Homeಅಂಕಣಗಳುಮಾಜಿ ರೌಡಿ ಶೀಟರ್‌ಗೆ ನಮಸ್ಕರಿಸುವುದೂ ಸಂಸ್ಕಾರವಂತಲ್ಲಾ!

ಮಾಜಿ ರೌಡಿ ಶೀಟರ್‌ಗೆ ನಮಸ್ಕರಿಸುವುದೂ ಸಂಸ್ಕಾರವಂತಲ್ಲಾ!

- Advertisement -
- Advertisement -

ಹಸಿರುಮಯವಾಗಿದ್ದ ಮಂಡ್ಯವನ್ನು ಕೇಸರಿಮಯವಾಗಿಸಲು ಪಣತೊಟ್ಟ ಬಿಜೆಪಿಗಳು ಪ್ರಧಾನಿಯವರ ರೋಡ್ ಶೋ ಏರ್ಪಡಿಸಿದ್ದ ಫಲವಾಗಿ ಮೋದಿ ಕೈ ಬೀಸಲು ಅಡ್ಡಿಯಾಗಿದ್ದ ಮರದ ರೆಂಬೆಕೊಂಬೆಗಳನ್ನೆಲ್ಲಾ ಕಡಿದು, ರಸ್ತೆಯ ಮಾರ್ಗವನ್ನು ಬದಲಿಸಿ ಅಂತೂ ಮಂಡ್ಯಕ್ಕೆ ಮೋದಿ ಕರೆತಂದು ಫೈಟರ್ ರವಿಯನ್ನ ಪರಿಚಯಿಸಿದವಲ್ಲಾ. ಮಂಡ್ಯ ಧೀಮಂತ ರಾಜಕಾರಣಿಗಳಿಗೆ ಹೆಸರಾದ ಜಿಲ್ಲೆ. ಅಲ್ಲಿನ ರಾಜಕಾರಣದ ಇತಿಹಾಸ ನೋಡಿದರೆ ಇಲ್ಲಿನ ಪ್ರಾಮಾಣಿಕ ಮತದಾರರ ಮೆಚ್ಚಿನ ಜನ ನಾಯಕರ ಇತಿಹಾಸವೇ ಇದೆ. ಅವರ ಸಂತತಿಗಳು ಕೂಡ ಇನ್ನೂ ಇವೆ. ಅವರನ್ನೆಲ್ಲಾ ಬಿಟ್ಟು ಈ ಬಿಜೆಪಿಗಳು ಫೈಟರ್ ರವಿ ಎಂಬ ವ್ಯಕ್ತಿಯನ್ನು ಪರಿಚಯಿಸಿದಾಗ ಮೋದಿಯವರಿಗೆ ಅಮಿತ್‌ಶಾ ದರ್ಶನ ಮಾಡಿದಂತಾಗಿ ಕೈ ಮುಗಿದು ಮುಗುಳುನಕ್ಕಿದ್ದಾರಲ್ಲಾ. ಇದು ಭಾರತದ ಇತಿಹಾಸದಲ್ಲಿ ಹಿಂದೆಂದೂ ನಡೆಯದ ಘಟನೆ. ಬೆಂಗಳೂರು ಠಾಣೆಗಳಲ್ಲಿ ಕೇಸುಗಳಿರುವ ವ್ಯಕ್ತಿಯೊಬ್ಬ ಜಾದೂ ಮಾಡಿದಂತೆ ಧನಕನಕ ಸಂಗ್ರಹಿಸಿಕೊಂಡು ಒಂದು ಓಟಿಗೆ ಇಂತಿಷ್ಟು ಸಾವಿರ ಕೊಡುತ್ತೇನೆಂದು ಘೋಷಣೆ ಮಾಡಿಕೊಂಡು ತಿರುಗುತ್ತಿರುವಾಗ, ಆತ ಬಿಜೆಪಿಗಳಿಗೆ ಗಣ್ಯನಾಗಿ ಕಂಡಿದ್ದೂ ಅಲ್ಲದೆ, ಆತ ಪ್ರಧಾನ ಮಂತ್ರಿ ಭೇಟಿಮಾಡಲೇಬೇಕಾದ ವ್ಯಕ್ತಿಯೆಂದು ಭಾವಿಸಿದ ಈ ಬಿಜೆಪಿಗಳು ಮುಟ್ಟಿರುವ ಪಾತಾಳ ಎದ್ದು ಬರಲಾರದಂತಹುದಂತಲ್ಲಾ, ಥೂತ್ತೇರಿ.

