Homeಅಂಕಣಗಳುಭೈರಪ್ಪನವರ ಕೃತಿಗಳಿಗೆ ಒಳ್ಳೆ ವಿಮರ್ಶೆ ಬಂದಿಲ್ಲ!

ಭೈರಪ್ಪನವರ ಕೃತಿಗಳಿಗೆ ಒಳ್ಳೆ ವಿಮರ್ಶೆ ಬಂದಿಲ್ಲ!

- Advertisement -
- Advertisement -

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೀವಹತ್ಯೆಗಳು ನಡೆಯುತ್ತಿವೆ. ಪ್ರವೀಣ್ ಹತ್ಯೆ, ಭಯೋತ್ಪಾದನೆ ಬಳಸಿ ತಮ್ಮ ತಂಟೆಗೆ ಬರದಂತೆ ಎಚ್ಚರಿಸುವ ಹತ್ಯೆ ಅನ್ನುವುದಾದರೆ, ಪಾಝಿಲ್ ಹತ್ಯೆ ಪ್ರತೀಕಾರವಾಗಿ ಭಯೋತ್ಪಾದನಾ ಹತ್ಯೆಯಾಗಿಯೇ ಕಾಣುತ್ತಿದೆ. ಆದರೆ ಇವರಿಬ್ಬರೂ ಮನುಷ್ಯ ಜೀವಿಗಳು. ಈ ಹತ್ಯೆಯನ್ನು ಖಂಡಿಸುವುದರಲ್ಲಿ ತಾರತಮ್ಯ ಇರಬಾರದು. ಮನುಷ್ಯನ ಜೀವ ಯಾವಯಾವುದಕ್ಕೋ ಬಲಿಯಾಗಬಹುದು, ಆದರೆ ಮನುಷ್ಯ ಮನುಷ್ಯನನ್ನ ಕೊಲ್ಲುವುದು ಎಲ್ಲರನ್ನ ಭಯದಲ್ಲಿ ಮುಳುಗಿಸುವ ಕ್ರಿಯೆ. ರಾಜ್ಯದ ಮುಖ್ಯಮಂತ್ರಿಯಾದವರು ಎಲ್ಲ ಹತ್ಯೆಗಳನ್ನು ಖಂಡಿಸುತ್ತಾರೆ, ಸತ್ತವರ ಕುಟುಂಬಕ್ಕೆ ಸಾಂತ್ವನ ಹೇಳುತ್ತಾರೆ. ಆದರೆ ಕರ್ನಾಟಕವನ್ನಾಳುತ್ತಿರುವ ಸದ್ಯದ ನಾಯಕ ಕ್ರಿಯೆಗೆ ಪ್ರತಿಕ್ರಿಯೆಯಲ್ಲಿ ನಂಬಿಕೆ ಇಟ್ಟವರು. ಆದ್ದರಿಂದ ತಾರತಮ್ಯವೆಸಗಿದ್ದಾರೆ. ಸತ್ತವರ ಕುಟುಂಬಕ್ಕಾಗಲಿ ಪರಿಹಾರ ನೀಡುವ ವಿಷಯಕ್ಕಾಗಲಿ ಅವರು ತಾನು ಬಿಜೆಪಿ ಜನರ ರಕ್ಷಕನೇ ಹೊರತು ಇನ್ನಾರಿಗೂ ನಾಯಕನಲ್ಲ ಎಂಬುದನ್ನ ಸಾಬೀತುಪಡಿಸಿದ್ದಾರೆ. ಇದು ಈ ನಾಡಿಗೆ ಅವಮಾನ. ಚಿಂತಕ ಎಂ.ಎನ್ ರಾಯ್‌ರವರ ವಿದ್ವತ್ತಿನ ಅನುಯಾಯಿಯಾಗಿದ್ದ ಎಸ್.ಆರ್ ಬೊಮ್ಮಾಯಿಯವರ ಮಗನಿಂದ ತಂದೆಗೆ ಅವಮಾನವಾಗಿದೆ. ಅಷ್ಟಕ್ಕೂ ಈ ಬೊಮ್ಮಾಯಿಯವರು, ಸ್ವಪ್ರತಿಭೆ ಮತ್ತು ಸ್ವಪ್ರಯತ್ನದಿಂದ ಮುಖ್ಯಮಂತ್ರಿಯಾದವರಲ್ಲ; ಯಾವುದೋ ಮತಾಂದ ಕಂಪನಿ ನೇಮಿಸಿದ ಮೇನೇಜರ್. ’ನೀನು ಸುಮ್ಮನಿರು ಉಳಿದುದನ್ನ ನಾವು ನೋಡಿಕೊಳ್ಳುತ್ತೇವೆ’ ಎಂಬ ಆದೇಶ ಅವರು ನೇಮಕವಾದಾಗಿನಿಂದ ಚಾಲ್ತಿಯಲ್ಲಿದೆ. ಇವರ ಮನಸ್ಸಿಗೂ ಕಾಳಿ ಸ್ವಾಮಿ ಮನಸ್ಸಿಗೂ ಏನಾದರೂ ಸಂಬಂಧವಿದೆಯೇ ಎಂದು ಕರ್ನಾಟಕದ ಜನ ಚಿಂತೆಗೀಡಾಗಿದ್ದಾರಂತಲ್ಲಾ, ಥೂತ್ತೇರಿ..

