Homeಅಂಕಣಗಳುರಂಜಿಸಿ ವಂಚಿಸುವ ಕಾಂತಾರ

ರಂಜಿಸಿ ವಂಚಿಸುವ ಕಾಂತಾರ

- Advertisement -
- Advertisement -

ಚಂಡಮಾರುತ, ಭೂಕಂಪ, ಪ್ರವಾಹ ಇತ್ಯಾದಿ ನೈಸರ್ಗಿಕ ದುರಂತಗಳಂತೆಯೇ ಬಿಜೆಪಿ ಸರಕಾರದಲ್ಲಿ ನಡೆದ ನೋಟುಬ್ಯಾನು, ಜಿಎಸ್‌ಟಿ, ಕೃಷಿಕಾಯ್ದೆಗಳಿಂದಾಗಿರಬಹುದಾದ ಅನಾಹುತಗಳನ್ನು ದಾಖಲಿಸುವ ಬದಲು, ಮಾಧ್ಯಮದವರು ಚೀನಾದಲ್ಲಿ ಏನಾಗಿದೆ ಆಫ್ಘಾನಿನ ಕತೆಯೇನು, ಪಾಕಿಸ್ತಾನ ಉಳಿಯುವುದೆ, ಶ್ರೀಲಂಕಾದಲ್ಲಿ ಅರಮನೆಗೇ ನುಗ್ಗಿ ಆಹಾರ ಹೊತ್ತುಕೊಂಡು ಹೋಗುತ್ತಿದ್ದಾರೆ ಎಂಬಿತ್ಯಾದಿಯಾಗಿ ಹುಡುಕುತ್ತಾ ಕುಳಿತಿರಬೇಕಾದರೆ ಹಸಿವಿನ ವಿಷಯದಲ್ಲಿ ನಮ್ಮ ಸುತ್ತಮುತ್ತಲ ದೇಶಗಳನ್ನ ಭಾರತ ಹಿಂದಿಕ್ಕಿದೆಯಂತಲ್ಲಾ. ಈ ಬಗ್ಗೆ ಮಾಧ್ಯಮದವರನ್ನ ಕೇಳಿದರೆ, ಅದೆಲ್ಲಾ ಕಾಂಗ್ರೆಸ್ಸಿಗರು ಹರಡುತ್ತಿರುವ ಸುಳ್ಳು ಸುದ್ದಿ; ಈಗ ನಮ್ಮನ್ನೇ ನೋಡಿ, ದಿನಬೆಳಗಾಯ್ತೆಂದರೆ ಯಾರಾದರೂ ಕಾಫಿ, ತಿಂಡಿ ಕೊಡಿಸುವವರು ಸಿಗುತ್ತಾರ ಎಂದು ಹುಡುಕುತ್ತಿದ್ದೆವು. ಮಧ್ಯಾಹ್ನದ ಊಟಕ್ಕೂ ಅದೇ ಸ್ಥಿತಿಯಿತ್ತು. ಸಾಯಂಕಾಲಕ್ಕೆ ಯಾರಾದರೂ ಪಾರ್ಟಿಗೆ ಕರೆಯುತ್ತಿದ್ದರು. ಈಗ ನಾವೇ ಕರೆಯುತ್ತೇವೆ. ಅಲ್ಲದೆ ಅವರವರ ಮನೆಯವರೆಗೂ ಬಿಟ್ಟುಕೊಡುವ ವಾಹನವೂ ನಮ್ಮಲ್ಲಿದೆ. ನಾವೇ ಹೀಗೆ ಸುಧಾರಿಸುತ್ತಿರಬೇಕಾದರೆ, ಇನ್ನು ನಮ್ಮ ದೇಶದ ಜನ ಹಸಿದು ಮಲಗುತ್ತಾರೆಂಬುದು ಹಸಿಸುಳ್ಳು ಎಂದು ಮಾರಿಕೊಂಡ ಮಾಧ್ಯಮದವರು ಬೊಮ್ಮಾಯಿ ಕೊಟ್ಟ ಗಿಫ್ಟನ್ನು ಜೋಪಾನವಾಗಿ ಮನೆಗೆ ತೆಗೆದುಕೊಂಡು ಹೋದರಂತಲ್ಲಾ, ಥೂತ್ತೇರಿ.

