Homeಮುಖಪುಟಗಲ್ಲಿಯಲ್ಲಿ ಬೆಳೆದು ದಿಲ್ಲಿಯವರೆಗೂ ಸದ್ದು ಮಾಡಿದ ಹುಡುಗನ ಕಥೆಯೇ ಗಲ್ಲಿಬಾಯ್

ಗಲ್ಲಿಯಲ್ಲಿ ಬೆಳೆದು ದಿಲ್ಲಿಯವರೆಗೂ ಸದ್ದು ಮಾಡಿದ ಹುಡುಗನ ಕಥೆಯೇ ಗಲ್ಲಿಬಾಯ್

ಅತಿಯಾದ ಬಿಲ್ಡಪ್ ಕೊಡದೆ ಪಾತ್ರಗಳನ್ನು ನೈಜವೆನ್ನುವಂತೆ ಮೂಡಿಸಿರುವುದು ಈ ಸಿನೆಮಾದ ವಿಶೇಷ

- Advertisement -
- Advertisement -

|ಅನಿಲ್ ಕುಮಾರ್ ಚಿಕ್ಕದಾಳವಟ್ಟ |

ಬಡ ಕುಟುಂಬದಲ್ಲಿ ಜನಿಸಿದವರಿಗೂ ಸಹ ಸಾಕಷ್ಟು ಪ್ರತಿಭೆ ಇದ್ದೇ ಇರುತ್ತದೆ. ಆದರೆ ಆತ ಅಥವಾ ಆಕೆ ಏನನ್ನಾದರು ಸಾಧಿಸಬೇಕೆಂದು ನಿಂತಾಗ ಮೊದ ಮೊದಲಿಗೆ ಭಯಾನಕ ಅವಮಾನ ಮತ್ತು ಸೋಲುಗಳನ್ನು ಎದುರಿಸಬೇಕಾಗುತ್ತದೆ. ಇದರಲ್ಲಿ ಕೊನೆಯವರೆಗು ನಿಂತು ಗೆಲ್ಲುವುದು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಅಂತಹ ಸಾಧನೆ ಮಾಡಿದ ಯುವಕನ ಕಥೆಯೇ ಗಲ್ಲಿಬಾಯ್. ಬಾಲಿವುಡ್‍ನಲ್ಲಿ ಸದ್ದು ಮಾಡಿರು ಈ ವಿಶೇಷ ಚಿತ್ರ ದೇಶಾದ್ಯಂತ ಒಳ್ಳೆಯ ಪ್ರಶಂಸೆಗಳನ್ನು ಪಡೆದಿದೆ. ಇದು ಇಬ್ಬರು ಪ್ರಚಲಿತ ರ್ಯಾಪ್ ಗಾಯನದ ತಾರೆಗಳಾದ ನೇಜಿ (ನವೀದ್ ಶೇಕ್) ಮತ್ತು ಡಿವೈನ್ (ವೀವಾನ್ ಫರ್ನಾಂಡೀಸ್)ರ ನೈಜ ಜೀವನದ ಕಥೆಯಿಂದ ಪಡೆದ ಸ್ಫೂರ್ತಿಯಿಂದ ಮಾಡಲಾಗಿದೆ.

