Homeಅಂತರಾಷ್ಟ್ರೀಯಮಾನವೀಯತೆಯ ಸಾಕ್ಷಿಪ್ರಜ್ಞೆಯಾಗಿ ಉಳಿದ ಜಾರ್ಜ್‌ ಫ್ಲಾಯ್ಡ್‌ ಹತ್ಯೆಗೆ ಒಂದು ವರ್ಷ

ಮಾನವೀಯತೆಯ ಸಾಕ್ಷಿಪ್ರಜ್ಞೆಯಾಗಿ ಉಳಿದ ಜಾರ್ಜ್‌ ಫ್ಲಾಯ್ಡ್‌ ಹತ್ಯೆಗೆ ಒಂದು ವರ್ಷ

- Advertisement -
- Advertisement -

ಅಮೆರಿಕಾದ ಇತಿಹಾಸದಲ್ಲೇ ಮೇ 25, 2020 ಅತ್ಯಂತ ಕರಾಳ ದಿನ. ಪೊಲೀಸ್‌ ವ್ಯವಸ್ಥೆಯ ವರ್ಣದ್ವೇಷಕ್ಕೆ ಅಮಾಯಕ ವ್ಯಕ್ತಿ ಜಾರ್ಜ್‌ ಫ್ಲಾಯ್ಡ್‌ ಮೃತಪಟ್ಟ ದುರಂತದ ದಿನ. ಆ ಘಟನೆಗೆ ಒಂದು ವರ್ಷ ಕಳೆದಿದೆ. ಈ ಒಂದು ವರ್ಷದಲ್ಲಿ ಅಮೆರಿಕಾ ಮತ್ತು ಜಗತ್ತಿನಲ್ಲಿ ಅನೇಕ ಘಟನೆಗಳು ನಡೆದಿವೆ.

ಜಾರ್ಜ್‌ ಫ್ಲಾಯ್ಡ್‌ ಹತ್ಯೆಯ ನಂತರ ಅಮೆರಿಕಾ ಸಾಕಷ್ಟು ಹೋರಾಟ, ನೋವು ಸಂಕಟಗಳಿಗೆ ಸಾಕ್ಷಿಯಾಗಿದೆ. ಈ ಒಂದು ವರ್ಷದ ಅವಧಿಯಲ್ಲಿ ಜನಾಂಗೀಯ ತಾರತಮ್ಯದ ವಿರುದ್ಧ ಜಗತ್ತಿನಾದ್ಯಂತ ಜನರ ಧ್ವನಿಗಳು ಮಾರ್ಧನಿಸಿವೆ. 2020, ಮೇ 26ರ ಜಾರ್ಜ್‌ ಫ್ಲಾಯ್ಡ್‌ ಹತ್ಯೆ ಈ ಶತಮಾನದ ಅತಿದೊಡ್ಡ ಜನಾಂಗೀಯ ದ್ವೇಷದ ವಿರುದ್ಧದ ಹೋರಾಟಕ್ಕೆ ಸ್ಪೂರ್ತಿ ನೀಡಿದೆ. ಬ್ಲಾಕ್‌ ಲೈವ್‌ ಮ್ಯಾಟರ್ಸ್‌ ಎಂಬ ಘೋಷಣೆಗಳು ಅಮೆರಿಕಾದ ಜನರನ್ನು ಬಡಿದೆಬ್ಬಿಸಿದೆ.

