Homeಅಂತರಾಷ್ಟ್ರೀಯಅಮೇರಿಕದ ಜನಪ್ರಿಯ ಫುಟ್‍ಬಾಲ್ ಆಟಗಾರ್ತಿ ಮೇಗನ್ ರೆಪಿನೋ ರಾಷ್ಟ್ರಗೀತೆಯೊಂದಿಗೆ ದನಿಗೂಡಿಸುವುದಿಲ್ಲ ಯಾಕೆ ಗೊತ್ತೆ?

ಅಮೇರಿಕದ ಜನಪ್ರಿಯ ಫುಟ್‍ಬಾಲ್ ಆಟಗಾರ್ತಿ ಮೇಗನ್ ರೆಪಿನೋ ರಾಷ್ಟ್ರಗೀತೆಯೊಂದಿಗೆ ದನಿಗೂಡಿಸುವುದಿಲ್ಲ ಯಾಕೆ ಗೊತ್ತೆ?

- Advertisement -
- Advertisement -

ಮೇಗನ್ ರೆಪಿನೋ, ಅಮೇರಿಕದ ಮಹಿಳಾ ಫುಟ್‍ಬಾಲ್ ತಂಡದ ಸಹನಾಯಕಿ. ಇಷ್ಟು ಹೇಳಿದರೆ ಆಕೆಯ ಬಗ್ಗೆ ಏನೂ ಹೇಳಿದಂತಾಗುವುದಿಲ್ಲ. ಉತ್ತರ-ದಕ್ಷಿಣ ಅಮೇರಿಕ ಮತ್ತು ಯುರೋಪ್ ಖಂಡಗಳ ದೇಶಗಳಲ್ಲಿ ಫುಟ್‍ಬಾಲ್ ಎಂಬುದು ರಾಷ್ಟ್ರಧರ್ಮವೆಂದು ಕರೆಸಿಕೊಳ್ಳುತ್ತದೆ. ಆ ದೇಶಗಳ ಪ್ರತಿಯೊಬ್ಬ ಪ್ರಜೆ ಪ್ರೀತಿಸುವ, ಕಲಿತು ಆಡುವ, ಅಭಿಮಾನಿಸುವ, ಬಹಳಷ್ಟು ಮಂದಿ ಒಂದು ಗೀಳಿನಂತೆ ಆರಾಧಿಸುವ ಫುಟ್‍ಬಾಲ್ ಕ್ರೀಡೆಯ ಸುತ್ತಮುತ್ತ ಏನು ನಡೆದರೂ ಅದೊಂದು ಪ್ರಮುಖ ವಿಚಾರವಾಗುತ್ತದೆ.

ಇಂತಹ ಕ್ರೀಡೆಯನ್ನಾಡುವ ಮಹಿಳಾ ಫುಟ್‍ಬಾಲ್ ತಂಡದ ಅತ್ಯಂತ ಜನಪ್ರಿಯ ಆಟಗಾರ್ತಿಯರಲ್ಲಿ ಪ್ರಮುಖಳು ಮೇಗನ್ ರೆಪಿನೋ. ಈಕೆ, ದೀರ್ಘ ಕಾಲ ಮಹಿಳಾ ಫುಟ್‍ಬಾಲ್ ತಂಡದ ನಾಯಕಿಯಾಗಿ, ಅತ್ಯುತ್ತಮ ಲೀಡ್ ಆಟಗಾರ್ತಿಯಾಗಿ ತಂಡವನ್ನು ತಾನು ಆಡಿದ ಬಹುತೇಕ ಎಲ್ಲ ಪಂದ್ಯಗಳಲ್ಲೂ ವಿಜಯದೆಡೆಗೆ ಸಾಗಿಸಿದ, ಈಗಲೂ ಸಾಗಿಸಬಲ್ಲ ಛಾತಿಯುಳ್ಳವರು. ಈಗ 34 ವರ್ಷ ವಯಸ್ಸಾಗಿದ್ದರೂ, ತಂಡಕ್ಕೆ ಸೇರ್ಪಡೆಯಾಗಿರುವ 20-22 ವರ್ಷದ ಎಳೆಯ ಶಕ್ತಿಶಾಲಿ ಚುರುಕು ಆಟಗಾರ್ತಿಯರಿಗಿಂತಲೂ ಅತ್ಯುತ್ತಮ ಫಾರ್ಮ್‍ನಲ್ಲಿರುವ, ಇದೀಗ ನಡೆಯುತ್ತಿರುವ ಫಿಫಾ ಮಹಿಳಾ ವಿಶ್ವಕಪ್‍ನಲ್ಲಿಯೂ ಪ್ರತಿಯೊಂದು ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿರುವ ಕ್ರೀಡಾಪಟು.

