Homeಅಂಕಣಗಳುಮೀಡಿಯಾ ವೈರಸ್ ಎಂದು ಕರೆಯಬೇಕಾದ ಸಂದರ್ಭ ಬಂದಿದೆಯೇ?

ಮೀಡಿಯಾ ವೈರಸ್ ಎಂದು ಕರೆಯಬೇಕಾದ ಸಂದರ್ಭ ಬಂದಿದೆಯೇ?

- Advertisement -
- Advertisement -

ಬೆಂಗಳೂರಿನ ಟಿವಿ ಚಾನೆಲ್ ಸಿಬ್ಬಂದಿಯೊಬ್ಬರಿಗೆ ಕೊರೊನಾ ಸೋಂಕು ಬಂದ ಕಾರಣಕ್ಕೆ ಹಲವರನ್ನು ಕ್ವಾರಂಟೈನ್ ಮಾಡಲಾಗಿತ್ತು. ಆಗ ‘ಮೀಡಿಯಾ ವೈರಸ್’ ಎಂದು ಕರೆಯಬೇಡಿ ಎಂದು ನಾವೂ ಮನವಿ ಮಾಡಿಕೊಂಡಿದ್ದೆವು. ಏಕೆಂದರೆ ಅದಕ್ಕೆ ಮುಂಚೆ ಕೊರೊನಾ ವೈರಸ್‍ಅನ್ನು ಅಮೆರಿಕಾದವರು ಚೀನೀ ವೈರಸ್ ಎಂದು ಕರೆದಂತೆ, ಇಲ್ಲಿನ ಮಾಧ್ಯಮಗಳು ತಬ್ಲಿಘಿ ವೈರಸ್ ಎಂದು ಕರೆಯಲಾರಂಭಿಸಿದ್ದರು. ವೈರಸ್‍ಗೂ ಇಲ್ಲದ ಕೊಳಕು ಮನಸ್ಥಿತಿಯನ್ನು ಟಿವಿ ಚಾನೆಲ್‍ಗಳು ತೋರಿದೆವೆಂದು, ಅದೇ ತಪ್ಪನ್ನು ಎಲ್ಲರೂ ಮಾಡಬಾರದೆಂಬುದು ನಮ್ಮ ಕಾಳಜಿಯಾಗಿತ್ತು. ಮೀಡಿಯಾಗಳನ್ನು ಟ್ರೋಲ್ ಮಾಡಲು ಹೋಗಿ, ವೈರಸ್‍ಅನ್ನು ಯಾವುದಾದರೂ ಸಮುದಾಯಕ್ಕೆ ತಳಕು ಹಾಕುವ ಮನೋಭಾವಕ್ಕೆ ಪುಷ್ಟಿ ಕೊಡುವ ಕೆಲಸವನ್ನು ಯಾರೂ ಮಾಡಬಾರದೆಂಬುದು ಅದರ ಹಿಂದಿನ ಉದ್ದೇಶವಾಗಿತ್ತು.

