Homeಮುಖಪುಟಮತ ಎಣಿಕೆ ನಡೆಯುತ್ತಿರುವಾಗ ನಿಮಗೆ ತಿಳಿದಿರಬೇಕಾದ ಸಂಗತಿಗಳು

ಮತ ಎಣಿಕೆ ನಡೆಯುತ್ತಿರುವಾಗ ನಿಮಗೆ ತಿಳಿದಿರಬೇಕಾದ ಸಂಗತಿಗಳು

ಒಟ್ಟು ರಾಜ್ಯಗಳು & ಕೇಂದ್ರಾಡಳಿತ ಪ್ರದೇಶಗಳು: 36 (29 ರಾಜ್ಯಗಳು & 7 ಕೇಂದ್ರಾಡಳಿತ ಪ್ರದೇಶಗಳು)

- Advertisement -
- Advertisement -

||ನಾನು ಗೌರಿ ಡೆಸ್ಕ್||

ಮತ ಎಣಿಕೆ ನಡೆಯುತ್ತಿರುವ ದಿನ ನಿಮಗೆ ಈ ಸಂಖ್ಯೆಗಳು ನೆರವಾಗಬಲ್ಲವು
ಒಟ್ಟು ಲೋಕಸಭಾ ಸದಸ್ಯರು: 545
ಚುನಾಯಿತರಾಗುವ ಸದಸ್ಯರು: 543
ನಾಮನಿರ್ದೇಶಿತ ಆಂಗ್ಲೋ ಇಂಡಿಯನ್ ಸದಸ್ಯರು: 2
(ಕಳೆದ ಲೋಕಸಭೆಯಲ್ಲಿ ನಾಮಕರಣಗೊಂಡ ಭಾಜಪ ಪಕ್ಷದ ಇಬ್ಬರು ಸದಸ್ಯರೆಂದರೆ ಕೇರಳದ ರಿಚರ್ಡ್ ಹೇ ಮ್ತು ಪ.ಬಂಗಾಳದ ಜಾರ್ಜ್ ಬೇಕರ್)

ಈ ಸಾರಿ ಚುನಾವಣೆ ನಡೆದದ್ದು: 542 ಕ್ಷೇತ್ರಗಳು
ತಮಿಳುನಾಡಿನ ವೆಲ್ಲೂರು ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ಮುಂದೂಡಲಾಗಿದೆ. ಡಿಎಂಕೆ ಅಭ್ಯರ್ಥಿ ಕಾತಿರ್ ಆನಂದ್ ಅವರ ಕಟ್ಟಡದಲ್ಲಿ ಭಾರೀ ಪ್ರಮಾಣದ ಹಣ ಪತ್ತೆಯಾಯಿತು ಎನ್ನುವ ಕಾರಣಕ್ಕೆ ಚುನಾವಣಾ ಆಯೋಗವು ಈ ತೀರ್ಮಾನ ತೆಗೆದುಕೊಂಡಿದೆ. ಅಲ್ಲಿ ಏಪ್ರಿಲ್ 18ರಂದು ಮತದಾನ ನಡೆಯಬೇಕಿತ್ತು.

ಇದನ್ನೂ ಓದಿ: ಎಕ್ಸಿಟ್ ಪೋಲ್ ಕುರಿತು

ದೇಶದ ಒಟ್ಟು ಮತದಾನ ಕೇಂದ್ರಗಳು: 10.35 ಲಕ್ಷ
ಮತದಾನದ ಹಂತಗಳು: ಏಪ್ರಿಲ್ 11ರಿಂದ ಮೇ 19ರವರೆಗೆ 7 ಹಂತಗಳು
ಜೊತೆ ಜೊತೆಗೇ ಅಸೆಂಬ್ಲಿ ಚುನಾವಣೆಯೂ ನಡೆದ ರಾಜ್ಯಗಳು: ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ, ಒರಿಸ್ಸಾ ಮತ್ತು ಸಿಕ್ಕಿಂ.
(ತೆಲಂಗಾಣಕ್ಕೂ ಈಗಲೇ ನಡೆಯಬೇಕಿತ್ತು, ಆದರೆ ಅದರ ಮುಖ್ಯಮಂತ್ರಿ ಕೆ.ಚಂದ್ರಶೇಖರರಾವ್ ಬೇಗನೇ ಅಸೆಂಬ್ಲಿ ವಿಸರ್ಜಿಸಿದ್ದರಿಂದ 6 ತಿಂಗಳು ಮುಂಚೆಯೇ ಅಲ್ಲಿ ಚುನಾವಣೆ ನಡೆಯಿತು)
ಉಪಚುನಾವಣೆಗಳು: ಇದಲ್ಲದೇ 13 ರಾಜ್ಯಗಳ 46 ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆಗಳೂ ನಡೆಯುತ್ತಿವೆ. ಅವುಗಳಲ್ಲಿ ಕರ್ನಾಟಕದ ಕುಂದಗೋಳ ಮತ್ತು ಕಲಬುರ್ಗಿಯ ಚಿಂಚೋಳಿ ಕ್ಷೇತ್ರಗಳೂ ಇವೆ.

