Homeಮುಖಪುಟಗಂಗಾ ಮಾತೆಯ ಹೆಸರಿನಲ್ಲಿ ಹಣ ನುಂಗಿ, ಸುಳ್ಳು ಹೇಳಿದ ಮೋದಿ. ಒಂದು ವಿಡಿಯೋ

ಗಂಗಾ ಮಾತೆಯ ಹೆಸರಿನಲ್ಲಿ ಹಣ ನುಂಗಿ, ಸುಳ್ಳು ಹೇಳಿದ ಮೋದಿ. ಒಂದು ವಿಡಿಯೋ

- Advertisement -
- Advertisement -

ಏನಾಯ್ತು ನಿಮ್ಮ ಭರವಸೆ?
ಪ್ರಧಾನಿ ಮೋದಿ, ಗಂಗಾ ನದಿ ಪುನರುಜ್ಜೀವನಗೊಳಿಸುವ ನಿಮ್ಮ ಭರವಸೆ ಏನಾಯ್ತು?
ಪ್ರಧಾನಿ ಮೋದಿ ಈಗ ಮತ್ತೆ ವಾರಣಾಸಿಯಲ್ಲಿ ಮರುಆಯ್ಕೆ ಬಯಸಿದ್ದಾರೆ. 2014ರಲ್ಲಿ ಗಂಗಾ ಸ್ವಚ್ಛಗೊಳಿಸುವ ಭರವಸೆಯೊಂದಿಗೆ ಅವರು ಅಧಿಕಾರಕ್ಕೆ ಬಂದರು. ಚುನಾವಣೆ ಪ್ರಚಾರ ಮತ್ತು ಗೆಲುವಿನ ನಂತರ ಅವರು, ‘ ವಾರಣಾಸಿಗೆ ನಾನಾಗಿಯೇ ಬರಲಿಲ್ಲ. ಗಂಗಾ ಮಾತೆಯೇ ನನ್ನನ್ನು ಇಲ್ಲಿಗೆ ಕರೆಸಿಕೊಂಡಿದ್ದಾಳೆ’ ಎಂದು ಭಾವನಾತ್ಮಕವಾಗಿ ಮಾತಾಡಿದ್ದರು.

ಗಂಗಾ ನದಿಯ ಪುನರುಜ್ಜಿವನಕ್ಕಾಗಿ 5 ವರ್ಷಗಳ ‘ಗಂಗಾ ನಮಾಮಿ ಮಿಷನ್’ ಎಂಬ ಯೋಜನೆಯನ್ನು ಮೋದಿ ಆರಂಭಿಸಿದರು. 2014-15ರಿಂದ 2018-19ರ ಅವಧಿಗೆ ಈ ಯೋಜನೆಗೆ 20,000 ಕೋಟಿ ರೂಪಾಯಿಗಳ ಬಜೆಟ್ ಘೋಷಿಸಲಾಯಿತು. ಈಗ ಡೆಡ್‍ಲೈನ್ ಮುಗಿಯುತ್ತ ಬಂದಿದ್ದು, ಪರಿಸರವಾದಿಗಳು ಮತ್ತು ಗಂಗಾ ಆ್ಯಕ್ಟಿವಿಸ್ಟ್‍ಗಳು, ‘ಏನಾಯ್ತು ನಿಮ್ಮ ಭರವಸೆ?’ ಎಂದು ಪ್ರಶ್ನಿಸುತ್ತಿದ್ದಾರೆ.

