Homeಅಂಕಣಗಳುಶ್ರೀನಿವಾಸ್ ಪ್ರಸಾದ್‌ಗೆ ನಿರ್ಮಲಾ ನೀತಿ ಬೋಧೆ!

ಶ್ರೀನಿವಾಸ್ ಪ್ರಸಾದ್‌ಗೆ ನಿರ್ಮಲಾ ನೀತಿ ಬೋಧೆ!

- Advertisement -
- Advertisement -

ಆಡಳಿತ ಪಕ್ಷವೊಂದು ಸರಿಯಾಗಿ ಕೆಲಸ ಮಾಡಬೇಕಾದರೆ ಸಮರ್ಥ ವಿರೋಧ ಪಕ್ಷವೂ ಬೇಕಂತೆ. ಹಾಗಾಗಿ ಕರ್ನಾಟಕದಲ್ಲಿ ಸಮರ್ಥವಾಗಿಯೇ ಕೆಲಸ ಮಾಡುತ್ತಿದ್ದ ಕಾಂಗೈ ಪಾರ್ಟಿಯ ಯಾವ ಮಾತಿಗೂ ಕಿವಿಗೊಡದೆ ನಡೆದಿದ್ದ ಬಿಜೆಪಿ ಸರಕಾರ, ರಾಹುಲ್‌ಗಾಂಧಿ ಮಾಡುತ್ತಿರುವ ಜಾಥಕ್ಕೆ ಜನ ಮುತ್ತಿಗೊಳ್ಳುತ್ತಿರುವುದನ್ನು ನೋಡಿ ಗಾಬರಿಗೊಂಡು, ತನ್ನ ಮೀಸಲಾತಿ ವಿರೋಧವನ್ನು ಬದಿಗಿಟ್ಟು ಮೀಸಲಾತಿಯನ್ನು ಜಾರಿಗೆ ತಂದುಬಿಟ್ಟಿತಲ್ಲಾ. ಈ ಕ್ರಾಂತಿಕಾರಿ ತೀರ್ಮಾನದ ಹಿಂದಿರುವ ಹಿಕಮತ್ತೇನೆಂದರೆ ಈ ಮೀಸಲಾತಿ ಜಾರಿಗೆ ಮುನ್ನ ಸದನದಲ್ಲಿ ಚರ್ಚೆಯಾಗಬೇಕು; ಆ ನಂತರ ಲೋಕಸಭೆಗೂ ಸದರಿ ಮಸೂದೆ ಹೋಗಬೇಕು; ಆ ನಂತರ ರಾಷ್ಟ್ರಪತಿಯವರ ಅಂಕಿತಕ್ಕೆ ಕಾಯಬೇಕು; ಇದೆಲ್ಲಾ ಆಗುವುದರಲ್ಲಿ ಕರ್ನಾಟಕದ ಚುನಾವಣೆಯೇ ಮುಗಿದು ಲೋಕಸಭೆ ಚುನಾವಣೆಯೂ ಬರಬಹುದು. ಆದರೆ ಯಾವ ಸಾಧನೆಯನ್ನೂ ಮಾಡದೆ ಬರಿಗೈಲಿ ಚುನಾವಣೆಗೆ ಹೊರಟಿದ್ದ ಬಿಜೆಪಿ ಕೈಗೆ ಮೀಸಲಾತಿ ಸೌಟು ಸಿಕ್ಕಿದೆ. ಬಕೇಟು ಕೂಡ ಪೂರ್ತಿ ಖಾಲಿಯಿದೆ; ಉದ್ಯೋಗವನ್ನೇ ಸೃಷ್ಟಿಸದ ಖಾಲಿ ಹುದ್ದೆ ತುಂಬದ ಬಿಜೆಪಿ ಸಂಚಿಗೆ ದಲಿತರು ಮೋಸ ಹೋಗುತ್ತಾರೋ ಇಲ್ಲವೋ ಕಾದುನೋಡಬೇಕಂತಲ್ಲಾ, ಥೂತ್ತೇರಿ.

