Homeಕರ್ನಾಟಕಪ್ರಗ್ಯಾ ಠಾಕೂರ್ ಸಹಚರರಿಗೆ ಗೌರಿ ಲಂಕೇಶ್ ಹತ್ಯೆಯ ಜೊತೆಗೆ ನಂಟು: ಕೋರ್ಟ್ ಗೆ ಹೇಳಿದ ಎಸ್‍ಐಟಿ

ಪ್ರಗ್ಯಾ ಠಾಕೂರ್ ಸಹಚರರಿಗೆ ಗೌರಿ ಲಂಕೇಶ್ ಹತ್ಯೆಯ ಜೊತೆಗೆ ನಂಟು: ಕೋರ್ಟ್ ಗೆ ಹೇಳಿದ ಎಸ್‍ಐಟಿ

- Advertisement -
- Advertisement -

| ನಾನುಗೌರಿ ಡೆಸ್ಕ್ |

ಅಭಿನವ್ ಭಾರತ್ ಗೂ ಸನಾತನ ಸಂಸ್ಥೆಗೂ ಇದೆ ನಂಟು

ಭೋಪಾಲ್‍ನ ಬಿಜೆಪಿ ಅಭ್ಯರ್ಥಿ, ಭಯೋತ್ಪಾದನೆಯ ಆರೋಪಿ ಪ್ರಗ್ಯಾ ಸಿಂಗ್ ಠಾಕೂರ್‍ರ ಜೊತೆ 2008ರ ಮಾಲೆಗಾಂವ್ ಸ್ಫೋಟದಲ್ಲಿ ಆರೋಪಿಯಾಗಿದ್ದು ತಲೆ ಮರೆಸಿಕೊಂಡವರೇ ಗೌರಿ ಲಂಕೇಶ್ ಹತ್ಯೆಯ ಆರೋಪಿಗಳಿಗೆ ಬಾಂಬ್ ಹಾಕುವ ತರಬೇತಿ ಕೊಟ್ಟಿದ್ದಾರೆಂದು ಎಸ್‍ಐಟಿ ಕೋರ್ಟ್‍ಗೆ ಸಲ್ಲಿಸಿದ ಮಾಹಿತಿಯಲ್ಲಿ ಹೇಳಿದೆ. ಅಷ್ಟೇ ಅಲ್ಲದೇ ಈ ಬಾಂಬ್ ತರಬೇತಿ ನೀಡಿದವರು ಪ್ರಗ್ಯಾ ಠಾಕೂರ್‍ರ ಸಂಘಟನೆ ಅಭಿನವ್ ಭಾರತ್‍ನ ಸದಸ್ಯರಾಗಿದ್ದಾರೆಂದೂ ಕೋರ್ಟ್‍ಗೆ ಸಲ್ಲಿಸಿದ ಮಾಹಿತಿಯಲ್ಲಿ ಹೇಳಲಾಗಿದೆ. ಈ ಕುರಿತು ಇಂದಿನ ಇಂಡಿಯನ್ ಎಕ್ಸ್‍ಪ್ರೆಸ್‍ನಲ್ಲಿ ವಿವರವಾಗಿ ವರದಿ ಮಾಡಲಾಗಿದೆ.

2006ರಿಂದ 2008ರವರೆಗೆ ಹಲವು ಬಾಂಬ್ ಸ್ಫೋಟಗಳು ನಡೆದಿದ್ದವು. ಅವುಗಳೆಂದರೆ ಮಾಲೆಗಾಂವ್, ಮೆಕ್ಕಾ ಮಸ್ಜಿದ್, ಅಜ್ಮೀರ್ ದರ್ಗಾ, ಸಂಝೋತಾ ಎಕ್ಸ್‍ಪ್ರೆಸ್ ಸ್ಫೋಟಗಳು. ಇವೆಲ್ಲದರಲ್ಲಿ ಒಟ್ಟು 117 ಜನರು ಸತ್ತಿದ್ದರು. ಸಂಝೋತಾ ಎಕ್ಸ್‍ಪ್ರೆಸ್ ಎಂಬುದು ಬಿಜೆಪಿಯ ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಿಯಾಗಿದ್ದಾಗ ದೆಹಲಿ ಮತ್ತು ಲಾಹೋರ್ ಮಧ್ಯೆ ಆರಂಭಿಸಲಾಗಿದ್ದ ರೈಲು.