ಒಬ್ಬ ಮಹಿಳಾ ಫುಟ್‍ಬಾಲ್ ಕ್ರೀಡಾಪಟುವಾಗಿ, ಈಕೆಯ ಕೌಶಲ್ಯ, ಶಕ್ತಿ, ಸಾಮರ್ಥ್ಯ, ಮತ್ತು ಕ್ರೀಡೆಯ ಬಗೆಗಿನ ಈಕೆಯ ಅದಮ್ಯ ಪ್ರೀತಿ ಮತ್ತು ಬದ್ಧತೆ ಪ್ರಶ್ನಾತೀತ. ಇದು, ಆ ದೇಶದ ಮಹಿಳಾ ಫುಟ್‍ಬಾಲ್ ತಂಡಕ್ಕೂ ಮತ್ತು ಎಲ್ಲ ಕ್ರೀಡಾಭಿಮಾನಿಗಳಿಗೂ ಅನುಮಾನಕ್ಕೆ ಎಡೆಯಿಲ್ಲದಂತೆ ಗೊತ್ತಿರುವ ಸಂಗತಿ. ಈಗ ಫ್ರಾನ್ಸ್ ನಲ್ಲಿ ನಡೆಯುತ್ತಿರುವ ‘ಫಿಫಾ ಮಹಿಳಾ ಫುಟ್‍ಬಾಲ್ ವಿಶ್ವಕಪ್’ನಲ್ಲಿ ಅಮೇರಿಕದ ತಂಡ ಈವರೆಗೆ ಆಡಿ ಗೆದ್ದಿರುವ 8 ಪಂದ್ಯಗಳಲ್ಲಿ ದೊರೆತಿರುವ ಎಲ್ಲ ಗೋಲುಗಳಲ್ಲೂ ಗಳಿಸಿದಾಕೆ ಇದೇ ಮೇಗನ್ ರೆಪಿನೋ.

ಅಂತಹ ಅದ್ವಿತೀಯ ಆಟಗಾರ್ತಿಯ ಬಗ್ಗೆ ಇಲ್ಲಿ ಬರೆಯುತ್ತಿರುವುದು ಇವಿಷ್ಟು ಕಾರಣಗಳಿಗಾಗಿ ಮಾತ್ರವಲ್ಲ! ಇತ್ತೀಚೆಗೆ ಆಕೆ ತಾನೊಬ್ಬ ನಾಗರೀಕಳಾಗಿ, ಜವಾಬ್ದಾರಿಯುಳ್ಳ ಒಬ್ಬ ಪ್ರಜೆಯಾಗಿ ತೋರಿದ ಅದ್ವಿತೀಯವಾದ ಮಾನವೀಯ ಸ್ಪಂದನಕ್ಕಾಗಿ; ದಿಟ್ಟ, ಧೀರ ನಡವಳಿಕೆಗಾಗಿ. ತನ್ನ ದೇಶದ ಬಿಳಿಯ ನಾಗರೀಕರು- ವಿಶೇಷವಾಗಿ ಪೊಲೀಸರು ಕಪ್ಪು ಜನರು ಮತ್ತು ಇನ್ನಿತರ ವರ್ಣೀಯ ಜನರ ವಿರುದ್ಧ ತೋರುತ್ತಿರುವ ಅಸಹಿಷ್ಣುತೆ, ಅವರ ಮೇಲೆ ನಡೆಸುತ್ತಿರುವ ಹಲ್ಲೆ ಮತ್ತು ಅಮಾಯಕರ ಕೊಲೆಗಳ ವಿರುದ್ಧ ಧೈರ್ಯದಿಂದ ದನಿಯೆತ್ತಿರುವುದಕ್ಕಾಗಿ ಮೇಗನ್ ರೆಪಿನೋ ಬಗ್ಗೆ ತಿಳಿಯಬೇಕಾಗಿದೆ ಮತ್ತು ಮಾತಾಡಬೇಕಾಗಿದೆ.

