Homeಅಂಕಣಗಳುತುರ್ತುಪರಿಸ್ಥಿತಿಯ ಗರ್ಭದಲ್ಲೇ ಕಮಲ ಅರಳಿತಂತಲ್ಲಾ!

ತುರ್ತುಪರಿಸ್ಥಿತಿಯ ಗರ್ಭದಲ್ಲೇ ಕಮಲ ಅರಳಿತಂತಲ್ಲಾ!

- Advertisement -
- Advertisement -

ತುರ್ತು ಪರಿಸ್ಥಿತಿಯ ಸಮಯದಲ್ಲಿ ದೇಶದಲ್ಲಿ ಸ್ವಾತಂತ್ರ್ಯದ ಹರಣವಾಗಿತ್ತು; ಮಾಧ್ಯಮಗಳ ಕತ್ತು ಹಿಸುಕಲಾಗಿತ್ತು. ಬಲೆ ಹಾಕಿ ಹಂದಿಗಳನ್ನು ಹಿಡಿದಂತೆ ವಿರೋಧ ಪಕ್ಷದವರನ್ನೆಲ್ಲಾ ಅರೆಸ್ಟು ಮಾಡಿ ಜೈಲಿಗೆ ಹಾಕಲಾಗಿತ್ತು; ಇಂಥ ಮಾತುಗಳ ಶಂಖವಾದ್ಯವನ್ನು ತುರ್ತುಪರಿಸ್ಥಿತಿ ತೆರವುಗೊಂಡಾಗಿನಿಂದ ಬಿಜೆಪಿಗಳು ಪ್ರತಿ ವರ್ಷ ಊದೂತ್ತ ಬಂದಿದ್ದಾರೆ. ಒಂದಿಷ್ಟು ಒಳನೋಟ ಬೀರಿ ಗ್ರಹಿಸಿದ್ದಾದರೆ ತುರ್ತು ಸ್ಥಿತಿಯ ಗರ್ಭದಲ್ಲೇ ಬಿಜೆಪಿಯ ಭ್ರೂಣಾವಸ್ಥೆ ಬಲಿತು ಆ ನಂತರ ಅದು ಕಮಲವಾಗಿ ಅರಳಿದ್ದು ಕಟುಸತ್ಯವಾಗಿ ಕಾಣುತ್ತಿದೆಯಲ್ಲಾ. ತುರ್ತುಪರಿಸ್ಥಿತಿಯಲ್ಲಿ ವಿರೋಧಪಕ್ಷದವರೆಲ್ಲಾ ಜೈಲಿನಲ್ಲಿ ಒಟ್ಟಾಗಿ ಕುಳಿತು ಚರ್ಚಿಸಿ ಒಗ್ಗಟ್ಟು ಪ್ರದರ್ಶಿಸಿದ್ದರು. ತುರ್ತುಪರಿಸ್ಥಿತಿ ತೆರವುಗೊಂಡು ಎಲ್ಲರೂ ಹೊರಬಂದಮೇಲೆ ಜೆ.ಪಿ.ಯವರು (ಜಯಪ್ರಕಾಶ ನಾರಾಯಣ) ನೀವೆಲ್ಲಾ ನಿಮ್ಮನಿಮ್ಮ ಚಹರೆ ಮತ್ತು ಬಾವುಟ ಬಿಸಾಡಿ ನೇಗಿಲು ಹೊತ್ತ ರೈತನ ಪಕ್ಷದ ಮುಂದಾಳತ್ವದಲ್ಲಿ ಒಂದಾಗಲು ಕರೆಕೊಟ್ಟ ಕೂಡಲೇ ಬಹುತೇಕ ಎಲ್ಲರೂ ಹಾಗೇ ಮಾಡಿದರು; ಆದರೆ ಬಿಜೆಪಿಗಳು ಜನಸಂಘದ ದೀಪ ಆರಿಸಿ ಬಂದರೂ ಚೆಡ್ಡಿ ದೊಣ್ಣೆಯನ್ನ ಹಾಗೇ ಉಳಿಸಿಕೊಂಡು ಬಂದಿದ್ದರಂತಲ್ಲಾ, ಥೂತ್ತೇರಿ.