ಜಾರ್ಜ್‌ ಫ್ಲಾಯ್ಡ್‌ ಹತ್ಯೆಯ ಕರಾಳದಿನವನ್ನು ನೆನೆಯುತ್ತ ಜಗತ್ತಿನ ಅನೇಕ ಗಣ್ಯರು ತಮ್ಮ  ಸಂತಾಪಗಳನ್ನು ಹಂಚಿಕೊಂಡಿದ್ದಾರೆ.  ಜಾರ್ಜ್‌ ಹತ್ಯೆಯ ನಂತರವೂ ಅನೇಕ ಜನರು ಅಮೆರಿಕಾದಲ್ಲಿ ಪೊಲೀಸ್‌ ಎನ್‌ಕೌಂಟರ್‌ ಗೆ ಬಲಿಯಾಗಿದ್ದಾರೆ. ಆದರೆ ಜಾರ್ಜ್‌ ಹತ್ಯೆಯ ವಿರುದ್ಧ ಸಿಡಿದೆದ್ದ ಅಮೆರಿಕಾದ ಜನರ ಅಂತ:ಪ್ರಜ್ಞೆ ಹೊಸ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಜಾರ್ಜ್‌ ಫ್ಲಾಯ್ಡ್‌ ಮಾತ್ರ ಅಮೆರಿಕಾದ ಜನರ ನೆನಪಿನಲ್ಲಿ ಶಾಶ್ವತವಾಗಿ ಉಳಿಯುತ್ತಾನೆ ಎಂದು ಅಮೆರಿಕಾ ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾ ಟ್ವಿಟ್‌ ಮೂಲಕ ನೆನಪನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ವರ್ಣಬೇಧ ನೀತಿಯ ಬಲಿಪಶು ಜಾರ್ಜ್ ಫ್ಲಾಯ್ಡ್ ಕುಟುಂಬಕ್ಕೆ 196 ಕೋಟಿ ರೂ. ಪರಿಹಾರ

ಮೇ 25, 2021 ಮಿನಿಪೊಲೀಸ್‌ ನಗರ 46 ವರ್ಷದ ಕಪ್ಪು ವರ್ಣೀಯ ವ್ಯಕ್ತಿಯ ಧಾರುಣ ಸಾವಿಗೆ ಸಾಕ್ಷಿಯಾಯಿತು. ಆ ಘಟನೆಯಲ್ಲಿ ಧಾರುಣವಾಗಿ ಮೃತಪಟ್ಟ ವ್ಯಕ್ತಿ ಬೇರೆಯಾರೂ ಅಲ್ಲ ಜಾರ್ಜ್‌ ಫ್ರಾಯ್ಡ್.  ಶ್ವೇತವರ್ಣಿಯ ಪೊಲೀಸ್‌ ಅಧಿಕಾರಿಯ ಮಂಡಿಯ ನಡುವೆ ಸಿಲುಕಿ ಫ್ಲಾಯ್ಡ್‌ ಉಸಿರು ನಿಂತಿತ್ತು. ಇದು ಜಗತ್ತಿನಲ್ಲಿ ನಿತ್ಯ ನಡೆಯುವ ಸಾವಿರಾರು ಪೊಲೀಸ್‌ ದೌರ್ಜನ್ಯದಂತೆ ದಾಖಲೆಯೇ ಇಲ್ಲದೆ ಹೋಗಿದ್ದರೆ ಇವತ್ತಿನ ಅಮೆರಿಕಾದ ಸ್ಥಿತಿ ಬೇರೆಯದೇ ಇರುತ್ತಿತ್ತು. ಆದರೆ ಪೊಲೀಸ್‌ ಅಧಿಕಾರಿಯ ಮಂಡಿಯ ನಡುವೆ ಸಿಲುಕಿ ಉಸಿರಾಡಲು ಒದ್ದಾಡುತ್ತಿದ್ದ ಫ್ಲಾಯ್ಡ್‌ ತನಗೆ ಅರಿವಿಲ್ಲದಂತೆ ಹೊಸ ಇತಿಹಾಸವೊಂದರ, ಹೋರಾಟವೊಂದರ ಆರಂಭಕ್ಕೆ ಕಾರಣವಾಗಿ ಹೋಗಿದ್ದ.

