Homeಅಂಕಣಗಳುಮೂರು ಪಾರ್ಟಿಯವರೂ ಅಳುತ್ತಿದ್ದಾರಲ್ಲಾ!

ಮೂರು ಪಾರ್ಟಿಯವರೂ ಅಳುತ್ತಿದ್ದಾರಲ್ಲಾ!

- Advertisement -
- Advertisement -

ಕರ್ನಾಟಕದ ರಾಜಕಾರಣ ಭಲೇ ಮಜವಾಗಿದೆಯಲ್ಲಾ. ಈ ಹುಚ್ಚರ ಸಂತೆಯನ್ನು ನೋಡಿ ಜನ ಎಲ್ಲಾ ಪಕ್ಷದವರನ್ನು ಶಪಿಸುವಂತಾಗಿದ್ದಾರಂತಲ್ಲಾ. ಇದಕ್ಕೆ ಹಲವಾರು ಪಕ್ಷಾಂತರಿಗಳ ಉದಾಹರಣೆ ನೋಡಬಹುದು. ಕಾಂಗ್ರೆಸ್, ಬಿಜೆಪಿ, ದಳ ಮೂರು ಪಾರ್ಟಿಗಳು ಒಂದಾದ ಸಮಯ ಇದು. ಎಲ್ಲರೂ ಒಂದೇ ತರಹ ಮಾತನಾಡುತ್ತಿದ್ದಾರೆ. ಆದರೆ ಈ ನಡುವೆ ನಡ್ಡಾ, ಶಾ, ಮೋದಿ ಕರ್ನಾಟಕದ ಕೆಲವು ರಾಜಕಾರಣಿಗಳನ್ನು ಗೋಶಾಲೆಗೆ ದೂಡಿದ್ದು ನೋಡಿದರೆ ಶಾನೆ ಅನುಮಾನವಾಗುತ್ತಿದೆಯಲ್ಲಾ. ಜನರ ತಲೆಯಲ್ಲಿ ತುಂಬಿರುವ ದೊಡ್ಡ ಅನುಮಾನವೆಂದರೆ ಇವಿಎಂ ಬಗೆಗಿನ ಸಂಶಯ. ಹೀಗಿದ್ದರೂ, ಹಳೆ ತಲೆಗಳು ಪಾರ್ಟಿಯನ್ನು ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ತರುವುದಿಲ್ಲ, ಮಾಗಿದ ರಾಜಕಾರಣಗಳಿಂದ ಭವಿಷ್ಯದಲ್ಲಿ ಕೈಗೊಳ್ಳಬೇಕಾದ ಮನೆಹಾಳ ಕಾರ್ಯಕ್ರಮಗಳ ಅನುಷ್ಠಾನ ಕಷ್ಟ; ಇಂತಲ್ಲಿ ಜಗದೀಶ್ ಶೆಟ್ಟರ್‌ನಂತವರ ಅಗತ್ಯವಿಲ್ಲ. ಅದಿರಲಿ ಒಮ್ಮೆ ಮುಖ್ಯಮಂತ್ರಿಯಾಗಿದ್ದ ಶೆಟ್ಟರ್ ತನಗಿಂತ ಕಿರಿ ಹುಡುಗನ ಆಡಳಿತದಲ್ಲಿ ಕೇವಲ ಶಾಸಕನಾಗಿದ್ದು ಮುಂದೆಯೂ ಹಾಗೇ ಇರುತ್ತೇನೆಂದು ಹೇಳಿ ಟಿಕೆಟ್‌ಗಾಗಿ ರಚ್ಚೆ ಹಿಡಿದಿರುವುದು ಅಚ್ಚರಿಯಾಗಿದೆಯಲ್ಲಾ ಥೂತ್ತೇರಿ.

