Homeಅಂಕಣಗಳುಮೋದಿ ಸಾಧನೆ ಹಳ್ಳಿಗೆ ತಲುಪಿಸಿ ಎಂದ ಭೈರಪ್ಪ!

ಮೋದಿ ಸಾಧನೆ ಹಳ್ಳಿಗೆ ತಲುಪಿಸಿ ಎಂದ ಭೈರಪ್ಪ!

- Advertisement -
- Advertisement -

ಕೂದಲೆಳೆ ಅಂತರದಲ್ಲಿ ಘನಘೋರ ಅಪಾಯ ತಪ್ಪಿತು ಎನ್ನುವಂತೆ ಸಿದ್ದರಾಮಯ್ಯ ವಿಕೃತ ಭಟ್ಟನ ಪುಸ್ತಕದ ಬಿಡುಗಡೆ ಸಮಾರಂಭಕ್ಕೆ ತಪ್ಪಿಸಿಕೊಂಡು ಬುದ್ಧಿಜೀವಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರಲ್ಲಾ. ಅದಕ್ಕೆ ಹೇಳುವುದು ಜನರ ನಡುವೆ ಇರುವ ನಾಯಕ ತಪ್ಪು ಮಾಡಲಾರ ಎಂದು. ಇದಕ್ಕೊಂದು ಐತಿಹಾಸಿಕ ಉದಾಹರಣೆ ಬಸವಣ್ಣ ಅವರು ನಡೆಸಿದ ಕ್ರಾಂತಿಕಾರಿ ಚಳವಳಿ; ಈ ಶರಣ ಕ್ರಾಂತಿಯ ಬಗ್ಗೆ ಆಕ್ರೋಶಗೊಂಡ ಪುರೋಹಿತರು ಗಲಭೆ ನಡೆಸುತ್ತಾರೆ. ಅಲ್ಲೊಂದು ಕೊಲೆಯಾಗುತ್ತದೆ, ದೂರು ಬಿಜ್ಜಳನ ಬಳಿಗೆ ಹೋಗುತ್ತದೆ. ವಿಚಾರಣೆ ನಡೆಯುತ್ತದೆ. ಬಿಜ್ಜಳ ಕೊಲೆಯ ವಿಷಯದಲ್ಲಿ ಸಂಶಯಗೊಂಡು ಈ ಕೊಲೆ ಮಾಡಿದವರಾರು ಎಂದು ತನ್ನ ಆಸ್ಥಾನದಲ್ಲಿ ಪ್ರಶ್ನಿಸುತ್ತಾನೆ. ಅದಕ್ಕೆ ಬಸವಣ್ಣ ಪುರೋಹಿತಶಾಹಿಗಳು ಎನ್ನುತ್ತಾನೆ. ಆಗ ಬಿಜ್ಜಳ ಅದು ಹೇಗೆ ಹೇಳುತ್ತೀರಿ ಎಂದಾಗ, ಅದಕ್ಕೆ ಬಸವಣ್ಣ, ನಾನು ಜನಗಳ ನಡುವೆ ಇದ್ದೇನೆ ಎನ್ನುತ್ತಾನೆ. ಬಿಜ್ಜಳ ಮರುಮಾತನಾಡುವುದಿಲ್ಲ. ಈ ಐತಿಹಾಸಿಕ ಘಟನೆಯ ಸತ್ಯವನ್ನು ನಮ್ಮ ರಾಜಕಾರಣಿಗಳು ಪಾಲಿಸಿದ್ದಾದರೆ ವಿಕೃತ ಭಟ್ಟನಂತರವರ ಬಲೆಗೆ ಬೀಳಲಾರರು. ಅಕಸ್ಮಾತ್ ಬಿದ್ದರೆ ಸರ್ವನಾಶ ಗ್ಯಾರಂಟಿಯಂತಲ್ಲಾ, ಥೂತ್ತೇರಿ.

