Homeಅಂಕಣಗಳುತುರ್ತುಪರಿಸ್ಥಿತಿಯ ಗರ್ಭದಲ್ಲೇ ಕಮಲ ಅರಳಿತಂತಲ್ಲಾ!

ತುರ್ತುಪರಿಸ್ಥಿತಿಯ ಗರ್ಭದಲ್ಲೇ ಕಮಲ ಅರಳಿತಂತಲ್ಲಾ!

- Advertisement -
- Advertisement -

ತುರ್ತು ಪರಿಸ್ಥಿತಿಯ ಸಮಯದಲ್ಲಿ ದೇಶದಲ್ಲಿ ಸ್ವಾತಂತ್ರ್ಯದ ಹರಣವಾಗಿತ್ತು; ಮಾಧ್ಯಮಗಳ ಕತ್ತು ಹಿಸುಕಲಾಗಿತ್ತು. ಬಲೆ ಹಾಕಿ ಹಂದಿಗಳನ್ನು ಹಿಡಿದಂತೆ ವಿರೋಧ ಪಕ್ಷದವರನ್ನೆಲ್ಲಾ ಅರೆಸ್ಟು ಮಾಡಿ ಜೈಲಿಗೆ ಹಾಕಲಾಗಿತ್ತು; ಇಂಥ ಮಾತುಗಳ ಶಂಖವಾದ್ಯವನ್ನು ತುರ್ತುಪರಿಸ್ಥಿತಿ ತೆರವುಗೊಂಡಾಗಿನಿಂದ ಬಿಜೆಪಿಗಳು ಪ್ರತಿ ವರ್ಷ ಊದೂತ್ತ ಬಂದಿದ್ದಾರೆ. ಒಂದಿಷ್ಟು ಒಳನೋಟ ಬೀರಿ ಗ್ರಹಿಸಿದ್ದಾದರೆ ತುರ್ತು ಸ್ಥಿತಿಯ ಗರ್ಭದಲ್ಲೇ ಬಿಜೆಪಿಯ ಭ್ರೂಣಾವಸ್ಥೆ ಬಲಿತು ಆ ನಂತರ ಅದು ಕಮಲವಾಗಿ ಅರಳಿದ್ದು ಕಟುಸತ್ಯವಾಗಿ ಕಾಣುತ್ತಿದೆಯಲ್ಲಾ. ತುರ್ತುಪರಿಸ್ಥಿತಿಯಲ್ಲಿ ವಿರೋಧಪಕ್ಷದವರೆಲ್ಲಾ ಜೈಲಿನಲ್ಲಿ ಒಟ್ಟಾಗಿ ಕುಳಿತು ಚರ್ಚಿಸಿ ಒಗ್ಗಟ್ಟು ಪ್ರದರ್ಶಿಸಿದ್ದರು. ತುರ್ತುಪರಿಸ್ಥಿತಿ ತೆರವುಗೊಂಡು ಎಲ್ಲರೂ ಹೊರಬಂದಮೇಲೆ ಜೆ.ಪಿ.ಯವರು (ಜಯಪ್ರಕಾಶ ನಾರಾಯಣ) ನೀವೆಲ್ಲಾ ನಿಮ್ಮನಿಮ್ಮ ಚಹರೆ ಮತ್ತು ಬಾವುಟ ಬಿಸಾಡಿ ನೇಗಿಲು ಹೊತ್ತ ರೈತನ ಪಕ್ಷದ ಮುಂದಾಳತ್ವದಲ್ಲಿ ಒಂದಾಗಲು ಕರೆಕೊಟ್ಟ ಕೂಡಲೇ ಬಹುತೇಕ ಎಲ್ಲರೂ ಹಾಗೇ ಮಾಡಿದರು; ಆದರೆ ಬಿಜೆಪಿಗಳು ಜನಸಂಘದ ದೀಪ ಆರಿಸಿ ಬಂದರೂ ಚೆಡ್ಡಿ ದೊಣ್ಣೆಯನ್ನ ಹಾಗೇ ಉಳಿಸಿಕೊಂಡು ಬಂದಿದ್ದರಂತಲ್ಲಾ, ಥೂತ್ತೇರಿ.

