Homeನ್ಯಾಯ ಪಥಶಿವಮೊಗ್ಗ ಕೊತಕೊತ ನಿಗಿನಿಗಿ ನಿಜವೆ!

ಶಿವಮೊಗ್ಗ ಕೊತಕೊತ ನಿಗಿನಿಗಿ ನಿಜವೆ!

- Advertisement -
- Advertisement -

ಈ ವಿಷಮ ಸಮಯದಲ್ಲಿ ಶಿವಮೊಗ್ಗ ಕಡೆಯಿಂದ ಬಂದ ಸುದ್ದಿಗಳು ಶಾನೆ ಕುತೂಹಲಕರವಾಗಿವೆಯಲ್ಲಾ. ಸ್ವಾತಂತ್ರ್ಯ ದಿನಾಚರಣೆಗೆ ಮುನ್ನವೇ ಮುನಿಸಿಪಾಲಿಟಿಯವರು ಬಿದಿರುದಬ್ಬೆ ಮತ್ತು ಖಾದಿಯಲ್ಲದ ನಿಗಿನಿಗಿ ಬಾವುಟ ಹಂಚಿದರು. ಜಿಲ್ಲಾ ಮೈದಾನವಲ್ಲದೆ ಶಾಲಾ ಕಾಲೇಜಿನ ದಿಕ್ಕಿನಿಂದ ದೇಶ ಘೋಷಣೆಗಳು ಮಕ್ಕಳ ಗಂಟಲಿಂದ ಮುಗಿಲು ಮುಟ್ಟಿದವು. ಅಷ್ಟರಲ್ಲಿ ಬಿಜೆಪಿಗಳ ಕಡೆಯವರು ಆಳೆತ್ತರದ ಸಾವರ್ಕರ್ ಪ್ಲೆಕ್ಸ್ ತಂದು ಅಮೀರ್ ಅಹಮದ್ ಸರ್ಕಲ್ಲಲ್ಲಿ ಇಟ್ಟರು. ಟಿಪ್ಪು ಅಭಿಮಾನಿಗಳು ಅದನ್ನ ಕಿತ್ತೆಸೆದರು. ಅವರ ದೃಷ್ಟಿಯಲ್ಲಿ ಟಿಪ್ಪು ಸ್ವಾತಂತ್ರ ಹೋರಾಟಗಾರನಲ್ಲದಿದ್ದರೆ ಸಾವರ್ಕರನು ಸ್ವಾತಂತ್ರ ಹೋರಾಟಗಾರನಲ್ಲ ಎಂಬುದು. ಇದಕ್ಕೂ ಮೊದಲೆ ಶಿವಮೊಗ್ಗದ ಮಾಲ್‌ನಲ್ಲಿ ಅಳವಡಿಸಿದ ಸಾವರಕರನ ಫೋಟೋ ವಿರುದ್ಧ ದೇಶಪ್ರೇಮಿಯೊಬ್ಬ ಪ್ರತಿಭಟಿಸಿದ್ದ. ಇದೇ ಪ್ರತಿಭಟನೆ ಅಮೀರ್ ಅಹಮದ್ ಸರ್ಕಲ್ಲಿಗೂ ಮರುದಿನ ವ್ಯಾಪಿಸಿದ್ದರಿಂದ ಸೆಕ್ಷನ್ 144 ಜಾರಿಯಾಗಿತ್ತು. ಇತ್ತ ಕುವೆಂಪು ರಂಗಮಂದಿರದಲ್ಲಿ ನಾಟಕ ಆಡಲು ಬಣ್ಣ ಬಳಿದುಕೊಂಡು ಕೂತಿದ್ದವರಿಗೆ ಸೆಕ್ಷನ್ 144 ಜಾರಿಯಾಗಿದೆ ಮನೆಗೆ ಹೋಗಿ ಎಂಬ ಅಪ್ಪಣೆ ಬಂತು. ನಾಟಕ ನೋಡಲು ಬಂದಿದ್ದವರೆಲ್ಲಾ, ಈಶ್ವರಪ್ಪ ಮನೆಗೆ ಹೋಗದ ಹೊರತು ಶಿವಮೊಗ್ಗಕ್ಕೆ ನೆಮ್ಮದಿಯಿಲ್ಲ ಎಂದು ಗೊಣಗಿಕೊಂಡು, ಮತಾಂಧ ಮೆದುಳಲ್ಲಿ ಕಲೆ, ಸಾಹಿತ್ಯ, ಸಂಗೀತಕ್ಕೆ ಜಾಗವಿರುವುದಿಲ್ಲ ಎಂದು ಮಾತನಾಡಿಕೊಂಡು ಮನೆಸೇರಿದರಂತಲ್ಲಾ, ಥೂತ್ತೇರಿ.
****

