Homeಅಂಕಣಗಳುಮಾಜಿ ರೌಡಿ ಶೀಟರ್‌ಗೆ ನಮಸ್ಕರಿಸುವುದೂ ಸಂಸ್ಕಾರವಂತಲ್ಲಾ!

ಮಾಜಿ ರೌಡಿ ಶೀಟರ್‌ಗೆ ನಮಸ್ಕರಿಸುವುದೂ ಸಂಸ್ಕಾರವಂತಲ್ಲಾ!

- Advertisement -
- Advertisement -

ಹಸಿರುಮಯವಾಗಿದ್ದ ಮಂಡ್ಯವನ್ನು ಕೇಸರಿಮಯವಾಗಿಸಲು ಪಣತೊಟ್ಟ ಬಿಜೆಪಿಗಳು ಪ್ರಧಾನಿಯವರ ರೋಡ್ ಶೋ ಏರ್ಪಡಿಸಿದ್ದ ಫಲವಾಗಿ ಮೋದಿ ಕೈ ಬೀಸಲು ಅಡ್ಡಿಯಾಗಿದ್ದ ಮರದ ರೆಂಬೆಕೊಂಬೆಗಳನ್ನೆಲ್ಲಾ ಕಡಿದು, ರಸ್ತೆಯ ಮಾರ್ಗವನ್ನು ಬದಲಿಸಿ ಅಂತೂ ಮಂಡ್ಯಕ್ಕೆ ಮೋದಿ ಕರೆತಂದು ಫೈಟರ್ ರವಿಯನ್ನ ಪರಿಚಯಿಸಿದವಲ್ಲಾ. ಮಂಡ್ಯ ಧೀಮಂತ ರಾಜಕಾರಣಿಗಳಿಗೆ ಹೆಸರಾದ ಜಿಲ್ಲೆ. ಅಲ್ಲಿನ ರಾಜಕಾರಣದ ಇತಿಹಾಸ ನೋಡಿದರೆ ಇಲ್ಲಿನ ಪ್ರಾಮಾಣಿಕ ಮತದಾರರ ಮೆಚ್ಚಿನ ಜನ ನಾಯಕರ ಇತಿಹಾಸವೇ ಇದೆ. ಅವರ ಸಂತತಿಗಳು ಕೂಡ ಇನ್ನೂ ಇವೆ. ಅವರನ್ನೆಲ್ಲಾ ಬಿಟ್ಟು ಈ ಬಿಜೆಪಿಗಳು ಫೈಟರ್ ರವಿ ಎಂಬ ವ್ಯಕ್ತಿಯನ್ನು ಪರಿಚಯಿಸಿದಾಗ ಮೋದಿಯವರಿಗೆ ಅಮಿತ್‌ಶಾ ದರ್ಶನ ಮಾಡಿದಂತಾಗಿ ಕೈ ಮುಗಿದು ಮುಗುಳುನಕ್ಕಿದ್ದಾರಲ್ಲಾ. ಇದು ಭಾರತದ ಇತಿಹಾಸದಲ್ಲಿ ಹಿಂದೆಂದೂ ನಡೆಯದ ಘಟನೆ. ಬೆಂಗಳೂರು ಠಾಣೆಗಳಲ್ಲಿ ಕೇಸುಗಳಿರುವ ವ್ಯಕ್ತಿಯೊಬ್ಬ ಜಾದೂ ಮಾಡಿದಂತೆ ಧನಕನಕ ಸಂಗ್ರಹಿಸಿಕೊಂಡು ಒಂದು ಓಟಿಗೆ ಇಂತಿಷ್ಟು ಸಾವಿರ ಕೊಡುತ್ತೇನೆಂದು ಘೋಷಣೆ ಮಾಡಿಕೊಂಡು ತಿರುಗುತ್ತಿರುವಾಗ, ಆತ ಬಿಜೆಪಿಗಳಿಗೆ ಗಣ್ಯನಾಗಿ ಕಂಡಿದ್ದೂ ಅಲ್ಲದೆ, ಆತ ಪ್ರಧಾನ ಮಂತ್ರಿ ಭೇಟಿಮಾಡಲೇಬೇಕಾದ ವ್ಯಕ್ತಿಯೆಂದು ಭಾವಿಸಿದ ಈ ಬಿಜೆಪಿಗಳು ಮುಟ್ಟಿರುವ ಪಾತಾಳ ಎದ್ದು ಬರಲಾರದಂತಹುದಂತಲ್ಲಾ, ಥೂತ್ತೇರಿ.