******

ಕಾದಂಬರಿ ಕಾರ್ಖಾನೆಯಾದ ಆರೆಸ್ಸೆಸ್ ಲೇಖಕ ಎಸ್.ಎಲ್ ಭೈರಪ್ಪನವರು ಯುವ ಮಾಣಿಗಳಿಗೊಂದು ಅದ್ಭುತವಾದಂತಹ ಕರೆ ಕೊಟ್ಟಿದ್ದಾರಲ್ಲಾ. ಅದೇನೆಂದರೆ ವಿದ್ಯಾವಂತ ಯುವ ಜನ ಹಳ್ಳಿಹಳ್ಳಿಗಳಿಗೆ ಹೋಗಿ ಮೋದಿ ಮಾಡಿದ ಒಳ್ಳೆ ಕೆಲಸಗಳನ್ನ ಅಲ್ಲಿನ ಗ್ರಾಮವಾಸಿಗಳಿಗೆ ಮನವರಿಕೆ ಮಾಡಿ ಎಂದು. ಎಂದಿನಂತೆ ವಿದ್ಯಾವಂತರು ಹಳ್ಳಿಗೆ ಹೋಗಿ ಹೇಳುವ ಮೋದಿ ಸಾಧನೆ ಪಟ್ಟಿ ಮಾಡಲಾಗಿ ಅವು ಇಂತಿವೆಯಲ್ಲಾ.

  • ಒಂದನೆಯದಾಗಿ ಹಿಂದುಮುಂದು ನೋಡದೆ ನೋಟು ಬ್ಯಾನು ಮಾಡಿ ದೇಶದ ಉದ್ದಗಲಕ್ಕೂ ಅಲ್ಲೋಲಕಲ್ಲೋಲವಾಗಿ ನೂರಾರು ಜನ ಸತ್ತು, ಸಾವಿರಾರು ಸಣ್ಣ ಉದ್ಯಮಗಳು ಕಣ್ಮರೆಯಾದದ್ದು.
  • ಎರಡನೆಯದಾಗಿ ಜಿಎಸ್‌ಟಿ ಎಂಬ ಮನೆಹಾಳ ತೆರಿಗೆ ವಸೂಲಿಯಿಂದಲೂ ಸಣ್ಣಪುಟ್ಟ ಉದ್ಯಮ ಬಾಗಿಲು ಹಾಕಿ ಬಡವರು ತಿನ್ನುವ ಕಡ್ಲೆಪುರಿ ಮೇಲೂ ಜಿಎಸ್‌ಟಿ ಬಂದಿದ್ದು.
  • ಸಿಎಎ ಕಾನೂನು ತರಲು ಹೊರಟು ಇಡೀ ಭಾರತದ ಮುಸ್ಲಿಮರು ತಮ್ಮ ಅಸ್ತಿತ್ವಕ್ಕಾಗಿ ಹೋರಾಡುವಂತೆ ಮಾಡಿದ್ದು.
  • ಕೃಷಿಕಾಯ್ದೆ ತಂದು ದೆಹಲಿ ಗಡಿಯಲ್ಲಿ ಹೋರಾಟನಿರತ 750 ಜನ ರೈತರು ಸಾಯುವಂತೆ ಮಾಡಿದ್ದು.
  • ಸಾವಿರಾರು ಕೋಟಿ ಒಪ್ಪಂದದ ರಫೇಲ್ ಹಗರಣ ಮುಚ್ಚಿಹಾಕಿ, ತ್ವರಿತವಾಗಿ ಮಾಡಿದ ಒಪ್ಪಂದ ಎಂದು ಬಿಂಬಿಸಿದ್ದು.
  • ಭಾರತದ ಸುಮಾರು ಹನ್ನೆರಡು ಉದ್ಯಮಗಳನ್ನು ಮಾರಿದ್ದೂ ಅಲ್ಲದೆ, ವಿಶೇಷ ಘಟಕವಾಗಿದ್ದ ರೈಲ್ವೆ ಇಲಾಖೆಯನ್ನ ಮುಗಿಸಲು ಪ್ರಯತ್ನಿಸುತ್ತಿರುವುದು; ಅವುಗಳ ಬಣ್ಣ ಬದಲಿಸಿ ಸೀಟಿನ ಅಳತೆ ಕಡಿಮೆ ಮಾಡಿ ಪ್ರಯಾಣಿಕರನ್ನ ಹಿಂಸಿಸುತ್ತಿರುವುದು.
  • ಕರ್ನಾಟಕ ವಿಧಾನಸಭೆಗೆ ನಡೆದ ಚುನಾವಣೆಗೆ ದಾಳಿಯಿಟ್ಟು ಒಂದು ಡಜನ್ ರೋಡ್ ಶೋ ಮಾಡಿ ಸೋತ ಸಿಟ್ಟಿಗೆ ಕರ್ನಾಟಕದ ಪಾಲಿನ ಅಕ್ಕಿ ನಿಲ್ಲಿಸಿದ್ದಲ್ಲದೆ ಇತಿಹಾಸದಲ್ಲಿ ದಾಖಲಾಗುವಂತೆ ವಿರೋಧಪಕ್ಷದ ನಾಯಕರನ್ನೆ ನೇಮಿಸದಿದ್ದುದು.
  • ನಮ್ಮದೇ ದೇಶದ ಭುಜದಂತಿರುವ ಮಣಿಪುರ ಎರಡು ತಿಂಗಳಿಂದ ಉರಿಯುತ್ತಿದ್ದರೂ ಆ ಕಡೆ ತಿರುಗಿಯೂ ನೋಡದೆ ಅಮೆರಿಕದಲ್ಲಿ ಯೋಗ ಮಾಡುತ್ತ ಕುಳಿತದ್ದು.