****

ಜೆ.ಪಿ. ಕರೆಯಂತೆ ನೇಗಿಲುಹೊತ್ತ ರೈತನ ಪಕ್ಷ ಭಾರತದಲ್ಲಿ ಜಯಭೇರಿ ಭಾರಿಸಿ ಹದಿನೆಂಟು ತಿಂಗಳ ಕಾಲ ಆಡಳಿತ ನಡೆಸಿತು. ಅಷ್ಟರಲ್ಲಿ ದೀಪ ಆರಿಸಿ ಬಂದ ಜನರ ಚೇಷ್ಟೆಗಳು ಆರಂಭವಾದವು. ಅವರು ಜನತಾಪಕ್ಷದ ಸದಸ್ಯತ್ವದ ಜೊತೆಗೇ ಆರೆಸ್ಸೆಸ್ ಸದಸ್ಯತ್ವವನ್ನು ನಿಭಾಯಿಸುತ್ತಾ ಜನತಾ ಪಕ್ಷಕ್ಕೆ ಜನಿವಾರ ತೊಡಿಸಹೊರಟಿದ್ದು ಎಲ್ಲರನ್ನ ದಂಗುಬಡಿಸಿತು. ಈ ಗಲಭೆಯ ಸಮಯವನ್ನು ಸದುಪಯೋಗಪಡಿಸಿಕೊಂಡ ರಾಜನಾರಾಯಣನವರ ಬಣ ಪ್ರಧಾನಿ ಮೊರಾರ್ಜಿ ಅವರನ್ನ ಇಳಿಸಿ ಚರಣಸಿಂಗರನ್ನು ಪ್ರಧಾನಿ ಮಾಡುವಲ್ಲಿ ಯಶಸ್ವಿಯಾಯಿತಾದರೂ, ಅದಕ್ಕೆ ಇಂದಿರಾಗಾಂಧಿ ಬೆಂಬಲ ಬೇಕಾಯಿತು! ಆಗ ಜನತಾ ಪಕ್ಷ ಚಿಂದಿಯಾಗಿ ಹೋಯಿತು. ಇತ್ತ ವಾಜಪೇಯಿ ಟೀಮು ಭಾರತೀಯ ಜನತಾಪಕ್ಷ ಸ್ಥಾಪಿಸಿಕೊಂಡು ಕಮಲ ಚಿಹ್ನೆ ಪಡೆದು ಜನತಾಪಕ್ಷದೊಳಗಡೆ ಪಡೆದುಕೊಂಡ ಶಕ್ತಿಯನ್ನು ವೃದ್ಧಿಸಿಕೊಂಡು ಬೆಳೆಯುತ್ತಲೇ ಹೋಯ್ತು. ಜೆ.ಪಿ. ನೀವೆಲ್ಲಾ ನಿಮ್ಮನಿಮ್ಮ ಪಕ್ಷ ವಿಸರ್ಜಿಸಿ ನೇಗಿಲು ಹೊತ್ತ ರೈತನ ಜೊತೆಗೆ ಬನ್ನಿ ಎಂದು ಕರೆಕೊಡುವಾಗ, ಗಾಂಧಿ ಕೊಂದ ಆಪಾದನೆಯ ಸಂಘಟನೆಯ ಜೊತೆಗೆ ಸಂಬಂಧ ಹೊಂದಿದ್ದ ಜನಸಂಘದ ಹೊರತಾಗಿ ಎಲ್ಲರೂ ಬನ್ನಿ ಎಂದು ಹೇಳಿದ್ದರೆ ಈ ದೇಶದ ಚರಿತ್ರೆಯೇ ಬದಲಾಗುತ್ತಿತ್ತಲ್ಲವಾ, ಥೂತ್ತೇರಿ.

