Homeಅಂಕಣಗಳುಮತದಾರ ಕೊಟ್ಟ ಪೆಟ್ಟು ಮುಟ್ಟಿ ನೋಡಿಕೊಳ್ಳುವಂತಿದೆಯಲ್ಲಾ...

ಮತದಾರ ಕೊಟ್ಟ ಪೆಟ್ಟು ಮುಟ್ಟಿ ನೋಡಿಕೊಳ್ಳುವಂತಿದೆಯಲ್ಲಾ…

- Advertisement -
- Advertisement -

ಕರ್ನಾಟಕದ ಜನಸ್ತೋಮ ಮತಪೆಟ್ಟಿಗೆಯ ಮುಖಾಂತರ ಕೊಟ್ಟ ಏಟು ಮುಟ್ಟಿ ನೋಡಿಕೊಳ್ಳುವಂತಿದೆಯಲ್ಲಾ. ಹಾಗೆ ನೋಡಿದರೆ ಮುಟ್ಟಿ ನೋಡಿಕೊಳ್ಳುವವರ ಪಟ್ಟಿ ದೊಡ್ಡದಾಗಿದೆ. ಈ ಪೈಕಿ ಹೊಟ್ಟೆಪಾಡಿನ ಜ್ಯೋತಿಷಿಗಳು ಫಲಿತಾಂಶ ಬಂದಾಗ ಮನೆ ಬಾಗಿಲು ಹಾಕಿಕೊಂಡವರು ಇನ್ನೂ ತೆಗೆದಿಲ್ಲವಂತಲ್ಲಾ. ಆ ಪೈಕಿ ಪುರೋಹಿತಶಾಹಿ ಜ್ಯೋತಿಷಿಯೊಬ್ಬ ಹಣೆ ಮೈಗೆಲ್ಲಾ ತರೇವಾರಿ ಬಣ್ಣ ಬಳಿದುಕೊಂಡು, ’ಮೋದಿ ಜಾತಕ ಕುಂಡಲಿಯನ್ನು ನಾನು ಪರಿಶೀಲಿಸಿದಾಗ, ಅವರು ಹದಿನೆಂಟು ಗುಣಗಳುಳ್ಳ ನಾಯಕ, ಅವರು ಕರ್ನಾಟಕವನ್ನು ಪ್ರದಕ್ಷಿಣೆ ಮಾಡಿರುವುದರ ಪ್ರಯುಕ್ತ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಗದ್ದುಗೆ ಏರಲಿದೆ’ ಎಂದಿದ್ದ. ಮತ್ತೊಬ್ಬ ನೆಲದ ಜಲ ಪತ್ತೆಹಚ್ಚುವಂತಹ ಸ್ಕೇಲು ತಯಾರಿಸಿಕೊಂಡು ಮೂರೂ ಪಾರ್ಟಿಯ ಚಿಹ್ನೆಯ ಮೇಲೆ ಹಿಡಿದಿದ್ದ ಆ ಸ್ಕೇಲು ಬಿಜೆಪಿಯ ಕಮಲದ ಎದುರು ಬಾಗಿತು ನೋಡಿ, ಬಿಜೆಪಿ ಬಿಟ್ಟು ಇನ್ನಾವ ಪಾರ್ಟಿಯೂ ಮೆಜಾರಿಟಿ ಪಡಿಯೋದಿಲ್ಲ ಎಂದ. ಮತ್ತೊಬ್ಬ ಹುಚ್ಚನಂತಿದ್ದ ಜ್ಯೋತಿಷಿ ಲಡಾಸು ಕಾರಿನ ಲೈಟಿನಂತಿದ್ದ ಎರಡು ಬಲ್ಪುಗಳ ಹಿಡಿಕೆ ತೋರಿಸಿ ತನ್ನ ಕಡೆಗೆ ತಿರುಗಿಸಿಕೊಂಡು ನೋಡಿ, ನನ್ನ ಅಂತರಾತ್ಮದಲ್ಲಿ ಕಮಲ ಮೂಡುತ್ತಿದೆ ಆದ್ದರಿಂದ ಈ ಚುನಾವಣೆ ನಂತರ ಕಮಲ ಅರಳಲಿದೆ ಎಂದ. ಈಗ ಇವರೆಲ್ಲರೂ ಬಾಗಿಲು ಬಂದ್ ಮಾಡಿಕೊಂಡು ಒಳಗಿದ್ದರೂ, ಯಾರಾದರೂ ಬಂದು ಬಾಗಿಲು ತಟ್ಟಿದರೆ ಧ್ವನಿ ಬದಲಿಸಿಕೊಂಡು ಅವರಿಲ್ಲಾ ಎನ್ನುತ್ತಿದ್ದಾರಲ್ಲಾ, ಥೂತ್ತೇರಿ.

