Homeಮುಖಪುಟ‘ಹೆಡ್‌ ಬುಷ್‌’ ವಿಮರ್ಶೆ: ಜಯರಾಜ್‌ ದಾದಾಗಿರಿಯ ದಿನಗಳ ದರ್ಶನ

‘ಹೆಡ್‌ ಬುಷ್‌’ ವಿಮರ್ಶೆ: ಜಯರಾಜ್‌ ದಾದಾಗಿರಿಯ ದಿನಗಳ ದರ್ಶನ

- Advertisement -
- Advertisement -

ಇತ್ತೀಚಿನ ದಿನಗಳಲ್ಲಿ ರೌಡಿಸಂ ಕಥೆಗಳು ಕನ್ನಡ ಚಿತ್ರರಂಗದಿಂದ ಸ್ವಲ್ಪ ಹಿಂದಕ್ಕೆ ಸರಿದಂತೆ ಕಾಣುತ್ತಿದ್ದವು. ದುನಿಯಾ ಸೂರಿ ನಿರ್ದೇಶನದ ‘ಪಾಪ್‌ ಕಾರ್ನ್‌ ಮಂಕಿ ಟೈಗರ್‌’, ‘ಕೆಜಿಎಫ್‌’ ನಂತರದಲ್ಲಿ ರೌಡಿಸಂ ಸಿನಿಮಾಗಳು ಇಳಿಮುಖವಾದಂತೆ ಕಾಣುತ್ತಿದ್ದವು. ಆದರೆ ಡಾಲಿ ಧನಂಜಯ್‌ ಅಭಿನಯದ ‘ಹೆಡ್‌ ಬುಷ್‌’ ಇಂತಹ ಸಿನಿಮಾಗಳಿಗೆ ಮರುಜೀವ ನೀಡಿದೆ.

‘ಆ ದಿನಗಳು’, ‘ಎದೆಗಾರಿಕೆ’, ‘ತಮಸ್ಸು’, ‘ಕಳ್ಳರ ಸಂತೆ’ ಸಿನಿಮಾಗಳ ಮೂಲಕ ರಾಜಕೀಯ, ರೌಡಿಸಂ ಆಧಾರಿತ ಚಿತ್ರಕಥೆಗಳಿಗೆ ಬೇರೊಂದು ಆಯಾಮ ನೀಡಿದವರು ಅಗ್ನಿ ಶ್ರೀಧರ್‌. ಅವರ ‘ದಾದಾಗಿರಿಯ ದಿನಗಳು’ ಕೃತಿಯು ರಾಜ್ಯ ಕಂಡ ಭೂಗತ ಜಗತ್ತಿನ ದಾಖಲೆಯಾಗಿಯೂ ಗುರುತಿಸಿಕೊಂಡಿದೆ. ಈ ಕೃತಿಯನ್ನು ಆಧಾರಿಸಿಯೇ ‘ಆ ದಿನಗಳು’ ತೆರೆಗೆ ಬಂದಿತ್ತು. ಇದೇ ಪುಸ್ತಕವನ್ನು ಆಧರಿಸಿ ‘ಹೆಡ್‌ ಬುಷ್‌’ ನಿರ್ದೇಶಿಸಿದ್ದಾರೆ ‘ಶೂನ್ಯ’.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಬೆಂಗಳೂರಿನ ಭೂಗತ ಪಾತಕಿ ಡಾನ್ ಜಯರಾಜ್‌ ಜೀವನದ ಸುತ್ತ ಸಾಗುವ ಶ್ರೀಧರ್‌ ಅವರ ಚಿತ್ರಕಥೆಯು, ಆ ಕಾಲದ ರಾಜಕಾರಣ, ರೌಡಿಸಂ, ಪಾತಕಿಗಳ ಪುಂಡಾಟ, ಪುಡಾರಿಗಳ ಒಳರಾಜಕಾರಣ, ಜನಜೀವನ ಒಂದರೊಳಗೊಂದು ಬೆಸೆದುಕೊಂಡಿರುವುದನ್ನು ಸರಳು ಸರಳಾಗಿ ಬಿಚ್ಚುತ್ತಾ ಹೋಗುತ್ತದೆ.