*****

ಪಾರ್ಟಿಯಿಂದ ಟಿಕೆಟ್ ಸಿಗದ ಹಲವಾರು ಜನ ಕೋಣವನ್ನು ಕಳೆದುಕೊಂಡ ಎಮ್ಮೆಯಂತೆ ಅಳುತ್ತಿದ್ದಾರೆ. ಈ ಪೈಕಿ ಉಡುಪಿ ಭಟ್ಟನ ಅಳು ನೋಡಿ ಕೃಷ್ಣನೇ ಅತ್ತ ತಿರುಗಿದನಂತೆ. ಇನ್ನ ಜಗದೀಶ್ ಶೆಟ್ಟರ ಅಳಲು ಜನಗಳನ್ನೇ ಬಿಟ್ಟಿದ್ದಾರೆ. ಎ.ಟಿ ರಾಮಸ್ವಾಮಿ ಮತ್ತು ಮುದ್ದಹನುಮೇಗೌಡರು ಒಳದುಃಖಿಗಳಾದ್ದರಿಂದ ದುಃಖ ಬಹಿರಂಗವಾಗಿ ಕಾಣಲಿಲ್ಲ. ಇನ್ನು ಶಿವಮೊಗ್ಗದ ಈಶ್ವರಪ್ಪನ ಸೊಸೆ ಅಳುವುದನ್ನು ಕೇಳಿ ಬಹಳ ಜನ ಮನೆಯ ಬಳಿಗೆ ಓಡಿಬಂದರಂತೆ. ಅಲ್ಲಿ ಈಶ್ವರಪ್ಪನೂ ದಂಗಾಗಿ ಕೂತಿದ್ದರಂತೆ. ಹೆಂಡತಿ ಆಸ್ಪತ್ರೆಯಲ್ಲಿರುವುದನ್ನಾದರೂ ಪಾರ್ಟಿ ಗ್ರಹಿಸಬೇಕಿತ್ತು; ಈಶ್ವರಪ್ಪನಿಗೆ ಎಷ್ಟು ಸಿಟ್ಟು ಬಂದಿತೆಂದರೆ ರಾಜಕಾರಣಕ್ಕೆ ನಿವೃತ್ತಿಯನ್ನೇ ಘೋಷಿಸಿಬಿಟ್ಟರು.

ಕೆ.ಎಸ್.ಈಶ್ವರಪ್ಪ

ಈ ತ್ಯಾಗ ಮಗನ ಭವಿಷ್ಯಕ್ಕಾಗಿ ನಡೆದದು ಎಂದೂ ಜನ ಆಡಿಕೊಂಡರು. ಇನ್ನು ಮುಂದೆ ರಾಜಕಾರಣದ ವೇದಿಕೆಯಿಂದ ’ದನ ತಿನ್ನುವವರ ಗಂಟಲು ಸೀಳಬೇಕು, ಕೈ ಕತ್ತರಿಸಬೇಕು, ಆ ಸಿದ್ದರಾಮಯ್ಯ ನಾಯಿ ಇದ್ದಂತೆ, ಆ ಡಿ.ಕೆ.ಶಿ ಹಂದಿಯಿದ್ದಂತೆ, ಮುಸ್ಲಿಂ ಗೂಂಡಾಗಳಿಗೆ ತಕ್ಕಪಾಠ ಕಲಿಸಬೇಕು, ಹೆಣ್ಣು ಮಕ್ಕಳು ರೇಪಾದ್ರೆ ನಾವೇನು ಮಾಡಕಾಗತ್ತೆ, ನಲವತ್ತು ಪರಸೆಂಟು ಕೊಡಕ್ಕಾಗದೋನು ಸುಸೈಡ್ ಮಾಡಿಕತ್ತನೆ ಅಂತ ನನಿಗೇನು ಕನಸುಬಿದ್ದಿತ್ತೆ’ ಇಂತ ಮಾತುಗಳು ಒಡಕಲು ಸೈಲೆಂನ್ಸರ್ ಪೈಪಿನಂತ ಗಾಡಿಯಿಂದ ಹೊರಬರುವುದಿಲ್ಲ ಎಂಬ ಸಮಾಧಾನ ನಾಡಿನಲ್ಲಿ ಹರಡಿದೆಯಂತಲ್ಲಾ ಥೂತ್ತೇರಿ.

