Homeಅಂಕಣಗಳುಕೆಂಪೇಗೌಡರ ಪ್ರತಿಮೆಯನ್ನು ಸರಿಯಾಗಿ ನೋಡಿದ್ದೀರ?

ಕೆಂಪೇಗೌಡರ ಪ್ರತಿಮೆಯನ್ನು ಸರಿಯಾಗಿ ನೋಡಿದ್ದೀರ?

- Advertisement -
- Advertisement -

ಬಿಜೆಪಿಯವರಿಂದ ನಿರ್ಮಿಸಿಕೊಂಡು ಅನಾವರಣಗೊಂಡ ಕೆಂಪೇಗೌಡರ ಪ್ರತಿಮೆಯನ್ನ ನೋಡಿದ್ದೀರಾ? ನೋಡದಿದ್ದರೆ ಸರಿಯಾಗಿ ನೋಡಿ, ಕೆಂಪೇಗೌಡರು ವಿಜಯನಗರ ಸಾಮ್ರಾಜ್ಯವೇ ಮೆಚ್ಚಿದ ಪಾಳೇಗಾರ. ಪಾಳೇಗಾರ ಪರಾಕ್ರಮಿಯಾಗಿ ಮೆರೆಯುತ್ತಿದ್ದ ಕಾಲ ಅದು. ಆದರೆ ನಮ್ಮ ಬಿಜೆಪಿಗಳು ಕೆತ್ತಿಸಿ ನಿಲ್ಲಿಸಿರುವ ಕೆಂಪೇಗೌಡರು ಹಿಡಿದ ಕತ್ತಿ ಮತ್ತು ಮುಖಭಾವಕ್ಕೆ ಒಂದಿಷ್ಟು ಹೋಲಿಕೆಯಿಲ್ಲವಂತಲ್ಲಾ. ಅತ್ತ ಶಿವಗಂಗೆಯಲ್ಲಿರುವ ಕೆಂಪೇಗೌಡರ ಸಾತ್ವಿಕತೆಯೂ ಅದರಲ್ಲಿ ಇಲ್ಲವಂತಲ್ಲಾ. ಬೇಲಿ ಸವರಲು ಕತ್ತಿ ಹಿಡಿದಂತೆ ಕಾಣುವ ಕೆಂಪೇಗೌಡರ ಪ್ರತಿಮೆ ಕಡಿದ ಶಿಲ್ಪಿಗೆ ಕೆಂಪೇಗೌಡರ ತಲೆ ಅಷ್ಟುಗಾತ್ರವಿದ್ದ ಮೇಲೆ ಎದೆಭಾಗ ಎಷ್ಟಿರಬೇಕೆಂಬುದೇ ಗೊತ್ತಿಲ್ಲ ಅಂತ ಕಾಣಿಸುತ್ತೆ. ಪ್ರತಿಮೆಯಲ್ಲಿ ತೊಡಿಸಿರುವ ಬಟ್ಟೆಯಂತೂ ಕೆಂಪೇಗೌಡರ ಕಾಲವನ್ನು ಪ್ರತಿನಿಧಿಸುತ್ತಿಲ್ಲ. ಈಗಲೂ ಕಾಲ ಮಿಂಚಿಲ್ಲ ಕೆಂಪೇಗೌಡರ ಪ್ರತಿಮೆಯನ್ನ ಅನಾವರಣಗೊಳಿಸಲು ಆಹ್ವಾನವಿಲ್ಲದೆ ಅವಮಾನಗೊಂಡವರೆಲ್ಲಾ ಸೇರಿ ಒಳ್ಳೆ ಪ್ರತಿಮೆ ಮಾಡಿಸಿ ನಿಲ್ಲಿಸಬಹುದಂತಲ್ಲಾ, ಥೂತ್ತೇರಿ.

