Homeಅಂಕಣಗಳುದೇವನೂರು ಮಾತು ಕಾಲಜ್ಞಾನಿಯ ಸೂಚನೆಯಂತಲ್ಲಾ!

ದೇವನೂರು ಮಾತು ಕಾಲಜ್ಞಾನಿಯ ಸೂಚನೆಯಂತಲ್ಲಾ!

- Advertisement -
- Advertisement -

ಈ ಸರಕಾರಕ್ಕೆ ನರಬಲಿ ಬೇಕಿದೆ ಎಂದು ದೇವನೂರ ಮಹಾದೇವ ಭವಿಷ್ಯ ನುಡಿದಿದ್ದಾರಲ್ಲಾ. ಸಾಹಿತ್ಯ ಲೋಕ ಕಂಡ ಅಪರೂಪದ ಪ್ರತಿಭೆ ದೇವನೂರ. ಶತಮಾನಗಳಿಂದ ತುಳಿದವರು ಮತ್ತು ತುಳಿಸಿಕೊಂಡವರ ಮನಸ್ಥಿತಿಯನ್ನು ಬಿಚ್ಚಿ ಹರವಿ, ಇದೇ ನೋಡಿ ನಿಮ್ಮ ಹಣೆಬರಹವೆಂದು ಎತ್ತರದಲ್ಲಿ ನಿಂತು ತೋರಿದವರು.
ಅದೆಲ್ಲಕ್ಕಿಂತ ಮುಖ್ಯವಾಗಿ ಹೊಲೆ ಮಾದಿಗರು ಎಂದಕೂಡಲೇ ಸೋ ಕಾಲ್ಡ್ ಮೇಲು ಜಾತಿಗಳೆನಿಸಿಕೊಂಡವರಲ್ಲಿ ಮೂಡುವ ತಿರಸ್ಕಾರವನ್ನು ಪತ್ತೆಹಚ್ಚಿ ಹೇಳಿದವರು. ಮೇಲು ಜನರ ಈ ಕಾಯಿಲೆ ಇನ್ನು ಗುಣವಾಗಿಲ್ಲದ ಈ ಸಂದರ್ಭದಲ್ಲಿ, ಮುಸ್ಲಿಮ್ ಎಂದ ಕೂಡಲೇ ಎಲ್ಲರಿಗೂ ಅಸಹನೆ ಮೂಡುವಂತೆ ಶ್ರಮಿಸುತ್ತಿರುವವರ ವಿರುದ್ಧ ಇದೇ ಮಹಾದೇವ ತಿರುಗಿ ಬಿದಿದ್ದಾರಲ್ಲಾ. ಏಕೆಂದರೆ ಮುಸ್ಲಿಮರನ್ನ ಮುರಿದು ಮೂಟೆಕಟ್ಟಿ ಮಡಗಿದ ನಂತರ, ರಾಮಸೇನೆ ಎಂಬ ವಾನರರ ಸಮರ ದಲಿತರ ವಿರುದ್ಧ ಆರಂಭವಾಗುವುದರಲ್ಲಿ ಯಾವ ಸಂಶಯವೂ ಇಲ್ಲ. ಏಕೆಂದರೆ ಪ್ರಪಂಚದ ಸಂವಿಧಾನಗಳನ್ನೆಲ್ಲಾ ಓದಿ ಭಾರತಕ್ಕೆಂದು ಅಪರೂಪದ ಸಂವಿಧಾನ ನೀಡಿದ ಅಂಬೇಡ್ಕರ್ ಬಗ್ಗೆ ಪುರೋಹಿತಶಾಹಿ ರಾಷ್ಟ್ರೋತ್ಥಾನ ಸಾಹಿತ್ಯದಲ್ಲಿ ನೈಜವನ್ನು ಮರೆಮಾಚಿ ಅವರಿಗೆ ಬೇಕಾದಂತೆ ಬರೆದುಕೊಂಡಿದ್ದಾರೆ. ಅಂಬೇಡ್ಕರ್ ಘನತೆ ಕಲ್ಪಿಸಿಕೊಟ್ಟ ಜನರ ಮೇಲೆ ಬೀಳಲು ಇಷ್ಟು ಸಾಕಲ್ಲವೆ ಸಂಘಿಗಳಿಗೆ. ಥೂತ್ತೇರಿ.

