Homeಕರ್ನಾಟಕಶಂಕರ್ ‌ನಾಗ್‌ ಜನ್ಮದಿನ: ಕನ್ನಡಿಗರ ಮನದಲ್ಲಿ ಎಂದಿಗೂ ’ಆಟೋರಾಜ’ ಅಮರ

ಶಂಕರ್ ‌ನಾಗ್‌ ಜನ್ಮದಿನ: ಕನ್ನಡಿಗರ ಮನದಲ್ಲಿ ಎಂದಿಗೂ ’ಆಟೋರಾಜ’ ಅಮರ

27ನೇ ವಯಸ್ಸಿನಲ್ಲಿ 'ಮಿಂಚಿನ ಓಟ ’ದಂಥ ದರೋಡೆಕೋರರ ಸಿನಿಮಾ ನಿರ್ದೇಶಿಸಿ, ಏಳು ರಾಜ್ಯ ಪ್ರಶಸ್ತಿಗಳನ್ನು ಶಂಕರ್‌ ನಾಗ್ ಬಾಚಿಕೊಂಡಿದ್ದರು.

- Advertisement -
- Advertisement -

ಇಂದು (ನವೆಂಬರ್ 9) ಕನ್ನಡ ಚಿತ್ರರಂಗದ ಅಪ್ರತಿಮ ಕಲಾವಿದ, ಅದ್ಬುತ ನಿರ್ದೇಶಕ, ನಿರ್ಮಾಪಕ ಶಂಕರ್‌ ನಾಗ್ ಅವರ ಜನ್ಮದಿನ. ಕನ್ನಡಿಗರ ನೆಚ್ಚಿನ ಆಟೋರಾಜ ನಮ್ಮಿಂದ ಭೌತಿಕವಾಗಿ ದೂರವಾಗಿ 31 ವರ್ಷಗಳು ಕಳೆದಿವೆ. ಆದರೆ, ಅವರ ಸಾಧನೆಯ ಮೂಲಕ ಜನಮಾನಸದಲ್ಲಿ ಮರೆಯದ ಛಾಪು ಮೂಡಿಸಿದ್ದಾರೆ.

ಶಂಕರ್‌ನಾಗ್ ಬದುಕಿದ್ದು 36 ವರ್ಷ, ಆದರೆ ಅವರ ಸಾಧನೆ ಇಂದಿಗೂ ಅಮರ. 12 ವರ್ಷಗಳಲ್ಲಿ ಶಂಕರ್​ನಾಗ್​, ಬರೋಬ್ಬರಿ 98 ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಅವುಗಳಲ್ಲಿ 90 ಸಿನಿಮಾಗಳಲ್ಲಿ ನಟನಾಗಿ ಕಾಣಿಸಿಕೊಂಡಿದ್ದಾರೆ.

ಶಂಕರ್ ನಾಗ್ ನವೆಂಬರ್ 9, 1954ರಲ್ಲಿ ಕರ್ನಾಟಕದ ಹೊನ್ನಾವರ ತಾಲೂಕಿನ ಮಲ್ಲಾಪುರ ಎಂಬ ಪುಟ್ಟ ಹಳ್ಳಿಯಲ್ಲಿ ಹುಟ್ಟಿದರು. ಮುಂಬೈನಲ್ಲಿದ್ದ ಶಂಕರ್‌ನಾಗ್ ತಮಗರಿವಿಲ್ಲದಂತೆ ಮರಾಠಿ ರಂಗಭೂಮಿ ಹವ್ಯಾಸವನ್ನು ಬೆಳೆಸಿಕೊಳ್ಳುತ್ತಾ ಮರಾಠಿ ರಂಗಭೂಮಿಯಲ್ಲಿ ತೀವ್ರವಾಗಿ ತೊಡಗಿಕೊಂಡಿದ್ದರು. ಭಾರತೀಯ ರಾಷ್ಟ್ರೀಯ ಪ್ರಶಸ್ತಿ ವಿಜೇತ ಮರಾಠಿ ಚಿತ್ರ ‘22 ಜೂನ್ 1897’ ಕ್ಕೆ ಚಿತ್ರಕಥೆ ಬರೆದಿದ್ದರು.

