Homeಕರ್ನಾಟಕಹಳತು-ವಿವೇಕ: ರೈತರ ಸಾಲ ರದ್ದು ಹೇಗಾಗಬೇಕು? – ಪ್ರೊ. ಎಂಡಿಎನ್

ಹಳತು-ವಿವೇಕ: ರೈತರ ಸಾಲ ರದ್ದು ಹೇಗಾಗಬೇಕು? – ಪ್ರೊ. ಎಂಡಿಎನ್

- Advertisement -
- Advertisement -

ಸಂಪನ್ಮೂಲಗಳನ್ನು ಮಾನವ ಶಕ್ತಿಯ ಮೂಲಕ ಸಿದ್ಧವಸ್ತುಗಳನ್ನಾಗಿ ಪರಿವರ್ತಿಸುವುದೇ ಬಂಡವಾಳದ ಉತ್ಪಾದನೆ. ಈ ದೃಷ್ಟಿಯಲ್ಲಿ ನಮ್ಮ ದೇಶದ ಒಟ್ಟು ಜನಸಂಖ್ಯೆಯ ಶೇಕಡ 75 ಭಾಗ ಇರುವ ರೈತರು ಮತ್ತು ರೈತ ಕೂಲಿಕಾರರೇ ನಮ್ಮ ದೇಶದ ಎಲ್ಲಾ ಬಂಡವಾಳವನ್ನು ಸೃಷ್ಟಿಸುತ್ತಿರುವವರು ಹಾಗೂ ಹೆಚ್ಚಿಸುತ್ತಿರುವವರು

ಹೀಗಿದ್ದರೂ ಇವರೆಲ್ಲಾ ನಿರಂತರ ಸಾಲಗಾರರಾಗಿದ್ದಾರೆ. ಇದಕ್ಕೆ ಕಾರಣ ಏನು? ಇಂತಹ ಸಾಲದಿಂದ ಇವರನ್ನು ಹೇಗೆ ಮುಕ್ತಿಗೊಳಿಸಬೇಕು? ಇವರಿಗೆಲ್ಲಾ ಸಮಾನ ಸ್ಥಾನಮಾನ, ಸಮಾನ ಗೌರವ ಮತ್ತು ಸಮಾಜ ಜೀವನ ವ್ಯವಸ್ಥೆಯನ್ನು ಹೇಗೆ ಸ್ಥಾಪಿಸಬೇಕು? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದೇ ರೈತ ಚಳವಳಿಯ ವಿಜಾರ ಮತ್ತು ಉದ್ದೇಶ.

ಇದನ್ನೂ ಓದಿ: ರೈತ ಹೋರಾಟ 80ನೇ ದಿನಕ್ಕೆ: ಪ್ರೊ ಎಂ.ಡಿ ನಂಜುಂಡಸ್ವಾಮಿಯವರನ್ನು ನೆನೆದ ರೈತ ಒಕ್ಕೂಟ

ಇವುಗಳಿಗೆ ಕರ್ನಾಟಕ ರೈತರು ಉತ್ತರ ಕಂಡುಕೊಂಡಿದ್ದಾರೆ. ತಮ್ಮ ಸಾಲಕ್ಕೆ ಬೆಲೆ ಮೋಸ ಕಾರಣ, ಬೆಲೆ ಸಮಾನತೆಯೇ ಇಂತ ಸಾಲಗಳಿಂದ ಮುಕ್ತಿ ಪಡೆಯಲು ಪರಿಹಾರ, ಬೆಲೆ ಸಮಾನತೆಯ ಕಾನೂನು ರಚನೆಗಾಗಿ ಹೋರಾಡಿ ಜಯಗಳಿಸಿದರೆ ಮಾತ್ರ ಸಮಾನ ಜೀವನ ವ್ಯವಸ್ಥೆಯ ಸ್ಥಾಪನೆ ಸಾಧ್ಯ. ಇದನ್ನೆಲ್ಲಾ ಅಹಿಂಸಾತ್ಮಕ ಸತ್ಯಾಗ್ರಹದಿಂದ ಸ್ಥಾಪಿಸಲು ಪ್ರಯತ್ನಿಸಬೇಕು. ಅಹಿಂಸಾತ್ಮಕ ಸತ್ಯಾಗ್ರಹಕ್ಕೆ ಮಣಿಯದ ಕಳ್ಳ ಸರ್ಕಾರಗಳು ಎದುರಾದರೆ ರೈತರೇ ರಾಜಕೀಯ ಶಕ್ತಿಯಾಗಿ ತಮ್ಮ ಓಟಿನ ಶಕ್ತಿಯಿಂದ ರೈತರದ್ದೇ ಆದ ಸರ್ಕಾರ ಸ್ಥಾಪಿಸಿಕೊಂಡು ರೈತರಿಗೆ ಸಮಾನ ಗೌರವ ಸ್ಥಾನವನ್ನು ದಕ್ಕಿಸಿಕೊಳ್ಳಬೇಕು. ಇದು ಕರ್ನಾಟಕದ ರೈತ ಚಳುವಳಿಯ ಸ್ವಾಭಿಮಾನದ ಹೋರಾಟದ ವಿಚಾರ ಮತ್ತು ಕಾರ್ಯಕ್ರಮ.