ಶಿವಮೊಗ್ಗದ ಸ್ಥಿತಿ ಕುರಿತು ದೂರದೂರಿನ ಜನಗಳು ಅಲ್ಲಿ ಏನೋ ಆಗಬಾರದ್ದು ಆಗುತ್ತಿದೆ ಎಂದು ಆತಂಕಗೊಂಡಿರುವುದು ಸಹಜವಂತಲ್ಲಾ. ಏಕೆಂದರೆ ಟಿವಿ ಮಾಧ್ಯಮಗಳು ಶಿವಮೊಗ್ಗದ ನಿಗಿನಿಗಿ ಶಿವಮೊಗ್ಗ ಕೊತಕೊತ. ಬೂದಿ ಮುಚ್ಚಿದ ಕೆಂಡ ಶಿವಮೊಗ್ಗ, ಆತಂಕದಲ್ಲಿ ಶಿವಮೊಗ್ಗ ಎಂಬ ಅಬ್ಬರಿಸುತ್ತಿರುವುದನ್ನು ಕೇಳಿ ಹೊರಬಂದು ನೋಡಿದರೆ ಆ ಮಲೆನಾಡಿನ ಹೆಮ್ಮೆಯ ನಗರ ಕಾಡಿನಷ್ಟೇ ಪ್ರಶಾಂತವಾಗಿದ್ದು ಆ ಊರಿನ ಜನಗಳಿಗೆ ಅಚ್ಚರಿ ಮೂಡಿಸಿದೆಯಂತಲ್ಲಾ. ಹಾಗಾದರೆ ಟಿವಿಯವರು ಅರಚುತ್ತಿರುವ ನಿಗಿನಿಗಿ ಕೊತಕೊತ ಎಲ್ಲಿದೆ ಎಂದು ನೋಡಲಾಗಿ ಅದು ಟಿವಿಯವರ ಹೊಟ್ಟೆಪಾಡಿನ ಸದ್ದೆಂಬುದು ಅರಿವಾಗಿ ಶಿವಮೊಗ್ಗದ ಜನ ಬಿದ್ದುಬಿದ್ದು ನಕ್ಕರಂತಲ್ಲಾ. ಮುಖ್ಯವಾಗಿ ಟಿವಿಯವರು ಈವರೆಗೂ ತೋರುತ್ತಿರುವುದು ಅಮೀರ್ ಅಹಮದ್ ಸರ್ಕಲ್ಲಿನಲ್ಲಿ ಪ್ಲೆಕ್ಸ್ ಕಿತ್ತಾಕಿದ ಕಿತ್ತಾಟವನ್ನು. ಅದು ಬಿಟ್ಟರೆ ಎಲ್ಲ ಬಡಾವಣೆಗಳಲ್ಲೂ ಕೂಡ, ಅದೆಲ್ಲೊ ದೂರದಲ್ಲಿ ನಡೆದ ಈಶ್ವರಪ್ಪನ ಕಡೆಯವರು ಮತ್ತು ಕೆಲ ಕಿಡಿಗೇಡಿ ಮುಸ್ಲಿಮರ ಪುಂಡಾಟ ಎನ್ನುತ್ತ ಗೋಬಿ ಮಂಚೂರಿ, ಪಾನಿಪೂರಿ, ಇಡ್ಲಿ ಗಾಡಿಯವರೆಲ್ಲಾ ತಮ್ಮ ಜೀವನಾಧಾರದ ಆ ದಿನದ ಸಾಮಗ್ರಿಯನ್ನ ಚರಂಡಿಗೆ ಸುರಿಯುತ್ತ ಶಾಪ ಹಾಕುತ್ತಿದ್ದಾರಂತಲ್ಲಾ. ಪೊಲೀಸರಿಗೆ ಸಂಬಳ ಬರುತ್ತದೆ, ರಾಜಕಾರಣಿಗಳ ಖಜಾನೆಗೆ ರಾಜ ಕಾಲುವೆಗಳೆ ಇವೆ. ಇವರೆಲ್ಲಾ ಆ ದಿನ ದುಡಿದು ಅದರಲ್ಲಧ ಪಿಗ್ಮಿ ಕಟ್ಟಿ ಉಳಿದುದರಲ್ಲಿ ಜೀವನದ ಗಾಡಿ ಎಳೆಯುವವರಾಗಿದ್ದರೆ ಎಷ್ಟು ಚೆನ್ನಾಗಿತ್ತು ಎಂಬುದು ದುಡಿದು ತಿನ್ನುವವರ ಅಳಲಾಗಿದೆಯಂತಲ್ಲಾ, ಥೂತ್ತೇರಿ.