ಇದನ್ನೂ ಓದಿ: ಕನ್ನಡ ಚಿತ್ರರಂಗಕ್ಕೆ ಹೊಸ ಕ್ರಿಯಾಶೀಲತೆ ತಂದುಕೊಟ್ಟ ’ಅಪ್ಪು ಡ್ಯಾನ್ಸ್’

 

1978 ರಲ್ಲಿ ತೆರೆಕಂಡ ಗಿರೀಶ ಕಾರ್ನಾಡ್ ನಿರ್ದೇಶನದ ‘ಒಂದಾನೊಂದು ಕಾಲದಲ್ಲಿ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಶಂಕರ್‌ ನಾಗ್, ಹಿಂತಿರುಗಿ ನೋಡಿದ್ದೇ ಇಲ್ಲ. ನಟನಾಗಿ ಪದಾರ್ಪಣೆ ಮಾಡಿದ ಎರಡೇ ವರ್ಷಕ್ಕೆ 1980 ರಲ್ಲಿ ತಮ್ಮ 27ರ ವಯಸ್ಸಿನಲ್ಲಿ ‘ಮಿಂಚಿನ ಓಟ’ ಚಿತ್ರವನ್ನ ನಿರ್ದೇಶಿಸಿ, ನಿರ್ಮಾಣ ಮಾಡುವ ಮೂಲಕ ತಾನೊಬ್ಬ ಒಳ್ಳೆಯ ನಿರ್ದೇಶಕ ಅನ್ನೋದನ್ನ ನಿರೂಪಿಸಿದ್ದರು. ’ಮಿಂಚಿನ ಓಟ ’ದಂಥ ದರೋಡೆಕೋರರ ಸಿನಿಮಾ ನಿರ್ದೇಶಿಸಿ, ಏಳು ರಾಜ್ಯಪ್ರಶಸ್ತಿಗಳನ್ನು ಶಂಕರ್‌ನಾಗ್ ಬಾಚಿಕೊಂಡರು. ಬರೀ ಕನ್ನಡ ಚಿತ್ರರಂಗವಲ್ಲದೆ, ಮರಾಠಿ, ಹಿಂದಿ ಮತ್ತು ಇಂಗ್ಲಿಷ್ ಚಿತ್ರರಂಗದಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ.

ಇದನ್ನೂ ಓದಿ:  ಪುನೀತ್ ರಾಜಕುಮಾರ್ ನುಡಿನಮನ; ಮುಗ್ಧ ನಗುವೊಂದರ ಕಣ್ಮರೆ

ನಂತರ ಸಂಗೀತ ಮಾಂತ್ರಿಕ ಇಳಯ ರಾಜಾರನ್ನು ಕರೆ ತಂದು ಸಂಗೀತ ಕೊಡಿಸಿದ ‘ಜನ್ಮ ಜನ್ಮದ ಅನುಬಂಧ’, ‘ಗೀತಾ’ದಂಥ ಸಿನಿಮಾಗಳ ಹಾಡುಗಳು ಇಂದಿಗೂ ಜನಪ್ರಿಯ. ಶಂಕರ್‌ ನಿರ್ದೇಶನಕ್ಕೆ ಮನಸೋತ ರಾಜ್‌ಕುಮಾರ್‌ ಕೂಡ  ತಮ್ಮ ಇಮೇಜಿನ ಹಂಗು ತೊರೆದು, ‘ಒಂದು ಮುತ್ತಿನ ಕಥೆ’ಯಲ್ಲಿ ಅಭಿನಯಿಸಿದ್ದರು.

