Homeಮುಖಪುಟ‘ವಾಟ್ಸ್‌ಅಪ್‌‌ ಕಮ್ಯುನಿಟಿ’: ಈ ಹೊಸ ಫೀಚರ್‌‌ ಬಳಸುವುದು ಹೇಗೆ? ಏನಿದರ ವಿಶೇಷ?

‘ವಾಟ್ಸ್‌ಅಪ್‌‌ ಕಮ್ಯುನಿಟಿ’: ಈ ಹೊಸ ಫೀಚರ್‌‌ ಬಳಸುವುದು ಹೇಗೆ? ಏನಿದರ ವಿಶೇಷ?

- Advertisement -
- Advertisement -

ವಾಟ್ಸ್‌ ಅಪ್‌ ಬಳಕೆದಾರರು ಈಗಾಗಲೇ ತಮ್ಮ ಮೊಬೈಲ್‌ನಲ್ಲಿ ‘ವಾಟ್ಸ್‌ಅಪ್‌ ಕಮ್ಯುನಿಟಿ’ ಎಂಬ ಹೊಸ ಫೀಚರ್‌ ಗಮನಿಸಿರಬಹುದು ಅಥವಾ ‘ಅನೌನ್ಸ್‌ಮೆಂಟ್‌’ (ಘೋಷಣೆ) ಮಾಡುತ್ತಿರುವ ಚಿಹ್ನೆಯನ್ನು ಒಳಗೊಂಡ ಗ್ರೂಪೊಂದರಲ್ಲಿ ಯಾರೋ ಒಬ್ಬರು ಸಂದೇಶಗಳನ್ನು ಕಳುಹಿಸುತ್ತಿರುವುದನ್ನು ನೋಡುತ್ತಿರಬಹುದು. ಹೌದು ‘ವಾಟ್ಸ್‌ಅಪ್‌’, ‘ಫೇಸ್‌ಬುಕ್‌’ ಒಡೆತನವನ್ನು ಹೊಂದಿರುವ ‘ಮೆಟಾ’ ಸಂಸ್ಥೆ- ‘ವಾಟ್ಸ್‌ಅಪ್‌ ಕಮ್ಯುನಿಟಿ’ ಎಂಬ ಹೊಸ ಫೀಚರ್‌ಅನ್ನು ಬಳಕೆದಾರರಿಗೆ ಪರಿಚಯಿಸಿದೆ.

‘ವಾಟ್ಸ್‌ಅಪ್‌ ಕಮ್ಯುನಿಟಿ’ ಎಂಬುದು ವಾಟ್ಸ್‌ಅಪ್‌ ರೂಪಿಸಿರುವ ಹೊಸ ಪ್ರಯೋಗವಾಗಿದೆ. ಒಂದು ವಿಚಾರಕ್ಕೆ ಸಂಬಂಧಿಸಿದ ವಾಟ್ಸ್‌ಅಪ್‌ ಗುಂಪುಗಳನ್ನು ಒಗ್ಗೂಡಿಸಲು ಇದು ಸೂಕ್ತವಾಗಬಹುದು. ವಾಟ್ಸ್‌ಅಪ್‌ ಗ್ರೂಪ್‌ಗಳ ಸದಸ್ಯರೊಂದಿಗೆ ಅಡ್ಮಿನ್‌‌ ಸುಲಭವಾಗಿ ಸಂವಹಿಸಲು ಸಾಧ್ಯವಾಗುತ್ತದೆ. 20 ವಾಟ್ಸ್‌ಅಪ್‌ ಗ್ರೂಪ್‌ಗಳನ್ನು ಒಂದೇ ವೇದಿಕೆಯಡಿ ತರಬಹುದಾದ ಅವಕಾಶವೇ ‘ವಾಟ್ಸ್‌ಅಪ್‌ ಕಮ್ಯುನಿಟಿ’.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಗುಂಪುಗಳು ಮತ್ತು ಕಮ್ಯುನಿಟಿ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ಅವುಗಳ ಗಾತ್ರ. ‘ಬೀಬಮ್‌’ ವೆಬ್‌ಸೈಟ್‌ ಪ್ರಕಾರ, “ಸದ್ಯಕ್ಕೆ ನೀವು ಒಂದು ವಾಟ್ಸ್‌ಅಪ್‌‌ ಗುಂಪಿಗೆ 512 ಮಂದಿಯನ್ನು ಆಹ್ವಾನಿಸಬಹುದು. ಆದಾಗ್ಯೂ ಈ ಮಿತಿಯನ್ನು ಮುಂಬರುವ ದಿನಗಳಲ್ಲಿ 1,024 ಮಂದಿಗೆ ಹೆಚ್ಚಿಸಲು ಸಾಧ್ಯತೆ ಇದೆ. ಮತ್ತೊಂದೆಡೆ, ಒಂದೇ ವಾಟ್ಸ್‌ಅಪ್‌ ಕಮ್ಯುನಿಟಿಯಲ್ಲಿ ಮುಂದಿನ ದಿನಗಳಲ್ಲಿ 21 ಗ್ರೂಪ್‌ಗಳನ್ನು ಸೇರಿಸಬಹುದು. ಲೆಕ್ಕ ಹಾಕಿದರೆ ಒಂದು ಕಮ್ಯುನಿಟಿಯಲ್ಲಿ 21,504 (21 x 1,024) ಬಳಕೆದಾರರು ಇರಲು ಸಾಧ್ಯವಾಗಬಹುದು.”