****

ಜೆ.ಪಿ. ಕರೆಯಂತೆ ನೇಗಿಲುಹೊತ್ತ ರೈತನ ಪಕ್ಷ ಭಾರತದಲ್ಲಿ ಜಯಭೇರಿ ಭಾರಿಸಿ ಹದಿನೆಂಟು ತಿಂಗಳ ಕಾಲ ಆಡಳಿತ ನಡೆಸಿತು. ಅಷ್ಟರಲ್ಲಿ ದೀಪ ಆರಿಸಿ ಬಂದ ಜನರ ಚೇಷ್ಟೆಗಳು ಆರಂಭವಾದವು. ಅವರು ಜನತಾಪಕ್ಷದ ಸದಸ್ಯತ್ವದ ಜೊತೆಗೇ ಆರೆಸ್ಸೆಸ್ ಸದಸ್ಯತ್ವವನ್ನು ನಿಭಾಯಿಸುತ್ತಾ ಜನತಾ ಪಕ್ಷಕ್ಕೆ ಜನಿವಾರ ತೊಡಿಸಹೊರಟಿದ್ದು ಎಲ್ಲರನ್ನ ದಂಗುಬಡಿಸಿತು. ಈ ಗಲಭೆಯ ಸಮಯವನ್ನು ಸದುಪಯೋಗಪಡಿಸಿಕೊಂಡ ರಾಜನಾರಾಯಣನವರ ಬಣ ಪ್ರಧಾನಿ ಮೊರಾರ್ಜಿ ಅವರನ್ನ ಇಳಿಸಿ ಚರಣಸಿಂಗರನ್ನು ಪ್ರಧಾನಿ ಮಾಡುವಲ್ಲಿ ಯಶಸ್ವಿಯಾಯಿತಾದರೂ, ಅದಕ್ಕೆ ಇಂದಿರಾಗಾಂಧಿ ಬೆಂಬಲ ಬೇಕಾಯಿತು! ಆಗ ಜನತಾ ಪಕ್ಷ ಚಿಂದಿಯಾಗಿ ಹೋಯಿತು. ಇತ್ತ ವಾಜಪೇಯಿ ಟೀಮು ಭಾರತೀಯ ಜನತಾಪಕ್ಷ ಸ್ಥಾಪಿಸಿಕೊಂಡು ಕಮಲ ಚಿಹ್ನೆ ಪಡೆದು ಜನತಾಪಕ್ಷದೊಳಗಡೆ ಪಡೆದುಕೊಂಡ ಶಕ್ತಿಯನ್ನು ವೃದ್ಧಿಸಿಕೊಂಡು ಬೆಳೆಯುತ್ತಲೇ ಹೋಯ್ತು. ಜೆ.ಪಿ. ನೀವೆಲ್ಲಾ ನಿಮ್ಮನಿಮ್ಮ ಪಕ್ಷ ವಿಸರ್ಜಿಸಿ ನೇಗಿಲು ಹೊತ್ತ ರೈತನ ಜೊತೆಗೆ ಬನ್ನಿ ಎಂದು ಕರೆಕೊಡುವಾಗ, ಗಾಂಧಿ ಕೊಂದ ಆಪಾದನೆಯ ಸಂಘಟನೆಯ ಜೊತೆಗೆ ಸಂಬಂಧ ಹೊಂದಿದ್ದ ಜನಸಂಘದ ಹೊರತಾಗಿ ಎಲ್ಲರೂ ಬನ್ನಿ ಎಂದು ಹೇಳಿದ್ದರೆ ಈ ದೇಶದ ಚರಿತ್ರೆಯೇ ಬದಲಾಗುತ್ತಿತ್ತಲ್ಲವಾ, ಥೂತ್ತೇರಿ.