ಸೀತಾರಾಮು, ಆಟೋರಾಜ, ಸಾಂಗ್ಲಿಯಾನ, ನೋಡಿ ಸ್ವಾಮಿ ನಾವಿರೋದೇ ಹೀಗೆ, ಆ್ಯಕ್ಸಿಡೆಂಟ್, ಸಿಬಿಐ ಶಂಕರ್‌, ಮೂಗನ ಸೇಡು, ತರ್ಕ, ಗೀತಾ, ನ್ಯಾಯಾ ಎಲ್ಲಿದೆ ಚಿತ್ರಗಳು ಸೇರಿ 90 ಚಿತ್ರಗಳ ಮೂಲಕ ಜನರ ಮನ ಗೆದ್ದವರು. ತಮ್ಮ ’ಮುನಿಯನ ಮಾದರಿ’ ಚಿತ್ರದ ಮೂಲಕ ರೈತರ, ಹಳ್ಳಿಗರ ಸಮಸ್ಯೆಗಳಿಗೆ ದನಿಯಾದರು.

PC: Mythical India

ಕಿರುತೆರೆಯಲ್ಲಿ ತನ್ನದೆ ಛಾಪು ಮೂಡಿಸಿದ್ದ ‘ಮಾಲ್ಗುಡಿ ಡೇಸ್‌’ನಂತಹ ಗಟ್ಟಿ ಧಾರಾವಾಹಿಯನ್ನು ನೀಡಿದ ಕೀರ್ತಿ ಶಂಕರ್‌ ನಾಗ್‌ ಅವರಿಗೆ ಸಲ್ಲುತ್ತದೆ. 1986ರಲ್ಲಿ ಪ್ರಸಾರವಾದ ಈ ಧಾರವಾಹಿಯ ಕ್ರೇಜ್ ಎಷ್ಟಿತ್ತು ಎಂಬುದಕ್ಕೆ  ಉದಾಹರಣೆಯೆಂದರೆ ಕಳೆದ ವರ್ಷ ಝೀ ಕನ್ನಡ ಇದರ ಕನ್ನಡ ಅವತರಣಿಕೆ ಪ್ರಸಾರ ಮಾಡಿತ್ತು.

The nostalgia inducing 'Malgudi Days': When Swami was my friend too | The News Minute

ನಟ ಶಂಕರ್‌ ನಾಗ್ ನಮ್ಮನಗಲಿದ್ದು ಸೆಪ್ಟೆಂಬರ್‌ 30, 1990 ರಂದು. ಅಂದು ಭಾರತೀಯ ಚಿತ್ರರಂಗವೇ ಆಘಾತಕ್ಕೆ ಒಳಗಾದ ದಿನ. ಇಡೀ ಚಿತ್ರರಂಗ ಒಬ್ಬ ಅಪ್ರತಿಮ ಕಲಾವಿದ, ನಟ, ನಿರ್ದೇಶಕ, ನಿರ್ಮಾಪಕ, ರಂಗಭೂಮಿ ಕಲಾವಿದ, ಕರಾಟೆ ಕಿಂಗ್ ಎಂದು ಖ್ಯಾತರಾಗಿದ್ದ ಶಂಕರ್‌ ನಾಗ್ ಅವ‌ರನ್ನು ಕಳೆದುಕೊಂಡಿತ್ತು.

ದಾವಣಗೆರೆ ಬಳಿಯ ಆನಗೋಡಿನ ಬಳಿ ಶಂಕರ್‌ನಾಗ್‌ ಕಾರು ಅಪಘಾತದಲ್ಲಿ ನಿಧನರಾದರು. ಜೋಕುಮಾರಸ್ವಾಮಿ ಚಿತ್ರದ ಚಿತ್ರೀಕರಣ ಸಮಯದಲ್ಲಿ ನಡೆದ ಈ ದುರ್ಘಟನೆಯಿಂದ ಇಡೀ ಕರುನಾಡೇ ಆಘಾತಕ್ಕೆ ಒಳಗಾಗಿತ್ತು.