*****

ಮಹಿಷ ಮಂಡಲದಲ್ಲಿ ನಿಂತು ಬಿಜೆಪಿಯವರ ಮನಸ್ಥಿತಿಯನ್ನ ಅನಾವರಣ ಮಾಡಿದ ದೇವನೂರ ನಡವಳಿಕೆ ಕರ್ನಾಟಕದ ಇತರ ಸಾಹಿತಿಗಳಿಗೆ ಸ್ಪೂರ್ತಿಯುಂಟು ಮಾಡಬೇಕಿತ್ತು. ಏಕೆಂದರೆ ಬರೆಯುವ ಸಾಹಿತಿಗಳು ಏನು ಬರೆಯಬೇಕೆಂದು ಚಿಂತಿಸುವಂತಾಗಿದೆ. ತನ್ನ ಯಾವ ಪದ ಏನು ಅರ್ಥಕೊಡಬಹುದು, ಯಾವ ವಾಕ್ಯದಿಂದ ಯಾರು ಕೆರಳಬಹುದು, ನನ್ನ ಪುಸ್ತಕದಿಂದ ಯಾರಾದರೂ ರೊಚ್ಚಿಗೇಳುವರೆ ಎಂಬ ಗೊಂದಲಕ್ಕೆ ಸಿಕ್ಕಿಬಿದ್ದಿರುವಾಗ ಈ ಸಾಹಿತಿಗಳು ದೇವನೂರರಂತೆ ಬೀದಿಗೆ ಬರಬೇಕಿತ್ತು. ಒಂದು ಪ್ರೆಸ್‌ಮಿಟ್ ಮಾಡಬಹುದಿತ್ತು. ತನ್ನ ಮನೆಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ನಡೆದುಕೊಂಡು ಹೋಗಿ ಸರ್ವಜನಾಂಗದ ಮನವಿ ಕೊಡಬಹುದಿತ್ತು. ಜನರಿಗಾಗಿ ಬರೆಯುವ ಇವರು ಜನರಿಗೆ ತೊಂದರೆಯಾದಾಗ ಸುಮ್ಮನಿರಬಾರದಿತ್ತು ಎಂದು ಕರ್ನಾಟಕದ ಒಳ್ಳೆಯ ಮನಸ್ಸುಗಳು ಆಲೋಚಿಸುತ್ತಿರುವಾಗಲೇ ಸಾಂಸ್ಕೃತಿಕ ನಗರಿ ಎಂದೇ ಖ್ಯಾತಿಪಡೆದಿರುವ ಧಾರವಾಡದ ನುಗ್ಗಿಕೇರಿಗೆ ನುಗ್ಗಿದ ವಾನರ ಸೇನೆ ನಬೀಸಾಬಿಯ ಕಲ್ಲಂಗಡಿ ಹಣ್ಣನ್ನು ಕಿತ್ತು ತಿಂದಿವೆಯಂತಲ್ಲಾ. ಥೂತ್ತೇರಿ.