ಇದನ್ನೂ ಓದಿ: ಕುಮಾರಣ್ಣ ಪೇಶ್ವೆಗಳೊಂದಿಗೆ ಹೋಗಲಿದ್ದಾರಂತಲ್ಲಾ!

ಕಡೆಗೂ ಮೋದಿ ಬಾಯಿ ಬಿಟ್ಟಿದ್ದು ಯಾವಾಗೆಂದರೆ ನಿಸ್ಸಹಾಯಕ ಹೆಣ್ಣುಮಕ್ಕಳನ್ನು ಬೆತ್ತಲೆ ಮಾಡಿ ಅವರನ್ನ ಅತ್ಯಾಚಾರ ಮಾಡಿ ಕೊಲೆ ಮಾಡಿದ ವಿಡಿಯೋ ತುಣುಕೊಂದು ತಿಂಗಳುಗಳ ನಂತರ ವೈರಲ್ ಆದಾಗ! ಇಂತಹ ಮೋದಿಯ ಸಾಧನೆಗಳನ್ನ ಹಳ್ಳಿಹಳ್ಳಿಗೆ ಹೋಗಿ ಹೇಳಿ ಎಂದು ಕರೆಕೊಡುತ್ತಿರುವ ಭೈರಪ್ಪರಿಗೆ ವಯೋಸಹಜ ಮರೆವೇನೂ ಇಲ್ಲ, ಆದರೆ ದಶಕಗಳಿಂದ ಸಂಘ ಪರಿವಾರದಿಂದ ತರಬೇತು ಪಡೆದಿರುವ ಮಿದುಳು ಹಾಗೆ ಕೆಲಸ ಮಾಡುತ್ತಿದೆಯಂತಲ್ಲಾ, ಥೂತ್ತೇರಿ.