2014ರಲ್ಲಿದ್ದ 9 ಲಕ್ಷ ಮತದಾನ ಕೇಂದ್ರಗಳಿಂದ 2019ರಲ್ಲಿ ಸುಮಾರು 10.35 ಲಕ್ಷ ಮತದಾನ ಕೇಂದ್ರಗಳಿಗೆ ಏರಿಕೆಯಾಗಿದೆ.
ಅದೇ ರೀತಿ 2014ರಲ್ಲಿದ್ದ 81.4 ಕೋಟಿ ಮತದಾರರ ಸಂಖ್ಯೆಯೂ 2019ರ ಹೊತ್ತಿಗೆ 90 ಕೋಟಿಗೆ ಏರಿಕೆಯಾಗಿದೆ. ಅವರಲ್ಲಿ 18ರಿಂದ 19 ವಯಸ್ಸಿನವರೇ 1.5 ಕೋಟಿ.

ಈ ಸಾರಿ ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಂಡಿರುವ ತೃತೀಯ ಲಿಂಗಿಗಳ ಸಂಖ್ಯೆ: 38,000
ಮೊಟ್ಟ ಮೊದಲ ಬಾರಿಗೆ ದೇಶದ ಎಲ್ಲಾ ಎಲೆಕ್ಟ್ರಾನಿಕ್ ಮತ ಯಂತ್ರಗಳಿಗೆ ವಿವಿಪ್ಯಾಟ್ ಜೋಡಿಸಲಾಗಿದೆ.
ವಿವಿಪ್ಯಾಟ್ ಎಂದರೆ (Voter verified Paper Audit Trial ಮತಯಂತ್ರದಲ್ಲಿ ಮತದಾರರು ಮತ ಹಾಕಿದ ನಂತರ ಅದಕ್ಕೆ ಜೋಡಿಸಿದ ಡಬ್ಬದಲ್ಲಿ, ಅವರು ಯಾರಿಗೆ ಮತ ಹಾಕಿದ್ದಾರೋ, ಅವರಿಗೇ ಮತ ಹಾಕಲಾಗಿದೆಯಾ ಇಲ್ಲವಾ ಎಂಬುದನ್ನು ಒಂದು ಮುದ್ರಿತ ಚೀಟಿಯಲ್ಲಿ ತೋರಿಸಲಾಗುತ್ತದೆ. ಆ ಚೀಟಿಯು ಪಾರದರ್ಶಕ ಗಾಜಿನ ಒಳಗೆ 7 ಸೆಕೆಂಡುಗಳ ಕಾಲ ಇರುತ್ತದೆ.
ಈ ಸಾರಿ ಎಲ್ಲಾ ಇವಿಎಂಗಳಲ್ಲೂ ಅಭ್ಯರ್ಥಿಯ ಭಾವಚಿತ್ರವನ್ನೂ ಮುದ್ರಿಸಲಾಗಿದೆ.

