Homeಮುಖಪುಟಗಂಗಾ ಮಾತೆಯ ಹೆಸರಿನಲ್ಲಿ ಹಣ ನುಂಗಿ, ಸುಳ್ಳು ಹೇಳಿದ ಮೋದಿ. ಒಂದು ವಿಡಿಯೋ

ಗಂಗಾ ಮಾತೆಯ ಹೆಸರಿನಲ್ಲಿ ಹಣ ನುಂಗಿ, ಸುಳ್ಳು ಹೇಳಿದ ಮೋದಿ. ಒಂದು ವಿಡಿಯೋ

- Advertisement -
- Advertisement -

ಏನಾಯ್ತು ನಿಮ್ಮ ಭರವಸೆ?
ಪ್ರಧಾನಿ ಮೋದಿ, ಗಂಗಾ ನದಿ ಪುನರುಜ್ಜೀವನಗೊಳಿಸುವ ನಿಮ್ಮ ಭರವಸೆ ಏನಾಯ್ತು?
ಪ್ರಧಾನಿ ಮೋದಿ ಈಗ ಮತ್ತೆ ವಾರಣಾಸಿಯಲ್ಲಿ ಮರುಆಯ್ಕೆ ಬಯಸಿದ್ದಾರೆ. 2014ರಲ್ಲಿ ಗಂಗಾ ಸ್ವಚ್ಛಗೊಳಿಸುವ ಭರವಸೆಯೊಂದಿಗೆ ಅವರು ಅಧಿಕಾರಕ್ಕೆ ಬಂದರು. ಚುನಾವಣೆ ಪ್ರಚಾರ ಮತ್ತು ಗೆಲುವಿನ ನಂತರ ಅವರು, ‘ ವಾರಣಾಸಿಗೆ ನಾನಾಗಿಯೇ ಬರಲಿಲ್ಲ. ಗಂಗಾ ಮಾತೆಯೇ ನನ್ನನ್ನು ಇಲ್ಲಿಗೆ ಕರೆಸಿಕೊಂಡಿದ್ದಾಳೆ’ ಎಂದು ಭಾವನಾತ್ಮಕವಾಗಿ ಮಾತಾಡಿದ್ದರು.

ಗಂಗಾ ನದಿಯ ಪುನರುಜ್ಜಿವನಕ್ಕಾಗಿ 5 ವರ್ಷಗಳ ‘ಗಂಗಾ ನಮಾಮಿ ಮಿಷನ್’ ಎಂಬ ಯೋಜನೆಯನ್ನು ಮೋದಿ ಆರಂಭಿಸಿದರು. 2014-15ರಿಂದ 2018-19ರ ಅವಧಿಗೆ ಈ ಯೋಜನೆಗೆ 20,000 ಕೋಟಿ ರೂಪಾಯಿಗಳ ಬಜೆಟ್ ಘೋಷಿಸಲಾಯಿತು. ಈಗ ಡೆಡ್‍ಲೈನ್ ಮುಗಿಯುತ್ತ ಬಂದಿದ್ದು, ಪರಿಸರವಾದಿಗಳು ಮತ್ತು ಗಂಗಾ ಆ್ಯಕ್ಟಿವಿಸ್ಟ್‍ಗಳು, ‘ಏನಾಯ್ತು ನಿಮ್ಮ ಭರವಸೆ?’ ಎಂದು ಪ್ರಶ್ನಿಸುತ್ತಿದ್ದಾರೆ.

ಗಂಗಾ ಉಳಿವಿಗೆ ಹೋರಾಟ ನಡೆಸಿದ್ದ ಪ್ರೊ. ಜೆ.ಬಿ, ಅಗರವಾಲ್ ಅವರ ಶಿಷ್ಯ 26 ವರ್ಷದ ಬ್ರಹ್ಮಾಚಾರ್ಯ ಆತ್ಮಬೋಧಾನಂದ ಸ್ವಾಮಿಯವರು, ಗಂಗೆಯ ನಿರ್ನಾಮದ ವಿರುದ್ಧ 155 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

