Homeಅಂಕಣಗಳುದೇವನೂರು ಮಾತು ಕಾಲಜ್ಞಾನಿಯ ಸೂಚನೆಯಂತಲ್ಲಾ!

ದೇವನೂರು ಮಾತು ಕಾಲಜ್ಞಾನಿಯ ಸೂಚನೆಯಂತಲ್ಲಾ!

- Advertisement -
- Advertisement -

ಈ ಸರಕಾರಕ್ಕೆ ನರಬಲಿ ಬೇಕಿದೆ ಎಂದು ದೇವನೂರ ಮಹಾದೇವ ಭವಿಷ್ಯ ನುಡಿದಿದ್ದಾರಲ್ಲಾ. ಸಾಹಿತ್ಯ ಲೋಕ ಕಂಡ ಅಪರೂಪದ ಪ್ರತಿಭೆ ದೇವನೂರ. ಶತಮಾನಗಳಿಂದ ತುಳಿದವರು ಮತ್ತು ತುಳಿಸಿಕೊಂಡವರ ಮನಸ್ಥಿತಿಯನ್ನು ಬಿಚ್ಚಿ ಹರವಿ, ಇದೇ ನೋಡಿ ನಿಮ್ಮ ಹಣೆಬರಹವೆಂದು ಎತ್ತರದಲ್ಲಿ ನಿಂತು ತೋರಿದವರು.
ಅದೆಲ್ಲಕ್ಕಿಂತ ಮುಖ್ಯವಾಗಿ ಹೊಲೆ ಮಾದಿಗರು ಎಂದಕೂಡಲೇ ಸೋ ಕಾಲ್ಡ್ ಮೇಲು ಜಾತಿಗಳೆನಿಸಿಕೊಂಡವರಲ್ಲಿ ಮೂಡುವ ತಿರಸ್ಕಾರವನ್ನು ಪತ್ತೆಹಚ್ಚಿ ಹೇಳಿದವರು. ಮೇಲು ಜನರ ಈ ಕಾಯಿಲೆ ಇನ್ನು ಗುಣವಾಗಿಲ್ಲದ ಈ ಸಂದರ್ಭದಲ್ಲಿ, ಮುಸ್ಲಿಮ್ ಎಂದ ಕೂಡಲೇ ಎಲ್ಲರಿಗೂ ಅಸಹನೆ ಮೂಡುವಂತೆ ಶ್ರಮಿಸುತ್ತಿರುವವರ ವಿರುದ್ಧ ಇದೇ ಮಹಾದೇವ ತಿರುಗಿ ಬಿದಿದ್ದಾರಲ್ಲಾ. ಏಕೆಂದರೆ ಮುಸ್ಲಿಮರನ್ನ ಮುರಿದು ಮೂಟೆಕಟ್ಟಿ ಮಡಗಿದ ನಂತರ, ರಾಮಸೇನೆ ಎಂಬ ವಾನರರ ಸಮರ ದಲಿತರ ವಿರುದ್ಧ ಆರಂಭವಾಗುವುದರಲ್ಲಿ ಯಾವ ಸಂಶಯವೂ ಇಲ್ಲ. ಏಕೆಂದರೆ ಪ್ರಪಂಚದ ಸಂವಿಧಾನಗಳನ್ನೆಲ್ಲಾ ಓದಿ ಭಾರತಕ್ಕೆಂದು ಅಪರೂಪದ ಸಂವಿಧಾನ ನೀಡಿದ ಅಂಬೇಡ್ಕರ್ ಬಗ್ಗೆ ಪುರೋಹಿತಶಾಹಿ ರಾಷ್ಟ್ರೋತ್ಥಾನ ಸಾಹಿತ್ಯದಲ್ಲಿ ನೈಜವನ್ನು ಮರೆಮಾಚಿ ಅವರಿಗೆ ಬೇಕಾದಂತೆ ಬರೆದುಕೊಂಡಿದ್ದಾರೆ. ಅಂಬೇಡ್ಕರ್ ಘನತೆ ಕಲ್ಪಿಸಿಕೊಟ್ಟ ಜನರ ಮೇಲೆ ಬೀಳಲು ಇಷ್ಟು ಸಾಕಲ್ಲವೆ ಸಂಘಿಗಳಿಗೆ. ಥೂತ್ತೇರಿ.