*****

ಟಿಕೆಟ್ ಸಿಗದವರೆಲ್ಲಾ ತಮ್ಮದೇ ಸಾವಿನ ಸಂದೇಶ ಬಂದಂತೆ ಅಳುತ್ತಿರುವಾಗ ಪ್ರಳಯವೇ ಸಂಭವಿಸಿದರೂ ಅಳಲಾರದ ರೇವಣ್ಣನವರು ಭವಾನಿಗೆ ಟಿಕೆಟ್ ಸಿಗದ ಕಾರಣಕ್ಕೆ ಅತ್ತಿರಬಹುದೆ ಎಂಬ ಗುಮಾನಿಯಾಯ್ತು. ಅವರನ್ನೇ ಕೇಳಿದರೆ ಹೇಗೆ ಎಂದು ಫೋನ್ ಮಾಡಲಾಗಿ ರಿಂಗಾಯ್ತು. ರಿಂಗ್ ಟೋನ್ ಟಕ್ ಟಕ್ ಟಕ್ ಟಕ್ ಟಕ್ ಟಕ್.. ಹಲೋ

“ಯಾರ್ರಿ ಅದು?”

“ನಮಸ್ಕಾರ ಸಾರ್ ನಾನು ಯಾಹು.”

“ಯಾವು ಅಂದ್ರೆ ಯಾರ್ರಿ?”

“ಪತ್ರಕರ್ತ ಸಾರ್.”

“ನಿಮ್ಮಿಂದ್ಲೆ ಕಂಡ್ರಿ ಹಿಂಗಾಗಿದ್ದು, ದಿನ ಬರದು ಬರದು ಮಡಗಿದ್ರಿ. ಈಗೇನು ಬರಿತಿರಿ?”

“ಭವಾನಿಯಕ್ಕನಿಗೆ ಟಿಕೆಟ್ ಸಿಗಲಿಲ್ಲ ಅಂತ ಬೇಜಾರಾಯ್ತ ಸಾ?”

“ಆಗದಿಲವೇನ್ರಿ? ನನ್ನಂಥೋನಿಗೇ ಅಳು ಬತ್ತದೆ.”

“ಅಳು ಅದಿಮಿಕ್ಕಬಾರ್ದು ಸಾ, ಮನಸೋಯಿಚ್ಚೆ ಅತ್ತಬುಡಬೇಕು.”

“ಜನ ಏನಂತರ್ರೀ.. ನೀವೇಳಿದಂಗೆ ಅಳಕ್ಕಾಯ್ತದ?”

ಇದನ್ನೂ ಓದಿ: “ಸುದೀಪನೂ ನಲವತ್ತು ಪರಸೆಂಟಾದ ಅಂತಾರಲ್ಲಾ ಸಾರ್”

“ಸಾರ್ ಭವಾನಿಯಕ್ಕ ಒಳ್ಳೆ ಆಡಳಿತಗಾರ್ತಿ. ನಿಜಕ್ಕೂ ಆ ಭವಾನಿದೇವಿಯಂಗೆ ಕಾಣ್ತರೆ. ಕುಮಾರಣ್ಣನ ಹೆಂಡ್ತಿ ಶಾಸಕರಾಗಬಹುದು, ಅದೇ ಭವಾನಿಯಕ್ಕ ಆಗಕ್ಕಾಗಲ್ಲ ಅಂದ್ರೆ ಇದ್ಯಾವ ನ್ಯಾಯ ಸಾ?”

