Homeಅಂಕಣಗಳುದೇವನೂರು ಮಾತು ಕಾಲಜ್ಞಾನಿಯ ಸೂಚನೆಯಂತಲ್ಲಾ!

ದೇವನೂರು ಮಾತು ಕಾಲಜ್ಞಾನಿಯ ಸೂಚನೆಯಂತಲ್ಲಾ!

- Advertisement -
- Advertisement -

ಈ ಸರಕಾರಕ್ಕೆ ನರಬಲಿ ಬೇಕಿದೆ ಎಂದು ದೇವನೂರ ಮಹಾದೇವ ಭವಿಷ್ಯ ನುಡಿದಿದ್ದಾರಲ್ಲಾ. ಸಾಹಿತ್ಯ ಲೋಕ ಕಂಡ ಅಪರೂಪದ ಪ್ರತಿಭೆ ದೇವನೂರ. ಶತಮಾನಗಳಿಂದ ತುಳಿದವರು ಮತ್ತು ತುಳಿಸಿಕೊಂಡವರ ಮನಸ್ಥಿತಿಯನ್ನು ಬಿಚ್ಚಿ ಹರವಿ, ಇದೇ ನೋಡಿ ನಿಮ್ಮ ಹಣೆಬರಹವೆಂದು ಎತ್ತರದಲ್ಲಿ ನಿಂತು ತೋರಿದವರು.
ಅದೆಲ್ಲಕ್ಕಿಂತ ಮುಖ್ಯವಾಗಿ ಹೊಲೆ ಮಾದಿಗರು ಎಂದಕೂಡಲೇ ಸೋ ಕಾಲ್ಡ್ ಮೇಲು ಜಾತಿಗಳೆನಿಸಿಕೊಂಡವರಲ್ಲಿ ಮೂಡುವ ತಿರಸ್ಕಾರವನ್ನು ಪತ್ತೆಹಚ್ಚಿ ಹೇಳಿದವರು. ಮೇಲು ಜನರ ಈ ಕಾಯಿಲೆ ಇನ್ನು ಗುಣವಾಗಿಲ್ಲದ ಈ ಸಂದರ್ಭದಲ್ಲಿ, ಮುಸ್ಲಿಮ್ ಎಂದ ಕೂಡಲೇ ಎಲ್ಲರಿಗೂ ಅಸಹನೆ ಮೂಡುವಂತೆ ಶ್ರಮಿಸುತ್ತಿರುವವರ ವಿರುದ್ಧ ಇದೇ ಮಹಾದೇವ ತಿರುಗಿ ಬಿದಿದ್ದಾರಲ್ಲಾ. ಏಕೆಂದರೆ ಮುಸ್ಲಿಮರನ್ನ ಮುರಿದು ಮೂಟೆಕಟ್ಟಿ ಮಡಗಿದ ನಂತರ, ರಾಮಸೇನೆ ಎಂಬ ವಾನರರ ಸಮರ ದಲಿತರ ವಿರುದ್ಧ ಆರಂಭವಾಗುವುದರಲ್ಲಿ ಯಾವ ಸಂಶಯವೂ ಇಲ್ಲ. ಏಕೆಂದರೆ ಪ್ರಪಂಚದ ಸಂವಿಧಾನಗಳನ್ನೆಲ್ಲಾ ಓದಿ ಭಾರತಕ್ಕೆಂದು ಅಪರೂಪದ ಸಂವಿಧಾನ ನೀಡಿದ ಅಂಬೇಡ್ಕರ್ ಬಗ್ಗೆ ಪುರೋಹಿತಶಾಹಿ ರಾಷ್ಟ್ರೋತ್ಥಾನ ಸಾಹಿತ್ಯದಲ್ಲಿ ನೈಜವನ್ನು ಮರೆಮಾಚಿ ಅವರಿಗೆ ಬೇಕಾದಂತೆ ಬರೆದುಕೊಂಡಿದ್ದಾರೆ. ಅಂಬೇಡ್ಕರ್ ಘನತೆ ಕಲ್ಪಿಸಿಕೊಟ್ಟ ಜನರ ಮೇಲೆ ಬೀಳಲು ಇಷ್ಟು ಸಾಕಲ್ಲವೆ ಸಂಘಿಗಳಿಗೆ. ಥೂತ್ತೇರಿ.