ರಾಜ್ಯದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದ ಮುಖ್ಯಮಂತ್ರಿ ದೇವರಾಜ ಅರಸು ಅವರ ಕಾಲದಲ್ಲಿನ ಬೆಂಗಳೂರು, ರಾಷ್ಟ್ರ ರಾಜಕಾರಣದ ಬಿಕ್ಕಟ್ಟುಗಳ ನಡುವೆ ಇಂದಿರಾ ಕಾಂಗ್ರೆಸ್‌ನ ಭಾಗವಾಗಿ ಹುಟ್ಟಿಕೊಂಡ ಇಂದಿರಾ ಬ್ರಿಗೇಡ್‌, ಅರಸು ಅವರ ಅಳಿಯ ಎಂ.ಡಿ.ನಟರಾಜ್‌ ಹಾಗೂ ಮಗಳಾದ ನಾಗರತ್ನ (ಸಿನಿಮಾದಲ್ಲಿ ರತ್ನಪ್ರಭಾ) ಅವರ ಒಡನಾಟಕ್ಕೆ ಬಂದ ಡಾನ್ ಜಯರಾಜ್‌, ರೌಡಿಗಳಿಗೆ ಸಿಕ್ಕ ಪ್ರಭುತ್ವದ ಪೋಷಣೆ, ಆ ಕಾಲದ ಬಡ್ಡಿ ದಂಧೆ, ಸೇಟುಗಳ ವ್ಯವಹಾರ, ಕಾಂಗ್ರೆಸ್‌ನೊಳಗಿನ ಒಳರಾಜಕಾರಣ ಇತ್ಯಾದಿಗಳೆಲ್ಲ ಕಥೆಯೊಳಗೆ ಬರುತ್ತವೆ. ಪಾತಕಿಗಳಿಗೆ ಪ್ರಭುತ್ವದ ಪೋಷಣೆ ಸಿಕ್ಕರೆ ಏನೆಲ್ಲ ಅನಾಹುತಗಳಾಗುತ್ತವೆ ಎಂಬುದನ್ನು ಇಲ್ಲಿ ಕಾಣಬಹುದು.

“ರಾಜಕೀಯ ಅಂದರೆ ಉಪಾಯವಾಗಿ ಇರೋರ್‌ ಅತ್ರ ತಗೊಂಡು ಇಲ್ಲದೆ ಇರೋರಿಗೆ ಕೊಡೋದು” ಎನ್ನುತ್ತಾರೆ ಅರಸು. ಈ ಪಾಲಿಸಿಯನ್ನು ಪಾಲಿಸುವ ಜಯರಾಜ್‌ ಗ್ಯಾಂಗ್‌ನ ಗೂಂಡಾಗಿರಿಗೆ ಮಾನವೀಯ ಸ್ಪರ್ಶ ನೀಡಲು ಯತ್ನಿಸಲಾಗಿದೆ. ರೌಡಿಗಳ ಅಟ್ಟಹಾಸದ ಹಿಂದೆ ಬಡವರ ಪರ ಕಾಳಜಿಯೂ ಇತ್ತು ಎಂಬ ನಿರೂಪಣೆಯನ್ನು ಆರಂಭದಲ್ಲಿ ನೀಡಲಾಗಿದೆ. ಆದರೆ ಭೂಗತ ಸಾಮ್ರಾಜ್ಯದಲ್ಲಿ ಮೇಲುಗೈ ಸಾಧಿಸಬೇಕೆಂದು ನಡೆಸುವ ಗ್ಯಾಂಗ್‌ವಾರ್‌, ಅದರೊಳಗಿನ ಪಿತೂರಿಗಳು, ಸನ್ನಿವೇಶಗಳು ಉಂಟು ಮಾಡುವ ವೈಷಮ್ಯ, ಪಾತಕಿಗಳಿಗೆ ಪ್ರಭುತ್ವದ ಬೆಂ‘ಬಲ’ ಸಿಕ್ಕರೆ ಆಗಬಹುದಾದ ಅನಾಹುತಗಳೆಲ್ಲ ಕಥೆಯೊಳಗೆ ಮುಖ್ಯಸ್ಥಾನ ಪಡೆದಿವೆ. ರೌಡಿಗಳ ವೈಯಕ್ತಿಕ ದ್ವೇಷ, ಅಸೂಯೆ, ಸೇಡು ತೀರಿಸಿಕೊಳ್ಳುವ ಹಪಾಹಪಿ, ರಾಜಕೀಯ, ಪೊಲೀಸ್ ವ್ಯವಸ್ಥೆ- ಇವುಗಳೇ ಮುಖ್ಯವಾಗುವುದನ್ನು ‘ಹೆಡ್‌ ಬುಷ್‌’ನಲ್ಲಿ ಕಾಣಬಹುದು.

