Homeಅಂಕಣಗಳುಮೂರು ಪಾರ್ಟಿಯವರೂ ಅಳುತ್ತಿದ್ದಾರಲ್ಲಾ!

ಮೂರು ಪಾರ್ಟಿಯವರೂ ಅಳುತ್ತಿದ್ದಾರಲ್ಲಾ!

- Advertisement -
- Advertisement -

ಕರ್ನಾಟಕದ ರಾಜಕಾರಣ ಭಲೇ ಮಜವಾಗಿದೆಯಲ್ಲಾ. ಈ ಹುಚ್ಚರ ಸಂತೆಯನ್ನು ನೋಡಿ ಜನ ಎಲ್ಲಾ ಪಕ್ಷದವರನ್ನು ಶಪಿಸುವಂತಾಗಿದ್ದಾರಂತಲ್ಲಾ. ಇದಕ್ಕೆ ಹಲವಾರು ಪಕ್ಷಾಂತರಿಗಳ ಉದಾಹರಣೆ ನೋಡಬಹುದು. ಕಾಂಗ್ರೆಸ್, ಬಿಜೆಪಿ, ದಳ ಮೂರು ಪಾರ್ಟಿಗಳು ಒಂದಾದ ಸಮಯ ಇದು. ಎಲ್ಲರೂ ಒಂದೇ ತರಹ ಮಾತನಾಡುತ್ತಿದ್ದಾರೆ. ಆದರೆ ಈ ನಡುವೆ ನಡ್ಡಾ, ಶಾ, ಮೋದಿ ಕರ್ನಾಟಕದ ಕೆಲವು ರಾಜಕಾರಣಿಗಳನ್ನು ಗೋಶಾಲೆಗೆ ದೂಡಿದ್ದು ನೋಡಿದರೆ ಶಾನೆ ಅನುಮಾನವಾಗುತ್ತಿದೆಯಲ್ಲಾ. ಜನರ ತಲೆಯಲ್ಲಿ ತುಂಬಿರುವ ದೊಡ್ಡ ಅನುಮಾನವೆಂದರೆ ಇವಿಎಂ ಬಗೆಗಿನ ಸಂಶಯ. ಹೀಗಿದ್ದರೂ, ಹಳೆ ತಲೆಗಳು ಪಾರ್ಟಿಯನ್ನು ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ತರುವುದಿಲ್ಲ, ಮಾಗಿದ ರಾಜಕಾರಣಗಳಿಂದ ಭವಿಷ್ಯದಲ್ಲಿ ಕೈಗೊಳ್ಳಬೇಕಾದ ಮನೆಹಾಳ ಕಾರ್ಯಕ್ರಮಗಳ ಅನುಷ್ಠಾನ ಕಷ್ಟ; ಇಂತಲ್ಲಿ ಜಗದೀಶ್ ಶೆಟ್ಟರ್‌ನಂತವರ ಅಗತ್ಯವಿಲ್ಲ. ಅದಿರಲಿ ಒಮ್ಮೆ ಮುಖ್ಯಮಂತ್ರಿಯಾಗಿದ್ದ ಶೆಟ್ಟರ್ ತನಗಿಂತ ಕಿರಿ ಹುಡುಗನ ಆಡಳಿತದಲ್ಲಿ ಕೇವಲ ಶಾಸಕನಾಗಿದ್ದು ಮುಂದೆಯೂ ಹಾಗೇ ಇರುತ್ತೇನೆಂದು ಹೇಳಿ ಟಿಕೆಟ್‌ಗಾಗಿ ರಚ್ಚೆ ಹಿಡಿದಿರುವುದು ಅಚ್ಚರಿಯಾಗಿದೆಯಲ್ಲಾ ಥೂತ್ತೇರಿ.