*****

ಶಿವಮೊಗ್ಗ ಜಿಲ್ಲೆಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಭದ್ರಾವತಿಯ ಚೂರಿ ಇರಿತದ ವಿಷಯದಲ್ಲಿ ಚೂರಿ ಹಾಕಿದವನು ಮತ್ತು ಹಾಕಿಸಿಕೊಂಡವನು ಜೊತೆಯಲ್ಲಿ ಕುಳಿತು ಜೂಜಾಡುತ್ತಿರುವ ಫೋಟೋ ತೋರಿಸಿದ ಶಾಸಕ ಸಂಗಮೇಶ್ ಇದು ಮತೀಯ ಗಲಭೆ ಎಂದಾದರೆ ನಾನು ಶಾಸಕ ಸ್ಥಾನ ಬಿಡುತ್ತೇನೆ ಎಂದರೂ ಬಿಜೆಪಿಗಳು ಬಿಡುತ್ತಿಲ್ಲವಂತಲ್ಲಾ. ಯಾವತ್ತೂ ಸತ್ಯ ಸಂಗತಿಗಳ ವಿರುದ್ಧವೇ ಹೋರಾಡುವ ಪ್ರವೃತ್ತಿ ಬೆಳೆಸಿಕೊಂಡ ಫಲವಾಗಿ ಮಡಿಕೇರಿಯಲ್ಲಿ ಸಿದ್ದರಾಮಯ್ಯ ಕಳಲೆ ತಿಂದಿದ್ದು ಎಂದು ಗೊತ್ತಾಗಿದ್ದರು ಅದು ಕೋಳಿ ಎಂದು ಕೂಗುತ್ತಿವೆಯಂತಲ್ಲಾ. ಇದನ್ನ ಕೇಳಿಸಿಕೊಂಡ ಕೊಡಗಿನ ಜನ ಒಳಗೊಳಗೇ ನಗುತ್ತ ಆ ಸಿದ್ದರಾಮಯ್ಯ ಏನು ತಿಂದರೆ ನಮಗೇನು ನಮ್ಮ ಸಂಸ್ಕೃತಿಯಲ್ಲೇ ಮಾಂಸ ಮಡ್ಡಿ ಹಾಸುಹೊಕ್ಕಾಗಿದೆ, ಅದರಲ್ಲೂ ನಮ್ಮ ಪ್ರಿಯ ಆಹಾರವಾದ ವರಹ ಮಾಂಸ ಭಕ್ಷಣೆ ಮಾಡಿಲ್ಲವಲ್ಲಾ, ಅಷ್ಟಕ್ಕೂ ಈಗಿನ ಕೋಳಿ ಹಿಂದಿನ ಕೋಳಿಯಂತಲ್ಲಾ ಎಂದರಂತಲ್ಲಾ. ಸಿದ್ದರಾಮಯ್ಯ ತಿಂದ ಮಾಂಸದ ಬಗ್ಗೆ ತೀರಾ ತಲೆಕೆಡಿಸಿಕೊಂಡಿರುವ ಬಿಜೆಪಿಗಳು ಮತ್ತು ಟಿವಿ ಜನರನ್ನ ಕುರಿತೇ ನಮ್ಮ ಸರ್ವಜ್ಞ ಶತಮಾನದ ಹಿಂದೆಯೇ ವಚನ ಕಟ್ಟಿದ್ದಾನೆ. ಅದೇನೆಂದರೆ ಬಾಡ ತಿಂಬಾತಂಗೆ ಆವೇನು ಆಡೇನು ಕಾಡಬಡನರಿಯೇನು ಮನೆಯ ನಾಯೇನು ಸರ್ವಜ್ಞ. ಅದರಂತೆ ಸಿದ್ದು ಏನು ತಿಂದರೆ ಬಿಜೆಪಿಗಳಿಗೇನೋ ಬೋಪಯ್ಯ ಎನ್ನುವಂತಾಗಿದೆಯಲ್ಲಾ, ಥೂತ್ತೇರಿ॒