“ನಾನು ನಿಮ್ಮಂಗೆ ಕೇಳಿದೆ ಕಂಡ್ರಿ, ಆದ್ರೆ ಕುಮಾರ ಹಟಹಿಡಿದುಬುಟ್ಟ. ಪ್ರಕಾಸ ಅಂತ ಹಾಸನದ ಎಮ್ಮೆಲ್ಲೆ ಇದ್ದ ನೋಡು, ಅವುಂದು ಕುಮಾರಂದು ಏನೂ ಯವಾರಿತ್ತಂತೆ, ಅವುನು ಸತ್ತೋದ, ಆ ರುಣ ತೀರಿಸಕ್ಕೆ ಅವುನ ಮಗನಿಗೇ ಟಿಕೆಟ್ ಕೊಟ್ಟ. ನಾವೇನು ಮಾಡಕಾಯ್ತದೆ. ನಾನೆ ಪಾರ್ಟಿ ಪ್ರಸಿಡೆಂಟಾಗಿದ್ರೆ ಮದ್ಲು ಭವಾನಿಗೆ ಟಿಕೆಟ್ ಕೊಟ್ಟು ಅಮ್ಯಾಲೆ ಉಳದೋರಿಗೆ ಕೊಡತ್ತಿದ್ದೆ.”

“ಈ ವಿಷಯದಲ್ಲಿ ದೇವೇಗೌಡ್ರು ನಿಮ್ಮ ಪರ ಇರಲಿಲ್ವ ಸಾ?”

“ಇದ್ರು ಕಂಡ್ರೀ. ಪಾಪ ಅವುರ ತಾನೆ ಏನು ಮಾಡ್ಯಾರು, ಕುಂತು ಬುಟ್ಟವುರೆ. ಮದ್ಲಿನಂಗಿದ್ರೆ ಬುಡತಿದ್ವ ನಾವೂ”

“ಅದು ಪತ್ತೆ ಆಯ್ತ ಸಾ?”

“ಯಾವುದ್ರಿ?”

“ದೇವೇಗೌಡ್ರ ಮ್ಯಾಲೆ ಯಾವುದೋ ಕ್ಯಟ್ಟ ಕಣ್ಣು ಬಿದ್ದಿದೆ ಅಂತ ಕುಮಾರಣ್ಣ ಅತ್ತರಲ್ಲ, ಅದು ಸಾರ್.”

“ಈ ಎಲಕ್ಸನ್ ಗಲಾಟಿಲಿ ಅದ ಯಾರೂ ಅಂತ ಕಂಡಿರಲಿಲ್ಲ ಕಂಡ್ರಿ.”

ರೇವಣ್ಣ

“ಅಂಜನ ಹಾಕಿ ನೋಡಿದ್ರೆ ಗೊತ್ತಾಗದು ಸಾ. ಉಡುಪಿ ಕಡೆ ಬನ್ನಂಜೆ ಗೋವಿಂದಾಚಾರಿ ಅಂತ ಇದ್ದರು. ಅವುರ ಮನೆಲಿ ಒಂದು ಪುಸ್ತಕ ಕಳೆದೋಗಿತ್ತಂತೆ, ಅಂಜನ ಹಾಕಿ ನೋಡಿದಾಗ ಅದಿದ್ದ ಜಾಗ ಕಾಣತಂತೆ. ಅಂಗೆ ನೀವೂ ಅಂಜನ ಹಾಕಬೇಕಾಗಿತ್ತು.”

“ಅಂಗೈ ಹುಣ್ಣಿಗೆ ಕನ್ನಡಿ ಬೇಕೇನ್ರಿ! ನಮ್ಮಪ್ಪನಿಗೆ ಏನು ವಸಿ ಜನ ಆಗದೋರಿದ್ದರೆ, ದೇವರು ನಮ್ಮಪ್ಪ ಕಡೆ ಇದ್ದಿದ್ರಿಂದ ಅವುರೆಲ್ಲ ತೀರೋದ್ರು. ನಮ್ಮಪ್ಪ ಇನ್ನು ಗಟ್ಟಿ ಮುಟ್ಟಾಗವುರೆ.”