ಕರ್ನಾಟಕದ ರೈತರ ಚಳವಳಿ ಮತ್ತು ಕಾರ್ಯಕ್ರಮ ಈ ದಿಕ್ಕಿನಲ್ಲಿ ನಡೆದಿದ್ದರೆ ನೆರೆ ರಾಜ್ಯವಾದ ಮಹಾರಾಷ್ಟ್ರದ ರೈತರ ಚಳವಳಿ ದಿಕ್ಕೆಟ್ಟಿದೆ. ದೇಶದ ಸಂಪತ್ತನ್ನು ದಿನೇ ದಿನೇ ಹೆಚ್ಚಿಸುತ್ತಿರುವ ನಾವು ರೈತರು ಸಾಲಗಾರರೇ ಅಲ್ಲ ಎಂದು ಕರ್ನಾಟಕದ ರೈತರು ಘೋಷಿಸಿಕೊಂಡಿದ್ದರೆ ಮಹಾರಾಷ್ಟ್ರದ ರೈತರು ಈ ಮುಖ್ಯ ವಿಷಯವನ್ನೇ ಮರೆತು ನಾವು ಪಾಪರಾಗಿದ್ದೇವೆ, ದಿವಾಳಿಯಾಗಿದ್ದೇವೆ ಎಂದು ಘೋಷಿಸಬೇಕೆಂದು ಮಹಾರಾಷ್ಟ್ರದ ನ್ಯಾಯಾಲಯಗಳಿಗೆ ಅರ್ಜಿ ಸಲ್ಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಹಳತು-ವಿವೇಕ: ಸಮಕಾಲೀನತೆಯಲ್ಲಿ ಕುವೆಂಪು-ಕ್ರಿಯೆ, ಪ್ರತಿಕ್ರಿಯೆ – ದಿ. ಎಂ. ಡಿ. ನಂಜುಂಡಸ್ವಾಮಿ

ಮಹಾರಾಷ್ಟ್ರದ ನ್ಯಾಯಾಲಯಗಳೇನಾದರೂ ಅಲ್ಲಿನ ರೈತರ ವಾದವನ್ನು ಒಪ್ಪಿ ಅವರೆಲ್ಲ ದಿವಾಳಿಗಳೆಂದು ಘೋಷಿಸಿದರೆ ಆಗುವ ಪರಿಣಾಮಗಳನ್ನು ಅವರೆಲ್ಲ ಯೋಚಿಸಿಲ್ಲ ಎಂದು ಕಾಣುತ್ತದೆ. ಅವರೆಲ್ಲರೂ ದಿವಾಳಿಗಳೆಂದು ನ್ಯಾಯಾಲಯ ಘೋಷಿಸಿದರೆ ಅವರೆಲ್ಲ ಇನ್ನು ಮುಂದೆ ಯಾವುದೇ ಹಣಕಾಸಿನ ಚಟುವಟಿಕೆಯಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಅದಕ್ಕಿಂತ ಹೆಚ್ಚಾಗಿ ಯಾವುದೇ ಚುನಾವಣೆಯಲ್ಲಿ ಅಭ್ಯರ್ಥಿಗಳಾಗುವ ಹಾಗೂ ಮತದಾನದ ಹಕ್ಕುಗಳನ್ನೆಲ್ಲ ಕಳೆದುಕೊಳ್ಳುತ್ತಾರೆ. ಭಾರತದ ರೈತರಿಗಿರುವ ಏಕೈಕ ಅಮೂರ್ತ ಶಕ್ತಿಯಾದ ಮತ ಶಕ್ತಿಯನ್ನೂ ಕಳೆದುಕೊಂಡು ರೈತ ಶಾಶ್ವತ ಜೀತಗಾರನಾಗುತ್ತಾನೆ. ಈ ಮೂಲಕ ಸಾಲಗಳಿಂದ ವಿಮುಕ್ತನಾಗುವುದಿರಲಿ, ಸಾಲದ ಶಿಶುವಾಗಿಯೇ ಉಳಿದು ಬಿದಡುತ್ತಾನೆ.