ಗಂಗಾ ಉಳಿವಿಗೆ ಹೋರಾಟ ನಡೆಸಿದ್ದ ಪ್ರೊ. ಜೆ.ಬಿ, ಅಗರವಾಲ್ ಅವರ ಶಿಷ್ಯ 26 ವರ್ಷದ ಬ್ರಹ್ಮಾಚಾರ್ಯ ಆತ್ಮಬೋಧಾನಂದ ಸ್ವಾಮಿಯವರು, ಗಂಗೆಯ ನಿರ್ನಾಮದ ವಿರುದ್ಧ 155 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

‘ಮೋದಿ ಸರ್ಕಾರವು ಪನಾಮಾ-ಸೂಯೆಜ್ ಕಾಲುವೆ ಮಾದರಿಯನ್ನು ಇಲ್ಲಿ ಅಳವಡಿಸಲು ಯತ್ನಿಸುತ್ತಿದೆ. ನದಿಪಾತ್ರದಲ್ಲಿ 5 ವರ್ಷಗಳಲ್ಲಿ ಗಣಿಗಾರಿಕೆ ಗರಿಷ್ಠ ಮಟ್ಟವನ್ನು ತಲುಪಿದೆ’ ಎಂದು ಆತ್ಮಬೋಧಾನಂದ ಟೀಕಿಸುತ್ತಾರೆ.
ಇದರ ಕುರಿತಾಗಿ ‘ದಿ ಕ್ವಿಂಟ್’ ಒಂದು ವಿಡಿಯೋ ವರದಿ ಮಾಡಿದ್ದು, ಪರಿಸರವಾದಿಗಳು ಮತ್ತು ಗಂಗಾ ಆ್ಯಕ್ಟಿವಿಸ್ಟ್‍ಗಳು ಕಿಡಿಕಾರಿದ್ದಾರೆ. ವಿವರಕ್ಕಾಗಿ ಈ ವಿಡಿಯೋ ನೋಡಿ:
ವಿಡಿಯೊ

ಗಂಗಾಮಾತೆಯೇ ನನ್ನನ್ನು ಇಲ್ಲಿಗೆ ಕರೆಸಿಕೊಂಡಳು ಎಂದು 5 ವರ್ಷದ ಹಿಂದೆ ಹೇಳಿದ ಮೋದಿ, ಗಂಗೆಯಿಂದ ನಾನು ಪಡೆಯುವುದೇನೂ ಇಲ್ಲ…ಕೊಡುವುದಷ್ಟೇ ಅದೆ ಇದೆ ಎನ್ನುತ್ತ ಮೋದಿ ಗಂಗಾ ಪುನಶ್ಚೇತನದ ಮಾತು ಆಡಿದ್ದರು. ಈ 5 ವರ್ಷಗಳಲ್ಲಿ ಗಂಗೆಗೆ ಈ ಹಿಂದೆ ಎಂದೂ ಆಗದಷ್ಟು ಹಿಂಸೆ, ಕಿರುಕುಳ ನೀಡಲಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಒಂದೇ ನಾಣ್ಯದ ಎರಡು ಮುಖಗಳು. ಒಂದು ಹೆಡ್ ಆದರೆ ಇನ್ನೊಂದು ಟೇಲ್. ಇವರೆಲ್ಲ ಗಂಗೆ ಹೆಸರಲ್ಲಿ ಅಧಿಕಾರ ಗಳಿಸುತ್ತಾರೆ, ನಂತರ ಗಂಗೆಯನ್ನೇ ಮಾರಲು ಶುರು ಮಾಡುತ್ತಾರೆ…
– ಬ್ರಹ್ಮಾಚಾರ್ಯ ಆತ್ಮಬೋಧಾನಂದ, ಗಂಗಾ ಆ್ಯಕ್ಟಿವಿಸ್ಟ್ ಮತ್ತು ಸ್ವಾಮೀಜಿ

ಅವರು (ಬಿಜೆಪಿ)ಹೀಗೆಲ್ಲ ಜನರ ನಂಬಿಕೆ ಜೊತೆ ಆಟವಾಡಿದರೆ ಮತ್ತೆ ಜನ ಅವರಿಗೆ ವೋಟ್ ಹಾಕಲ್ಲ. ಗಂಗಾ ಪುನಶ್ಚೇತನದ ಬಗ್ಗೆ ಸುಳ್ಳು ಭರವಸೆ ನೀಡುವ ಬದಲು, ಸೀರಿಯಸ್ ಆಗಿ ಕೆಲಸ ಮಾಡಲಿ. ಇದು ಧಾರ್ಮಿಕ ವಿಷಯ, ಜನರ ನಂಬಿಕೆಯ ಭಾವನಾತ್ಮ ವಿಷಯ….. – ರಾಮೇಶ್ವರ್ ಗೌರ್
-ಗಂಗಾ ಆ್ಯಕ್ಟಿವಿಸ್ಟ್