*****

ಮಹಿಷ ಮಂಡಲದಲ್ಲಿ ನಿಂತು ಬಿಜೆಪಿಯವರ ಮನಸ್ಥಿತಿಯನ್ನ ಅನಾವರಣ ಮಾಡಿದ ದೇವನೂರ ನಡವಳಿಕೆ ಕರ್ನಾಟಕದ ಇತರ ಸಾಹಿತಿಗಳಿಗೆ ಸ್ಪೂರ್ತಿಯುಂಟು ಮಾಡಬೇಕಿತ್ತು. ಏಕೆಂದರೆ ಬರೆಯುವ ಸಾಹಿತಿಗಳು ಏನು ಬರೆಯಬೇಕೆಂದು ಚಿಂತಿಸುವಂತಾಗಿದೆ. ತನ್ನ ಯಾವ ಪದ ಏನು ಅರ್ಥಕೊಡಬಹುದು, ಯಾವ ವಾಕ್ಯದಿಂದ ಯಾರು ಕೆರಳಬಹುದು, ನನ್ನ ಪುಸ್ತಕದಿಂದ ಯಾರಾದರೂ ರೊಚ್ಚಿಗೇಳುವರೆ ಎಂಬ ಗೊಂದಲಕ್ಕೆ ಸಿಕ್ಕಿಬಿದ್ದಿರುವಾಗ ಈ ಸಾಹಿತಿಗಳು ದೇವನೂರರಂತೆ ಬೀದಿಗೆ ಬರಬೇಕಿತ್ತು. ಒಂದು ಪ್ರೆಸ್‌ಮಿಟ್ ಮಾಡಬಹುದಿತ್ತು. ತನ್ನ ಮನೆಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ನಡೆದುಕೊಂಡು ಹೋಗಿ ಸರ್ವಜನಾಂಗದ ಮನವಿ ಕೊಡಬಹುದಿತ್ತು. ಜನರಿಗಾಗಿ ಬರೆಯುವ ಇವರು ಜನರಿಗೆ ತೊಂದರೆಯಾದಾಗ ಸುಮ್ಮನಿರಬಾರದಿತ್ತು ಎಂದು ಕರ್ನಾಟಕದ ಒಳ್ಳೆಯ ಮನಸ್ಸುಗಳು ಆಲೋಚಿಸುತ್ತಿರುವಾಗಲೇ ಸಾಂಸ್ಕೃತಿಕ ನಗರಿ ಎಂದೇ ಖ್ಯಾತಿಪಡೆದಿರುವ ಧಾರವಾಡದ ನುಗ್ಗಿಕೇರಿಗೆ ನುಗ್ಗಿದ ವಾನರ ಸೇನೆ ನಬೀಸಾಬಿಯ ಕಲ್ಲಂಗಡಿ ಹಣ್ಣನ್ನು ಕಿತ್ತು ತಿಂದಿವೆಯಂತಲ್ಲಾ. ಥೂತ್ತೇರಿ.

