Homeನ್ಯಾಯ ಪಥಶಿವಮೊಗ್ಗ ಕೊತಕೊತ ನಿಗಿನಿಗಿ ನಿಜವೆ!

ಶಿವಮೊಗ್ಗ ಕೊತಕೊತ ನಿಗಿನಿಗಿ ನಿಜವೆ!

- Advertisement -
- Advertisement -

ಈ ವಿಷಮ ಸಮಯದಲ್ಲಿ ಶಿವಮೊಗ್ಗ ಕಡೆಯಿಂದ ಬಂದ ಸುದ್ದಿಗಳು ಶಾನೆ ಕುತೂಹಲಕರವಾಗಿವೆಯಲ್ಲಾ. ಸ್ವಾತಂತ್ರ್ಯ ದಿನಾಚರಣೆಗೆ ಮುನ್ನವೇ ಮುನಿಸಿಪಾಲಿಟಿಯವರು ಬಿದಿರುದಬ್ಬೆ ಮತ್ತು ಖಾದಿಯಲ್ಲದ ನಿಗಿನಿಗಿ ಬಾವುಟ ಹಂಚಿದರು. ಜಿಲ್ಲಾ ಮೈದಾನವಲ್ಲದೆ ಶಾಲಾ ಕಾಲೇಜಿನ ದಿಕ್ಕಿನಿಂದ ದೇಶ ಘೋಷಣೆಗಳು ಮಕ್ಕಳ ಗಂಟಲಿಂದ ಮುಗಿಲು ಮುಟ್ಟಿದವು. ಅಷ್ಟರಲ್ಲಿ ಬಿಜೆಪಿಗಳ ಕಡೆಯವರು ಆಳೆತ್ತರದ ಸಾವರ್ಕರ್ ಪ್ಲೆಕ್ಸ್ ತಂದು ಅಮೀರ್ ಅಹಮದ್ ಸರ್ಕಲ್ಲಲ್ಲಿ ಇಟ್ಟರು. ಟಿಪ್ಪು ಅಭಿಮಾನಿಗಳು ಅದನ್ನ ಕಿತ್ತೆಸೆದರು. ಅವರ ದೃಷ್ಟಿಯಲ್ಲಿ ಟಿಪ್ಪು ಸ್ವಾತಂತ್ರ ಹೋರಾಟಗಾರನಲ್ಲದಿದ್ದರೆ ಸಾವರ್ಕರನು ಸ್ವಾತಂತ್ರ ಹೋರಾಟಗಾರನಲ್ಲ ಎಂಬುದು. ಇದಕ್ಕೂ ಮೊದಲೆ ಶಿವಮೊಗ್ಗದ ಮಾಲ್‌ನಲ್ಲಿ ಅಳವಡಿಸಿದ ಸಾವರಕರನ ಫೋಟೋ ವಿರುದ್ಧ ದೇಶಪ್ರೇಮಿಯೊಬ್ಬ ಪ್ರತಿಭಟಿಸಿದ್ದ. ಇದೇ ಪ್ರತಿಭಟನೆ ಅಮೀರ್ ಅಹಮದ್ ಸರ್ಕಲ್ಲಿಗೂ ಮರುದಿನ ವ್ಯಾಪಿಸಿದ್ದರಿಂದ ಸೆಕ್ಷನ್ 144 ಜಾರಿಯಾಗಿತ್ತು. ಇತ್ತ ಕುವೆಂಪು ರಂಗಮಂದಿರದಲ್ಲಿ ನಾಟಕ ಆಡಲು ಬಣ್ಣ ಬಳಿದುಕೊಂಡು ಕೂತಿದ್ದವರಿಗೆ ಸೆಕ್ಷನ್ 144 ಜಾರಿಯಾಗಿದೆ ಮನೆಗೆ ಹೋಗಿ ಎಂಬ ಅಪ್ಪಣೆ ಬಂತು. ನಾಟಕ ನೋಡಲು ಬಂದಿದ್ದವರೆಲ್ಲಾ, ಈಶ್ವರಪ್ಪ ಮನೆಗೆ ಹೋಗದ ಹೊರತು ಶಿವಮೊಗ್ಗಕ್ಕೆ ನೆಮ್ಮದಿಯಿಲ್ಲ ಎಂದು ಗೊಣಗಿಕೊಂಡು, ಮತಾಂಧ ಮೆದುಳಲ್ಲಿ ಕಲೆ, ಸಾಹಿತ್ಯ, ಸಂಗೀತಕ್ಕೆ ಜಾಗವಿರುವುದಿಲ್ಲ ಎಂದು ಮಾತನಾಡಿಕೊಂಡು ಮನೆಸೇರಿದರಂತಲ್ಲಾ, ಥೂತ್ತೇರಿ.
****

