Homeಅಂಕಣಗಳುಮೋದಿ ಸಾಧನೆ ಹಳ್ಳಿಗೆ ತಲುಪಿಸಿ ಎಂದ ಭೈರಪ್ಪ!

ಮೋದಿ ಸಾಧನೆ ಹಳ್ಳಿಗೆ ತಲುಪಿಸಿ ಎಂದ ಭೈರಪ್ಪ!

- Advertisement -
- Advertisement -

ಕೂದಲೆಳೆ ಅಂತರದಲ್ಲಿ ಘನಘೋರ ಅಪಾಯ ತಪ್ಪಿತು ಎನ್ನುವಂತೆ ಸಿದ್ದರಾಮಯ್ಯ ವಿಕೃತ ಭಟ್ಟನ ಪುಸ್ತಕದ ಬಿಡುಗಡೆ ಸಮಾರಂಭಕ್ಕೆ ತಪ್ಪಿಸಿಕೊಂಡು ಬುದ್ಧಿಜೀವಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರಲ್ಲಾ. ಅದಕ್ಕೆ ಹೇಳುವುದು ಜನರ ನಡುವೆ ಇರುವ ನಾಯಕ ತಪ್ಪು ಮಾಡಲಾರ ಎಂದು. ಇದಕ್ಕೊಂದು ಐತಿಹಾಸಿಕ ಉದಾಹರಣೆ ಬಸವಣ್ಣ ಅವರು ನಡೆಸಿದ ಕ್ರಾಂತಿಕಾರಿ ಚಳವಳಿ; ಈ ಶರಣ ಕ್ರಾಂತಿಯ ಬಗ್ಗೆ ಆಕ್ರೋಶಗೊಂಡ ಪುರೋಹಿತರು ಗಲಭೆ ನಡೆಸುತ್ತಾರೆ. ಅಲ್ಲೊಂದು ಕೊಲೆಯಾಗುತ್ತದೆ, ದೂರು ಬಿಜ್ಜಳನ ಬಳಿಗೆ ಹೋಗುತ್ತದೆ. ವಿಚಾರಣೆ ನಡೆಯುತ್ತದೆ. ಬಿಜ್ಜಳ ಕೊಲೆಯ ವಿಷಯದಲ್ಲಿ ಸಂಶಯಗೊಂಡು ಈ ಕೊಲೆ ಮಾಡಿದವರಾರು ಎಂದು ತನ್ನ ಆಸ್ಥಾನದಲ್ಲಿ ಪ್ರಶ್ನಿಸುತ್ತಾನೆ. ಅದಕ್ಕೆ ಬಸವಣ್ಣ ಪುರೋಹಿತಶಾಹಿಗಳು ಎನ್ನುತ್ತಾನೆ. ಆಗ ಬಿಜ್ಜಳ ಅದು ಹೇಗೆ ಹೇಳುತ್ತೀರಿ ಎಂದಾಗ, ಅದಕ್ಕೆ ಬಸವಣ್ಣ, ನಾನು ಜನಗಳ ನಡುವೆ ಇದ್ದೇನೆ ಎನ್ನುತ್ತಾನೆ. ಬಿಜ್ಜಳ ಮರುಮಾತನಾಡುವುದಿಲ್ಲ. ಈ ಐತಿಹಾಸಿಕ ಘಟನೆಯ ಸತ್ಯವನ್ನು ನಮ್ಮ ರಾಜಕಾರಣಿಗಳು ಪಾಲಿಸಿದ್ದಾದರೆ ವಿಕೃತ ಭಟ್ಟನಂತರವರ ಬಲೆಗೆ ಬೀಳಲಾರರು. ಅಕಸ್ಮಾತ್ ಬಿದ್ದರೆ ಸರ್ವನಾಶ ಗ್ಯಾರಂಟಿಯಂತಲ್ಲಾ, ಥೂತ್ತೇರಿ.