*****

ಪಾರ್ಟಿಯಿಂದ ಟಿಕೆಟ್ ಸಿಗದ ಹಲವಾರು ಜನ ಕೋಣವನ್ನು ಕಳೆದುಕೊಂಡ ಎಮ್ಮೆಯಂತೆ ಅಳುತ್ತಿದ್ದಾರೆ. ಈ ಪೈಕಿ ಉಡುಪಿ ಭಟ್ಟನ ಅಳು ನೋಡಿ ಕೃಷ್ಣನೇ ಅತ್ತ ತಿರುಗಿದನಂತೆ. ಇನ್ನ ಜಗದೀಶ್ ಶೆಟ್ಟರ ಅಳಲು ಜನಗಳನ್ನೇ ಬಿಟ್ಟಿದ್ದಾರೆ. ಎ.ಟಿ ರಾಮಸ್ವಾಮಿ ಮತ್ತು ಮುದ್ದಹನುಮೇಗೌಡರು ಒಳದುಃಖಿಗಳಾದ್ದರಿಂದ ದುಃಖ ಬಹಿರಂಗವಾಗಿ ಕಾಣಲಿಲ್ಲ. ಇನ್ನು ಶಿವಮೊಗ್ಗದ ಈಶ್ವರಪ್ಪನ ಸೊಸೆ ಅಳುವುದನ್ನು ಕೇಳಿ ಬಹಳ ಜನ ಮನೆಯ ಬಳಿಗೆ ಓಡಿಬಂದರಂತೆ. ಅಲ್ಲಿ ಈಶ್ವರಪ್ಪನೂ ದಂಗಾಗಿ ಕೂತಿದ್ದರಂತೆ. ಹೆಂಡತಿ ಆಸ್ಪತ್ರೆಯಲ್ಲಿರುವುದನ್ನಾದರೂ ಪಾರ್ಟಿ ಗ್ರಹಿಸಬೇಕಿತ್ತು; ಈಶ್ವರಪ್ಪನಿಗೆ ಎಷ್ಟು ಸಿಟ್ಟು ಬಂದಿತೆಂದರೆ ರಾಜಕಾರಣಕ್ಕೆ ನಿವೃತ್ತಿಯನ್ನೇ ಘೋಷಿಸಿಬಿಟ್ಟರು.

ಕೆ.ಎಸ್.ಈಶ್ವರಪ್ಪ

ಈ ತ್ಯಾಗ ಮಗನ ಭವಿಷ್ಯಕ್ಕಾಗಿ ನಡೆದದು ಎಂದೂ ಜನ ಆಡಿಕೊಂಡರು. ಇನ್ನು ಮುಂದೆ ರಾಜಕಾರಣದ ವೇದಿಕೆಯಿಂದ ’ದನ ತಿನ್ನುವವರ ಗಂಟಲು ಸೀಳಬೇಕು, ಕೈ ಕತ್ತರಿಸಬೇಕು, ಆ ಸಿದ್ದರಾಮಯ್ಯ ನಾಯಿ ಇದ್ದಂತೆ, ಆ ಡಿ.ಕೆ.ಶಿ ಹಂದಿಯಿದ್ದಂತೆ, ಮುಸ್ಲಿಂ ಗೂಂಡಾಗಳಿಗೆ ತಕ್ಕಪಾಠ ಕಲಿಸಬೇಕು, ಹೆಣ್ಣು ಮಕ್ಕಳು ರೇಪಾದ್ರೆ ನಾವೇನು ಮಾಡಕಾಗತ್ತೆ, ನಲವತ್ತು ಪರಸೆಂಟು ಕೊಡಕ್ಕಾಗದೋನು ಸುಸೈಡ್ ಮಾಡಿಕತ್ತನೆ ಅಂತ ನನಿಗೇನು ಕನಸುಬಿದ್ದಿತ್ತೆ’ ಇಂತ ಮಾತುಗಳು ಒಡಕಲು ಸೈಲೆಂನ್ಸರ್ ಪೈಪಿನಂತ ಗಾಡಿಯಿಂದ ಹೊರಬರುವುದಿಲ್ಲ ಎಂಬ ಸಮಾಧಾನ ನಾಡಿನಲ್ಲಿ ಹರಡಿದೆಯಂತಲ್ಲಾ ಥೂತ್ತೇರಿ.