****

ದೇಶದ ಮಹಾನಾಯಕರು ವಿವೇಚನೆಯಿಲ್ಲದೆ ನಡೆದುಕೊಂಡ ತಪ್ಪಿಗೆ ದೇಶವೇ ಪರಿತಪಿಸಬೇಕಾಗುತ್ತದೆ ಎಂಬುದಕ್ಕೆ ಜೆ.ಪಿ. ತೆಗೆದುಕೊಂಡ ಆತುರದ ತೀರ್ಮಾನವೇ ಪ್ರಮುಖ ಉದಾಹರಣೆ. ಅದು ಇಂದು ತನ್ನ ದುಷ್ಪರಿಣಾಮದ ಫಲಕೊಡುತ್ತಿದೆ. ನಿಜವಾಗಿಯೂ ಭಾರತೀಯ ಜನತಾಪಕ್ಷದವರು ತುರ್ತುಸ್ಥಿತಿಯನ್ನ ಸ್ಮರಿಸಿಕೊಳ್ಳಬೇಕು, ಅಲ್ಲದೆ ತಮ್ಮ ಪಾರ್ಟಿ ಆಫೀಸುಗಳಲ್ಲಿ ಮತ್ತು ನಾಗಪುರದ ಕೇಂದ್ರ ಕಚೇರಿಯಲ್ಲಿ ಜೆ.ಪಿ. ಮತ್ತು ಇಂದಿರಾಗಾಂಧಿಯವರ ಫೋಟೋ ಹಾಕಿಕೊಂಡು ಪ್ರಾರ್ಥಿಸಬೇಕು. ಇವರಿಬ್ಬರ ವಿವೇಚನೆಯಿಲ್ಲದ ತೀರ್ಮಾನಗಳಿಂದ ಅರಳಿದ ಕಮಲ ಪಕ್ಷದಿಂದ ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಇಂದು ನೆಲೆಸಿದೆ. ಇಡೀ ದೇಶವೇ ಕ್ಷೋಭೆಯಿಂದ ನಲುಗುತ್ತಿದೆ, ಮಣಿಪುರ ಸರ್ವನಾಶದ ದಾರಿಯಲ್ಲಿದೆ. ಇಂತಹ ಘಟನೆಗಳಿಂದ ವಿಚಲಿತರಾಗದ ನಮ್ಮ ಪ್ರಧಾನಿಯವರು ಸ್ಥಿತಪ್ರಜ್ಞತೆಯಿಂದ ಯೋಗ ಮಾಡಿಕೊಂಡು ಇಡೀ ಪ್ರಪಂಚದ ಗಮನ ಸೆಳೆದಿದ್ದಾರೆ. ಮಾರಿಕೊಂಡ ಮಾಧ್ಯಮದವರೂ ವಾರಗಟ್ಟಲೆ ಮೋದಿಯ ಯೋಗ ತೋರಿಸಿ ಎಲ್ಲರೂ ಯೋಗದಿಂದ ವಿಮುಕ್ತರಾಗುವಂತೆ ಮಾಡಿದ್ದಾರಂತಲ್ಲಾ, ಥೂತ್ತೇರಿ.

****

ನಿಜವಾಗಿಯೂ ಒಂದು ಕಾಲದ ಬಿಜೆಪಿಯು ಅಂದರೆ ವಾಜಪೇಯಿ ಕಾಲದ ಬಿಜೆಪಿ ಈಗಿನಂತಿರಲಿಲ್ಲವಂತಲ್ಲಾ. ಕೆಲವರಾದರೂ ಪ್ರಾಮಾಣಿಕರು ಅವರ ಜೊತೆಗೆ ಇದ್ದರಂತಲ್ಲಾ. ಚುನಾವಣೆ ಬಂದರೆ ಕುಬೇರರ ಬಳಿ ಭಿಕ್ಷೆ ಬೇಡಿ ಅದರಲ್ಲೇ ಚಿತ್ರಾನ್ನ ತಿಂದು, ಶರಭತ್ತು ಕುಡಿದು, ಹ್ಯಾಂಡ್ ಬಿಲ್ ಹಾಕಿಸಿಕೊಂಡು ಹಂಚಿ ಚುನಾವಣೆ ಮುಗಿಸುತ್ತಿದ್ದರು. ಫಲಿತಾಂಶ ಬಂದಾಗ “ಈ ಬಾರಿ ಐದುನೂರು ಓಟು ನಮ್ಮ ಪಾರ್ಟಿಗೆ ಜಾಸ್ತಿ ಬಂದಿವೆ” ಎಂದುಕೊಂಡು ಮನೆಗೆ ಹೋಗುತ್ತಿದ್ದರು. ಅದು ಎ.ಕೆ ಸುಬ್ಬಯ್ಯನವರ ಕಾಲ. ಯಾವಾಗ ಎಡೂರಪ್ಪನವರ ಕಾಲ ಶುರುವಾಯಿತೊ ಆಗ ಉದ್ಘಾಟನೆಗೊಂಡ ಭ್ರಷ್ಟಾಚಾರ ಇಡೀ ದೇಶವನ್ನೇ ದಂಗುಬಡಿಸಿತು. ಬಿಜೆಪಿ ಕಚೇರಿಗಳೇ ಮೀಟಿಂಗು ಮಾಡಿ, ನಮ್ಮ ಪಕ್ಷದವರು ಹಣ ಮಾಡುವುದನ್ನು ಯಾರೂ ತಡೆಯಬೇಡಿ, ಅದರ ವಿರುದ್ಧ ಹೇಳಿಕೆ ಕೊಡಬೇಡಿ ಎಂದಕೂಡಲೇ ಎಡೂರಪ್ಪ ಪಾರ್ಟಿ ಹಿತಕ್ಕಾಗಿ ಎರ್ರಾ ಬಿರ್ರಿ ಹಣ ಸಂಗ್ರಹಿಸಿ, ಕೊನೆಗೆ ಆರೋಪ ವಹಿಸಿಕೊಂಡು ಜೈಲಿಗೂ ಹೋಗಿಬಂದರಂತಲ್ಲಾ, ಥೂತ್ತೇರಿ.