‘ಮೋದಿ ಸರ್ಕಾರವು ಪನಾಮಾ-ಸೂಯೆಜ್ ಕಾಲುವೆ ಮಾದರಿಯನ್ನು ಇಲ್ಲಿ ಅಳವಡಿಸಲು ಯತ್ನಿಸುತ್ತಿದೆ. ನದಿಪಾತ್ರದಲ್ಲಿ 5 ವರ್ಷಗಳಲ್ಲಿ ಗಣಿಗಾರಿಕೆ ಗರಿಷ್ಠ ಮಟ್ಟವನ್ನು ತಲುಪಿದೆ’ ಎಂದು ಆತ್ಮಬೋಧಾನಂದ ಟೀಕಿಸುತ್ತಾರೆ.
ಇದರ ಕುರಿತಾಗಿ ‘ದಿ ಕ್ವಿಂಟ್’ ಒಂದು ವಿಡಿಯೋ ವರದಿ ಮಾಡಿದ್ದು, ಪರಿಸರವಾದಿಗಳು ಮತ್ತು ಗಂಗಾ ಆ್ಯಕ್ಟಿವಿಸ್ಟ್‍ಗಳು ಕಿಡಿಕಾರಿದ್ದಾರೆ. ವಿವರಕ್ಕಾಗಿ ಈ ವಿಡಿಯೋ ನೋಡಿ:
ವಿಡಿಯೊ

ಗಂಗಾಮಾತೆಯೇ ನನ್ನನ್ನು ಇಲ್ಲಿಗೆ ಕರೆಸಿಕೊಂಡಳು ಎಂದು 5 ವರ್ಷದ ಹಿಂದೆ ಹೇಳಿದ ಮೋದಿ, ಗಂಗೆಯಿಂದ ನಾನು ಪಡೆಯುವುದೇನೂ ಇಲ್ಲ…ಕೊಡುವುದಷ್ಟೇ ಅದೆ ಇದೆ ಎನ್ನುತ್ತ ಮೋದಿ ಗಂಗಾ ಪುನಶ್ಚೇತನದ ಮಾತು ಆಡಿದ್ದರು. ಈ 5 ವರ್ಷಗಳಲ್ಲಿ ಗಂಗೆಗೆ ಈ ಹಿಂದೆ ಎಂದೂ ಆಗದಷ್ಟು ಹಿಂಸೆ, ಕಿರುಕುಳ ನೀಡಲಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಒಂದೇ ನಾಣ್ಯದ ಎರಡು ಮುಖಗಳು. ಒಂದು ಹೆಡ್ ಆದರೆ ಇನ್ನೊಂದು ಟೇಲ್. ಇವರೆಲ್ಲ ಗಂಗೆ ಹೆಸರಲ್ಲಿ ಅಧಿಕಾರ ಗಳಿಸುತ್ತಾರೆ, ನಂತರ ಗಂಗೆಯನ್ನೇ ಮಾರಲು ಶುರು ಮಾಡುತ್ತಾರೆ…
– ಬ್ರಹ್ಮಾಚಾರ್ಯ ಆತ್ಮಬೋಧಾನಂದ, ಗಂಗಾ ಆ್ಯಕ್ಟಿವಿಸ್ಟ್ ಮತ್ತು ಸ್ವಾಮೀಜಿ

ಅವರು (ಬಿಜೆಪಿ)ಹೀಗೆಲ್ಲ ಜನರ ನಂಬಿಕೆ ಜೊತೆ ಆಟವಾಡಿದರೆ ಮತ್ತೆ ಜನ ಅವರಿಗೆ ವೋಟ್ ಹಾಕಲ್ಲ. ಗಂಗಾ ಪುನಶ್ಚೇತನದ ಬಗ್ಗೆ ಸುಳ್ಳು ಭರವಸೆ ನೀಡುವ ಬದಲು, ಸೀರಿಯಸ್ ಆಗಿ ಕೆಲಸ ಮಾಡಲಿ. ಇದು ಧಾರ್ಮಿಕ ವಿಷಯ, ಜನರ ನಂಬಿಕೆಯ ಭಾವನಾತ್ಮ ವಿಷಯ….. – ರಾಮೇಶ್ವರ್ ಗೌರ್
-ಗಂಗಾ ಆ್ಯಕ್ಟಿವಿಸ್ಟ್

ಗಂಗಾನದಿಯಲ್ಲಿ ಕಲ್ಲು, ಬಂಡೆಗಳಿಗಾಗಿ ಗಣಿಗಾರಿಕೆ ನಡೆಸಲಾಗುತ್ತಿದೆ. ನದಿಗಳ ನೈಸರ್ಗಿಕ ನಿಯಮದ ಪ್ರಕಾರ, ಯಾವುದನ್ನು ಮರುಸೃಷ್ಟಿಸಲು ಸಾಧ್ಯವೋ ಅಂಥವನ್ನಷ್ಟೇ ಗಣಿಗಾರಿಕೆ ಮಾಡಬೇಕು…ಕಲ್ಲು, ಬಂಡೆಗಳನ್ನು ಸೃಷ್ಟಿಸಲಾಗಲ್ಲ…. ನಲವತ್ತು ಅಡಿ ಆಳದ ಗುಂಡಿಗಳನ್ನು ತೆಗೆಯಲಾಗಿದೆ…ಜನ ಇಲ್ಲಿ ಮುಳುಗಿ ಸಾಯೂತ್ತಲೂ ಇದ್ದಾರೆ….
ಅವರು ಬರೀ ಅಭಿವೃದ್ಧಿ ಬಗ್ಗೆ ಮಾತಾಡ್ತಾರೆ. ಅವರು ಅಭಿವೃದ್ಧಿಗಾಗಿ ಕಲ್ಲು, ಜಲ್ಲಿ, ಮರಳನ್ನು ಬೇರೆ ಎಲ್ಲಿಂದಲಾದರೂ ಪಡೆಯಬಹುದು. ಆದರೆ ಬೇರೆಲ್ಲೂ ಗಂಗಾನದಿಯನ್ನು ಪಡೆಯಲು ಸಾಧ್ಯವಿಲ್ಲ… – ಸ್ವಾಮಿ ಶಿವಾನಂದ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...