*****

ಕರ್ನಾಟಕದ ಮತದಾರ ಕೊಟ್ಟ ಉತ್ತರದಲ್ಲಿ ಪ್ರಧಾನಿಯಾದವರು ಹೀಗೆ ನಡೆದುಕೊಳ್ಳಬಾರದೆಂಬ ಎಚ್ಚರಿಕೆಯಿದ್ದರೆ, ಇನ್ನು ಸರ್ವಜನಾಂಗದ ಶಾಂತಿಯ ತೋಟಕ್ಕೆ ಬೆಂಕಿ ಹಚ್ಚಲು ಬಂದ ಶಾ, ಚುನಾವಣೆ ನಂತರ ಇಲ್ಲಿ ಗಲಭೆ ಏಳುತ್ತದೆ ಎಂದು ಧಮಕಿ ಹಾಕಿದ್ದರು. ಗೆಲ್ಲಲೋಸ್ಕರ ಯಾವ ಮಾತನ್ನಾದರೂ ಆಡುವ, ಏನನ್ನಾದರೂ ಮಾಡುವ ಶಾನ ಮಾತಾಗಲಿ, ತಂತ್ರವಾಗಲಿ ಕರ್ನಾಟಕದಲ್ಲಿ ಕೆಲಸ ಮಾಡಲಿಲ್ಲ. ಇನ್ನು ಚುನಾವಣೆ ಮುಗಿದ ಕೂಡಲೇ ತನ್ನನ್ನು ಯಾರಾದರೂ ಕರೆಸಿಕೊಳ್ಳುತ್ತಾರೆ ಎಂದು ಭಾವಿಸಿ ಸಿಂಗಾಪುರಕ್ಕೆ ಹಾರಿದ್ದ ಕುಮಾರಣ್ಣನಿಗೆ ಯಾವ ಜ್ಞಾನೋದಯವಾಯ್ತೋ ಏನೋ, ಒಂದೇ ಉಸುರಿಗೆ ಓಡಿಬಂದರೆ ಯಾರೂ ಮನೆಬಾಗಿಲಿಗೆ ಬಾರದಂತಾಗಿತ್ತಲ್ಲಾ. ಬಿಜೆಪಿಗಳು ಆಪರೇಷನ್ ಕಮಲದ ಸೊಲ್ಲೆತ್ತದಂತೆ ಮಾಡಿ, ಕುಮಾರಣ್ಣನ ಮನೆ ಬಾಗಿಲಿಗೆ ಯಾರೂ ಬರದಂತೆ ಮಾಡಿರುವ ಕರ್ನಾಟಕದ ಮತದಾರ ಇಡೀ ದೇಶಕ್ಕೆ ಬಂದು ದಿಕ್ಸೂಚಿಯನ್ನೆ ನೀಡಿದ್ದಾನಲ್ಲಾ. ಯಾವುದೇ ಚುನಾವಣೆಯಲ್ಲಿ ಕೆಲ ಅನಾಹುತಗಳು ನಡೆಯುತ್ತವೆ, ಅಂತಹ ಅನಾಹುತಗಳ ಪೈಕಿ ಶೆಟ್ಟರ್, ರಮೇಶ್‌ಕುಮಾರ್ ಮತ್ತು ಕಿಮ್ಮನೆ ರತ್ನಾಕರ್ ಸೋಲು ಕೂಡ ಸೇರಿವೆ. ಹುಬ್ಬಳ್ಳಿಯಲ್ಲಿ ಬಿಜೆಪಿ ಬೇರೂರುವಂತೆ ಮಾಡಿದ ಶೆಟ್ಟರ್‌ಗೆ ಬಿಜೆಪಿ ಬೇರನ್ನು ಅಲ್ಲಾಡಿಸಲಾಗಲಿಲ್ಲ, ಆದರೂ ಅವರ ಬಂಡಾಯ ಬೇರೆ ತರದ ಕೆಲಸ ಮಾಡಿದೆ. ಇನ್ನು ರಮೇಶ್ ಕುಮಾರ್ ಸೋಲಿಸಲು ಬಹಳ ದಿನಗಳಿಂದ ಕೆಲವರು ಕಾಯುತ್ತಿದ್ದರು. ಇನ್ನು ತೀರ್ಥಹಳ್ಳಿಯಲ್ಲಿ ಕಿಮ್ಮನೆ ರತ್ನಾಕರ್ ಸೋಲೂ ಇಡೀ ಕ್ಷೇತ್ರದ ಸೋಲಾಯಿತಂತಲ್ಲಾ, ಥೂತ್ತೇರಿ.

