Homeಅಂಕಣಗಳುಮೂರು ಪಾರ್ಟಿಯವರೂ ಅಳುತ್ತಿದ್ದಾರಲ್ಲಾ!

ಮೂರು ಪಾರ್ಟಿಯವರೂ ಅಳುತ್ತಿದ್ದಾರಲ್ಲಾ!

- Advertisement -
- Advertisement -

ಕರ್ನಾಟಕದ ರಾಜಕಾರಣ ಭಲೇ ಮಜವಾಗಿದೆಯಲ್ಲಾ. ಈ ಹುಚ್ಚರ ಸಂತೆಯನ್ನು ನೋಡಿ ಜನ ಎಲ್ಲಾ ಪಕ್ಷದವರನ್ನು ಶಪಿಸುವಂತಾಗಿದ್ದಾರಂತಲ್ಲಾ. ಇದಕ್ಕೆ ಹಲವಾರು ಪಕ್ಷಾಂತರಿಗಳ ಉದಾಹರಣೆ ನೋಡಬಹುದು. ಕಾಂಗ್ರೆಸ್, ಬಿಜೆಪಿ, ದಳ ಮೂರು ಪಾರ್ಟಿಗಳು ಒಂದಾದ ಸಮಯ ಇದು. ಎಲ್ಲರೂ ಒಂದೇ ತರಹ ಮಾತನಾಡುತ್ತಿದ್ದಾರೆ. ಆದರೆ ಈ ನಡುವೆ ನಡ್ಡಾ, ಶಾ, ಮೋದಿ ಕರ್ನಾಟಕದ ಕೆಲವು ರಾಜಕಾರಣಿಗಳನ್ನು ಗೋಶಾಲೆಗೆ ದೂಡಿದ್ದು ನೋಡಿದರೆ ಶಾನೆ ಅನುಮಾನವಾಗುತ್ತಿದೆಯಲ್ಲಾ. ಜನರ ತಲೆಯಲ್ಲಿ ತುಂಬಿರುವ ದೊಡ್ಡ ಅನುಮಾನವೆಂದರೆ ಇವಿಎಂ ಬಗೆಗಿನ ಸಂಶಯ. ಹೀಗಿದ್ದರೂ, ಹಳೆ ತಲೆಗಳು ಪಾರ್ಟಿಯನ್ನು ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ತರುವುದಿಲ್ಲ, ಮಾಗಿದ ರಾಜಕಾರಣಗಳಿಂದ ಭವಿಷ್ಯದಲ್ಲಿ ಕೈಗೊಳ್ಳಬೇಕಾದ ಮನೆಹಾಳ ಕಾರ್ಯಕ್ರಮಗಳ ಅನುಷ್ಠಾನ ಕಷ್ಟ; ಇಂತಲ್ಲಿ ಜಗದೀಶ್ ಶೆಟ್ಟರ್‌ನಂತವರ ಅಗತ್ಯವಿಲ್ಲ. ಅದಿರಲಿ ಒಮ್ಮೆ ಮುಖ್ಯಮಂತ್ರಿಯಾಗಿದ್ದ ಶೆಟ್ಟರ್ ತನಗಿಂತ ಕಿರಿ ಹುಡುಗನ ಆಡಳಿತದಲ್ಲಿ ಕೇವಲ ಶಾಸಕನಾಗಿದ್ದು ಮುಂದೆಯೂ ಹಾಗೇ ಇರುತ್ತೇನೆಂದು ಹೇಳಿ ಟಿಕೆಟ್‌ಗಾಗಿ ರಚ್ಚೆ ಹಿಡಿದಿರುವುದು ಅಚ್ಚರಿಯಾಗಿದೆಯಲ್ಲಾ ಥೂತ್ತೇರಿ.