‘ಹೆಡ್‌ಬುಷ್‌’ ಎಂಬ ಟೈಟಲ್‌ ಇಟ್ಟು, ಅದಕ್ಕೆ ಸಮರ್ಥನೆ ನೀಡಲೆಂದೇ ಎರಡು ದೃಶ್ಯಗಳನ್ನು ತರುಕಿದಂತಿದೆ. ಜಯರಾಜ್‌, ಗಂಗಾ ಹಾಗೂ ಇತರ ಸ್ನೇಹಿತರ ಬಾಲ್ಯವನ್ನು ತೋರಿಸುವಾಗ ‘ಹೆಡ್‌- ಬುಷ್‌’ (ಹೆಡ್‌ ಅಥವಾ ಟೈಲ್‌) ಜೂಜಿನ ಒಂದು ದೃಶ್ಯ ಬರುತ್ತದೆ. ಜಯರಾಜ್ ಗ್ಯಾಂಗ್ ಬಾರ್‌ನಲ್ಲಿ ಹೆಡ್‌ ಬುಷ್‌ ಆಡುತ್ತಿರುವ ಮತ್ತೊಂದು ದೃಶ್ಯ ಬರುತ್ತದೆ. ಈ ಸಂದರ್ಭದಲ್ಲಿ ಬರುವ ಪ್ರೊಫೆಸರ್‌ (ವಿ.ರವಿಚಂದ್ರನ್‌) ಹೆಡ್‌- ಬುಷ್‌ ಬಗ್ಗೆ ತತ್ವಜ್ಞಾನ ಹೊಡೆದು ಹೋಗುತ್ತಾರೆ. ಆ ಮೂಲಕ ಟೈಟಲ್‌ಗೊಂದು ಮಾನ್ಯತೆ ಕೊಡಲು ಶ್ರೀಧರ್‌ ಯತ್ನಿಸಿದ್ದಾರೆ.

ಅರಸು, ಎಂ.ಡಿ.ನಟರಾಜ್‌, ಜಯರಾ‌ಜ್‌, ಗಂಗಾ, ಖಾನ್‌, ಅರಸು, ರತ್ನಪ್ರಭಾ, ಕೊತ್ವಾಲ್‌ ರಾಮಚಂದ್ರ ರಾವ್, ಸಾಮ್ಸನ್‌, ಪೊಲೀಸ್ ಅಧಿಕಾರಿ ಗರುಡಾಚಾರ್‌ ಮೊದಲಾದ ಪಾತ್ರಗಳ ಸುತ್ತ ಸಾಗುವ ಹೆಡ್‌ಬುಷ್‌- ದಾದಾಗಿರಿಯ ದಿನಗಳನ್ನು ಢಾಳಾಗಿ ಚಿತ್ರಿಸಿದೆ.