ರಣಬಿಸಿಲ ದಾಹ ನೀಗಿಸಲೆಂದು ರೈತ ಬೆಳೆವ ಬೇಸಿಗೆ ಬೆಳೆ ಕಲ್ಲಂಗಡಿ ಹಣ್ಣು. ಬೆಳೆದವನು ಮಾರುವವನನ್ನ ಕಾಯುತ್ತಾನೆ, ಮಾರುವವನು ಕೊಂಡು ತಿನ್ನುವ ಗಿರಾಕಿಗಾಗಿ ಕಾಯುತ್ತಾನೆ, ಇದು ಒಬ್ಬರನ್ನೊಬ್ಬರು ಅವಲಂಬಿಸಿದ ಬದುಕು. ಇಂತಲ್ಲಿಗೆ ನುಗ್ಗಿದ ವಾನರ ಸೇನೆಯ ಇತಿಹಾಸ ಕೆದಕಿದರೆ ಅವು ಎಂದೂ ಭೂಮಿ ನೆಚ್ಚಿ ಬದುಕಿದವಲ್ಲ. ಭೂಮಿ ನೆಚ್ಚಿದವರನ್ನ ಗೌರವಿಸಿದ್ದು ಈ ವಾನರ ಸೇನೆಯ ಸಂಸ್ಕೃತಿಯಲ್ಲೇ ಇಲ್ಲ. ಅದು ಭೂಮಿ ನೆಚ್ಚಿ ಬದುಕಿದವನನ್ನ ಹೊಲ ಉಳುವ ಎತ್ತಿನಂತೆ ನೋಡುತ್ತಾ ಬಂದಿದೆ. ಇದನ್ನು ಕಂಡು ಕುವೆಂಪು ಉಳುವಾ ಯೋಗಿಯ ನೋಡಲ್ಲಿ ಎಂದು ತೋರಿಸಿದರು. ಅಲ್ಲಿಯವರೆಗೂ ಎತ್ತಿನ ಹಿಂದೆ ಎತ್ತಾಗಿ ತಿರುಗುವವನನ್ನು ಎತ್ತೆಂದೇ ಪರಿಗಣಿಸಿದ್ದ ಭೂಸುರೋತ್ತಮರು, ಅವನನ್ನ ಯೋಗಿ ಎಂದದ್ದು ಎಷ್ಟು ಸರಿ ಎಂದು ಕೊಂಕು ನುಡಿದಿದ್ದವು. ಸೂರ್ಯನಿಗಿಂತಲೂ ಮೊದಲೇ ತನ್ನ ಹೊಲದಲ್ಲಿ ಆರೂಡಿದ ರೈತ ಹುಕ್ಕೆ ಗೆರೆಯಲ್ಲೇ ನೇಗಿಲು ಬಿಡಬೇಕು. ಅತ್ತ ಇತ್ತ ತಿರುಗಿದರೆ ಮೊದಲ ಸೀಳಿಗೇ ನುಗ್ಗುತ್ತದೆ. ಅಂದರೆ ಉತ್ತ ಪಾತಿಯನ್ನೆ ಉಳಬೇಕಾಗುತ್ತದೆ. ಆದ್ದರಿಂದ ತಲೆ ಎತ್ತದ ರೈತ, ಹೆಂಡತಿ ರೊಟ್ಟಿ ತಂದಾಗಲೇ ತಲೆ ಎತ್ತಿ ನೋಡುತ್ತಿದ್ದುದು. ಯೋಗಿಯ ಧ್ಯಾನವಿಲ್ಲದೆ ಹೊಲ ಉಳಲಾಗುವುದಿಲ್ಲ. ಈ ಸಂಸ್ಕೃತಿಯೇ ಗೊತ್ತಿಲ್ಲದವುಗಳಿಗೆ ಭೂಮಿಯಿಂದ ಬೆಳೆದ ದವಸ ಧಾನ್ಯ ಹಣ್ಣುಗಳ ಬಗ್ಗೆ ಗೌರವವೇ ಇರುವುದಿಲ್ಲ. ಇಂತವರೇ ನಬೀಸಾಬ್ ಅಂಗಡಿಗೆ ದಾಳಿಯಿಟ್ಟವಂತಲ್ಲಾ. ಥೂತ್ತೇರಿ.