*****

ಮಹಿಷ ಮಂಡಲದಲ್ಲಿ ನಿಂತು ಬಿಜೆಪಿಯವರ ಮನಸ್ಥಿತಿಯನ್ನ ಅನಾವರಣ ಮಾಡಿದ ದೇವನೂರ ನಡವಳಿಕೆ ಕರ್ನಾಟಕದ ಇತರ ಸಾಹಿತಿಗಳಿಗೆ ಸ್ಪೂರ್ತಿಯುಂಟು ಮಾಡಬೇಕಿತ್ತು. ಏಕೆಂದರೆ ಬರೆಯುವ ಸಾಹಿತಿಗಳು ಏನು ಬರೆಯಬೇಕೆಂದು ಚಿಂತಿಸುವಂತಾಗಿದೆ. ತನ್ನ ಯಾವ ಪದ ಏನು ಅರ್ಥಕೊಡಬಹುದು, ಯಾವ ವಾಕ್ಯದಿಂದ ಯಾರು ಕೆರಳಬಹುದು, ನನ್ನ ಪುಸ್ತಕದಿಂದ ಯಾರಾದರೂ ರೊಚ್ಚಿಗೇಳುವರೆ ಎಂಬ ಗೊಂದಲಕ್ಕೆ ಸಿಕ್ಕಿಬಿದ್ದಿರುವಾಗ ಈ ಸಾಹಿತಿಗಳು ದೇವನೂರರಂತೆ ಬೀದಿಗೆ ಬರಬೇಕಿತ್ತು. ಒಂದು ಪ್ರೆಸ್‌ಮಿಟ್ ಮಾಡಬಹುದಿತ್ತು. ತನ್ನ ಮನೆಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ನಡೆದುಕೊಂಡು ಹೋಗಿ ಸರ್ವಜನಾಂಗದ ಮನವಿ ಕೊಡಬಹುದಿತ್ತು. ಜನರಿಗಾಗಿ ಬರೆಯುವ ಇವರು ಜನರಿಗೆ ತೊಂದರೆಯಾದಾಗ ಸುಮ್ಮನಿರಬಾರದಿತ್ತು ಎಂದು ಕರ್ನಾಟಕದ ಒಳ್ಳೆಯ ಮನಸ್ಸುಗಳು ಆಲೋಚಿಸುತ್ತಿರುವಾಗಲೇ ಸಾಂಸ್ಕೃತಿಕ ನಗರಿ ಎಂದೇ ಖ್ಯಾತಿಪಡೆದಿರುವ ಧಾರವಾಡದ ನುಗ್ಗಿಕೇರಿಗೆ ನುಗ್ಗಿದ ವಾನರ ಸೇನೆ ನಬೀಸಾಬಿಯ ಕಲ್ಲಂಗಡಿ ಹಣ್ಣನ್ನು ಕಿತ್ತು ತಿಂದಿವೆಯಂತಲ್ಲಾ. ಥೂತ್ತೇರಿ.