****

ಮುಂದೆ ಮೋದಿ ಸರಕಾರವನ್ನು ಕಿತ್ತು ಮಡಗಬೇಕಾದರೆ ನಾವೆಲ್ಲಾ ಒಟ್ಟಾಗಿ ಚುನಾವಣೆ ಎದುರಿಸಬೇಕು ಎಂದು ಇಪ್ಪತ್ತೊಂದು ವಿವಿಧ ಪಕ್ಷಗಳೂ ಒಂದೆಡೆ ಸೇರಿ ಚರ್ಚಿಸಿ ಬರಖಾಸ್ತ ಆದರಂತಲ್ಲಾ. ಈ ಸಭೆಗೆ ಮಾಜಿ ಪ್ರಧಾನಿಗಳಾದ ದೇವೇಗೌಡರು ಗೈರುಹಾಜರಾದದ್ದು ಸುದ್ದಿಯಾಗಲಿಲ್ಲ; ಈಗಿನ ಸರ್ಕಾರ ಕಟ್ಟಿಸಿ ಮೋದಿಯವರು ಉದ್ಘಾಟಿಸಿದ ಹೊಸ ಪಾರ್ಲಿಮೆಂಟ್ ನೋಡಲು ದೇವೇಗೌಡರು ಹೋಗಿದ್ದರು. ಹಿಂದೆ ದೇವೇಗೌಡರನ್ನು ಪ್ರಧಾನಿ ಮಾಡಬೇಕಾದ ಸಮಯದಲ್ಲಿ ಇಷ್ಟೇ ಪಕ್ಷಗಳು ಒಂದೆಡೆ ಸೇರಿ ಚರ್ಚಿಸಿದ್ದವು. ಆ ಸಭೆಯಲ್ಲಿ ಬಿಜೆಪಿ ಇರಲಿಲ್ಲ. ಜ್ಯೋತಿ ಬಸು ಪ್ರಧಾನಿಯಾಗಲು ಪಾರ್ಟಿ ಬಿಡಲಿಲ್ಲ. ವಿ.ಪಿ ಸಿಂಗ್ ತಪ್ಪಿಸಿಕೊಂಡರು. ಆಗ ಎಲ್ಲ ವಿರೋಧಪಕ್ಷಗಳು ಸೇರಿಕೊಂಡು ದೇವೇಗೌಡರನ್ನು ಪ್ರಧಾನಿಯಾಗಿ ಆರಿಸಿದರು. ಇಂತಹ ಯಾವ ಉಪಕಾರದ ಸ್ಮರಣೆಯಿಲ್ಲದ ಗೌಡರ ನಡೆ, ಅವರು ಈ ಹಿಂದೆ ತಮ್ಮ ಮಗನನ್ನು ಮುಖ್ಯಮಂತ್ರಿ ಮಾಡಲು ಹಾಕಿದ ಪಾತ್ರಕ್ಕೆ ಸಾಕ್ಷಿ ನುಡಿಯುತ್ತಿದೆಯಂತಲ್ಲಾ, ಥೂತ್ತೇರಿ.

