Homeಮುಖಪುಟಹಿಜಾಬ್: ನ್ಯಾಯ ವ್ಯವಸ್ಥೆಯ ಬಗ್ಗೆ ವಿಶ್ವಾಸವಿದೆ, ಆದರೆ ಸರಕಾರ, ಶಿಕ್ಷಣ ಸಂಸ್ಥೆಗಳ ಮೇಲಿಲ್ಲ - ರಾಜೇಂದ್ರ...

ಹಿಜಾಬ್: ನ್ಯಾಯ ವ್ಯವಸ್ಥೆಯ ಬಗ್ಗೆ ವಿಶ್ವಾಸವಿದೆ, ಆದರೆ ಸರಕಾರ, ಶಿಕ್ಷಣ ಸಂಸ್ಥೆಗಳ ಮೇಲಿಲ್ಲ – ರಾಜೇಂದ್ರ ಚೆನ್ನಿ

ಸರಕಾರವನ್ನು ಓಲೈಸಲು ಅನೇಕ ಜಿಲ್ಲಾಧಿಕಾರಿಗಳು ಉದ್ದೇಶಪೂರ್ವಕವಾಗಿ ನ್ಯಾಯಾಯಲದ ಮಧ್ಯಂತರ ಆದೇಶದ ವಿರುದ್ಧ ನಡೆದುಕೊಂಡಿದ್ದಾರೆ.

- Advertisement -
- Advertisement -

ನಾನು ಒಂದು ದೃಶ್ಯ ಮತ್ತು ಒಂದು ವರದಿಯ ಬಗ್ಗೆ ಬರೆಯುತ್ತಿದ್ದೇನೆ. ನ್ಯಾಯಾಲಯಗಳಿಗೆ ಸಂಬಂಧಪಟ್ಟ ಯಾವುದೇ ವಿದ್ಯಮಾನದ ಬಗ್ಗೆ, ವಿಶೇಷವಾಗಿ ನ್ಯಾಯಾಲಯದ ತೀರ್ಪುಗಳ ಬಗ್ಗೆ ಬರೆಯಬಾರದೆಂದು ಹೇಳಲಾಗುತ್ತದೆ. ಸಂವಿಧಾನವು ಈ ಬಗ್ಗೆ ಖಚಿತವಾಗಿ ಏನು ಹೇಳಿದೆ ಎಂದು ನನಗೆ ಗೊತ್ತಿಲ್ಲ, ಆದ್ದರಿಂದ ಏನೇ ಇರಲಿ, ನಾನು ವಿಮರ್ಶೆಯ ಬದಲಾಗಿ ಒಬ್ಬ ನಾಗರೀಕನಾಗಿ ನನಗೆ ಅನ್ನಿಸಿದ ಗೊಂದಲಗಳ ಬಗ್ಗೆ ಬರೆಯುತ್ತಿದ್ದೇನೆ.