ಪೊಲೀಸರ ಮಂಡಿಯಲ್ಲಿ ಸಿಲುಕಿ ಐ ಕಾಂಟ್‌ ಬ್ರೀಥ್ ಎಂದು ಇಪ್ಪತ್ತಕ್ಕೂ ಹೆಚ್ಚು ಸಾರಿ ಫ್ಲಾಯ್ಡ್‌ ಕಿರುಚುತ್ತಿರುವ ದೃಶ್ಯದ ತುಣುಕು ಕೆಲವೇ ಗಂಟೆಗಳಲ್ಲಿ ಜಗತ್ತಿನ ಮೂಲ ಮೂಲೆಗೂ ತಲುಪಿತು. ಈ ದೃಶ್ಯ ನೋಡಿ ಬೆಚ್ಚಿಬಿದ್ದ ಅಮೆರಿಕ್ಕನ್ನರು ದೇಶದಲ್ಲಿ ಅಘೋಷಿತವಾಗಿ ನಡೆಯುತ್ತಿರುವ ವರ್ಣಬೇಧ ವ್ಯವಸ್ಥೆಯ ವಿರುದ್ಧ ಸಿಡಿದೆದ್ದರು. ಆಗ ಫ್ಲಾಯ್ಡ್‌ ಸಾವಿಗೆ ನ್ಯಾಯವೊದಗಿಸಲು ಆರಂಭವಾದ ಹೋರಾಟವೇ ಬ್ಲಾಕ್‌ ಲೈವ್‌ ಮ್ಯಾಟರ್ಸ್. ಅಮೆರಿಕಾದ ನ್ಯೂಯಾರ್ಕ್‌ ನಗರ ಈ ಹೋರಾಟಕ್ಕೆ ವೇದಿಕೆಯಾಯಿತು. ಜಗತ್ತಿನ ಬೇರೆ ಬೇರೆ ದೇಶಗಳಲ್ಲೂ ಇಂತಹದೇ ಘಟನೆಗಳು ವರದಿಯಾದವು. ಶ್ವೇತವರ್ಣೀಯರಲ್ಲದ ಜನ ತಮ್ಮ ವಿರುದ್ಧ ನಡೆಯುತ್ತಿರುವ ಜನಾಂಗೀಯ ತಾರತಮ್ಯವನ್ನು ವಿರೋಧಿಸಿ ಅಮೆರಿಕಾದ ಬೀದಿ ಬೀದಿಗಳಲ್ಲಿ ಪ್ರತಿಭಟನೆಗೆ ತೊಡಗಿದರು.

ಜಸ್ಟಿಸ್‌ ಫಾರ್‌ ಫ್ಲಾಯ್ಡ್‌, ಬ್ಲಾಕ್‌ ಲೈವ್‌ ಮ್ಯಾಟರ್‌ ಫ್ಲೆಕಾರ್ಡುಗಳನ್ನು ಹಿಡಿದ ಸಾವಿರಾರು ವಿದ್ಯಾರ್ಥಿಗಳು ಹೋರಾಟಕ್ಕೆ ಅಣಿಯಾದರು. ಶ್ವೇತವರ್ಣಿಯರೂ ಸೇರಿದಂತೆ ಜಗತ್ತಿನ ಕ್ರೀಡಾಪಟುಗಳು, ಚಲನಚಿತ್ರ ತಾರೆಯರು, ರಾಜಕಾರಣಿಗಳು, ಉದ್ಯಮಿಗಳು ಹೋರಾಟಕ್ಕೆ ಬೆಂಬಲ ಸೂಚಿಸುತ್ತ ಸಾಮಾಜಿಕ ಮಾಧ್ಯಮಗಳ ಮೂಲಕ ಮತ್ತು ಪ್ರತ್ಯಕ್ಷವಾಗಿ ಪ್ರತಿಭಟನೆಯ ಭಾಗವಾದರು. ಅಮೆರಿಕಾಕ್ಕೆ ಅಮೆರಿಕಾ ಮುಂದಿನ ಎರಡು ತಿಂಗಳು ಸ್ಥಬ್ಧವಾಯಿತು. ಹೆಚ್ಚುತ್ತಿರುವ ಪ್ರತಿಭಟನೆಗಳನ್ನು ನಿಗ್ರಹಿಸಲು ಟ್ರಂಪ್‌ ನೇತ್ರತ್ವದ ಸರ್ಕಾರ ಬಲ ಪ್ರಯೋಗಕ್ಕೆ ಮುಂದಾಯಿತು. ಪೊಲೀಸ್‌ ಮತ್ತು ಸೈನ್ಯದ ಮೂಲಕ ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್‌, ಅಶ್ರುವಾಯು, ಗುಂಡಿನ ದಾಳಿಗಳನ್ನು ನಡೆಸಿತು. ಸರ್ಕಾರ ಪ್ರತಿಭಟನೆಯನ್ನು ದಮನಿಸಲು ಮುಂದಾದಂತೆಲ್ಲ ಹೋರಾಟ ಉಗ್ರ ಸ್ವರೂಪವನ್ನು ಪಡೆಯಿತು. ಅಂತಿಮವಾಗಿ ನ್ಯೂಯಾರ್ಕ್‌, ಮುಂತಾದ ರಾಜ್ಯಗಳು ಜನರನ್ನು ಕ್ರೂರವಾಗಿ ನಡೆಸಿಕೊಳ್ಳುವ ಪೊಲೀಸ್‌ ಕಾಯ್ದೆಯ ತಿದ್ದುಪಡಿಗೆ ಅಲ್ಲಿನ ರಾಜ್ಯಗಳು ಮುಂದಾದವು. ಸಂಪೂರ್ಣ ಅಮೆರಿಕಾಕ್ಕೆ ಅನ್ವಯವಾಗುವ ಫೆಡರಲ್‌ ಕಾನೂನುಗಳಲ್ಲೂ ಬದಲಾವಣೆಗೆ ಸರ್ಕಾರ ಮುಂದಾಯಿತು.