******

ಒಂದಲ್ಲಾ ಒಂದು ದಿನ ಶುದ್ಧ ಸಾಹಿತ್ಯದ ಕಡೆಗೆ ಸಾಹಿತಿ ತಿರುಗಲೇಬೇಕೆಂದು ನಮ್ಮ ಸಂತೆಶಿವರದ ಭೈರಪ್ಪ ಹಾಸನಕ್ಕೆ ಬಂದು ಭೈರಿಗೆ ಹಿಡಿದು ಹೋಗಿದ್ದಾರಲ್ಲಾ! ಸದರಿ ಸಾಹಿತಿಗೆ ಈ ಜ್ಞಾನೋದಯ ತಡವಾಗಿ ಸಂಭವಿಸಿದೆ. ಭೈರಪ್ಪನವರು ಧರ್ಮಶ್ರೀ, ದಾಟು, ಆವರಣ ಇತ್ಯಾದಿ ಶುದ್ಧವಲ್ಲದ ಸಾಹಿತ್ಯ ರಚಿಸಿದ ಮೇಲೆ ಕಡೆಗೂ ಶುದ್ಧ ಸಾಹಿತ್ಯದ ಬಗ್ಗೆ ಹಲುಬಿದ್ದಾರೆ. ಪರಂಪರೆಯ ಹಾಳುಗುಡಿಯಲ್ಲೇ ಕುಳಿತು ರಿಮ್ಮುಗಟ್ಟಲೆ ಬರೆದ ಭೈರಪ್ಪನವರಿಗೆ ಆಧುನಿಕತೆ ಚಿಂತನೆಯ ಸಾಹಿತಿಗಳನ್ನು ಕಂಡರಾಗುವುದಿಲ್ಲ. ಅವರೆಲ್ಲಾ ವಿಜೃಂಭಿಸುತ್ತಿದ್ದ ಕಾಲದಲ್ಲಿ ಕೀಳರಿಮೆಯಿಂದ ಹಿಂದೂ ಧರ್ಮದ ಕಗ್ಗ ಹೊಸೆಯುತ್ತಿದ್ದ ಭೈರಣ್ಣ ಅವರೆಲ್ಲಾ ಕಾಲವಾದ ನಂತರ ಅವರ ಸಾಹಿತ್ಯವನ್ನು ಅಣಕಿಸುತ್ತಿದ್ದಾರೆ. ಸುದೈವದಿಂದ ಅವರೆಲ್ಲಾ ಭೈರಪ್ಪನ ಸಾಹಿತ್ಯ ಅಂದರೆ ಏನು ಎಂದು ದಾಖಲಿಸಿ ಹೋಗಿದ್ದಾರೆ. ಅವು ನೆನಪಿಗೆ ಬಂದಾಗಲೆಲ್ಲಾ ಆಧುನಿಕ ಸಾಹಿತಿಗಳು ಮತ್ತು ಕವಿಗಳನ್ನ ಟೀಕಿಸುತ್ತಲೇ ಬರುತ್ತಿದ್ದಾರಲ್ಲಾ, ಥೂತ್ತೇರಿ.