*****

ಪಾರ್ಟಿಯಿಂದ ಟಿಕೆಟ್ ಸಿಗದ ಹಲವಾರು ಜನ ಕೋಣವನ್ನು ಕಳೆದುಕೊಂಡ ಎಮ್ಮೆಯಂತೆ ಅಳುತ್ತಿದ್ದಾರೆ. ಈ ಪೈಕಿ ಉಡುಪಿ ಭಟ್ಟನ ಅಳು ನೋಡಿ ಕೃಷ್ಣನೇ ಅತ್ತ ತಿರುಗಿದನಂತೆ. ಇನ್ನ ಜಗದೀಶ್ ಶೆಟ್ಟರ ಅಳಲು ಜನಗಳನ್ನೇ ಬಿಟ್ಟಿದ್ದಾರೆ. ಎ.ಟಿ ರಾಮಸ್ವಾಮಿ ಮತ್ತು ಮುದ್ದಹನುಮೇಗೌಡರು ಒಳದುಃಖಿಗಳಾದ್ದರಿಂದ ದುಃಖ ಬಹಿರಂಗವಾಗಿ ಕಾಣಲಿಲ್ಲ. ಇನ್ನು ಶಿವಮೊಗ್ಗದ ಈಶ್ವರಪ್ಪನ ಸೊಸೆ ಅಳುವುದನ್ನು ಕೇಳಿ ಬಹಳ ಜನ ಮನೆಯ ಬಳಿಗೆ ಓಡಿಬಂದರಂತೆ. ಅಲ್ಲಿ ಈಶ್ವರಪ್ಪನೂ ದಂಗಾಗಿ ಕೂತಿದ್ದರಂತೆ. ಹೆಂಡತಿ ಆಸ್ಪತ್ರೆಯಲ್ಲಿರುವುದನ್ನಾದರೂ ಪಾರ್ಟಿ ಗ್ರಹಿಸಬೇಕಿತ್ತು; ಈಶ್ವರಪ್ಪನಿಗೆ ಎಷ್ಟು ಸಿಟ್ಟು ಬಂದಿತೆಂದರೆ ರಾಜಕಾರಣಕ್ಕೆ ನಿವೃತ್ತಿಯನ್ನೇ ಘೋಷಿಸಿಬಿಟ್ಟರು.

ಕೆ.ಎಸ್.ಈಶ್ವರಪ್ಪ

ಈ ತ್ಯಾಗ ಮಗನ ಭವಿಷ್ಯಕ್ಕಾಗಿ ನಡೆದದು ಎಂದೂ ಜನ ಆಡಿಕೊಂಡರು. ಇನ್ನು ಮುಂದೆ ರಾಜಕಾರಣದ ವೇದಿಕೆಯಿಂದ ’ದನ ತಿನ್ನುವವರ ಗಂಟಲು ಸೀಳಬೇಕು, ಕೈ ಕತ್ತರಿಸಬೇಕು, ಆ ಸಿದ್ದರಾಮಯ್ಯ ನಾಯಿ ಇದ್ದಂತೆ, ಆ ಡಿ.ಕೆ.ಶಿ ಹಂದಿಯಿದ್ದಂತೆ, ಮುಸ್ಲಿಂ ಗೂಂಡಾಗಳಿಗೆ ತಕ್ಕಪಾಠ ಕಲಿಸಬೇಕು, ಹೆಣ್ಣು ಮಕ್ಕಳು ರೇಪಾದ್ರೆ ನಾವೇನು ಮಾಡಕಾಗತ್ತೆ, ನಲವತ್ತು ಪರಸೆಂಟು ಕೊಡಕ್ಕಾಗದೋನು ಸುಸೈಡ್ ಮಾಡಿಕತ್ತನೆ ಅಂತ ನನಿಗೇನು ಕನಸುಬಿದ್ದಿತ್ತೆ’ ಇಂತ ಮಾತುಗಳು ಒಡಕಲು ಸೈಲೆಂನ್ಸರ್ ಪೈಪಿನಂತ ಗಾಡಿಯಿಂದ ಹೊರಬರುವುದಿಲ್ಲ ಎಂಬ ಸಮಾಧಾನ ನಾಡಿನಲ್ಲಿ ಹರಡಿದೆಯಂತಲ್ಲಾ ಥೂತ್ತೇರಿ.

