Homeಅಂಕಣಗಳು"ಸುದೀಪನೂ ನಲವತ್ತು ಪರಸೆಂಟಾದ ಅಂತಾರಲ್ಲಾ ಸಾರ್"

“ಸುದೀಪನೂ ನಲವತ್ತು ಪರಸೆಂಟಾದ ಅಂತಾರಲ್ಲಾ ಸಾರ್”

- Advertisement -
- Advertisement -

ಬಿಜೆಪಿಯಲ್ಲಿ ಮತದಾರರಿಗೆ ತೋರಿಸಲು ಯೋಗ್ಯವಾದಂತಹ ಮುಸುಡಿ ಯಾವುದು ಇಲ್ಲವೆಂದು ಗ್ರಹಿಸಿದ ಬೊಮ್ಮಾಯಿ ನಮ್ಮ ಸರೋವರದ ಸಂಜೀವಣ್ಣನ ಮಗನಾದ ಸುದೀಪನನ್ನು ಗೋಗರೆದು ಎಳೆದು ತಂದಿದ್ದಾರಲ್ಲಾ. ತನ್ನ ಮಾತುಕತೆ ಮತ್ತು ಒಂದಿಷ್ಟು ಅಭಿನಯದಿಂದ ಜನಮನ ಸೆಳೆದಿದ್ದ ಸುದೀಪ್‌ನನ್ನು ಮಾತನಾಡಿಸಬೇಕೆನಿಸಿತು. ಫೋನ್ ಮಾಡಲಾಗಿ ರಿಂಗಾಯ್ತು ರಿಂಗ್ ಟೋನ್: “ಎಲ್ಲ ಮಾಯಾ ನಾವು ಮಾಯಾ ಎಲ್ಲ ಮಾ…”

“ಹಲೋ ಯಾರು?”

“ನಾನು ಸಾರ್ ನಿಮ್ಮ ಅಭಿಮಾನಿ ಯಾಹು.”

“ಯಾಹು ಅಂದ್ರ್ಯಾರು?”

“ಅದೆ ಸಾರ್, ಸಿರ್ಸಿ ಅತ್ರ ಮಾತಾಡ್ ಮಾತಾಡ್ ಮಲ್ಲಿಗೆ ಶೂಟಿಂಗ್ ನ್ಯಡಿವಾಗ ಪರಿಚಯಾದೆ. ನಿಮ್ಮ ಹೋಟ್ಲಲ್ಲಿ ಕುಡುದೂ ಕುಡುದು ಲಾಸಾದೆ ಅಂತ ನಿಮಗೆ ಮುಜುಗರ ಮಾಡಿದ್ನಲ್ಲಾ..”

“ಓ ಗೊತ್ತಾಯ್ತು ಬುಡಿ, ಹೇಗಿದ್ದೀರಿ?”

“ಹಾಗೆ ಇದ್ದಿನಿ, ನೀವ್ಯಾಕ್ ಸಾರ್ ಹಿಂಗಾದ್ರಿ?”

“ನಾನೇನಾಗಿದ್ದಿನಿ?”

“ಹೋಗಿ ಹೋಗಿ ಬಿಜೆಪಿ ಸೇರಿದ್ರಲ್ಲ ಸಾರ್?”

“ಬಿಜೆಪಿ ಸೇರಿಲ್ಲ. ನಮ್ಮ ಮಾಮನಿಗೆ ಕ್ಯಾನ್‌ವಾಸ್ ಮಾಡ್ತಿನಿ.”

“ಆ ನಿಮ್ಮ ಮಾಮ ಅಂದ್ರೆ ಯಾರು ಸಾರ್?”

“ಬೊಮ್ಮಾಯಿ.”

“ಅವರು ಬೇರೆ ಜಾತಿ, ನೀವು ಬೇರೆ ಜಾತಿ ಅಲ್ಲವಾ?”

“ಅವರು ನಮ್ಮ ಮಾವ ಆಗಿ ಹುಟ್ಟಬೇಕಾಗಿತ್ತು. ಮಿಸ್ಸಾದ್ರು ಆದ್ರು ನಮಗೆ ಮಾಮ.”

“ಯಾಕೊ ಈ ಸಂಬಂಧನೇ ಅಸಂಬದ್ಧವಾಗಿ ಕಾಣ್ತಾ ಅದೆ.”