ಈ ಸ್ಫೋಟಗಳಲ್ಲಿ ಅಭಿನವ್ ಭಾರತ್ ಸಂಘಟನೆಯ ಸದಸ್ಯರು ಪಾಲ್ಗೊಂಡಿದ್ದಾರೆಂಬ ಆರೋಪದ ಮೇಲೆ ಹಲವರನ್ನು ಬಂಧಿಸಲಾಗಿತ್ತು. ಆದರೆ ತಲೆ ಮರೆಸಿಕೊಂಡಿದ್ದಾರೆಂದು ಹೇಳಲಾದ ಸಂದೀಪ್ ಡಾಂಗೆ, ರಾಮ್‍ಜಿ ಕಲ್ಸಾಂಗ್ರಾ ಮತ್ತು ಅಶ್ವಿನ್ ಚೌಹಾಣ್ ಇವರುಗಳು ನಡೆಸಿದ ರಹಸ್ಯ ಬಾಂಬ್ ತರಬೇತಿಯಲ್ಲಿ ಭಾಗವಹಿಸಿದ್ದವರಲ್ಲಿ ಕೆಲವರು ಗೌರಿ ಲಂಕೇಶ್ ಹತ್ಯೆ ಕೇಸಿನಲ್ಲಿ ಆರೋಪಿಗಳು ಮತ್ತು ಸಾಕ್ಷಿದಾರರಾಗಿದ್ದಾರೆ. ಈ ವಿಷಯವು ಎಸ್‍ಐಟಿಯು, ಸದರಿ ಕೇಸಿಲ್ಲಿ ಕೋರ್ಟಿಗೆ ಸಲ್ಲಿಸಿರುವ ದಾಖಲೆಗಳಲ್ಲಿ ಇದೆ.

ಅಷ್ಟೇ ಅಲ್ಲ, 2007ರ ಅಜ್ಮೀರ್ ದರ್ಗಾ ಸ್ಫೋಟದ ಪ್ರಕರಣದ ನಂತರ ಭೂಗತನಾಗಿದ್ದ ಸುರೇಶ್ ನಾಯರ್ ಅಲಿಯಾಸ್ ಬಾಬಾಜಿಯು ಆ ರಹಸ್ಯ ಕ್ಯಾಂಪಿನಲ್ಲಿ ತರಬೇತಿದಾರನಾಗಿದ್ದ ಮತ್ತು ಆತನನ್ನು ನವೆಂಬರ್ 2018ರಲ್ಲಿ ಗುಜರಾತ್‍ನ ಭರೂಚ್‍ನಲ್ಲಿ ಬಂಧಿಸಲಾಗಿದೆ. ಅಂದರೆ, ಅಭಿನವ್ ಭಾರತ್ ಮತ್ತು ಸನಾತನ ಸಂಸ್ಥೆಗೂ ಸಂಬಂಧವಿದೆಯೆಂದಾಯಿತು!