*****

ಟಿಕೆಟ್ ಸಿಗದವರೆಲ್ಲಾ ತಮ್ಮದೇ ಸಾವಿನ ಸಂದೇಶ ಬಂದಂತೆ ಅಳುತ್ತಿರುವಾಗ ಪ್ರಳಯವೇ ಸಂಭವಿಸಿದರೂ ಅಳಲಾರದ ರೇವಣ್ಣನವರು ಭವಾನಿಗೆ ಟಿಕೆಟ್ ಸಿಗದ ಕಾರಣಕ್ಕೆ ಅತ್ತಿರಬಹುದೆ ಎಂಬ ಗುಮಾನಿಯಾಯ್ತು. ಅವರನ್ನೇ ಕೇಳಿದರೆ ಹೇಗೆ ಎಂದು ಫೋನ್ ಮಾಡಲಾಗಿ ರಿಂಗಾಯ್ತು. ರಿಂಗ್ ಟೋನ್ ಟಕ್ ಟಕ್ ಟಕ್ ಟಕ್ ಟಕ್ ಟಕ್.. ಹಲೋ

“ಯಾರ್ರಿ ಅದು?”

“ನಮಸ್ಕಾರ ಸಾರ್ ನಾನು ಯಾಹು.”

“ಯಾವು ಅಂದ್ರೆ ಯಾರ್ರಿ?”

“ಪತ್ರಕರ್ತ ಸಾರ್.”

“ನಿಮ್ಮಿಂದ್ಲೆ ಕಂಡ್ರಿ ಹಿಂಗಾಗಿದ್ದು, ದಿನ ಬರದು ಬರದು ಮಡಗಿದ್ರಿ. ಈಗೇನು ಬರಿತಿರಿ?”

“ಭವಾನಿಯಕ್ಕನಿಗೆ ಟಿಕೆಟ್ ಸಿಗಲಿಲ್ಲ ಅಂತ ಬೇಜಾರಾಯ್ತ ಸಾ?”

“ಆಗದಿಲವೇನ್ರಿ? ನನ್ನಂಥೋನಿಗೇ ಅಳು ಬತ್ತದೆ.”

“ಅಳು ಅದಿಮಿಕ್ಕಬಾರ್ದು ಸಾ, ಮನಸೋಯಿಚ್ಚೆ ಅತ್ತಬುಡಬೇಕು.”

“ಜನ ಏನಂತರ್ರೀ.. ನೀವೇಳಿದಂಗೆ ಅಳಕ್ಕಾಯ್ತದ?”

ಇದನ್ನೂ ಓದಿ: “ಸುದೀಪನೂ ನಲವತ್ತು ಪರಸೆಂಟಾದ ಅಂತಾರಲ್ಲಾ ಸಾರ್”

“ಸಾರ್ ಭವಾನಿಯಕ್ಕ ಒಳ್ಳೆ ಆಡಳಿತಗಾರ್ತಿ. ನಿಜಕ್ಕೂ ಆ ಭವಾನಿದೇವಿಯಂಗೆ ಕಾಣ್ತರೆ. ಕುಮಾರಣ್ಣನ ಹೆಂಡ್ತಿ ಶಾಸಕರಾಗಬಹುದು, ಅದೇ ಭವಾನಿಯಕ್ಕ ಆಗಕ್ಕಾಗಲ್ಲ ಅಂದ್ರೆ ಇದ್ಯಾವ ನ್ಯಾಯ ಸಾ?”