“ವಿಶಾಲ ಮನಸ್ಸಿನಿಂದ ನೋಡಿ ಯಲ್ಲ ಸರಿಕಾಣ್ತದೆ.”

“ನಿಜ ಸಾರ್ ನೀವು ಬಿಗ್‌ಬಾಸಲ್ಲಿ ಕಾಣಿಸಿಕೊಂಡು ಮಾತಾಡದನ್ನ ಕೇಳಿದ್ರೆ ಈ ಮನುಷ್ಯನ ಮನಸ್ಸು ಎಷ್ಟು ವಿಶಾಲ ಅನ್ಸದು, ಆದ್ರೀಗೇನಾಯ್ತು ನೋಡಿ ಸಾ..”

“ಈಗೇನಾಗಿದೆ?”

“ನೀವು ಇಷ್ಟು ವರ್ಷ ಮಾಡಿದ್ದು ಮಾತಾಡಿದ್ದು ಯಲ್ಲ ಬಿಜೆಪಿ ಚರಂಡಿಲಿ ಕೊಚಗಂಡೋದಂಗಾಯ್ತು ಸಾರ್.”

“ಬಿಜೆಪಿನ ಚರಂಡಿ ಅಂತೀರಲ್ರೀ?”

“ಹೌದು ಸಾರ್ ಆ ಪಾರ್ಟಿ ಜನಕ್ಕೆ ಮುಸಲ್ಮಾನರನ್ನ ಕಂಡ್ರಾಗಲ್ಲ, ದಲಿತ್ರನ್ನ ಕಂಡ್ರಾಗಲ್ಲ, ಬಡವರನ್ನ ಕಂಡ್ರಾಗಲ್ಲ, ಸಾಹಿತಿಗಳನ್ನ ಕಂಡ್ರಾಗಲ್ಲ, ನಾಟಕ ಕಂಡ್ರಾಗಲ್ಲ, ಸಂಗೀತ ಕಂಡ್ರಾಗಲ್ಲ, ನಿಮ್ಮ ಮಕ್ಕಳು ಹಾಕೋ ಬಟ್ಟೆ ಕಂಡ್ರಾಗಲ್ಲ, ನಿಮ್ಮ ಮನೆ ಹೆಂಗಸರು ಕುಂಕುಮ ಇಡದೇಯಿದ್ರಾಗಲ್ಲ, ಅವುರೊಂಥರ ಬಗ್ಗೆ ಹೇಳಕ್ಕೆ ಈ ಪದ ಸಾಲಲ್ಲ ಸರ್. ಹೊಸ ಪದನೆ ಹುಡುಕಬೇಕು.”

ಇದನ್ನೂ ಓದಿ: ಸಾಚಾರ್ ವರದಿಯ ನಂತರವೂ ಇದ್ದ ನಾಲ್ಕು ಪರಸೆಂಟ್ ಮೀಸಲಾತಿ ಕಿತ್ತುಕೊಂಡರಲ್ಲಾ

“ನನಿಗೇನು ಅಂಗೆ ಕಾಣಲ್ಲ.”

“ಕಂಡಿದ್ರೆ ನೀವ್ಯಾಕೆ ಸಾರ್ ಬಿಜೆಪಿಗೊಯ್ತಿದ್ರಿ?”

“ಪುನಃ ಅದ್ನೆ ಹೇಳ್ತಿರಲ್ರಿ, ನಾನು ಬಿಜೆಪಿಗೋಗಿಲ್ಲ.”

“ಹೋಗದೆಯಿದ್ರು ನಿಮ್ಮ ಮಾಮನ ಜೊತೆ ನಿಂತಿದ್ದಿರಲ್ಲಾ?”

“ಹೌದು ನಮ್ಮ ಮಾವ ಅಂಗಲ್ಲ.”

“ನಿಮ್ಮ ಮಾವನ ಆಡಳಿತದಲ್ಲಿ ಏನಾಯ್ತು ಗೊತ್ತ ಸಾರ್?”

“ಏನಾಯ್ತು?”