ಮುಂಬಯಿಯ ಹೆಸರಾಂತ ಸ್ಲಂ ಧಾರವೀಯ ಗಲ್ಲಿಯ ಹುಡುಗ ಮೂರಾದ್ ಒಂದು ಬಡ ಮುಸ್ಲೀಂ ಕುಟುಂಬದಲ್ಲಿ ಹುಟ್ಟಿ ತಾನು ಒಬ್ಬ ರ್ಯಾಪ್ ಸಿಂಗರ್ ಆಗಬೇಕೆಂದು ಕನಸು ಕಾಣುತ್ತಿರುತ್ತಾನೆ. ಆದರೆ ಬಡತನ ಈತನನ್ನು ಹಿಂದೆ ಎಳೆಯುತ್ತಿರುತ್ತದೆ. ಈತನ ತಂದೆ ಒಂದು ಶ್ರೀಮಂತ ಕುಟುಂಬದಲ್ಲಿ ಕಾರ್ ಡ್ರೈವರ್ ಆಗಿ ಕೆಲಸ ಮಾಡುತ್ತಿರುತ್ತಾರೆ. ತಾಯಿ, ಅಜ್ಜಿ, ತಮ್ಮ ಹೀಗೆ ಕುಟುಂಬ ಸಾಗುತ್ತಿರಬೇಕಾದರೆ ದಿಡೀರ್ ಎಂದು ಇವರ ತಂದೆ ಮತ್ತೊಂದು ಮದುವೆಯಾಗುತ್ತಾನೆ. ಕೊನೆಯ ವರ್ಷದ ಪದವಿ ಓದುತ್ತಿರುವ ಮೂರಾದ್ ಓದನ್ನು ಮುಗಿಸಿ ಕೆಲಸಕ್ಕೆ ಹೋಗಬೇಕೆಂಬುದು ತಂದೆಯ ಬಯಕೆಯಾಗಿರುತ್ತದೆ. ಒಮ್ಮೆ ತಂದೆಯ ಕಾಲಿಗೆ ಏಟಾದಾಗ ತಂದೆಯ ಕೆಲಸಕ್ಕೆ ಈತನೆ ಹೋಗುತ್ತಾನೆ. ಕೆಲಸದ ಸಮಯದಲ್ಲೂ ಈತನ ಮನಸ್ಸು ಪೂರ್ತಿ ಸಂಗೀತದದಲ್ಲಿ ತೇಲುತಿರುತ್ತದೆ. ಇವನು ಮಾತ್ರ ಸಮಯ ಸಿಕ್ಕಾಗೆಲ್ಲ ಹಾಡುಗಳನ್ನು ಕೇಳುತ್ತಾ ಗಾಯಕನಾಗಬೇಕೆಂದು ಹುಚ್ಚು ಹಿಡಿಸಿಕೊಂಡಿರುತ್ತಾನೆ. ಇದಕ್ಕೆ ತನ್ನ ಪ್ರೀತಿಯ ಗೆಳತಿ ಸಫೀನಾ ಇವನ ಬೆಂಬಲಕ್ಕೆ ನಿಂತು ಪ್ರೋತ್ಸಾಹಿಸಿರುತ್ತಾಳೆ. ಅವಳು ಅವರ ಮನೆಯವರಿಗೆ ಸುಳ್ಳು ಹೇಳಿ ಪ್ರತಿದಿನ ಮೂರಾದ್ ನನ್ನು ಭೇಟಿಯಾಗುತ್ತಿರುತ್ತಾಳೆ.

ಈ ಮಧ್ಯೆ ಇವರ ಕಾಲೇಜಿನಲ್ಲಿ ಹಾಡಲು ಬಂದ ರ್ಯಾಪರ್ ಶೇರ್ ನನ್ನು ನಂತರ ಹುಡುಕಿಕೊಂಡು ಹೋಗಿ ಪರಿಚಯ ಮಾಡಿಕೊಳ್ಳುತ್ತಾನೆ. ಶೇರ್‍ನ ಸ್ನೇಹ ಮೂರಾದ್ ಗೆ ಹೊಸ ಭರವಸೆ ಮತ್ತು ಹೊಸ ಸ್ಫೂರ್ತಿಯನ್ನು ತರುತ್ತದೆ. ಶೇರ್ ತನ್ನ ಪಂಚ್ ಮಾತುಗಳಿಂದ ಮೂರಾದ್‍ನನ್ನು ಹುರಿದುಂಬಿಸುತ್ತಾನೆ. ನಿನ್ನಂತಹ ಕಷ್ಟದಲ್ಲಿರುವವರೇ ಏನಾದರೂ ಸಾಧನೆ ಮಾಡಲಿಕ್ಕೆ ಸಾಧ್ಯ ಎಲ್ಲಾ ಅನೂಕೂಲವಾಗಿದ್ದರೆ ಸಾಧನೆ ಮಾಡಲು ಯಾರು ಬರುವುದಿಲ್ಲ ಎಂದು ಹೇಳುತ್ತಾನೆ. ನಿನ್ನೋಳಗೆ ಅಡಗಿರುವಂತಹ ಲಾವರಸ ಹೊಡೆದು ಜ್ವಾಲಾಮುಖಿಯಾಗಿ ಹೊರಗಡೆ ಬರಲಿ ಎಂದು ಹೊಸ ಚೈತನ್ಯ ತುಂಬುತ್ತಾನೆ. ಈ ಮಧ್ಯೆ ಮೂರಾದ್ ಹತ್ತಿರ ಹಾಡಿಸಿ ಒಂದು ವಿಡಿಯೋ ಮಾಡಿ ಗಲ್ಲಿಬಾಯ್ ಹೆಸರಿನಲ್ಲಿ ಯೂಟೂಬ್ ಅಲ್ಲಿ ಬಿಡುತ್ತಾರೆ. ಅದು ಒಂದಷ್ಟು ಜನ ಗುರುತಿಸುವಂತಾಗುತ್ತದೆ. ವಿಡಿಯೋ ನೋಡಿ ಇವರನ್ನು ಬೇಟಿಯಾಗುವ ಸ್ಕೈ (ಕಲ್ಕಿ ಕೋಚ್ಲಿನ್) ಎಂಬ ಸಂಗೀತದ ಸ್ಟುಡೀಯೋ ಹೊಂದಿರುವ ಹುಡುಗಿ ಮೂರಾದ್ ಮತ್ತು ಷೇರ್ ಇಬ್ಬರನ್ನು ಸೇರಿಸಿ ಒಂದು ಆಲ್ಬಂ ಸಾಂಗ್ ಮಾಡಿ ಬಿಡುತ್ತಾರೆ. ಅದು ತುಂಬಾ ಸದ್ದು ಮಾಡುತ್ತದೆ. ಈ ಹಾಡನ್ನು ಕೇಳಿ ಮೂರಾದ್‍ನ ತಂದೆ ಕೆರಳುತ್ತಾನೆ ಇದರಿಂದ ಮನೆಯಲ್ಲಿ ಜಗಳವಾಗುತ್ತದೆ, ತಂದೆ ಈ ರ್ಯಾಪ್ ಹಾಡುವುದನ್ನು ಒಪ್ಪುವುದಿಲ್ಲ. ಮೂರಾದ್ ತನ್ನ ತಾಯಿ ತಮ್ಮನನ್ನು ಕರೆದುಕೊಂಡು ಮನೆಯಿಂದ ಹೊರಗಡೆ ಬಂದು ಬಿಡುತ್ತಾನೆ.