******

ಕಾದಂಬರಿ ಕಾರ್ಖಾನೆಯಾದ ಆರೆಸ್ಸೆಸ್ ಲೇಖಕ ಎಸ್.ಎಲ್ ಭೈರಪ್ಪನವರು ಯುವ ಮಾಣಿಗಳಿಗೊಂದು ಅದ್ಭುತವಾದಂತಹ ಕರೆ ಕೊಟ್ಟಿದ್ದಾರಲ್ಲಾ. ಅದೇನೆಂದರೆ ವಿದ್ಯಾವಂತ ಯುವ ಜನ ಹಳ್ಳಿಹಳ್ಳಿಗಳಿಗೆ ಹೋಗಿ ಮೋದಿ ಮಾಡಿದ ಒಳ್ಳೆ ಕೆಲಸಗಳನ್ನ ಅಲ್ಲಿನ ಗ್ರಾಮವಾಸಿಗಳಿಗೆ ಮನವರಿಕೆ ಮಾಡಿ ಎಂದು. ಎಂದಿನಂತೆ ವಿದ್ಯಾವಂತರು ಹಳ್ಳಿಗೆ ಹೋಗಿ ಹೇಳುವ ಮೋದಿ ಸಾಧನೆ ಪಟ್ಟಿ ಮಾಡಲಾಗಿ ಅವು ಇಂತಿವೆಯಲ್ಲಾ.

  • ಒಂದನೆಯದಾಗಿ ಹಿಂದುಮುಂದು ನೋಡದೆ ನೋಟು ಬ್ಯಾನು ಮಾಡಿ ದೇಶದ ಉದ್ದಗಲಕ್ಕೂ ಅಲ್ಲೋಲಕಲ್ಲೋಲವಾಗಿ ನೂರಾರು ಜನ ಸತ್ತು, ಸಾವಿರಾರು ಸಣ್ಣ ಉದ್ಯಮಗಳು ಕಣ್ಮರೆಯಾದದ್ದು.
  • ಎರಡನೆಯದಾಗಿ ಜಿಎಸ್‌ಟಿ ಎಂಬ ಮನೆಹಾಳ ತೆರಿಗೆ ವಸೂಲಿಯಿಂದಲೂ ಸಣ್ಣಪುಟ್ಟ ಉದ್ಯಮ ಬಾಗಿಲು ಹಾಕಿ ಬಡವರು ತಿನ್ನುವ ಕಡ್ಲೆಪುರಿ ಮೇಲೂ ಜಿಎಸ್‌ಟಿ ಬಂದಿದ್ದು.
  • ಸಿಎಎ ಕಾನೂನು ತರಲು ಹೊರಟು ಇಡೀ ಭಾರತದ ಮುಸ್ಲಿಮರು ತಮ್ಮ ಅಸ್ತಿತ್ವಕ್ಕಾಗಿ ಹೋರಾಡುವಂತೆ ಮಾಡಿದ್ದು.
  • ಕೃಷಿಕಾಯ್ದೆ ತಂದು ದೆಹಲಿ ಗಡಿಯಲ್ಲಿ ಹೋರಾಟನಿರತ 750 ಜನ ರೈತರು ಸಾಯುವಂತೆ ಮಾಡಿದ್ದು.
  • ಸಾವಿರಾರು ಕೋಟಿ ಒಪ್ಪಂದದ ರಫೇಲ್ ಹಗರಣ ಮುಚ್ಚಿಹಾಕಿ, ತ್ವರಿತವಾಗಿ ಮಾಡಿದ ಒಪ್ಪಂದ ಎಂದು ಬಿಂಬಿಸಿದ್ದು.
  • ಭಾರತದ ಸುಮಾರು ಹನ್ನೆರಡು ಉದ್ಯಮಗಳನ್ನು ಮಾರಿದ್ದೂ ಅಲ್ಲದೆ, ವಿಶೇಷ ಘಟಕವಾಗಿದ್ದ ರೈಲ್ವೆ ಇಲಾಖೆಯನ್ನ ಮುಗಿಸಲು ಪ್ರಯತ್ನಿಸುತ್ತಿರುವುದು; ಅವುಗಳ ಬಣ್ಣ ಬದಲಿಸಿ ಸೀಟಿನ ಅಳತೆ ಕಡಿಮೆ ಮಾಡಿ ಪ್ರಯಾಣಿಕರನ್ನ ಹಿಂಸಿಸುತ್ತಿರುವುದು.
  • ಕರ್ನಾಟಕ ವಿಧಾನಸಭೆಗೆ ನಡೆದ ಚುನಾವಣೆಗೆ ದಾಳಿಯಿಟ್ಟು ಒಂದು ಡಜನ್ ರೋಡ್ ಶೋ ಮಾಡಿ ಸೋತ ಸಿಟ್ಟಿಗೆ ಕರ್ನಾಟಕದ ಪಾಲಿನ ಅಕ್ಕಿ ನಿಲ್ಲಿಸಿದ್ದಲ್ಲದೆ ಇತಿಹಾಸದಲ್ಲಿ ದಾಖಲಾಗುವಂತೆ ವಿರೋಧಪಕ್ಷದ ನಾಯಕರನ್ನೆ ನೇಮಿಸದಿದ್ದುದು.
  • ನಮ್ಮದೇ ದೇಶದ ಭುಜದಂತಿರುವ ಮಣಿಪುರ ಎರಡು ತಿಂಗಳಿಂದ ಉರಿಯುತ್ತಿದ್ದರೂ ಆ ಕಡೆ ತಿರುಗಿಯೂ ನೋಡದೆ ಅಮೆರಿಕದಲ್ಲಿ ಯೋಗ ಮಾಡುತ್ತ ಕುಳಿತದ್ದು.