ಕಮ್ಯುನಿಟಿಯನ್ನು ರಚಿಸುವುದು ಹೇಗೆ?

ವಾಟ್ಸ್‌ಅಪ್‌ ಕಮ್ಯುನಿಟಿಯನ್ನು ರಚಿಸಲು, ಬಳಕೆದಾರರು ‘ಕಮ್ಯುನಿಟಿ’ ಟ್ಯಾಬ್ ಅನ್ನು ಕ್ಲಿಕ್ ಮಾಡಬೇಕು. (ಈ ಟ್ಯಾಬ್‌ ನಿಮ್ಮ ಮೊಬೈಲ್‌ನ ಎಡಭಾಗದ ಮೇಲ್ಭಾಗದಲ್ಲಿ ಇರುತ್ತದೆ.) ‘ನ್ಯೂ ಕಮ್ಯನಿಟಿ’ ಬಟನ್ ಅನ್ನು ಟ್ಯಾಪ್ ಮಾಡಬೇಕು. ನಿಮ್ಮ ಕಮ್ಯುನಿಟಿಯ ಪ್ರೊಫೈಲ್ ಚಿತ್ರ ಹಾಕಬಹುದು. ನಿಮ್ಮ ಕಮ್ಯುನಿಟಿಗೆ ಹೆಸರನ್ನು ನೀಡಬೇಕು. ಕಮ್ಯುನಿಟಿ ಡಿಸ್‌ಕ್ರಿಪ್ಶನ್‌ನಲ್ಲಿ ನೀವು ಮಾಡುತ್ತಿರುವ ಕಮ್ಯುನಿಟಿಯ ಗುರಿ, ಧ್ಯೇಯೋದ್ದೇಶವನ್ನು ಬರೆಯಬೇಕು. ನಂತರ ಬಾಣದ ಗುರುತನ್ನು ಕ್ಲಿಕ್‌ ಮಾಡಬೇಕು. ನಂತರ ಕಮ್ಯನಿಟಿ ವಿಂಡೋ ತೆರೆದುಕೊಳ್ಳುತ್ತದೆ. ಅಲ್ಲಿ ಹೊಸ ಗ್ರೂಪ್‌ಗಳನ್ನು ರಚಿಸಬಹುದು. ಅಥವಾ ಈಗಾಗಲೇ ನೀವು ಅಡ್ಮಿನ್ ಆಗಿರುವ ಗ್ರೂಪ್‌ಗಳನ್ನು ಅದರಲ್ಲಿ ಸೇರಿಸಬಹುದು. ಆನಂತರ ಕೆಳಗಿನ ರೈಟ್‌ ಬಟನ್‌ ಒತ್ತಿದರೆ ನಿಮ್ಮ ಕಮ್ಯುನಿಟಿ ಗ್ರೂಪ್ ರಚನೆಯಾಗುತ್ತದೆ. ಕಮ್ಯನಿಟಿ ಗ್ರೂಪ್ ರಚನೆಯಾದ ಬಳಿಕ ಅಲ್ಲಿ ನಿಮ್ಮ ಸಂದೇಶವನ್ನು ಹಾಕಬಹುದು ಅಂದರೆ ಕಮ್ಯುನಿಟಿ ಅಡ್ಮಿನ್‌ ತಮ್ಮ ಅನೌನ್ಸ್‌ಮೆಂಟ್‌ಗಳನ್ನು (ಘೋಷಣೆಗಳನ್ನು) ಕಳುಹಿಸಬಹುದು.