ಇದನ್ನೂ ಓದಿ: ಸಿನಿಮಾ, ಮಿಥ್ ಮತ್ತು ರಾಜಕೀಯ; ಕಾಂತಾರ ಮತ್ತದರ ಯಶಸ್ಸಿನ ಸುತ್ತ…

******

ಭೈರಪ್ಪನವರ ಬರವಣಿಗೆಯ ಬೆಲೆ ಕಟ್ಟಿದ ಯು.ಆರ್ ಅನಂತಮೂರ್ತಿಯವರು ಭೈರಪ್ಪ ರಂಜಿಸಿ ವಂಚಿಸುವ ಲೇಖಕ ಎಂದು ಸಾಕ್ಷಿಸಮೇತ ತೋರಿ ಹೋಗಿದ್ದರು. ಈ ವ್ಯಾಖ್ಯಾನ ಕಾಂತಾರ ಎಂಬ ಕಂತೆ ಪುರಾಣದ ಸಿನಿಮಾ ನೋಡುವಾಗ ಜ್ಞಾಪಕಕ್ಕೆ ಬಂತಲ್ಲಾ. ಕಾಂತಾರದ ನಿರ್ದೇಶಕ ಜಗ್ಗೇಶ್ ಚೇಷ್ಟೆಗಳನ್ನು ಅನುಕರಿಸಿ ಮೇಲೆ ಬಂದವರು. ಹಾಗೆಯೇ ಜನ ಹಗುರವಾಗಿ ನಗುವ ದೃಶ್ಯಗಳನ್ನು ತೆಗೆದು ತೋರಿದವರು. ಹೀಗೆ ತೋರುತ್ತ ಬಂದ ಆತನೊಳಗೆ ಅಮಾನುಷತೆ ಅಡಗಿರುವುದು ಅವರಿಗೇ ಗೊತ್ತಿಲ್ಲ. ಉಬ್ಬುಹಲ್ಲಿರುವ ಪಾತ್ರವೊಂದನ್ನು ಸೃಷ್ಠಿ ಮಾಡಿ ಆಡಿಕೊಳ್ಳುವ ಈತ ಜನರನ್ನು ನಗಿಸುವ ಬರದಲ್ಲಿ ಎಂತಹ ಹೀನ ಕೆಲಸ ಮಾಡುತ್ತೇನೆಂದು ಗ್ರಹಿಸಿದಂತೆ ಕಾಣುವುದಿಲ್ಲ. ಹಾಗೇ ನೋಡಿದರೆ ದಕ್ಷಿಣ ಕನ್ನಡದ ಯಕ್ಷಗಾನ ಯಕ್ಕುಟ್ಟಿ ಹೋಗಿ ಬಹಳ ದಿನಗಳಾಗಿವೆ. ಕಪ್ಪು ಬಣ್ಣ ಬಳಿದ ಪಾತ್ರ ತಂದು ನಿಲ್ಲಿಸಿಕೊಂಡು ಆಡಿಕೊಳ್ಳುವುದು, ಸಾಬರನ್ನ ಅಣಕಿಸುವುದು ಅದ್ಭುತ ಕಲೆಯಾದ ಯಕ್ಷಗಾನದೊಳಕ್ಕೆ ತಂದು ಬಹಳ ದಿನಗಳಾಗಿವೆ. ಮನುಷ್ಯನ ಆಕಾರವನ್ನ ಆಡಿಕೊಳ್ಳುವುದು, ಪುರೋಹಿತರ ಶ್ರೇಷ್ಠತೆ ಮೆರೆಯುವುದು ಇವೆಲ್ಲಾ ಸಾಮಾನ್ಯ ಸಂಗತಿಗಳಾಗಿವೆ. ಇಂತಹ ಸಮಯದಲ್ಲಿ ಭೂತ, ಕೋಲ, ಪಂಜುರ್ಲಿ ಎಂದುಕೊಂಡು ಮನಸ್ಸಿನ ವಿಕಾರಗಳನ್ನು ಮೆರೆಸುತ್ತ, ಅವುಗಳನ್ನು ದೈವೀಕರಿಸಿ ನಿಂದಿಸಿದವರು ರಕ್ತ ಕಾರಿಕೊಂಡು ಸಾಯುತ್ತಾರೆಂದು ನಂಬಿಸಲು ಹೊರಟಿರುವುದು ಒಂದು ಸಮೂಹದ ತಲೆ ಯಕ್ಕುಟ್ಟಿ ಹೋಗಿರುವುದರ ಸೂಚನೆಯಂತಲ್ಲಾ, ಥೂತ್ತೇರಿ.