****

ಯಾವಾಗ ದೇವೇಗೌಡರು ಬಹಿರಂಗವಾಗಿಯೇ ಮೋದಿ ಪರವಾಗಿ ಚಾವಲ ಬೀಸತೊಡಗಿದರೋ, ಆ ಕೂಡಲೇ ಕುಮಾರಣ್ಣ ಕಾಂಗೈ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳತೊಡಗಿದ್ದಾರಲ್ಲಾ. ವಾಸ್ತವವಾಗಿ ಪಂಚರತ್ನ ಭಾಗ್ಯ ಪ್ರಕಟಿಸಿ ಕರ್ನಾಟಕವನ್ನು ಗರಗರ ತಿರುಗಿ ಬರಬರ ಬಂದವರು, ತಾವು ಮಾಡಬೇಕಿದ್ದಂತಹ ಕಾರ್ಯಕ್ರಮಗಳನ್ನು ಕಾಂಗ್ರೆಸ್ ಪಾರ್ಟಿಯಾದರೂ ತರುತ್ತಿದೆಯಲ್ಲಾ ಎಂದು ಮೆಚ್ಚುಗೆ ಸೂಚಿಸಬಹುದಿತ್ತು. ಆದರೆ ಅದು ಅವರಿಂದ ಸಾಧ್ಯವಾಗುತ್ತಿಲ್ಲ. ದೇವೇಗೌಡರು ಏನೇ ಮಾಡಿದರೂ ಅದು ಮಗನ ರಾಜಕಾರಣದ ಭವಿಷ್ಯ ಕುರಿತ ಹುನ್ನಾರದ ಸೂತ್ರವಿದ್ದಂತೆ. ಅಂತಹ ಸೂತ್ರದಲ್ಲಿ ಸಿಕ್ಕಿ ಒದ್ದಾಡುತ್ತಿರುವ ಕುಮಾರಣ್ಣ ಯಾವ ಮಾತನ್ನಾಡಿದರೂ ಹಾಸ್ಯಾಸ್ಪದವಾಗುತ್ತಿದೆ. ಒಂಥರದಲ್ಲಿ ಅದು ಶೋಭಾ ಕರಂದ್ಲಾಜೆ, ಎಡೂರಪ್ಪ, ಆಶೋಕ್ ಇತ್ಯಾದಿಗಳ ದನಿಯಂತೆಯೂ ಕೇಳುತ್ತಿದೆ. ಹೀಗೇ ಆದರೆ ಕುಮಾರಣ್ಣ ಹಿಂದೆ ಹೋಗುವುದು ಹೇಗೆಂದು ದಳದ ಕೆಲವರು ಯೋಚಿಸುತ್ತಿದ್ದಾರಂತಲ್ಲಾ. ಇಂತಹ ಆಲೋಚನೆ ಮತ್ತು ಕಾರ್ಯಕರ್ತರ ಅಸಮಾಧಾನಗಳ ಕಡೆ ಕಿವಿಗೊಟ್ಟಿದ್ದರೆ ಕುಮಾರಣ್ಣನಿಗೆ ಇಪ್ಪತ್ತೊಂಬತ್ತು ಸೀಟಾದರೂ ಬರುತ್ತಿದ್ದವಂತಲ್ಲಾ ಥೂತ್ತೇರಿ.


ಇದನ್ನೂ ಓದಿ: ಮತದಾರ ಕೊಟ್ಟ ಪೆಟ್ಟು ಮುಟ್ಟಿ ನೋಡಿಕೊಳ್ಳುವಂತಿದೆಯಲ್ಲಾ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...

ಕ್ಷೇತ್ರ ಮರುವಿಂಗಡನೆ : ಗೃಹ ಸಚಿವ ಅಮಿತ್ ಶಾ ಹೇಳಿದ್ದೆಲ್ಲವು ನಿಜವೇ?..ಇಲ್ಲಿದೆ ವಾಸ್ತವಾಂಶ

ದೇಶದ ಗೃಹ ಸಚಿವರು ಸಂಸತ್ತಿನಲ್ಲಿ ಪ್ರಮುಖ ಕಾನೂನಿನ ಬಗ್ಗೆ ವಿವರಿಸುವಾಗ ವಿಷಯ ಸ್ಪಷ್ಟವಾಗಿರಬೇಕು. ಆದರೆ, ಕ್ಷೇತ್ರ ಮರುವಿಂಗಡನೆ ಕುರಿತು ಗೃಹ ಸಚಿವ ಅಮಿತ್ ಶಾ ಮಾತನಾಡಿರುವುದು ಹಾಗಿರಲಿಲ್ಲ. ದಕ್ಷಿಣ ಭಾರತದ ರಾಜ್ಯಗಳು ತಮ್ಮ...