*****

ಬಿಜೆಪಿಗಳು ಯಾವ ಕೆಲಸ ಮಾಡಿದರೂ ಅಲ್ಲೊಂದು ಸಂಚು ಮತ್ತು ಸೇಡು ಇದೇ ಇರುತ್ತದೆ. ಅಶೋಕ ಮತ್ತು ಅಶ್ವತ್ಥ ನಾರಾಯಣರ ಜೊತೆಗೆ ನಿರ್ಮಲಾನಂದ ಸ್ವಾಮಿ ಇದ್ದರೆ ಸಾಕು, ಇಡೀ ಒಕ್ಕಲಿಗ ಸಮಾಜ ಬಿಜೆಪಿ ದೊಡ್ಡಿಗೆ ಬಂದು ತುಂಬಿಕೊಳ್ಳುತ್ತದೆ ಅಂದುಕೊಂಡಿದ್ದಾರೆ. ಹೀಗೆ ಭಾವಿಸಿರುವ ಅಶ್ವತ್ತಶೋಕರು ಆದಿಚುಂಚನಗಿರಿ ಸ್ವಾಮಿಗೆ ನಮ್ಮಷ್ಟು ಹತ್ತಿರ ಯಾರೂ ಇಲ್ಲ ಎಂಬ ಸಲುಗೆ ತೋರಲು ಅವರ ಭುಜ ಹಿಡಿದು ಪೋಜು ಕೊಟ್ಟಿವೆಯಲ್ಲಾ. ಜಗದ್ಗುರುವಿನ ಭುಜವನ್ನ ಸಲುಗೆಯಿಂದ ಮುಟ್ಟಿರುವ ಕಾರಣಕ್ಕೆ ದೂರು ದಾಖಲಿಸಿ ಕೇಸುಮಾಡಲು ಒಕ್ಕಲಿಗ ಲಾಯರು ತಯಾರಾಗಿದ್ದರಂತಲ್ಲಾ. ಆದರೆ ಭುಜವನ್ನ ಮುಟ್ಟಿಸಿಕೊಂಡ ಜಗದ್ಗುರುವೇ ಮೋಹಕವಾಗಿ ನಗುತ್ತ ಹಾಗೆ ಭುಜ ಮುಟ್ಟಲು ನಾನೇ ಹೇಳಿದೆ ಎಂದರೆ ಮಾಡುವುದೇನು ಎಂದು ಸುಮ್ಮನಾದರಂತಲ್ಲಾ. ಅದೇನಾದರಾಗಲಿ ಕೃಷಿಕ ಸಮಾಜದ ಸಿದ್ಧಾಂತಗಳನ್ನ ಕೈಬಿಟ್ಟು ವೈದಿಕ ಪರಂಪರೆ ಕಡೆ ಸಾಗುತ್ತಿರುವ ಚುಂಚನಗಿರಿ ಮಠವನ್ನ ಆ ಭೈರವೇಶ್ವರನೇ ಬಚಾವು ಮಾಡಬೇಕಂತಲ್ಲಾ, ಥೂತ್ತೇರಿ.

*****

ಇದನ್ನೂ ಓದಿ: ರಂಜಿಸಿ ವಂಚಿಸುವ ಕಾಂತಾರ

ಇತ್ತ ಹೊನ್ನಾಳಿ ಕಡೆಯಿಂದ ಬಂದ ಸುದ್ದಿ ಶಾನೆ ಶಾಕಿಂಗಾಗಿದೆಯಲ್ಲಾ. ನನ್ನ ಸೋದರನ ಮಗನದ್ದು ಗ್ಯಾರಂಟಿ ಕೊಲೆ, ಅದನ್ನ ಪತ್ತೆ ಹಚ್ಚಲಾಗದ ನೀವು ಎಂತಹ ಪೊಲೀಸರು ಎಂದು ಸಾರ್ವಜನಿಕವಾಗಿ ಅವಾಜುಹಾಕಿ ಅವಮಾನ ಮಾಡಿದ ರೇಣುಕಾಚಾರಿ ಇದ್ದಕ್ಕಿದ್ದಂತೆ ಬಾಯಿ ಬಂದ್ ಮಾಡಿಕೊಂಡು, ಇದ್ದಾರೂ ಇಲ್ಲವೋ ಅನ್ನುವಂತಾಗಿದ್ದಾರಲ್ಲಾ. ಹೊನ್ನಾಳಿ ಚಂದ್ರಶೇಖರರ ಸಾವು ಸಂಭವಿಸುವ ಮುನ್ನ ಆತ ಗೌರಿಗದ್ದೆ ಕಡೆಯಿಂದ ಬರಲು ಕಾರಣವೇನು ಎಂದು ಹುಡುಕಿಹೋದ ಪೊಲೀಸರಿಗೆ ಗೌರಿಗದ್ದೆಯಲ್ಲಿ ವಾಸಿಸುವ ’ಅವಧೂತ’ನ ಚರಿತ್ರೆ ಶಾನೆ ಕುತೂಹಲ ಮೂಡಿಸಿದೆಯಂತಲ್ಲಾ. ಈ ಮಠಗಳ ಕರ್ಮಕಾಂಡ ಶುರುವಾದದ್ದು ರಾಮಚಂದ್ರಾಪುರದ ಮಠದ ಕಡೆಯಿಂದ. ಆ ನಂತರ ಉಡುಪಿ ಮಠಗಳು. ಅಲ್ಲೂಬ್ಬ ಸ್ವಾಮಿ ಆತ್ಮಹತ್ಯೆ ಮಾಡಿಕೊಂಡ. ಈಚೆಗೆ ಮುರುಘ ಶರಣರ ಸ್ಥಿತಿ ನೋಡಿದ ಇಬ್ಬರು ಲಿಂಗೈಕ್ಯರಾದರು. ಇನ್ನು ದಿನದಿಂದ ದಿನಕ್ಕೆ ಮುರುಘ ಶರಣರ ದೌರ್ಜನ್ಯಗಳು ಬಿಚ್ಚಿಕೊಳ್ಳುತ್ತಿದ್ದಂತೆ ಗೌರಿಗದ್ದೆ ಬಾಲಕನ ವಿರುದ್ಧವೂ ಅನುಮಾನ ಆರೋಪಗಳು ಏಳುತ್ತಿವೆ. ಇದರ ಅಪಾಯವರಿತ ಜವಬ್ದಾರಿವಂತರು ಇಂಥ ಮಠಗಳ ಕಡೆಗೆ ಮಹಿಳೆ-ಮಕ್ಕಳು-ಹುಡುಗರನ್ನು ಕಳಿಸಬೇಡಿ ಎಂಬ ಎಚ್ಚರಿಕೆ ಫಲಕಗಳನ್ನ ಬರೆಯುತ್ತಿದ್ದಾರಂತಲ್ಲಾ, ಥೂತ್ತೇರಿ.