******

ಗುಜರಾತಿನ ಮೋರ್ಬಿ ಜಿಲ್ಲೆಯ ಮಚ್ಚು ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ತೂಗು ಸೇತುವೆ ಕುಸಿದುಬಿದ್ದು 135 ಜನ ಸಾವಿಗೀಡಾಗಿದ್ದಾರೆ. ಸೇತುವೆ ಕುಸಿಯುವುದು, ಜನರ ಆಕ್ರಂದನ, ಅಸಹಾಯಕರಾಗಿ ಅಸುನೀಗುವುದು ಇವೆಲ್ಲಾ ಬದುಕಿರುವವರನ್ನ ಕಾಡುವ ಸಂಗತಿಗಳು. ಈ ಸೇತುವೆ ದುರಸ್ತಿಗೊಂಡು ಉದ್ಘಾಟನೆಗೊಂಡ ನಾಲ್ಕೇ ದಿನದಲ್ಲಿ ಕುಸಿದುಬಿದ್ದು 135 ಜನ ಸತ್ತಿದ್ದಾರೆ. ಜನ ಸತ್ತಿದ್ದಕ್ಕೆ ಮೋದಿ ಸರ್ಕಾರ ಇಲ್ಲಿಯವರೆಗೆ ತಮ್ಮ ತವರು ರಾಜ್ಯದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿಲ್ಲ. ಕ್ರಮವಂತೂ ದೂರವೇ ಹೋಯ್ತು. ಹಿಂದೆ ಅವರ ಮುಖ್ಯಮಂತ್ರಿ ಅಧಿಕಾರಾವಧಿಯಲ್ಲಿ ಗುಜರಾತಿನಲ್ಲಿ ಮೂರ್ನಾಕು ದಿನದಲ್ಲಿ ಮೂರು ಸಾವಿರ ಜನ ಸತ್ತಾಗ ಅದು ಅವರನ್ನು ಕಾಡಲಿಲ್ಲ. ರೈತ ಹೋರಾಟದ ಸಮಯದಲ್ಲಿ ದೆಹಲಿ ಗಡಿಯಲ್ಲಿ ಏಳುನೂರ ಐವತ್ತು ಜನ ರೈತರು ಅಸುನೀಗಿದಾಗ ಮಾತನಾಡಲಿಲ್ಲ. ಪ್ರಧಾನಿಯವರ ಈ ವಿಲಕ್ಷಣ ನಡೆಗೆ ಏನು ಹೇಳುವುದೆಂಬುದೇ ಸಮಸ್ಯೆಯಾಗಿದೆಯಲ್ಲಾ, ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....

ವಿಜಯ್ ಹೇಳಿದ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಟಿವಿಕೆ ಶಾಸಕರ ಕ್ರಿಮಿನಲ್ ಹಿನ್ನೆಲೆ

ಎರಡು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಟಿವಿಕೆ ಎಂಬ ಪಕ್ಷ, 75 ವರ್ಷಗಳ ಅನುಭವಿ ಪಕ್ಷವಾದ ಡಿಎಂಕೆಯನ್ನು ಸೋಲಿಸಿರುವುದು, ಕಳೆದ ಅರವತ್ತು ವರ್ಷಗಳಲ್ಲಿ ಮೊಟ್ಟ ಮೊದಲ ಬಾರಿಗೆ ದ್ರಾವಿಡ ಚಳುವಳಿ ಹಿನ್ನೆಲೆಯ ಪಕ್ಷವನ್ನು...

ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲುವು: ಫಲಿತಾಂಶದ ಬಳಿಕ ಭುಗಿಲೆದ್ದ ಹಿಂಸಾಚಾರ, ಕನಿಷ್ಠ ಐದು ಮಂದಿ ಸಾವು

ಕೊಲ್ಕತ್ತಾ, ಮೇ 8: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮೊದಲ ಬಾರಿಗೆ ಬೃಹತ್ ಗೆಲುವು ಸಾಧಿಸಿದ್ದು, ರಾಜ್ಯದ 294 ಸ್ಥಾನಗಳ ಪೈಕಿ 206 ಸ್ಥಾನಗಳನ್ನು ಗೆದ್ದು ಮುಂದಿನ...

ಪಂಚರಾಜ್ಯ ಚುನಾವಣೆಯ ಗೋಜಲುಗಳು

ವಿವಾದಾತ್ಮಕ ಮತ್ತು ಸಂವಿಧಾನ ವಿರೋಧಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ ಐಆರ್) ಅಡಿಯಲ್ಲಿ ನಡೆದ 2026ರ ಐದು ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಏಕರೂಪದ ಅಭಿಮತವನ್ನು ವ್ಯಕ್ತಪಡಿಸಲಿಲ್ಲ. ಮತ್ತು ಸಂಕೀರ್ಣವಾದ ಫಲಿತಾಂಶ ಕೊಟ್ಟಿದ್ದಾರೆ. ಪಶ್ಚಿಮ...