“ಗಟ್ಟಿ ಜೀವ ಸಾರ್ ಅದು, ಪುನಃ ತನ್ನ ಕುಟುಂಬನ ಕರ್ನಾಟಕದ ಸಿಂಹಾಸನದ ಮೇಲೆ ಕೂರಿಸೆ ಹೋಗದದು.”

“ನಮ್ಮಾಸೆನೂ ಅದೆ ಅಲವೇನ್ರಿ! ಕುಮಾರ ಮತ್ತೆ ಮುಖ್ಯಮಂತ್ರಿ ಆಗಬೇಕು, ನಾನು ಪಿಡಬ್ಲುಡಿ ಮಂತ್ರಿ ಆಗಬೇಕು ಅಂತ ಹೋರಾಡ್ತಯಿರದು.”

“ಜೊತೆಗೆ ಇಂಧನ ಖಾತೆ, ಕೆಎಂಎಫ್‌ನೂ ನೀವೇ ವಹಿಸಿಕೋಬೇಕು ಸಾರ್. ಯಾವುದೇ ಖಾತೆ ಕೊಟ್ರು ಚನ್ನಾಗಿ ನಿಭಾಯಿಸ್ತಿರಿ ನೀವು. ಆ ಶಕ್ತಿ ಇವತ್ತು ಯಾವನಿಗೂ ಇಲ್ಲ.”

“ಅಲ್ಲ ಕಂಡ್ರೀ ನಾನು ಪಿಡಬ್ಲುಡಿ ಮಂತ್ರಿಯಾಗಿದ್ದಾಗ ಬೆಂಗಳೂರು ರೋಡು ಯಂಗಿದ್ದೋ.. ಒಂದೆಒಂದು ಬಟನ್ನು (ಗುಂಡಿ) ರಸ್ತೆಲಿ ಕಾಣತಿರಲಿಲ್ಲ. ಈ ಬಿಜೆಪಿಗಳು ಬಂದು ರೋಡು ತುಂಬ ಬರೀ ಬಟನ್ನಗಳೇಯ. ಪಾರ್ಟಿ ಪರಸೆಂಟು ಅಂದ್ರೆ ಯಾವು ರೋಡು ಚನ್ನಾಗಿರತವುರಿ?”

“ನೀವು ಪುನಃ ಮಂತ್ರಿಯಾಗಿ ಪಿಡಬ್ಲುಡಿ, ಇಂಧನ ಖಾತೆ ಮತ್ತು ಕೆಎಂಎಫ್ ಪಡಕೋಬೇಕು ಸಾರ್. ಅಂಗೆ ಭವಾನಿಯಕ್ಕನ್ನ ಎಮ್ಮೆಲ್ಸಿ ಮಾಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮಾಡಬೇಕು ಸಾ.”

“ಆದ್ಕೆ ನಿಮಗೆ ತಲೆಯಿಲ್ಲ ಅನ್ನದು.”

“ಯಾಕ್ ಸಾ?”

“ಅಲ್ಲಕಂಡ್ರಿ ಅವುಳು ಜಿಲ್ಲಾ ಪಂಚಾಯ್ತಿ ಆಡಳಿತ ಮಾಡುವಾಗಲ್ವಾ, ಇಸುಗೂಲುಡುಗ್ರು ವಳ್ಳೆ ನಂಬರ್ ತಗಂಡಿದ್ದೂ, ಆದ್ಕೆ ಎಜುಕೇಶನ್ ಮಂತ್ರಿ ಮಾಡನ ಅಂತ ಇದ್ದಿನಿ. ಆ ಮಹಿಳೆ ಮಕ್ಕಳು ಕಲ್ಯಾಣ ಇಲಾಖೆ ಯಾರಿಗೆ ಬೇಕ್ರಿ?”

“ಥೂತ್ತೇರಿ.”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...