Homeಕರ್ನಾಟಕ"ಕಲ್ಯಾಣ ನಾಡಿನಲ್ಲಿ ಕೋಮುವಾದಕ್ಕೆ ಮಣೆ": ಹೈ.ಕ ಚುನಾವಣಾ ಫಲಿತಾಂಶ ವಿಶ್ಲೇಷಣೆ

“ಕಲ್ಯಾಣ ನಾಡಿನಲ್ಲಿ ಕೋಮುವಾದಕ್ಕೆ ಮಣೆ”: ಹೈ.ಕ ಚುನಾವಣಾ ಫಲಿತಾಂಶ ವಿಶ್ಲೇಷಣೆ

- Advertisement -
- Advertisement -

| ಭೀಮನಗೌಡ ಕಾಶಿರೆಡ್ಡಿ, ಕಂಪ್ಲಿ |

ಕೊನೆಗೂ ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಿವೆ. ಹೈದರಾಬಾದ್ ಕರ್ನಾಟಕದಲ್ಲಿ 5ಕ್ಕೆ 5 ಸ್ಥಾನಗಳನ್ನೂ ಬಿಜೆಪಿ ಗೆದ್ದುಕೊಂಡು ಈ ಭಾಗದಲ್ಲಿ ಹೊಸ ದಾಖಲೆ ಮಾಡಿದೆ. ಈ ಐದರಲ್ಲಿ ಎರಡು ಕ್ಷೇತ್ರಗಳು ( ಬಳ್ಳಾರಿ, ರಾಯಚೂರು) ಪರಿಶಿಷ್ಟ ಪಂಗಡದವರಿಗೆ ಮೀಸಲಾಗಿದ್ದು, ಒಂದು ( ಕಲ್ಬುರ್ಗಿ) ಕ್ಷೇತ್ರ ಪರಿಶಿಷ್ಟ ಜಾತಿಯವರಿಗೆ ಮೀಸಲಿದೆ.

ಎರಡು ಕ್ಷೇತ್ರಗಳು ಸಾಮಾನ್ಯ ವರ್ಗಕ್ಕೆ ಸೇರಿವೆ. 2009 ಹಾಗೂ2014ರಲ್ಲಿ ಕಾಂಗ್ರೆಸ್ 2 ಮತ್ತು ಬಿಜೆಪಿ 3 ಸ್ಥಾನಗಳಲ್ಲಿ ಜಯಗಳಿಸಿದ್ದವು. ಆದರೆ ಈ ಬಾರಿ ಮಾತ್ರ ಬಿಜೆಪಿ ಕ್ಲೀನ್ ಸ್ವೀಪ್ ಮಾಡಿಬಿಟ್ಟಿತು. ಮಲ್ಲಿಕಾರ್ಜುನ ಖರ್ಗೆ, ಈಶ್ವರ ಖಂಡ್ರೆ ಹಾಗೂ ವಿ.ಎಸ್.ಉಗ್ರಪ್ಪ ನಂತಹ ದಿಗ್ಗಜರು ಸೋಲಿನ ರುಚಿ ನೋಡಬೇಕಾಯಿತು.

ಖರ್ಗೆಗೆ ಮುಳುವಾದ ಪುತ್ರ ವ್ಯಾಮೋಹ:
ಪುರಾಣದಲ್ಲಿನ ಯಯಾತಿಯ ಕಥೆ ಖರ್ಗೆ ವಿಷಯದಲ್ಲಿ ತಿರುವು ಮುರುವಾಗಿದೆ. ಆ ಕತೆಯಲ್ಲಿ ತಂದೆ ಯಯಾತಿ ಮಗ ಪುರುವಿನ ಯೌವ್ವನವನ್ನು ಕಡವಾಗಿ ಪಡೆದರೆ, ಇಲ್ಲಿ ಪ್ರಿಯಾಂಕ ಖರ್ಗೆ ತಂದೆಯ ರಾಜಕೀಯ ಆಯುಷ್ಯವನ್ನೇ ಎರವಲು ಪಡೆದುಬಿಟ್ಟ. ಕಳೆದ ಸಿದ್ಧರಾಮಯ್ಯನವರ ಸರ್ಕಾರದಲ್ಲಿ ಮಗನನ್ನು ಮಂತ್ರಿಯನ್ನಾಗಿ ಮಾಡುವ ಹಟಕ್ಕೆ ಬಿದ್ದ ಖರ್ಗೆಯವರು ಕಮರುಲ್ ಇಸ್ಲಾಂ, ಬಾಬುರಾವ್ ಚಿಂಚನಸೂರ್ ಹಾಗು ಮಾಲಿಕಯ್ಯ ಗುತ್ತೇದಾರ್‌ರಂತಹ ಹಿರಿಯ ನಾಯಕರನ್ನು ಮೂಲೆಗುಂಪು ಮಾಡಿ ಅವರ ವಿರೋಧ ಕಟ್ಟಿಕೊಳ್ಳಬೇಕಾಯಿತು.