ಕಳೆದ ವರ್ಷ ಅಮೇರಿಕದಲ್ಲಿ ನಡೆದ ಆಂತರಿಕ ಮಹಿಳಾ ಫುಟ್‍ಬಾಲ್‍ನ ಲೀಗ್ ಪಂದ್ಯಗಳು ಅಮೇರಿಕದ ಸಾಮಾನ್ಯ ನಾಗರೀಕರಿಗೆ ಶಾಕ್ ಟ್ರೀಟ್‍ಮೆಂಟ್ ಕೊಟ್ಟವು. ಯಾಕೆಂದರೆ, ಪ್ರತಿಯೊಂದು ಪಂದ್ಯಕ್ಕೂ ಮೊದಲು ನುಡಿಸಲಾಗುವ ಅಮೇರಿಕದ ರಾಷ್ಟ್ರಗೀತೆಗೆ ಹೆಮ್ಮೆಯಿಂದ ಹೃದಯದ ಮೇಲೆ ಕೈಯಿಟ್ಟುಕೊಂಡು ದನಿಗೂಡಿಸಬೇಕಾದ ತಮ್ಮ ನೆಚ್ಚಿನ ಮಹಿಳಾ ಕ್ರೀಡಾಪಟು ಮೇಗನ್ ರೆಪಿನೋ, ರಾಷ್ಟ್ರಗೀತೆ ಹಾಡುವುದನ್ನು ನಿರಾಕರಿಸಿ, ಪ್ರತಿಭಟನಾಸೂಚಕವಾಗಿ ಮಂಡಿಯೂರಿ ನಿಂತಿದ್ದಳು!! ಪಂದ್ಯಗಳ ನಂತರದ ಸಂದರ್ಶನಗಳಲ್ಲಿ, ‘ಅಮೇರಿಕದ ಸರ್ಕಾರ ಪೊಲೀಸ್ ಪಡೆ ಮತ್ತು ನಾಗರೀಕರು ತಮ್ಮದೇ ದೇಶದ ಪ್ರಜೆಗಳಾದ ಕಪ್ಪುಜನರು ಮತ್ತು ವರ್ಣೀಯ ಜನರನ್ನು (ಕಂದು ಮತ್ತಿತರ ಮೈಬಣ್ಣ ಹೊಂದಿರುವ ಇತರ ದೇಶಗಳ ವಲಸಿಗರು) ಅಸಮಾನತೆಯಿಂದ ನಡೆಸಿಕೊಳ್ಳುತ್ತಾ, ಅತ್ಯಂತ ಬರ್ಬರವಾಗಿ ಕೊಲೆಗಳನ್ನೂ ಮಾಡುತ್ತಿರುವಾಗ, ತಾನು ಹೇಗೆ ರಾಷ್ಟ್ರಗೀತೆಗೆ ದನಿಗೂಡಿಸಲು ಸಾಧ್ಯ’ ಎಂದಾಕೆ ಮಾಧ್ಯಮಗಳನ್ನು ಪ್ರಶ್ನಿಸಿದರು.

ಇದಕ್ಕೂ ಮೊದಲು ಪ್ರಖ್ಯಾತ ರಾಷ್ಟ್ರೀಯ ಫುಟ್‍ಬಾಲ್ ಲೀಗ್ ಆಟಗಾರ ಕೊಲಿನ್ ಕೇಪರ್‍ನಿಕ್ ಕೂಡಾ ಇದೇ ರೀತಿಯ ಪ್ರತಿಭಟನೆಯನ್ನು ದಾಖಲಿಸಿ, ರಾಷ್ಟ್ರಗೀತೆಯ ಸಂದರ್ಭದಲ್ಲಿ ನೆಲದ ಮೇಲೆ ಕುಳಿತುಕೊಳ್ಳುವ ಮೂಲಕ ತನ್ನ ದೇಶದ ತುಳಿಯಲ್ಪಟ್ಟ ಜನರ ಬಗ್ಗೆ ತನ್ನ ಬದ್ಧತೆಯನ್ನು ಪ್ರದರ್ಶಿಸಿದ್ದರು. “ಅವರ ಮಾತುಗಳು ತನ್ನನ್ನು ಪ್ರೇರೇಪಿಸಿದವು, ಏಕೆಂದರೆ ಕೊಲಿನ್ ಕೇಪರ್‍ನಿಕ್ ಅವರು ಯಾರನ್ನೂ ಮೆಚ್ಚಿಸುವುದಕ್ಕಾಗಿ ಹೀಗೆ ಮಾಡಲಿಲ್ಲ, ‘ಅಮೇರಿಕಾ ದೇಶವೆಂದರೆ ಅದು ಬಿಳಿಯರು ಮಾತ್ರವಲ್ಲ, ಕರಿಯರು ಮತ್ತು ವರ್ಣೀಯರು ಎಲ್ಲರೂ ಸೇರಿ ಕಟ್ಟಿದ ದೇಶ, ತಾನು ಈ ದೇಶದ ರಾಷ್ಟ್ರೀಯ ಕ್ರೀಡೆಯನ್ನು ಪ್ರತಿನಿಧಿಸುತ್ತೇನಾದರೆ, ಅದು ಅವರೆಲ್ಲರನ್ನೂ ಒಳಗೊಂಡ ಪ್ರತಿನಿಧಿತ್ವವೇ ಆಗಿರುತ್ತದೆ. ಹಾಗಿರುವಾಗ ಅವರುಗಳ ಮೇಲೆ ನಡೆಯುವ ಅಮಾನವೀಯ ದೌರ್ಜನ್ಯವನ್ನು ಸುಮ್ಮನೆ ನೋಡುತ್ತಾ ಸಹಿಸಲು ಸಾಧ್ಯವಿಲ್ಲವಾದ ಕಾರಣ ನನ್ನ ಪ್ರತಿಕ್ರಿಯೆ ಕೊಡುತ್ತಿದ್ದೇನೆ’ ಎಂದು ಹೇಳಿದ ಮಾತುಗಳು ಅತ್ಯಂತ ಪ್ರಾಮಾಣಿಕವಾಗಿದ್ದವು ಮತ್ತು ನನ್ನನ್ನು ತಟ್ಟಿದವು” ಎಂದು ಮೇಗನ್ ಅವರು ಹೇಳಿಕೊಂಡಿದ್ದಾರೆ.