*****

ಮಂಡ್ಯದಲ್ಲಿ ಫೈಟರ್ ರವಿಯ ಜೊತೆಗೆ ಮತ್ತೊಬ್ಬ ಧೀಮಂತ ಮಹಿಳೆ ಸುಮಲತಾ ತಾನು ಈವರೆಗೆ ಹಸುವಿನಂತಿದ್ದೆ, ನನಗೆ ಆನೆ ಬಲ ಬರಬೇಕಾದರೆ ಬಿಜೆಪಿಗೆ ಸೇರಲೇಬೇಕೆಂದು ಹಠತೊಟ್ಟು ಮೋದಿ ಸಮ್ಮುಖದಲ್ಲೇ ಬಿಜೆಪಿಗಿ ನುಗ್ಗಿದ್ದಾರಲ್ಲಾ. ಸುಮಲತಾ ಚುನಾವಣೆಗೆ ನಿಂತಾಗ ನಾಗಮಂಗಲದ ಮಾಜಿ ಶಾಸಕ ಮತ್ತು ಮಂಡ್ಯದ ಮಾಜಿ ಸಂಸದ ಶಿವರಾಮೇಗೌಡ ತನ್ನದೇ ಶೈಲಿಯಲ್ಲಿ ಸುಮಲತಾರನ್ನು ಜರಿದಿದ್ದರು. ಆಗ ಇಡೀ ನಾಡಿನ ತುಂಬ ಪ್ರತಿಭಟನೆಗಳಾಗಿದ್ದವು. ಶಿವರಾಮೇಗೌಡರ ವಿರುದ್ಧ ಮಹಿಳೆಯರು ಪ್ರತಿಭಟಿಸಿದ್ದರು. ಆದರೆ ಈಗ ಸುಮಲತಾ ದಿಢೀರನೆ ಬಿಜೆಪಿಗೆ ಬೆಂಬಲ ಘೋಷಿಸಿ ಅಸಂಬದ್ಧವಾಗಿ ಮಾತನಾಡುವ ಶಿವರಾಮೇಗೌಡನ ಮಾತನ್ನೇ ಮರೆಸುವಂತೆ ಮುನ್ನುಗ್ಗುತ್ತಿದ್ದಾರಲ್ಲಾ. ಅಂದು ಜೆಡಿಎಸ್ ಲೀಡರುಗಳನ್ನು ಮೆಚ್ಚಿಸಲೋಸ್ಕರ ಅಸಂಬದ್ಧ ಮಾತನಾಡಿದ್ದ ಶಿವರಾಮೇಗೌಡ ಇಂದು ಜೆಡಿಎಸ್‌ನಿಂದಲೀ ಉಚ್ಛಾಟನೆಗೊಂಡು ಬಿಜೆಪಿಯ ಟಿಕೆಟ್ ಆಕಾಂಕ್ಷಿಯಾಗಿರುವಾಗಲೇ, ಫೈಟರ್ ರವಿ ನಾಗಮಂಗಲಕ್ಕೆ ಕೋಟಿಗೂ ಹೆಚ್ಚು ಖರ್ಚು ಮಾಡಿ ಪ್ರಧಾನಿಯಿಂದಲೇ ಕೈ ಮುಗಿಸಿಕೊಂಡು ಭೇಷ್ ಎನ್ನಿಸಿಕೊಳ್ಳುವಾಗ, ಸುಮಲತಾ ಕೂಡ ಬಿಜೆಪಿ ಸೇರಿದ್ದು (ಬಾಹ್ಯ ಬೆಂಬಲವೆಂಬ ನಾಟಕದೊಂದಿದೆಗೆ) ಈಗ ಎಲ್ಲಿಗೆ ಹೋಗಲಿ ಎಂಬ ಸ್ಥಿತಿಯನ್ನು ಶಿವರಾಮೇಗೌಡ ಎದುರಿಸುತ್ತಿದ್ದಾರಂತಲ್ಲಾ, ಥೂತ್ತೇರಿ.