ಬಾಬಾಜಿ ಮತ್ತು ಗುರೂಜಿಗಳಿಂದ ಬಾಂಬ್ ತರಬೇತಿ

ಬಾಬಾಜಿಯ ಜೊತೆಗೆ ನಾಲ್ಕು ಜನ ಗುರೂಜಿಗಳೂ ಬಾಂಬ್ ತರಬೇತಿಯಲ್ಲಿದ್ದರೆಂದು ಗೌರಿ ಲಂಕೇಶ್ ಹಂತಕರು ಪೊಲೀಸರಿಗೆ ಹೇಳಿದ್ದರು. ಅಂತಹ ಒಬ್ಬ ತರಬೇತಿದಾರನನ್ನೂ ಬಂಧಿಸಲಾಗಿದ್ದು ಆತನ ಹೆಸರೇ ಪ್ರತಾಪ್ ಹಾಜಾ. ಆತ ಪ.ಬಂಗಾಳದ ಭವಾನಿ ಸೇನಾಕ್ಕೆ ಸೇರಿದ ವ್ಯಕ್ತಿ. ಈ ಎಲ್ಲಾ ಸಂಘಟನೆಗಳೂ ಹಿಂದುತ್ವವನ್ನು ತಮ್ಮ ಸಿದ್ಧಾಂತವೆಂದು ಹೇಳುತ್ತವೆ.

ಇದನ್ನೂ ಓದಿ: ಪ್ರಗ್ಯಾ ಎಂಬ ಭಯೋತ್ಪಾದನೆಯ ಆರೋಪಿಯೂ ನರೇಂದ್ರ ಮೋದಿಯೂ

ಆರೆಸ್ಸೆಸ್ ಇವರುಗಳ ಮಾತೃಸಂಸ್ಥೆಯಾಗಿದ್ದು, ಬಹುತೇಕರು ಒಂದಲ್ಲಾ ಒಂದು ಸಂದರ್ಭದಲ್ಲಿ ನೇರವಾಗಿ ಆರೆಸ್ಸೆಸ್ ಅಥವಾ ಅದರ ಅಂಗಸಂಘಟನೆಗಳಲ್ಲಿ ಸಕ್ರಿಯರಾಗಿರುತ್ತಾರೆ. ಇಂಥವರು ಸಿಕ್ಕಿಬಿದ್ದಾಗ ಅವರಿಗೂ, ಆರೆಸ್ಸೆಸ್‍ಗೂ ಅಥವಾ ಬಿಜೆಪಿಗೂ ಸಂಬಂಧ ಇಲ್ಲವೆಂದು ಪ್ರತಿಪಾದಿಸುತ್ತಾರೆ. ಆದರೆ ನಿಧಾನಕ್ಕೆ ಅವರನ್ನು ಸಮರ್ಥಿಸಿಕೊಳ್ಳುವ ಕೆಲಸ ಮಾಡುತ್ತಾ, ಬಹಿರಂಗವಾಗಿಯೇ ಜೊತೆಗೂಡುತ್ತಾರೆ. ಅದಕ್ಕೆ ದೊಡ್ಡ ಉದಾಹರಣೆ, ಪ್ರಗ್ಯಾ ಠಾಕೂರ್. ಆಕೆ ಮತ್ತು ಸಹಚರರು ಸಿಕ್ಕಿಬಿದ್ದಾಗ ಆರೆಸ್ಸೆಸ್‍ನ ಮುಖ್ಯಸ್ಥರೊಬ್ಬರು ಸಕಾರ್ರ್ಧರಕ್ಕೆ ಪತ್ರ ಬರೆದು, ಅವರಿಗೂ ತಮಗೂ ಯಾವುದೇ ಸಂಬಂಧವಿಲ್ಲವೆಂದು ಬಲವಾಗಿ ಪ್ರತಿಪಾದಿಸಿದ್ದರು. ಈಗ ಭೋಪಾಲ್‍ನಿಂದ ಎಂಪಿ ಟಿಕೆಟ್ಟೇ ಕೊಟ್ಟಿದ್ದಾರೆ.