ಮಹಾರಾಷ್ಟ್ರದ ರೈತರು ಇಷ್ಟು ದಡ್ಡರೇ ಎಂದು ಯಾರಾದರೂ ಹುಬ್ಬೇರಿಸಬಹುದು. ಆದರೆ ಅವರು ದಡ್ಡರಲ್ಲ ಎನ್ನುವುದು ನಿಜವಾದರೂ ಅವರ ಚಳವಳಿಯ ನಾಯಕತ್ವವನ್ನು ಕೆಲವು ಬೇಜವಾಬ್ದಾರಿ ಹುಂಬರು ವಹಿಸಿಕೊಂಡಿದ್ದಾರೆ ಎನ್ನುವುದನ್ನು ಇನ್ನೂ ಗುರುತಿಸಿಕೊಂಡಿಲ್ಲದ ದಡ್ಡರು ಎಂದೇ ಹೇಳಬೇಕಾಗುತ್ತದೆ. ಈ ಹುಂಬ ನಾಯಕರು ಇದೊಂದು ಚಳವಳಿಯ ತಂತ್ರ! ಸಾಲ ಪಾವತಿಯನ್ನು ಅನಿರ್ದಿಷ್ಟ ಕಾಲ ತಪ್ಪಿಸಿಕೊಳ್ಳುವ ತಂತ್ರ ಎನ್ನುವ ಜಾಣ ವಾದವನ್ನು ಮಹಾರಾಷ್ಟ್ರದ ರೈತರ ಮುಂದಿಡಬಹುದು. ಆದರೆ, ಇಂತಹ ತಂತ್ರಗಳ ತಳಹದಿಯ ಆಧಾರದ ಮೇಲೆ ರೈತ ಚಳವಳಿ ರೂಪಿತವಾಗಬೇಕೋ ಅಥವಾ ಸತ್ಯದ ಆಧಾರದ ಮೇಲೆ ಹಾಗೂ ಸತ್ಯಾಗ್ರಹದ ಆಧಾರದ ಮೇಲೆ ರೈತ ಚಳವಳಿ ರೂಪಿತವಾಗಬೇಕೋ ಎನ್ನುವುದು ಅತಿ ಮುಖ್ಯವಾದ ಅಂಶ.

ಇದನ್ನೂ ಓದಿ: ಕೃಷಿ ಕಾಯ್ದೆಗಳ ಪರ ಪ್ರಚಾರ: ಒಕ್ಕೂಟ ಸರ್ಕಾರ ಖರ್ಚು ಮಾಡಿರುವ ಹಣ ಎಷ್ಟು ಗೊತ್ತೇ?

ಏಕೆಂದರೆ, ಸಮಾನತೆಯನ್ನು ತಂತ್ರಗಳ ಮೂಲಕ ದೊರಕಿಸಿಕೊಳ್ಳಲು ಸಾಧ್ಯವಿಲ್ಲ. ಕಾರಣ, ಅಸಮಾನತೆಯನ್ನು ಮುಂದುವರಿಸಬೇಕೆನ್ನುವವರ ಬಳಿ ತಂತ್ರಗಳಿಗೇನೂ ಅಭಾವವಿರುವುದಿಲ್ಲ. ಹಾಗೆಯೇ ಸಮಾನತೆಯನ್ನು ಯಾರೂ ಚಿನ್ನದ ತಟ್ಟೆಯಲ್ಲಿ ಅರ್ಪಿಸುವುದಿಲ್ಲ. ಅದನ್ನು ಹೋರಾಟದ ಮೂಲಕವೇ ದಕ್ಕಿಸಿಕೊಳ್ಳಬೇಕು. ಇದಕ್ಕೆ ತಾರ್ಕಿಕ ಹೋರಾಟದ ಮಾರ್ಗವೊಂದೇ ಇರುವ ದಾರಿ. ಸತ್ಯಾಗ್ರಹವೇ ಈ ಹೋರಾಟದ ಮಾರ್ಗ. ಇದೂ ಸೋತರೆ ಇರುವ ಇತರ ಏಕೈಕ ಮಾರ್ಗ ಅಧಿಕಾರಗ್ರಹಣ ಒಂದೇ.