ಮೊದಲನೆಯದಾಗಿ ಒಂದು ದೃಶ್ಯ ಚಿಕ್ಕಮಗಳೂರಿನ ಪ್ರಥಮದರ್ಜೆ ಕಾಲೇಜಿನ ಗೇಟಿನ ಬಳಿ ತಗೆದ ವೀಡಿಯೋ, ಇದನ್ನು ನಾನು ಸಾಮಾಜಿಕ ತಾಣಗಳಲ್ಲಿ ನೋಡಿದೆ. ಹಿಜಾಬ್ ಹಾಕಿದ ಕೆಲವು ವಿದ್ಯಾರ್ಥಿನಿಯರು ಅವರಿಗೆ ಆಂತರಿಕ ಪರೀಕ್ಷೆ ಬರೆಯಲು ಅಥವಾ ಪ್ರಾಯೋಗಿಕ ಪರೀಕ್ಷೆಗೆ ಹಾಜರಾಗಲು ಒಳಗೆ ಬಿಟ್ಟಿಲ್ಲವೆಂದು ಅಳುತ್ತಿರುವ ದೃಶ್ಯ. ಪ್ರಾಚಾರ್ಯರು ಉಚ್ಚನ್ಯಾಯಾಲಯದ ಮಧ್ಯಂತರ ಆಜ್ಞೆ ಇದೆ ನೀವು ಜಿಲ್ಲಾಧಿಕಾರಿಗಳನ್ನು ಕೇಳಿ ಎಂದರಂತೆ. ಅವರೂ ಅದೇ ಉತ್ತರವನ್ನು ಕೊಟ್ಟರಂತೆ. ನಮಗೆ ಬೇರೆ ಕೊಠಡಿಯಲ್ಲಿ ಕುಳಿತು ಬರೆಯಲು ಅವಕಾಶ ಕೊಡಬೇಕಿತ್ತು ಎಂದು ಈ ವಿದ್ಯಾರ್ಥಿನಿಯರು ಅಳುತ್ತಿದ್ದರು. ಮನುಷ್ಯರಾದ ಯಾರಿಗಾದರೂ ಕರುಳು ಮಿಡಿಯುವಂಥ ದೃಶ್ಯವಿದಾಗಿತ್ತು. ತಪ್ಪು ಒಪ್ಪು ಚರ್ಚಿಸೋಣ, ಆದರೆ ಮಕ್ಕಳೂ ಹೀಗೆ ಅಸಹಾಯಕರಾಗಿ ಅಳುವುದು ಯಾವ ಸಮಾಜಕ್ಕೂ ಕಳಂಕವೆ.

ಈಗ ಒಂದು ವರದಿ. ಕರ್ನಾಟಕದ ಉಚ್ಛನ್ಯಾಯಾಲಯವು ವಯಸ್ಕಳಲ್ಲದ ಹುಡುಗಿಯೊಬ್ಬಳನ್ನು ರೇಪ್ ಮಾಡಿದ ಆರೋಪವಿರುವ ವಿದ್ಯಾರ್ಥಿಯೊಬ್ಬನಿಗೆ ಪರೀಕ್ಷೆ ಬರೆಯಲು ಅವಕಾಶ ಕೊಡಬೇಕೆಂದು ಆದೇಶ ನೀಡಿದೆ. (ಇಂದು 11/03/22 ಪತ್ರಿಕೆಗಳಲ್ಲಿ ವರದಿಯಾಗಿದೆ). ವರದಿಯ ಪ್ರಕಾರ ಮಾನ್ಯ ನ್ಯಾಯಮೂರ್ತಿಯವರು, “ಆರೋಪವಿದ್ದರೂ ವಿಚಾರಣೆ ನಡೆಯುತ್ತಿರುವ ಕಾರಣಕ್ಕಾಗಿ ವಿದ್ಯಾರ್ಥಿಯು ಪರೀಕ್ಷೆ ಬರೆಯುವುದನ್ನು ನಿರ್ಬಂಧಿಸಲಾಗದು” ಎಂದು ಹೇಳಿದ್ದಾರೆ. ಇದು ನ್ಯಾಯದ ದೃಷ್ಟಿಯಿಂದ ಸರಿಯೆಂದು ತೋರುತ್ತದೆ. ಅಲ್ಲದೆ ಈಗ ಪರೀಕ್ಷೆಗೆ ನಿರ್ಬಂಧಿಸಿದರೆ ಮುಂದೆ ಒಂದು ವೇಳೆ ಆರೋಪಿಯು ಅಪರಾಧಿಯಲ್ಲ ಎಂದು ಸಾಬೀತಾದರೆ ಅದು ಅವನಿಗೆ ಅನ್ಯಾಯವಾಗುತ್ತದೆ ಎನ್ನುವ ಸರಿಯಾದ ತರ್ಕವೂ ಇಲ್ಲಿದೆ.