****

ದೇಶದ ಮಹಾನಾಯಕರು ವಿವೇಚನೆಯಿಲ್ಲದೆ ನಡೆದುಕೊಂಡ ತಪ್ಪಿಗೆ ದೇಶವೇ ಪರಿತಪಿಸಬೇಕಾಗುತ್ತದೆ ಎಂಬುದಕ್ಕೆ ಜೆ.ಪಿ. ತೆಗೆದುಕೊಂಡ ಆತುರದ ತೀರ್ಮಾನವೇ ಪ್ರಮುಖ ಉದಾಹರಣೆ. ಅದು ಇಂದು ತನ್ನ ದುಷ್ಪರಿಣಾಮದ ಫಲಕೊಡುತ್ತಿದೆ. ನಿಜವಾಗಿಯೂ ಭಾರತೀಯ ಜನತಾಪಕ್ಷದವರು ತುರ್ತುಸ್ಥಿತಿಯನ್ನ ಸ್ಮರಿಸಿಕೊಳ್ಳಬೇಕು, ಅಲ್ಲದೆ ತಮ್ಮ ಪಾರ್ಟಿ ಆಫೀಸುಗಳಲ್ಲಿ ಮತ್ತು ನಾಗಪುರದ ಕೇಂದ್ರ ಕಚೇರಿಯಲ್ಲಿ ಜೆ.ಪಿ. ಮತ್ತು ಇಂದಿರಾಗಾಂಧಿಯವರ ಫೋಟೋ ಹಾಕಿಕೊಂಡು ಪ್ರಾರ್ಥಿಸಬೇಕು. ಇವರಿಬ್ಬರ ವಿವೇಚನೆಯಿಲ್ಲದ ತೀರ್ಮಾನಗಳಿಂದ ಅರಳಿದ ಕಮಲ ಪಕ್ಷದಿಂದ ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಇಂದು ನೆಲೆಸಿದೆ. ಇಡೀ ದೇಶವೇ ಕ್ಷೋಭೆಯಿಂದ ನಲುಗುತ್ತಿದೆ, ಮಣಿಪುರ ಸರ್ವನಾಶದ ದಾರಿಯಲ್ಲಿದೆ. ಇಂತಹ ಘಟನೆಗಳಿಂದ ವಿಚಲಿತರಾಗದ ನಮ್ಮ ಪ್ರಧಾನಿಯವರು ಸ್ಥಿತಪ್ರಜ್ಞತೆಯಿಂದ ಯೋಗ ಮಾಡಿಕೊಂಡು ಇಡೀ ಪ್ರಪಂಚದ ಗಮನ ಸೆಳೆದಿದ್ದಾರೆ. ಮಾರಿಕೊಂಡ ಮಾಧ್ಯಮದವರೂ ವಾರಗಟ್ಟಲೆ ಮೋದಿಯ ಯೋಗ ತೋರಿಸಿ ಎಲ್ಲರೂ ಯೋಗದಿಂದ ವಿಮುಕ್ತರಾಗುವಂತೆ ಮಾಡಿದ್ದಾರಂತಲ್ಲಾ, ಥೂತ್ತೇರಿ.