*****

ಈಚೆಗೆ ಚಂದ್ರಯಾನ ಉಡಾವಣೆಯಾಗಿದೆ. ಇಸ್ರೊ ಅಧ್ಯಕ್ಷ ಸೋಮನಾಥ್ ಸಾರಥ್ಯದಲ್ಲಿ ಎಂಟು ಜನ ವಿಜ್ಞಾನಿಗಳೆಂಬುವರು ತಿರುಪತಿಯಲ್ಲಿ ನಿಂತು ಭಯ ಭಕ್ತಿಯಿಂದ ಪೂಜೆ ಸಲ್ಲಿಸಿದ್ದಾರೆ. ತಿಮ್ಮಪ್ಪ ಇಡೀ ಕರ್ನಾಟಕದ ಸಕಲಿಷ್ಟು ಜಾತಿಗಳ ದೇವರಾದ್ದರಿಂದ ಜನರಿಗೆಲ್ಲಾ ಈ ಚಂದ್ರಯಾನ ಉಡಾವಣೆಯಿಂದ ಒಳ್ಳೆಯದಾಗುತ್ತದಂತೆ. ಇವರ ಇಂಗಿತವನ್ನ ಆಡಿಕೊಳ್ಳುವುದಾದರೆ ಚಂದ್ರನ ಮೇಲೆ ಈ ಯಂತ್ರ ಕಾಲೂರಿದ ಕ್ಷಣದಿಂದಲೇ ಭಾರತದಲ್ಲಿ ಬಿಜೆಪಿಗಳ ಹಾವಳಿಯಿಂದ ಕ್ಷೆಭೆಗೊಂಡಿರುವ ಮನಸ್ಸುಗಳು ಶಾಂತಗೊಳ್ಳಲಿವೆ. ನಿರುದ್ಯೋಗ ಸಮಸ್ಯೆ ಬಗೆಹರಿಯಲಿದೆ. ರೈತರು ಯಾವ ಸಮಸ್ಯೆಗಳು ಇಲ್ಲದೆ ಸಂತೃಪ್ತ ಜೀವನ ನಡೆಸುತ್ತಾರೆ. ಇತ್ಯಾದಿ ಸಮಸ್ಯೆಗಳಿಗೆಲ್ಲಾ ಸಂಜೀವಿನಿಯಾಗಿ ಚಂದ್ರನ ನೆಲೆಯಿಂದಲೇ ಛೂಮಂತ್ರ ಕಾಳಿ ಮಾಡುವ ಈ ಯಂತ್ರ ಪುರೋಹಿತಶಾಹಿಗಳಿಗೆ ಹೆಮ್ಮೆಯ ಸಾಧನೆ. ಪುರಾಣ ಸದೃಶ ಕಥೆ ಹೆಣೆಯುವುದರಲ್ಲಿ ನಿಸ್ಸೀಮರಾದ ಇವರು ಟಿ.ವಿಯೊಳಕ್ಕೂ ಬಂದು ಕೂತಿರುವುದಲ್ಲದೆ, ವಿಜ್ಞಾನಕ್ಕೂ ತಿರುಪತಿ ಭಕ್ತಿಗೂ ಏನು ಸಂಬಂಧ ಎಂದವರ ಮೇಲೆ ಎಗರಿ ಬೀಳತೊಡಗಿವೆ. ಇದಂತಿರಲಿ ಹಿಂದಿನ ಬಿಜೆಪಿ ಸರಕಾರದಲ್ಲಿ ಸಚಿವರಾಗಿದ್ದ ಪುರೋಹಿತರೊಬ್ಬರು, ತಿರುಪತಿ ದರ್ಶನ ಪಡೆದ ವಿಜ್ಞಾನಿಗಳನ್ನ ಆಡಿಕೊಂಡಿದ್ದಕ್ಕೆ ಸಿಟ್ಟುಗೊಂಡು, ಹುಲಿಕುಂಟೆ ಮೂರ್ತಿ ಮೇಲೆ ನರಿಯಂತೆ ಎಗರಾಡಿದ್ದಾರಲ್ಲಾ. ಈತನ ನಡವಳಿಕೆ ನೋಡಿದರೆ ಚಕ್ರತೀರ್ಥ ವಕ್ರತೀರ್ಥ ನಾಗೇಶ ಇತ್ಯಾದಿಗಳ ಸಂಬಂಧಿಯಾಗಿರುವುದರಲ್ಲಿ ಯಾವ ಸಂಶಯವೂ ಇಲ್ಲ. ಬಿಜೆಪಿಗಳ ಮಂದೆಯಲ್ಲಿ ಈತ ಪರವಾಗಿಲ್ಲ ಎಂದು ನಮ್ಮ ಎಂ.ಪಿ ಪ್ರಕಾಶರು ವಾದಿಸುತ್ತಿದ್ದುದಲ್ಲದೆ, ತಮ್ಮ ಊರಿಗೂ ಕರೆದಿದ್ದರು. ಆದರೀಗ ಈತ ತನ್ನ ಚರ್ಮದೊಳಕ್ಕೆ ಸೇರಿಸಿಕೊಂಡಿರುವ ಜನಿವಾರದ ಅನಾವರಣ ಮಾಡಿದ್ದಾರೆ. ಅದೂ ಹುಲಿಕುಂಟೆ ಮೂರ್ತಿಯವರನ್ನ ಕೆಣಕಿ. ಅಂತೂ ಹುಲಿಕುಂಟೆ ಮೂರ್ತಿಗೆ ಥ್ಯಾಂಕ್ಸ್, ಥೂತ್ತೇರಿ.