ವಿರೋಧದ ನಡುವೆಯೂ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ತೀವ್ರ ವಿರೋಧಗಳ ನಡುವೆಯೂ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಸೋಮವಾರ (ಮಾ. 30) ಗೆಜೆಟ್ ಅಧಿಸೂಚನೆಯಲ್ಲಿ...

ಮಶಾದ್ ವಿಮಾನ ನಿಲ್ದಾಣದ ಮೇಲೆ ಅಮೆರಿಕ ದಾಳಿ: ದೆಹಲಿಗೆ ತೆರಳುತ್ತಿದ್ದ ನೆರವು ವಿಮಾನಕ್ಕೆ ಡಿಕ್ಕಿ: ಇದು ‘ಯುದ್ಧ ಅಪರಾಧ’ ಎಂದ ಇರಾನ್ 

ಇರಾನ್‌ನ ಮಶಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕದ ವಾಯುದಾಳಿಯ ಸಂದರ್ಭದಲ್ಲಿ ನವದೆಹಲಿಗೆ ಹಾರಲು ನಿಗದಿಯಾಗಿದ್ದ ಮಹಾನ್ ಏರ್ ವಿಮಾನವು ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.  ಈ ವಿಮಾನವು ಔಷಧಿಗಳು ಸೇರಿದಂತೆ ಮಾನವೀಯ ನೆರವು ಸಾಗಣೆಗೆ...

ಪ್ಯಾಲೆಸ್ತೀನಿಯರಿಗೆ ಮರಣದಂಡನೆ ವಿಧಿಸುವ ಕಾನೂನು ಅಂಗೀಕಾರ : ಇಸ್ರೇಲ್ ಕ್ರಮಕ್ಕೆ ಜಾಗತಿಕ ಖಂಡನೆ

ಮಾರಣಾಂತಿಕ ದಾಳಿಗಳ ಅಪರಾಧ ಸಾಬೀತಾದ ಪ್ಯಾಲೆಸ್ತೀನಿಯರಿಗೆ ಮರಣದಂಡನೆಯನ್ನು ಕಡ್ಡಾಯ ಶಿಕ್ಷೆಯನ್ನಾಗಿ ನಿಗದಿಪಡಿಸಿದ ಇಸ್ರೇಲ್‌ನ ಹೊಸ ಕಾನೂನನ್ನು ಮಾನವ ಹಕ್ಕುಗಳ ಸಂಘಟನೆಗಳು, ವಿವಿಧ ರಾಷ್ಟ್ರಗಳ ನಾಯಕರು ಸೇರಿದಂತೆ ಜಾಗತಿಕ ಸಮುಯದಾಯ ತೀವ್ರವಾಗಿ ವಿರೋಧಿಸಿದೆ. ಈ...

ಬರೇಲಿ: ಮುಸ್ಲಿಂ ಯುವಕರ ಮೇಲೆ ಹಲ್ಲೆ, ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಬಲವಂತ; ಪ್ರಮುಖ ಆರೋಪಿ ಬಂಧನ

ಉತ್ತರ ಪ್ರದೇಶದ ಬರೇಲಿಯಲ್ಲಿ ಮುಸ್ಲಿಂ ಯುವಕನ ಮೇಲೆ ಹಲ್ಲೆ, ಅವಮಾನ ಮತ್ತು ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಒತ್ತಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ಪ್ರಮುಖ ಆರೋಪಿ ರಿಷಭ್ ಠಾಕೂರ್ ನನ್ನು ಪೊಲೀಸರು ಬಂಧಿಸಿದ್ದು, ಮತ್ತಷ್ಟು ಬಂಧನಗಳು ನಡೆಯುವ...