ಗಂಗಾನದಿಯಲ್ಲಿ ಕಲ್ಲು, ಬಂಡೆಗಳಿಗಾಗಿ ಗಣಿಗಾರಿಕೆ ನಡೆಸಲಾಗುತ್ತಿದೆ. ನದಿಗಳ ನೈಸರ್ಗಿಕ ನಿಯಮದ ಪ್ರಕಾರ, ಯಾವುದನ್ನು ಮರುಸೃಷ್ಟಿಸಲು ಸಾಧ್ಯವೋ ಅಂಥವನ್ನಷ್ಟೇ ಗಣಿಗಾರಿಕೆ ಮಾಡಬೇಕು…ಕಲ್ಲು, ಬಂಡೆಗಳನ್ನು ಸೃಷ್ಟಿಸಲಾಗಲ್ಲ…. ನಲವತ್ತು ಅಡಿ ಆಳದ ಗುಂಡಿಗಳನ್ನು ತೆಗೆಯಲಾಗಿದೆ…ಜನ ಇಲ್ಲಿ ಮುಳುಗಿ ಸಾಯೂತ್ತಲೂ ಇದ್ದಾರೆ….
ಅವರು ಬರೀ ಅಭಿವೃದ್ಧಿ ಬಗ್ಗೆ ಮಾತಾಡ್ತಾರೆ. ಅವರು ಅಭಿವೃದ್ಧಿಗಾಗಿ ಕಲ್ಲು, ಜಲ್ಲಿ, ಮರಳನ್ನು ಬೇರೆ ಎಲ್ಲಿಂದಲಾದರೂ ಪಡೆಯಬಹುದು. ಆದರೆ ಬೇರೆಲ್ಲೂ ಗಂಗಾನದಿಯನ್ನು ಪಡೆಯಲು ಸಾಧ್ಯವಿಲ್ಲ… – ಸ್ವಾಮಿ ಶಿವಾನಂದ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಿಜೆಪಿ ಪ್ರತಿಭಟನೆಗೆ ನಡುಗಿದ ಕೇಂದ್ರ ಸರ್ಕಾರ; ತರಾತುರಿಯಲ್ಲಿ ಸಂಸತ್ತಿನ ಗೇಟ್ ಮುಚ್ಚಿದ ಭದ್ರತಾ ಸಿಬ್ಬಂದಿ

ನೀಟ್‌ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ವಿರೋಧಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಇಂದು ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಹಮ್ಮಿಕೊಂಡಿರುವ ಸಂಸತ್ ಮೆರವಣಿಗೆಗೆ ಕೇಂದ್ರ ಸರ್ಕಾರ...

ಹಕ್ಕುಗಳ ಕಾಯ್ದೆಗೆ 7 ವರ್ಷ: ಕಾಗದದಲ್ಲಷ್ಟೇ ಸಮಾನತೆ, ಉದ್ಯೋಗ ಸಿಗದೆ ಬೀದಿಗೆ ತಳ್ಳಲ್ಪಡುತ್ತಿರುವ ಟ್ರಾನ್ಸ್‌ಜೆಂಡರ್‌ ಸಮುದಾಯ

ಬೆಂಗಳೂರು: ರಾಷ್ಟ್ರೀಯ ಮಟ್ಟದಲ್ಲಿ ‘ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆ-2019’ ಜಾರಿಗೆ ಬಂದು ಏಳು ವರ್ಷಗಳು ಕಳೆದಿದ್ದರೂ, ಸಮುದಾಯದ ಆರ್ಥಿಕ ಸಬಲೀಕರಣ ಇನ್ನೂ ಕನಸಾಗಿಯೇ ಉಳಿದಿದೆ. ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ...