ಇದನ್ನೂ ಓದಿ: ಕುಮಾರಣ್ಣ ಪೇಶ್ವೆಗಳೊಂದಿಗೆ ಹೋಗಲಿದ್ದಾರಂತಲ್ಲಾ!

ಕಡೆಗೂ ಮೋದಿ ಬಾಯಿ ಬಿಟ್ಟಿದ್ದು ಯಾವಾಗೆಂದರೆ ನಿಸ್ಸಹಾಯಕ ಹೆಣ್ಣುಮಕ್ಕಳನ್ನು ಬೆತ್ತಲೆ ಮಾಡಿ ಅವರನ್ನ ಅತ್ಯಾಚಾರ ಮಾಡಿ ಕೊಲೆ ಮಾಡಿದ ವಿಡಿಯೋ ತುಣುಕೊಂದು ತಿಂಗಳುಗಳ ನಂತರ ವೈರಲ್ ಆದಾಗ! ಇಂತಹ ಮೋದಿಯ ಸಾಧನೆಗಳನ್ನ ಹಳ್ಳಿಹಳ್ಳಿಗೆ ಹೋಗಿ ಹೇಳಿ ಎಂದು ಕರೆಕೊಡುತ್ತಿರುವ ಭೈರಪ್ಪರಿಗೆ ವಯೋಸಹಜ ಮರೆವೇನೂ ಇಲ್ಲ, ಆದರೆ ದಶಕಗಳಿಂದ ಸಂಘ ಪರಿವಾರದಿಂದ ತರಬೇತು ಪಡೆದಿರುವ ಮಿದುಳು ಹಾಗೆ ಕೆಲಸ ಮಾಡುತ್ತಿದೆಯಂತಲ್ಲಾ, ಥೂತ್ತೇರಿ.