“ಮುಸಲ್ಮಾನ ಹುಡುಗಿಯರ ಹಿಜಾಬ್ ಕಿತ್ರು, ಮುಸ್ಲಿಮರು ಹಣ್ಣು ಮಾರ್ತಾ ಯಿದ್ರೆ ಅಂಗಡಿನೆ ಉಡಾಯಿಸಿದ್ರು, ಹಣ್ಣು ಬೀದಿಗೆ ಚೆಲ್ಲಿ ತುಳುದ್ರು. ದನನಾ ಸಾಗುಸ್ತ ಅವರೆ ಅಂತ ಮುಸ್ಲಿಂ ಹುಡುಗನ್ನ ಹೊಡದ್ರು, ಅವುನು ಸೊಂಟ ಮುರುಕೊಂಡು ಕುಂತಲ್ಲೇ ಅವುನೆ. ಮೊನ್ನೆ ಕನಕಪುರದತ್ರ ಇದ್ರಿಷ್‌ನ ಕೊಲೆ ಆಯತು. ದೇವಸ್ಥಾನದತ್ರ ಮುಸ್ಲಿಮರು ಅಂಗಡಿ ಹಾಕದಂಗೆ ಮಾಡಿದ್ರು. ನಿಮ್ಮ ಹೋಟ್ಲಿರೋ ಶಿವಮೊಗ್ಗದಲ್ಲಿ 144 ಸೆಕ್ಷೆನ್ನಿದ್ರು ಈಶ್ವರಪ್ಪ ಮೆರವಣಿಗೆ ತೆಗೆದು ಮುಸಲ್ಮಾನರ ಕೇರಿಗೆ ನುಗ್ಗಿದರು. ಅವರ ಮನೆ ಲೂಟಿಯಾಗಂಗೆ ಮಾಡಿದ್ರು, ಟಿವಿ, ಪ್ರಿಜ್ಜು, ಪಾತ್ರೆ ಹರಡಿ ಬೀದಿಗಾಕಿದ್ರು. ಇದಕ್ಕೆ ಸಾಕ್ಷಿಯಾಗಿ ಎಂ.ಪಿ, ಡಿ.ಸಿ, ತಹಸೀಲ್ದಾರರೂ ಇದ್ರು. ಇದು ನಡೆದದ್ದು ಬೊಮ್ಮಾಯಿ ಅಂದ್ರೆ ನಿಮ್ಮ ಮಾವ ಮುಖ್ಯಮಂತ್ರಿಯಾಗಿದ್ದಾಗಿ ಸಾರ್. ಹಿಂಗಾಯ್ತಂತಲ್ಲಾ ಅಂತ ನಿಮ್ಮ ಮಾವನ್ನ ಕೇಳಿ; ಅದಕೇನಂತರೆ ಗೊತ್ತ? ಆಕ್ಷನ್‌ಗೆ ರಿಯಾಕ್ಷನ್ ಸಹಜ ಅಂತರೆ.”

“ಅದು ಸಹಜ ಅಲ್ಲವಾ.”

“ಪ್ರಚೋದನೆ ತಪ್ಪಲ್ಲವೇ? ನಿಮ್ಮನ್ನೆ ಒಬ್ಬ ಪತ್ರಕರ್ತ ಪದೇಪದೆ ಟೀಕೆ ಮಾಡಿದಾಗ ನೀವೇನಂದಿದ್ರೀ?”

“ಮರತೋಗಿದೆ..”

“ಬಿಜೆಪಿ ಸೇರಿದ ಮೇಲೆ ಮರಿಬೇಕಾಗುತ್ತೆ. ಆ ಪತ್ರಕರ್ತ ಹೀಗೆ ಬರೀತಿದ್ರೆ ನಾನು ಸುಮ್ಮನಿರಕ್ಕಾಗಲ್ಲ ಅಂದಿದ್ರಿ.”

“ಹೌದು ಆಗ ನನ್ನ ಸೈರಣೆ ಹಾಳಾಗಿತ್ತು.”

“ಸೈರಣೆ ಹಾಳಾದಾಗ ಸಂಭವಿಸೊ ಆಕ್ಷನ್‌ಗೆ ಯಾರು ಕಾರಣ ಸಾರ್? ಅದೆ ನಿಮ್ಮ ಮಾವನಿಗೆ ಗೊತ್ತಿಲ್ಲ, ಇರ್ಲಿ ಅಂತೂ ನಿಮಗೆ ನೀವೇ ಹಿನ್ನಡೆ ತಂದುಕೊಂಡ್ರಿ.”