ಮಹಿಳಾ ಮೀಸಲು ಮಸೂದೆ 2023ರಲ್ಲೇ ಗೆದ್ದಿದೆ, ಈಗ ಸೋತಿರುವುದು ಮೋದಿ ಸರ್ಕಾರ

ಮೋದಿ ಸರ್ಕಾರ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾಗಿದೆ ಎಂಬುವುದು ದೇಶದಲ್ಲಿ ಪ್ರಸ್ತುತ ದೊಡ್ಡ ಚರ್ಚೆಯ ವಿಷಯವಾಗಿದೆ. ಕಾಂಗ್ರೆಸ್‌ ನೇತೃತ್ವದಲ್ಲಿ ವಿಪಕ್ಷಗಳು ಮಸೂದೆಯನ್ನು ಸೋಲಿಸುವ ಮೂಲಕ ದೇಶದ ಮಹಿಳೆಯರ ಸಬಲೀಕರಣಕ್ಕೆ...

ಕ್ಯಾಂಪಸ್ ಜಾತಿ ತಾರತಮ್ಯ ವಿರುದ್ಧದ ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ರಾಜ್ಯ ಸಚಿವ ಸಂಪುಟ ಗುರುವಾರ (ಏ.16) ರಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ'ಗೆ ಅನುಮೋದನೆ ನೀಡಿತು. ಜೊತೆಗೆ, ಪ್ರಮುಖ ಮೂಲಸೌಕರ್ಯ ಮತ್ತು...

ಮಧ್ಯಪ್ರದೇಶ| ವಂದೇ ಮಾತರಂ ಹಾಡಲು ನಿರಾಕರಣೆ; ಇಬ್ಬರು ಕಾಂಗ್ರೆಸ್ ಕೌನ್ಸಿಲರ್‌ಗಳ ವಿರುದ್ಧ ಎಫ್‌ಐಆರ್

ಏಪ್ರಿಲ್ 8 ರಂದು ಇಂದೋರ್ ಮುನ್ಸಿಪಲ್ ಕಾರ್ಪೊರೇಷನ್‌ನ ಬಜೆಟ್ ಅಧಿವೇಶನದಲ್ಲಿ ಧಾರ್ಮಿಕ ಮತ್ತು ಸಾಂವಿಧಾನಿಕ ಕಾರಣಗಳನ್ನು ಉಲ್ಲೇಖಿಸಿ ವಂದೇ ಮಾತರಂ ಹಾಡಲು ನಿರಾಕರಿಸಿದ್ದಕ್ಕಾಗಿ ಮಧ್ಯಪ್ರದೇಶ ಪೊಲೀಸರು ಇಬ್ಬರು ಕಾಂಗ್ರೆಸ್ ಕೌನ್ಸಿಲರ್‌ಗಳ ವಿರುದ್ಧ ಎಫ್‌ಐಆರ್...

ನ್ಯಾಯಾಂಗ ಸೇವೆಗಳು, ಸರ್ಕಾರಿ ಸಮಿತಿಗಳಲ್ಲಿ ಶೇ. 50 ಮಹಿಳಾ ಪ್ರಾತಿನಿಧ್ಯ ಕೋರಿ ಪಿಐಎಲ್ : ವಜಾಗೊಳಿಸಿದ ಸುಪ್ರೀಂ ಕೋರ್ಟ್

ಸರ್ಕಾರಿ ಸಮಿತಿಗಳು ಮತ್ತು ನ್ಯಾಯಾಂಗ ಸೇವೆಯ ಖಾಲಿ ಇರುವ ಸ್ಥಾನಗಳಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಪ್ರಾತಿನಿಧ್ಯ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ವಿಚಾರಣೆಗೆ ಸ್ವೀಕರಿಸಲು ಸುಪ್ರೀಂ ಕೋರ್ಟ್ ಗುರುವಾರ...

ರಷ್ಯಾ ತೈಲ ಖರೀದಿಸಲು ಭಾರತಕ್ಕೆ ನೀಡಿದ್ದ ಕಾಲಾವಕಾಶ ವಿಸ್ತರಿಸುವುದಿಲ್ಲ: ಅಮೆರಿಕ

ಇರಾನ್ ಮತ್ತು ರಷ್ಯಾದಿಂದ ತೈಲವನ್ನು ಖರೀದಿಸಲು ಭಾರತ ಸೇರಿದಂತೆ ವಿವಿಧ ದೇಶಗಳಿಗೆ ಈವರೆಗೆ ನೀಡಲಾಗಿದ್ದ ನಿರ್ಬಂಧ ಸಡಿಲಿಕೆಯನ್ನು ಇನ್ನು ಮುಂದೆ ಮುಂದುವರಿಸುವುದಿಲ್ಲ ಎಂದು ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಬುಧವಾರ (ಏ.15)...