whatsapp, whatsapp communities, whatsapp tips and tricks,

ಅನೌನ್ಸ್‌ಮೆಂಟ್‌: ಕಮ್ಯುನಿಟಿ ಅಡ್ಮಿನ್‌ ಇಲ್ಲಿನ ಎಲ್ಲಾ ಪ್ರತ್ಯೇಕ ಗುಂಪುಗಳಿಗೆ ಸಂದೇಶ ಕಳುಹಿಸಬಹುದು. ಎಲ್ಲಾ ಗುಂಪಿನಲ್ಲಿರುವ ಎಲ್ಲ ಸದಸ್ಯರಿಗೆ ಏಕಕಾಲದಲ್ಲಿ ಸಂದೇಶ ಕಳುಹಿಸಲು ಸಾಧ್ಯವಾಗುತ್ತದೆ. ಮೀಡಿಯಾ ಫೈಲ್‌ಗಳು, ಡಾಕ್ಯುಮೆಂಟ್‌ಗಳು ಮತ್ತು ಧ್ವನಿ ಸಂದೇಶಗಳನ್ನು ರವಾನಿಸಬಹುದು. ಕಮ್ಯುನಿಟಿ ಗ್ರೂಪ್‌ಗಳು ಒಂದು ರೀತಿಯಲ್ಲಿ ಬ್ರಾಂಡ್‌ಕಾಸ್ಟ್‌ ರೀತಿಯಲ್ಲಿ ಕೆಲಸ ನಿರ್ವಹಿಸುತ್ತವೆ. ಒಬ್ಬ ವ್ಯಕ್ತಿಯು ಒಮ್ಮೆಲೇ ಹತ್ತಾರು ಜನಕ್ಕೆ ಸಂದೇಶ ಕಳುಹಿಸುತ್ತಿದ್ದ ರೀತಿಯಲ್ಲಿಯೇ ಒಬ್ಬ ಅಡ್ಮಿನ್ ಈಗ ಇಪ್ಪತ್ತು ಗ್ರೂಪ್‌ಗಳಲ್ಲಿನ ವಾಟ್ಸ್‌ಅಪ್‌ ಬಳಕೆದಾರರಿಗೆ ಒಮ್ಮೆಲೆ ಪ್ರತ್ಯೇಕ ಸಂದೇಶಗಳನ್ನು ಕಳಹಿಸಬಹುದಾಗಿದೆ. ಆದರೆ ಸಂದೇಶವು ನೀವು ರಚಿಸಿರುವ ಕಮ್ಯುನಿಟಿಯ ಹೆಸರಿನಲ್ಲಿ ರವಾನೆಯಾಗುತ್ತದೆ. ಉದಾಹರಣೆಗೆ- ನೀವು ‘ಸೆಕ್ಯುಲರ್‌’ ಎಂಬ ಕಮ್ಯುನಿಟಿಯನ್ನು ರಚಿಸಿ, ಇದೇ ಆಲೋಚನೆಯ 20 ಗುಂಪುಗಳನ್ನು ಸೇರಿಸಿದ್ದೀರಿ ಎಂದುಕೊಳ್ಳಿ. ಅಡ್ಮಿನ್ ಆದ ನೀವು ‘ಸೆಕ್ಯುಲರ್‌’ ಕಮ್ಯುನಿಟಿಯಲ್ಲಿ ಒಂದು ‘ಅನೌನ್ಸ್‌ಮೆಂಟ್‌’ (ಸಂದೇಶ) ಹಾಕಿದರೆ, ‘ಸೆಕ್ಯುಲರ್‌’ ಕಮ್ಯುನಿಟಿಯಲ್ಲಿರುವ ಪ್ರತಿ ಬಳಕೆದಾರನಿಗೆ ಪ್ರತ್ಯೇಕವಾಗಿ ಸಂದೇಶ ರವಾನೆಯಾಗುತ್ತದೆ. ಆದರೆ ನಿಮ್ಮ ಸಂದೇಶ, ನಿಮ್ಮ ‘ಸೆಕ್ಯುಲರ್‌’ ಕಮ್ಯುನಿಟಿಯಲ್ಲಿನ ಇಪ್ಪತ್ತು ಗ್ರೂಪ್‌ಗಳಿಗೆ ಪ್ರತ್ಯೇಕವಾಗಿ ರವಾನೆಯಾಗುವುದಿಲ್ಲ. ‘ಸೆಕ್ಯುಲರ್‌‌’ ಹೆಸರಿನ ‘ಕಮ್ಯುನಿಟಿ’ ಗ್ರೂಪ್‌ ಮೆಸೇಜ್‌ ಇದಾಗಿರುತ್ತದೆ.