*****

ಮಂಡ್ಯದಲ್ಲಿ ಫೈಟರ್ ರವಿಯ ಜೊತೆಗೆ ಮತ್ತೊಬ್ಬ ಧೀಮಂತ ಮಹಿಳೆ ಸುಮಲತಾ ತಾನು ಈವರೆಗೆ ಹಸುವಿನಂತಿದ್ದೆ, ನನಗೆ ಆನೆ ಬಲ ಬರಬೇಕಾದರೆ ಬಿಜೆಪಿಗೆ ಸೇರಲೇಬೇಕೆಂದು ಹಠತೊಟ್ಟು ಮೋದಿ ಸಮ್ಮುಖದಲ್ಲೇ ಬಿಜೆಪಿಗಿ ನುಗ್ಗಿದ್ದಾರಲ್ಲಾ. ಸುಮಲತಾ ಚುನಾವಣೆಗೆ ನಿಂತಾಗ ನಾಗಮಂಗಲದ ಮಾಜಿ ಶಾಸಕ ಮತ್ತು ಮಂಡ್ಯದ ಮಾಜಿ ಸಂಸದ ಶಿವರಾಮೇಗೌಡ ತನ್ನದೇ ಶೈಲಿಯಲ್ಲಿ ಸುಮಲತಾರನ್ನು ಜರಿದಿದ್ದರು. ಆಗ ಇಡೀ ನಾಡಿನ ತುಂಬ ಪ್ರತಿಭಟನೆಗಳಾಗಿದ್ದವು. ಶಿವರಾಮೇಗೌಡರ ವಿರುದ್ಧ ಮಹಿಳೆಯರು ಪ್ರತಿಭಟಿಸಿದ್ದರು. ಆದರೆ ಈಗ ಸುಮಲತಾ ದಿಢೀರನೆ ಬಿಜೆಪಿಗೆ ಬೆಂಬಲ ಘೋಷಿಸಿ ಅಸಂಬದ್ಧವಾಗಿ ಮಾತನಾಡುವ ಶಿವರಾಮೇಗೌಡನ ಮಾತನ್ನೇ ಮರೆಸುವಂತೆ ಮುನ್ನುಗ್ಗುತ್ತಿದ್ದಾರಲ್ಲಾ. ಅಂದು ಜೆಡಿಎಸ್ ಲೀಡರುಗಳನ್ನು ಮೆಚ್ಚಿಸಲೋಸ್ಕರ ಅಸಂಬದ್ಧ ಮಾತನಾಡಿದ್ದ ಶಿವರಾಮೇಗೌಡ ಇಂದು ಜೆಡಿಎಸ್‌ನಿಂದಲೀ ಉಚ್ಛಾಟನೆಗೊಂಡು ಬಿಜೆಪಿಯ ಟಿಕೆಟ್ ಆಕಾಂಕ್ಷಿಯಾಗಿರುವಾಗಲೇ, ಫೈಟರ್ ರವಿ ನಾಗಮಂಗಲಕ್ಕೆ ಕೋಟಿಗೂ ಹೆಚ್ಚು ಖರ್ಚು ಮಾಡಿ ಪ್ರಧಾನಿಯಿಂದಲೇ ಕೈ ಮುಗಿಸಿಕೊಂಡು ಭೇಷ್ ಎನ್ನಿಸಿಕೊಳ್ಳುವಾಗ, ಸುಮಲತಾ ಕೂಡ ಬಿಜೆಪಿ ಸೇರಿದ್ದು (ಬಾಹ್ಯ ಬೆಂಬಲವೆಂಬ ನಾಟಕದೊಂದಿದೆಗೆ) ಈಗ ಎಲ್ಲಿಗೆ ಹೋಗಲಿ ಎಂಬ ಸ್ಥಿತಿಯನ್ನು ಶಿವರಾಮೇಗೌಡ ಎದುರಿಸುತ್ತಿದ್ದಾರಂತಲ್ಲಾ, ಥೂತ್ತೇರಿ.