ತಮ್ಮ 12 ವರ್ಷಗಳ ಸಿನಿ ಜೀವನದಲ್ಲಿ ಆಟೋ ಚಾಲಕರ ಹೀರೋ ಆಗಿ, ಯುವ ನಿರ್ದೇಶಕರ ಸ್ಪೂರ್ತಿಯಾಗಿ ಶಂಕರ್​ನಾಗ್​ ಇಂದಿಗೂ ರಾರಾಜಿಸುತ್ತಿದ್ದಾರೆ. ಇವರ ನೆನಪಲ್ಲಿ ಸ್ಥಾಪಿಸಲಾದ ‘ರಂಗಶಂಕರ’ ನಾಟಕ ರಂಗ, ಅದೆಷ್ಟೋ ಯುವ ಪ್ರತಿಭೆಗಳಿಗೆ ವೇದಿಕೆಯಾಗಿದೆ. ನಟ ಶಂಕರ್‌ ನಾಗ್ ಪತ್ನಿ ಅರುಂಧತಿ ನಾಗ್ ರಂಗಶಂಕರದ ಹೊಣೆ ಹೊತ್ತಿದ್ದಾರೆ.

ರಂಗಶಂಕರದ ಮೂಲಕ ತಮ್ಮ ರಂಗತಂಡದ ಕನಸು ಕಟ್ಟಿಕೊಂಡ ರಂಗಕರ್ಮಿ ರಾಜ್‌ಗುರು ನಾನುಗೌರಿ.ಕಾಂ ಜೊತೆ ಶಂಕರ್‌ ನಾಗ್ ಅವರು ಇವರಲ್ಲಿ ತುಂಬಿದ ಸ್ಪೂರ್ತಿ ಬಗ್ಗೆ ಹಂಚಿಕೊಂಡಿದ್ದು ಹೀಗೆ.

“ಕಾಲೇಜಿನ ದಿನಗಳಲ್ಲಿ ರಂಗಶಂಕರದ ವೇದಿಕೆಯಲ್ಲಿ ನಾನು ಅಭಿನಯಿಸುವಾಗ ಮುಂದಿನ ಸಾಲಿನಲ್ಲಿ ಕೂತಿದ್ದ ಅರುಂಧತಿ ಅಮ್ಮ “ನೀನು ಶಂಕ್ರನ ಥರಾ ಬಿಹೇವ್ ಮಾಡ್ತಿಯಾ ಕಣೋ” ಅಂದಿದ್ರು, ಈಗದು ಅವರಿಗೆ ನೆನಪಿನಲ್ಲಿರುತ್ತದೊ ಇಲ್ಲವೋ ಗೊತ್ತಿಲ್ಲಾ. ಆದರೆ, ಸತತ 15 ವರ್ಷಗಳಿಂದ ಶಂಕ್ರಣ್ಣ ನನ್ನ ಸಾತ್ವಿಕ ಮತ್ತು ರಂಗಪಯಣ ತಂಡಗಳನ್ನು ಹೇಗೆ ಆವರಿಸಿದ್ದಾರೆ ಎಂದರೆ… ಸಾತ್ವಿಕದಲ್ಲಿ “S” ಮೊದಲಕ್ಷರ, ರಂಗಪಯಣದಲ್ಲಿ “NA” ಕೊನೆ ಅಕ್ಷರ ಎರಡು ತಂಡದ ಪ್ರಾರಂಭದಿಂದ ಅಂತ್ಯದವರೆಗೂ ಅವರಿದ್ದಾರೆ” 

ರಾಜ್‌ಗುರು, ರಂಗಕರ್ಮಿ

“ಅವರ ಎಷ್ಟೋ ಸಮುದ್ರದಷ್ಟು ಕನಸುಗಳನ್ನು ನಾವು ನನಸು ಮಾಡಲಾಗದೆ ಇದ್ದರು ಸಾಸಿವೆಯಷ್ಟಾದರು ನೆರವೇರಿಸುವ ಕಾಯಕದಲ್ಲಿ ನಾವು ತೊಡಗಿದ್ದೇವೆ. ಮತ್ತು ಯಶಸ್ಸು ಕಂಡಿದ್ದೇವೆ. ಆ ಯಶಸ್ಸಿನ ಸಿಂಹಪಾಲು ಶಂಕ್ರಣ್ಣನಿಗೆ. ನಾವು ನಾಮಕಾವಸ್ತೆ ಅಷ್ಟೇ” ಎಂದು ಶಂಕರ್‌ ನಾಗ್ ಅವರಿಗೆ ನಮನ ಸಲ್ಲಿಸುತ್ತಾರೆ.

