Homeಮುಖಪುಟ‘ವಾಟ್ಸ್‌ಅಪ್‌‌ ಕಮ್ಯುನಿಟಿ’: ಈ ಹೊಸ ಫೀಚರ್‌‌ ಬಳಸುವುದು ಹೇಗೆ? ಏನಿದರ ವಿಶೇಷ?

‘ವಾಟ್ಸ್‌ಅಪ್‌‌ ಕಮ್ಯುನಿಟಿ’: ಈ ಹೊಸ ಫೀಚರ್‌‌ ಬಳಸುವುದು ಹೇಗೆ? ಏನಿದರ ವಿಶೇಷ?

- Advertisement -
- Advertisement -

ವಾಟ್ಸ್‌ ಅಪ್‌ ಬಳಕೆದಾರರು ಈಗಾಗಲೇ ತಮ್ಮ ಮೊಬೈಲ್‌ನಲ್ಲಿ ‘ವಾಟ್ಸ್‌ಅಪ್‌ ಕಮ್ಯುನಿಟಿ’ ಎಂಬ ಹೊಸ ಫೀಚರ್‌ ಗಮನಿಸಿರಬಹುದು ಅಥವಾ ‘ಅನೌನ್ಸ್‌ಮೆಂಟ್‌’ (ಘೋಷಣೆ) ಮಾಡುತ್ತಿರುವ ಚಿಹ್ನೆಯನ್ನು ಒಳಗೊಂಡ ಗ್ರೂಪೊಂದರಲ್ಲಿ ಯಾರೋ ಒಬ್ಬರು ಸಂದೇಶಗಳನ್ನು ಕಳುಹಿಸುತ್ತಿರುವುದನ್ನು ನೋಡುತ್ತಿರಬಹುದು. ಹೌದು ‘ವಾಟ್ಸ್‌ಅಪ್‌’, ‘ಫೇಸ್‌ಬುಕ್‌’ ಒಡೆತನವನ್ನು ಹೊಂದಿರುವ ‘ಮೆಟಾ’ ಸಂಸ್ಥೆ- ‘ವಾಟ್ಸ್‌ಅಪ್‌ ಕಮ್ಯುನಿಟಿ’ ಎಂಬ ಹೊಸ ಫೀಚರ್‌ಅನ್ನು ಬಳಕೆದಾರರಿಗೆ ಪರಿಚಯಿಸಿದೆ.

‘ವಾಟ್ಸ್‌ಅಪ್‌ ಕಮ್ಯುನಿಟಿ’ ಎಂಬುದು ವಾಟ್ಸ್‌ಅಪ್‌ ರೂಪಿಸಿರುವ ಹೊಸ ಪ್ರಯೋಗವಾಗಿದೆ. ಒಂದು ವಿಚಾರಕ್ಕೆ ಸಂಬಂಧಿಸಿದ ವಾಟ್ಸ್‌ಅಪ್‌ ಗುಂಪುಗಳನ್ನು ಒಗ್ಗೂಡಿಸಲು ಇದು ಸೂಕ್ತವಾಗಬಹುದು. ವಾಟ್ಸ್‌ಅಪ್‌ ಗ್ರೂಪ್‌ಗಳ ಸದಸ್ಯರೊಂದಿಗೆ ಅಡ್ಮಿನ್‌‌ ಸುಲಭವಾಗಿ ಸಂವಹಿಸಲು ಸಾಧ್ಯವಾಗುತ್ತದೆ. 20 ವಾಟ್ಸ್‌ಅಪ್‌ ಗ್ರೂಪ್‌ಗಳನ್ನು ಒಂದೇ ವೇದಿಕೆಯಡಿ ತರಬಹುದಾದ ಅವಕಾಶವೇ ‘ವಾಟ್ಸ್‌ಅಪ್‌ ಕಮ್ಯುನಿಟಿ’.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಗುಂಪುಗಳು ಮತ್ತು ಕಮ್ಯುನಿಟಿ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ಅವುಗಳ ಗಾತ್ರ. ‘ಬೀಬಮ್‌’ ವೆಬ್‌ಸೈಟ್‌ ಪ್ರಕಾರ, “ಸದ್ಯಕ್ಕೆ ನೀವು ಒಂದು ವಾಟ್ಸ್‌ಅಪ್‌‌ ಗುಂಪಿಗೆ 512 ಮಂದಿಯನ್ನು ಆಹ್ವಾನಿಸಬಹುದು. ಆದಾಗ್ಯೂ ಈ ಮಿತಿಯನ್ನು ಮುಂಬರುವ ದಿನಗಳಲ್ಲಿ 1,024 ಮಂದಿಗೆ ಹೆಚ್ಚಿಸಲು ಸಾಧ್ಯತೆ ಇದೆ. ಮತ್ತೊಂದೆಡೆ, ಒಂದೇ ವಾಟ್ಸ್‌ಅಪ್‌ ಕಮ್ಯುನಿಟಿಯಲ್ಲಿ ಮುಂದಿನ ದಿನಗಳಲ್ಲಿ 21 ಗ್ರೂಪ್‌ಗಳನ್ನು ಸೇರಿಸಬಹುದು. ಲೆಕ್ಕ ಹಾಕಿದರೆ ಒಂದು ಕಮ್ಯುನಿಟಿಯಲ್ಲಿ 21,504 (21 x 1,024) ಬಳಕೆದಾರರು ಇರಲು ಸಾಧ್ಯವಾಗಬಹುದು.”