“ಇದು ಹಿನ್ನಡೆ ಹೇಗ್ರಿ? ಒಂಥರದ ಮುನ್ನಡೆ.”

“ಇಲ್ಲ ಸಾರ್, ಕಾಗೆ ಸ್ನೇಹ ಮಾಡಿ ಗರುಡ ಪಕ್ಷಿ ಹಾಳಾಯ್ತು ಅನ್ನೋ ಗಾದೆ ಹಾಂಗೆ, ಸುದೀಪನ ವ್ಯಕ್ತಿತ್ವನೆ ಹಾಳಾಯ್ತು.”

“ಸುಮಲತಾರ ಚುನಾವಣೆ ಪ್ರಚಾರಕ್ಕೆ ದರ್ಶನ್, ಯಶ್ ಹೋಗಿರಲಿಲ್ವ?”

“ಕೊನೆಪಕ್ಷ ಸುಮಲತ ಪಕ್ಷೇತರವಾಗಿದ್ರು, ಅದರಲ್ಲೂ ಮಹಿಳೆ. ಅವರ ವಿರುದ್ಧ ಎರಡು ಪಾರ್ಟಿ ಒಂದಾಗಿದ್ದೋ. ಮಂಡ್ಯದಲ್ಲಿ ಸೆರೆಗೊಡ್ಡಿ ನಿಂತ ಆಕೆಯ ಸಹಾಯಕ್ಕೆ ಹೋಗಿದ್ದುದು ಮಾನವೀಯ ನಡವಳಿಕೆ. ಆಗ ನೀವು ದೂರ ಇದ್ರಿ.”

“ಅದಕ್ಕೆ ಬೇರೇ ಕಾರಣ ಇದೆ.”

“ಅವು ನಮಗೆ ಗೊತ್ತಾಗಲಿಲ್ಲ. ಅಂಬರೀಶು ಸರೋವರ ಸಂಜೀವಣ್ಣನಿಗೆ ಮಾಡಿದ ಉಪಕಾರಕ್ಕೆ ಸಂಜೀವಣ್ಣ ಚುನಾವಣಾ ಪ್ರಚಾರಕ್ಕೆ ಹೋಗಲಿಲ್ಲ. ಮೊಯ್ಲಿಯವರು ಭಾರಿ ಉಪಕಾರ ಮಾಡಿದ್ರಂತೆ, ಆದ್ರು ಅವರ ಚುನಾವಣೆ ಪ್ರಚಾರಕೆ ಸಂಜೀವಣ್ಣ ಹೋಗಲಿಲ್ಲ”

“ನಮ್ಮಪ್ಪ ನನ್ನಂಗೆ ಸ್ಟಾರ್ ನಟ ಅಲ್ಲ”

“ನೀವು ಸ್ಟಾರ್ ನಟ ಅಲ್ಲ ಸಾರ್. ನನಿಗೇನೋ ಬಿಜಿನೆಸ್ ಮ್ಯಾನ್ ತರ ಕಾಣ್ತಿರಿ. ನಟನೆ ಸೀರಿಯಸ್ಸಾಗಿ ತಗಂಡಂಗೆ ಕಾಣ್ತಯಿಲ್ಲ. ನಿಮ್ಮ ಮಾವ ನಿಮಗೆ ಸಹಾಯ ಮಾಡಿದ್ರೆ ಅದನ್ನ ವಾಪಸ್ ಮಾಡಿ, ಅದು ಬಿಟ್ಟು ನಿಮ್ಮ ವ್ಯಕ್ತಿತ್ವನೆ ನಾಶ ಮಾಡಿಕಂಡ್ರಲ್ಲ ಸಾರ್?”

“ವ್ಯಕ್ತಿತ್ವನ ನಾಶ ಆಗೋ ಅಂತದ್ದೇನಾಗಿದೇರಿ? ಸುಮ್ಮನೆ ಏನೇನೋ ಮಾತಾಡಬೇಡಿ..”