****

ನಿಜವಾಗಿಯೂ ಒಂದು ಕಾಲದ ಬಿಜೆಪಿಯು ಅಂದರೆ ವಾಜಪೇಯಿ ಕಾಲದ ಬಿಜೆಪಿ ಈಗಿನಂತಿರಲಿಲ್ಲವಂತಲ್ಲಾ. ಕೆಲವರಾದರೂ ಪ್ರಾಮಾಣಿಕರು ಅವರ ಜೊತೆಗೆ ಇದ್ದರಂತಲ್ಲಾ. ಚುನಾವಣೆ ಬಂದರೆ ಕುಬೇರರ ಬಳಿ ಭಿಕ್ಷೆ ಬೇಡಿ ಅದರಲ್ಲೇ ಚಿತ್ರಾನ್ನ ತಿಂದು, ಶರಭತ್ತು ಕುಡಿದು, ಹ್ಯಾಂಡ್ ಬಿಲ್ ಹಾಕಿಸಿಕೊಂಡು ಹಂಚಿ ಚುನಾವಣೆ ಮುಗಿಸುತ್ತಿದ್ದರು. ಫಲಿತಾಂಶ ಬಂದಾಗ “ಈ ಬಾರಿ ಐದುನೂರು ಓಟು ನಮ್ಮ ಪಾರ್ಟಿಗೆ ಜಾಸ್ತಿ ಬಂದಿವೆ” ಎಂದುಕೊಂಡು ಮನೆಗೆ ಹೋಗುತ್ತಿದ್ದರು. ಅದು ಎ.ಕೆ ಸುಬ್ಬಯ್ಯನವರ ಕಾಲ. ಯಾವಾಗ ಎಡೂರಪ್ಪನವರ ಕಾಲ ಶುರುವಾಯಿತೊ ಆಗ ಉದ್ಘಾಟನೆಗೊಂಡ ಭ್ರಷ್ಟಾಚಾರ ಇಡೀ ದೇಶವನ್ನೇ ದಂಗುಬಡಿಸಿತು. ಬಿಜೆಪಿ ಕಚೇರಿಗಳೇ ಮೀಟಿಂಗು ಮಾಡಿ, ನಮ್ಮ ಪಕ್ಷದವರು ಹಣ ಮಾಡುವುದನ್ನು ಯಾರೂ ತಡೆಯಬೇಡಿ, ಅದರ ವಿರುದ್ಧ ಹೇಳಿಕೆ ಕೊಡಬೇಡಿ ಎಂದಕೂಡಲೇ ಎಡೂರಪ್ಪ ಪಾರ್ಟಿ ಹಿತಕ್ಕಾಗಿ ಎರ್ರಾ ಬಿರ್ರಿ ಹಣ ಸಂಗ್ರಹಿಸಿ, ಕೊನೆಗೆ ಆರೋಪ ವಹಿಸಿಕೊಂಡು ಜೈಲಿಗೂ ಹೋಗಿಬಂದರಂತಲ್ಲಾ, ಥೂತ್ತೇರಿ.

****

ಮುಂದೆ ಮೋದಿ ಸರಕಾರವನ್ನು ಕಿತ್ತು ಮಡಗಬೇಕಾದರೆ ನಾವೆಲ್ಲಾ ಒಟ್ಟಾಗಿ ಚುನಾವಣೆ ಎದುರಿಸಬೇಕು ಎಂದು ಇಪ್ಪತ್ತೊಂದು ವಿವಿಧ ಪಕ್ಷಗಳೂ ಒಂದೆಡೆ ಸೇರಿ ಚರ್ಚಿಸಿ ಬರಖಾಸ್ತ ಆದರಂತಲ್ಲಾ. ಈ ಸಭೆಗೆ ಮಾಜಿ ಪ್ರಧಾನಿಗಳಾದ ದೇವೇಗೌಡರು ಗೈರುಹಾಜರಾದದ್ದು ಸುದ್ದಿಯಾಗಲಿಲ್ಲ; ಈಗಿನ ಸರ್ಕಾರ ಕಟ್ಟಿಸಿ ಮೋದಿಯವರು ಉದ್ಘಾಟಿಸಿದ ಹೊಸ ಪಾರ್ಲಿಮೆಂಟ್ ನೋಡಲು ದೇವೇಗೌಡರು ಹೋಗಿದ್ದರು. ಹಿಂದೆ ದೇವೇಗೌಡರನ್ನು ಪ್ರಧಾನಿ ಮಾಡಬೇಕಾದ ಸಮಯದಲ್ಲಿ ಇಷ್ಟೇ ಪಕ್ಷಗಳು ಒಂದೆಡೆ ಸೇರಿ ಚರ್ಚಿಸಿದ್ದವು. ಆ ಸಭೆಯಲ್ಲಿ ಬಿಜೆಪಿ ಇರಲಿಲ್ಲ. ಜ್ಯೋತಿ ಬಸು ಪ್ರಧಾನಿಯಾಗಲು ಪಾರ್ಟಿ ಬಿಡಲಿಲ್ಲ. ವಿ.ಪಿ ಸಿಂಗ್ ತಪ್ಪಿಸಿಕೊಂಡರು. ಆಗ ಎಲ್ಲ ವಿರೋಧಪಕ್ಷಗಳು ಸೇರಿಕೊಂಡು ದೇವೇಗೌಡರನ್ನು ಪ್ರಧಾನಿಯಾಗಿ ಆರಿಸಿದರು. ಇಂತಹ ಯಾವ ಉಪಕಾರದ ಸ್ಮರಣೆಯಿಲ್ಲದ ಗೌಡರ ನಡೆ, ಅವರು ಈ ಹಿಂದೆ ತಮ್ಮ ಮಗನನ್ನು ಮುಖ್ಯಮಂತ್ರಿ ಮಾಡಲು ಹಾಕಿದ ಪಾತ್ರಕ್ಕೆ ಸಾಕ್ಷಿ ನುಡಿಯುತ್ತಿದೆಯಂತಲ್ಲಾ, ಥೂತ್ತೇರಿ.