*****

ಹೇಗಾದರೂ ಮಾಡಿ ಟಿಪ್ಪು ಸುಲ್ತಾನನನ್ನು ಕನ್ನಡ ದ್ರೋಹಿ ಮಾಡಲು ಹೆಣಗುತ್ತಿರುವವರ ಜೊತೆಗೆ ಈಗ ಎಸ್ಸೆಲ್ ಭೈರಪ್ಪ ಕೂಡ ಸೇರಿದ್ದಾರಲ್ಲಾ. ಟಿಪ್ಪು ಕನ್ನಡ ದ್ರೋಹಿಯಾಗಿದ್ದ ಎಂಬುದಕ್ಕೆ ಭೈರಪ್ಪ ಕೊಡುವ ಕಾರಣ ಆತ ಕಂದಾಯ ಇಲಾಖೆಯಲ್ಲಿ ಪರ್ಶಿಯನ್, ಪಾರ್ಸಿ ಹೆಸರುಗಳನ್ನ ಸೇರಿಸಲಾಗಿದೆ ಎಂಬುದಾಗಿದೆ. ಇಂಗ್ಲಿಷ್ ವಿರೋಧಿಯಾಗಿದ್ದ ಟಿಪ್ಪು ಪರ್ಶಿಯನ್ ಭಾಷೆ ಸೇರಿಸಿದ್ದು ಸಹಜ ಕ್ರಿಯೆಯಾಗಿತ್ತು. ಆದರೆ ಶ್ಯಾನುಭೋಗರ ಮನೆಯವರಾದ ಭೈರಪ್ಪ ಇತಿಹಾಸ ಕೆದಕಿದರೆ, ಟಿಪ್ಪು ಕಾಲದಲ್ಲಿ ಇಡೀ ನಾಡಿನ ಕಂದಾಯ ಇಲಾಖೆ ನೋಡಿಕೊಳ್ಳುತ್ತಿದ್ದವರು ಶಾನುಭೋಗರು. ಇನ್ನ ಟಿಪ್ಪು ಸಚಿವ ಸಂಪುಟದಲ್ಲಿ ಐದು ಜನ ಬ್ರಾಹ್ಮಣರಿದ್ದರು. ಟಿಪ್ಪು ಆಡಳಿತದಲ್ಲಿ ಯಾವುದೇ ಕಾನೂನು ಜಾರಿಯಾಗುವುದಿದ್ದರೂ ಅದಕ್ಕೆ ಬ್ರಾಹ್ಮಣರ ಚರ್ಚೆಗಳೂ ಮುಖ್ಯವಾಗುತ್ತಿದ್ದವು. ಒಂದು ವೇಳೆ ಟಿಪ್ಪು ತನ್ನ ಆಡಳಿತದಲ್ಲಿ ಪರ್ಶಿಯನ್ ಭಾಷೆ ತುರುಕಲು ಯತ್ನಿಸಿದ್ದರೆ ಅದನ್ನು ಖಂಡಿಸಿ ಬ್ರಾಹ್ಮಣರು ತಮ್ಮ ಹುದ್ದೆಗೆ ರಾಜೀನಾಮೆ ಕೊಡಬೇಕಿತ್ತು. ಹಾಗೆ ಮಾಡದೆ ಬಂದ ಬಳವಳಿಯವರು ಈಗ ಟಿಪ್ಪುವನ್ನು ಕನ್ನಡ ದ್ರೋಹಿ ಎಂದು ಬಗೆಯಲು ಪ್ರಯತ್ನಿಸಿದರೆ ಅವರನ್ನೇ ಈ ದ್ರೋಹಿಗಳ ಪಟ್ಟಿಯಲ್ಲಿ ಸೇರಿಸಲು ಜನ ಕಾಯುತ್ತಿದ್ದಾರಂತಲ್ಲಾ, ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಕಂದಾಯ ಇಲಾಕೆಯ ಪರ್ಷೀಯನ್ ಪದಗಳಿಗೆ ಈಗಲಾದರೂ ಕನ್ನಡ ಪದಗಳನ್ನು ಹುಟ್ಟುಹಾಕಬಹುದಲ್ಲಾ?

LEAVE A REPLY

Please enter your comment!
Please enter your name here

- Advertisment -

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...