Homeಮುಖಪುಟಮತ ಎಣಿಕೆ ನಡೆಯುತ್ತಿರುವಾಗ ನಿಮಗೆ ತಿಳಿದಿರಬೇಕಾದ ಸಂಗತಿಗಳು

ಮತ ಎಣಿಕೆ ನಡೆಯುತ್ತಿರುವಾಗ ನಿಮಗೆ ತಿಳಿದಿರಬೇಕಾದ ಸಂಗತಿಗಳು

ಒಟ್ಟು ರಾಜ್ಯಗಳು & ಕೇಂದ್ರಾಡಳಿತ ಪ್ರದೇಶಗಳು: 36 (29 ರಾಜ್ಯಗಳು & 7 ಕೇಂದ್ರಾಡಳಿತ ಪ್ರದೇಶಗಳು)

- Advertisement -
- Advertisement -

||ನಾನು ಗೌರಿ ಡೆಸ್ಕ್||

ಮತ ಎಣಿಕೆ ನಡೆಯುತ್ತಿರುವ ದಿನ ನಿಮಗೆ ಈ ಸಂಖ್ಯೆಗಳು ನೆರವಾಗಬಲ್ಲವು
ಒಟ್ಟು ಲೋಕಸಭಾ ಸದಸ್ಯರು: 545
ಚುನಾಯಿತರಾಗುವ ಸದಸ್ಯರು: 543
ನಾಮನಿರ್ದೇಶಿತ ಆಂಗ್ಲೋ ಇಂಡಿಯನ್ ಸದಸ್ಯರು: 2
(ಕಳೆದ ಲೋಕಸಭೆಯಲ್ಲಿ ನಾಮಕರಣಗೊಂಡ ಭಾಜಪ ಪಕ್ಷದ ಇಬ್ಬರು ಸದಸ್ಯರೆಂದರೆ ಕೇರಳದ ರಿಚರ್ಡ್ ಹೇ ಮ್ತು ಪ.ಬಂಗಾಳದ ಜಾರ್ಜ್ ಬೇಕರ್)

ಈ ಸಾರಿ ಚುನಾವಣೆ ನಡೆದದ್ದು: 542 ಕ್ಷೇತ್ರಗಳು
ತಮಿಳುನಾಡಿನ ವೆಲ್ಲೂರು ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ಮುಂದೂಡಲಾಗಿದೆ. ಡಿಎಂಕೆ ಅಭ್ಯರ್ಥಿ ಕಾತಿರ್ ಆನಂದ್ ಅವರ ಕಟ್ಟಡದಲ್ಲಿ ಭಾರೀ ಪ್ರಮಾಣದ ಹಣ ಪತ್ತೆಯಾಯಿತು ಎನ್ನುವ ಕಾರಣಕ್ಕೆ ಚುನಾವಣಾ ಆಯೋಗವು ಈ ತೀರ್ಮಾನ ತೆಗೆದುಕೊಂಡಿದೆ. ಅಲ್ಲಿ ಏಪ್ರಿಲ್ 18ರಂದು ಮತದಾನ ನಡೆಯಬೇಕಿತ್ತು.

ಇದನ್ನೂ ಓದಿ: ಎಕ್ಸಿಟ್ ಪೋಲ್ ಕುರಿತು

ದೇಶದ ಒಟ್ಟು ಮತದಾನ ಕೇಂದ್ರಗಳು: 10.35 ಲಕ್ಷ
ಮತದಾನದ ಹಂತಗಳು: ಏಪ್ರಿಲ್ 11ರಿಂದ ಮೇ 19ರವರೆಗೆ 7 ಹಂತಗಳು
ಜೊತೆ ಜೊತೆಗೇ ಅಸೆಂಬ್ಲಿ ಚುನಾವಣೆಯೂ ನಡೆದ ರಾಜ್ಯಗಳು: ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ, ಒರಿಸ್ಸಾ ಮತ್ತು ಸಿಕ್ಕಿಂ.
(ತೆಲಂಗಾಣಕ್ಕೂ ಈಗಲೇ ನಡೆಯಬೇಕಿತ್ತು, ಆದರೆ ಅದರ ಮುಖ್ಯಮಂತ್ರಿ ಕೆ.ಚಂದ್ರಶೇಖರರಾವ್ ಬೇಗನೇ ಅಸೆಂಬ್ಲಿ ವಿಸರ್ಜಿಸಿದ್ದರಿಂದ 6 ತಿಂಗಳು ಮುಂಚೆಯೇ ಅಲ್ಲಿ ಚುನಾವಣೆ ನಡೆಯಿತು)
ಉಪಚುನಾವಣೆಗಳು: ಇದಲ್ಲದೇ 13 ರಾಜ್ಯಗಳ 46 ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆಗಳೂ ನಡೆಯುತ್ತಿವೆ. ಅವುಗಳಲ್ಲಿ ಕರ್ನಾಟಕದ ಕುಂದಗೋಳ ಮತ್ತು ಕಲಬುರ್ಗಿಯ ಚಿಂಚೋಳಿ ಕ್ಷೇತ್ರಗಳೂ ಇವೆ.