ಅಮೇರಿಕದಲ್ಲಿ ಕಪ್ಪುಜನರು ಮತ್ತು ಬಿಳಿ ವರ್ಣೀಯರ ಮೇಲಿನ ಹಿಂಸಾಚಾರಕ್ಕೆ ಸಾಕಷ್ಟು ಸುದೀರ್ಘ ಕರಾಳ ಇತಿಹಾಸವಿದೆ. ಇಂದಿನವರೆಗೂ ಎಲ್ಲ ಕಾನೂನುಗಳನ್ನೂ ಮೀರಿ ನಡೆಯುತ್ತಿರುವ ಈ ಅನ್ಯಾಯವನ್ನು ಪ್ರತಿಭಟಿಸುತ್ತಾ 2015ರಲ್ಲಿ ಹುಟ್ಟಿಕೊಂಡ ಚಳವಳಿ-‘ಬ್ಲ್ಯಾಕ್ ಲೈವ್ಸ್ ಮ್ಯಾಟರ್’ (ಕಪ್ಪು ಬದುಕುಗಳಿಗೂ ಬೆಲೆಯಿದೆ). ಈ ಚಳವಳಿಯ ಪರವಾಗಿ ಅನೇಕಾನೇಕ ಕಪ್ಪು ಮತ್ತು ವರ್ಣೀಯ ಸಲೆಬ್ರಿಟಿಗಳು ಹೇಳಿಕೆಗಳನ್ನು, ಹಣಸಹಾಯವನ್ನು, ತಮ್ಮ ಕಲೆಗಳ ಪ್ರದರ್ಶನವನ್ನು ನೀಡುತ್ತಲೇ ಬಂದಿದ್ದಾರೆ.

ಪ್ರಖ್ಯಾತ ಕಲಾವಿದ ದಂಪತಿ ಕ್ರಿಸ್ ತೇಗನ್ ಮತ್ತು ಜಾನ್ ಲೆಜೆಂಡ್, ಹಾಡುಗಾರ ವೀಕನ್ಡ್, ಕಲಾವಿದೆ ಕಿಮ್ ಕರ್ದಶಿಯನ್ ವೆಸ್ಟ್, ಕೆರ್ರಿ ವಾಷಿಂಗ್ಟನ್, ಖ್ಯಾತ ಅಥ್ಲೀಟುಗಳಾದ ಕಾರ್ಮೆಲೋ ಆಂಥನಿ, ಕ್ರಿಸ್ ಪಾಲ್, ಡ್ವೇನ್ ವೇಡ್ ಮತ್ತು ಲೆಬ್ರಾನ್ ಜೇಮ್ಸ್ ಮೊದಲಾದ ಕಪ್ಪು ವರ್ಣೀಯ ಸೆಲೆಬ್ರಿಟಿಗಳು ‘ಬ್ಲಾಕ್ ಲೈನ್ಸ್ ಮ್ಯಾಟರ್’ ಪರವಾಗಿ ಸಾಕಷ್ಟು ಗಟ್ಟಿಯಾಗಿಯೇ ಮಾತನಾಡಿದ್ದಾರೆ. ಪ್ರತಿಭಟನೆಗಳಲ್ಲಿ ಪಾಲ್ಗೊಂಡಿದ್ದಾರೆ, ಸಾಕ್ಷ್ಯಚಿತ್ರಗಳನ್ನು ತೆಗೆದಿದ್ದಾರೆ ಮತ್ತು ಚಾರಿಟಿ ಶೋಗಳ ಮೂಲಕ ಹಣ ಸಂಗ್ರಹಿಸಿ ಕೊಟ್ಟಿದ್ದಾರೆ. ಅವರ ಜೊತೆಗೆ ಈಗ ಕೊಲಿನ್ ಕೊಪರ್‍ನಿಕ್ ಮತ್ತು ಮೇಗನ್ ಕೂಡಾ ಸೇರಿಕೊಂಡಿದ್ದಾರೆ.

‘ಬ್ಲಾಕ್ ಲೈವ್ಸ್ ಮ್ಯಾಟರ್’ ಚಳುವಳಿಯನ್ನು ಈ ಇಬ್ಬರು ಬೆಂಬಲಿಸುವುದಕ್ಕೆ ಹೆಚ್ಚು ಮಹತ್ವ ಸಿಕ್ಕಿರುವುದು ಈ ಇಬ್ಬರೂ ಬಿಳಿಯ ಪ್ರಜೆಗಳಾದ ಕಾರಣಕ್ಕೂ ಕೂಡಾ. ಕಪ್ಪು ಮತ್ತು ವರ್ಣೀಯರ ಆಂದೋಲನವನ್ನು ಬೆಂಬಲಿಸಿದ ಮೊದಲ ಬಿಳಿ ಮಹಿಳಾ ಕ್ರೀಡಾಪಟುವೆನ್ನಿಸಿಕೊಂಡಿರುವ ಮೇಗನ್ ರೆಪಿನೋ ಇದನ್ನೂ ಕೂಡಾ ಗುರುತಿಸಿದ್ದಾರೆ.