ಆದರೆ ಮೀಡಿಯಾಗೆ ಹತ್ತಿದ್ದ ವೈರಸ್ ಅಷ್ಟು ಬೇಗ ಇಳಿಯಲಿಲ್ಲ. ಅವರು ಬಿಹಾರದ ಕಾರ್ಮಿಕರೊಬ್ಬರಿಗೆ ಸೋಂಕು ಬಂದಿತೆಂಬ ಸುದ್ದಿಯನ್ನು ಹಿಡಿದು ‘ಬಿಹಾರಿ ಬಾಂಬು’ ಎಂದು ಕರೆದರು. ಹಾಗೆಯೇ ಮುಂದುವರೆದು 11ನೇ ಕ್ರಾಸ್ ವೈರಸ್ ಇತ್ಯಾದಿ ಇತ್ಯಾದಿಗಳನ್ನು ಸೃಷ್ಟಿಸುತ್ತಾ, ಇತ್ತೀಚೆಗೆ ಗರ್ಭಿಣಿ ಬಾಂಬ್ ಎಂತಲೂ ಕರೆದರು. ಮುಸ್ಲಿಮರನ್ನು ಗುರಿ ಮಾಡುವ ಅವರ ದುರುದ್ದೇಶದ ಈಡೇರಿಕೆಗಾಗಿ ಕೊರೊನಾ ಸೋಂಕಿನ (ಕ್ರಿಮಿನಲೈಸೇಷನ್) ಅಪರಾಧೀಕರಣವನ್ನು ವ್ಯವಸ್ಥಿತವಾಗಿ ಮಾಡಿದರು. ಈ ಕೆಲಸದಲ್ಲಿ ಅತ್ಯುಗ್ರವಾಗಿ ತೊಡಗಿಕೊಂಡಿದ್ದ ಇನ್ನೊಂದು ಟಿವಿ ಚಾನೆಲ್ ಝೀ ಸಂಸ್ಥೆಗೂ ಕೊರೊನಾ ಬಾಧಿಸಿದೆ. ಕೊರೊನಾ ಸೋಂಕಿತರೆಲ್ಲರೂ ಇಲ್ಲಿಯವರೆಗೂ ಜಿಹಾದಿಗಳಾಗಿದ್ದರೆ, ಈಗ ಇದ್ದಕ್ಕಿದ್ದಂತೆ ಅವರುಗಳು ವಾರಿಯರ್ಸ್‍ಗಳಾಗಿಬಿಟ್ಟಿದ್ದಾರೆ.

ಇದೇ ಹೊತ್ತಿನಲ್ಲಿ ಕರ್ನಾಟಕದ ಒಂದು ಮನುಷ್ಯ ವಿರೋಧಿ ಟಿವಿ ಚಾನೆಲ್ ಮುಸ್ಲಿಮರ ವಿರುದ್ಧ ಇನ್ನೊಂದು ಫೇಕ್‍ನ್ಯೂಸ್ ಕುರಿತು ಚರ್ಚಿಸಲು ಶುರುಮಾಡಿದೆ. ದಾವಣಗೆರೆ ಜಿಲ್ಲೆಯಲ್ಲಿ ರಂಜಾನ್ ಸಂದರ್ಭದಲ್ಲಿ ಹಿಂದೂ ಬಟ್ಟೆ ವ್ಯಾಪಾರಿಗಳಿಂದ ಬಟ್ಟೆ ಖರೀದಿಸಬಾರದೆಂದು ಮುಸ್ಲಿಂ ಹೆಣ್ಣುಮಕ್ಕಳನ್ನು ಕೆಲವು ಮುಸ್ಲಿಮರು ಬಲವಂತಪಡಿಸಿದ್ದಾರೆಂಬುದು ಅವರು ಚರ್ಚಿಸುತ್ತಿರುವ ಸುದ್ದಿ. ಈ ಸುದ್ದಿ ಇಲ್ಲಿ ಪ್ರಸಾರವಾಗುವ ಮುಂಚೆಯೇ ದಾವಣಗೆರೆಯಲ್ಲಿ ಯಾವ ಧಾರ್ಮಿಕ ಮುಖಂಡರು ಈ ರೀತಿ ಕರೆ ಕೊಟ್ಟಿದ್ದಾರೆಂದು ಹೇಳಲಾಗಿತ್ತೋ ಅವರು ಪತ್ರಿಕಾಗೋಷ್ಠಿಯನ್ನೂ ಮಾಡಿದ್ದರು.