ಹಾಗಿದ್ದರೆ ಹಿಜಾಬ್ ಪ್ರಕರಣದಲ್ಲಿ ಯಾರೂ ಆರೋಪಿಗಳಿಲ್ಲ. ಈ ವಿದ್ಯಾರ್ಥಿನಿಯರು ಆರೋಪಿಗಳಲ್ಲ. ಉಚ್ಛನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕರಣವು ಧಾರ್ಮಿಕ ಸಂಕೇತಗಳು ಹಾಗೂ ಶಿಕ್ಷಣ ಸಂಸ್ಥೆಗಳ ಬಗ್ಗೆ ಅಪರಾಧದ ಬಗ್ಗೆ ಅಲ್ಲ. ನ್ಯಾಯಾಲಯದ ಮಧ್ಯಂತರ ಆದೇಶವು ಪರಿಸ್ಥಿತಿಯನ್ನು ನಿಭಾಯಿಸಲು ಅವಶ್ಯಕವಾಗಿರಬಹುದು. ಆದರೆ ಪದೇ ಪದೇ ಸ್ಪಷ್ಟೀಕರಣದ ನಂತರವೂ ಶಿಕ್ಷಣ ಸಂಸ್ಥೆಗಳು ತಪ್ಪಾಗಿ, ಕ್ರೂರವಾಗಿ ವರ್ತಿಸಿವೆ. ಘನತೆವೆತ್ತ ನ್ಯಾಯಾಲಯವು ಮಾನವೀಯವಾದ ಉದ್ದೇಶದ ವಿರುದ್ಧ ನಡೆದುಕೊಂಡಿವೆ. ಸರಕಾರವನ್ನು ಓಲೈಸಲು ಅನೇಕ ಜಿಲ್ಲಾಧಿಕಾರಿಗಳು ಉದ್ದೇಶಪೂರ್ವಕವಾಗಿ ನ್ಯಾಯಾಯಲದ ಮಧ್ಯಂತರ ಆದೇಶದ ವಿರುದ್ಧ ನಡೆದುಕೊಂಡಿದ್ದಾರೆ. ಘನವಾದ ಸಂಪ್ರದಾಯವಿರುವ ಉಚ್ಛನ್ಯಾಯಾಲಯದ ಆದೇಶದ Spirit ಅನ್ನು ವಿಕೃತಿಗೊಳಿಸಿದ್ದಾರೆ.