ಸದಸ್ಯರನ್ನು ಆಹ್ವಾನಿಸಹುದು: ಅಡ್ಮಿನ್ ಆದವರು, ಇತರ ಜನರನ್ನು ಕಮ್ಯುನಿಟಿಗೆ ಸೇರಲು ಆಹ್ವಾನಿಸಹುದು. ಅದಕ್ಕಾಗಿ ನೀವು ಕಮ್ಯುನಿಟಿಯ ಲಿಂಕ್ ಅನ್ನು ಸಹ ಹಂಚಿಕೊಳ್ಳಬಹುದು. ಬಳಕೆದಾರರು ನಂತರ ಕಮ್ಯುನಿಟಿಯ ಭಾಗವಾಗಲು ಲಿಂಕ್ ಅನ್ನು ಅನುಸರಿಸಬಹುದು. ಆದರೆ ಕಮ್ಯುನಿಟಿಯಲ್ಲಿರುವ ಗ್ರೂಪ್‌ಗಳಲ್ಲಿ ಒಬ್ಬ ವ್ಯಕ್ತಿ ಸೇರಬೇಕೆಂದರೆ, ಆ ಗ್ರೂಪ್‌ನ ಅಡ್ಮಿನ್‌ಗೆ ರಿಕ್ವೆಸ್ಟ್‌ ಕಳುಹಿಸಬೇಕಾಗುತ್ತದೆ. ಗ್ರೂಪ್‌ಗಳ ಅಡ್ಮಿನ್‌ಗಳು ಅನುಮತಿಸಿದರೆ ಮಾತ್ರ ಗ್ರೂಪ್‌ನೊಳಗೆ ಪ್ರವೇಶಿಸಬಹುದು.

ಇದನ್ನೂ ಓದಿರಿ: ಮೋದಿ ಕಾರ್ಯಕ್ರಮಕ್ಕೆ ಕಾರ್ಮಿಕರನ್ನು ಕರೆತಂದು ಹಣ ಕೊಡದೆ ವಂಚನೆ; ಬಿಜೆಪಿ ಮುಖಂಡನ ವಿರುದ್ಧ ಪ್ರಕರಣ ದಾಖಲು

ಕಮ್ಯುನಿಟಿಗೆ ಸಂಬಂಧಪಡದವರು ಯಾರಾದರೂ ಇದ್ದರೆ ಅವರನ್ನು ಸುಲಭವಾಗಿ ರಿಮೂವ್‌ ಮಾಡಬಹುದು. ಕಮ್ಯುನಿಟಿಯಿಂದ ರಿಮೂವ್ ಮಾಡಿದರೂ ನಿರ್ದಿಷ್ಟ ಗ್ರೂಪ್‌ನಲ್ಲಿರುವ ಆ ವ್ಯಕ್ತಿ, ಆ ಗ್ರೂಪ್‌ನಲ್ಲಿ ಸದಸ್ಯನಾಗಿಯೇ ಇರುತ್ತಾನೆ. ಕಮ್ಯುನಿಟಿಯಿಂದ ನಿರ್ದಿಷ್ಟ ಬಳಕೆದಾರರನ್ನು ರಿಮೂವ್ ಮಾಡಲು ಕಮ್ಯುನಿಟಿಯ ಮುಖ್ಯ ಪುಟಕ್ಕೆ ಹೋಗಬೇಕು. ಸದಸ್ಯರ ಪಟ್ಟಿಯನ್ನು ವೀಕ್ಷಿಸಬೇಕು. ನೀವು ಎಲ್ಲಾ ಗುಂಪುಗಳ ಎಲ್ಲಾ ಸದಸ್ಯರ ಪಟ್ಟಿಯನ್ನು ಒಂದೇ ಕಡೆ ನೋಡುತ್ತೀರಿ. ಕಮ್ಯುನಿಟಿಯಿಂದ ನಿರ್ದಿಷ್ಟ ವ್ಯಕ್ತಿಯನ್ನು ತೆಗೆದುಹಾಕಬಹುದು. ಇಷ್ಟವಿಲ್ಲದವರು ಕಮ್ಯುನಿಟಿಯಿಂದ ಲೆಪ್ಟ್ ಕೂಡ ಆಗಲೂ ಅವಕಾಶವಿದೆ.

ವಾಟ್ಸ್‌ಅಪ್‌ನ ಈ ಪ್ರಯೋಗದಿಂದ ಸುಲಭವಾಗಿ ಸಾವಿರಾರು ಜನಕ್ಕೆ ಸಂದೇಶಗಳನ್ನು ಒಮ್ಮೆಲೆ ಕಳುಹಿಸಲು ಅವಕಾಶ ದೊರಕಿದೆ. ಇದನ್ನು ಸದುದ್ದೇಶಕ್ಕೆ ಬಳಸುವವರು ಇರುವಂತೆಯೇ ದುರುದ್ದೇಶಕ್ಕೆ ಬಳಸುವವರೂ ಇರುತ್ತಾರೆ. ಒಮ್ಮೆಲೇ ಫೇಕ್‌ನ್ಯೂಸ್‌ಗಳನ್ನು ಹರಡಲು ಅಥವಾ ಯಾವುದೋ ಒಂದು ಪಕ್ಷ, ಸಿದ್ಧಾಂತರ ಪರ- ವಿರುದ್ಧ ಪ್ರಚಾರ ಮಾಡಲು ಈ ‘ಕಮ್ಯನಿಟಿ’ ಫೀಚರ್‌ ಬಳಕೆಯಾಗುವ ಆತಂಕವಂತೂ ಇದ್ದೇ ಇದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...