******

ಕರ್ನಾಟಕದಲ್ಲಿ ಹೊಸದಾಗಿ ರಚನೆಗೊಂಡ ಸರಕಾರ ವಿರೋಧಪಕ್ಷಗಳ ವಿಕೃತ ದಾಳಿಯಿಂದ ಚೇತರಿಸಿಕೊಳ್ಳುತ್ತಿದೆ. ಇಂತಹ ಸಮಯದಲ್ಲಿ ಹರಿಪ್ರಸಾದ್ ಎಂಬ ಮಹಾನಾಯಕರು ನಮ್ಮ ಜನಾಂಗವನ್ನು ಕಡೆಗಣಿಸಿದರೆ ಮುಖ್ಯಮಂತ್ರಿಯನ್ನು ಇಳಿಸುವುದೂ ಗೊತ್ತು ಎಂದು ಹೇಳಿ ಕುಮಾರಣ್ಣ ಮತ್ತು ಬೊಮ್ಮಾಯಿಗೆ ರೋಮಾಂಚನವುಂಟುಮಾಡಿದ್ದಾರಲ್ಲಾ. ಹರಿಪ್ರಸಾದ್ ಎಲ್ಲ ಜನಾಂಗ ಎಂದಿದ್ದರೆ ಇಂತ ಅಣಕ ಬರೆಯುವ ಅಗತ್ಯವಿರಲಿಲ್ಲ. ಆದರೆ ಅವರು ತನ್ನ ಜನಾಂಗದ ಹೆಸರನ್ನು ಎಳೆದು ತಂದಿರುವುದರಿಂದ ಕೆಲ ಮಾಹಿತಿಯನ್ನ ಮುಖಕ್ಕೆ ಹಿಡಿಯುವ ಅಗತ್ಯವಂತಲ್ಲ.