ಇಂಡಿಯನ್ ಎಕ್ಸಪ್ರೆಸ್ ವರದಿ 

ಇವರುಗಳು ಹಿಂಸೆ, ಕೊಲೆ ಇತ್ಯಾದಿಗಳನ್ನು ತಮ್ಮ ಉದ್ದೇಶಗಳಿಗಾಗಿ ಬಳಸುವವರು. ಉದಾಹರಣೆಗೆ ಬಾಂಬ್ ಪರಿಣಿತ ಎನ್ನಲಾಗುವ ಡಾಂಗೆ, ಆರೆಸ್ಸೆಸ್‍ನಲ್ಲಿದ್ದ ವ್ಯಕ್ತಿ ಮತ್ತು ಆತನ ಮೇಲೆ ಇಂಟರ್‍ಪೋಲ್ ರೆಡ್ ಕಾರ್ನರ್ ನೋಟೀಸ್ ಹೊರಡಿಸಲಾಗಿದೆ. ಡಾಂಗೆ ಮತ್ತು ಕಲ್ಸಾಂಗ್ರಾ ಹಿಡಿದುಕೊಟ್ಟವರಿಗೆ ಸರ್ಕಾರವು 10 ಲಕ್ಷ ರೂ. ಮತ್ತು ಹಾಕ್ಲಾ ತಲೆಗೆ 5 ಲಕ್ಷ ರೂ ಬಹುಮಾನ ಘೋಷಿಸಿದ್ದಾರೆ.

ಅಹಮದಾಬಾದ್ ಮತ್ತು ಮಂಗಳೂರುಗಳಲ್ಲಿ ತರಬೇತಿ

ಬಾಬಾಜಿ ಅಲಿಯಾಸ್ ಸುರೇಶ್ ನಾಯರ್ ಹೇಗಿರುತ್ತಾನೆಂಬ ವಿವರವನ್ನು ಗೌರಿ ಲಂಕೇಶ್ ಹತ್ಯೆ ಕೇಸಿನಲ್ಲಿ ಬಂಧಿತರಾಗಿರುವ ಶ್ರೀಕಾಂತ್ ಪಂಗ್ರೇಕರ್, ಶರದ್ ಕಲಸ್ಕರ್ (ನರೇಂದ್ರ ಧಾಬೋಲ್ಕರ್ ಹತ್ಯೆಗೈದ ಶೂಟರ್ ಎಂಬ ಆರೋಪಿ)) ಮತ್ತು ವಾಸುದೇವ ಸೂರ್ಯವಂಶಿ ಇವರುಗಳು ಕೊಟ್ಟಿದ್ದಾರೆ. ಬಾಂಬ್ ಸ್ಫೋಟ ಮತ್ತು ಶಸ್ತ್ರಾಸ್ತ್ರ ತರಬೇತಿಯನ್ನು ನೀಡಲು 19 ತರಬೇತಿ ಶಿಬಿರಗಳನ್ನು ಆಯೋಜಿಸಲಾಗಿತ್ತೆಂದು ಎಸ್‍ಐಟಿ ಹೇಳಿದೆ. ಇಂತಹ ತರಬೇತಿ ನೀಡಲು ಬರುತ್ತಿದ್ದವರಲ್ಲಿ ಕೆಲವರು ಸಂತ/ಸ್ವಾಮೀಜಿ ವೇಷದಲ್ಲಿ ತಿರುಗಾಡುತ್ತಿದ್ದರೆಂದೂ ಆರೋಪಿಗಳು ಬಾಯಿ ಬಿಟ್ಟಿದ್ದಾರೆ. ಶಿಬಿರಗಳು ಅಹಮದಾಬಾದ್  ಮತ್ತು ಮಂಗಳೂರುಗಳಲ್ಲಿ ನಡೆಯಿತೆಂದು ಹೇಳಲಾಗುತ್ತಿದೆ.

ಇದೀಗ ಆರೆಸ್ಸೆಸ್ ಮತ್ತು ಬಿಜೆಪಿ ಏನು ಹೇಳುತ್ತವೆ ಕಾದು ನೋಡಬೇಕು.

ಆಧಾರ: ಇಂಡಿಯನ್ ಎಕ್ಸಪ್ರೆಸ್

ಬಿಜೆಪಿ ಅಭ್ಯರ್ಥಿ, ಭಯೋತ್ಪಾದನೆಯ ಆರೋಪಿ ಪ್ರಗ್ಯಾ ವಿರುದ್ಧ ಐಪಿಎಸ್ ಸಂಘ ಗುಟುರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...