ಸಂಸತ್‌ ಚಲೋ: ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆಗೆ ಭಾರೀ ಬೆಂಬಲ

ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿರುವ ನೀಟ್‌ (NEET) ಪ್ರಶ್ನೆಪತ್ರಿಕೆ ಸೋರಿಕೆ, ಸಾಲು ಸಾಲು ವಿದ್ಯಾರ್ಥಿಗಳ ಆತ್ಮಹತ್ಯೆ ಹಾಗೂ ದೇಶದ ಪರೀಕ್ಷಾ ವ್ಯವಸ್ಥೆಯ ಸರಣಿ ವೈಫಲ್ಯಗಳನ್ನು ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ಆಯೋಜಿಸಿರುವ...

ಡಿಜಿಟಲೀಕರಣಗೊಂಡ 2002ರ ಮತದಾರರ ಪಟ್ಟಿಯಿಂದ ಬೆಂಗಳೂರಿನ ಮತಗಟ್ಟೆಗಳೇ ಮಾಯ: ಮಾಹಿತಿ ಸಿಗದೆ ಆತಂಕದಲ್ಲಿ ನೂರಾರು ಮತದಾರರು

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಹಲವು ಭಾಗಗಳಲ್ಲಿ 2002ರ ಡಿಜಿಟಲೀಕರಣಗೊಂಡ ಮತದಾರರ ಪಟ್ಟಿಯಿಂದ ಇಡೀ ಮತಗಟ್ಟೆಗಳೇ ಕಾಣೆಯಾಗಿರುವ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇದರಿಂದಾಗಿ ನೂರಾರು ಮತದಾರರು ಆತಂಕ ಮತ್ತು ಗೊಂದಲಕ್ಕೊಳಗಾಗಿದ್ದಾರೆ ಎಂದು...

‘ರಾಮನಿಗೆ ಅವಮಾನಿಸಿದ್ದಕ್ಕೆ ಶಾಯಿ ಎರಚಿದೆ’: ಜಂತರ್ ಮಂತರ್‌ನಲ್ಲಿ ಅಭಿಜೀತ್ ದೀಪ್ಕೆ ಮೇಲಿನ ದಾಳಿಯನ್ನು ಸಮರ್ಥಿಸಿಕೊಂಡ ಬರ್ಖಾ ಟ್ರೆಹಾನ್

ನವದೆಹಲಿ: ದೇಶದ ರಾಜಧಾನಿಯ ಜಂತರ್ ಮಂತರ್‌ನಲ್ಲಿ ಜುಲೈ 18 ರ ಶನಿವಾರದಂದು ನಡೆದ ಪ್ರತಿಭಟನಾ ಸಭೆಯಲ್ಲಿ ಭಾಷಣ ಮಾಡುತ್ತಿದ್ದ ‘ಜಿರಳೆ ಜನತಾ ಪಕ್ಷ’ದ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರ ಮೇಲೆ ಶಾಯಿ ಎರಚಿದ...

ಸರ್ವಪಕ್ಷ ಸಭೆ: TMC ಬಂಡಾಯ ಸಂಸದರಿಗೆ ಸ್ಪೆಷಲ್ ಸೀಟು, INDIA ಮೈತ್ರಿಕೂಟದ ಸಂಸದರು ವಾಕೌಟ್

ಸಂಸತ್ತಿನ ಮುಂಗಾರು ಅಧಿವೇಶನ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ, ರವಿವಾರ ನಡೆದ ಸರ್ವಪಕ್ಷಗಳ ಸಭೆಯು ತೀವ್ರ ರಾಜಕೀಯ ಸಂಘರ್ಷಕ್ಕೆ ಸಾಕ್ಷಿಯಾಗಿದೆ. ತೃಣಮೂಲ ಕಾಂಗ್ರೆಸ್ (TMC) ಪಕ್ಷದಿಂದ ಬಂಡಾಯವೆದ್ದ ಸಂಸದರಿಗೆ ಕೇಂದ್ರ ಸರ್ಕಾರವು...

ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಹಾದಿ ತಪ್ಪಿಸಲು BJP ಪಿತೂರಿ: ಸಿಜೆಪಿ ಗಂಭೀರ ಆರೋಪ

ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿರುವ ನೀಟ್ (NEET) ಪರೀಕ್ಷಾ ಹಗರಣದ ವಿರುದ್ಧ ಜಂತರ್ ಮಂತರ್‌ನಲ್ಲಿ ಸೋನಮ್ ವಾಂಗ್ಚುಕ್ ಹಾಗೂ ಕಾಕ್ರೋಚ್ ಜನತಾ ಪಾರ್ಟಿ (CJP) ಯುವಜನರು ನಡೆಸುತ್ತಿರುವ ಹೋರಾಟದ ಮೈದಾನದಿಂದ ಆತಂಕಕಾರಿ ವರದಿಗಳು...

‘ನಿಮ್ಮ ಮೌನ ಸ್ವೀಕಾರಾರ್ಹವಲ್ಲ’: ರಾಮ ಮಂದಿರ ದೇಣಿಗೆ ‘ಕಳ್ಳತನ’ದ ತನಿಖೆಗೆ ಮೋದಿಗೆ ಖರ್ಗೆ-ರಾಹುಲ್ ಗಾಂಧಿ ಪತ್ರ

ನವದೆಹಲಿ: ಸಂಸತ್ತಿನ ಮಳೆಗಾಲದ ಅಧಿವೇಶನ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ, ಅಯೋಧ್ಯೆ ರಾಮ ಮಂದಿರ ನಿರ್ಮಾಣದ ದೇಣಿಗೆಯಲ್ಲಿ ನಡೆದಿದೆ ಎನ್ನಲಾದ ಬೃಹತ್ ಆರ್ಥಿಕ ಅಕ್ರಮ ಹಾಗೂ ‘ಕಳ್ಳತನ’ದ ವಿಷಯ ರಾಷ್ಟ್ರ ರಾಜಕಾರಣದಲ್ಲಿ...

ಶಾಂತಿಯುತ ಪ್ರತಿಭಟನೆಗಳನ್ನು ಮೋದಿ ಸರ್ಕಾರ ಹತ್ತಿಕ್ಕುತ್ತಿದೆ: ರಾಹುಲ್ ಗಾಂಧಿ

ದೆಹಲಿಯ ಜಂತರ್ ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪರಿಸರ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಅವರನ್ನು ಬಲವಂತವಾಗಿ ಆಸ್ಪತ್ರೆಗೆ ಸಾಗಿಸಿದ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಮೌನ ಮುರಿದಿದ್ದಾರೆ. "ಶಾಂತಿಯುತ ಪ್ರತಿಭಟನೆಗಳನ್ನು...

ಸೋನಮ್ ವಾಂಗ್‌ಚುಕ್ ಬಲವಂತದ ಬಂಧನ; ಕಣ್ಣೀರಿಟ್ಟು ಉಪವಾಸ ಸತ್ಯಾಗ್ರಹ ಆರಂಭಿಸಿದ ಅಭಿಜೀತ್ ದಿಪ್ಕೆ

ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ಸೋನಮ್ ವಾಂಗ್‌ಚುಕ್ ಅವರನ್ನು ದೆಹಲಿ ಪೊಲೀಸ್ ಸಿಬ್ಬಂದಿ ಬಲವಂತವಾಗಿ, ಬಲಪ್ರಯೋಗದ ಮೂಲಕ ಆಸ್ಪತ್ರೆಗೆ ಕರೆದೊಯ್ಯುವಾಗ ಜಂತರ್ ಮಂತರ್‌ನ ಪ್ರತಿಭಟನಾ ಸ್ಥಳದಲ್ಲಿ ಗದ್ದಲ ಉಂಟಾಯಿತು....