ಇದನ್ನೂ ಓದಿ: ಜಾರ್ಜ್ ಫ್ಲಾಯ್ಡ್‌‌ನನ್ನು ಉಳಿಸಲುಲಾಗದೆ ಇದ್ದಿದ್ದಕ್ಕೆ ಹಲವಾರು ರಾತ್ರಿ ಕಣ್ಣೀಟ್ಟಿದ್ದೆ: ಘಟನೆಯ ವಿಡಿಯೋ ಚಿತ್ರಿಸಿದ ಪ್ರತ್ಯಕ್ಷದರ್ಶಿ ಯುವತಿ

ಶ್ವೇತವರ್ಣೀಯರಲ್ಲದವರು  ಅಮೆರಿಕಾದ ನಾಗರಿಕರಾಗುವ ಅರ್ಹತೆಯನ್ನು ಹೊಂದಿಲ್ಲ. ಶ್ವೇತ ವರ್ಣೀಯರಿಗೆ ಸಮನಾದ ಹಕ್ಕನ್ನು ಇತರ ವರ್ಣೀಯರಿಗೆ ಅದರಲ್ಲೂ ಕಪ್ಪು ವರ್ಣೀಯರಿಗೆ ನೀಡಿರುವುದು ಅಮೆರಿಕಾದ ದುರಂತವೆಂದು ಬಹಿರಂಗವಾಗಿ ಹೇಳುತ್ತಿದ್ದ ಅಂದಿನ ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಗೆ ಜಾರ್ಜ್‌ ಫ್ಲಾಯ್ಡ್‌ ಹತ್ಯೆಯ ನಂತರದ ಘಟನೆಗಳು ಹೊಸ ಪಾಠವನ್ನು ಕಲಿಸಿವೆ. 2020 ನವೆಂಬರ್‌ ಅಂದರೆ ಈ ಘಟನೆಯ ಆರು ತಿಂಗಳ ನಂತರ ನಡೆದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್‌ ಹೀನಾಯವಾಗಿ ಸೋತರು. ಟ್ರಂಪ್‌ ಸೋಲಿಗೆ ಜಾರ್ಜ್‌ ಫ್ಲಾಯ್ಡ್‌ ಹತ್ಯೆಯ ನಂತರದ ಘಟನೆಗಳೂ ಕಾರಣವಾಗಿದ್ದವು. ಪ್ರತಿಭಟನಾಕಾರರ ಮೇಲೆ ನಡೆಸಿದ ದೌರ್ಜನ್ಯವೂ ಕಾರಣವಾಗಿದ್ದವು. ಮುಖ್ಯವಾಗಿ ಬರಾಕ್‌ ಒಬಾಮಾ ನಂತರ ಅಮೆರಿಕದ ಅಧ್ಯಕ್ಷಗಿರಿಗೆ ಏರಿದ್ಧ ಟ್ರಂಪ್‌ ಸ್ವತ: ಜನಾಂಗೀಯ ದ್ವೇಷದ ಪ್ರತೀಕವಾಗಿದ್ದರು. ಟ್ರಂಪ್‌ ಆಢಳಿತದ ಅವಧಿಯಲ್ಲಿ ಅಮೆರಿಕಾ ಇತಿಹಾಸದಲ್ಲೇ ಕಂಡು ಕೇಳರಿಯದಷ್ಟು ಜನಾಂಗೀಯ ಹತ್ಯೆ, ದೌರ್ಜನ್ಯ, ಕಪ್ಪು ವರ್ಣೀಯರ ಹಕ್ಕನ್ನು ನಿರಾಕರಿಸುವ ಘಟನೆಗಳು ನಡೆದಿದ್ದವು. ಈ ಎಲ್ಲ ಹತ್ಯೆ ದೌರ್ಜನ್ಯದ ವಿರುದ್ಧದ ಅಮೆರಿಕ್ಕನರ ಸಿಟ್ಟು ಅಂತಿಮವಾಗಿ ಕಟ್ಟೆ ಒಡೆದಂತೆ ನಡೆದಿದ್ದು ಜಾರ್ಜ್‌ ಫ್ಲಾಯ್ಡ್‌ ಹತ್ಯೆ. ಇದೆಲ್ಲದ ಪರಿಣಾಮವಾಗಿ 2020 ಡಿಸೆಂಬರ್‌ ನಲ್ಲಿ ಅಮೆರಿಕಾ ನೆಲ ಹೊಸ ಇತಿಹಾಸಕ್ಕೆ ಸಾಕ್ಷಿಯಾಯಿತು. ಮೊತ್ತ ಮೊದಲ ಬಾರಿಗೆ ಶ್ವೇತವರ್ಣೀಯರಲ್ಲದ ಮಹಿಳೆ ಅಮೆರಿಕಾ ಉಪಾಧಯಕ್ಷೆಯಾಗಿ ಜನರಿಂದ ಆಯ್ಕೆಯಾಗಿದ್ದರು.