ಕಮ್ಯುನಿಟಿಯನ್ನು ರಚಿಸುವುದು ಹೇಗೆ?

ವಾಟ್ಸ್‌ಅಪ್‌ ಕಮ್ಯುನಿಟಿಯನ್ನು ರಚಿಸಲು, ಬಳಕೆದಾರರು ‘ಕಮ್ಯುನಿಟಿ’ ಟ್ಯಾಬ್ ಅನ್ನು ಕ್ಲಿಕ್ ಮಾಡಬೇಕು. (ಈ ಟ್ಯಾಬ್‌ ನಿಮ್ಮ ಮೊಬೈಲ್‌ನ ಎಡಭಾಗದ ಮೇಲ್ಭಾಗದಲ್ಲಿ ಇರುತ್ತದೆ.) ‘ನ್ಯೂ ಕಮ್ಯನಿಟಿ’ ಬಟನ್ ಅನ್ನು ಟ್ಯಾಪ್ ಮಾಡಬೇಕು. ನಿಮ್ಮ ಕಮ್ಯುನಿಟಿಯ ಪ್ರೊಫೈಲ್ ಚಿತ್ರ ಹಾಕಬಹುದು. ನಿಮ್ಮ ಕಮ್ಯುನಿಟಿಗೆ ಹೆಸರನ್ನು ನೀಡಬೇಕು. ಕಮ್ಯುನಿಟಿ ಡಿಸ್‌ಕ್ರಿಪ್ಶನ್‌ನಲ್ಲಿ ನೀವು ಮಾಡುತ್ತಿರುವ ಕಮ್ಯುನಿಟಿಯ ಗುರಿ, ಧ್ಯೇಯೋದ್ದೇಶವನ್ನು ಬರೆಯಬೇಕು. ನಂತರ ಬಾಣದ ಗುರುತನ್ನು ಕ್ಲಿಕ್‌ ಮಾಡಬೇಕು. ನಂತರ ಕಮ್ಯನಿಟಿ ವಿಂಡೋ ತೆರೆದುಕೊಳ್ಳುತ್ತದೆ. ಅಲ್ಲಿ ಹೊಸ ಗ್ರೂಪ್‌ಗಳನ್ನು ರಚಿಸಬಹುದು. ಅಥವಾ ಈಗಾಗಲೇ ನೀವು ಅಡ್ಮಿನ್ ಆಗಿರುವ ಗ್ರೂಪ್‌ಗಳನ್ನು ಅದರಲ್ಲಿ ಸೇರಿಸಬಹುದು. ಆನಂತರ ಕೆಳಗಿನ ರೈಟ್‌ ಬಟನ್‌ ಒತ್ತಿದರೆ ನಿಮ್ಮ ಕಮ್ಯುನಿಟಿ ಗ್ರೂಪ್ ರಚನೆಯಾಗುತ್ತದೆ. ಕಮ್ಯನಿಟಿ ಗ್ರೂಪ್ ರಚನೆಯಾದ ಬಳಿಕ ಅಲ್ಲಿ ನಿಮ್ಮ ಸಂದೇಶವನ್ನು ಹಾಕಬಹುದು ಅಂದರೆ ಕಮ್ಯುನಿಟಿ ಅಡ್ಮಿನ್‌ ತಮ್ಮ ಅನೌನ್ಸ್‌ಮೆಂಟ್‌ಗಳನ್ನು (ಘೋಷಣೆಗಳನ್ನು) ಕಳುಹಿಸಬಹುದು.