*****

ಈ ರಾಜಕೀಯ ಹತ್ಯಾಕಾಂಡದಲ್ಲಿ ಒಬ್ಬನೇಒಬ್ಬ ಆರೆಸ್ಸೆಸ್ಸಿಗನಾಗಾಲಿ ಬಿಜೆಪಿ ಮುಖಂಡನಾಗಲೀ ಹತ್ಯೆಯಾದ ಉದಾಹರಣೆಯಿಲ್ಲ. ಏಕೆಂದರೆ ಅವರ ಜೀವ ದೇವನೂರರು ಹೇಳುವಂತೆ ಸಪ್ತ ಸಮುದ್ರದಾಚೆಯಿರುವ ಕಾಡಿನ ಮರದ ಪೊಟರೆಯಲ್ಲಿರುವ ಗಿಳಿಯ ದೇಹದಲ್ಲಿ ಸುರಕ್ಷಿತವಾಗಿದೆ. ಅದನ್ನ ರಕ್ಷಿಸುವ ಹೂಣೆ ಈ ಶೂದ್ರ ಜಾತಿ ಹುಡುಗರ-ಕಾರ್ಯಕರ್ತರ ಕರ್ತವ್ಯ. ಸಂಘಿಗಳ ಪ್ರಕಾರ ಯಾವುದು ಶಕ್ತಿವಂತ ಸಮೂಹವೊ ಅದು ಶಕ್ತಿಯಿಲ್ಲದ್ದನ್ನ ಜಯಿಸಿ ಅರಗಿಸಿಕೊಳ್ಳುತ್ತದಂತೆ. ಮುಸ್ಲಿಮರನ್ನ ಹೊಡೆದು ಓಡಿಸಿ ಎಂಬ ಸಂದೇಶವನ್ನ ಗೋಳವಲಕರನೇ ನೀಡಿ ಹೋಗಿದ್ದಾರೆ. ಸರಿಯಾದ ಜನಗಣತಿ ನಡೆದರೆ ಮುಸ್ಲಿಮರು ಮುವತ್ತು ಕೋಟಿ ದಾಟಬಲ್ಲರು. ಪ್ರಪಂಚದ ಯಾವ ದೇಶದಲ್ಲೂ ಇಷ್ಟ ಸಂಖ್ಯೆಯಲ್ಲಿ ಮುಸ್ಲಿಮರು ಇರಲಾರರು. ದಾಳಿಯಿಂದ ಭಾರತಕ್ಕೆ ಬಂದ ಮುಸ್ಲಿಮರಲ್ಲಿ ಬಂದವರು ಬರೀ ಸೈನಿಕರೇ ಹೊರತು ಅವರು ಹೆಂಡತಿ ಮಕ್ಕಳೊಂದಿಗೆ ಬಂದವರಲ್ಲ. ಕುಟುಂಬವನ್ನ ಇಲ್ಲೇ ಸಂಪಾದಿಸಿಕೊಂಡರು. ಹಿಂದೂ ಧರ್ಮದ ಜಾತೀಯತೆ ಮತ್ತು ಅಸ್ಪೃಶ್ಯತೆಯ ಅವಮಾನದಿಂದ ನೊಂದವರು ಹಾಗೂ ಅಮಿಷಕ್ಕೆ ಬಲಿಯಾದವರೆಲ್ಲಾ ಮುಸ್ಲಿಮರಾದರು. ಈಗ ಮುಸ್ಲಿಮರಾಗಿದ್ದರೂ ಅವರಿಗೆ ನೆಮ್ಮದಿಯಿಲ್ಲ. ಆದರೂ ಅವರಿಲ್ಲೇ ಇರುತ್ತಾರೆ. ಅವರು ಕೂಡ ಇಲ್ಲಿನ ದೇಶವಾಸಿಗಳೆಂಬುದನ್ನ ಅರ್ಥಪಡಿಸುತ್ತಿದ್ದಾರೆ. ಅವರ ಅಭದ್ರ ಸ್ಥಿತಿಯೇ ಅವರಲ್ಲಿ ದೈತ್ಯ ಶಕ್ತಿಯನ್ನ ಮೂಡಿಸುತ್ತದೆ. ಜನಾಂಗೀಯವಾದಿಗಳಿಗೆ ಇದು ಅರ್ಥವೇ ಆಗುತ್ತಿಲ್ಲವಂತಲ್ಲಾ, ಥೂತ್ತೇರಿ.