*****

ಈಗ ಬಿಜೆಪಿಗೆ ಬೆಂಬಲ ಘೋಷಿಸಿರುವ ಸುಮಲತಾ ಕಳೆದ ಬಾರಿ ಎದುರಿಸಿದ್ದ ಚುನಾವಣೆಯನ್ನು ಪ್ರಪಂಚದಲ್ಲೆಲ್ಲಾ ಹರಡಿರುವ ಅಂಬರೀಶ್ ಅಭಿಮಾನಿಗಳು ಕುತೂಹಲದಿಂದ ನೋಡಿದ್ದರು. ಅದೂಅಲ್ಲದೆ ದುಬೈನ ಬುರ್ಜು ಖಲೀಫದ ಕಟ್ಟಡದಲ್ಲಿ ಕುಳಿತ ಅದರ ಮಾಲೀಕರೂ ಕೂಡ ವೀಕ್ಷಿಸಿದ್ದರು. ಏಕೆಂದರೆ ಅವರೆಲ್ಲಾ ಅಂಬರೀಶ್ ಗೆಳೆಯರಾಗಿದ್ದರು. ಅದೂಅಲ್ಲದೆ ಕಾಶ್ಮೀರದ ಫಾರೂಕ್ ಅಬ್ದುಲ್ಲಾ ಕೂಡ ತನ್ನ ಗೆಳೆಯನ ಪತ್ನಿ ಗೆಲ್ಲಲೆಂದು ಪ್ರಾರ್ಥಿಸಿದ್ದರು. ಅಂತೂ ಸುಮಲತಾ ಗೆದ್ದರು. ಆ ಗೆಲುವಿನಲ್ಲೂ ಕೆಲವು ದಾಖಲೆಗಳಿದ್ದವು. ಅವರ ಬೆನ್ನಿಗೆ ರೈತಸಂಘ, ಕಾಂಗ್ರೆಸ್ಸು, ಕೆಲ ಬಿಜೆಪಿಗಳೂ ನಿಂತಿದ್ದವು. ಆದ್ದರಿಂದ ಒಂದು ಲಕ್ಷದ ಇಪ್ಪತೈದು ಸಾವಿರ ಲೀಡಿನಲ್ಲಿ ಗೆದ್ದಿದ್ದರು. ಇದನ್ನೆಲ್ಲ ದಾಟಿದ ಸುಮಲತಾ ಬಿಜೆಪಿಗೆ ನೆಗೆದದ್ದು ಈ ಶತಮಾನದ ದ್ರೋಹ ಎಂದು ಮಂಡ್ಯದ ಸ್ವಾಭಿಮಾನಿಗಳು ಹೇಳುತ್ತಿದ್ದಾರಲ್ಲಾ. ಇದೆಲ್ಲಕ್ಕಿಂತ ಮಂಡ್ಯದವರು ಬೆಚ್ಚಿರುವುದೇಕೆಂದರೆ ಅಂದು ಸೆರಗೊಡ್ಡಿ ಮತ ಕೇಳಿದ್ದ ಈಕೆಯ ನಟನೆ ನಮಗೆ ಗೊತ್ತೇ ಆಗಲಿಲ್ಲ ಎಂದ ರೋಷಗೊಂಡಿದ್ದಾರಂತಲ್ಲಾ, ಥೂತ್ತೇರಿ.