ಈವರೆಗೆ ಬಂದಿರುವ ರೌಡಿಸಂ ಸಿನಿಮಾಗಳಿಗೆ ಹೋಲಿಸಿದರೆ ಇಲ್ಲಿನ ಕಾಸ್ಟ್ಯೂಮ್‌, ಮೇಕಿಂಗ್‌ ವಿಶಿಷ್ಟವಾಗಿದೆ. ಚರಣ್‌ ರಾಜ್‌ ಸಂಗೀತ ಇಷ್ಟವಾಗುತ್ತದೆ. ಆ ದಿನಗಳು, ಎದೆಗಾರಿಕೆಗಿಂತ ಹೆಚ್ಚಿನ ಸಿನಿಮೀಯತೆ ಹೆಡ್‌ಬುಷ್‌ನಲ್ಲಿದೆ. ಜಯರಾಜ್‌ನನ್ನು ವೈಭವೀಕರಿಸುವ ಹೊಡೆದಾಟದ ದೃಶ್ಯಗಳಿವೆ. ಎಪ್ಪತ್ತರ ದಶಕದ ಪಾತಕ ಲೋಕವನ್ನು ತೆರೆದಿಡಲಾಗಿದೆ. ತಾಂತ್ರಿಕವಾಗಿ ಸಿನಿಮಾ ಉತ್ತಮವಾಗಿದೆ. ಆದರೆ ‘ಎದೆಗಾರಿಕೆ’, ‘ಆ ದಿನಗಳು’ ಸಿನಿಮಾ ಕಥೆಯಲ್ಲಿ ಕಾಣುವಷ್ಟು ಕಲಾತ್ಮಕತೆ, ತೀವ್ರತೆ ಈ ಸಿನಿಮಾದಲ್ಲಿ ಇಲ್ಲ. ಮೊದಲೆರಡು ಸಿನಿಮಾಗಳಲ್ಲಿ ಪಾತಕ ಲೋಕದೊಳಗಿನ ತಲ್ಲಣಗಳಿಗೆ ಮಾನವೀಯ ಸ್ಪರ್ಶವನ್ನು ನೀಡಲಾಗಿದೆ. ಆದರೆ ಇಲ್ಲಿ ಗಂಡಸರ ತೋಳ್ಬಲ ಪ್ರದರ್ಶನ ರಾರಾಜಿಸಿದೆ.

ಇದನ್ನೂ ಓದಿರಿ: ‘ಕಾಂತಾರ’ ದೈವಕ್ಕೂ ‘ಕರ್ಣನ್‌’ ದೈವಕ್ಕೂ ಎಷ್ಟೊಂದು ವ್ಯತ್ಯಾಸ!

‘ಎ’ ಸರ್ಟಿಫಿಕೇಟ್‌ ಪಡೆದಿರುವ ಈ ಸಿನಿಮಾದಲ್ಲಿ ರೌಡಿಗಳ ಭಾಷೆಯನ್ನು ಹಸಿಹಸಿಯಾಗಿ ಬಳಸಲಾಗಿದೆ. ಗತಕಾಲದ ಕತೆಯ ನೆಪದಲ್ಲಿ ಲಿಂಗ ಸೂಕ್ಷ್ಮತೆಗಳನ್ನು ಅಣಕಿಸುವ ಸಂಭಾಷಣೆಗಳು ಸೇರಿಕೊಂಡಿವೆ. ಮೊದಲಾರ್ಧ ಜಯರಾಜ್ ಗ್ಯಾಂಗ್‌ನ ಪಾತಕಗಳ ವೈಭವೀಕರಣಕ್ಕೆ ಮೀಸಲಾದರೆ, ದ್ವಿತೀಯಾರ್ಧ ರೌಡಿಸಂ ಜಗತ್ತಿನ ಒಳ ಹೂರಣವನ್ನು ತೆರೆದಿಡುತ್ತದೆ.

ಭೂಗತ ಜಗತ್ತಿಗೆ ಇದ್ದವರಿಗೆ ಬಡವರ ಪರ ಕಾಳಜಿಯೂ ಇತ್ತು ಎಂದು ತೋರಿಸಲು ಯತ್ನಿಸಿರುವುದು ಅಸ್ವೀಕೃತ ಸಂಗತಿ. ಜಯರಾಜ್‌ ಥರದ ರೌಡಿಗಳು ಬಡವರಿಗೆ ತೊಂದರೆ ಕೊಡುತ್ತಿರಲಿಲ್ಲ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ. ಇಂತಹ ನಿರೂಪಣೆಯು ರೌಡಿಸಂಗೆ ಜನಪ್ರಿಯತೆಯನ್ನು ತಂದುಕೊಡುವ ಅಪಾಯವಿರುತ್ತದೆ. ಹೀಗಾಗಿ ನಾಯಕ ಪಾತ್ರವನ್ನು ವೈಭವೀಕರಿಸುವ ಭರದಲ್ಲಿ ಯಾವ ವಿಚಾರಕ್ಕೆ ಒತ್ತು ನೀಡುತ್ತಿದ್ದೇವೆ ಎಂಬ ಎಚ್ಚರಿಕೆಯೂ ಇರಬೇಕಾಗುತ್ತದೆ.