ಈ ಸಾರಿಯ ರಂಜಾನ್‍ನ ಸಂದರ್ಭದಲ್ಲಿ ಯಾರೂ ದುಂದುವೆಚ್ಚ ಮಾಡಬಾರದು, ಬದಲಿಗೆ ಹಾಗೇನಾದರೂ ಖರ್ಚು ಮಾಡುವುದಿದ್ದಲ್ಲಿ ಅದನ್ನು ಲಾಕ್‍ಡೌನ್‍ನಿಂದ ಸಂತ್ರಸ್ತರಾದ ಬಡವರಿಗೆ ಕೊಡಬೇಕೆಂದು ರಂಜಾನ್ ಶುರುವಾಗುವ ಮುಂಚೆಯೇ ಆ ಸಮುದಾಯದೊಳಗೆ ಚಾಲ್ತಿಯಲ್ಲಿದ್ದ ಸಂದೇಶ. ಅದನ್ನೇ ಅವರು ಅಲ್ಲಿಯೂ ನೀಡಿದ್ದರು. ರಂಜಾನ್ ಸಂದರ್ಭದಲ್ಲಿ ತಮ್ಮ ವಾರ್ಷಿಕ ಆದಾಯದ ಶೇ.2ರಷ್ಟು ಜಕಾತ್‍ಅನ್ನು ದಾನ ಮಾಡುವುದು ಕಡ್ಡಾಯವಾಗಿದ್ದು ಈ ಸಾರಿ ಅದನ್ನು ಹೆಚ್ಚಿಸುವ ಧರ್ಮದ ಕಾರ್ಯ ಅದಾಗಿತ್ತು. ಇದನ್ನು ಅತಿರೇಕಕ್ಕೆ ಒಯ್ದ ಕೆಲವು ಮುಸ್ಲಿಮರು ಕೆಲವೆಡೆ ಅಂಗಡಿಗಳಿಗೆ ಹೋಗಿದ್ದ ಮುಸ್ಲಿಂ ಹೆಣ್ಣುಮಕ್ಕಳನ್ನು ಬಲವಂತದಿಂದ ತಡೆದದ್ದು ಸುದ್ದಿಯಾಗಿತ್ತಲ್ಲದೇ, ಯಥಾಪ್ರಕಾರ ವಿಡಿಯೋಗಳೂ ಚಾಲನೆಯಲ್ಲಿದ್ದವು. ಇನ್ನೊಬ್ಬರ ಇಷ್ಟಾನಿಷ್ಟಗಳನ್ನು ಸರಿಯಾದ ಕಾರಣಗಳಿಗಾಗಿಯೇ ಬದಲಿಸಬಯಸುವವರೂ ಯಾರನ್ನೂ ಬಲವಂತ ಮಾಡುವ ಹಕ್ಕನ್ನು ಹೊಂದಿರುವುದಿಲ್ಲ; ಅದು ಯಾರನ್ನೋ ತಡೆಯುವ ಮಟ್ಟಕ್ಕೆ ಹೋದರೆ ಅದು ಶಿಕ್ಷಾರ್ಹವೂ ಆಗಬೇಕು.

ಇದೇ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕಾದ್ದೆಂದರೆ, ಇವೆಲ್ಲಾ ನಡೆಯೋಕೆ ಮುಂಚೆಯೇ ಮುಸ್ಲಿಂ ವ್ಯಾಪಾರಿಗಳು ಜಾತ್ರೆಗೆ ಬರಬಾರದು ಅಥವಾ ಮುಸ್ಲಿಂ ವ್ಯಾಪಾರಿಗಳಿಂದ ಕೊಳ್ಳಬಾರದು ಎಂಬ ಘೋಷಣೆಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬಹಿರಂಗವಾಗಿ ಚಾಲ್ತಿಗೆ ಬಂದಿತ್ತು. ಅದಕ್ಕೂ ನಾಲು ವರ್ಷಗಳ ಮುಂಚೆಯೇ ಇಂತಹ ಭಾವನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಂತರಿಕವಾಗಿ ಇದ್ದುದು ಖುದ್ದು ನನಗೇ ಅನುಭವಕ್ಕೆ ಬಂದ ಘಟನೆ ನೆನಪಿನಿಂದ ಎಂದೂ ಮಾಸುವುದಿಲ್ಲ. ಆದರೆ ಇದ್ಯಾವುದೂ ಈ ಜೀವವಿರೋಧಿ ಚಾನೆಲ್‍ಗಳಲ್ಲಿ ಸುದ್ದಿ, ಸದ್ದು, ಚರ್ಚೆಗೆ ಕಾರಣವಾಗುವುದಿಲ್ಲ. ಏಕೆಂದರೆ ಅವರ ಅಜೆಂಡಾವೇ ಬೇರೆ. ಜೊತೆಗೆ ಅವರುಗಳು ಈಗ ಮನುಷ್ಯರಾಗಿಯೂ ಉಳಿದಿಲ್ಲ. ಧರ್ಮವಂತರಂತೂ ಅಲ್ಲವೇ ಅಲ್ಲ.

