Homeಸಿನಿಮಾಕ್ರೀಡೆಆಡಿಸಿ ನೋಡು, ಬೀಳಿಸಿ ನೋಡು ಉರುಳಿ ಹೋಗದು! ಭಾರತದ ಇವಿಎಂ ಮತ್ತು ಕ್ರಿಕೆಟ್‍ನ ‘ಝಿಂಗ್’ ಬೇಲ್ಸ್!

ಆಡಿಸಿ ನೋಡು, ಬೀಳಿಸಿ ನೋಡು ಉರುಳಿ ಹೋಗದು! ಭಾರತದ ಇವಿಎಂ ಮತ್ತು ಕ್ರಿಕೆಟ್‍ನ ‘ಝಿಂಗ್’ ಬೇಲ್ಸ್!

- Advertisement -
- Advertisement -

| ಮಲ್ಲಿ |

ಸದ್ಯ ಸುದ್ದಿಯಲ್ಲಿರುವ ವಿಶ್ವಕಪ್ ಕ್ರಿಕೆಟ್‍ನಲ್ಲಿ ‘ಝಿಂಗ್’ ಬೇಲ್ಸ್‍ಗಳು ಅಲ್ಲಾಡುತ್ತಲೇ ಇಲ್ಲ! ಒಮ್ಮೆ ನಮ್ಮ ಬೂಮ್ರಾ ಬಿರುಸಾಗಿ ಎಸೆದಾಗ ಚೆಂಡು ಸ್ಟಂಪ್‍ಗೆ ತಾಗಿತು, ಆದರೆ ‘ಝಿಂಗ್’ ಬೇಲ್ಸ್ ಮಿಸುಕಲೇ ಇಲ್ಲ, ಬೇಲ್ಸ್‍ನಲ್ಲಿರುವ ದೀಪಗಳು ಮಿನುಗಲೂ ಇಲ!. ಹೀಗಾಗಿ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಓಟಾಗಿಯೂ ಓಟಾಗಲಿಲ್ಲ! ಈ ಬೇಲ್ಸ್‍ಗಳನ್ನು ಕುಟ್ಟಿ ಪುಡಿ ಪುಡಿ ಮಾಡಬೇಕು ಎನಿಸಿರಬೇಕು ಜಸ್ಪ್ರಿತ್ ಬೂಮ್ರಾಗೆ!

ಆದರೆ ಕುಟ್ಟೊಂಗಿಲ್ಲ, ತಟ್ಟಂಗಿಲ್ಲ… ಟೂರ್ನಿ ಆರಂಭವಾದ ಮೇಲೆ ಕನಿಷ್ಠ ಐದು ಸಲವಾದರೂ ‘ಅಳ್ಳಾಡದ’ ಬೇಲ್ಸ್‍ಗಳ ಕಾರಣದಿಂದ ಬೌಲರ್‍ಗಳು ನಿರಾಶರಾಗಿದ್ದಾರೆ. ಒಂಥರಾ ನಮ್ಮ ಇವಿಯಂಗಳಂತೆ ವಿಚಿತ್ರ ವರ್ತನೆ ತೋರುತ್ತಿವೆಯೇ ಈ ‘ಝಿಂಗ್’ ಬೇಲ್ಸ್? ವಿಶ್ವಕಪ್ ಮುಗಿಯುವವರೆಗೂ ಈ ಬೇಲ್ಸ್ ಬದಲಿಸುವುದಿಲ್ಲ ಎಂದು ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಹೇಳಿದೆ.. ಥೇಟು ನಮ್ಮ ಚುನಾವಣಾ ಆಯೋಗದ ಹಾಗೆಯೇ!

ಇವಿಎಂಗಳನ್ನು ತಿರುಚುವುದು ಸಾಧ್ಯ ಎಂಬುದನ್ನು ಹಲವಾರು ತಜ್ಞರು ದೃಢಪಡಿಸಿದ್ದಾರೆ. ಆದರೆ, ನಮ್ಮ ಚುನಾವಣಾ ಆಯೋಗವು ಜನರಲ್ಲಿನ ಸಂಶಯವನ್ನು ನಿವಾರಿಸುವ ಕೆಲಸವನ್ನು ಮಾಡಲೇ ಇಲ್ಲ. ಚುನಾವಣೆಯ ಮೊದಲ 4 ಹಂತಗಳಲ್ಲಿ 373 ಕ್ಷೇತ್ರಗಳಲ್ಲಿ ವೋಟ್ ಮಾಡಿದ ಮತ್ತು ಕೌಂಟ್ ಆದ ಮತಗಳ ನಡುವೆ 20-30 ಸಾವಿರ ವ್ಯತ್ಯಾಸವಿದ್ದರೂ ನಮ್ಮ ಆಯೋಗ ಅದಕ್ಕೆ ಸರಿಯಾದ ಪ್ರತಿಕ್ರಿಯೆ ನೀಡಿಲ್ಲ!