“ನಾನು ಈ ಹೆಜ್ಜೆಯನ್ನಿಟ್ಟು ಸಾಕಷ್ಟು ನಷ್ಟಗಳಿಗೆ ತುತ್ತಾಗಿದ್ದೇನೆ, ದಾಳಿಗಳಿಗೆ ಗುರಿಯಾಗಿದ್ದೇನೆ; ಆದರೆ, ಆಗೆಲ್ಲ ನಾನು ಅಂದುಕೊಳ್ಳುವುದು ಇಷ್ಟೆ, ಬಿಳಿಯಳಾಗಿ ಸಾಕಷ್ಟು ಅನುಕೂಲತೆಗಳನ್ನು ಈಗಲೂ ಪಡೆದಿರುವ ನನಗೇ ಇಷ್ಟು ಕಷ್ಟವೆನಿಸಿದರೆ, ಈ ಚಾರಿತ್ರಿಕ ಅಸಮಾನತೆಯ ವಿರುದ್ಧ ದನಿಯೆತ್ತಿರುವ ನಮ್ಮ ಕಪ್ಪು ಮತ್ತು ವರ್ಣೀಯ ಸಹೋದರ ಸಹೋದರಿಯರಿಗೆ ಇನೆಷ್ಟು ಕಷ್ಟನಷ್ಟಗಳು ಎದುರಾಗಿರಬಹುದು? ಏನನ್ನಾದರೂ ಬದಲಾಯಿಸಬೇಕೆಂದರೆ, ಇರುವಂತೆಯೇ ಇರಲು ಬಿಡದೆ ಪರಿವರ್ತಿಸಬೇಕೆಂದರೆ ಇಷ್ಟಾದರೂ ಆಗಲೇಬೇಕು; ಇಷ್ಟನ್ನು ನಾನು ಸಹಿಸಲೇಬೇಕು”. ಹೀಗೆ ಹೇಳುತ್ತಾ, ತನ್ನ ಪ್ರತಿಭಟನೆಯ ಹಾದಿಯಲ್ಲಿ ಅವರು ಮುನ್ನಡೆದಿದ್ದಾರೆ.

ಆಂತರಿಕ ಲೀಗ್ ಪಂದ್ಯಗಳಲ್ಲಿ ಮಂಡಿಯೂರಿದ್ದ ರೆಪಿನೋ ಪ್ರತಿಭಟನೆಗೆ ಬೆದರಿದ ಫುಟ್‍ಬಾಲ್ ಮಂಡಳಿ, ಆಟಗಾರರ ನಿಯಮಾವಳಿಗೇ ಏಕಪಕ್ಷೀಯ ತಿದ್ದುಪಡಿ ತಂದು, ರಾಷ್ಟ್ರಗೀತೆಯ ಸಂದರ್ಭದಲ್ಲಿ ಯಾರೂ ಮಂಡಿಯೂರುವಂತಿಲ್ಲ ಎಂದು ಆದೇಶಿಸಿದೆ. ಅದಾದ ಮೇಲೆ ನಡೆಯುತ್ತಿರುವ ಫಿಫಾ ವಿಶ್ವಕಪ್‍ನಲ್ಲಿ ರೆಪಿನೋ ಮಂಡಿಯೂರುತ್ತಿಲ್ಲ, ಆದರೆ ರಾಷ್ಟ್ರಗೀತೆಯನ್ನು ಹಾಡುತ್ತಲೂ ಇಲ್ಲ. ಧೀರ ಗಂಭೀರ ನಿಲುವಿನೊಂದಿಗೆ ತನ್ನ ವಿರೋಧ ದಾಖಲಿಸುತ್ತಲೇ ಇದ್ದಾರೆ.

ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರೆಪಿನೋ ಅವರನ್ನು ‘ಬಿಚ್’ (ಸೂಳೆ) ಎಂದು ಕರೆದು, “ಆಕೆಯನ್ನು ಮೈದಾನದಿಂದ ಎಳೆದು ಹೊರಕ್ಕೆಸೆಯಿರಿ” ಎಂದು ಕರೆಕೊಟ್ಟರೆ, ಮೇಗನ್ ರೆಪಿನೋ ಜೊತೆಗಾರ್ತಿ ಆಟಗಾರ್ತಿಯರು ಮತ್ತು ಕೋಚ್ ಆಕೆಯ ಹೋರಾಟಕ್ಕೆ ಪರೋಕ್ಷ ಬೆಂಬಲ ನೀಡಿದ್ದಾರೆ. ‘ಆಕೆಯೊಬ್ಬ ಅತ್ಯುತ್ತಮ ಕ್ರೀಡಾಪಟು ಮತ್ತು ತಂಡಕ್ಕೆ ಅಮೂಲ್ಯ ಆಸ್ತಿ, ಒಳ್ಳೆಯ ಗೆಳತಿ ಮತ್ತು ಸಹ ಆಟಗಾರ್ತಿ. ಇದನ್ನು ಬಿಟ್ಟು ಉಳಿದ ಆಕೆಯ ನಿಲುವುಗಳು ಆಕೆಯ ಇಷ್ಟ, ಆ ಬಗ್ಗೆ ನಾವು ಚರ್ಚಿಸುವುದಿಲ್ಲ’ ಎಂದು ತಂಡ ಹೇಳಿದ್ದರೆ, ಕೋಚ್ ಪ್ರತಿಕ್ರಿಯಿಸಿ ‘ರೆಪಿನೋ ಯಾವಾಗಲೂ ದಿಟ್ಟವಾದ ನಿಲುವು ಮತ್ತು ಮಾತುಗಳನ್ನು ಹೊಂದಿರುವವರು. ಅದಕ್ಕಾಗಿ ಆಕೆಯನ್ನು ಗೌರವಿಸಬೇಕೇ ಹೊರತು ತೆಗಳಬೇಕಿಲ್ಲ’ ಎಂದಿದ್ದಾರೆ.

