ್ಕೆ ಕೈ ಚಾಚುತ್ತಿದೆ. ಅಮೆರಿಕದ ಒತ್ತಡದಿಂದ ಇರಾನಿನೊಂದಿಗಿನ ಐತಿಹಾಸಿಕ ಬಾಂಧವ್ಯವನ್ನು, ಅನನ್ಯ ಸ್ನೇಹವನ್ನು ಹಾಳು ಮಾಡಿಕೊಂಡಿರುವ ಭಾರತ ಚಾಬಹಾರ್ ಬಂದರು ಮತ್ತು ಇರಾನಿನ ಬಹುದೊಡ್ಡ ಕಚ್ಚಾ ತೈಲ ಭಾವಿ ಫಾರ್ಜಾಡ್-ಬಿ ಕಳೆದುಕೊಂಡಿದೆ. ತನ್ನ ಮುಸ್ಲಿಂ ದ್ವೇಷಿ ರಾಜಕಾರಣದಿಂದ ತನ್ನ ನೆರೆಹೊರೆಯ ರಾಷ್ಟ್ರಗಳೆನ್ನಲ್ಲ ದೂರ ಮಾಡಿಕೊಂಡಿರುವ ಭಾರತ ಈಗ ತನ್ನ ಸಾಂಪ್ರದಾಯಿಕ ಮಿತ್ರರಾಷ್ಟ್ರ ರಷ್ಯಾವನ್ನು ಕೂಡ ದೂರ ಮಾಡಿಕೊಳ್ಳುತ್ತಿದೆ. ಇದಕ್ಕೆ ಸಾಕ್ಷಿಯಾಗಿ ರಷ್ಯಾದ ಅಂತರರಾಷ್ಟ್ರೀಯ ವ್ಯವಹಾರಗಳ ಮಂಡಳಿಯ ಅಂದ್ರೆ ಕೋರ್ಟುನೋವ್, ಚೀನಾದ ಗ್ಲೋಬಲ್ ಟೈಮ್ಸ್‌ನಲ್ಲಿ ಬರೆದಿರುವ ’ರಶಿಯಾ ಪೂರ್ವಕ್ಕೆ ಭಾರತ ಪಶ್ಚಿಮಕ್ಕೆ, ಸಂಬಂಧಗಳ ಹದಗೆಡುವಿಕೆ’ ಬರಹವೇ ಸಾಕ್ಷಿ.

ಮಧ್ಯಪ್ರಾಚ್ಯ ಏಷ್ಯಾ ಐತಿಹಾಸಿಕವಾಗಿ ಇಡೀ ಜಗತ್ತಿಗೆ ಬಹಳಷ್ಟು ಹೊಸದನ್ನು ಕೊಟ್ಟಿದೆ. ಒಳ್ಳೆಯ ಬದಲಾವಣೆಗಳಿಗೂ, ಕೆಟ್ಟ ಬದಲಾವಣೆಗಳಿಗೂ ನಾಂದಿ ಹಾಡಿದೆ. ಆದರೆ ಪ್ಯಾಲೆಸ್ಟೀನ್‌ಅನ್ನು ನಡುನೀರಿನಲ್ಲಿ ಕೈಬಿಟ್ಟು ಬಹಿರಂಗವಾಗಿ ಅನಾವರಣಗೊಳ್ಳುತ್ತಿರುವ ಈ ಸರ್ವಾಧಿಕಾರಿ ರಾಜಮನೆತನಗಳ ಒಕ್ಕೂಟದಿಂದ ಅರಬ್ ರಾಷ್ಟ್ರಗಳಿಂದಾಚೆಇರುವ ೮೦% ಮುಸಲ್ಮಾನರ ಮೇಲೆ ಯಾವ ಪರಿಣಾಮ ಬೀರುತ್ತದೆಯೆಂದು ಕಾದು ನೋಡಬೇಕಿದೆ.


ಇದನ್ನೂ ಓದಿ: ಟ್ರಂಪ್ ಒಬ್ಬ ವಿಫಲ ನಾಯಕ, ಅವರು ಇತಿಹಾಸದಲ್ಲಿ ಒಬ್ಬ ಕೆಟ್ಟ ಅಧ್ಯಕ್ಷರಾಗಿ ಉಳಿಯುತ್ತಾರೆ: ಅರ್ನಾಲ್ಡ್‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಜೆಪಿ ತೊರೆದು ಪ್ರಾದೇಶಿಕ ಪಕ್ಷದತ್ತ ಅಣ್ಣಾಮಲೈ : ದ್ರಾವಿಡ ಮಣ್ಣಿನಲ್ಲಿ ವಿಫಲವಾದ ಹಿಂದುತ್ವ ರಾಜಕೀಯ

ಮಾಜಿ ಐಪಿಎಸ್‌ ಅಧಿಕಾರಿ ಹಾಗೂ ಬಿಜೆಪಿ ತಮಿಳುನಾಡು ರಾಜ್ಯ ಘಟಕದ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಬಿಜೆಪಿ ತೊರೆದಿದ್ದು, ಹೊಸ ಪ್ರಾದೇಶಿಕ ಪಕ್ಷ ಕಟ್ಟಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಮಂಗಳವಾರ...

45 ಲೀಟರ್ ಟ್ಯಾಂಕಿಗೆ 52 ಲೀಟರ್ ಬಿಲ್ ಕೊಟ್ಟ ಚತುರ ಕಳ್ಳರು: ಕಾನ್ಪುರದಲ್ಲಿ ಪೆಟ್ರೋಲ್ ಬಂಕ್ ವಂಚನೆ ಪತ್ತೆ

ಉತ್ತರ ಪ್ರದೇಶದ ಕಾನ್ಪುರದಲ್ಲಿ ಹೊಸ ಕಾರು ಖರೀದಿಸಿದ ಮಾಲೀಕರೊಬ್ಬರು ಸ್ಥಳೀಯ ಪೆಟ್ರೋಲ್ ಬಂಕ್‌ಗೆ ಹೋದಾಗ ಅವರಿಗೆ ಒಂದು ಶಾಕಿಂಗ್ ಅನುಭವವಾಗಿದೆ. ಅವರ ಕಾರಿನ ಗರಿಷ್ಠ ಇಂಧನ ಟ್ಯಾಂಕ್ ಸಾಮರ್ಥ್ಯ ಕೇವಲ 45 ಲೀಟರ್...

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...