ಈತನ ಸ್ನೇಹಿತ ಚಿಕ್ಕಮಕ್ಕಳ ಜೊತೆ ಬೇರೆ ದಂಧೆಗಳನ್ನ ಮಾಡಿಸುವದನ್ನು ನಿಲ್ಲಿಸೆಂದು ಜಗಳ ಮಾಡುತ್ತಾನೆ ಆದರೆ ಇವೆಲ್ಲ ಮಾಡದೆ ಇದ್ದರ ಅವರಿಗೆ ತಿನ್ನಲು ಅನ್ನವು ಇರುವುದಿಲ್ಲ ಎಂದು ಹೇಳುತ್ತಾನೆ. ಮೂರಾದ್ ಮನೆಯಿಂದ ತನ್ನ ತಾಯಿ ಮತ್ತು ತಮ್ಮನನ್ನು ಕರೆದುಕೊಂಡು ಹೊರಬಂದಿರುವುದಿರಿಂದ ತನ್ನ ಕುಟುಂಬ ನಿರ್ವಹಣೆಗೆ ಹಣ ಸಾಕಾಗದೆ ಒದ್ದಾಡುತ್ತಾನೆ. ಕೊನೆಗೆ ತನ್ನ ಸ್ನೇಹಿತನ ಜೊತೆ ಸೇರಿ ಕಾರುಗಳನ್ನು ಕದ್ದು ಮಾರುವ ಕೆಲಸಕ್ಕೆ ಅನಿವಾರ್ಯವಾಗಿ ತೊಡಗಿಕೊಳ್ಳುತ್ತಾನೆ. ಕೊನಗೆ ಈತನ ಸ್ನೇಹಿತ ಪೋಲಿಸರ ಕೈಗೆ ಸಿಕ್ಕರೂ ಮೂರಾದ್ ಬಗ್ಗೆ ಮಾತ್ರ ಬಾಯಿ ಬಿಡುವುದಿಲ್ಲ. ತನ್ನ ತಾಯಿಯ ಸಹೋದರ (ಮಾವ) ಮಾಡುವ ಒತ್ತಾಯಕ್ಕೆ ಮಾವ ಕೆಲಸ ಮಾಡುವ ಖಾಸಗಿ ಕಂಪನಿಯಲ್ಲಿಯೇ ಈತನೂ ಕೆಲಸಕ್ಕೆ ಸೇರುತ್ತಾನೆ. ಆದರೆ ಈತ ಇದು ನನ್ನ ಜಾಗ ಅಲ್ಲ , ನಾನು ಮಾಡಬೇಕಾದ ಕೆಲಸ ಅಲ್ಲಾ ಎಂದು ತುಡಿಯುತ್ತಿರುತ್ತಾನೆ.