ಮೇಗನ್ ರೆಪಿನೋ ಈ ಹಿಂದೆಯೂ ಮಹಿಳಾ ಅಸಮಾನತೆಯ ಬಗ್ಗೆ, ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ ಗಟ್ಟಿದನಿಯಲ್ಲಿ ಮಾತನಾಡಿದವರು. ತಾನು ಸ್ವತಃ ಒಬ್ಬ ಲೆಸ್ಬಿಯನ್ ಆಗಿರುವುದನ್ನು ಯಾವ ಮುಚ್ಚುಮರೆಯಿಲ್ಲದೆ ಚರ್ಚಿಸಿದವರು. ಇಂತಹ ಅವರ ಕಾಳಜಿಗಳ ವಿಸ್ತರಣೆಯಾಗಿ ಈಗಿನ ಅವರ ಪ್ರತಿಭಟನೆಯೂ ಇದೆ. ನಿಜಕ್ಕೂ ಮೇಗನ್ ರೆಪಿನೋ ಅಭಿನಂದನಾರ್ಹರು. ಹಾದಿಬೀದಿಗಳಲ್ಲಿ ಅಮಾಯಕ ಅಲ್ಪಸಂಖ್ಯಾತರನ್ನು, ದಲಿತರು, ಮಹಿಳೆಯರು, ಆದಿವಾಸಿಗಳನ್ನು ಕಟ್ಟಿಹಾಕಿ ಥಳಿಸಿ ಕೊಂದರೂ ತುಟಿಪಿಟಕ್ಕೆನ್ನದ ಭಾರತದ ಸೆಲೆಬ್ರಿಟಿ ಕೋಟ್ಯಾಧಿಪತಿಗಳ ನಡುವೆ ಅಮೇರಿಕದ ಹೆಸರಾಂತರ ಈ ಸಾಮಾಜಿಕ ಜವಾಬ್ದಾರಿಯ ನಡವಳಿಕೆ ಇನ್ನಷ್ಟು ತಟ್ಟುತ್ತದೆ; ಮುಖ್ಯವೆನ್ನಿಸುತ್ತದೆ.

ಕೃಪೆ: ‘ಮುನ್ನಡೆ’ ಮಹಿಳಾ ಪತ್ರಿಕೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದಟ್ಟಾರಣ್ಯದೊಳಗೆ ಮೂರು ದಿನಗಳನ್ನು ಕಳೆದಿದ್ದು ಹೇಗೆ..ದಾರಿ ತಪ್ಪಿದ ಬಳಿಕ ಏನಾಯ್ತು? ನಾಪತ್ತೆ ವಿಚಾರ ಬಿಚ್ಚಿಟ್ಟ ಶರಣ್ಯ

ಕಳೆದ ಗುರುವಾರ (ಏಪ್ರಿಲ್ 2, 2026) ಕೊಡಗಿನ ತಡಿಯಂಡಮೋಳ್ ಬೆಟ್ಟಕ್ಕೆ ಚಾರಣಕ್ಕೆ ತೆರಳಿ ನಾಪತ್ತೆಯಾಗಿದ್ದ ಕೇರಳದ ಯುವತಿ ಶರಣ್ಯ, ಮೂರು ದಿನಗಳ ಬಳಿಕ, ಅಂದರೆ ನಾಪತ್ತೆಯಾದ ನಾಲ್ಕನೇ ದಿನ ಭಾನುವಾರ (ಏಪ್ರಿಲ್ 4,...

ಮಗಳ ವಿಚ್ಛೇದನ: ಸಿಹಿ ಹಂಚಿ, ಮೆರವಣಿಗೆಯಲ್ಲಿ ಆಕೆಯನ್ನು ಮನೆಗೆ ಕರೆತಂದ ನೀವೃತ್ತ ನ್ಯಾಯಾದೀಶ ಮತ್ತು ಕುಟುಂಬ

ಮೀರತ್: ಕೌಟುಂಬಿಕ ನ್ಯಾಯಾಲಯದಲ್ಲಿ ಮಗಳ ವಿಚ್ಛೇದನ ಅಂತಿಮವಾದ ನಂತರ ಆಕೆಯನ್ನು ಡೋಲು, ನೃತ್ಯಗಳ ಮೆರವಣಿಗೆಯಲ್ಲಿ ಸಂಭ್ರಮದಿಂದ ತಂದೆ ಮನೆಗೆ ಕರೆತಂದ ಘಟನೆ ಮೀರನ್ ನಲ್ಲಿ ನಡೆದಿದೆ.  ಪೋಷಕರ ಬೆಂಬಲದ ಅಪರೂಪದ ಮತ್ತು ಹೃದಯಸ್ಪರ್ಶಿ ಪ್ರದರ್ಶನದಲ್ಲಿ,...