ರಣಬಿಸಿಲ ದಾಹ ನೀಗಿಸಲೆಂದು ರೈತ ಬೆಳೆವ ಬೇಸಿಗೆ ಬೆಳೆ ಕಲ್ಲಂಗಡಿ ಹಣ್ಣು. ಬೆಳೆದವನು ಮಾರುವವನನ್ನ ಕಾಯುತ್ತಾನೆ, ಮಾರುವವನು ಕೊಂಡು ತಿನ್ನುವ ಗಿರಾಕಿಗಾಗಿ ಕಾಯುತ್ತಾನೆ, ಇದು ಒಬ್ಬರನ್ನೊಬ್ಬರು ಅವಲಂಬಿಸಿದ ಬದುಕು. ಇಂತಲ್ಲಿಗೆ ನುಗ್ಗಿದ ವಾನರ ಸೇನೆಯ ಇತಿಹಾಸ ಕೆದಕಿದರೆ ಅವು ಎಂದೂ ಭೂಮಿ ನೆಚ್ಚಿ ಬದುಕಿದವಲ್ಲ. ಭೂಮಿ ನೆಚ್ಚಿದವರನ್ನ ಗೌರವಿಸಿದ್ದು ಈ ವಾನರ ಸೇನೆಯ ಸಂಸ್ಕೃತಿಯಲ್ಲೇ ಇಲ್ಲ. ಅದು ಭೂಮಿ ನೆಚ್ಚಿ ಬದುಕಿದವನನ್ನ ಹೊಲ ಉಳುವ ಎತ್ತಿನಂತೆ ನೋಡುತ್ತಾ ಬಂದಿದೆ. ಇದನ್ನು ಕಂಡು ಕುವೆಂಪು ಉಳುವಾ ಯೋಗಿಯ ನೋಡಲ್ಲಿ ಎಂದು ತೋರಿಸಿದರು. ಅಲ್ಲಿಯವರೆಗೂ ಎತ್ತಿನ ಹಿಂದೆ ಎತ್ತಾಗಿ ತಿರುಗುವವನನ್ನು ಎತ್ತೆಂದೇ ಪರಿಗಣಿಸಿದ್ದ ಭೂಸುರೋತ್ತಮರು, ಅವನನ್ನ ಯೋಗಿ ಎಂದದ್ದು ಎಷ್ಟು ಸರಿ ಎಂದು ಕೊಂಕು ನುಡಿದಿದ್ದವು. ಸೂರ್ಯನಿಗಿಂತಲೂ ಮೊದಲೇ ತನ್ನ ಹೊಲದಲ್ಲಿ ಆರೂಡಿದ ರೈತ ಹುಕ್ಕೆ ಗೆರೆಯಲ್ಲೇ ನೇಗಿಲು ಬಿಡಬೇಕು. ಅತ್ತ ಇತ್ತ ತಿರುಗಿದರೆ ಮೊದಲ ಸೀಳಿಗೇ ನುಗ್ಗುತ್ತದೆ. ಅಂದರೆ ಉತ್ತ ಪಾತಿಯನ್ನೆ ಉಳಬೇಕಾಗುತ್ತದೆ. ಆದ್ದರಿಂದ ತಲೆ ಎತ್ತದ ರೈತ, ಹೆಂಡತಿ ರೊಟ್ಟಿ ತಂದಾಗಲೇ ತಲೆ ಎತ್ತಿ ನೋಡುತ್ತಿದ್ದುದು. ಯೋಗಿಯ ಧ್ಯಾನವಿಲ್ಲದೆ ಹೊಲ ಉಳಲಾಗುವುದಿಲ್ಲ. ಈ ಸಂಸ್ಕೃತಿಯೇ ಗೊತ್ತಿಲ್ಲದವುಗಳಿಗೆ ಭೂಮಿಯಿಂದ ಬೆಳೆದ ದವಸ ಧಾನ್ಯ ಹಣ್ಣುಗಳ ಬಗ್ಗೆ ಗೌರವವೇ ಇರುವುದಿಲ್ಲ. ಇಂತವರೇ ನಬೀಸಾಬ್ ಅಂಗಡಿಗೆ ದಾಳಿಯಿಟ್ಟವಂತಲ್ಲಾ. ಥೂತ್ತೇರಿ.