*****

ಬೊಮ್ಮಾಯಿ ಮೀಸಲಾತಿ ಬುಟ್ಟಿಗೆ ಕೈ ಹಾಕಿದ ಕೂಡಲೇ ಎಲ್ಲಾ ಜಾತಿಗಳು ಜೇನು ಬುಟ್ಟಿಯಿಂದ ಎದ್ದ ಜೇನುಹುಳುಗಳಂತೆ ಝೇಂಕಾರದ ಶಬ್ದ ಮಾಡುತ್ತ ಬೊಮ್ಮಾಯಿಯವರನ್ನು ಮುತ್ತಿಕೊಂಡವಲ್ಲಾ. ಈ ಮೊದಲು ಜನಾಂಗದ ಮುಖಂಡರಿದ್ದರೆ ಈಗ ಎಲ್ಲ ಜಾತಿಗಳಲ್ಲೂ ಸುಖ ಸಂತೋಷದ ಸುಪ್ಪತ್ತಿಗೆಯಲ್ಲಿರುವ ಜಗದ್ಗುರುಗಳೇ ಜಾತಿ ನಾಯಕರಾಗಿದ್ದಾರೆ. ಈ ಪೈಕಿ ಕರ್ನಾಟಕದ ಎರಡನೇ ದೊಡ್ಡ ಸಮುದಾಯವಾದ ಒಕ್ಕಲಿಗರ ಜಗದ್ಗುರು ನಿರ್ಮಲಾನಂದರು ಮೀಸಲಾತಿಗೆ ಕೈಯೊಡ್ಡಿ ನಮಗೆ ಕೊಡುವ ನಾಲ್ಕು ಪರಸೆಂಟು ಯಾತಕ್ಕೂ ಸಾಲುತ್ತಿಲ್ಲ ನಾವು ಹದಿನಾರು ಪರಸೆಂಟ್ ಇರುವುದರಿಂದ, ಅಷ್ಟೂ ಪರಸೆಂಟ್ ಮೀಸಲಾತಿ ಏನೂ ಬೇಡ, ಹನ್ನೆರಡು ಪರಸೆಂಟ್ ಕೊಡಿ; ಇಲ್ಲವಾದರೆ ಬೆಂಗಳೂರು ಸುತ್ತ ಭೂಮಿ ಮಾರಿಕೊಂಡು ಬೆಂಗಳೂರಿನ ಬಾರು ಕ್ಲಬ್ಬು ಹೋಟೆಲುಗಳಲ್ಲಿ ಕಳೆದುಹೋಗಿರುವ ಒಕ್ಕಲಿಗರನ್ನು ಒಟ್ಟಿಗೆ ಸೇರಿಸಿ ವಿಜಯನಗರದಿಂದ ಭೂಮಿ ಮಾರಿಕೊಂಡ ಜಾಗಕ್ಕೆ ಜಾಥ ತೆಗೆಯುತ್ತೇವೆ ಎಂದಿದ್ದಾರಲ್ಲಾ. ಬೆಂಗಳೂರು ಸುತ್ತಮುತ್ತ ಒಕ್ಕಲಿಗರು ಭೂಮಿ ಮಾರಿಕೊಂಡಿದ್ದಕ್ಕೆ ಕಾರಣ ಅಂದು ಮುಖ್ಯಮಂತ್ರಿಗಳಾಗಿದ್ದ ದೇವೇಗೌಡರು. ಭೂಮಿ ಮಾರಿಕೊಂಡ ಜನಾಂಗ ಮುಂದೇನು ಮಾಡಬೇಕೆಂಬ ಕಸುಬಿನ ಪಟ್ಟಿಯನ್ನ ಅವರೇ ತಯಾರಿಸಿ ಕೊಡಬೇಕಿತ್ತು, ಕೊಟ್ಟಿಲ್ಲ. ಅದೆಲ್ಲಕ್ಕಿಂತ ಮುಖ್ಯವಾಗಿ ನಿರ್ಮಲಾನಂದರು ಒಕ್ಕಲಿಗರ ಇತಿಹಾಸದ ಪಥ ಬಿಟ್ಟು ಉತ್ತರಪ್ರದೇಶದ ದಾರಿ ಹಿಡಿದಿದ್ದಾರೆ. ಉತ್ತರದ ಶಾ ಆದಿತ್ಯರು ಮೀಸಲಾತಿ ವಿರೋಧಿಗಳು. ನಿರ್ಮಲಾನಂದರು ಎಬ್ಬಿಸುವ ಮೀಸಲಾತಿ ಗಲಭೆ ತೀವ್ರಗೊಂಡು ಮೀಸಲಾತಿಯೇ ರದ್ದಾಗುವ ಅಪಾಯವನ್ನು ಬಿಜೆಪಿಗಳೇ ತಯಾರಿಸಿರಬಾರದೇಕೆ ಎಂದು ಶ್ರೀನಿವಾಸ್ ಪ್ರಸಾದರ ಕಡೆ ಜನ ಗುಮಾನಿ ಪಟ್ಟಿದ್ದಾರಂತಲ್ಲಾ, ಥೂತ್ತೇರಿ.

