Homeಮುಖಪುಟಇಂಡಿಯಾ ಟುಡೇಗೆ ಮೋದಿ ಸಂದರ್ಶನ: ರವೀಶ್ ಕುಮಾರ್‍ರವರಿಗೆ ಯಾಕಿಲ್ಲ?

ಇಂಡಿಯಾ ಟುಡೇಗೆ ಮೋದಿ ಸಂದರ್ಶನ: ರವೀಶ್ ಕುಮಾರ್‍ರವರಿಗೆ ಯಾಕಿಲ್ಲ?

- Advertisement -
- Advertisement -

| ಪಿ.ಕೆ. ಮಲ್ಲನಗೌಡರ್ |

ಈಗ ಮೂರು ಹಂತದ ಚುನಾವಣೆ ಮುಗಿದಿದೆ. ಸದ್ಯ ಇಂಟರವಲ್ ಎನ್ನುವುದಾದರೆ, ಫಸ್ಟ್ ಹಾಫ್‍ನಲ್ಲಿ ದೇಶದ ಸಮಸ್ಯೆಗಳ ಕುರಿತು ಚಕಾರ ಎತ್ತದ, ತಾವು ಕೊಟ್ಟ ಭರವಸೆ ಕುರಿತು ಮಾತೇ ಆಡದ ಪ್ರಧಾನಿ ನರೇಂದ್ರ ಮೋದಿ ಬಾಲಾಕೋಟ್ ದಾಳಿ, ಪಾಕ್ ದ್ವೇಷ, ರಾಷ್ಟ್ರದ ಸುರಕ್ಷತೆ ಎಂದೆಲ್ಲ ಭಾಷಣ ಬಿಗಿದರಷ್ಟೆ. ಸೆಕೆಂಡ್ ಹಾಫ್‍ನಲ್ಲಿ ಹಿಂದೆಲ್ಲ ಅಡಿಯಾಳಿಗಿದ್ದ ಮಾಧ್ಯಮಗಳನ್ನೆಲ್ಲಾ ಸಾರಾಸಗಟಾಗಿ ಖರೀದಿಸಿದಂತೆ ಕಾಣುತ್ತಿದೆ.

ಮೂರು ಹಂತದ ಚುನಾವಣೆ ಮುಗಿದ ನಂತರ ಭಯ ಬಿದ್ದಂತಿರುವ ಬಿಜೆಪಿಯವರು ಬೇರೆ ಹಾದಿ ಹಿಡಿದಿದ್ದಾರೆ. ಅಲ್ಲಿ ಭಾವನಾತ್ಮಕ ಸಂಗತಿಗಳನ್ನು ಮುನ್ನೆಲೆಗೆ ತರಲು ಒದ್ದಾಡಿದ್ದಾರೆ. ಅಕ್ಷಯಕುಮಾರ್ ಸಂದರ್ಶನ ಅದರ ಭಾಗ. ಅದು ಯಾವಾಗ ಲೇವಡಿಗೆ ಒಳಗಾಯಿತೋ, ಆಗ ಅವರು ಕಾಶಿ ವಿಶ್ವನಾಥನ ಹೆಸರಲ್ಲಿ ಧಾರ್ಮಿಕವಾಗಿ ಹಿಂದೂಗಳ ಒಲವು ಪಡೆಯಲು ಎರಡು ದಿನ ‘ಹರ’ಸಾಹಸ ಮಾಡಿದ್ದಾರೆ!
ಇದೇ ವೇಳೆ, ತಾವು ಈವರೆಗೂ ಪತ್ರಿಕಾಗೋಷ್ಠಿ ನಡೆಸಿಲ್ಲ ಎಂಬ ಅಪವಾದವನ್ನು ತೊಡೆದು ಹಾಕಲು ಇಂಡಿಯಾ ಟುಡೇಯೊಂದಿಗೆ ಗಂಗಾ ನದಿಯ ತಟದಲ್ಲಿ ಒಂದೂವರೆ ತಾಸುಗಳ ಸಂದರ್ಶನ ನೀಡಿದ್ದಾರೆ. ಪ್ರಧಾನಿಯ ನಾಮಿನೇಶನ್ ನಂತರ ಅದನ್ನು ಪ್ರಮೋಟ್ ಮಾಡುತ್ತಲೇ ಇರುವ ಇಂಡಿಯಾ ಟುದೇ ಚಾನೆಲ್,‘unforgettable interview for Modi’ ಎಂದೆಲ್ಲ ಪೋಸು ಕೊಡುತ್ತಿದೆ. ಇವತ್ತು ಸಂಜೆ 7ಕ್ಕೆ ಆ ಸಂದರ್ಶನ ಪ್ರಸಾರವಾಗಲಿದ್ದು, ಅದರ ತುಣುಕುಗಳನ್ನು ಈಗ ಪ್ರದರ್ಶಿಸಲಾಗಿತ್ತಿದೆ.