ಯಾಹೂ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಗಾಜಿಯಾಬಾದ್ ಮೂವರು ಸಹೋದರಿಯರ ಆತ್ಮಹತ್ಯೆ’: ಕೊರಿಯನ್ ಮೂಲದ ಆನ್ ಲೈನ್ ಆಟದಿಂದ ಸಾವನ್ನಪ್ಪಿರುವ ಶಂಕೆ 

ಗಾಜಿಯಾಬಾದ್‌ನಲ್ಲಿ ಬುಧವಾರ ತಡರಾತ್ರಿ 12, 14 ಮತ್ತು 16 ವರ್ಷ ವಯಸ್ಸಿನ ಮೂವರು ಸಹೋದರಿಯರು ತಮ್ಮ ವಸತಿ ಕಟ್ಟಡದ ಟೆರೇಸ್‌ನಿಂದ ಹಾರಿ ಸಾವನ್ನಪ್ಪಿದ್ದಾರೆ. ಈ ಕೃತ್ಯವು ಕೊರಿಯನ್ ಮೂಲದ ಆನ್‌ಲೈನ್ ಆಟಕ್ಕೆ ಸಂಬಂಧಿಸಿರಬಹುದು...

‘ಹೆಚ್ಚುತ್ತಿರುವ ನಿರುದ್ಯೋಗ ಬಿಕ್ಕಟ್ಟು’: ಮಧ್ಯಪ್ರವೇಶಿಸುವಂತೆ ಕೇಂದ್ರ ಸರ್ಕಾರಿ ಸಂಸ್ಥೆಗಳಿಗೆ ಮನವಿ ಪತ್ರ ಸಲ್ಲಿಸಿದ ಲಕ್ಷದ್ವೀಪ ವಿದ್ಯಾರ್ಥಿಗಳ  ಸಂಘ 

ಲಕ್ಷದ್ವೀಪ ವಿದ್ಯಾರ್ಥಿ ಸಂಘವು, ಕೇಂದ್ರಾಡಳಿತ ಪ್ರದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಬಿಕ್ಕಟ್ಟಿನ ಬಗ್ಗೆ ಮಧ್ಯಪ್ರವೇಶಿಸುವಂತೆ ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗ ಮತ್ತು ಇತರ ಕೇಂದ್ರ ಸರ್ಕಾರಿ ಸಂಸ್ಥೆಗಳನ್ನು ಒತ್ತಾಯಿಸಿದೆ. ಒಂದು ವರ್ಷಕ್ಕೂ ಹೆಚ್ಚು ಕಾಲ...

ಪ.ಬಂಗಾಳವನ್ನು ಗುರಿಯಾಗಿಸಲಾಗುತ್ತಿದೆ, ಅಸ್ಸಾಂನಲ್ಲಿ ಎಸ್‌ಐಆರ್‌ ಏಕಿಲ್ಲ? : ಸುಪ್ರೀಂ ಕೋರ್ಟ್‌ನಲ್ಲಿ ಮಮತಾ ಬ್ಯಾನರ್ಜಿ ವಾದ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಪಶ್ಚಿಮ ಬಂಗಾಳವನ್ನು ಗುರಿಯಾಗಿಸಲಾಗಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ (ಫೆ.4) ಆರೋಪಿಸಿದ್ದು, ಬಿಜೆಪಿ ಆಡಳಿತವಿರುವ ಅಸ್ಸಾಂನಲ್ಲಿ ಏಕೆ ಎಸ್‌ಐಆರ್ ನಡೆಸುತ್ತಿಲ್ಲ ಎಂಬುವುದಾಗಿ...