2014ರಲ್ಲಿದ್ದ 9 ಲಕ್ಷ ಮತದಾನ ಕೇಂದ್ರಗಳಿಂದ 2019ರಲ್ಲಿ ಸುಮಾರು 10.35 ಲಕ್ಷ ಮತದಾನ ಕೇಂದ್ರಗಳಿಗೆ ಏರಿಕೆಯಾಗಿದೆ.
ಅದೇ ರೀತಿ 2014ರಲ್ಲಿದ್ದ 81.4 ಕೋಟಿ ಮತದಾರರ ಸಂಖ್ಯೆಯೂ 2019ರ ಹೊತ್ತಿಗೆ 90 ಕೋಟಿಗೆ ಏರಿಕೆಯಾಗಿದೆ. ಅವರಲ್ಲಿ 18ರಿಂದ 19 ವಯಸ್ಸಿನವರೇ 1.5 ಕೋಟಿ.

ಈ ಸಾರಿ ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಂಡಿರುವ ತೃತೀಯ ಲಿಂಗಿಗಳ ಸಂಖ್ಯೆ: 38,000
ಮೊಟ್ಟ ಮೊದಲ ಬಾರಿಗೆ ದೇಶದ ಎಲ್ಲಾ ಎಲೆಕ್ಟ್ರಾನಿಕ್ ಮತ ಯಂತ್ರಗಳಿಗೆ ವಿವಿಪ್ಯಾಟ್ ಜೋಡಿಸಲಾಗಿದೆ.
ವಿವಿಪ್ಯಾಟ್ ಎಂದರೆ (Voter verified Paper Audit Trial ಮತಯಂತ್ರದಲ್ಲಿ ಮತದಾರರು ಮತ ಹಾಕಿದ ನಂತರ ಅದಕ್ಕೆ ಜೋಡಿಸಿದ ಡಬ್ಬದಲ್ಲಿ, ಅವರು ಯಾರಿಗೆ ಮತ ಹಾಕಿದ್ದಾರೋ, ಅವರಿಗೇ ಮತ ಹಾಕಲಾಗಿದೆಯಾ ಇಲ್ಲವಾ ಎಂಬುದನ್ನು ಒಂದು ಮುದ್ರಿತ ಚೀಟಿಯಲ್ಲಿ ತೋರಿಸಲಾಗುತ್ತದೆ. ಆ ಚೀಟಿಯು ಪಾರದರ್ಶಕ ಗಾಜಿನ ಒಳಗೆ 7 ಸೆಕೆಂಡುಗಳ ಕಾಲ ಇರುತ್ತದೆ.
ಈ ಸಾರಿ ಎಲ್ಲಾ ಇವಿಎಂಗಳಲ್ಲೂ ಅಭ್ಯರ್ಥಿಯ ಭಾವಚಿತ್ರವನ್ನೂ ಮುದ್ರಿಸಲಾಗಿದೆ.