ನಮ್ಮ ಮೆಟ್ರೋ ಯೋಜನೆ ಶಂಕರ್‌ ನಾಗ್ ಅವರ ಕನಸಿನ ಕೂಸಾಗಿತ್ತು. ಒಬ್ಬ ವ್ಯಕ್ತಿ ತಮ್ಮ ಪೂರ್ತಿ ಜೀವನದಲ್ಲಿ ಸಾಧಿಸಲಾಗದ ಅಗಾಧ ಕೆಲಸಗಳನ್ನು ಶಂಕರ್‌ ನಾಗ್ 36 ವರ್ಷಗಳಲ್ಲಿ ಸಾಧಿಸಿದ್ದಾರೆ.

ಶಂಕರ್‌ ನಾಗ್ ಅವರ ಜನ್ಮದಿನದ ಹಿನ್ನೆಲೆ ಚಿತ್ರರಂಗದ ಕಲಾವಿದರು, ಅಭಿಮಾನಿಗಳು, ಗಣ್ಯರು ನಟನನ್ನು ನೆನಪಿಸಿಕೊಂಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ’ಇಂದು ಕನ್ನಡ ಚಿತ್ರರಂಗದ ಅಪೂರ್ವ ನಟ, ನಿರ್ದೇಶಕ, ಅಪ್ರತಿಮ ದೂರದೃಷ್ಟಿಯುಳ್ಳ ತಾಂತ್ರಿಕ ನಿಪುಣರಾಗಿದ್ದ ಶಂಕರ್‌ ನಾಗ್ ಅವರ ಜಯಂತಿ. ಅವರಿಗೆ ನನ್ನ ಶ್ರದ್ಧಾಪೂರ್ವಕ ನಮನಗಳು. ಸಿನಿಮಾ, ರಂಗಭೂಮಿಯಲ್ಲಿ ಬೆರಗು ಮೂಡಿಸುವ ಅನೇಕ ಪ್ರಯೋಗಗಳನ್ನು ನಡೆಸಿದ್ದ ಅವರು ಸದಾ ಚೈತನ್ಯ ಚಿಲುಮೆ ಆಗಿದ್ದರು” ಎಂದು ಟ್ವೀಟ್ ಮಾಡಿದ್ದಾರೆ.


ಇದನ್ನೂ ಓದಿ: ಪುನೀತ್ ರಾಜಕುಮಾರ್ ‘ನಮ್ಮ ಅಪ್ಪು’ ಆದದ್ದು..: ಕೆ.ಫಣಿರಾಜ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿ ಗಲಭೆ ಪ್ರಕರಣದಿಂದ ಒಂಬತ್ತು ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಂಬತ್ತು ಜನರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಾಕ್ಷ್ಯಗಳು ನಿರ್ದಿಷ್ಟತೆಯ ಕೊರತೆ ಮತ್ತು ಸಾಮಾನ್ಯ ಸ್ವರೂಪದ್ದಾಗಿರುವುದರಿಂದ ಪ್ರಕರಣದಲ್ಲಿ ಅವುಗಳನ್ನು ನಂಬಲಾಗುವುದಿಲ್ಲ ಎಂ ನ್ಯಾಯಾಲಯ ಹೇಳಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ...