*****

ಪ್ರಧಾನಿ ಭೇಟಿಯಿಂದ ಮಂಡ್ಯ ಸುಸ್ತು ಹೊಡೆದು ಕುಳಿತಿದೆಯಲ್ಲಾ. ಏಕೆಂದರೆ ಇಡೀ ಸರಕಾರಿ ಯಂತ್ರಾಂಗವನ್ನೇ ಬಳಸಿಕೊಂಡು ಅದ್ದೂರಿಯಾಗಿ ಪ್ರಧಾನಿಯ ಪ್ರವಾಸವನ್ನು ಮಾಡಿ ಮುಗಿಸಿದ ಬಿಜೆಪಿಯ ಸಾಧನೆ ನೋಡಿದರೆ, ಪ್ರಧಾನಿಗಳು ಫೈಟರ್ ರವಿಗೆ ಕೈ ಮುಗಿದದ್ದು ಮತ್ತು ಸುಮಲತಾರನ್ನು ಪಾರ್ಟಿಗೆ ಸೇರಿಸಿಕೊಂಡಿದ್ದೇ ಬಹುದೊಡ್ಡ ಸಾಧನೆಯಾಗಿ ಕಾಣತೊಡಗಿದೆಯಲ್ಲಾ. ಒಂದೊಂದು ತಾಲೂಕಿನಿಂದ ತಲಾ ಎಪ್ಪತ್ತು ಬಸ್ಸು ಜನ ತುಂಬಿಕೊಂಡು ಬಂದವು. ಅದರಲ್ಲಿ 50 ಜನರಿದ್ದು ತಲಾ ಮುನ್ನೂರು ಬಟವಾಡೆಯಾಗಿ ಕೊಟ್ಟರಂತಲ್ಲಾ. ಹಣ ಮತ್ತು ಬಂದ ಜನರ ದಾಖಲೆ ಎಲ್ಲ ಸರಿಯಾಗಿರಬೇಕು ಎಂದು ಹಿಂದೆಂದು ಕಾಣದ ಶಿಸ್ತಿನಿಂದ ನಡೆದುಹೋದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜನ ಚಲುವರಾಯಸ್ವಾಮಿ ನಡೆಸುವ ಸಭೆಗೆ ಮತ್ತು ಶಿವರಾಮೇಗೌಡ ಹಾಗೂ ಇನ್ನಿತರ ಸಭೆಗೂ ಹೋಗುತ್ತ ನಾವು ಕೂಲಿಗೆ ಹೋದರೆ ಐದುನೂರು ಕೊಡುತ್ತಾರೆ ಈ ಮುನ್ನೂರು ಸಾಲುವುದಿಲ್ಲ ಇನ್ನ ಮುಂದೆ ಐನೂರರ ಜೊತೆಗೆ ಒಂದು ಪ್ಯಾಕೆಟ್ ಬಿರಿಯಾನಿ ಮತ್ತು ಒಂದು ಕ್ವಾಟರ್ ಕೊಡುವುದಿದ್ದರೆ ಮನೆ ಹತ್ತಿರ ಬನ್ನಿ ಎನ್ನವಂತಾಗಿದ್ದಾರಂತಲ್ಲಾ, ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸ್ವಕ್ಷೇತ್ರ ತಿರುವನಂತಪುರದಲ್ಲಿ ಬಿಜೆಪಿ ಭರ್ಜರಿ ಗೆಲುವು : ‘ಪ್ರಜಾಪ್ರಭುತ್ವದ ಸೌಂದರ್ಯ’ ಎಂದ ಕಾಂಗ್ರೆಸ್ ಸಂಸದ ಶಶಿ ತರೂರ್

ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಇಂದು (ಡಿ.13) ಪ್ರಕಟಗೊಂಡಿದ್ದು, ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 45 ವರ್ಷಗಳ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌...