1995ರಲ್ಲಿ ಈ ನಾಡಿನ ಎರಡನೇ ಬಹುದೊಡ್ಡ ಸಂಖ್ಯೆಯಾದ ಒಕ್ಕಲಿಗರ ಪೈಕಿ ಕೇವಲ ಎರಡು ಜನ ಎಂ.ಪಿಗಳಿದ್ದರೆ ಹರಿಪ್ರಸಾದರ ಸಮುದಾಯದ ಪೈಕಿ ಐದು ಜನ ಎಂ.ಪಿ ಗಳಿದ್ದರು. ಹಲವು ವ್ಯವಹಾರಗಳಲ್ಲೂ ಅವರು ಪ್ರಧಾನವಾಗಿ ಇದ್ದರು. ಕನ್ನಡ ಚಿತ್ರರಂಗದಲ್ಲೂ ಅನೇಕ ಗಣ್ಯರಿದ್ದರು. ಪತ್ರಿಕಾರಂಗದಲ್ಲೂ ಪ್ರಧಾನವಾಗಿ ಮುಂಚೂಣಿಯಲ್ಲಿದ್ದರು. ಹೀಗೆ ಸರಕಾರ, ಸಿನಿಮಾ, ಮಾಧ್ಯಮ ಮತ್ತು ಉದ್ಯಮದಲ್ಲಿದ್ದ ಹರಿಪ್ರಸಾದರ ಸಮುದಾಯದ ಜನ ತುಂಬ ಘನತೆಯಿಂದ ನಡೆದುಕೊಂಡು ಈ ನಾಡಿನ ಕೀರ್ತಿಯನ್ನ ಬೆಳಗಿದರು. ಈಗ ಅಂತವರ ಹೆಸರಿಗೆ ಮಸಿ ಬಳಿಯುತ್ತಿರುವ ಹರಿಪ್ರಸಾದ್ ಅವರಿಗೆ ಸೈರಣೆ ಬೇಕಾಗಿದೆಯಂತಲ್ಲಾ. ಅದೂ ಜವಾಬ್ದಾರಿಯುತ ಸೈರಣೆ ಮುಖ್ಯ. ಇಲ್ಲವಾದರೆ ’ಬಂ’ನಂತೆ ಜೆಡಿಎಸ್‌ಗೆ ಹೋಗಿ ಕಡೆಗಣನೆಗೆ ಒಳಗಾಗಬೇಕಾಗುತ್ತಂತಲ್ಲಾ, ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ರತಿಭಟನೆಗೆ ಹೋಗುವ ಮಹಿಳೆಯರು ಗ್ಯಾಂಗ್‌ರೇಪ್‌ ಆನಂದಿಸುತ್ತಾರೆ ಎಂದಿದ್ದ ಟಿ.ಜಿ. ಮೋಹನ್‌ದಾಸ್‌ ವಿರುದ್ಧ ಎಫ್‌ಐಆರ್‌ ದಾಖಲು

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ, ನನ್ನ ಕೈಯಲ್ಲಿ ಅಧಿಕಾರವಿದ್ದರೆ ಗುಂಡು ಹಾರಿಸುತ್ತಿದ್ದೆ ಎಂದು ಇತ್ತೀಚಿನ ಯೂಟ್ಯೂಬ್ ವೀಡಿಯೊದಲ್ಲಿ ಹೇಳಿಕೆ ನೀಡಿದ್ದ ಹಿಂದುತ್ವವಾದಿ ಚಿಂತಕ ಟಿ.ಜಿ. ಮೋಹನ್‌ದಾಸ್ ವಿರುದ್ಧ ತಿರುವನಂತಪುರಂ ಸಿಟಿ...

ಫ್ರಾನ್ಸ್‌ನಲ್ಲಿ ಕೆಲಸದ ಸಮಯ ಟ್ರ್ಯಾಕಿಂಗ್ ಲೋಪ: ಇನ್ಫೋಸಿಸ್‌ಗೆ ₹1.9 ಕೋಟಿ ದಂಡ: ನಾರಾಯಣಮೂರ್ತಿಯವರ ‘70 ಗಂಟೆ ಶ್ರಮ’ದ ಮಾದರಿ ಟ್ರೋಲ್

ಭಾರತೀಯ ಐಟಿ ರಫ್ತು ಸೇವಾ ರಂಗದ ಬೃಹತ್ ಸಂಸ್ಥೆಯಾದ ಇನ್ಫೋಸಿಸ್‌ಗೆ ಫ್ರಾನ್ಸ್‌ನಲ್ಲಿ ಹಿನ್ನಡೆಯಾಗಿದೆ. ಉದ್ಯೋಗಿಗಳ ಕೆಲಸದ ಸಮಯವನ್ನು ದಾಖಲಿಸುವ ವ್ಯವಸ್ಥೆಯಲ್ಲಿನ ನ್ಯೂನತೆಗಳು ಹಾಗೂ ಸ್ಥಳೀಯ ಕಾರ್ಮಿಕ ನಿಯಮಾವಳಿಗಳ ಪಾಲನೆಯಲ್ಲಿ ಕಂಡುಬಂದ ಲೋಪಗಳ ಹಿನ್ನೆಲೆಯಲ್ಲಿ...