*****

ಟಿಕೆಟ್ ಸಿಗದವರೆಲ್ಲಾ ತಮ್ಮದೇ ಸಾವಿನ ಸಂದೇಶ ಬಂದಂತೆ ಅಳುತ್ತಿರುವಾಗ ಪ್ರಳಯವೇ ಸಂಭವಿಸಿದರೂ ಅಳಲಾರದ ರೇವಣ್ಣನವರು ಭವಾನಿಗೆ ಟಿಕೆಟ್ ಸಿಗದ ಕಾರಣಕ್ಕೆ ಅತ್ತಿರಬಹುದೆ ಎಂಬ ಗುಮಾನಿಯಾಯ್ತು. ಅವರನ್ನೇ ಕೇಳಿದರೆ ಹೇಗೆ ಎಂದು ಫೋನ್ ಮಾಡಲಾಗಿ ರಿಂಗಾಯ್ತು. ರಿಂಗ್ ಟೋನ್ ಟಕ್ ಟಕ್ ಟಕ್ ಟಕ್ ಟಕ್ ಟಕ್.. ಹಲೋ

“ಯಾರ್ರಿ ಅದು?”

“ನಮಸ್ಕಾರ ಸಾರ್ ನಾನು ಯಾಹು.”

“ಯಾವು ಅಂದ್ರೆ ಯಾರ್ರಿ?”

“ಪತ್ರಕರ್ತ ಸಾರ್.”

“ನಿಮ್ಮಿಂದ್ಲೆ ಕಂಡ್ರಿ ಹಿಂಗಾಗಿದ್ದು, ದಿನ ಬರದು ಬರದು ಮಡಗಿದ್ರಿ. ಈಗೇನು ಬರಿತಿರಿ?”

“ಭವಾನಿಯಕ್ಕನಿಗೆ ಟಿಕೆಟ್ ಸಿಗಲಿಲ್ಲ ಅಂತ ಬೇಜಾರಾಯ್ತ ಸಾ?”

“ಆಗದಿಲವೇನ್ರಿ? ನನ್ನಂಥೋನಿಗೇ ಅಳು ಬತ್ತದೆ.”

“ಅಳು ಅದಿಮಿಕ್ಕಬಾರ್ದು ಸಾ, ಮನಸೋಯಿಚ್ಚೆ ಅತ್ತಬುಡಬೇಕು.”

“ಜನ ಏನಂತರ್ರೀ.. ನೀವೇಳಿದಂಗೆ ಅಳಕ್ಕಾಯ್ತದ?”

ಇದನ್ನೂ ಓದಿ: “ಸುದೀಪನೂ ನಲವತ್ತು ಪರಸೆಂಟಾದ ಅಂತಾರಲ್ಲಾ ಸಾರ್”

“ಸಾರ್ ಭವಾನಿಯಕ್ಕ ಒಳ್ಳೆ ಆಡಳಿತಗಾರ್ತಿ. ನಿಜಕ್ಕೂ ಆ ಭವಾನಿದೇವಿಯಂಗೆ ಕಾಣ್ತರೆ. ಕುಮಾರಣ್ಣನ ಹೆಂಡ್ತಿ ಶಾಸಕರಾಗಬಹುದು, ಅದೇ ಭವಾನಿಯಕ್ಕ ಆಗಕ್ಕಾಗಲ್ಲ ಅಂದ್ರೆ ಇದ್ಯಾವ ನ್ಯಾಯ ಸಾ?”