ಪ್ರಜಾಸತ್ತೆಯ ಉಳಿವಿಗೆ ಇದು ನಿರ್ಣಾಯಕ ಕ್ಷಣ : ಮಹತ್ವದ ಕಣ್ಣೋಟ

ಚುನಾವಣೆಗಳು ಮತ್ತು ನ್ಯಾಯಾಲಯಗಳು ಇನ್ನು ಪರಿಹಾರವಲ್ಲ ಎಂಬ ಅಭಿಪ್ರಾಯಕ್ಕೆ ಜನರು ಬರಲು ಈ ಬಾರಿಯ ವಿಧಾನಸಭಾ ಚುನಾವಣೆಗಳೇ ಕಾರಣವಾಗಿವೆ. ಇಂದು 'ಭಾರತದ ಪರಿಕಲ್ಪನೆ'ಗೆ (Idea of India) ಸಂಚಕಾರ ಬಂದಿದೆ. ಪ್ರಜಾಪ್ರಭುತ್ವವು ಕೇವಲ...

ಭಾಗ-2: ಎಸ್‌ಐಆರ್ ಜಾರಿಯಿಂದ ಕಾಂಗ್ರೆಸ್‌ ಕಳೆದುಕೊಳ್ಳುವ ಕ್ಷೇತ್ರಗಳೆಷ್ಟು?

30 ಸಾವಿರದಿಂದ ಒಂದು ಸಾವಿರದ ಒಳಗಿನ ಮತಗಳ ಅಂತರದಿಂದ ಗೆದ್ದಿರುವ ಕರ್ನಾಟಕದ 97 ಕ್ಷೇತ್ರಗಳನ್ನು ನಾವು ಪಟ್ಟಿ ಮಾಡಿದ್ದೇವೆ. ಪಶ್ಚಿಮ ಬಂಗಾಳದಲ್ಲಿ ಆದಂತೆಯೇ ರಾಜ್ಯದಲ್ಲಿ ಚುನಾವಣೆ ಸಮೀಪಿಸಿದಾಗ ಎಸ್‌ಐಆರ್ ಜಾರಿಯಾದರೆ ಬಿಜೆಪಿಗೆ ಅನುಕೂಲವಾಗುವ...

ತಮಿಳುನಾಡಿನಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ ಗೆದ್ದ 60 ನೂತನ ಶಾಸಕರು

ತಮಿಳುನಾಡು ರಾಜಕಾರಣ ಎಂದರೆ ಅದು ಐದು ದಶಕಗಳಿಂದ ಕೇವಲ ಡಿಎಂಕೆ ಮತ್ತು ಎಐಎಡಿಎಂಕೆ ನಡುವಿನ ಜಿದ್ದಾಜಿದ್ದಿ. ಆದರೆ 2026ರ ಫಲಿತಾಂಶವು ಈ "ದ್ವಿಪಕ್ಷೀಯ" ಸಂಪ್ರದಾಯವನ್ನು ಮುರಿದುಹಾಕಿದೆ. ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ...

‘ಪ್ರಜಾತಂತ್ರಕ್ಕೆ ಬೆದರಿಕೆ ಒಡ್ಡುತ್ತಿರುವ ಎಸ್ಐಆರ್’: ಬಿಜೆಪಿಯ (ಕು)ತಂತ್ರ ಫಲಿಸಿದರೇ ಭಾರತವೇ ಇರುವುದಿಲ್ಲ..!

ಪಂಚರಾಜ್ಯ ಚುನಾವಣಾ ಫಲಿತಾಂಶಗಳು 2026 ಮೇ 4ರಂದು ಹೊರಬಿದ್ದಿದ್ದು, ಭಾರತೀಯ ಜನತಾ ಪಾರ್ಟಿ ಪಶ್ಚಿಮ ಬಂಗಾಳವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಆದರೆ ಈ ಗೆಲುವು ಕೇವಲ ಜನರ ಆದರ್ಶವಲ್ಲ, ಬದಲಿಗೆ ಚುನಾವಣಾ ವ್ಯವಸ್ಥೆಯೇ...