“ನಾನು ನಿಮ್ಮಂಗೆ ಕೇಳಿದೆ ಕಂಡ್ರಿ, ಆದ್ರೆ ಕುಮಾರ ಹಟಹಿಡಿದುಬುಟ್ಟ. ಪ್ರಕಾಸ ಅಂತ ಹಾಸನದ ಎಮ್ಮೆಲ್ಲೆ ಇದ್ದ ನೋಡು, ಅವುಂದು ಕುಮಾರಂದು ಏನೂ ಯವಾರಿತ್ತಂತೆ, ಅವುನು ಸತ್ತೋದ, ಆ ರುಣ ತೀರಿಸಕ್ಕೆ ಅವುನ ಮಗನಿಗೇ ಟಿಕೆಟ್ ಕೊಟ್ಟ. ನಾವೇನು ಮಾಡಕಾಯ್ತದೆ. ನಾನೆ ಪಾರ್ಟಿ ಪ್ರಸಿಡೆಂಟಾಗಿದ್ರೆ ಮದ್ಲು ಭವಾನಿಗೆ ಟಿಕೆಟ್ ಕೊಟ್ಟು ಅಮ್ಯಾಲೆ ಉಳದೋರಿಗೆ ಕೊಡತ್ತಿದ್ದೆ.”

“ಈ ವಿಷಯದಲ್ಲಿ ದೇವೇಗೌಡ್ರು ನಿಮ್ಮ ಪರ ಇರಲಿಲ್ವ ಸಾ?”

“ಇದ್ರು ಕಂಡ್ರೀ. ಪಾಪ ಅವುರ ತಾನೆ ಏನು ಮಾಡ್ಯಾರು, ಕುಂತು ಬುಟ್ಟವುರೆ. ಮದ್ಲಿನಂಗಿದ್ರೆ ಬುಡತಿದ್ವ ನಾವೂ”

“ಅದು ಪತ್ತೆ ಆಯ್ತ ಸಾ?”

“ಯಾವುದ್ರಿ?”

“ದೇವೇಗೌಡ್ರ ಮ್ಯಾಲೆ ಯಾವುದೋ ಕ್ಯಟ್ಟ ಕಣ್ಣು ಬಿದ್ದಿದೆ ಅಂತ ಕುಮಾರಣ್ಣ ಅತ್ತರಲ್ಲ, ಅದು ಸಾರ್.”

“ಈ ಎಲಕ್ಸನ್ ಗಲಾಟಿಲಿ ಅದ ಯಾರೂ ಅಂತ ಕಂಡಿರಲಿಲ್ಲ ಕಂಡ್ರಿ.”

ರೇವಣ್ಣ

“ಅಂಜನ ಹಾಕಿ ನೋಡಿದ್ರೆ ಗೊತ್ತಾಗದು ಸಾ. ಉಡುಪಿ ಕಡೆ ಬನ್ನಂಜೆ ಗೋವಿಂದಾಚಾರಿ ಅಂತ ಇದ್ದರು. ಅವುರ ಮನೆಲಿ ಒಂದು ಪುಸ್ತಕ ಕಳೆದೋಗಿತ್ತಂತೆ, ಅಂಜನ ಹಾಕಿ ನೋಡಿದಾಗ ಅದಿದ್ದ ಜಾಗ ಕಾಣತಂತೆ. ಅಂಗೆ ನೀವೂ ಅಂಜನ ಹಾಕಬೇಕಾಗಿತ್ತು.”

“ಅಂಗೈ ಹುಣ್ಣಿಗೆ ಕನ್ನಡಿ ಬೇಕೇನ್ರಿ! ನಮ್ಮಪ್ಪನಿಗೆ ಏನು ವಸಿ ಜನ ಆಗದೋರಿದ್ದರೆ, ದೇವರು ನಮ್ಮಪ್ಪ ಕಡೆ ಇದ್ದಿದ್ರಿಂದ ಅವುರೆಲ್ಲ ತೀರೋದ್ರು. ನಮ್ಮಪ್ಪ ಇನ್ನು ಗಟ್ಟಿ ಮುಟ್ಟಾಗವುರೆ.”