“ನಾನು ನಿಮ್ಮಂಗೆ ಕೇಳಿದೆ ಕಂಡ್ರಿ, ಆದ್ರೆ ಕುಮಾರ ಹಟಹಿಡಿದುಬುಟ್ಟ. ಪ್ರಕಾಸ ಅಂತ ಹಾಸನದ ಎಮ್ಮೆಲ್ಲೆ ಇದ್ದ ನೋಡು, ಅವುಂದು ಕುಮಾರಂದು ಏನೂ ಯವಾರಿತ್ತಂತೆ, ಅವುನು ಸತ್ತೋದ, ಆ ರುಣ ತೀರಿಸಕ್ಕೆ ಅವುನ ಮಗನಿಗೇ ಟಿಕೆಟ್ ಕೊಟ್ಟ. ನಾವೇನು ಮಾಡಕಾಯ್ತದೆ. ನಾನೆ ಪಾರ್ಟಿ ಪ್ರಸಿಡೆಂಟಾಗಿದ್ರೆ ಮದ್ಲು ಭವಾನಿಗೆ ಟಿಕೆಟ್ ಕೊಟ್ಟು ಅಮ್ಯಾಲೆ ಉಳದೋರಿಗೆ ಕೊಡತ್ತಿದ್ದೆ.”

“ಈ ವಿಷಯದಲ್ಲಿ ದೇವೇಗೌಡ್ರು ನಿಮ್ಮ ಪರ ಇರಲಿಲ್ವ ಸಾ?”

“ಇದ್ರು ಕಂಡ್ರೀ. ಪಾಪ ಅವುರ ತಾನೆ ಏನು ಮಾಡ್ಯಾರು, ಕುಂತು ಬುಟ್ಟವುರೆ. ಮದ್ಲಿನಂಗಿದ್ರೆ ಬುಡತಿದ್ವ ನಾವೂ”

“ಅದು ಪತ್ತೆ ಆಯ್ತ ಸಾ?”

“ಯಾವುದ್ರಿ?”

“ದೇವೇಗೌಡ್ರ ಮ್ಯಾಲೆ ಯಾವುದೋ ಕ್ಯಟ್ಟ ಕಣ್ಣು ಬಿದ್ದಿದೆ ಅಂತ ಕುಮಾರಣ್ಣ ಅತ್ತರಲ್ಲ, ಅದು ಸಾರ್.”

“ಈ ಎಲಕ್ಸನ್ ಗಲಾಟಿಲಿ ಅದ ಯಾರೂ ಅಂತ ಕಂಡಿರಲಿಲ್ಲ ಕಂಡ್ರಿ.”

ರೇವಣ್ಣ

“ಅಂಜನ ಹಾಕಿ ನೋಡಿದ್ರೆ ಗೊತ್ತಾಗದು ಸಾ. ಉಡುಪಿ ಕಡೆ ಬನ್ನಂಜೆ ಗೋವಿಂದಾಚಾರಿ ಅಂತ ಇದ್ದರು. ಅವುರ ಮನೆಲಿ ಒಂದು ಪುಸ್ತಕ ಕಳೆದೋಗಿತ್ತಂತೆ, ಅಂಜನ ಹಾಕಿ ನೋಡಿದಾಗ ಅದಿದ್ದ ಜಾಗ ಕಾಣತಂತೆ. ಅಂಗೆ ನೀವೂ ಅಂಜನ ಹಾಕಬೇಕಾಗಿತ್ತು.”

“ಅಂಗೈ ಹುಣ್ಣಿಗೆ ಕನ್ನಡಿ ಬೇಕೇನ್ರಿ! ನಮ್ಮಪ್ಪನಿಗೆ ಏನು ವಸಿ ಜನ ಆಗದೋರಿದ್ದರೆ, ದೇವರು ನಮ್ಮಪ್ಪ ಕಡೆ ಇದ್ದಿದ್ರಿಂದ ಅವುರೆಲ್ಲ ತೀರೋದ್ರು. ನಮ್ಮಪ್ಪ ಇನ್ನು ಗಟ್ಟಿ ಮುಟ್ಟಾಗವುರೆ.”

