Homeಮುಖಪುಟಗಂಗಾ ಮಾತೆಯ ಹೆಸರಿನಲ್ಲಿ ಹಣ ನುಂಗಿ, ಸುಳ್ಳು ಹೇಳಿದ ಮೋದಿ. ಒಂದು ವಿಡಿಯೋ

ಗಂಗಾ ಮಾತೆಯ ಹೆಸರಿನಲ್ಲಿ ಹಣ ನುಂಗಿ, ಸುಳ್ಳು ಹೇಳಿದ ಮೋದಿ. ಒಂದು ವಿಡಿಯೋ

- Advertisement -
- Advertisement -

ಏನಾಯ್ತು ನಿಮ್ಮ ಭರವಸೆ?
ಪ್ರಧಾನಿ ಮೋದಿ, ಗಂಗಾ ನದಿ ಪುನರುಜ್ಜೀವನಗೊಳಿಸುವ ನಿಮ್ಮ ಭರವಸೆ ಏನಾಯ್ತು?
ಪ್ರಧಾನಿ ಮೋದಿ ಈಗ ಮತ್ತೆ ವಾರಣಾಸಿಯಲ್ಲಿ ಮರುಆಯ್ಕೆ ಬಯಸಿದ್ದಾರೆ. 2014ರಲ್ಲಿ ಗಂಗಾ ಸ್ವಚ್ಛಗೊಳಿಸುವ ಭರವಸೆಯೊಂದಿಗೆ ಅವರು ಅಧಿಕಾರಕ್ಕೆ ಬಂದರು. ಚುನಾವಣೆ ಪ್ರಚಾರ ಮತ್ತು ಗೆಲುವಿನ ನಂತರ ಅವರು, ‘ ವಾರಣಾಸಿಗೆ ನಾನಾಗಿಯೇ ಬರಲಿಲ್ಲ. ಗಂಗಾ ಮಾತೆಯೇ ನನ್ನನ್ನು ಇಲ್ಲಿಗೆ ಕರೆಸಿಕೊಂಡಿದ್ದಾಳೆ’ ಎಂದು ಭಾವನಾತ್ಮಕವಾಗಿ ಮಾತಾಡಿದ್ದರು.

ಗಂಗಾ ನದಿಯ ಪುನರುಜ್ಜಿವನಕ್ಕಾಗಿ 5 ವರ್ಷಗಳ ‘ಗಂಗಾ ನಮಾಮಿ ಮಿಷನ್’ ಎಂಬ ಯೋಜನೆಯನ್ನು ಮೋದಿ ಆರಂಭಿಸಿದರು. 2014-15ರಿಂದ 2018-19ರ ಅವಧಿಗೆ ಈ ಯೋಜನೆಗೆ 20,000 ಕೋಟಿ ರೂಪಾಯಿಗಳ ಬಜೆಟ್ ಘೋಷಿಸಲಾಯಿತು. ಈಗ ಡೆಡ್‍ಲೈನ್ ಮುಗಿಯುತ್ತ ಬಂದಿದ್ದು, ಪರಿಸರವಾದಿಗಳು ಮತ್ತು ಗಂಗಾ ಆ್ಯಕ್ಟಿವಿಸ್ಟ್‍ಗಳು, ‘ಏನಾಯ್ತು ನಿಮ್ಮ ಭರವಸೆ?’ ಎಂದು ಪ್ರಶ್ನಿಸುತ್ತಿದ್ದಾರೆ.

ಗಂಗಾ ಉಳಿವಿಗೆ ಹೋರಾಟ ನಡೆಸಿದ್ದ ಪ್ರೊ. ಜೆ.ಬಿ, ಅಗರವಾಲ್ ಅವರ ಶಿಷ್ಯ 26 ವರ್ಷದ ಬ್ರಹ್ಮಾಚಾರ್ಯ ಆತ್ಮಬೋಧಾನಂದ ಸ್ವಾಮಿಯವರು, ಗಂಗೆಯ ನಿರ್ನಾಮದ ವಿರುದ್ಧ 155 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

‘ಮೋದಿ ಸರ್ಕಾರವು ಪನಾಮಾ-ಸೂಯೆಜ್ ಕಾಲುವೆ ಮಾದರಿಯನ್ನು ಇಲ್ಲಿ ಅಳವಡಿಸಲು ಯತ್ನಿಸುತ್ತಿದೆ. ನದಿಪಾತ್ರದಲ್ಲಿ 5 ವರ್ಷಗಳಲ್ಲಿ ಗಣಿಗಾರಿಕೆ ಗರಿಷ್ಠ ಮಟ್ಟವನ್ನು ತಲುಪಿದೆ’ ಎಂದು ಆತ್ಮಬೋಧಾನಂದ ಟೀಕಿಸುತ್ತಾರೆ.
ಇದರ ಕುರಿತಾಗಿ ‘ದಿ ಕ್ವಿಂಟ್’ ಒಂದು ವಿಡಿಯೋ ವರದಿ ಮಾಡಿದ್ದು, ಪರಿಸರವಾದಿಗಳು ಮತ್ತು ಗಂಗಾ ಆ್ಯಕ್ಟಿವಿಸ್ಟ್‍ಗಳು ಕಿಡಿಕಾರಿದ್ದಾರೆ. ವಿವರಕ್ಕಾಗಿ ಈ ವಿಡಿಯೋ ನೋಡಿ:
ವಿಡಿಯೊ