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ : ಯುಡಿಎಫ್‌ ಸ್ಪಷ್ಟ ಮೇಲುಗೈ

ಇಂದು (2025 ಡಿಸೆಂಬರ್ 13, ಶನಿವಾರ) ಪ್ರಕಟಗೊಂಡ ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಲ್ಲಿ ವಿರೋಧ ಪಕ್ಷಗಳ ಒಕ್ಕೂಟವಾದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸ್ಪಷ್ಟ ಮೇಲುಗೈ ಸಾಧಿಸಿದೆ. ಈ ಮೂಲಕ ರಾಜ್ಯ...

ಕೋಲ್ಕತ್ತಾ ಮೆಸ್ಸಿ ಕಾರ್ಯಕ್ರಮದಲ್ಲಿ ಗಲಾಟೆ | ಕ್ಷಮೆ ಯಾಚಿಸಿದ ಸಿಎಂ ಮಮತಾ ಬ್ಯಾನರ್ಜಿ, ತನಿಖೆಗೆ ಸಮಿತಿ ರಚನೆ; ಆಯೋಜಕನ ಬಂಧನ

ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಭೇಟಿಯ ವೇಳೆ ಶನಿವಾರ (ಡಿಸೆಂಬರ್ 13) ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಉಂಟಾದ ಗಲಾಟೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕ್ಷಮೆಯಾಚಿಸಿದ್ದು, ನಿವೃತ್ತ ನ್ಯಾಯಮೂರ್ತಿ...

ಮೆಸ್ಸಿ ನೋಡಲು 25 ಸಾವಿರ ರೂ. ಪಾವತಿಸಿದವರಿಗೆ ನಿರಾಶೆ; ಕೋಪಗೊಂಡ ಅಭಿಮಾನಿಗಳಿಂದ ಕ್ರೀಡಾಂಗಣದಲ್ಲಿ ದಾಂಧಲೆ

ಶನಿವಾರ ನಡೆದ ಲಿಯೋನೆಲ್ ಮೆಸ್ಸಿ ಅವರ ಬಹು ನಿರೀಕ್ಷಿತ "ಗೋಟ್ ಇಂಡಿಯಾ ಟೂರ್" ಕೋಲ್ಕತ್ತಾದಲ್ಲಿ ಅಸ್ತವ್ಯಸ್ತವಾಯಿತು. ಯುವ ಭಾರತಿ ಕ್ರಿರಂಗನ್‌ನಲ್ಲಿ ರೊಚ್ಚಿಗೆದ್ದ ಅಭಿಮಾನಿಗಳ ದಾಂಧಲೆಯಿಂದ ಕ್ರೀಡಾಂಗಣ ಅವ್ಯವಸ್ಥೆಗೆ ಒಳಗಾಯಿತು. ಸಾವಿರಾರು ಅಭಿಮಾನಿಗಳು ಅರ್ಜೆಂಟೀನಾದ...

ಡ್ರಗ್‌ ಪೆಡ್ಲರ್‌ಗಳ ಮನೆ ಒಡೆದು ಹಾಕುವ ಹೇಳಿಕೆ : ಪರಮೇಶ್ವರ್ ಮಾತಿಗೆ ಆತಂಕ ವ್ಯಕ್ತಪಡಿಸಿದ ಕಾಂಗ್ರೆಸ್ ಹಿರಿಯ ನಾಯಕ ಚಿದಂಬರಂ

"ಡ್ರಗ್‌ ಪೆಡ್ಲರ್‌ಗಳ ಬಾಡಿಗೆ ಮನೆಗಳನ್ನು ಒಡೆದು ಹಾಕುವ ಹಂತಕ್ಕೆ ಹೋಗಿದ್ದೇವೆ" ಎಂಬ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆಗೆ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಆತಂಕ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ...

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ: ಶಶಿ ತರೂರ್ ಕ್ಷೇತ್ರ ತಿರುವನಂತಪುರಂನಲ್ಲಿ ಬಿಜೆಪಿ ಮುನ್ನಡೆ

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ, ವಿಶೇಷವಾಗಿ ತಿರುವನಂತಪುರಂನಲ್ಲಿ ಭಾರತೀಯ ಜನತಾ ಪಕ್ಷದ ಸಾಧನೆಯನ್ನು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಶನಿವಾರ ಅಭಿನಂದಿಸಿದ್ದಾರೆ. ಜನರ ತೀರ್ಪನ್ನು ಗೌರವಿಸಬೇಕು ಎಂದು ಹೇಳಿದ್ದಾರೆ. ಎಕ್ಸ್‌ನಲ್ಲಿ ದೀರ್ಘ...