*****

ಕರ್ನಾಟಕದಲ್ಲೀಗ ರಾಜನ ಭಯ, ರಾಜನಿಲ್ಲದ ಭಯ ಎರಡೂ ಮನಸ್ಥಿತಿ ಅಮರಿಕೊಂಡಿವೆಯಂತಲ್ಲಾ. ಆಗೊಮ್ಮೆ ಗುಜರಾತಿನಲ್ಲಿ ಈ ಸ್ಥಿತಿಯುಂಟಾಗಿತ್ತು. ಅಲ್ಲಿ ಮೋದಿ ಎಂದಕೂಡಲೇ ಮುಸ್ಲಿಮರು ಬೆಚ್ಚಿ ಬೀಳುತ್ತಿದ್ದರು. ಮುಖ್ಯಮಂತ್ರಿಯ ಹುಕುಂನಂತೆಯೇ ವಿಶ್ವಹಿಂದುಗಳು ಭಜರಂಗಿಗಳು ರಾಮಸೇನೆ ವಾನರಸೇನೆಯೆಲ್ಲಾ ಸೇರಿಕೊಂಡು ಮೂರುದಿನ ಮುಸ್ಲಿಮರನ್ನ ಹುರಿದು ಮುಕ್ಕಿದ್ದರು. ಇದೀಗ ಕರ್ನಾಟಕದಲ್ಲಿ ಅಂತಹ ತಯಾರಿಯೊಂದು ನಡೆಯುತ್ತಿದೆಯಂತಲ್ಲಾ. ಪ್ರಕ್ಷುಬ್ದವಾದ ಸ್ಥಳಕ್ಕೆ ಪೊಲೀಸರು ಭೇಟಿಯಿತ್ತು ಮಿಂಚಿನ ಕಾರ್ಯಾಚರಣೆ ನಡೆಸುವುದರ ಬದಲು ನೊಂದವರು ಬಂದು ದೂರು ಕೊಡುವುದನ್ನೆ ಕಾಯುತ್ತಿದ್ದಾರಂತಲ್ಲಾ. ಅದೇ ಬಿಜೆಪಿ ಜನರಿಗೆ ತೊಂದರೆ ಕೊಟ್ಟವರನ್ನ ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸುವ ಪೊಲೀಸರು ಕರ್ನಾಟಕ ಈವರೆಗೆ ಕಾಣದಿದ್ದ ಹೋಂ ಮಿನಿಸ್ಟರ್ ಏನು ಹೇಳುತ್ತಿದ್ದಾರೆಂದು ಕಾಯುತ್ತಿದ್ದಾರಂತಲ್ಲಾ. ಹೋಂ ಮಿನಿಸ್ಟರ್ ಸಾಧನೆ ಯಾವುದೆಂದರೆ ಭದ್ರಾವತಿಯ ಕಾಗದ ಕಾರ್ಖಾನೆ ಉದ್ಧಾರ ಮಾಡಪ್ಪ ಎಂದು ಅಧ್ಯಕ್ಷನನ್ನಾಗಿ ಕೂರಿಸಿದರೆ ವಾರೊಪ್ಪತ್ತಿನಲ್ಲಿ ಅದನ್ನು ಹಾಳು ಮಾಡಿದ್ದೂ ಅಲ್ಲದೆ ಅದರ ಬಾಗಿಲಿಗೆ ಬೀಗ ಜಡಿದು ಅರಗದ ಕಡೆ ಹೋದದ್ದು. ಇಂತಹ ವ್ಯಕ್ತಿಯನ್ನು ಕರ್ನಾಟಕವನ್ನ ಹದ್ದುಬಸ್ತಿನಲ್ಲಿಡಬೇಕಾದ ಜವಾಬ್ದಾರಿ ಹೊರೆಸಿ ಕೂರಿಸಿದರೆ ಏನಾಗಬೇಕೋ ಅದೇ ಆಗುತ್ತಿದೆ. ಅಂದರೆ ಕೇಶವ ಕೃಪದ ಸೂಚನೆಗಳು ಜಾರಿಯಾಗುತ್ತಿವೆಯಂತಲ್ಲಾ. ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ:  ಸಿದ್ದರಾಮಯ್ಯ ರಾವಣನಂತಲ್ಲಾ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...