ರಣಬಿಸಿಲ ದಾಹ ನೀಗಿಸಲೆಂದು ರೈತ ಬೆಳೆವ ಬೇಸಿಗೆ ಬೆಳೆ ಕಲ್ಲಂಗಡಿ ಹಣ್ಣು. ಬೆಳೆದವನು ಮಾರುವವನನ್ನ ಕಾಯುತ್ತಾನೆ, ಮಾರುವವನು ಕೊಂಡು ತಿನ್ನುವ ಗಿರಾಕಿಗಾಗಿ ಕಾಯುತ್ತಾನೆ, ಇದು ಒಬ್ಬರನ್ನೊಬ್ಬರು ಅವಲಂಬಿಸಿದ ಬದುಕು. ಇಂತಲ್ಲಿಗೆ ನುಗ್ಗಿದ ವಾನರ ಸೇನೆಯ ಇತಿಹಾಸ ಕೆದಕಿದರೆ ಅವು ಎಂದೂ ಭೂಮಿ ನೆಚ್ಚಿ ಬದುಕಿದವಲ್ಲ. ಭೂಮಿ ನೆಚ್ಚಿದವರನ್ನ ಗೌರವಿಸಿದ್ದು ಈ ವಾನರ ಸೇನೆಯ ಸಂಸ್ಕೃತಿಯಲ್ಲೇ ಇಲ್ಲ. ಅದು ಭೂಮಿ ನೆಚ್ಚಿ ಬದುಕಿದವನನ್ನ ಹೊಲ ಉಳುವ ಎತ್ತಿನಂತೆ ನೋಡುತ್ತಾ ಬಂದಿದೆ. ಇದನ್ನು ಕಂಡು ಕುವೆಂಪು ಉಳುವಾ ಯೋಗಿಯ ನೋಡಲ್ಲಿ ಎಂದು ತೋರಿಸಿದರು. ಅಲ್ಲಿಯವರೆಗೂ ಎತ್ತಿನ ಹಿಂದೆ ಎತ್ತಾಗಿ ತಿರುಗುವವನನ್ನು ಎತ್ತೆಂದೇ ಪರಿಗಣಿಸಿದ್ದ ಭೂಸುರೋತ್ತಮರು, ಅವನನ್ನ ಯೋಗಿ ಎಂದದ್ದು ಎಷ್ಟು ಸರಿ ಎಂದು ಕೊಂಕು ನುಡಿದಿದ್ದವು. ಸೂರ್ಯನಿಗಿಂತಲೂ ಮೊದಲೇ ತನ್ನ ಹೊಲದಲ್ಲಿ ಆರೂಡಿದ ರೈತ ಹುಕ್ಕೆ ಗೆರೆಯಲ್ಲೇ ನೇಗಿಲು ಬಿಡಬೇಕು. ಅತ್ತ ಇತ್ತ ತಿರುಗಿದರೆ ಮೊದಲ ಸೀಳಿಗೇ ನುಗ್ಗುತ್ತದೆ. ಅಂದರೆ ಉತ್ತ ಪಾತಿಯನ್ನೆ ಉಳಬೇಕಾಗುತ್ತದೆ. ಆದ್ದರಿಂದ ತಲೆ ಎತ್ತದ ರೈತ, ಹೆಂಡತಿ ರೊಟ್ಟಿ ತಂದಾಗಲೇ ತಲೆ ಎತ್ತಿ ನೋಡುತ್ತಿದ್ದುದು. ಯೋಗಿಯ ಧ್ಯಾನವಿಲ್ಲದೆ ಹೊಲ ಉಳಲಾಗುವುದಿಲ್ಲ. ಈ ಸಂಸ್ಕೃತಿಯೇ ಗೊತ್ತಿಲ್ಲದವುಗಳಿಗೆ ಭೂಮಿಯಿಂದ ಬೆಳೆದ ದವಸ ಧಾನ್ಯ ಹಣ್ಣುಗಳ ಬಗ್ಗೆ ಗೌರವವೇ ಇರುವುದಿಲ್ಲ. ಇಂತವರೇ ನಬೀಸಾಬ್ ಅಂಗಡಿಗೆ ದಾಳಿಯಿಟ್ಟವಂತಲ್ಲಾ. ಥೂತ್ತೇರಿ.