“ದೇವರಾಣೆ ನಾನು ಏನೇನೂ ಮಾತಾಡ್ತಯಿಲ್ಲ ಸಾರ್. ನಿಮ್ಮ ವಿಷಯದಲ್ಲಿ ಕಂಡಿದ್ನ ಹೇಳ್ತ ಯಿದಿನಿ. ಸಿನಿಮಾದಲ್ಲಿ ನಿಮ್ಮ ವಿಶೇಷ ಪ್ರತಿಭೆ ತೋರದೆಯಿದ್ರೂ ಬಿಗ್‌ಬಾಸಲ್ಲಿ ನೀವಾಡುತಿದ್ದ ಮಾತು, ತಿಕ್ಕಲ ಜನಗಳನ್ನೆಲ್ಲಾ ನೀವು ನಿಭಾಯಿಸುತಿದ್ದ ರೀತಿಗೆ ನಮ್ಮ ಜನ ನಿಮ್ಮನ್ನ ಮೆಚ್ಚಿಗಂಡಿದ್ರು. ಈಗ ಬಿಜೆಪಿ ಮಾಡಿರೋ ಎಲ್ಲಾ ಅನಾಹುತನೂ ನಿಮ್ಮ ತಲೆಗೆ ಕಟ್ಟಿ, ನೀವು ಟಿವಿ ಪರದೆ ಮೇಲೆ ಬಂದಾಗ, ಬಂದಾ ಇವುನೊಬ್ಬ ಅಂತರೆ ಜೆಡಿಎಸ್‌ನವರು, ಕಾಂಗ್ರೆಸ್ಸಿನವರು, ಎಎಪಿಗಳು ಇನ್ನು ಯಾರ್‍ಯಾರೋ ನಿಮ್ಮ ಮನಸ್ಥಿತಿಗೆ ಮರುಗಿ ಟಿವಿ ಆಫ್ ಮಾಡಬಹುದು. ಟಿವಿ ಒಂಥರ ನಮ್ಮ ಜನಗಳ ಮುಗ್ಧ ಮನಸ್ಸಿನ ಪರದೆ. ಅಲ್ಲಿ ಜನಮನ ಗೆದ್ದ ನೀವು ಮುಂದೆ ಒಬ್ಬ ಈಶ್ವರಪ್ಪನಂಗೆ ಕಾಣಬಹುದು. ರೇಣುಕಾಚಾರಿ, ಸಿ.ಟಿ ರವಿ, ಅಶ್ವತ್ಥನಾರಾಯಣ, ಮಾಡಾಳು ಮಗನಂಗೂ ಕಾಣಬಹುದು. ಜಾತ್ಯತೀತವಾಗಿ ಜನಸಮೂಹವನ್ನ ಆವರಿಸೊ ಸಿನಿಮಾ ಟಿವಿ ಪರದೆಯಲ್ಲಿ ಕಾಣಿಸಿಗಳೂ ಕಲಾವಿದರು ಜಾತ್ಯತೀತವಾಗಿ ಬದುಕೋದು ಒಳ್ಳೆದು. ಜಾತ್ಯತೀತವಾಗಿ ಬದುಕೋದು ಕಷ್ಟವಾದೋರು ಬಿಜೆಪಿ ಸೇರತರೆ. ಅಲ್ಲಿಗೆ ಅವರ ಅವಸಾನ ಆರಂಭವಾದಂಗೆ. ನಿಮ್ಮ ಕತೆನೂ ಅಂಗೇ ಆಗಬಹುದು ಅಂತ ನನ್ನ ಅನುಮಾನ.”

“ಅಂಗೇನೂ ಆಗಲ್ಲ ಕಂಡ್ರಿ, ಬಿಜೆಪಿಲೂ ನಾನು ಹೀರೊ ಆಯ್ತಿನಿ.”

“ಥೂತ್ತೇರಿ.”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಧಾರವಾಡ | ಪ್ರಕಾಶ್ ರಾಜ್ ಭಾಗವಹಿಸಿದ್ದ ಸಮುದಾಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನ : ದೂರು ದಾಖಲು

ಭಾನುವಾರ (ಆ.30) ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾ ಭವನದಲ್ಲಿ ಆಯೋಜಿಸಿದ್ದ ಸಮುದಾಯ ಸಂಘಟನೆಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನಿಸಿ ಗಲಾಟೆ ಎಬ್ಬಿಸಿದ ಬಿಜೆಪಿ-ಸಂಘಪರಿವಾರದ ಬೆಂಬಲಿಗರ ವಿರುದ್ಧ ದೂರು ದಾಖಲಿಸಲಾಗಿದೆ. ಸಮುದಾಯ ಸಂಘಟನೆಯ ಧಾರವಾಡದ...