‘ಹಿಂದಿ ಹೇರಿಕೆ’ಯನ್ನು ಪ್ರಶ್ನಿಸುವ ಈ ಕಾಲದ ತುರ್ತಿನ ಭಾಗವಾಗಿ ದೃಶ್ಯವೊಂದನ್ನು ಸಿನಿಮಾದಲ್ಲಿ ಸೇರಿಸಲಾಗಿದೆ. ಹಿಂದಿಯನ್ನು ಗೌರವಿಸುತ್ತೇವೆ, ಆದರೆ ಕನ್ನಡ ನಮ್ಮ ಹೃದಯದ ಭಾಷೆ. ಹಿಂದಿ ಹೇರಿಕೆಯನ್ನು ಸಹಿಸುವುದಿಲ್ಲ ಎಂಬ ಸಂದೇಶವನ್ನು ಪರೋಕ್ಷವಾಗಿ ಹೆಡ್‌ಬುಷ್ ಚಿತ್ರ ತಂಡ ನೀಡಿದೆ.

ಜಯರಾಜ್‌ ಹೆಂಡತಿಯ ಪಾತ್ರದಲ್ಲಿ ಪಾಯಲ್‌ ರಜಪೂತ್ ಅಭಿನಯಿಸಿದ್ದಾರೆ. ಆದರೆ ಈ ಪಾತ್ರದ ಮಹತ್ವ ಅರ್ಥವಾಗುವುದಿಲ್ಲ. ಹೀಗೆ ಬಂದು, ಹಾಗೆ ಹೋದದಷ್ಟೇ ಎನಿಸುತ್ತದೆ.

ದಾದಾಗಿರಿಯ ದಿನಗಳನ್ನು ದೃಶ್ಯರೂಪದಲ್ಲಿ ನೋಡಬೇಕೆಂದು ಬಯಸುವವರಿಗೆ, ಡಾಲಿ ಧನಂಜಯ ಅವರ ಅಭಿನಯವನ್ನು ಕಣ್ತುಂಬಿಕೊಳ್ಳಲು ಬಯಸುವವರಿಗೆ ಹೆಡ್‌ ಬುಷ್‌ ಇಷ್ಟವಾಗಬಹುದು.

ದೇವರಾಜ್ (ದೇವರಾಜ ಅರಸು), ಪ್ರಕಾಶ್ ಬೆಳವಾಡಿ (ಗರುಡಾಚಾರ್‌), ಧನಂಜಯ (ಜಯರಾಜ್‌), ಶ್ರುತಿ ಹರಿಹರನ್‌ (ಅರಸು ಅವರ ಮಗಳಾದ ನಾಗರತ್ನ), ಲೂಸ್‌ ಮಾದ ಯೋಗಿ (ಗಂಗಾ), ವಶಿಷ್ಟ ಸಿಂಹ (ಕೊಲ್ವಾಲ್ ರಾಮಚಂದ್ರ), ಬಾಲನಾಗೇಂದ್ರ (ಸಾಮ್ಸನ್‌), ರಘು ಮುಖರ್ಜಿ (ನಟರಾಜ್‌), ಪಯಲ್ ರಜಪೂತ್‌ (ಜಯರಾಜ್ ಹೆಂಡತಿ) ಅವರು ಅಭಿನಯದಲ್ಲಿ ಮಿಂಚಿದ್ದಾರೆ. ಬಾದಲ್ ನಂಜುಂಡಸ್ವಾಮಿಯವರ ಕಲಾ ನಿರ್ದೇಶನ ಆ ಕಾಲವನ್ನು ಮರುಸೃಷ್ಟಿಸುವಲ್ಲಿ ಹೆಚ್ಚಿನ ಪಾತ್ರವನ್ನು ವಹಿಸಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...