whatsapp, whatsapp communities, whatsapp tips and tricks,

ಅನೌನ್ಸ್‌ಮೆಂಟ್‌: ಕಮ್ಯುನಿಟಿ ಅಡ್ಮಿನ್‌ ಇಲ್ಲಿನ ಎಲ್ಲಾ ಪ್ರತ್ಯೇಕ ಗುಂಪುಗಳಿಗೆ ಸಂದೇಶ ಕಳುಹಿಸಬಹುದು. ಎಲ್ಲಾ ಗುಂಪಿನಲ್ಲಿರುವ ಎಲ್ಲ ಸದಸ್ಯರಿಗೆ ಏಕಕಾಲದಲ್ಲಿ ಸಂದೇಶ ಕಳುಹಿಸಲು ಸಾಧ್ಯವಾಗುತ್ತದೆ. ಮೀಡಿಯಾ ಫೈಲ್‌ಗಳು, ಡಾಕ್ಯುಮೆಂಟ್‌ಗಳು ಮತ್ತು ಧ್ವನಿ ಸಂದೇಶಗಳನ್ನು ರವಾನಿಸಬಹುದು. ಕಮ್ಯುನಿಟಿ ಗ್ರೂಪ್‌ಗಳು ಒಂದು ರೀತಿಯಲ್ಲಿ ಬ್ರಾಂಡ್‌ಕಾಸ್ಟ್‌ ರೀತಿಯಲ್ಲಿ ಕೆಲಸ ನಿರ್ವಹಿಸುತ್ತವೆ. ಒಬ್ಬ ವ್ಯಕ್ತಿಯು ಒಮ್ಮೆಲೇ ಹತ್ತಾರು ಜನಕ್ಕೆ ಸಂದೇಶ ಕಳುಹಿಸುತ್ತಿದ್ದ ರೀತಿಯಲ್ಲಿಯೇ ಒಬ್ಬ ಅಡ್ಮಿನ್ ಈಗ ಇಪ್ಪತ್ತು ಗ್ರೂಪ್‌ಗಳಲ್ಲಿನ ವಾಟ್ಸ್‌ಅಪ್‌ ಬಳಕೆದಾರರಿಗೆ ಒಮ್ಮೆಲೆ ಪ್ರತ್ಯೇಕ ಸಂದೇಶಗಳನ್ನು ಕಳಹಿಸಬಹುದಾಗಿದೆ. ಆದರೆ ಸಂದೇಶವು ನೀವು ರಚಿಸಿರುವ ಕಮ್ಯುನಿಟಿಯ ಹೆಸರಿನಲ್ಲಿ ರವಾನೆಯಾಗುತ್ತದೆ. ಉದಾಹರಣೆಗೆ- ನೀವು ‘ಸೆಕ್ಯುಲರ್‌’ ಎಂಬ ಕಮ್ಯುನಿಟಿಯನ್ನು ರಚಿಸಿ, ಇದೇ ಆಲೋಚನೆಯ 20 ಗುಂಪುಗಳನ್ನು ಸೇರಿಸಿದ್ದೀರಿ ಎಂದುಕೊಳ್ಳಿ. ಅಡ್ಮಿನ್ ಆದ ನೀವು ‘ಸೆಕ್ಯುಲರ್‌’ ಕಮ್ಯುನಿಟಿಯಲ್ಲಿ ಒಂದು ‘ಅನೌನ್ಸ್‌ಮೆಂಟ್‌’ (ಸಂದೇಶ) ಹಾಕಿದರೆ, ‘ಸೆಕ್ಯುಲರ್‌’ ಕಮ್ಯುನಿಟಿಯಲ್ಲಿರುವ ಪ್ರತಿ ಬಳಕೆದಾರನಿಗೆ ಪ್ರತ್ಯೇಕವಾಗಿ ಸಂದೇಶ ರವಾನೆಯಾಗುತ್ತದೆ. ಆದರೆ ನಿಮ್ಮ ಸಂದೇಶ, ನಿಮ್ಮ ‘ಸೆಕ್ಯುಲರ್‌’ ಕಮ್ಯುನಿಟಿಯಲ್ಲಿನ ಇಪ್ಪತ್ತು ಗ್ರೂಪ್‌ಗಳಿಗೆ ಪ್ರತ್ಯೇಕವಾಗಿ ರವಾನೆಯಾಗುವುದಿಲ್ಲ. ‘ಸೆಕ್ಯುಲರ್‌‌’ ಹೆಸರಿನ ‘ಕಮ್ಯುನಿಟಿ’ ಗ್ರೂಪ್‌ ಮೆಸೇಜ್‌ ಇದಾಗಿರುತ್ತದೆ.