*****

ಈಗ ಬಿಜೆಪಿಗೆ ಬೆಂಬಲ ಘೋಷಿಸಿರುವ ಸುಮಲತಾ ಕಳೆದ ಬಾರಿ ಎದುರಿಸಿದ್ದ ಚುನಾವಣೆಯನ್ನು ಪ್ರಪಂಚದಲ್ಲೆಲ್ಲಾ ಹರಡಿರುವ ಅಂಬರೀಶ್ ಅಭಿಮಾನಿಗಳು ಕುತೂಹಲದಿಂದ ನೋಡಿದ್ದರು. ಅದೂಅಲ್ಲದೆ ದುಬೈನ ಬುರ್ಜು ಖಲೀಫದ ಕಟ್ಟಡದಲ್ಲಿ ಕುಳಿತ ಅದರ ಮಾಲೀಕರೂ ಕೂಡ ವೀಕ್ಷಿಸಿದ್ದರು. ಏಕೆಂದರೆ ಅವರೆಲ್ಲಾ ಅಂಬರೀಶ್ ಗೆಳೆಯರಾಗಿದ್ದರು. ಅದೂಅಲ್ಲದೆ ಕಾಶ್ಮೀರದ ಫಾರೂಕ್ ಅಬ್ದುಲ್ಲಾ ಕೂಡ ತನ್ನ ಗೆಳೆಯನ ಪತ್ನಿ ಗೆಲ್ಲಲೆಂದು ಪ್ರಾರ್ಥಿಸಿದ್ದರು. ಅಂತೂ ಸುಮಲತಾ ಗೆದ್ದರು. ಆ ಗೆಲುವಿನಲ್ಲೂ ಕೆಲವು ದಾಖಲೆಗಳಿದ್ದವು. ಅವರ ಬೆನ್ನಿಗೆ ರೈತಸಂಘ, ಕಾಂಗ್ರೆಸ್ಸು, ಕೆಲ ಬಿಜೆಪಿಗಳೂ ನಿಂತಿದ್ದವು. ಆದ್ದರಿಂದ ಒಂದು ಲಕ್ಷದ ಇಪ್ಪತೈದು ಸಾವಿರ ಲೀಡಿನಲ್ಲಿ ಗೆದ್ದಿದ್ದರು. ಇದನ್ನೆಲ್ಲ ದಾಟಿದ ಸುಮಲತಾ ಬಿಜೆಪಿಗೆ ನೆಗೆದದ್ದು ಈ ಶತಮಾನದ ದ್ರೋಹ ಎಂದು ಮಂಡ್ಯದ ಸ್ವಾಭಿಮಾನಿಗಳು ಹೇಳುತ್ತಿದ್ದಾರಲ್ಲಾ. ಇದೆಲ್ಲಕ್ಕಿಂತ ಮಂಡ್ಯದವರು ಬೆಚ್ಚಿರುವುದೇಕೆಂದರೆ ಅಂದು ಸೆರಗೊಡ್ಡಿ ಮತ ಕೇಳಿದ್ದ ಈಕೆಯ ನಟನೆ ನಮಗೆ ಗೊತ್ತೇ ಆಗಲಿಲ್ಲ ಎಂದ ರೋಷಗೊಂಡಿದ್ದಾರಂತಲ್ಲಾ, ಥೂತ್ತೇರಿ.

*****

ಪ್ರಧಾನಿ ಭೇಟಿಯಿಂದ ಮಂಡ್ಯ ಸುಸ್ತು ಹೊಡೆದು ಕುಳಿತಿದೆಯಲ್ಲಾ. ಏಕೆಂದರೆ ಇಡೀ ಸರಕಾರಿ ಯಂತ್ರಾಂಗವನ್ನೇ ಬಳಸಿಕೊಂಡು ಅದ್ದೂರಿಯಾಗಿ ಪ್ರಧಾನಿಯ ಪ್ರವಾಸವನ್ನು ಮಾಡಿ ಮುಗಿಸಿದ ಬಿಜೆಪಿಯ ಸಾಧನೆ ನೋಡಿದರೆ, ಪ್ರಧಾನಿಗಳು ಫೈಟರ್ ರವಿಗೆ ಕೈ ಮುಗಿದದ್ದು ಮತ್ತು ಸುಮಲತಾರನ್ನು ಪಾರ್ಟಿಗೆ ಸೇರಿಸಿಕೊಂಡಿದ್ದೇ ಬಹುದೊಡ್ಡ ಸಾಧನೆಯಾಗಿ ಕಾಣತೊಡಗಿದೆಯಲ್ಲಾ. ಒಂದೊಂದು ತಾಲೂಕಿನಿಂದ ತಲಾ ಎಪ್ಪತ್ತು ಬಸ್ಸು ಜನ ತುಂಬಿಕೊಂಡು ಬಂದವು. ಅದರಲ್ಲಿ 50 ಜನರಿದ್ದು ತಲಾ ಮುನ್ನೂರು ಬಟವಾಡೆಯಾಗಿ ಕೊಟ್ಟರಂತಲ್ಲಾ. ಹಣ ಮತ್ತು ಬಂದ ಜನರ ದಾಖಲೆ ಎಲ್ಲ ಸರಿಯಾಗಿರಬೇಕು ಎಂದು ಹಿಂದೆಂದು ಕಾಣದ ಶಿಸ್ತಿನಿಂದ ನಡೆದುಹೋದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜನ ಚಲುವರಾಯಸ್ವಾಮಿ ನಡೆಸುವ ಸಭೆಗೆ ಮತ್ತು ಶಿವರಾಮೇಗೌಡ ಹಾಗೂ ಇನ್ನಿತರ ಸಭೆಗೂ ಹೋಗುತ್ತ ನಾವು ಕೂಲಿಗೆ ಹೋದರೆ ಐದುನೂರು ಕೊಡುತ್ತಾರೆ ಈ ಮುನ್ನೂರು ಸಾಲುವುದಿಲ್ಲ ಇನ್ನ ಮುಂದೆ ಐನೂರರ ಜೊತೆಗೆ ಒಂದು ಪ್ಯಾಕೆಟ್ ಬಿರಿಯಾನಿ ಮತ್ತು ಒಂದು ಕ್ವಾಟರ್ ಕೊಡುವುದಿದ್ದರೆ ಮನೆ ಹತ್ತಿರ ಬನ್ನಿ ಎನ್ನವಂತಾಗಿದ್ದಾರಂತಲ್ಲಾ, ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...