ಮತ ಎಣಿಕೆ ಕೇಂದ್ರಗಳು: 542

ನೋಡಿ: ಚುನಾವಣಾ ಆಯೋಗದ ವೆಬ್ ಸೈಟ್

ಮತ ಎಣಿಕೆ ಹೇಗೆ ನಡೆಯುತ್ತದೆ?
ಸಾಮಾನ್ಯವಾಗಿ ಮೊದಲು ಅಂಚೆ ಮತಗಳ ಎಣಿಕೆ, ನಂತರ ಯಾವುದಾದರೂ ಒಂದು ಮತಯಂತ್ರದ ಮತ ಎಣಿಕೆಗೂ ವಿವಿಪ್ಯಾಟ್‍ನಲ್ಲಿನ ಮತಚೀಟಿಗಳ ಎಣಿಕೆಗೂ ತಾಳೆ ಮಾಡುವುದು, ಆ ನಂತರ ಎಲ್ಲಾ ಮತಯಂತ್ರಗಳಲ್ಲಿನ ಮತಗಳ ಎಣಿಗೆ ಮಾಡುವುದು ಹೀಗೆ ನಡೆಯುತ್ತಿತ್ತು.
ಆದರೆ, ಈ ಸಾರಿ ಆಯೋಗ ಬೇರೆ ಕ್ರಮವನ್ನು ಅನುಸರಿಸಲಿದೆ. ಅಂಚೆ ಮತಗಳ ಎಣಿಕೆಯ ಜೊತೆಗೇ ಮತಯಂತ್ರಗಳ ಎಣಿಕೆಯೂ ಆರಂಭವಾಗುತ್ತದೆ. ಇನ್ನೆರಡು ಸುತ್ತು ಮತಯಂತ್ರಗಳ ಎಣಿಕೆ ಇದೆ ಎನ್ನುವಾಗ ನಿಲ್ಲಿಸಿ, ಅಂಚೆ ಮತಗಳ ಎಣಿಕೆ ಸಂಪೂರ್ಣವಾಗಿದೆಯೇ ಪರಿಶೀಲಿಸುತ್ತಾರೆ. ಅಂಚೆ ಮತಗಳ ಎಣಿಕೆ ಮುಗಿದಿದ್ದರೆ ಉಳಿದೆರಡು ಸುತ್ತುಗಳನ್ನೂ ಮುಗಿಸಲಾಗುತ್ತದೆ. ಆ ನಂತರ ಪ್ರತಿ ಅಸೆಂಬ್ಲಿಗೆ 5 ವಿವಿಪ್ಯಾಟ್ ಮತಚೀಟಿಗಳ ಎಣಿಕೆ ಮಾಡಿ, ಆ ಮತಗಳಿಗೂ ಸಂಬಂಧಿಸಿದ ಮತಯಂತ್ರದಲ್ಲಿನ ಮತಗಳಿಗೂ ತಾಳೆಯಾಗುತ್ತದಾ ಎಂಬುದನ್ನು ಪರಿಶೀಲಿಸುತ್ತಾರೆ.
ಆ ನಂತರ ಮತ ಎಣಿಕೆ ಪ್ರಕ್ರಿಯೆಯನ್ನು ಮುಗಿಸುತ್ತಾರೆ.
ಒಂದು ವೇಳೆ ಪ್ರತಿ ಅಸೆಂಬ್ಲಿ ಕ್ಷೇತ್ರದ ತಲಾ 5 ವಿವಿಪ್ಯಾಟ್ ಮತಚೀಟಿಗಳನ್ನು ಎಣಿಸಿದಾಗ, ಯಾವುದಾದರೂ ಒಂದರಲ್ಲಿ ತಾಳೆಯಾಗದಿದ್ದರೆ ಏನು ಮಾಡಬೇಕು ಎಂಬ ಬಗ್ಗೆ ಸ್ಪಷ್ಟತೆಯಿಲ್ಲ. ಹಾಗಿರುವಾಗ, ಆ ಲೋಕಸಭಾ ಕ್ಷೇತ್ರದ ಎಲ್ಲಾ ವಿವಿಪ್ಯಾಟ್‍ಗಳ ಮತಚೀಟಿಗಳನ್ನೂ ಎಣಿಕೆ ಮಾಡಬೇಕು ಎಂಬ ವಿರೋಧ ಪಕ್ಷಗಳ ಮನವಿಯನ್ನು ಚುನಾವಣಾ ಆಯೋಗ ತಳ್ಳಿ ಹಾಕಿದೆ.


ಹಾಗೆಯೇ ಮೊದಲು ವಿವಿಪ್ಯಾಟ್ ಮತಚೀಟಿಗಳ ಎಣಿಕೆ ಮುಗಿಸಿ, ನಂತರ ಮತಯಂತ್ರ (ಇವಿಎಂ)ಗಳ ಮತಗಳನ್ನು ಎಣಿಸಿಬೇಕು ಎಂಬ ಮನವಿಯನ್ನೂ ಆಯೋಗ ತಳ್ಳಿ ಹಾಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...