ಸದಸ್ಯರನ್ನು ಆಹ್ವಾನಿಸಹುದು: ಅಡ್ಮಿನ್ ಆದವರು, ಇತರ ಜನರನ್ನು ಕಮ್ಯುನಿಟಿಗೆ ಸೇರಲು ಆಹ್ವಾನಿಸಹುದು. ಅದಕ್ಕಾಗಿ ನೀವು ಕಮ್ಯುನಿಟಿಯ ಲಿಂಕ್ ಅನ್ನು ಸಹ ಹಂಚಿಕೊಳ್ಳಬಹುದು. ಬಳಕೆದಾರರು ನಂತರ ಕಮ್ಯುನಿಟಿಯ ಭಾಗವಾಗಲು ಲಿಂಕ್ ಅನ್ನು ಅನುಸರಿಸಬಹುದು. ಆದರೆ ಕಮ್ಯುನಿಟಿಯಲ್ಲಿರುವ ಗ್ರೂಪ್‌ಗಳಲ್ಲಿ ಒಬ್ಬ ವ್ಯಕ್ತಿ ಸೇರಬೇಕೆಂದರೆ, ಆ ಗ್ರೂಪ್‌ನ ಅಡ್ಮಿನ್‌ಗೆ ರಿಕ್ವೆಸ್ಟ್‌ ಕಳುಹಿಸಬೇಕಾಗುತ್ತದೆ. ಗ್ರೂಪ್‌ಗಳ ಅಡ್ಮಿನ್‌ಗಳು ಅನುಮತಿಸಿದರೆ ಮಾತ್ರ ಗ್ರೂಪ್‌ನೊಳಗೆ ಪ್ರವೇಶಿಸಬಹುದು.

ಇದನ್ನೂ ಓದಿರಿ: ಮೋದಿ ಕಾರ್ಯಕ್ರಮಕ್ಕೆ ಕಾರ್ಮಿಕರನ್ನು ಕರೆತಂದು ಹಣ ಕೊಡದೆ ವಂಚನೆ; ಬಿಜೆಪಿ ಮುಖಂಡನ ವಿರುದ್ಧ ಪ್ರಕರಣ ದಾಖಲು

ಕಮ್ಯುನಿಟಿಗೆ ಸಂಬಂಧಪಡದವರು ಯಾರಾದರೂ ಇದ್ದರೆ ಅವರನ್ನು ಸುಲಭವಾಗಿ ರಿಮೂವ್‌ ಮಾಡಬಹುದು. ಕಮ್ಯುನಿಟಿಯಿಂದ ರಿಮೂವ್ ಮಾಡಿದರೂ ನಿರ್ದಿಷ್ಟ ಗ್ರೂಪ್‌ನಲ್ಲಿರುವ ಆ ವ್ಯಕ್ತಿ, ಆ ಗ್ರೂಪ್‌ನಲ್ಲಿ ಸದಸ್ಯನಾಗಿಯೇ ಇರುತ್ತಾನೆ. ಕಮ್ಯುನಿಟಿಯಿಂದ ನಿರ್ದಿಷ್ಟ ಬಳಕೆದಾರರನ್ನು ರಿಮೂವ್ ಮಾಡಲು ಕಮ್ಯುನಿಟಿಯ ಮುಖ್ಯ ಪುಟಕ್ಕೆ ಹೋಗಬೇಕು. ಸದಸ್ಯರ ಪಟ್ಟಿಯನ್ನು ವೀಕ್ಷಿಸಬೇಕು. ನೀವು ಎಲ್ಲಾ ಗುಂಪುಗಳ ಎಲ್ಲಾ ಸದಸ್ಯರ ಪಟ್ಟಿಯನ್ನು ಒಂದೇ ಕಡೆ ನೋಡುತ್ತೀರಿ. ಕಮ್ಯುನಿಟಿಯಿಂದ ನಿರ್ದಿಷ್ಟ ವ್ಯಕ್ತಿಯನ್ನು ತೆಗೆದುಹಾಕಬಹುದು. ಇಷ್ಟವಿಲ್ಲದವರು ಕಮ್ಯುನಿಟಿಯಿಂದ ಲೆಪ್ಟ್ ಕೂಡ ಆಗಲೂ ಅವಕಾಶವಿದೆ.

ವಾಟ್ಸ್‌ಅಪ್‌ನ ಈ ಪ್ರಯೋಗದಿಂದ ಸುಲಭವಾಗಿ ಸಾವಿರಾರು ಜನಕ್ಕೆ ಸಂದೇಶಗಳನ್ನು ಒಮ್ಮೆಲೆ ಕಳುಹಿಸಲು ಅವಕಾಶ ದೊರಕಿದೆ. ಇದನ್ನು ಸದುದ್ದೇಶಕ್ಕೆ ಬಳಸುವವರು ಇರುವಂತೆಯೇ ದುರುದ್ದೇಶಕ್ಕೆ ಬಳಸುವವರೂ ಇರುತ್ತಾರೆ. ಒಮ್ಮೆಲೇ ಫೇಕ್‌ನ್ಯೂಸ್‌ಗಳನ್ನು ಹರಡಲು ಅಥವಾ ಯಾವುದೋ ಒಂದು ಪಕ್ಷ, ಸಿದ್ಧಾಂತರ ಪರ- ವಿರುದ್ಧ ಪ್ರಚಾರ ಮಾಡಲು ಈ ‘ಕಮ್ಯನಿಟಿ’ ಫೀಚರ್‌ ಬಳಕೆಯಾಗುವ ಆತಂಕವಂತೂ ಇದ್ದೇ ಇದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...