ಮಾಲಿಕಯ್ಯ, ಬಾಬುರಾವ್‌ರಂತಹ ಹಿಂದುಳಿದ ವರ್ಗಗಳ ಪ್ರಬಲ ನಾಯಕರು ಬಿಜೆಪಿ ಸೇರಿ ಖರ್ಗೆ ಸೋಲಿಸಲು ಟೊಂಕ ಕಟ್ಟಿ ನಿಂತುಬಿಟ್ಟರು. ಒಂದು ರೀತಿಯಲ್ಲಿ ಹೇಳುವುದಾದರೆ ಖರ್ಗೆಯವರನ್ನು ಸೋಲಿಸುವ ಸಂಚು ಒಂದು ವರ್ಷದ ಹಿಂದೆಯೇ ರೂಪುಗೊಂಡಿತ್ತು. ಅಸ್ಪೃಶ್ಯ ದಲಿತ ಸಮುದಾಯದ ಖರ್ಗೆ ವಿರುದ್ಧ, ಅಸ್ಪೃಶ್ಯೇತರ ದಲಿತರಾದ ಉಮೇಶ್ ಜಾಧವ್‌ರನ್ನು ಆಪರೇಷನ್ ಕಮಲದ ಮೂಲಕ ಸೆಳೆದು ಅಭ್ಯರ್ಥಿಯಾಗಿಸುವ ಮೂಲಕ ಬಿಜೆಪಿ ತನ್ನ ಜಾತಿ ರಾಜಕಾರಣದ ಅಸ್ತ್ರ ಪ್ರಯೋಗ ಮಾಡಿತು.

ಇದನ್ನು ಓದಿ: ಕಲಬುರ್ಗಿ: ‘ಈ ಸಲ ಖರ್ಗೆಯವರಿಗೆ ಟಫ್ ಇದೆ’

ಕಳೆದೆರೆಡು ಚುನಾವಣೆಯಲ್ಲಿ ಅದೇ ಲಂಬಾಣಿ ಸಮುದಾಯದ ರೇವುನಾಯಕ್ ಬೆಳಮಗಿ ವಿರುದ್ದ ಒಮ್ಮೆ14 ಸಾವಿರ, ಮತ್ತೊಮ್ಮೆ 75 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದ ಖರ್ಗೆಯವರು ಈ ಬಾರಿ ಜಾಧವ್ ಎದುರು 85 ಸಾವಿರ ಮತಗಳಿಂದ ಸೋಲುಣಬೇಕಾಯಿತು. ತಮ್ಮ ಮಗನಿಗಾಗಿ ನಮ್ಮ ಕೋಲಿ ಸಮಾಜಕ್ಕೆ ದೊರಕಿದ್ದ ಏಕೈಕ ಮಂತ್ರಿಸ್ಥಾನವನ್ನೂ ಕಿತ್ತುಕೊಂಡರೆಂದು ಖರ್ಗೆ ವಿರುದ್ಧ ಅಸಮಧಾನಗೊಂಡಿದ್ದ ಆ ಸಮಾಜದವರನ್ನು ಬಾಬುರಾವ್ ಚಿಂಚನಸೂರ್ ನೇತೃತ್ವದಲ್ಲಿ ವ್ಯವಸ್ಥಿತವಾಗಿ ಸಂಘಟಿಸಿದ್ದೇ ಸಂಘ ಪರಿವಾರ.

ಕಲ್ಬುರ್ಗಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸುಮಾರು 3 ಲಕ್ಷದಷ್ಟಿರುವ ಈ ಕೋಲಿ ಸಮಾಜವನ್ನು ಎಸ್‌ಟಿಗೆ ಸೇರ್ಪಡೆ ಮಾಡುವ ಹುಸಿ ಭರವಸೆ ನೀಡುವ ಮೂಲಕ ಸಾರಾಸಗಟಾಗಿ ಬಿಜೆಪಿಗೆ ಮತ ಚಲಾಯಿಸುವಂತೆ ನೋಡಿಕೊಳ್ಳಲಾಯಿತು. ಕೊನೆಗೆ 371j ಹಾಗು ತಾವು ಮಾಡಿದ ಅಭಿವೃದ್ಧಿ ಕಾರ್ಯಗಳು ಕೂಡಾ ಖರ್ಗೆಯವರ ಕೈ ಹಿಡಿಯಲಿಲ್ಲ.