ಶಿವಮೊಗ್ಗದ ಸ್ಥಿತಿ ಕುರಿತು ದೂರದೂರಿನ ಜನಗಳು ಅಲ್ಲಿ ಏನೋ ಆಗಬಾರದ್ದು ಆಗುತ್ತಿದೆ ಎಂದು ಆತಂಕಗೊಂಡಿರುವುದು ಸಹಜವಂತಲ್ಲಾ. ಏಕೆಂದರೆ ಟಿವಿ ಮಾಧ್ಯಮಗಳು ಶಿವಮೊಗ್ಗದ ನಿಗಿನಿಗಿ ಶಿವಮೊಗ್ಗ ಕೊತಕೊತ. ಬೂದಿ ಮುಚ್ಚಿದ ಕೆಂಡ ಶಿವಮೊಗ್ಗ, ಆತಂಕದಲ್ಲಿ ಶಿವಮೊಗ್ಗ ಎಂಬ ಅಬ್ಬರಿಸುತ್ತಿರುವುದನ್ನು ಕೇಳಿ ಹೊರಬಂದು ನೋಡಿದರೆ ಆ ಮಲೆನಾಡಿನ ಹೆಮ್ಮೆಯ ನಗರ ಕಾಡಿನಷ್ಟೇ ಪ್ರಶಾಂತವಾಗಿದ್ದು ಆ ಊರಿನ ಜನಗಳಿಗೆ ಅಚ್ಚರಿ ಮೂಡಿಸಿದೆಯಂತಲ್ಲಾ. ಹಾಗಾದರೆ ಟಿವಿಯವರು ಅರಚುತ್ತಿರುವ ನಿಗಿನಿಗಿ ಕೊತಕೊತ ಎಲ್ಲಿದೆ ಎಂದು ನೋಡಲಾಗಿ ಅದು ಟಿವಿಯವರ ಹೊಟ್ಟೆಪಾಡಿನ ಸದ್ದೆಂಬುದು ಅರಿವಾಗಿ ಶಿವಮೊಗ್ಗದ ಜನ ಬಿದ್ದುಬಿದ್ದು ನಕ್ಕರಂತಲ್ಲಾ. ಮುಖ್ಯವಾಗಿ ಟಿವಿಯವರು ಈವರೆಗೂ ತೋರುತ್ತಿರುವುದು ಅಮೀರ್ ಅಹಮದ್ ಸರ್ಕಲ್ಲಿನಲ್ಲಿ ಪ್ಲೆಕ್ಸ್ ಕಿತ್ತಾಕಿದ ಕಿತ್ತಾಟವನ್ನು. ಅದು ಬಿಟ್ಟರೆ ಎಲ್ಲ ಬಡಾವಣೆಗಳಲ್ಲೂ ಕೂಡ, ಅದೆಲ್ಲೊ ದೂರದಲ್ಲಿ ನಡೆದ ಈಶ್ವರಪ್ಪನ ಕಡೆಯವರು ಮತ್ತು ಕೆಲ ಕಿಡಿಗೇಡಿ ಮುಸ್ಲಿಮರ ಪುಂಡಾಟ ಎನ್ನುತ್ತ ಗೋಬಿ ಮಂಚೂರಿ, ಪಾನಿಪೂರಿ, ಇಡ್ಲಿ ಗಾಡಿಯವರೆಲ್ಲಾ ತಮ್ಮ ಜೀವನಾಧಾರದ ಆ ದಿನದ ಸಾಮಗ್ರಿಯನ್ನ ಚರಂಡಿಗೆ ಸುರಿಯುತ್ತ ಶಾಪ ಹಾಕುತ್ತಿದ್ದಾರಂತಲ್ಲಾ. ಪೊಲೀಸರಿಗೆ ಸಂಬಳ ಬರುತ್ತದೆ, ರಾಜಕಾರಣಿಗಳ ಖಜಾನೆಗೆ ರಾಜ ಕಾಲುವೆಗಳೆ ಇವೆ. ಇವರೆಲ್ಲಾ ಆ ದಿನ ದುಡಿದು ಅದರಲ್ಲಧ ಪಿಗ್ಮಿ ಕಟ್ಟಿ ಉಳಿದುದರಲ್ಲಿ ಜೀವನದ ಗಾಡಿ ಎಳೆಯುವವರಾಗಿದ್ದರೆ ಎಷ್ಟು ಚೆನ್ನಾಗಿತ್ತು ಎಂಬುದು ದುಡಿದು ತಿನ್ನುವವರ ಅಳಲಾಗಿದೆಯಂತಲ್ಲಾ, ಥೂತ್ತೇರಿ.