ಬ್ಯಾಟ್ಸಮನ್ ಒಬ್ಬನನ್ನು ನೇರ ಔಟ್ ಮಾಡಲು ಸ್ಟಂಪ್ ಮೇಲಿರುವ ಬೇಲ್ಸ್ ಹಾರುವಂತೆ ಅಥವಾ ಸ್ಟಂಪೇ ನೆಲಕ್ಕೆ ಬೀಳಬೇಕು ಎಂಬುದು ಪರಂಪರಾಗತ ನಿಯಮ. ಆದರೆ ಇಲ್ಲಿ ‘ಝಿಂಗ್’ ಮಾತ್ರ ಸ್ಥಾವರದಂತೆ ಅಂಟಿಕೊಂಡು ಬಿಟ್ಟಿದೆ. ಗಂಟೆಗೆ 110 ಮೈಲು ವೇಗದಲ್ಲಿ ಬಂದ ಬಾಲ್ ಸ್ಟಂಪ್‍ಗೆ ಅಪ್ಪಳಿಸಿದರೂ ‘ಝಿಂಗ್’ ಝುಮ್ಮ ಅಂತಾನೇ ಇಲ್ಲ. ಟೂರ್ನಿಯ ಮೊದಲ ಹತ್ತು ದಿನಗಳಲ್ಲೇ ಇಂತಹ 5 ನಿದರ್ಶನ ನಡೆದರೂ, ಐಸಿಸಿ ಮಾತ್ರ ಇಡೀ ಟೂರ್ನಿಮೆಂಟ್‍ವರೆಗೆ ಇದೇ ‘ಝಿಂಗ್-ಡಾಂಗ್’ ಮುಂದುವರೆಸುವುದಾಗಿ ಹೇಳಿದೆ.

‘ಮಿಸುಕದ ಝಿಂಗ್ ಕಾರಣದಿಂದ ಲೈಫ್ ಪಡೆದ ಆಟಗಾರನೇ ಪಂದ್ಯ ಗೆಲ್ಲಿಸಿದರೆ? ಆಗ ಸಮಸ್ಯೆ ಇನ್ನಷ್ಟು ಬಿಗಡಾಯಿಸಬಹುದು. ಟೂರ್ನಿಯ ಮೊದಲ ಹತ್ತು ದಿನಗಳಲ್ಲಿ ಇಂತಹ ನಿದರ್ಶನಗಳನ್ನು ನೋಡಿದ ಪಾಕಿಸ್ತಾನದ ನಿವೃತ್ತ ವೇಗಿ ಶೋಯಬ್ ಅಖ್ತರ್ ಟ್ವೀಟ್ ಮಾಡಿ.’ ಅಯ್ಯೋ ಅಲ್ಲಾ, ನನ್ನ ಕ್ರಿಕೆಟ್ ಜೀವನದಲ್ಲೇ ಇಂತಹ ಬೇಲ್ಸ್ ನೋಡಿರಲಿಲ್ಲ. ಅದೂ ಪ್ರತಿಷ್ಟಿತ ವಿಶ್ವಕಪ್‍ನಲ್ಲೇ ಹೀಗಾಗುತ್ತಿದೆಯಲ್ಲ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ…

ಈ ಬೇಲ್ಸ್’ಗಳೂ ಪಕ್ಷಪಾತ ಮಾಡ್ತಿವೆಯಾ? ಬೇಕಾದಾಗ ಉರುಳೋದು ಬೇಡವಾದಾಗ ಸ್ಟಂಪ್ಸ್ ತಬ್ಬಿ ಕೂಡೋದು! ಇದನ್ನು ‘ಬೇಲ್ ಫಿಕ್ಸಿಂಗ್’ ಅಂತಾ ಕರೆಯಬಹುದೇ? ಕೆಲವು ಅನುಭವಿಗಳ ಪ್ರಕಾರ, ಈ ಬೇಲ್ಸ್‍ನಲ್ಲಿರುವ ಬ್ಯಾಟರಿಯ ತೂಕದ ಕಾರಣಕ್ಕೆ ಬೇಲ್ಸ್ ಧಡೂತಿಯಾಗಿ ಮಿಸುಗಾಡಲು ಆಗುತ್ತಿಲ್ಲವಂತೆ! ಚುನಾವಣಾ ಆಯೋಗವೇ ಐಸಿಸಿಗೆ ಮಾದರಿಯಾಗಿದೆಯಾ? ಇನ್ನು ಮುಂದೆ ಈ ಝಿಂಗ್ ಬೇಲ್ಸ್ ಮೇಲೆಯೇ ಬೆಟ್ಟಿಂಗ್ ನಡೆಯಲೂ ಬಹುದು!

ಕ್ಲೌಡ್ ಆ್ಯಂಡ್ ರಾಡಾರ್ ತಜ್ಞರನ್ನು ಈ ಬಗ್ಗೆ ನಮ್ಮ ಅಕ್ಷಯಕುಮಾರ್ ಪ್ರಶ್ನಿಸಿದರೆ ಚೆಂದ ಅಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...