ಚಲಿಸುತ್ತಿದ್ದ ಸ್ಲೀಪರ್ ಬಸ್‌ನಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ : ಚಾಲಕ, ಕಂಡಕ್ಟರ್ ಬಂಧನ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 2012ರಲ್ಲಿ ನಡೆದ ನಿರ್ಭಯಾ ಪ್ರಕರಣವನ್ನು ನೆನಪಿಸುವಂತಹ ಆಘಾತಕಾರಿ ಘಟನೆಯೊಂದು ನಡೆದಿದೆ. ಸ್ಲೀಪರ್‌ ಬಸ್‌ನಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. indiatoday.in ವರದಿಯ ಪ್ರಕಾರ, ಈ ಘಟನೆಯು ಆಗಸ್ಟ್ 4ರ...

ಜಗತ್ತಿನ ಪ್ರತಿಯೊಬ್ಬರಿಗೂ ಲ್ಯಾಪ್‌ಟಾಪ್ ಕೊಳ್ಳುವಷ್ಟು ಕಪ್ಪು ಹಣ ಪ್ರಪಂಚದಲ್ಲಿದೆ: ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್

ಅಕ್ರಮ ಹಣ ವರ್ಗಾವಣೆ (Money Laundering) ಮತ್ತು 'ಡಿಜಿಟಲ್ ಅರೆಸ್ಟ್' ನಂತಹ ಆನ್‌ಲೈನ್ ವಂಚನೆಗಳ ಪ್ರಮಾಣದ ಕುರಿತು ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಈ ರೀತಿಯ...

ಪೆಟ್ರೋಲ್‌ನಲ್ಲಿ ಎಥನಾಲ್ ಪ್ರಮಾಣ ಬಹಿರಂಗಪಡಿಸುವಂತೆ ಕೋರಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಪೆಟ್ರೋಲ್‌ನಲ್ಲಿ ಬೆರೆಸಲಾಗುವ ಎಥನಾಲ್ ಪ್ರಮಾಣವನ್ನು ಕಡ್ಡಾಯವಾಗಿ ನಮೂದಿಸಬೇಕು ಮತ್ತು ವಾಹನಗಳಿಗೆ ಎಥನಾಲ್ ಮಿಶ್ರಿತ ಇಂಧನದ ಹೊಂದಾಣಿಕೆಯ ಬಗ್ಗೆ ಹೆಚ್ಚಿನ ಪಾರದರ್ಶಕತೆ ತರಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ವಿಚಾರಣೆ...

ದೆಹಲಿ| ಜಮಾ ಮಸೀದಿ ಸುತ್ತಮುತ್ತಲಿನ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಿದ ಎಂಸಿಡಿ

ದೆಹಲಿ ಹೈಕೋರ್ಟ್ ನಿರ್ದೇಶನದಂತೆ, ಮೊಘಲರ ಕಾಲದ ಐತಿಹಾಸಿಕ ಜಮಾ ಮಸೀದಿ ಸುತ್ತಮುತ್ತಲಿನ ಅಕ್ರಮ ನಿರ್ಮಾಣಗಳನ್ನು ಸಮೀಕ್ಷೆ ಮಾಡಿ, ಒತ್ತುವರಿಯನ್ನು ತೆರವುಗೊಳಿಸುವ ಬೃಹತ್ ಕಾರ್ಯಾಚರಣೆಯನ್ನು ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಸೋಮವಾರ (ಆ.31) ಪ್ರಾರಂಭಿಸಿದೆ...