*****

ಈ ಚುನಾವಣೆಯ ಫಲಿತಾಂಶದಲ್ಲಿ ನಗಾಡುವ ಪ್ರಸಂಗಗಳೂ ನಡೆದಿವೆಯಲ್ಲಾ. ಹಿಂದಿನ ಸರಕಾರನ ಹ್ಯಂಗೋ ನಿಭಾಯಿಸಿ ದಡ ಮುಟ್ಟಿಸಿ ಮನಿಗೋಗನ ಎಂದಿದ್ದ ಮಾಧುಸ್ವಾಮಿಯನ್ನು ಜನ ಮನೆಗೆ ಕಳಿಸಿದ್ದಾರೆ. ಹಾಗೆಯೇ ಮುಸ್ಲಿಮರ ವಿಷಯದಲ್ಲಿ ತೀರ ತಲೆಕೆಡಿಸಿಕೊಂಡಿದ್ದ ಸಿ.ಟಿ ರವಿ, ಸಿದ್ದರಾಮಯ್ಯನವರನ್ನ ಸಿದ್ರಾಮುಲ್ಲಖಾನ್ ಎಂದು ಹೋದಲೆಲ್ಲಾ ಟೀಕಿಸಿ ಚಪ್ಪಾಳೆ ಗಿಟ್ಟಿಸುತ್ತಿದ್ದ. ಆ ಸಮಯದಲ್ಲಿ ಯಾರೋ ಒಬ್ಬ, ಕುಡಿದು ಚಿತ್ತಾಗಿ ರಸ್ತೆ ಬದಿಯಲ್ಲಿ ಅಂಗಾತ ಕುಸಿದಿದ್ದ ವ್ಯಕ್ತಿಯೊಬ್ಬನ ತಲೆಗೆ ಸಿ.ಟಿ ರವಿ ತಲೆ ಅಂಟಿಸಿ ವಾಟ್ಸಾಪಿಗೆ ಬಿಟ್ಟು ಮೆಚ್ಚುಗೆಗಳಿಸಿದ್ದ. ಆ ಸಮಯದಲ್ಲೇ ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತನೊಬ್ಬ ಈಗಲೂ ಸಿ.ಟಿ ರವಿ ಆರು ಸಾವಿರ ಓಟಿನಲ್ಲಿ ಗೆಲ್ಲುತ್ತಾರೆ ಎಂದಿದ್ದ. ಅದೇ ಆರುಸಾವಿರ ವೋಟಿನಲ್ಲಿ ಸಿ.ಟಿ ರವಿ ಸೋತಿದ್ದಕ್ಕೆ ಚಿಕ್ಕಮಗಳೂರಿನ ಕಾರ್ಯಕರ್ತರು ಗೆದ್ದ ಅಭ್ಯರ್ಥಿ ತಮ್ಮಯ್ಯನಿಗೆ ಕ್ಷೀರಾಭಿಷೇಕ ಮಾಡುವುದು ಬಿಟ್ಟು, ಭೊಜೇಗೌಡರಿಗೆ ಹಾಲಿನಾಭಿಷೇಕ ಮಾಡಿದ್ದಾರಲ್ಲಾ. ಏಕೆಂದರೆ ಕುಮಾರಣ್ಣನ ಬಲಗೈಯಾಗಿರುವ ಭೊಜೇಗೌಡರಿಗೆ ಚುನಾವಣೆಯಲ್ಲಿ ಗೆಲ್ಲುವ ಶಕ್ತಿಯಿಲ್ಲ, ಆದರೆ ಯಾರನ್ನಾದರೂ ಸೋಲಿಸುವ ಶಕ್ತಿಯಿದೆ. ಇದನ್ನರಿತ ಚಿಕ್ಕಮಗಳೂರು ಜನ ಭೋಜೇಗೌಡರಿಗೆ ಕ್ಷೀರಾಭಿಷೇಕ ಮಾಡಿದ್ದಾರಲ್ಲಾ, ಥೂತ್ತೇರಿ.