*****

ಕರ್ನಾಟಕದಲ್ಲೀಗ ರಾಜನ ಭಯ, ರಾಜನಿಲ್ಲದ ಭಯ ಎರಡೂ ಮನಸ್ಥಿತಿ ಅಮರಿಕೊಂಡಿವೆಯಂತಲ್ಲಾ. ಆಗೊಮ್ಮೆ ಗುಜರಾತಿನಲ್ಲಿ ಈ ಸ್ಥಿತಿಯುಂಟಾಗಿತ್ತು. ಅಲ್ಲಿ ಮೋದಿ ಎಂದಕೂಡಲೇ ಮುಸ್ಲಿಮರು ಬೆಚ್ಚಿ ಬೀಳುತ್ತಿದ್ದರು. ಮುಖ್ಯಮಂತ್ರಿಯ ಹುಕುಂನಂತೆಯೇ ವಿಶ್ವಹಿಂದುಗಳು ಭಜರಂಗಿಗಳು ರಾಮಸೇನೆ ವಾನರಸೇನೆಯೆಲ್ಲಾ ಸೇರಿಕೊಂಡು ಮೂರುದಿನ ಮುಸ್ಲಿಮರನ್ನ ಹುರಿದು ಮುಕ್ಕಿದ್ದರು. ಇದೀಗ ಕರ್ನಾಟಕದಲ್ಲಿ ಅಂತಹ ತಯಾರಿಯೊಂದು ನಡೆಯುತ್ತಿದೆಯಂತಲ್ಲಾ. ಪ್ರಕ್ಷುಬ್ದವಾದ ಸ್ಥಳಕ್ಕೆ ಪೊಲೀಸರು ಭೇಟಿಯಿತ್ತು ಮಿಂಚಿನ ಕಾರ್ಯಾಚರಣೆ ನಡೆಸುವುದರ ಬದಲು ನೊಂದವರು ಬಂದು ದೂರು ಕೊಡುವುದನ್ನೆ ಕಾಯುತ್ತಿದ್ದಾರಂತಲ್ಲಾ. ಅದೇ ಬಿಜೆಪಿ ಜನರಿಗೆ ತೊಂದರೆ ಕೊಟ್ಟವರನ್ನ ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸುವ ಪೊಲೀಸರು ಕರ್ನಾಟಕ ಈವರೆಗೆ ಕಾಣದಿದ್ದ ಹೋಂ ಮಿನಿಸ್ಟರ್ ಏನು ಹೇಳುತ್ತಿದ್ದಾರೆಂದು ಕಾಯುತ್ತಿದ್ದಾರಂತಲ್ಲಾ. ಹೋಂ ಮಿನಿಸ್ಟರ್ ಸಾಧನೆ ಯಾವುದೆಂದರೆ ಭದ್ರಾವತಿಯ ಕಾಗದ ಕಾರ್ಖಾನೆ ಉದ್ಧಾರ ಮಾಡಪ್ಪ ಎಂದು ಅಧ್ಯಕ್ಷನನ್ನಾಗಿ ಕೂರಿಸಿದರೆ ವಾರೊಪ್ಪತ್ತಿನಲ್ಲಿ ಅದನ್ನು ಹಾಳು ಮಾಡಿದ್ದೂ ಅಲ್ಲದೆ ಅದರ ಬಾಗಿಲಿಗೆ ಬೀಗ ಜಡಿದು ಅರಗದ ಕಡೆ ಹೋದದ್ದು. ಇಂತಹ ವ್ಯಕ್ತಿಯನ್ನು ಕರ್ನಾಟಕವನ್ನ ಹದ್ದುಬಸ್ತಿನಲ್ಲಿಡಬೇಕಾದ ಜವಾಬ್ದಾರಿ ಹೊರೆಸಿ ಕೂರಿಸಿದರೆ ಏನಾಗಬೇಕೋ ಅದೇ ಆಗುತ್ತಿದೆ. ಅಂದರೆ ಕೇಶವ ಕೃಪದ ಸೂಚನೆಗಳು ಜಾರಿಯಾಗುತ್ತಿವೆಯಂತಲ್ಲಾ. ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ:  ಸಿದ್ದರಾಮಯ್ಯ ರಾವಣನಂತಲ್ಲಾ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...