ಅಮೆರಿಕಾದಲ್ಲಿ ನಡೆದ ಈ ಐತಿಹಾಸಿಕ ಘಟನೆಗಳಲ್ಲಿ ಪೊಲೀಸ್‌ ದೌರ್ಜನ್ಯದಿಂದ ಮೃತನಾದ ಜಾರ್ಜ್‌ ಫ್ಲಾಯ್ಡ್‌ ಕೂಡ ಪಾಲುದಾರ. ತನಗರಿವಿಲ್ಲದಂತೆ ಎಲ್ಲ ಘಟನೆಗಳಿಗೆ ಕಾರಣವಾದ ಜಾರ್ಜ್‌ ಫ್ಲಾಯ್ಡ್‌ರನ್ನು ಜಗತ್ತು ಸ್ಮರಿಸುತ್ತಿದೆ.

ಅಮೆರಿಕಾ ಸ್ಟೇಟ್‌ ಸೆಕ್ರೆಟ್ರಿ ಅಂಟೋನಿ ಬ್ಲಿಂಕನ್‌,  ಫ್ರಾಯ್ಡ್‌ ನೆನೆಯುತ್ತ ಜಗತ್ತಿನೆಲ್ಲೆಡೆ ಮಾನವ ಹಕ್ಕುಗಳ ರಕ್ಷಣೆಗೆ ನಿಲ್ಲುವ ಅಮೆರಿಕಾ ತನ್ನ ನೆಲದಲ್ಲಿ ನಡೆಯುವ ತಾರತಮ್ಯಗಳನ್ನು ಒಪ್ಪಿಕೊಳ್ಳಬೇಕಿದೆ. ವಾಸ್ತವವನ್ನು ಒಪ್ಪಿಕೊಂಡು ಅಮೆರಿಕಾದ ಮೂಲ ಸಿದ್ಧಾಂತವಾದ ಸಮಾನತೆಯನ್ನು ತನ್ನೆಲ್ಲಾ ಪ್ರಜೆಗಳಿಗೆ ಶಾಶ್ವತಗೊಳಿಸಬೇಕಿದೆ ಎಂದು ಟ್ವೀಟ್ ಮಾಡಿದ್ದಾರೆ.