ವೋಟರ್ ಐಡಿ, ಬ್ಯಾಂಕ್ ಪಾಸ್‌ಬುಕ್, ಆಧಾರ್, ಜಮೀನಿನ ಹಕ್ಕು ಪತ್ರ ಇದ್ದ ಮಾತ್ರಕ್ಕೆ ಭಾರತೀಯ ಪ್ರಜೆಯಾಗಲ್ಲ: ಕಲ್ಕತ್ತಾ ಹೈಕೋರ್ಟ್

ಆಧಾರ್ ಕಾರ್ಡ್, ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಪಾಸ್‌ಬುಕ್ ಮತ್ತು ಪಿತ್ರಾರ್ಜಿತ ಜಮೀನಿನ ದಾಖಲೆಗಳು ಭಾರತೀಯ ಪೌರತ್ವವನ್ನು ನಿರೂಪಿಸಲು ಅಂತಿಮ ಅಥವಾ ನಿರ್ಣಾಯಕ ಪುರಾವೆಗಳಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಮಹತ್ವದ...

‘ನಿಮ್ಮ ಸಮಯ ಬಂದಿದೆ’: ಟೌನ್‌ಶಿಪ್ ಯೋಜನೆ ವಿರುದ್ಧದ ಪ್ರತಿಭಟನೆಗೆ 500 ದಿನ: ‘Gen-Z’ ಯುವಕರ ಬೆಂಬಲ ಕೋರಿದ ಬಿಡದಿ ರೈತರು

ಬೆಂಗಳೂರು: ಪ್ರಸ್ತಾವಿತ ಬಿಡದಿ ಟೌನ್‌ಶಿಪ್ ಯೋಜನೆ ವಿರುದ್ಧ ಕೃಷಿ ಭೂಮಿ ಉಳಿವಿಗಾಗಿ ನಡೆಯುತ್ತಿರುವ ರೈತರ ಸುದೀರ್ಘ ಹೋರಾಟವು ಇದೀಗ ಒಂದು ಪ್ರಮುಖ ಘಟ್ಟಕ್ಕೆ ಬಂದು ತಲುಪಿದೆ. ಭೂಸ್ವಾಧೀನದ ವಿರುದ್ಧ ಸತತವಾಗಿ ನಡೆಯುತ್ತಿರುವ ಈ...

ಕೊಡಗಿನ ಆದಿವಾಸಿ ಹಾಡಿಗಳಲ್ಲಿ ಎಸ್‌ಐಆರ್ ಅವ್ಯವಸ್ಥೆ : ಬಿಎಲ್‌ಒಗಳಿಗೆ ತರಬೇತಿಯ ಕೊರತೆ, ಇನ್ನೂ ತಲುಪದ ಗಣತಿ ಫಾರಂ

ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಬಹಳ ಯಶಸ್ವಿಯಾಗಿ ನಡೆಯುತ್ತಿದೆ, ಮತದಾರರಿಗೆ ಎಲ್ಲಾ ರೀತಿಯ ಸಹಾಯಗಳನ್ನು ಒದಗಿಸಲಾಗುತ್ತಿದೆ ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಅನ್ಬುಕುಮಾರ್ ಅವರು ಪದೇ...

SIR: ಉಡುಪಿಯಲ್ಲಿ ಕರ್ತವ್ಯನಿರತ BLO ಮೇಲೆ ಹಲ್ಲೆಗೆತ್ನಿಸಿದ ಮಾಜಿ ಪಂಚಾಯತ್ ಅಧ್ಯಕ್ಷ, FIR ದಾಖಲು

ಚುನಾವಣಾ ಮತದಾರರ ಪಟ್ಟಿ ಪರಿಷ್ಕರಣೆ (SIR) ಕರ್ತವ್ಯದಲ್ಲಿದ್ದ ಅಂಗನವಾಡಿ ಕಾರ್ಯಕರ್ತೆ ಹಾಗೂ ಬಿಎಲ್‌ಒ (BLO) ಮಹಿಳೆ ಮೇಲೆ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ ಗಂಭೀರ ಆರೋಪ ಉಡುಪಿ...