ಇತ್ತ ಮನುಷ್ಯವಿರೋಧಿಗಳಲ್ಲದವರೂ ಚರ್ಚೆಯನ್ನು ‘ಆ ಮುಸ್ಲಿಂ ಹುಡುಗರು ಬಟ್ಟೆ ತೆಗೆದುಕೊಳ್ಳದಂತೆ ಒತ್ತಾಯಿಸುವುದು ಸರಿಯೇ’ ಎಂಬುದರ ಸುತ್ತ ಕೇಂದ್ರೀಕರಿಸುವಂತೆ ಆಗುತ್ತದೆ. ಏಕೆಂದರೆ ಯಾರೋ ಒಬ್ಬರು ‘ಎಲ್ಲಾ ಸರಿ, ನೀವುಗಳು ಆ ಮುಸ್ಲಿಂ ಹುಡುಗರನ್ನೇಕೆ ಸಮರ್ಥಿಸುತ್ತಿದ್ದೀರಿ?’ ಎಂದು ಹೇಳಿರುತ್ತಾರೆ. ‘ಹೌದಲ್ಲವೇ, ನಾವು ಮೊದಲು ಅದನ್ನು ಖಂಡಿಸಬೇಕು ತಾನೇ?’, ‘ಹಿಂದೂ ಅಂಗಡಿಗಳಿಗೆ ಹೋಗಬಾರದೆಂದು ಹೇಳಿಲ್ಲದೇ ಇರಬಹುದು, ಆದರೆ ಹಬ್ಬವನ್ನು ಸರಳವಾಗಿಯೇ ಆಚರಿಸಬೇಕೆಂದು ಬಲವಂತ ಪಡಿಸುವುದು ತಪ್ಪಲ್ಲವೇ?’, ‘ನಾವು ಯಾವ ಮೂಲಭೂತವಾದವನ್ನೂ ಸಮರ್ಥಿಸುವುದಿಲ್ಲ’, ‘ಇವರೂ ಹಾಗೇ ಮಾಡುತ್ತಾರೆ’ ಇತ್ಯಾದಿ ಟ್ರ್ಯಾಪ್‍ಗಳಲ್ಲಿ ಬೀಳಲು ಕೆಲವರು ಉತ್ಸುಕರಾಗಿರುತ್ತಾರೆ. ಏಕೆಂದರೆ ಮನುಷ್ಯವಿರೋಧಿಗಳು ಸೃಷ್ಟಿಸುವ ಅಜೆಂಡಾವನ್ನು ಕೌಂಟರ್ ಮಾಡುವ ಸರಿಯಾದ ದಾರಿಯನ್ನು ಇವರಿನ್ನೂ ಹುಡುಕಿಕೊಂಡಿಲ್ಲ.

ಸತ್ಯ, ಸೌಹಾರ್ದತೆ, ಮನುಷ್ಯ ಪ್ರೀತಿಯ ಪರವಾಗಿರಬೇಕಿದ್ದ ಮಾಧ್ಯಮಗಳು ಮೆದುಳಿಗೆ ಸೋಂಕನ್ನು ಹಬ್ಬಿಸಿಕೊಂಡುಬಿಟ್ಟಿವೆ. ಅದನ್ನು ಮೀಡಿಯಾ ವೈರಸ್ ಎಂದು ಕರೆಯಬೇಕಾದ ಸಂದರ್ಭ ಬಂದುಬಿಟ್ಟಿದೆ. ಸೋಂಕಿನ ತಡೆಗೆ ಮುನ್ನೆಚ್ಚರಿಕೆ ಕ್ರಮಗಳು, ಕೆಲವೊಮ್ಮೆ ಲಾಕ್‍ಡೌನ್ ಮತ್ತು ಚಿಕಿತ್ಸೆಯ ಅಗತ್ಯ ಬೀಳುತ್ತದೆ. ಕರ್ನಾಟಕದ ಜಾಣಜಾಣೆಯರು ಅದಕ್ಕೆ ‘ಸಂಪೂರ್ಣವಾಗಿ ಫೀಲ್ಡಿಗಿಳಿಯಬೇಕು’ ಅಷ್ಟೇ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...