ಖಂಡ್ರೆ

ಇನ್ನು ಬೀದರ್‌ನಲ್ಲಿ ಗೆಲ್ಲಲು ವಿಫುಲ ಅವಕಾಶಗಳಿದ್ದ ಈಶ್ವರ ಖಂಡ್ರೆಯವರು 1 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಸೋತಿದ್ದಾರೆ. ಈ ಕ್ಷೇತ್ರದಲ್ಲಿ ಅತಿ ಹೆಚ್ಚು ಮತಗಳನ್ನು ಹೊಂದಿದ ಲಿಂಗಾಯತ ಹಾಗೂ ದಲಿತರು ಬಿಜೆಪಿಗೆ ಹೆಚ್ಚು ಒಲವು ತೋರಿದ್ದಾರೆನ್ನಲಾಗಿದೆ. ಈ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಐವರು ಮೈತ್ರಿಕೂಟದ ಶಾಸಕರಿದ್ದು ಅದರಲ್ಲಿ ಮೂವರು ಸಚಿವರಾಗಿದ್ದಾರೆ. ಆದರೂ ಖಂಡ್ರೆ ಸೋತಿದ್ದು ವಿಪರ್ಯಾಸವೇ ಸರಿ.

ರಾಯಚೂರು-ಕೊಪ್ಪಳ : ಕಳೆದ ಬಾರಿ ಕೇವಲ ಒಂದೂವರೆ ಸಾವಿರ ಮತಗಳ ಅಂತರದಿಂದ ಗೆದ್ದಿದ್ದ ಬಿ.ವಿ.ನಾಯಕ ತನ್ನ ಸೋಮಾರಿತನದಿಂದಲೇ ಈ ಬಾರಿ ಸೋಲತ್ತಾರೆನ್ನುವುದು  ಹೆಚ್ಚು ಕಡಿಮೆ ಖಚಿತವಾಗಿತ್ತು. ಅದೇ ರೀತಿ ಆಗಿದೆ. ಇತ್ತ ಕೊಪ್ಪಳದಲ್ಲಿ ರಾಯರೆಡ್ಡಿ ಅಥವಾ ಬಸವನಗೌಡ ಬಾದರ್ಲಿ ಯವರಿಗೆ ಟಿಕೆಟ್ ಕೊಟ್ಟಿದ್ದರ ಕಾಂಗ್ರೆಸ್ ಗೆಲ್ಲಬಹುದಾಗಿತ್ತು. ಆದರೆ ಸಿದ್ಧರಾಮಯಯ್ಯನವರ ಹಠಮಾರಿತನದಿಂದಾಗಿ ಸ್ವಜಾತಿಯ ರಾಜಶೇಖರ ಹಿಟ್ನಾಳರು ಸ್ಪರ್ಧಿಸಿ ಕೇವಲ ಕುರುಬರ ಹಾಗೂ ಮುಸ್ಲಿಮರ ಮತ ಪಡೆದು ಸೋಲಬೇಕಾಯಿತು.

ಬಳ್ಳಾರಿ:  ಗಣಿನಾಡು ಬಳ್ಳಾರಿಯಲ್ಲಿ ಕಳೆದ ಆರು ತಿಂಗಳ ಹಿಂದಷ್ಟೇ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ನ ಉಗ್ರಪ್ಪ ಗೆದ್ದಿದ್ದರು.ಆದರೆ ನಂತರದ ದಿನಗಳಲ್ಲಿ ನಡೆದಿದ್ದ ಆನಂದ್‌ಸಿಂಗ್, ಕಂಪ್ಲಿ ಗಣೇಶ್ ಹಾಗೂ ಭೀಮಾನಾಯ್ಕ್ ಮಧ್ಯೆ ನಡೆದಿದ್ದ ಮಾರಾಮಾರಿ, ಅತಿಥಿ ಉಸ್ತುವಾರಿ ಸಚಿವ ಡಿ.ಕೆ‌.ಶಿವಕುಮಾರ್‌ರವರ ಅತಿಯಾದ ಆತ್ಮವಿಶ್ವಾಸಗಳು ಈಗಾಗಲೇ ಉಗ್ರಪ್ಪನವರ ಸೋಲಿಗೆ ಮುನ್ನುಡಿ ಬರೆದಿದ್ದವು. ಹೀಗಾಗಿ ಕ್ಷೇತ್ರದಲ್ಲಿ ಐವರು ಶಾಸಕರು, ಅದರಲ್ಲಿ ಇಬ್ಬರು ಸಚಿವರಾಗಿದ್ದರೂ ಕೂಡಾ ಉಗ್ರಪ್ಪನವರು ಐವತ್ತಾರು ಸಾವಿರ ಮತಗಳ ಅಂತರದಿಂದ ಸೋಲಬೇಕಾಯಿತು. ಒಟ್ಟಿನಲ್ಲಿ ಹೇಳುವುದಾದರೆ ಕಲ್ಯಾಣದ ನಾಡಿನಲ್ಲಿ ಕೋಮುವಾದದ ಕಮಲ ಸಂಪೂರ್ಣ ಅರಳಿದಂತಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...