ಇದನ್ನು ಓದಿ: ಪಾ. ರಂಜಿತ್‍ನ ಐತಿಹಾಸಿಕ ಪ್ರಜ್ಞೆ ಮತ್ತು ಬೆದರಿಕೆಯ ಹುನ್ನಾರ

ಒಂದು ದೊಡ್ಡ ರ್ಯಾಪರ್ ಗಾಯಕರಿಗಾಗಿ ಸ್ಫರ್ಧೆ ಇರುವುದು ಗೊತ್ತಾಗಿ ತನ್ನ ಮಾವನಿಗೆ ರಜೆ ಕೇಳುತ್ತಾನೆ ಆದರೆ ಅವನ ಮಾವ ತಿರಸ್ಕರಿಸುತ್ತಾನೆ. ಮೂರಾದ್ ಕೆಲಸವೇ ಬಿಟ್ಟು ಸ್ಪರ್ಧೆಯಲ್ಲಿ ಭಾಗವಹಿಸುತ್ತಾನೆ. ಕೊನೆಗೂ ಕಾಂಪಿಟೇಷನ್ ಅಲ್ಲಿ ಗೆದ್ದು ಆಪ್ನಾ ಟೈಮ್ ಆಯೇಗಾ ಎಂದು ಮಿಂಚುತ್ತಾನೆ. ಹೀಗೆ ಜೀವನದ ಅನುಕ್ಷಣವು ತನ್ನ ಗುರಿಗಾಗಿ ತುಡಿದು ಗೆಲ್ಲುವ ಯುವ ಸಾಧಕರ ಕಥೆ.

ನಮ್ಮ ಸಮಾಜದಲ್ಲಿ ಸಾಕಷ್ಟು ಪ್ರತಿಭೆಗಳು ಬಡವರ ಮನೆಗಳಲ್ಲಿಯೇ ತಮ್ಮ ಬಡತನ ಕಾರಣಕ್ಕಾಗಿ ಉಳಿದು ಹೋಗಿವೆ. ಎಲ್ಲೋ ಬೆರಳೆಣಿಕೆಯಷ್ಟು ಮಂದಿ ಮಾತ್ರ ಹೊರಗಡೆ ಬಂದು ಮಿಂಚಿದ್ದಾರೆ ಮತ್ತು ಅಂತಹವರನ್ನು ಸಹ ಕೆಲವರು ಬಳಸಿಕೊಂಡು ಬಿಸಾಡಿದ ಉದಾಹರಣೆಗಳು ನಮ್ಮ ಮುಂದೆ ಇವೆ. ನಮ್ಮದೇ ರಾಜ್ಯದ ಉದಾಹರಣೆ ನೋಡುವುದಾದರೆ ಕಾಡಿನಲ್ಲಿ ವಾಸಿಸುತ್ತಿದ್ದ ಬುಡಕಟ್ಟು ಜನಾಂಗದ ರಾಜೇಶ್‍ನನ್ನು ಈ ಮಾಧ್ಯಮ ಲೋಕ ತಮ್ಮ ಟಿ.ಆರ್.ಪಿ ದಾಹಕ್ಕೆ ಹೇಗೆ ಬಳಸಿಕೊಂಡಿತು ಎಂಬದಕ್ಕೆ ನಾವು ಸಾಕ್ಷಿಯಾಗಿದ್ದೇವೆ. ಈ ಸಿನೆಮಾ ಯುವಜನರು ತಾವು ಅಂದಕೊಂಡ ಯಶಸನ್ನು ಸಾಧಿಸಲು ಧೃಢವಾದ ನಂಬಿಕೆ ಮತ್ತು ಪ್ರಯತ್ನ ಕಲಿಕೆ ಎಷ್ಟು ಮುಖ್ಯ ಮತ್ತು ಜೀವನದಲ್ಲಿ ನಮ್ಮ ಆಶಯ ಸಾಧನೆಗೆ ಬರುವ ತೊಡಕುಗಳನ್ನು ಹೇಗೆ ಧೈರ್ಯದಿಂದ ಎದುರಿಸಬೇಕು ಎಂಬದನ್ನು ಮೂರಾದ್ ನ ಗೆಲುವಿನ ಮೂಲಕ ತೋರಿಸುತ್ತದೆ. ಅತಿಯಾದ ಬಿಲ್ಡಪ್ ಕೊಡದೆ ಪಾತ್ರಗಳನ್ನು ನೈಜವೆನ್ನುವಂತೆ ಮೂಡಿಸಿರುವುದು ಈ ಸಿನೆಮಾದ ವಿಶೇಷವೆನ್ನಬಹುದು. ಈಗ ಪ್ರತಿಭೆಯನ್ನು ಗುರ್ತಿಸಿಕೊಳ್ಳಲು ಸಾಮಾಜಿಕ ಜಾಲತಾಣದ ವೇದಿಕೆಗಳಿವೆ ಅದರ ಹೊರತಾಗಿ ಬೆಳೆಯಲು ತುಂಬಾ ಅವಕಾಶಗಳಿದ್ದರೂ ಸಹ ಯುವಜನರಿಗೆ ಸರಿಯಾದ ಮಾರ್ಗದರ್ಶನದ ಕೊರತೆ ಇದೆ. ಈ ಸಿನೆಮಾದಲ್ಲಿ ಮೂರಾದ್ ಪ್ರತಿ ಸಮಯದಲ್ಲಿ ಸಾಹಿತ್ಯ ಮತ್ತು ಬೀಟ್‍ಗಳನ್ನು ಸೇರಿಸಲು ಪ್ರತಿದಿನ ತಾಲೀಮು ನಡೆಸುತ್ತಿರುತ್ತಾನೆ.