ತಮಿಳುನಾಡು| ದಲಿತ ಯುವಕನನ್ನು ಪ್ರೀತಿಸುತ್ತಿದ್ದ ಯುವತಿ ಅನುಮಾನಾಸ್ಪದ ಸಾವು; ಮರ್ಯಾದೆಗೇಡು ಹತ್ಯೆ ಶಂಕೆ

ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯಲ್ಲಿ ಕಾಲೇಜು ವಿದ್ಯಾರ್ಥಿನಿ ಸಾವು ಮರ್ಯಾದಾ ಹತ್ಯೆಯ ಗಂಭೀರ ಆರೋಪಗಳನ್ನು ಹುಟ್ಟುಹಾಕಿದೆ. ಸಾವಿನ ಆರಂಭಿಕ ತನಿಖೆಯು ಆತ್ಮಹತ್ಯೆಯತ್ತ ಬೊಟ್ಟು ಮಾಡುತ್ತಿದ್ದು, ಮರಣೋತ್ತರ ಪರೀಕ್ಷೆಯ ವರದಿಯ ನಂತರವೇ ಸಾವಿಗೆ ಅಂತಿಮ ಕಾರಣ...

‘ರಾಜ್ಯವನ್ನು ನಿರ್ಲಕ್ಷಿಸಲಾಗಿದೆ’ : ಕೇಂದ್ರ ಬಜೆಟ್‌ ವಿರುದ್ಧ ನಿರ್ಣಯ ಅಂಗೀಕರಿಸಿದ ಕೇರಳ ವಿಧಾನಸಭೆ

ಕೇಂದ್ರ ಸರ್ಕಾರದ 2026-27ನೇ ಸಾಲಿನ ಬಜೆಟ್ ವಿರುದ್ದ ಕೇರಳ ವಿಧಾನಸಭೆ ನಿರ್ಣಯ ಅಂಗೀಕರಿಸಿದ್ದು, ರಾಜ್ಯವನ್ನು 'ನಿರ್ಲಕ್ಷಿಸಲಾಗಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದೆ. ಬಜೆಟ್‌ನಲ್ಲಿ ಕೇರಳದ ದೀರ್ಘಕಾಲದ ಬೇಡಿಕೆಗಳನ್ನು ಪರಿಗಣಿಸದೆ ಇರುವುದು ಮತ್ತು ರಾಜ್ಯಕ್ಕೆ ನೀಡಬೇಕಾದ ನ್ಯಾಯಯುತ...

ದೇವಾಲಯ-ಶಾಲೆಗಳ ಬಳಿ ಇರುವ ಮಾಂಸ ಮಳಿಗೆಗಳ ಕುರಿತು ಏಕರೂಪ ನೀತಿ ರೂಪಿಸಿ: ತೆಲಂಗಾಣ ಹೈಕೋರ್ಟ್

ಸಾರ್ವಜನಿಕ ಭಾವನೆ, ನೈರ್ಮಲ್ಯ, ಸಂಚಾರ ನಿರ್ವಹಣೆ, ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ಕಳವಳಗಳನ್ನು ಉಲ್ಲೇಖಿಸಿ, ದೇವಾಲಯಗಳು, ಶಿಕ್ಷಣ ಸಂಸ್ಥೆಗಳು ಮತ್ತು ಆಸ್ಪತ್ರೆಗಳಿಂದ 100 ಮೀಟರ್ ಒಳಗೆ ಮಾಂಸ ಮತ್ತು ಮಾಂಸಾಹಾರಿ ಆಹಾರ ಮಾರಾಟವನ್ನು...