ಕೋಟ್ಯಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ NTA ಚೆಲ್ಲಾಟ: RTI ನಲ್ಲಿ ಬಯಲಾಯ್ತು NTA ಕರ್ಮಕಾಂಡ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಎನ್ನುವ ಈ ಸರ್ಕಾರಿ ಸಂಸ್ಥೆಯ ಮೇಲೆ ಪ್ರತಿವರ್ಷ ಕೋಟ್ಯಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕನಸುಗಳನ್ನು ಇಟ್ಟುಕೊಳ್ಳುತ್ತಾರೆ. 2018ರಲ್ಲಿ ಸ್ಥಾಪನೆಯಾದ ದಿನದಿಂದ ಇಲ್ಲಿಯವರೆಗೆ ಎನ್‌ಟಿಎ ಸುಮಾರು 270ಕ್ಕೂ ಹೆಚ್ಚು...

ಬಾಗಲಕೋಟೆ: ಪತಿಯಿಂದ 23 ವರ್ಷದ ಪತ್ನಿಯ ಕ್ರೂರ ಕೊಲೆ, ಪೋಷಕರಿಗೆ ವೀಡಿಯೊ ಕರೆ ಮಾಡಿ ಮಗಳ ಸಾವು-ಬದುಕಿನ ಹೋರಾಟ ತೋರಿಸಿದ ವಿಕೃತ ಪತಿ

ಬಾಗಲಕೋಟೆ: ಪತಿಯೋರ್ವ ತನ್ನ 23 ವರ್ಷದ ಪತ್ನಿಯ ಮೇಲೆ ವಿವಾಹೇತರ ಅನೈತಿಕ ಸಂಬಂಧದ ಶಂಕೆ ವ್ಯಕ್ತಪಡಿಸಿ, ಆಕೆಯ ಮೇಲೆ ಮರದ ದಿಮ್ಮಿಯಿಂದ ಕ್ರೂರವಾಗಿ ಹಲ್ಲೆ ನಡೆಸಿ, ತದನಂತರ ನೇಣಿಗೆ ಬಿಗಿದು ಅತ್ಯಂತ ಅಮಾನವೀಯವಾಗಿ...

ಕಾನೂನು-ಸುವ್ಯವಸ್ಥೆಗೆ ವಿದ್ಯಾರ್ಥಿಗಳು ಸಮಸ್ಯೆಯಾಗುತ್ತಾರೆ ಎಂದು ಪರಿಗಣಿಸಿದ್ದು ಏಕೆ: ಅಭಿಷೇಕ್ ಬ್ಯಾನರ್ಜಿ

ರಾಷ್ಟ್ರ ರಾಜಧಾನಿ ದೆಹಲಿ ಮತ್ತು ದೆಶದಾದ್ಯಂತ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಭಾರೀ ಪೊಲೀಸ್ ಬಲಪ್ರಯೋವನ್ನು ವಿಪಕ್ಷಗಳು ಇಂದು ಲೋಕಸಭೆಯಲ್ಲಿ ಖಂಡಿಸಿವೆ. ವಿದ್ಯಾರ್ಥಿಗಳ...

ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗೇರ್ ವಿರುದ್ದ ಮೈಸೂರಿನಲ್ಲಿ ದೂರು ದಾಖಲು

ಸಂವಿಧಾನಬದ್ಧ ಮೀಸಲಾತಿಯ ಕುರಿತು ಅತ್ಯಂತ ನಿಂದನಾತ್ಮಕ, ಅವಹೇಳನಕಾರಿ ಹಾಗೂ ಸಮಾಜದಲ್ಲಿ ದ್ವೇಷ ಪ್ರಚೋದಿಸುವ ರೀತಿಯ ಹೇಳಿಕೆ ನೀಡಿರುವ 'ಪಬ್ಲಿಕ್ ಟಿವಿ' ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಮೈಸೂರಿನಲ್ಲಿ ಕಾನೂನು ಕ್ರಮಕ್ಕೆ ಆಗ್ರಹಿಸಿ ಪೊಲೀಸ್‌...