ಈಗ ಈ ದೃಶ್ಯ ಈ ವರದಿಯನ್ನು ಒಟ್ಟಿಗೆ ನೋಡೋಣ. ಹಿಜಾಬ್ ಧರಿಸಿದ ವಿದ್ಯಾರ್ಥಿಗಳು ಆರೋಪಿಗಳಲ್ಲ. ಅವರಿಗೆ ಆಂತರಿಕ ಪರೀಕ್ಷೆ ಅಥವಾ ಪ್ರಾಯೋಗಿಕ ಪರೀಕ್ಷೆಗೆ ನಿರ್ಬಂಧಿಸಿದರೆ ಅದು natural justice ಹೇಗೆ ಆಗುತ್ತದೆ? ಈಗ ಉಚ್ಛನ್ಯಾಯಾಲಯವು ಕಾಯ್ದಿರಿಸಿದ ತೀರ್ಪನ್ನು ಇನ್ನು ಮುಂದೆ ಪ್ರಕಟಿಸಿದಾಗ ಒಂದು ವೇಳೆ ಆ ತೀರ್ಪು ಹಿಜಾಬ್ ಪರವಾಗಿ ಬಂದರೆ, ಅಥವಾ ಪರೀಕ್ಷೆಗೆ ನಿರ್ಬಂಧವಿರಬಾರದೆಂದು ಬಂದರೆ? ಕೊನೇಪಕ್ಷ ಕಾಯ್ದು ನೋಡೋಣ, ನಿಮಗೆ ಅವಕಾಶ ಸಿಕ್ಕಬಹುದು ಎಂದು ಹೇಳಬಹುದಾಗಿತ್ತು. ಘನತೆವೆತ್ತ ನ್ಯಾಯಾಧೀಶರಿಗಿಂತ ತಾವು ದೊಡ್ಡವರು ಎಂದು ತಿಳಿದಿರುವ ಮಂತ್ರಿಗಳು ‘ಇಲ್ಲವೇ ಇಲ್ಲ, ಇನ್ನೊಂದು ಅವಕಾಶವೇ ಇಲ್ಲ’ ಎಂದು ಯಾವ ಆಧಾರದ ಮೇಲೆ ಹೇಳಿದ್ದಾರೆ? ತಾವೇ ತೀರ್ಪು ಬರೆದುಬಿಟ್ಟಿದ್ದೇನೆ ಎಂದುಕೊಂಡಿದ್ದಾರೆಯೆ? ಇರಲಿ, ಈಗ ಇದೇ ನ್ಯಾಯಾಲಯವು ಆರೋಪಿಗೆ ಕೂಡ ಪರೀಕ್ಷೆಗೆ ಅವಕಾಶ ಮಾಡಿಕೊಡಬೇಕು ಎಂದು ಆದೇಶಿಸುವಾಗ ಹಿಜಾಬ್ ಧರಿಸಿದ ವಿರ್ದ್ಯಾರ್ಥಿನಿಯರಿಗೆ ಪ್ರತ್ಯೇಕ ಕೊಠಡಿಯಲ್ಲಿ ಅವಕಾಶ ಮಾಡಿಕೊಡಿ ಅಥವಾ ಪರ್ಯಾಯ ಪರೀಕ್ಷೆಗೆ ಅವಕಾಶವಿರಲಿ ಎಂದು ಅದು ಹೇಳುವುದು ಸಹಜ ನ್ಯಾಯವಾಗಬಹುದು. ಇದು ಕಾನೂನು ತಜ್ಞರಲ್ಲದವರಿಗೆ ಸರಿ ಎನ್ನಿಸುತ್ತದೆ. ಇದು ನನಗೆ ಅನ್ನಿಸಿರುವ ಗೊಂದಲ. ನನಗೆ ನ್ಯಾಯಾಲಯ ನ್ಯಾಯ ವ್ಯವಸ್ಥೆಯ ಬಗ್ಗೆ ವಿಶ್ವಾಸವಿದೆ. ಹಾಗೂ ಗೌರವ ಇದೆ. ಆದರೆ ಸರಕಾರ, ಶಿಕ್ಷಣ ಸಂಸ್ಥೆಗಳ ಬಗ್ಗೆ ಇವೆರಡೂ ಇಲ್ಲ.

  • ಪ್ರೊ. ರಾಜೇಂದ್ರ ಚೆನ್ನಿ
ಪ್ರೊ.ರಾಜೇಂದ್ರ ಚೆನ್ನಿ

ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕರು. ಕಥೆಗಾರರು, ವಿಮರ್ಶಕರು ಮತ್ತು ಸಂಸ್ಕೃತಿ ಚಿಂತಕರು. ಪ್ರಜಾಪ್ರಭುತ್ವದ ಮೌಲ್ಯಗಳ ಉಳಿವಿಗಾಗಿ ನಡೆಯುತ್ತಿರುವ ದಕ್ಷಿಣಾಯನ ಅಭಿಯಾನದ ಸಂಚಾಲಕರು.


ಇದನ್ನೂ ಓದಿ; ಕರ್ನಾಟಕದಲ್ಲಿ ಹಿಜಾಬ್ ಧರಿಸಿದ್ದಕ್ಕಾಗಿ ತೊಂದರೆಗೊಳಗಾದ ವಿದ್ಯಾರ್ಥಿನಿಯರಿಗೆ ಸಲಹೆಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. Sir, no loss if these girls would go to school/college without hijab for 2-3 hours. Nor was an obstacle to their exams. Nor an
    Infidelity to their religion. Deliberately went to college with hijab knowingly in violation of interim order in operation that attracts contempt proceedings. We must see humanity in following Court VERDICT and it’s execution. Coming to the point of humanity your view is correct. But…

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...