ಬಿಹಾರದ ನಳಂದ ಜಿಲ್ಲೆಯ ಶೀತ್ಲಾ ದೇವಸ್ಥಾನದಲ್ಲಿ ಕಾಲ್ತುಳಿತ: ಎಂಟು ಮಹಿಳೆಯರು ಸಾವು; ಹಲವು ಮಂದಿಗೆ ಗಾಯ 

ಬಿಹಾರದ ನಳಂದ ಜಿಲ್ಲೆಯ ಶೀತ್ಲಾ ದೇವಸ್ಥಾನದಲ್ಲಿ ಮಂಗಳವಾರ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ ಎಂಟು ಮಹಿಳೆಯರು ಸಾವನ್ನಪ್ಪಿದ್ದು, ಹಲವಾರು ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.  ಪೂಜೆಗಾಗಿ ದೇವಾಲಯದಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಜಮಾಯಿಸಿದಾಗ ಈ ಘಟನೆ ಸಂಭವಿಸಿದ್ದು,...

ದಲಿತ ಕ್ರೈಸ್ತರ ಎಸ್‌ಸಿ ಸ್ಥಾನಮಾನ ರದ್ದು ಆದೇಶ; ಸುಪ್ರೀಂ ಕೋರ್ಟ್ ತೀರ್ಪು ಖಂಡಿಸಿದ ಮಂದಕೃಷ್ಣ ಮಾದಿಗ

ದಲಿತರು ಕ್ರೈಸ್ತರಾದರೆ ಅವರ ಎಸ್‌ಸಿ ಸ್ಥಾನಮಾನ ರದ್ದುಗೊಳ್ಳಲಿದೆ ಎಂಬ ಸುಪ್ರೀಂ ಕೋರ್ಟ್ ತೀರ್ಪನ್ನು ಬಲವಾಗಿ ಖಂಡಿಸುತ್ತೇವೆ ಎಂದು ಎಂಆರ್‌ಪಿಎಸ್ ಫೌಂಡೇಶನ್ ಅಧ್ಯಕ್ಷ ಮಂದಕೃಷ್ಣ ಮಾದಿಗ ಹೇಳಿದರು. "ದೇಶದಲ್ಲಿ ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಬೇಕು,...

ಜಾರ್ಖಂಡ್: ರಾಮನವಮಿ ಘರ್ಷಣೆಗೆ ಸಂಬಂಧಿಸಿದ 19 ಜನರನ್ನು ಬಂಧಿಸಿ, ಕೈಕೋಳ ಹಾಕಿ ಸಾರ್ವಜನಿಕ ಮೆರವಣಿಗೆ ಮಾಡಿದ ಪೊಲೀಸರು

ಜಾರ್ಖಂಡ್‌ನ ಗರ್ವಾ ಜಿಲ್ಲೆಯಲ್ಲಿ ರಾಮನವಮಿ ಮೆರವಣಿಗೆಯ ಸಂದರ್ಭದಲ್ಲಿ ಎರಡು ಸಮುದಾಯಗಳ ನಡುವೆ ನಡೆದ ಘರ್ಷಣೆಯ ನಂತರ ಕನಿಷ್ಠ 19 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ಭದ್ರತಾ ಪಡೆಗಳನ್ನು ಭಾರೀ ಪ್ರಮಾಣದಲ್ಲಿ ನಿಯೋಜಿಸಿದ ನಂತರ...

ಪ್ಯಾಲೆಸ್ತೀನಿಯರಿಗೆ ಮರಣದಂಡನೆ : ಹೊಸ ಮಸೂದೆ ಅಂಗೀಕರಿಸಿದ ಇಸ್ರೇಲ್ ಸಂಸತ್ತು

ಇಸ್ರೇಲ್ ಸಂಸತ್ತು ಸೋಮವಾರ (ಮಾರ್ಚ್ 30, 2026) ಹೊಸ ಮಸೂದೆಯೊಂದನ್ನು ಅಂಗೀಕರಿಸಿದೆ. ಇದರ ಪ್ರಕಾರ, ಮಿಲಿಟರಿ ನ್ಯಾಯಾಲಯದಲ್ಲಿ ಮಾರಣಾಂತಿಕ ದಾಳಿಗಳ ಅಪರಾಧ ಸಾಬೀತಾದ ಪ್ಯಾಲೆಸ್ತೀನಿಯರಿಗೆ ಮರಣದಂಡನೆಯನ್ನು ಕಡ್ಡಾಯ ಶಿಕ್ಷೆಯನ್ನಾಗಿ ನಿಗದಿಪಡಿಸಲಾಗಿದೆ. ಪ್ರಧಾನಿ ಬೆಂಜಮಿನ್...