“ಗಟ್ಟಿ ಜೀವ ಸಾರ್ ಅದು, ಪುನಃ ತನ್ನ ಕುಟುಂಬನ ಕರ್ನಾಟಕದ ಸಿಂಹಾಸನದ ಮೇಲೆ ಕೂರಿಸೆ ಹೋಗದದು.”

“ನಮ್ಮಾಸೆನೂ ಅದೆ ಅಲವೇನ್ರಿ! ಕುಮಾರ ಮತ್ತೆ ಮುಖ್ಯಮಂತ್ರಿ ಆಗಬೇಕು, ನಾನು ಪಿಡಬ್ಲುಡಿ ಮಂತ್ರಿ ಆಗಬೇಕು ಅಂತ ಹೋರಾಡ್ತಯಿರದು.”

“ಜೊತೆಗೆ ಇಂಧನ ಖಾತೆ, ಕೆಎಂಎಫ್‌ನೂ ನೀವೇ ವಹಿಸಿಕೋಬೇಕು ಸಾರ್. ಯಾವುದೇ ಖಾತೆ ಕೊಟ್ರು ಚನ್ನಾಗಿ ನಿಭಾಯಿಸ್ತಿರಿ ನೀವು. ಆ ಶಕ್ತಿ ಇವತ್ತು ಯಾವನಿಗೂ ಇಲ್ಲ.”

“ಅಲ್ಲ ಕಂಡ್ರೀ ನಾನು ಪಿಡಬ್ಲುಡಿ ಮಂತ್ರಿಯಾಗಿದ್ದಾಗ ಬೆಂಗಳೂರು ರೋಡು ಯಂಗಿದ್ದೋ.. ಒಂದೆಒಂದು ಬಟನ್ನು (ಗುಂಡಿ) ರಸ್ತೆಲಿ ಕಾಣತಿರಲಿಲ್ಲ. ಈ ಬಿಜೆಪಿಗಳು ಬಂದು ರೋಡು ತುಂಬ ಬರೀ ಬಟನ್ನಗಳೇಯ. ಪಾರ್ಟಿ ಪರಸೆಂಟು ಅಂದ್ರೆ ಯಾವು ರೋಡು ಚನ್ನಾಗಿರತವುರಿ?”

“ನೀವು ಪುನಃ ಮಂತ್ರಿಯಾಗಿ ಪಿಡಬ್ಲುಡಿ, ಇಂಧನ ಖಾತೆ ಮತ್ತು ಕೆಎಂಎಫ್ ಪಡಕೋಬೇಕು ಸಾರ್. ಅಂಗೆ ಭವಾನಿಯಕ್ಕನ್ನ ಎಮ್ಮೆಲ್ಸಿ ಮಾಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮಾಡಬೇಕು ಸಾ.”

“ಆದ್ಕೆ ನಿಮಗೆ ತಲೆಯಿಲ್ಲ ಅನ್ನದು.”

“ಯಾಕ್ ಸಾ?”

“ಅಲ್ಲಕಂಡ್ರಿ ಅವುಳು ಜಿಲ್ಲಾ ಪಂಚಾಯ್ತಿ ಆಡಳಿತ ಮಾಡುವಾಗಲ್ವಾ, ಇಸುಗೂಲುಡುಗ್ರು ವಳ್ಳೆ ನಂಬರ್ ತಗಂಡಿದ್ದೂ, ಆದ್ಕೆ ಎಜುಕೇಶನ್ ಮಂತ್ರಿ ಮಾಡನ ಅಂತ ಇದ್ದಿನಿ. ಆ ಮಹಿಳೆ ಮಕ್ಕಳು ಕಲ್ಯಾಣ ಇಲಾಖೆ ಯಾರಿಗೆ ಬೇಕ್ರಿ?”

“ಥೂತ್ತೇರಿ.”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...