ಇದನ್ನು ಓದಿ:  ಇದು ಸಿನಿಮಾವಲ್ಲ, ಹೆಣ್ತನದ ಮುಖಾಮುಖಿ ನಾತಿಚರಾಮಿ

ಇದು ಈ ಸಿನೆಮಾದ ಕಥೆ ಮಧ್ಯೆ ನಡೆಯುವ ಮೂರಾದ್ ಮತ್ತು ಸಫೀನಾ ಪ್ರೀತಿ, ಜಗಳ ತಮಾಷೆ ತುಂಬಾ ಆಪ್ತವಾಗುತ್ತವೆ. ಮೂರಾದ್ ಪಾತ್ರವನ್ನು ರಣವೀರ್ ಸಿಂಗ್ ತನ್ನ ಒಳಗಡೆ ಇಳಿಸಿಕೊಂಡು ನಟಿಸಿದ್ದಾನೆ. ಮೂರಾದ್ ಪ್ರೀತಿಸುವ ಹಡುಗಿ ಸಫೀನಾ ಪಾತ್ರದಲ್ಲಿ ಆಲೀಯಾ ಭಟ್ ಕೂಡ ಉತ್ತಮವಾದ ಅಭಿನಯ ನೀಡಿದ್ದಾರೆ. ತಾವು ಜೀವನದಲ್ಲಿ ಗೆದ್ದೆ ಗೆಲ್ಲುತ್ತೇವೆ ಎಂದು ಮನಸ್ಸು ತುಂಬ ತುಂಬಿಕೊಂಡು ಜೊತೆಗಿರುವವರನ್ನು ಹುರಿದುಂಬಿಸುವ ಶೇರ್ ಪಾತ್ರದಲ್ಲಿ ಸಿದ್ದಾರ್ಥ ಚತುರ್ವೇದಿ ಚನ್ನಾಗಿ ಅಭಿನಯಿಸಿದ್ದಾರೆ. ಜೋಯಾ ಅಖ್ತರ್ ಈ ಸಿನೆಮಾವನ್ನು ನೋಡುಗರು ಸಿನೆಮಾದಲ್ಲಿಯೇ ಮುಳುಗಿರುವಂತೆ ನಿರ್ದೇಶಿಸಿದ್ದಾರೆ. ಸರಾಗವಾಗಿ ಸಾಗುವ ಕಥೆ ಪ್ರೇಕ್ಷಕರನ್ನು ಸಿನಾಮಾದ ಪಾತ್ರಗಳಜೊತೆ ಬೆಸೆಯುತ್ತದೆ. ಇದಕ್ಕೆ ಪೂರಕವಾದಂತಹ ಸಂಗೀತವನ್ನು ಕರ್ಷನ್ ಕಾಲೆ ಮಾಡಿದ್ದಾರೆ. ಈ ಸಿನೆಮಾ ಬರ್ಲಿನ್ ಸಿನೆಮಾ ಉತ್ಸವದಲ್ಲಿ ಪ್ರದರ್ಶನ ಖಂಡಿದೆ. ಇಂತಹ ಸ್ಫೂರ್ತಿಧಾಯಕ ಸಿನೆಮಾಗಳು ಬರಲಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...