‘ಇಂಡಿಯಾ ಟುಡೇ’ದ ಸಂಪಾದಕನೇ ಆಗಿರುವ ರಾಹುಲ ಕನ್ವಾಲ್ ತನ್ನ ಸಹಚರರೊಂದಿಗೆ ಈ ಸಂದರ್ಶನ ಮಾಡಿದ್ದು, ‘ಮೋದಿ ಪ್ರಶ್ನೆಗೆ ಉತ್ತರಿಸಲ್ಲ, ಪ್ರೆಸ್ ಅನ್ನು ಅವಾಯ್ಡ್ ಮಾಡ್ತಾರೆ ಎಂಬುದೆಲ್ಲ ಸುಳ್ಳು, ಅವರು ನಮ್ಮ ಪ್ರಶ್ನೆ ಮತ್ತು ಕೌಂಟರ್ ಪ್ರಶ್ನೆಗೆಲ್ಲ ಉತ್ತರಿಸಿದರು’ ಎಂದೆಲ್ಲ ಹೇಳುತ್ತಾರೆ. ನ್ಯೂಸ್ ಆ್ಯಂಕರ್ ಅಂಜನಾ ಕಶ್ಯಪ್ ಸ್ಟುಡಿಯೋದಲ್ಲಿ ಪ್ರಸಾರವಾಗಲಿರುವ ಈ ಸಂದರ್ಶನದ ಬಗ್ಗೆ ಬಿಲ್ಡ್‍ಅಪ್ ಕೊಡುತ್ತಲೇ, ಗಂಗಾ ತಟದಲ್ಲಿರುವ ರಾಹುಲ್ ಕನ್ವಲ್‍ರನ್ನು ಮಾತಾಡಸಿ, ಮೋದಿ ಮನಬಿಚ್ಚಿ ಮಾತಾಡಿದರೇ ಎಂದು ನಾಟಕೀಯ ಶೈಲಿಯಲ್ಲಿ ಪ್ರಶ್ನೆ ಮಾಡುತ್ತಾರೆ! ಅದಕ್ಕೆ ಗಂಗಾ ತಟದಿಂದ ಉತ್ತರಿಸುವ ರಾಹುಲ್ ಕನ್ವಲ್, ಮೋದಿ ಬಗ್ಗೆ ತಪ್ಪು ಅಭಿಪ್ರಾಯ ಇವೆಯಲ್ಲ, ಈ ಸಂದರ್ಶನದಿಂದ ಅವೆಲ್ಲ ದೂರವಾಗಲಿವೆ, ಮೋದಿ ಪ್ರಬುದ್ಧ ನಾಯಕ ಎಂಬಂತೆ ಹೊಗಳತೊಡಗುತ್ತಾರೆ!

7ಕ್ಕೆ ಸಂದರ್ಶನ ನೋಡೋಣ!

ಅರ್ನಾಬ್ ಕೂಗಾಡಿದ್ದು ಆಯ್ತು ಕೆಲಸ ಆಗಲಿಲ್ಲ… ಅಕ್ಷಯ್ ಬಂದ, ವರ್ಕ್‍ಔಟ್ ಆಗಲಿಲ್ಲ… ಈಗ ಇದ್ದುದರಲ್ಲಿ ವಿಶ್ವಾಸಾರ್ಹತೆ ಉಳಿಸಿಕೊಂಡಿದ್ದ ‘ಇಂಡಿಯಾ ಟುಡೆ’ ಯನ್ನು ಕೂಡ ಬಲೆಗೆ ಹಾಕಲಾಗಿದೆ! ಈ ಸಂದರ್ಶನವನ್ನೂ ಎಲ್ಲ ಭಾಷೆಗಳ ಪೇಯ್ಡ್ ಚಾನೆಲ್‍ಗಳೂ ಅನುವಾದಿಸಿ (ಸಬ್ ಟೈಟಲ್ ಹಾಕಿ) ಪ್ರಸಾರ ಮಾಡುವುದಂತೂ ಗ್ಯಾರಂಟಿ! ಈಗಾಗಲೇ ಅವಕ್ಕೆ ಸಂದರ್ಶನದ ಸ್ಕ್ರಿಪ್ಟ್ ಸಿಕ್ಕಿರಬಹುದು ಅಲ್ಲವೇ?

ಮೋದಿಯವರು ಅಕ್ಷಯ್ ಕುಮಾರ್‍ಗೆ ಸಂದರ್ಶನ ಕೊಟ್ಟ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ರವೀಶ್‍ಕುಮಾರ್‍ಗೂ ಸಂದರ್ಶನ ಕೊಡುತ್ತೀರಾ ಎಂಬ ಪ್ರಶ್ನೆ ವೈರಲ್ ಆಗಿದೆ. ಚೇಂಜ್.ಆರ್ಗ್‍ನಲ್ಲಿ ಸಾವಿರಾರು ಜನ ಪಿಟಿಷನ್‍ಗೆ ಸಹಿ ಮಾಡಿ ಮೋದಿಗೆ ಒತ್ತಡ ಹೇರುತ್ತಿದ್ದಾರೆ. ಆದರೆ ಅದಕ್ಕೆ ಪ್ರತಿಕ್ರಿಯಿಸದ ಮೋದಿ ಇಂಡಿಯಾ ಟುಡೇಗೆ ಸಂದರ್ಶನ ನೀಡಿ ಪಲಾಯನ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಈಗಷ್ಟೇ ಸೆಕೆಂಡ್ ಹಾಫ್ ಶುರು. ಈ ಭಾಗದ ನಾಟಕದಲ್ಲಿ ಮಾಧ್ಯಮಗಳೇ ದೊಡ್ಡ ಪೇಯ್ಡ್ ಅಭಿನಯಕಾರರು ಎಂಬುದು ನಾಚಿಕೆಗೇಡಿನ ವಿಷಯ! ಆದರೂ ಪೂರ್ತಿ ಸಂದರ್ಶನ ಪ್ರಸಾರವಾಗುವವರೆಗೂ ಕಾಯೋಣ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...