****

ಯಾವಾಗ ದೇವೇಗೌಡರು ಬಹಿರಂಗವಾಗಿಯೇ ಮೋದಿ ಪರವಾಗಿ ಚಾವಲ ಬೀಸತೊಡಗಿದರೋ, ಆ ಕೂಡಲೇ ಕುಮಾರಣ್ಣ ಕಾಂಗೈ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳತೊಡಗಿದ್ದಾರಲ್ಲಾ. ವಾಸ್ತವವಾಗಿ ಪಂಚರತ್ನ ಭಾಗ್ಯ ಪ್ರಕಟಿಸಿ ಕರ್ನಾಟಕವನ್ನು ಗರಗರ ತಿರುಗಿ ಬರಬರ ಬಂದವರು, ತಾವು ಮಾಡಬೇಕಿದ್ದಂತಹ ಕಾರ್ಯಕ್ರಮಗಳನ್ನು ಕಾಂಗ್ರೆಸ್ ಪಾರ್ಟಿಯಾದರೂ ತರುತ್ತಿದೆಯಲ್ಲಾ ಎಂದು ಮೆಚ್ಚುಗೆ ಸೂಚಿಸಬಹುದಿತ್ತು. ಆದರೆ ಅದು ಅವರಿಂದ ಸಾಧ್ಯವಾಗುತ್ತಿಲ್ಲ. ದೇವೇಗೌಡರು ಏನೇ ಮಾಡಿದರೂ ಅದು ಮಗನ ರಾಜಕಾರಣದ ಭವಿಷ್ಯ ಕುರಿತ ಹುನ್ನಾರದ ಸೂತ್ರವಿದ್ದಂತೆ. ಅಂತಹ ಸೂತ್ರದಲ್ಲಿ ಸಿಕ್ಕಿ ಒದ್ದಾಡುತ್ತಿರುವ ಕುಮಾರಣ್ಣ ಯಾವ ಮಾತನ್ನಾಡಿದರೂ ಹಾಸ್ಯಾಸ್ಪದವಾಗುತ್ತಿದೆ. ಒಂಥರದಲ್ಲಿ ಅದು ಶೋಭಾ ಕರಂದ್ಲಾಜೆ, ಎಡೂರಪ್ಪ, ಆಶೋಕ್ ಇತ್ಯಾದಿಗಳ ದನಿಯಂತೆಯೂ ಕೇಳುತ್ತಿದೆ. ಹೀಗೇ ಆದರೆ ಕುಮಾರಣ್ಣ ಹಿಂದೆ ಹೋಗುವುದು ಹೇಗೆಂದು ದಳದ ಕೆಲವರು ಯೋಚಿಸುತ್ತಿದ್ದಾರಂತಲ್ಲಾ. ಇಂತಹ ಆಲೋಚನೆ ಮತ್ತು ಕಾರ್ಯಕರ್ತರ ಅಸಮಾಧಾನಗಳ ಕಡೆ ಕಿವಿಗೊಟ್ಟಿದ್ದರೆ ಕುಮಾರಣ್ಣನಿಗೆ ಇಪ್ಪತ್ತೊಂಬತ್ತು ಸೀಟಾದರೂ ಬರುತ್ತಿದ್ದವಂತಲ್ಲಾ ಥೂತ್ತೇರಿ.


ಇದನ್ನೂ ಓದಿ: ಮತದಾರ ಕೊಟ್ಟ ಪೆಟ್ಟು ಮುಟ್ಟಿ ನೋಡಿಕೊಳ್ಳುವಂತಿದೆಯಲ್ಲಾ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...