ಮತ ಎಣಿಕೆ ಕೇಂದ್ರಗಳು: 542

ನೋಡಿ: ಚುನಾವಣಾ ಆಯೋಗದ ವೆಬ್ ಸೈಟ್

ಮತ ಎಣಿಕೆ ಹೇಗೆ ನಡೆಯುತ್ತದೆ?
ಸಾಮಾನ್ಯವಾಗಿ ಮೊದಲು ಅಂಚೆ ಮತಗಳ ಎಣಿಕೆ, ನಂತರ ಯಾವುದಾದರೂ ಒಂದು ಮತಯಂತ್ರದ ಮತ ಎಣಿಕೆಗೂ ವಿವಿಪ್ಯಾಟ್‍ನಲ್ಲಿನ ಮತಚೀಟಿಗಳ ಎಣಿಕೆಗೂ ತಾಳೆ ಮಾಡುವುದು, ಆ ನಂತರ ಎಲ್ಲಾ ಮತಯಂತ್ರಗಳಲ್ಲಿನ ಮತಗಳ ಎಣಿಗೆ ಮಾಡುವುದು ಹೀಗೆ ನಡೆಯುತ್ತಿತ್ತು.
ಆದರೆ, ಈ ಸಾರಿ ಆಯೋಗ ಬೇರೆ ಕ್ರಮವನ್ನು ಅನುಸರಿಸಲಿದೆ. ಅಂಚೆ ಮತಗಳ ಎಣಿಕೆಯ ಜೊತೆಗೇ ಮತಯಂತ್ರಗಳ ಎಣಿಕೆಯೂ ಆರಂಭವಾಗುತ್ತದೆ. ಇನ್ನೆರಡು ಸುತ್ತು ಮತಯಂತ್ರಗಳ ಎಣಿಕೆ ಇದೆ ಎನ್ನುವಾಗ ನಿಲ್ಲಿಸಿ, ಅಂಚೆ ಮತಗಳ ಎಣಿಕೆ ಸಂಪೂರ್ಣವಾಗಿದೆಯೇ ಪರಿಶೀಲಿಸುತ್ತಾರೆ. ಅಂಚೆ ಮತಗಳ ಎಣಿಕೆ ಮುಗಿದಿದ್ದರೆ ಉಳಿದೆರಡು ಸುತ್ತುಗಳನ್ನೂ ಮುಗಿಸಲಾಗುತ್ತದೆ. ಆ ನಂತರ ಪ್ರತಿ ಅಸೆಂಬ್ಲಿಗೆ 5 ವಿವಿಪ್ಯಾಟ್ ಮತಚೀಟಿಗಳ ಎಣಿಕೆ ಮಾಡಿ, ಆ ಮತಗಳಿಗೂ ಸಂಬಂಧಿಸಿದ ಮತಯಂತ್ರದಲ್ಲಿನ ಮತಗಳಿಗೂ ತಾಳೆಯಾಗುತ್ತದಾ ಎಂಬುದನ್ನು ಪರಿಶೀಲಿಸುತ್ತಾರೆ.
ಆ ನಂತರ ಮತ ಎಣಿಕೆ ಪ್ರಕ್ರಿಯೆಯನ್ನು ಮುಗಿಸುತ್ತಾರೆ.
ಒಂದು ವೇಳೆ ಪ್ರತಿ ಅಸೆಂಬ್ಲಿ ಕ್ಷೇತ್ರದ ತಲಾ 5 ವಿವಿಪ್ಯಾಟ್ ಮತಚೀಟಿಗಳನ್ನು ಎಣಿಸಿದಾಗ, ಯಾವುದಾದರೂ ಒಂದರಲ್ಲಿ ತಾಳೆಯಾಗದಿದ್ದರೆ ಏನು ಮಾಡಬೇಕು ಎಂಬ ಬಗ್ಗೆ ಸ್ಪಷ್ಟತೆಯಿಲ್ಲ. ಹಾಗಿರುವಾಗ, ಆ ಲೋಕಸಭಾ ಕ್ಷೇತ್ರದ ಎಲ್ಲಾ ವಿವಿಪ್ಯಾಟ್‍ಗಳ ಮತಚೀಟಿಗಳನ್ನೂ ಎಣಿಕೆ ಮಾಡಬೇಕು ಎಂಬ ವಿರೋಧ ಪಕ್ಷಗಳ ಮನವಿಯನ್ನು ಚುನಾವಣಾ ಆಯೋಗ ತಳ್ಳಿ ಹಾಕಿದೆ.


ಹಾಗೆಯೇ ಮೊದಲು ವಿವಿಪ್ಯಾಟ್ ಮತಚೀಟಿಗಳ ಎಣಿಕೆ ಮುಗಿಸಿ, ನಂತರ ಮತಯಂತ್ರ (ಇವಿಎಂ)ಗಳ ಮತಗಳನ್ನು ಎಣಿಸಿಬೇಕು ಎಂಬ ಮನವಿಯನ್ನೂ ಆಯೋಗ ತಳ್ಳಿ ಹಾಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...