*****

ಈಚೆಗೆ ಚಂದ್ರಯಾನ ಉಡಾವಣೆಯಾಗಿದೆ. ಇಸ್ರೊ ಅಧ್ಯಕ್ಷ ಸೋಮನಾಥ್ ಸಾರಥ್ಯದಲ್ಲಿ ಎಂಟು ಜನ ವಿಜ್ಞಾನಿಗಳೆಂಬುವರು ತಿರುಪತಿಯಲ್ಲಿ ನಿಂತು ಭಯ ಭಕ್ತಿಯಿಂದ ಪೂಜೆ ಸಲ್ಲಿಸಿದ್ದಾರೆ. ತಿಮ್ಮಪ್ಪ ಇಡೀ ಕರ್ನಾಟಕದ ಸಕಲಿಷ್ಟು ಜಾತಿಗಳ ದೇವರಾದ್ದರಿಂದ ಜನರಿಗೆಲ್ಲಾ ಈ ಚಂದ್ರಯಾನ ಉಡಾವಣೆಯಿಂದ ಒಳ್ಳೆಯದಾಗುತ್ತದಂತೆ. ಇವರ ಇಂಗಿತವನ್ನ ಆಡಿಕೊಳ್ಳುವುದಾದರೆ ಚಂದ್ರನ ಮೇಲೆ ಈ ಯಂತ್ರ ಕಾಲೂರಿದ ಕ್ಷಣದಿಂದಲೇ ಭಾರತದಲ್ಲಿ ಬಿಜೆಪಿಗಳ ಹಾವಳಿಯಿಂದ ಕ್ಷೆಭೆಗೊಂಡಿರುವ ಮನಸ್ಸುಗಳು ಶಾಂತಗೊಳ್ಳಲಿವೆ. ನಿರುದ್ಯೋಗ ಸಮಸ್ಯೆ ಬಗೆಹರಿಯಲಿದೆ. ರೈತರು ಯಾವ ಸಮಸ್ಯೆಗಳು ಇಲ್ಲದೆ ಸಂತೃಪ್ತ ಜೀವನ ನಡೆಸುತ್ತಾರೆ. ಇತ್ಯಾದಿ ಸಮಸ್ಯೆಗಳಿಗೆಲ್ಲಾ ಸಂಜೀವಿನಿಯಾಗಿ ಚಂದ್ರನ ನೆಲೆಯಿಂದಲೇ ಛೂಮಂತ್ರ ಕಾಳಿ ಮಾಡುವ ಈ ಯಂತ್ರ ಪುರೋಹಿತಶಾಹಿಗಳಿಗೆ ಹೆಮ್ಮೆಯ ಸಾಧನೆ. ಪುರಾಣ ಸದೃಶ ಕಥೆ ಹೆಣೆಯುವುದರಲ್ಲಿ ನಿಸ್ಸೀಮರಾದ ಇವರು ಟಿ.ವಿಯೊಳಕ್ಕೂ ಬಂದು ಕೂತಿರುವುದಲ್ಲದೆ, ವಿಜ್ಞಾನಕ್ಕೂ ತಿರುಪತಿ ಭಕ್ತಿಗೂ ಏನು ಸಂಬಂಧ ಎಂದವರ ಮೇಲೆ ಎಗರಿ ಬೀಳತೊಡಗಿವೆ. ಇದಂತಿರಲಿ ಹಿಂದಿನ ಬಿಜೆಪಿ ಸರಕಾರದಲ್ಲಿ ಸಚಿವರಾಗಿದ್ದ ಪುರೋಹಿತರೊಬ್ಬರು, ತಿರುಪತಿ ದರ್ಶನ ಪಡೆದ ವಿಜ್ಞಾನಿಗಳನ್ನ ಆಡಿಕೊಂಡಿದ್ದಕ್ಕೆ ಸಿಟ್ಟುಗೊಂಡು, ಹುಲಿಕುಂಟೆ ಮೂರ್ತಿ ಮೇಲೆ ನರಿಯಂತೆ ಎಗರಾಡಿದ್ದಾರಲ್ಲಾ. ಈತನ ನಡವಳಿಕೆ ನೋಡಿದರೆ ಚಕ್ರತೀರ್ಥ ವಕ್ರತೀರ್ಥ ನಾಗೇಶ ಇತ್ಯಾದಿಗಳ ಸಂಬಂಧಿಯಾಗಿರುವುದರಲ್ಲಿ ಯಾವ ಸಂಶಯವೂ ಇಲ್ಲ. ಬಿಜೆಪಿಗಳ ಮಂದೆಯಲ್ಲಿ ಈತ ಪರವಾಗಿಲ್ಲ ಎಂದು ನಮ್ಮ ಎಂ.ಪಿ ಪ್ರಕಾಶರು ವಾದಿಸುತ್ತಿದ್ದುದಲ್ಲದೆ, ತಮ್ಮ ಊರಿಗೂ ಕರೆದಿದ್ದರು. ಆದರೀಗ ಈತ ತನ್ನ ಚರ್ಮದೊಳಕ್ಕೆ ಸೇರಿಸಿಕೊಂಡಿರುವ ಜನಿವಾರದ ಅನಾವರಣ ಮಾಡಿದ್ದಾರೆ. ಅದೂ ಹುಲಿಕುಂಟೆ ಮೂರ್ತಿಯವರನ್ನ ಕೆಣಕಿ. ಅಂತೂ ಹುಲಿಕುಂಟೆ ಮೂರ್ತಿಗೆ ಥ್ಯಾಂಕ್ಸ್, ಥೂತ್ತೇರಿ.