“ನೀನು ನಿಜವಾಗಿಯೂ ಅಂಬೇಡ್ಕರ್ ಮಗಳಾ ಎಂದು ತಿಳಿಯಲು ನಾವು ನಿನ್ನ ಡಿಎನ್‌ಎ ಟೆಸ್ಟ್ ಮಾಡುತ್ತೇವೆ” ದೆಹಲಿ ಸಭೆಯಲ್ಲಿ ದಲಿತ ಟ್ರಾನ್ಸ್ ಹೋರಾಟಗಾರ್ತಿ ಗ್ರೇಸ್ ಬಾನುಗೆ ಜಾತಿ ನಿಂದನೆ ಆರೋಪ

ಕೇಂದ್ರ ಸರ್ಕಾರದ ವಿವಾದಾತ್ಮಕ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಕಾಯ್ದೆ, 2026ರ ವಿರುದ್ಧ ಕಳೆದ ಕೆಲ ವಾರಗಳಿಂದ ಇಡೀ ಟ್ರಾನ್ಸ್‌ಜೆಂಡರ್ ಮತ್ತು ಪ್ರಗತಿಪರ ಸಮುದಾಯ ಪ್ರತಿಭಟನೆ ನಡೆಸುತ್ತಿದೆ. ಈ ನಡುವೆ ಶುಕ್ರವಾರ...

‘ಮೋದಿ ಕ್ರಿಶ್ಚಿಯನ್ ಸಂಸ್ಥೆಗಳಲ್ಲಿ ಭಯ ಹುಟ್ಟಿಸಲು ಪ್ರಯತ್ನಿಸುತ್ತಿದ್ದಾರೆ’: ಎಫ್‌ಸಿಆರ್‌ಎ ತಿದ್ದುಪಡಿ ಕುರಿತು ಮಲ್ಲಿಕಾರ್ಜುನ ಖರ್ಗೆ

ಇಡುಕ್ಕಿ (ಕೇರಳ): ಸಾರ್ವಜನಿಕ ಮತ್ತು ಸಾಮಾಜಿಕ ಕಲ್ಯಾಣ ಕ್ಷೇತ್ರದಲ್ಲಿ ಕೆಲಸ ಮಾಡುವ ಕ್ರಿಶ್ಚಿಯನ್ ಸಂಸ್ಥೆಗಳು, ಎನ್‌ಜಿಒಗಳು ಮತ್ತು ನಾಗರಿಕ ಸಮಾಜದ ಮೇಲೆ ದಾಳಿ ಮಾಡಲು ಪ್ರಧಾನಿ ನರೇಂದ್ರ ಮೋದಿ ಎಫ್‌ಸಿಆರ್‌ಎ (ವಿದೇಶಿ ದೇಣಿಗೆ...

ವೈದ್ಯಕೀಯ, ತಾಂತ್ರಿಕ ಶಿಕ್ಷಣದಲ್ಲಿ ಎಸ್‌ಸಿ/ಎಸ್‌ಟಿ ಮೀಸಲಾತಿ ಹೆಚ್ಚಿಸಿದ ಒಡಿಶಾ ಸರ್ಕಾರ, ಒಬಿಸಿ ವಿದ್ಯಾರ್ಥಿಗಳಿಗೆ ಹೊಸ ಕೋಟಾ

ಮಹತ್ವದ ನಿರ್ಧಾರ ಕೈಗೊಂಡಿರುವ ಒಡಿಶಾ ಸರ್ಕಾರ, ವೈದ್ಯಕೀಯ, ಇಂಜಿನಿಯರಿಂಗ್ ಮತ್ತು ಇತರ ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣ ಕೋರ್ಸ್‌ಗಳಲ್ಲಿ ಪರಿಶಿಷ್ಟ ಪಂಗಡ (ಎಸ್‌ಟಿ), ಪರಿಶಿಷ್ಟ ಜಾತಿ (ಎಸ್‌ಸಿ) ಅಭ್ಯರ್ಥಿಗಳಿಗೆ ಮೀಸಲಾತಿಯನ್ನು ಗಣನೀಯವಾಗಿ ಹೆಚ್ಚಿಸಿದೆ....