ಗಂಗಾಮಾತೆಯೇ ನನ್ನನ್ನು ಇಲ್ಲಿಗೆ ಕರೆಸಿಕೊಂಡಳು ಎಂದು 5 ವರ್ಷದ ಹಿಂದೆ ಹೇಳಿದ ಮೋದಿ, ಗಂಗೆಯಿಂದ ನಾನು ಪಡೆಯುವುದೇನೂ ಇಲ್ಲ…ಕೊಡುವುದಷ್ಟೇ ಅದೆ ಇದೆ ಎನ್ನುತ್ತ ಮೋದಿ ಗಂಗಾ ಪುನಶ್ಚೇತನದ ಮಾತು ಆಡಿದ್ದರು. ಈ 5 ವರ್ಷಗಳಲ್ಲಿ ಗಂಗೆಗೆ ಈ ಹಿಂದೆ ಎಂದೂ ಆಗದಷ್ಟು ಹಿಂಸೆ, ಕಿರುಕುಳ ನೀಡಲಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಒಂದೇ ನಾಣ್ಯದ ಎರಡು ಮುಖಗಳು. ಒಂದು ಹೆಡ್ ಆದರೆ ಇನ್ನೊಂದು ಟೇಲ್. ಇವರೆಲ್ಲ ಗಂಗೆ ಹೆಸರಲ್ಲಿ ಅಧಿಕಾರ ಗಳಿಸುತ್ತಾರೆ, ನಂತರ ಗಂಗೆಯನ್ನೇ ಮಾರಲು ಶುರು ಮಾಡುತ್ತಾರೆ…
– ಬ್ರಹ್ಮಾಚಾರ್ಯ ಆತ್ಮಬೋಧಾನಂದ, ಗಂಗಾ ಆ್ಯಕ್ಟಿವಿಸ್ಟ್ ಮತ್ತು ಸ್ವಾಮೀಜಿ

ಅವರು (ಬಿಜೆಪಿ)ಹೀಗೆಲ್ಲ ಜನರ ನಂಬಿಕೆ ಜೊತೆ ಆಟವಾಡಿದರೆ ಮತ್ತೆ ಜನ ಅವರಿಗೆ ವೋಟ್ ಹಾಕಲ್ಲ. ಗಂಗಾ ಪುನಶ್ಚೇತನದ ಬಗ್ಗೆ ಸುಳ್ಳು ಭರವಸೆ ನೀಡುವ ಬದಲು, ಸೀರಿಯಸ್ ಆಗಿ ಕೆಲಸ ಮಾಡಲಿ. ಇದು ಧಾರ್ಮಿಕ ವಿಷಯ, ಜನರ ನಂಬಿಕೆಯ ಭಾವನಾತ್ಮ ವಿಷಯ….. – ರಾಮೇಶ್ವರ್ ಗೌರ್
-ಗಂಗಾ ಆ್ಯಕ್ಟಿವಿಸ್ಟ್

ಗಂಗಾನದಿಯಲ್ಲಿ ಕಲ್ಲು, ಬಂಡೆಗಳಿಗಾಗಿ ಗಣಿಗಾರಿಕೆ ನಡೆಸಲಾಗುತ್ತಿದೆ. ನದಿಗಳ ನೈಸರ್ಗಿಕ ನಿಯಮದ ಪ್ರಕಾರ, ಯಾವುದನ್ನು ಮರುಸೃಷ್ಟಿಸಲು ಸಾಧ್ಯವೋ ಅಂಥವನ್ನಷ್ಟೇ ಗಣಿಗಾರಿಕೆ ಮಾಡಬೇಕು…ಕಲ್ಲು, ಬಂಡೆಗಳನ್ನು ಸೃಷ್ಟಿಸಲಾಗಲ್ಲ…. ನಲವತ್ತು ಅಡಿ ಆಳದ ಗುಂಡಿಗಳನ್ನು ತೆಗೆಯಲಾಗಿದೆ…ಜನ ಇಲ್ಲಿ ಮುಳುಗಿ ಸಾಯೂತ್ತಲೂ ಇದ್ದಾರೆ….
ಅವರು ಬರೀ ಅಭಿವೃದ್ಧಿ ಬಗ್ಗೆ ಮಾತಾಡ್ತಾರೆ. ಅವರು ಅಭಿವೃದ್ಧಿಗಾಗಿ ಕಲ್ಲು, ಜಲ್ಲಿ, ಮರಳನ್ನು ಬೇರೆ ಎಲ್ಲಿಂದಲಾದರೂ ಪಡೆಯಬಹುದು. ಆದರೆ ಬೇರೆಲ್ಲೂ ಗಂಗಾನದಿಯನ್ನು ಪಡೆಯಲು ಸಾಧ್ಯವಿಲ್ಲ… – ಸ್ವಾಮಿ ಶಿವಾನಂದ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...