ಫಾರ್ಮುಲಾ ಒನ್‌ ರೇಸ್‌ನ ಚಾಂಪಿಯನ್‌ ಲೂಯಿಸ್‌ ಹ್ಯಾಮಿಲ್ಟನ್‌ ಟ್ವೀಟ್ ಮಾಡಿ, ಆ ದಿನ ಫ್ರಾಯ್ಡ್‌ ಸಾಯಬಾರದಿತ್ತು. ತಂದೆಯನ್ನು ಕಳೆದುಕೊಂಡ ಮಗಳಿಗೆ ಯಾರು ಈಗ ನ್ಯಾಯ ಒದಗಿಸುತ್ತಾರೆ..? ಪತಿಯನ್ನು ಕಳೆದುಕೊಂಡ ಪತ್ನಿಗೆ ಯಾರು ನ್ಯಾಯ ಒದಗಿಸುತ್ತಾರೆ. ಕೇವಲ ತೊಗಲಿನ ಬಣ್ಣ ವ್ಯತ್ಯಾಸವಿರುವುದಕ್ಕೆ ಒಬ್ಬ ವ್ಯಕ್ತಿಯ ಜೀವವನ್ನು ತೆಗೆಯ ಬಹುದಾದರೆ ಎಲ್ಲಿದೆ  ಮಾನವೀಯತೆ ? ಫ್ಲಾಯ್ಡ್‌ ನೀನು ಸದಾ ಮಾನವೀಯತೆಯ ಸಾಕ್ಷಿಪ್ರಜ್ಞೆಯಾಗಿ ನಮ್ಮೊಡನೆ ನೆಲಸಿರುವೆ ಎಂದು  ಹ್ಯಾಮಿಲ್ಟನ್‌ ಟ್ವೀಟ್ ಮಾಡಿದ್ದಾರೆ.

ಸಾಮಾಜಿಕ ಜಾಲತಾಣ  ಫೇಸ್‌ಬುಕ್‌, ಇನ್ಸ್ಟಾಗ್ರಾಮ್‌, ಟ್ವಿಟ್ರರ್‌ ತುಂಬ ಜಗತ್ತಿನ ನಾನಾ ದೇಶದ ಜನರು ಜಾರ್ಜ್‌ ಫ್ಲಾಯ್ಡ್‌ ನೆನಪಿನಲ್ಲಿ ಕಂಬನಿ ಮಿಡಿದಿದ್ದಾರೆ. ಈ ಸಾವಿಗೆ ಕಾರಣವಾದ ಪೊಲೀಸ್‌ ಅಧಿಕಾರಿ ಡೆರೆಕ್‌ ಚುವಿನ್‌ಗೆ ಅಮೆರಿಕಾ ನ್ಯಾಯಾಲಯ ಏಪ್ರಿಲ್‌ 2021 ರಲ್ಲಿ ಶಿಕ್ಷೆ ವಿಧಿಸಿದೆ.

21 ನೇ ಶತಮಾನದ ಅಲ್ಟ್ರಾ ಮಾಡರ್ನ್‌, ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ರೊಬೊಟಿಕ್‌ ತಂತ್ರಜ್ಞಾನ, ಜೀವ ಮರು ಸೃಷ್ಟಿಸುವ ಜೈವಿಕ ತಂತ್ರಜ್ಞಾನ, ಅಂತರಿಕ್ಷದ ಮಹಾ ಪ್ರಯಾಣದ ಮೈಲಿಗಲ್ಲು ಎಲ್ಲವನ್ನೂ ಸಾಧಿಸಿರುವ ವೇಳೆ ನಾಗರಿಕತೆಯ ಮೂಲಮಂತ್ರವನ್ನೇ ಮನುಕುಲ ಮರೆತಿರುವುದು ದುರದೃಷ್ಟಕರ. ಮಾನವೀಯತೆಯ ಸಾಕ್ಷಿ ಪ್ರಜ್ಞೆಯಾಗಿ ಜಾರ್ಜ್‌ ಫ್ಲಾಯ್ಡ್‌ ಸಾಕಷ್ಟುಕಾಲ ಜಗತ್ತಿನ ನೆನಪಿನಲ್ಲುಳಿಯಲಿ. ಸಾಂಕ್ರಾಮಿಕದ ಮಹಾ ವಿಪತ್ತಿನ ನಡುವೆ ಜಾರ್ಜ್‌ ಫ್ಲಾಯ್ಡ್‌ ಹೆಸರಿನೊಂದಿಗೆ ನಾಗರಿಕತೆಯ ಒಂದಷ್ಟು ಮೂಲ ಪಾಠಗಳನ್ನು ಮರಳಿ ಓದೋಣ.


ಇದನ್ನೂ ಓದಿ: ಜಾರ್ಜ್ ಫ್ಲಾಯ್ಡ್ ಜನಾಂಗೀಯ ಹತ್ಯೆಯ ಅಪರಾಧಿ ಪೊಲೀಸ್ ಅಧಿಕಾರಿ ಡೆರೆಕ್ ಚೌವಿನ್‌ಗೆ ಶಿಕ್ಷೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...