*****

ಅರ್ಧ ಶತಮಾನದ ಹಿಂದೆ ಮೈಸೂರು ಕಡೆಯಿಂದ ಮೇಲೆದ್ದು ಬಂದ ದಲಿತ ನಕ್ಷತ್ರ ಶ್ರೀನಿವಾಸ ಪ್ರಸಾದ್ 2024ರಿಂದ ನಿವೃತ್ತಿಯಾಗುತ್ತಾರಂತಲ್ಲಾ. ಹಾಗೆ ನೋಡಿದರೆ ಅವರು ನಿವೃತ್ತಿಯಾಗಿದ್ದುದು ಸಿದ್ದರಾಮಯ್ಯನ ಸಂಪುಟದಲ್ಲಿ ಸಚಿವರಾದಾಗಲೇ. ಬಹುಮುಖ್ಯವಾದ ರೆವಿನ್ಯೂ ಖಾತೆ ಪಡೆದು ರಗ್ಗು ಹೊದ್ದು ಮಲಗಿದ್ದನ್ನು ನೋಡಿದ ಸಿದ್ದು ಖಾತೆ ಬದಲಿಸಿದರು. ಸಿಟ್ಟುಗೊಂಡ ಶ್ರೀನಿವಾಸ್ ಎದ್ದುಹೋಗಿ ಬಿಜೆಪಿ ಕದ ಬಡಿದರು. ಅವರು ಕದಬಡಿಯುತ್ತಿದ್ದಾಗ ಉತ್ತರ ಕನ್ನಡದವನೊಬ್ಬ ’ನಾವು ಸಂವಿಧಾನ ಬದಲಿಸುತ್ತೇವೆ’ ಎಂದ ವಿಕೃತ ಮಾತು ಶ್ರೀನಿವಾಸರ ಕಿವಿಗೆ ಬೀಳಲೇಯಿಲ್ಲ. ಅವರು ರಾಜಕಾರಣಕ್ಕೆ ಬಂದಾಗ ದಲಿತರು ಗುಡಿಸಲಲ್ಲಿದ್ದು ಬಡತನದಲ್ಲಿದ್ದರಂತೆ ಈಗಲೂ ಹಾಗೇ ಇರುವುದನ್ನು ನೋಡಿ ಮೋದಿಯವರಿಗೆ ತಿಳಿಸಿದರಂತೆ; ಆಗ ಅಲ್ಲೇ ಇದ್ದ ನಿರ್ಮಲಾಸೀತಾರಾಂ ಕೂಡಲೇ ಸಾರ್ ಗುಡಿಸಲಲ್ಲಿರುವ ದಲಿತರು ಅದನ್ನು ಒಳ್ಳೆಮನೇಯಲ್ಲಿದ್ದೇವೆ ಅಂದುಕೊಂಡರಾಯ್ತು. ಇನ್ನ ನಮಗೆ ಬಡತನವೇಇಲ್ಲ; ಎಳೆ ಬಾಳೆದೆಲೆಯ ಮೇಲೆ ಈಗ ತಾನೆ ಸಣ್ಣಕ್ಕಿ ಅನ್ನವನ್ನು ಹುಳಿಯಲ್ಲಿ ಕಲೆಸಿ ತುಪ್ಪ ಹಾಕಿಕೊಂಡು ಚಪ್ಪರಿಸುತ್ತ ಹಪ್ಪಳ ಸೊಂಡಿಗೆ ಪತ್ರೊಡೆ ಕಡ್ಳೆ ಪಾಯಸದೊಂದಿಗೆ ಉಂಡಿದ್ದೇವೆ ಎಂದುಕೊಂಡರಾಯ್ತು ಸಾರ್, ನಮ್ಮ ಭಾವನೆಗಳೇ ಬದಲಾಗುತ್ತವೆ. ಈಚೆಗೆ ಬಿಜೆಪಿಗೆ ಬರುತ್ತಿರುವ ಬಡವರಿಗೆ ನಾವು ಹೀಗೆಯೇ ಹೇಳುತ್ತಿದ್ದೇವೆ ಎಂದರಂತಲ್ಲಾ, ಥೂ ಥೂ ಥೂತ್ತೇರಿ.


ಇದನ್ನೂ ಓದಿ: ಪೇಸಿಎಮ್ಮಲ್ಲೂ ಜಾತಿ ಬಂತಲ್ಲಾ, ನೋಡಿದಿರಾ..!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...