ಎಸ್‌ಐಆರ್ ಅರ್ಜಿ ವಿಚಾರಣೆ : ಸುಪ್ರೀಂ ಕೋರ್ಟ್‌ನಲ್ಲಿ ಮಮತಾ ಬ್ಯಾನರ್ಜಿ ಸ್ವತಃ ವಾದ ಮಂಡನೆ

ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರುದ್ದ ಸಲ್ಲಿಸಿರುವ ಅರ್ಜಿಯ ವಿಚಾರಣೆ ಬುಧವಾರ (ಫೆ.4) ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ವತಃ ವಾದ ಮಂಡನೆ ಮಾಡುತ್ತಿದ್ದಾರೆ....

ಆರ್‌ಕಾಮ್ ಬ್ಯಾಂಕ್ ವಂಚನೆ ತನಿಖೆ: ಇಡಿ, ಸಿಬಿಐಗೆ ಸುಪ್ರೀಂ ಕೋರ್ಟ್ ಛೀಮಾರಿ; ದೇಶ ಬಿಟ್ಟು ಹೋಗದಂತೆ ಅನಿಲ್ ಅಂಬಾನಿಗೆ ತಾಕೀತು 

ರಿಲಯನ್ಸ್ ಕಮ್ಯುನಿಕೇಷನ್ಸ್, ಅದರ ಸಮೂಹ ಕಂಪನಿಗಳು ಮತ್ತು ಕೈಗಾರಿಕೋದ್ಯಮಿ ಅನಿಲ್ ಅಂಬಾನಿ ಒಳಗೊಂಡ ಬೃಹತ್ ಪ್ರಮಾಣದ ಬ್ಯಾಂಕ್ ವಂಚನೆ ಆರೋಪಗಳ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸುವಂತೆ ಸುಪ್ರೀಂ ಕೋರ್ಟ್ ಬುಧವಾರ ಜಾರಿ...

ಅಸ್ಸಾಂ ಮುಖ್ಯಮಂತ್ರಿಯಿಂದ ‘100 ಪ್ರಕರಣಗಳ ಬೆದರಿಕೆ’: ‘ಇದು ಮಾನವ ಹಕ್ಕುಗಳ ರಕ್ಷಕರನ್ನು ಮೌನಗೊಳಿಸುವ ಪ್ರಯತ್ನ’ ಎಂದ ಹರ್ಷ್ ಮಂದರ್ 

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಮಾನವ ಹಕ್ಕುಗಳ ಹೋರಾಟಗಾರ ಹರ್ಷ್ ಮಂದರ್ ಅವರ ವಿರುದ್ಧ "ಕನಿಷ್ಠ 100 ಪ್ರಕರಣಗಳು" ದಾಖಲಿಸುವುದಾಗಿ ಬೆದರಿಕೆ ಹಾಕಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮಾನವ ಹಕ್ಕುಗಳ...

ಅದಾನಿ–ಲಿಯೊನಾರ್ಡೊ ಒಪ್ಪಂದ| ಹೊಸ ರೂಪದಲ್ಲಿ ಭಾರತಕ್ಕೆ ಮರಳಿದ ಕಪ್ಪುಪಟ್ಟಿಗೆ ಸೇರಿದ್ದ ಅಗಸ್ಟಾ ವೆಸ್ಟ್‌ಲ್ಯಾಂಡ್!

ಅದಾನಿ ಡಿಫೆನ್ಸ್ ಆಂಡ್ ಏರೋಸ್ಪೇಸ್ ಮತ್ತು ಇಟಲಿಯ ಲಿಯೊನಾರ್ಡೊ ಕಂಪನಿಗಳು ಮಂಗಳವಾರ (ಫೆ.3) ಕಾರ್ಯತಂತ್ರದ ಒಪ್ಪಂದವೊಂದಕ್ಕೆ ಸಹಿ ಹಾಕಿದ್ದು, ಭಾರತದ ಹೆಲಿಕಾಪ್ಟರ್ ಉತ್ಪಾದನಾ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಅಭಿವೃದ್ಧಿಪಡಿಸಲು ಈ ಒಪ್ಪಂದ ಮಾಡಿಕೊಳ್ಳಲಾಗಿದೆ...