ಆಳಂದ ಮತಗಳ್ಳತನ | ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಸೇರಿ 7 ಮಂದಿ ವಿರುದ್ಧ ಎಸ್‌ಐಟಿ ಚಾರ್ಜ್‌ಶೀಟ್‌

ಕಲಬುರಗಿಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತಗಳ್ಳತನ (ಚುನಾವಣಾ ಆಕ್ರಮ) ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು, ಆಳಂದದ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್...

ಉತ್ತರ ಪ್ರದೇಶ| ಗಸ್ತು ವಾಹನ ಹಳ್ಳಕ್ಕೆ ಉರುಳಿಸಿದ ಪಾನಮತ್ತ ಪೊಲೀಸರು; ಕ್ರೇನ್ ಚಾಲಕನ ಮೇಲೆ ಹಲ್ಲೆ

ಶುಕ್ರವಾರ (ಡಿಸೆಂಬರ್ 12) ರಾತ್ರಿ ಪೊಲೀಸರೊಬ್ಬರು ಕಾರಿನ ನಿಯಂತ್ರಣ ಕಳೆದುಕೊಂಡ ಬಳಿಕ '112' ಪೊಲೀಸ್ ಪ್ರತಿಕ್ರಿಯೆ ವಾಹನ (ಪಿಆರ್‌ವಿ) ಹಳ್ಳಕ್ಕೆ ಉರುಳಿದೆ. ವರದಿಗಳ ಪ್ರಕಾರ, ಘಟನೆಯ ಸಮಯದಲ್ಲಿ ಪೊಲೀಸರು ಪಾನಮತ್ತರಾಗಿದ್ದರು. ಕಾರ್ ಕಂದಕಕ್ಕೆ...

ಲಿಯೋನೆಲ್ ಮೆಸ್ಸಿ ಇಂಡಿಯಾ ಪ್ರವಾಸ; ಅಭೂತಪೂರ್ವ ಸ್ವಾಗತ ಕೋರಿದ ಕೋಲ್ಕತ್ತಾ ಅಭಿಮಾನಿಗಳು

ಇಂಡಿಯಾ ಪ್ರವಾಸ ಪ್ರಾರಂಭಿಸಿರುವ ಅರ್ಜೆಂಟೀನಾದ ಪುಟ್‌ಬಾಲ್‌ ತಾರೆ ಲಿಯೋನೆಲ್ ಮೆಸ್ಸಿ ಕೋಲ್ಕತ್ತಾಗೆ ಬಂದಿಳಿದಿದ್ದಾರೆ. ಶನಿವಾರ ಬೆಳಗಿನ ಜಾವ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳಿಂದ ಅವರಿಗೆ ಅಭೂತಪೂರ್ವ ಸ್ವಾಗತ ಕೋರಿದರು. ಅರ್ಜೆಂಟೀನಾದ ಸೂಪರ್‌ಸ್ಟಾರ್ ದುಬೈ...

ನಟಿಯ ಅಪಹರಣ, ಅತ್ಯಾಚಾರ ಪ್ರಕರಣ : ಆರು ಅಪರಾಧಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ಮಲಯಾಳಂ ಮೂಲದ ಬಹುಭಾಷಾ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ (2017ರ ಪ್ರಕರಣ) ಆರು ಅಪರಾಧಿಗಳಿಗೆ ಇಪ್ಪತ್ತು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಶುಕ್ರವಾರ (ಡಿಸೆಂಬರ್ 12) ಕೇರಳ ನ್ಯಾಯಾಲಯ ಆದೇಶಿಸಿದೆ. ಡಿಸೆಂಬರ್...