“ಗಟ್ಟಿ ಜೀವ ಸಾರ್ ಅದು, ಪುನಃ ತನ್ನ ಕುಟುಂಬನ ಕರ್ನಾಟಕದ ಸಿಂಹಾಸನದ ಮೇಲೆ ಕೂರಿಸೆ ಹೋಗದದು.”

“ನಮ್ಮಾಸೆನೂ ಅದೆ ಅಲವೇನ್ರಿ! ಕುಮಾರ ಮತ್ತೆ ಮುಖ್ಯಮಂತ್ರಿ ಆಗಬೇಕು, ನಾನು ಪಿಡಬ್ಲುಡಿ ಮಂತ್ರಿ ಆಗಬೇಕು ಅಂತ ಹೋರಾಡ್ತಯಿರದು.”

“ಜೊತೆಗೆ ಇಂಧನ ಖಾತೆ, ಕೆಎಂಎಫ್‌ನೂ ನೀವೇ ವಹಿಸಿಕೋಬೇಕು ಸಾರ್. ಯಾವುದೇ ಖಾತೆ ಕೊಟ್ರು ಚನ್ನಾಗಿ ನಿಭಾಯಿಸ್ತಿರಿ ನೀವು. ಆ ಶಕ್ತಿ ಇವತ್ತು ಯಾವನಿಗೂ ಇಲ್ಲ.”

“ಅಲ್ಲ ಕಂಡ್ರೀ ನಾನು ಪಿಡಬ್ಲುಡಿ ಮಂತ್ರಿಯಾಗಿದ್ದಾಗ ಬೆಂಗಳೂರು ರೋಡು ಯಂಗಿದ್ದೋ.. ಒಂದೆಒಂದು ಬಟನ್ನು (ಗುಂಡಿ) ರಸ್ತೆಲಿ ಕಾಣತಿರಲಿಲ್ಲ. ಈ ಬಿಜೆಪಿಗಳು ಬಂದು ರೋಡು ತುಂಬ ಬರೀ ಬಟನ್ನಗಳೇಯ. ಪಾರ್ಟಿ ಪರಸೆಂಟು ಅಂದ್ರೆ ಯಾವು ರೋಡು ಚನ್ನಾಗಿರತವುರಿ?”

“ನೀವು ಪುನಃ ಮಂತ್ರಿಯಾಗಿ ಪಿಡಬ್ಲುಡಿ, ಇಂಧನ ಖಾತೆ ಮತ್ತು ಕೆಎಂಎಫ್ ಪಡಕೋಬೇಕು ಸಾರ್. ಅಂಗೆ ಭವಾನಿಯಕ್ಕನ್ನ ಎಮ್ಮೆಲ್ಸಿ ಮಾಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮಾಡಬೇಕು ಸಾ.”

“ಆದ್ಕೆ ನಿಮಗೆ ತಲೆಯಿಲ್ಲ ಅನ್ನದು.”

“ಯಾಕ್ ಸಾ?”

“ಅಲ್ಲಕಂಡ್ರಿ ಅವುಳು ಜಿಲ್ಲಾ ಪಂಚಾಯ್ತಿ ಆಡಳಿತ ಮಾಡುವಾಗಲ್ವಾ, ಇಸುಗೂಲುಡುಗ್ರು ವಳ್ಳೆ ನಂಬರ್ ತಗಂಡಿದ್ದೂ, ಆದ್ಕೆ ಎಜುಕೇಶನ್ ಮಂತ್ರಿ ಮಾಡನ ಅಂತ ಇದ್ದಿನಿ. ಆ ಮಹಿಳೆ ಮಕ್ಕಳು ಕಲ್ಯಾಣ ಇಲಾಖೆ ಯಾರಿಗೆ ಬೇಕ್ರಿ?”

“ಥೂತ್ತೇರಿ.”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...