ಇದನ್ನೂ ಓದಿ: ಬಿಜೆಪಿ ಯಂಗೆ ಚೊಕ್ಕ ಮಾಡಿವಿ ನೋಡಿ!

ಚಿಕ್ಕಮಗಳೂರು ಪ್ರದೇಶದಲ್ಲಿ ಕುಡಚಿ ಕ್ಷೇತ್ರದ ಶಾಸಕ ಶಾನೆ ಓಡಾಡುತ್ತಿದ್ದ; ಆತನ ಸುದ್ದಿ ಶಾನೆ ಕುತೂಹಲವಾಗಿದೆ. ಕುಡಚಿ ಕ್ಷೇತ್ರದ ರಾಜಕಾರಣ ಗ್ರಹಿಸಿದ ಆತ ತನ್ನ ಪೊಲೀಸ್ ಕೆಲಸಕ್ಕೆ ರಾಜೀನಾಮೆ ಬರೆದು ಚುನಾವಣೆಗೆ ನಿಂತ ಸೋತ ನಂತರ ರಾಮುಲು ಪಕ್ಷದಿಂದ ಗೆದ್ದು ನಂತರ ಬಿಜೆಪಿ ಸೇರಿದ. ಆಗ ಆತನಿಗೆ ಇನ್ನಿಲ್ಲದ ಉತ್ಸಾಹ ಅಮಲೇರಿ ಲಂಬಾಣಿಗರನ್ನೆಲ್ಲಾ ಸಂಘಟಿಸಿ ಬಿಜೆಪಿಗೆ ಎಳೆಯತೊಡಗಿದ. ಇದನ್ನರಿತ ಸಿ.ಟಿ ರವಿ ಕುಡಚಿ ಶಾಸಕನನ್ನು ಚಿಕ್ಕಮಗಳೂರಿಗೆ ಕರೆಸಿ ಲಂಬಾಣಿಗರ ಭೇಟಿ ಮಾಡಿಸಿದ ಮೇಲೆ ಅವರೆಲ್ಲಾ ಬಿಜೆಪಿಗೆ ಓಟು ಮಾಡುತ್ತಾರೆಂದು ಭಾವಿಸಿದ. ಆದರೆ ಈಗ ಕುಡಚಿ ಶಾಸಕ ರಾಜೀವ್‌ನನ್ನು ಜನ ಮನೆಗೆ ಕಳಿಸಿದ್ದಾರೆ. ಶತಮಾನಗಳಿಂದ ಪಾಂಡ್ಯಾದಲ್ಲಿ ಬದುಕಿದ್ದ ಲಂಬಾಣಿಗರ ತಾಂಡಾಗಳನ್ನು ರೆವಿನ್ಯೂ ಗ್ರಾಮ ಮಾಡಿದ್ದು ಕಾಂಗ್ರೆಸ್ ಸರಕಾರ. ಆದರೆ ಎಲ್ಲಾ ದಮನಿತ ಜಾತಿಗಳ ಬಗ್ಗೆಯೂ ಹುಸಿಯಾದ ಕಾಳಜಿ ತೋರಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಬಿಜೆಪಿ ಪಡಸಾಲೆಯಲ್ಲಿ ಮಫ್ತಿ ಪೊಲೀಸನಂತೆ ಓಡಾಡುತ್ತಿದ್ದ ರಾಜೀವನನ್ನು ಜನ ಆತನ ಊರಿಗೆ ಕಳಿಸಿದ್ದಾರೆ. ಏಕೆಂದರೆ ಈತ ಚುನಾವಣಾ ಪ್ರಚಾರಕ್ಕೆ ಮಕ್ಕಳನ್ನು ಬಳಸಿಕೊಂಡಿದ್ದು ಸುದ್ದಿಯಾಗಿತ್ತು. ಈತ ಇಷ್ಟು ಬೇಗೆ ಹಾಳಾಗಬಾರದಿತ್ತು ಎಂಬುದು ಕುಡಚಿ ಜನರ ಕುಹಕವಾಗಿದೆಯಲ್ಲಾ, ಥೂತ್ತೇರಿ.