******

ಕರ್ನಾಟಕದಲ್ಲಿ ಹೊಸದಾಗಿ ರಚನೆಗೊಂಡ ಸರಕಾರ ವಿರೋಧಪಕ್ಷಗಳ ವಿಕೃತ ದಾಳಿಯಿಂದ ಚೇತರಿಸಿಕೊಳ್ಳುತ್ತಿದೆ. ಇಂತಹ ಸಮಯದಲ್ಲಿ ಹರಿಪ್ರಸಾದ್ ಎಂಬ ಮಹಾನಾಯಕರು ನಮ್ಮ ಜನಾಂಗವನ್ನು ಕಡೆಗಣಿಸಿದರೆ ಮುಖ್ಯಮಂತ್ರಿಯನ್ನು ಇಳಿಸುವುದೂ ಗೊತ್ತು ಎಂದು ಹೇಳಿ ಕುಮಾರಣ್ಣ ಮತ್ತು ಬೊಮ್ಮಾಯಿಗೆ ರೋಮಾಂಚನವುಂಟುಮಾಡಿದ್ದಾರಲ್ಲಾ. ಹರಿಪ್ರಸಾದ್ ಎಲ್ಲ ಜನಾಂಗ ಎಂದಿದ್ದರೆ ಇಂತ ಅಣಕ ಬರೆಯುವ ಅಗತ್ಯವಿರಲಿಲ್ಲ. ಆದರೆ ಅವರು ತನ್ನ ಜನಾಂಗದ ಹೆಸರನ್ನು ಎಳೆದು ತಂದಿರುವುದರಿಂದ ಕೆಲ ಮಾಹಿತಿಯನ್ನ ಮುಖಕ್ಕೆ ಹಿಡಿಯುವ ಅಗತ್ಯವಂತಲ್ಲ.

1995ರಲ್ಲಿ ಈ ನಾಡಿನ ಎರಡನೇ ಬಹುದೊಡ್ಡ ಸಂಖ್ಯೆಯಾದ ಒಕ್ಕಲಿಗರ ಪೈಕಿ ಕೇವಲ ಎರಡು ಜನ ಎಂ.ಪಿಗಳಿದ್ದರೆ ಹರಿಪ್ರಸಾದರ ಸಮುದಾಯದ ಪೈಕಿ ಐದು ಜನ ಎಂ.ಪಿ ಗಳಿದ್ದರು. ಹಲವು ವ್ಯವಹಾರಗಳಲ್ಲೂ ಅವರು ಪ್ರಧಾನವಾಗಿ ಇದ್ದರು. ಕನ್ನಡ ಚಿತ್ರರಂಗದಲ್ಲೂ ಅನೇಕ ಗಣ್ಯರಿದ್ದರು. ಪತ್ರಿಕಾರಂಗದಲ್ಲೂ ಪ್ರಧಾನವಾಗಿ ಮುಂಚೂಣಿಯಲ್ಲಿದ್ದರು. ಹೀಗೆ ಸರಕಾರ, ಸಿನಿಮಾ, ಮಾಧ್ಯಮ ಮತ್ತು ಉದ್ಯಮದಲ್ಲಿದ್ದ ಹರಿಪ್ರಸಾದರ ಸಮುದಾಯದ ಜನ ತುಂಬ ಘನತೆಯಿಂದ ನಡೆದುಕೊಂಡು ಈ ನಾಡಿನ ಕೀರ್ತಿಯನ್ನ ಬೆಳಗಿದರು. ಈಗ ಅಂತವರ ಹೆಸರಿಗೆ ಮಸಿ ಬಳಿಯುತ್ತಿರುವ ಹರಿಪ್ರಸಾದ್ ಅವರಿಗೆ ಸೈರಣೆ ಬೇಕಾಗಿದೆಯಂತಲ್ಲಾ. ಅದೂ ಜವಾಬ್ದಾರಿಯುತ ಸೈರಣೆ ಮುಖ್ಯ. ಇಲ್ಲವಾದರೆ ’ಬಂ’ನಂತೆ ಜೆಡಿಎಸ್‌ಗೆ ಹೋಗಿ ಕಡೆಗಣನೆಗೆ ಒಳಗಾಗಬೇಕಾಗುತ್ತಂತಲ್ಲಾ, ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...