ಚುನಾವಣಾ ಕಾರ್ಯಕ್ಕೆ ಅರಣ್ಯ ಸಿಬ್ಬಂದಿ : ಅಸ್ಸಾಂ ಸರ್ಕಾರದ ಆದೇಶಕ್ಕೆ ಎನ್‌ಜಿಟಿ ತಡೆ

ವಿಧಾನಸಭೆ ಚುನಾವಣೆಗೆ ಅಸ್ಸಾಂ ಅರಣ್ಯ ಸಂರಕ್ಷಣಾ ಪಡೆಯ 1,600 ಸಿಬ್ಬಂದಿಯನ್ನು ನಿಯೋಜಿಸಲು ಕೋರಿದ್ದ ಅಸ್ಸಾಂ ಸರ್ಕಾರದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪೂರ್ವ ವಲಯ ಪೀಠ ಗುರುವಾರ (ಮಾ.2) ತಡೆಹಿಡಿದಿದೆ. ಈ ಆದೇಶವನ್ನು...

‘ಕರೂರು ದುರಂತದಲ್ಲಿ ಪಿತೂರಿ ಇದೆ’ ಈ ಘಟನೆಯಲ್ಲಿ ನನಗೂ ನ್ಯಾಯ ಬೇಕು: ಟಿವಿಕೆ ಮುಖ್ಯಸ್ಥ ನಟ, ರಾಜಕಾರಣಿ ವಿಜಯ್ ಆರೋಪ  

ಕರೂರಿನಲ್ಲಿ ನಡೆದ ದುರಂತ ಕಾಲ್ತುಳಿತ ಮತ್ತು ಅವರ ಕೊನೆಯ ಚಿತ್ರ ಜನನಾಯಗನ್ ಬಿ ಡುಗಡೆಯ ಹಿಂದೆ ಜಂಟಿ ಕುತಂತ್ರ ಮತ್ತು ಪಿತೂರಿ ಇದೆ ಎಂದು ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ ಆರೋಪಿಸಿದ್ದಾರೆ ಮತ್ತು...

ತೆಲಂಗಾಣ| ಗೋಮಾಂಸ ಮಾರಾಟ ಆರೋಪ; ಮುಸ್ಲಿಂ ಸಮುದಾಯದ ತಂದೆ-ಮಗನ ಮೇಲೆ ಹಲ್ಲೆ

ಹನುಮಾನ್ ಜಯಂತಿ ಸಂದರ್ಭದಲ್ಲಿ ಗೋಮಾಂಸ ಮಾರಾಟ ಮಾಡಿದ ಆರೋಪದ ಮೇಲೆ ಹಿಂದುತ್ವವಾದಿ ಗುಂಪೊಂದು 60 ವರ್ಷದ ಮುಸ್ಲಿಂ ವ್ಯಕ್ತಿ ಮತ್ತು ಆತನ ಹದಿಹರೆಯದ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ಜಗ್ತಿಯಾಲ್...

‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ...

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...

ಕೇರಳ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲ ಘೋಷಿಸಿದ ‘ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ’

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಆದಿವಾಸಿ, ದಲಿತ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಬದಿಗಿಟ್ಟಿವೆ ಎಂದು ಆರೋಪಿಸಿ, ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ (ಎಡಿಎಫ್) ಬುಧವಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ...

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಹೈಕೋರ್ಟ್ ನಿರ್ದೇಶನ

ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ....

ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳನ್ನು 'ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಬುಧವಾರ ಪ್ರತಿಭಟನಾಕಾರರು ಹಲವಾರು...

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೋಕ್, ಅಶೋಕ್ ಮಿತ್ತಲ್ ಗೆ ಅಧಿಕಾರ: ವರದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪನಾಯಕ ಹುದ್ದೆಯಿಂದ ಬದಲಾಯಿಸಲು ಮುಂದಾಗಿದ್ದು, ಇದು ಪಕ್ಷದೊಳಗಿನ ಆಂತರಿಕ ಬಿರುಕು ಉಂಟಾಗಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಮೇಲ್ಮನೆಯಲ್ಲಿ ಪಕ್ಷದ ಹೊಸ...