*****

ಶಿವಮೊಗ್ಗ ಜಿಲ್ಲೆಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಭದ್ರಾವತಿಯ ಚೂರಿ ಇರಿತದ ವಿಷಯದಲ್ಲಿ ಚೂರಿ ಹಾಕಿದವನು ಮತ್ತು ಹಾಕಿಸಿಕೊಂಡವನು ಜೊತೆಯಲ್ಲಿ ಕುಳಿತು ಜೂಜಾಡುತ್ತಿರುವ ಫೋಟೋ ತೋರಿಸಿದ ಶಾಸಕ ಸಂಗಮೇಶ್ ಇದು ಮತೀಯ ಗಲಭೆ ಎಂದಾದರೆ ನಾನು ಶಾಸಕ ಸ್ಥಾನ ಬಿಡುತ್ತೇನೆ ಎಂದರೂ ಬಿಜೆಪಿಗಳು ಬಿಡುತ್ತಿಲ್ಲವಂತಲ್ಲಾ. ಯಾವತ್ತೂ ಸತ್ಯ ಸಂಗತಿಗಳ ವಿರುದ್ಧವೇ ಹೋರಾಡುವ ಪ್ರವೃತ್ತಿ ಬೆಳೆಸಿಕೊಂಡ ಫಲವಾಗಿ ಮಡಿಕೇರಿಯಲ್ಲಿ ಸಿದ್ದರಾಮಯ್ಯ ಕಳಲೆ ತಿಂದಿದ್ದು ಎಂದು ಗೊತ್ತಾಗಿದ್ದರು ಅದು ಕೋಳಿ ಎಂದು ಕೂಗುತ್ತಿವೆಯಂತಲ್ಲಾ. ಇದನ್ನ ಕೇಳಿಸಿಕೊಂಡ ಕೊಡಗಿನ ಜನ ಒಳಗೊಳಗೇ ನಗುತ್ತ ಆ ಸಿದ್ದರಾಮಯ್ಯ ಏನು ತಿಂದರೆ ನಮಗೇನು ನಮ್ಮ ಸಂಸ್ಕೃತಿಯಲ್ಲೇ ಮಾಂಸ ಮಡ್ಡಿ ಹಾಸುಹೊಕ್ಕಾಗಿದೆ, ಅದರಲ್ಲೂ ನಮ್ಮ ಪ್ರಿಯ ಆಹಾರವಾದ ವರಹ ಮಾಂಸ ಭಕ್ಷಣೆ ಮಾಡಿಲ್ಲವಲ್ಲಾ, ಅಷ್ಟಕ್ಕೂ ಈಗಿನ ಕೋಳಿ ಹಿಂದಿನ ಕೋಳಿಯಂತಲ್ಲಾ ಎಂದರಂತಲ್ಲಾ. ಸಿದ್ದರಾಮಯ್ಯ ತಿಂದ ಮಾಂಸದ ಬಗ್ಗೆ ತೀರಾ ತಲೆಕೆಡಿಸಿಕೊಂಡಿರುವ ಬಿಜೆಪಿಗಳು ಮತ್ತು ಟಿವಿ ಜನರನ್ನ ಕುರಿತೇ ನಮ್ಮ ಸರ್ವಜ್ಞ ಶತಮಾನದ ಹಿಂದೆಯೇ ವಚನ ಕಟ್ಟಿದ್ದಾನೆ. ಅದೇನೆಂದರೆ ಬಾಡ ತಿಂಬಾತಂಗೆ ಆವೇನು ಆಡೇನು ಕಾಡಬಡನರಿಯೇನು ಮನೆಯ ನಾಯೇನು ಸರ್ವಜ್ಞ. ಅದರಂತೆ ಸಿದ್ದು ಏನು ತಿಂದರೆ ಬಿಜೆಪಿಗಳಿಗೇನೋ ಬೋಪಯ್ಯ ಎನ್ನುವಂತಾಗಿದೆಯಲ್ಲಾ, ಥೂತ್ತೇರಿ॒

ಯಾಹೂ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...