*****

ಈ ನಡುವೆ ಹರಪ್ಪನಹಳ್ಳಿ ಜನ ಎಂ.ಪಿ ಪ್ರಕಾಶ್ ಮಗಳಾದ ಲತಾರನ್ನು ಗೆಲ್ಲಿಸಿ ಪ್ರಾಯಶ್ಚಿತ್ತ ಮಾಡಿಕೊಂಡಿದ್ದಾರೆ. ಹಿಂದೆ ಹರಪ್ಪನಹಳ್ಳಿ ಜನ ಎಂ.ಪಿ ಪ್ರಕಾಶರನ್ನು ಸೋಲಿಸಿದ್ದರು ಅವರ ಮಗ ಎಂ.ಪಿ ರವಿಯನ್ನು ಸೋಲಿಸಿದ್ದರು. ಆಸ್ಪತ್ರೆಯಲ್ಲಿದ್ದರೂ ಹರಪ್ಪನಹಳ್ಳಿಯನ್ನು 371(ಜೆ)ಗೆ ಸೇರಿಸಲು ಹೋರಾಡಿ ಕೊನೆಯುಸಿರೆಳೆದ ರವಿಯ ಬಗ್ಗೆ ಹರಪ್ಪನಹಳ್ಳಿ ಜನಕ್ಕೆ ಏನನ್ನಿಸಿತೋ ಏನೋ ಕಾಂಗ್ರೆಸ್ ಟಿಕೆಟ್ ಸಿಗದೆ ಪಕ್ಷೇತರವಾಗಿ ನಿಂತ ಲತಾರನ್ನ ಗೆಲ್ಲಿಸಿದ್ದಾರೆ. ಹರಪ್ಪನಹಳ್ಳಿ ಸೊಸೆಯಾದ ಲತಾರಲ್ಲಿ ಪ್ರಕಾಶರ ಗುಣಗಳಿವೆ, ಆದ್ದರಿಂದಲೇ ಗೆದ್ದು ಬಂದಿರುವುದು. ಇನ್ನು ಮಡಿಕೇರಿ ವಿರಾಜಪೇಟೆಯ ಜನ ತಕ್ಕ ಉತ್ತರ ಕೊಟ್ಟಿದ್ದಾರೆ. ಈ ನೆಲದಿಂದ ಬಂದ ಅಡ್ಡಂಡ ಹೆಸರಿನ ವ್ಯಕ್ತಿಯೊಬ್ಬ ಆಘಾತಗೊಂಡು ರಾಜೀನಾಮೆ ಬರೆದಿದ್ದಾನೆ. ಮೈಸೂರು ರಂಗಾಯಣದ ಪಾವಿತ್ರ್ಯ ಕಾಪಾಡುವುದು ಕಲಾವಿದರ ಕರ್ತವ್ಯ. ಐದು ವರ್ಷಗಳ ನಂತರ ಮುಸ್ಲಿಂ ರಾಜಕಾರಣಿಗಳು ವಿಧಾನಸೌಧದ ಕಾರಿಡಾರ್‌ನಲ್ಲಿ ಕಾಣುತ್ತಿದ್ದಾರೆ. ಎಲ್ಲರನ್ನೂ ಒಳಗೊಂಡು ಬೆಳೆಸಬೇಕಾದ ಪ್ರಜಾಪ್ರಭುತ್ವದ ಮಹಾವೃಕ್ಷದಲ್ಲಿ ಮುಸ್ಲಿಮರು ಬಾರದಂತೆ ನೋಡಿಕೊಂಡ ಬಿಜೆಪಿಗಳು ಇತಿಹಾಸದಲ್ಲಿ ಅಕ್ಷಮ್ಯ ಅಪರಾಧವೆಸಗಿದ್ದಾರೆ. ಈ ಬಿಜೆಪಿಗಳ ಮನಸ್ಸಿನಾಳದಲ್ಲಿ ದಲಿತರ ದ್ವೇಷವೂ ಇದೆ. ಆದರೆ ಸದ್ಯಕ್ಕೆ ಅದನ್ನ ತೋಗೊಡುವುದಿಲ್ಲ. ಈಗ ಹಠಾತ್ತನೆ ಕಲೆ, ಸಾಹಿತ್ಯ, ಸಂಗೀತ ಪುಸ್ತಕಗಳೆಲ್ಲಾ ಅರ್ಥಪೂರ್ಣವಾಗಿ ಕಾಣತೊಡಗಿವೆಯಲ್ಲಾ, ಈ ಯಕ್ಷಣಿಗೆ ವಿಸ್ಮಯವಾಗುತ್ತಿದೆಯಲ್ಲಾ, ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...