ಮಹಾರಾಷ್ಟ್ರದ ರೈತರ ದಿಕ್ಕೆಟ್ಟಿರುವ “ಸಾಲ ಮುಕ್ತಿ” ಕಾರ್ಯಕ್ರಮ ತಾತ್ಕಾಲಿಕ ಎಂದೇ ಭಾವಿಸಬಹುದೇನೋ, ಏಕೆಂದರೆ ಈಗಾಗಲೇ ನ್ಯಾಯಾಲಯಗಳು ಅಲ್ಲಿ ಕಾರ್ಯೋನ್ಮುಖವಾಗುವ ಮೊದಲೇ ಪಟ್ಟಭದ್ರರ ಪ್ರತಿನಿಧಿಯಾದ ಮಹಾರಾಷ್ಟ್ರ ಸರ್ಕಾರ ಸಾಲ ವಸೂಲಿ ಪ್ರಾರಂಭಿಸಿದೆ. ಈ ಸರ್ಕಾರದ ಬತ್ತಳಿಕೆಯಲ್ಲಿ ಹಾಗೂ ಈಗಿರುವ ಬಂಡವಾಳಶಾಹಿ ಕಾನೂನಿನ ಬತ್ತಳಿಕೆಯಲ್ಲಿ ಬಹಳಷ್ಟು ಬಾಣಗಳಿವೆ.

ಇದನ್ನೂ ಓದಿ: ರೈತರಿಗೆ ಬೆಂಬಲ: ಹರಿಯಾಣದ ಪ್ರತಿ ಹಳ್ಳಿಗೂ ಹರಡಿದ ಮಹಾಪಂಚಾಯತ್ – ಗ್ರೌಂಡ್ ರಿಪೋರ್ಟ್

ಈ ಕಾರಣ ಮಹಾರಾಷ್ಟ ರೈತರ “ದಿವಾಳಿ ಚಳವಳಿಯೇ ದಿವಾಳಿಯಾಗಿ ಅವರ ಹೋರಾಟ ಸರಿಯಾದ ವಿಚಾರಕ್ಕೆ ಹಾಗೂ ದಿಕ್ಕಿಗೆ ತಿರುಗಿಯೇ ತಿರುಗುತ್ತದೆ” ಹೋರಾಟದ ವಿಚಾರ ಪೂರ್ಣ ಬದಲಾದಾಗ ಹೋರಾಟದ ಹುಂಬ ನಾಯಕತ್ವ ಕೂಡ ಪೂರ್ಣವಾಗಿ ಮಾಯವಾಗುತ್ತದೆ. ಇಂತಹ ಬದಲಾವಣೆಗಾಗಿ ದೇಶದ ಎಲ್ಲಾ ರೈತರೂ ಆಶಿಸೋಣ, ಶ್ರಮಿಸೋಣ.

31 ಅಕ್ಟೋಬರ್ 1988 ರಂದು ಪ್ರೊ. ಎಂ ಡಿ ನಂಜುಂಡಸ್ವಾಮಿ ಅವರು ಬರೆದ ಈ ಲೇಖನವನ್ನು ರವಿಕುಮಾರ್ ಬಾಗಿ ಅವರು ಸಂಪಾದಿಸಿರುವ “ಹಳ್ಳಿ ಕಣ್ಣಲ್ಲಿ ಇಂಡಿಯ- ಪ್ರೊ. ಎಂ ಡಿ ನಂಜುಂಡಸ್ವಾಮಿ ಬರಹಗಳು” ಎಂಬ ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ.

ಇದನ್ನೂ ಓದಿ: ಗಂಗೂಲಿಯ ಹೃದಯಾಘಾತಕ್ಕೆ ಮರುಗುವ ಮೋದಿಗೆ 60 ಹುತಾತ್ಮ ರೈತರು ಕಾಣುತ್ತಿಲ್ಲ: ಯೋಗೇಂದ್ರ ಯಾದವ್ ಕಿಡಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...