*****

ಕರ್ನಾಟಕದಲ್ಲೀಗ ರಾಜನ ಭಯ, ರಾಜನಿಲ್ಲದ ಭಯ ಎರಡೂ ಮನಸ್ಥಿತಿ ಅಮರಿಕೊಂಡಿವೆಯಂತಲ್ಲಾ. ಆಗೊಮ್ಮೆ ಗುಜರಾತಿನಲ್ಲಿ ಈ ಸ್ಥಿತಿಯುಂಟಾಗಿತ್ತು. ಅಲ್ಲಿ ಮೋದಿ ಎಂದಕೂಡಲೇ ಮುಸ್ಲಿಮರು ಬೆಚ್ಚಿ ಬೀಳುತ್ತಿದ್ದರು. ಮುಖ್ಯಮಂತ್ರಿಯ ಹುಕುಂನಂತೆಯೇ ವಿಶ್ವಹಿಂದುಗಳು ಭಜರಂಗಿಗಳು ರಾಮಸೇನೆ ವಾನರಸೇನೆಯೆಲ್ಲಾ ಸೇರಿಕೊಂಡು ಮೂರುದಿನ ಮುಸ್ಲಿಮರನ್ನ ಹುರಿದು ಮುಕ್ಕಿದ್ದರು. ಇದೀಗ ಕರ್ನಾಟಕದಲ್ಲಿ ಅಂತಹ ತಯಾರಿಯೊಂದು ನಡೆಯುತ್ತಿದೆಯಂತಲ್ಲಾ. ಪ್ರಕ್ಷುಬ್ದವಾದ ಸ್ಥಳಕ್ಕೆ ಪೊಲೀಸರು ಭೇಟಿಯಿತ್ತು ಮಿಂಚಿನ ಕಾರ್ಯಾಚರಣೆ ನಡೆಸುವುದರ ಬದಲು ನೊಂದವರು ಬಂದು ದೂರು ಕೊಡುವುದನ್ನೆ ಕಾಯುತ್ತಿದ್ದಾರಂತಲ್ಲಾ. ಅದೇ ಬಿಜೆಪಿ ಜನರಿಗೆ ತೊಂದರೆ ಕೊಟ್ಟವರನ್ನ ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸುವ ಪೊಲೀಸರು ಕರ್ನಾಟಕ ಈವರೆಗೆ ಕಾಣದಿದ್ದ ಹೋಂ ಮಿನಿಸ್ಟರ್ ಏನು ಹೇಳುತ್ತಿದ್ದಾರೆಂದು ಕಾಯುತ್ತಿದ್ದಾರಂತಲ್ಲಾ. ಹೋಂ ಮಿನಿಸ್ಟರ್ ಸಾಧನೆ ಯಾವುದೆಂದರೆ ಭದ್ರಾವತಿಯ ಕಾಗದ ಕಾರ್ಖಾನೆ ಉದ್ಧಾರ ಮಾಡಪ್ಪ ಎಂದು ಅಧ್ಯಕ್ಷನನ್ನಾಗಿ ಕೂರಿಸಿದರೆ ವಾರೊಪ್ಪತ್ತಿನಲ್ಲಿ ಅದನ್ನು ಹಾಳು ಮಾಡಿದ್ದೂ ಅಲ್ಲದೆ ಅದರ ಬಾಗಿಲಿಗೆ ಬೀಗ ಜಡಿದು ಅರಗದ ಕಡೆ ಹೋದದ್ದು. ಇಂತಹ ವ್ಯಕ್ತಿಯನ್ನು ಕರ್ನಾಟಕವನ್ನ ಹದ್ದುಬಸ್ತಿನಲ್ಲಿಡಬೇಕಾದ ಜವಾಬ್ದಾರಿ ಹೊರೆಸಿ ಕೂರಿಸಿದರೆ ಏನಾಗಬೇಕೋ ಅದೇ ಆಗುತ್ತಿದೆ. ಅಂದರೆ ಕೇಶವ ಕೃಪದ ಸೂಚನೆಗಳು ಜಾರಿಯಾಗುತ್ತಿವೆಯಂತಲ್ಲಾ. ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ:  ಸಿದ್ದರಾಮಯ್ಯ ರಾವಣನಂತಲ್ಲಾ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...