ವೆನೆಜುವೆಲಾ ಮತ್ತೆ ಎದ್ದು ನಿಲ್ಲಲಿದೆ: ಬಂಧನದಲ್ಲಿರುವ ವೆನೆಜುವೆಲಾ ಮಾಜಿ ಅಧ್ಯಕ್ಷ ಮಡುರೊ ಮೊದಲ ಫೋಟೋ ಹಂಚಿಕೆ

ಜನವರಿಯಲ್ಲಿ ಅಮೆರಿಕ ಪಡೆಗಳಿಂದ ಬಂಧನಕ್ಕೊಳಗಾಗಿದ್ದ ವೆನೆಜುವೆಲಾದ ಮಾಜಿ ಅಧ್ಯಕ್ಷ ನಿಕೋಲಸ್ ಮಡುರೊ, ಅಮೆರಿಕದ ಬಂಧನ ಕೇಂದ್ರದಿಂದ ತಮ್ಮ ಎರಡು ಛಾಯಾಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಬಂಧನದ ಬಳಿಕ ಮಡುರೊ ಅವರ ಫೋಟೋಗಳು ಹೊರಬಂದಿರುವುದು...

‘ಮಹಿಳೆಯರು ಆಭರಣದಂತೆ ಮನೆಯಲ್ಲೇ ಇರಬೇಕು’ ಮುಸ್ಲಿಂ ಧರ್ಮಗುರು ವಿವಾದಾತ್ಮಕ ಹೇಳಿಕೆ

ಮಹಿಳೆಯರು ಮನೆಯಲ್ಲೇ ಇರಬೇಕು ಮತ್ತು ಸಾರ್ವಜನಿಕ ಕ್ಷೇತ್ರಕ್ಕೆ ಪ್ರವೇಶಿಸಬಾರದು ಎಂದು ಕೇರಳದ ಪ್ರಭಾವಿ ಮುಸ್ಲಿಂ ಧರ್ಮಗುರು ಶೇಖ್ ಅಬೂಬಕರ್ ಅಹ್ಮದ್ ನೀಡಿದ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ...

ಹಲ್ದ್ವಾನಿ ‘ಶುದ್ಧೀಕರಣ’ ವಿವಾದ : ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್

ಉತ್ತರಾಖಂಡದ ಹಲ್ದ್ವಾನಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ರ್‍ಯಾಲಿ ನಡೆದ ಸ್ಥಳದಲ್ಲಿ ಬಿಜೆಪಿ ಬೆಂಬಲಿಗರು 'ಶುದ್ಧೀಕರಣ' ನಡೆಸಿದ ವಿವಾದ ಹೊಸ ರಾಜಕೀಯ ಮತ್ತು ಕಾನೂನು ತಿರುವು ಪಡೆದುಕೊಂಡಿದೆ. ಜಾತಿ ನಿಂದನೆಗೆ ಸಂಬಂಧಿಸಿದಂತೆ...

ಜೈಲಿನಲ್ಲಿದ್ದ KPSC ಅಧ್ಯಕ್ಷರ ಭೇಟಿಯಾಗಿದ್ದೇಕೆ HDK? ಪ್ರಿಯಾಂಕ್ ಖರ್ಗೆ ಪ್ರಶ್ನೆ

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ನೇಮಕಾತಿ ವಿಚಾರವಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಕೇಳಿಬಂದಿರುವ ಗಂಭೀರ ಆರೋಪಗಳಿಗೆ ಅವರು ತಾರ್ಕಿಕ ಸ್ಪಷ್ಟನೆ ನೀಡುವ ಬದಲು, ಜಾರಿಕೊಳ್ಳುವ ರೀತಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ ಎಂದು...

ನೇಪಾಳ: ಶಿಕ್ಷಕನ ಸಮಯಪ್ರಜ್ಞೆಯಿಂದ ಉಳಿಯಿತು 1643 ಮಕ್ಕಳ ಪ್ರಾಣ

ನೇಪಾಳದ ರಸುವಾ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಜಲಪ್ರಳಯಕ್ಕೆ ಬಲಿಯಾದವರ ಸಂಖ್ಯೆ 700ರ ಗಡಿ ದಾಟಿದೆ. 2,000ಕ್ಕೂ ಹೆಚ್ಚು ಜನರು ಇಂದಿಗೂ ನಾಪತ್ತೆಯಾಗಿದ್ದು, ರಕ್ಷಣಾ ಪಡೆಗಳು ಅವಿಶ್ರಾಂತವಾಗಿ ಶೋಧ ಕಾರ್ಯ ನಡೆಸುತ್ತಿವೆ. ಪ್ರಕೃತಿ ತನ್ನ...