ಶಾಲಾ ವಾರ್ಷಿಕೋತ್ಸವದಲ್ಲಿ ಲವಲವಿಕೆಯಿಂದ ಭಾಗವಹಿಸಿದ್ದ 6 ಮಕ್ಕಳು, ತಡರಾತ್ರಿ ಹೊತ್ತಿಗೆ ಶವವಾದರು : ಮಹಾರಾಷ್ಟ್ರದಲ್ಲೊಂದು ಹೃದಯ ವಿದ್ರಾವಕ ಘಟನೆ

ಶಾಲಾ ವಾರ್ಷಿಕೋತ್ಸವದಲ್ಲಿ ಬಹಳ ಉತ್ಸಾಹದಿಂದ ಭಾಗವಹಿಸಿದ್ದ ಆರು ಮಂದಿ ಮಕ್ಕಳು, ತಡ ರಾತ್ರಿ ಹೊತ್ತಿಗೆ ಶವವಾದ ಹೃದಯ ವಿದ್ರಾವಕ ಘಟನೆಯೊಂದು ಮಹಾರಾಷ್ಟ್ರದ ದಿಂಡೋರಿಯಲ್ಲಿ ಶುಕ್ರವಾರ (ಏ.3) ನಡೆದಿದೆ. ನಾಸಿಕ್‌ ನಗರದಿಂದ 20 ಕಿಲೋ...

ಕೇರಳ: ಕೊಲ್ಲಂನಲ್ಲಿ ಟಿವಿ ಚಾನೆಲ್ ಕಚೇರಿ ಮೇಲೆ ಸ್ಫೋಟಕ ವಸ್ತು ಎಸೆತ

ಕೊಲ್ಲಂ: ಇಲ್ಲಿನ ಟಿವಿ ಚಾನೆಲ್ ಒಂದರ ಕಚೇರಿಯ ಮೇಲೆ ಭಾನುವಾರ ಬೆಳಿಗ್ಗೆ ಸ್ಫೋಟಕ ವಸ್ತು ಎಸೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಆ ಪ್ರದೇಶ ಮತ್ತು ಚಾನೆಲ್ ಕಚೇರಿಯ ಸಿಸಿಟಿವಿ ದೃಶ್ಯಗಳಲ್ಲಿ ಇಬ್ಬರು...

ಹತ್ಯೆಯಾದ ಇರಾನ್ ಕಮಾಂಡರ್ ಖಾಸಿಮ್ ಸುಲೈಮಾನಿ ಅವರ ಸೊಸೆ, ಮೊಮ್ಮಗಳನ್ನು ಬಂಧಿಸಿದ ಅಮೆರಿಕ

ನವದೆಹಲಿ: ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಶುಕ್ರವಾರ ತಮ್ಮ ಶಾಶ್ವತ ನಿವಾಸಿ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ನ ದಿವಂಗತ ನಾಯಕ ಖಾಸಿಮ್ ಸೊಲೈಮಾನಿ ಅವರ...

ಇರಾನ್ ಮೇಲೆ ಬೃಹತ್ ದಾಳಿ: ಹಲವು ಉನ್ನತ ನಾಯಕರನ್ನು ಕೊಲ್ಲಲಾಗಿದೆ ಎಂದು ವಿಡಿಯೋ ಹಂಚಿಕೊಂಡ ಟ್ರಂಪ್

ಟೆಹ್ರಾನ್ ಮೇಲೆ ನಡೆದ ದಾಳಿಯ ವೀಡಿಯೊವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಂಚಿಕೊಂಡಿದ್ದು, ಹಲವಾರು ಇರಾನ್ ಮಿಲಿಟರಿ ನಾಯಕರ ಸಾವಿಗೆ ಅದು ಕಾರಣ ಎಂದು ಹೇಳಿಕೊಂಡಿದ್ದಾರೆ. "ಟೆಹ್ರಾನ್‌ನಲ್ಲಿ ನಡೆದ ಈ ಬೃಹತ್ ದಾಳಿಯೊಂದಿಗೆ, ಇರಾನ್‌ನ...

ಅಸ್ಸಾಂ ಚುನಾವಣೆ : ನುಸುಳುಕೋರರಿಂದ ಯುವ ಕಲ್ಯಾಣಕ್ಕೆ ವರಸೆ ಬದಲಿಸಿದ ಬಿಜೆಪಿ

ಅಸ್ಸಾಂ ವಿಧಾನಸಭಾ ಚುನಾವಣೆಗೆ ನಾಲ್ಕು ದಿನಗಳು ಬಾಕಿ ಇರುವಾಗ ಬಿಜೆಪಿ ತನ್ನ ಪ್ರಚಾರದ ವರಸೆಯನ್ನು ಬದಲಿಸಿಕೊಂಡಿದೆ. ನುಸುಳುಕೋರರನ್ನು ಹೊರಹಾಕುತ್ತೇವೆ, ಅಕ್ರಮ ವಲಸೆಗೆ ಕಡಿವಾಣ ಹಾಕುತ್ತೇವೆಂದು ಅಬ್ಬರಿಸುತ್ತಿದ್ದ ಬಿಜೆಪಿಗರು, ಈಗ ನುಸುಳಕೋರರ ವಿಷಯವನ್ನು ಬದಿಗೊತ್ತಿದ್ದಾರೆ....