*****

ರಾಷ್ಟ್ರೋತ್ಥಾನ ಸಾಹಿತ್ಯದ ಅಗ್ರಲೇಖಕರಾದ ಎಸ್.ಎಲ್ ಭೈರಪ್ಪನವರು, ಕೆಲ ಲೇಖಕರು ಉತ್ತಮ ಕೃತಿಗಳನ್ನ ರಚಿಸುವಲ್ಲಿ ವಿಫಲವಾಗಿದ್ದಾರೆ ಎಂಬ ಆಪಾದನೆಯನ್ನ ಬರೀ ಬ್ರೇಮಿನ್ ವಿಮರ್ಶಕರೇ ಹೆಚ್ಚಿರುವಾಗ ಮಾಡಿದ್ದಾರಂತಲ್ಲಾ. ಹಾಗೆ ನೋಡಿದರೆ ಕನ್ನಡ ವಿಮರ್ಶಕರ ಕಟು ಟೀಕೆಯನ್ನ ಭೈರಪ್ಪನವರು ಸಕಾರಣವಾಗಿಯೇ ಎದುರಿಸಿದ್ದಾರೆ. ಅದರಲ್ಲೂ ನವ್ಯರ ಹೊಡೆತಗಳ ಎದುರು ಭೈರಪ್ಪನವರು ಮಂಕಾಗಿ ಹೋಗಿದ್ದರು. ಏಕೆಂದರೆ ಅನಂತಮೂರ್ತಿ, ಲಂಕೇಶ್, ತೇಜಸ್ವಿ, ಶಾಂತಿನಾಥ ದೇಸಾಯಿ ಇವರೆಲ್ಲಾ ಭೈರಪ್ಪನವರ ಅಗ್ರಹಾರದ ಕಾಯಿಗಳನ್ನ ಅನಾವರಣ ಮಾಡಿ ಸರಿಮಾಡಿಕೊಳ್ಳಿ ಎಂದಿದ್ದರು. ಅದರಲ್ಲೂ ನವ್ಯದಲ್ಲಿ ಹೆಚ್ಚು ದಿನ ಇರದ ತೇಜಸ್ವಿಯವರಂತೂ ಭೈರಪ್ಪನ ಆವರಣ ಕೃತಿಗೆ ಒಂದು ಸಾಲಿನ ವಿಮರ್ಶೆ ಮಾಡಿ, ’ಹೊಟ್ಟಿಗೆ ಅನ್ನ ತಿನ್ನುವವರಾರು ಇಂತಹ ಕೃತಿ ಬರೆಯಲಾರ’ ಎಂದಿದ್ದರು. ಹೀಗೆ ಭೈರಪ್ಪನವರ ಅಪಾಯಕಾರಿ ಕೃತಿಗಳ ಬಗ್ಗೆ ಎಚ್ಚರಿಸಿ ಹೋಗಿದಾರೆ. ಸರಿಯಾದ ವಿಮರ್ಶಕರಿದ್ದರೆ, ಭೈರಪ್ಪನವರ ಮಾತು ಅವರ ಹಲವು ಕಾದಂಬರಿಗಳಿಗೇ ಅನ್ವಯಿಸುತ್ತದೆಂತಲ್ಲಾ, ಥೂತ್ತೇರಿ.

******

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಸೋಮನಹಳ್ಳಿಯಲ್ಲಿ ನಡೆದ ಜೆಡಿಎಸ್ ಸಭೆಯಲ್ಲಿ ಕುಮಾರಣ್ಣ ಮತ್ತು ರೇವಣ್ಣ ಅಳುವುದನ್ನ ನೋಡಿದ ಜನ ದಂಗಾಗಿ ಹೋದರಂತಲ್ಲಾ. ಜನ ಸಂಘಟನಾ ಸಭೆಗಳನ್ನ ತಮ್ಮ ಜೀವಮಾನದುದ್ದಕ್ಕೂ ಮಾಡಿಕೊಂಡು ಬಂದ ದೇವೇಗೌಡರು, ತಾವೇ ರೂಪಿಸಿಕೊಂಡ ವೈರಿಗಳನ್ನ ಹತ್ತಿಕ್ಕುವ ಸಭೆಗೆ ಮೊದಲಬಾರಿಗೆ ಬರಲಾಗಲಿಲ್ಲ. ದೇವೇಗೌಡರಿಗೆ ತಮ್ಮ ಮಕ್ಕಳನ್ನ ದಾರಿ ತಪ್ಪಿಸಿದವರ ಪೈಕಿ ಚಲುವರಾಯಸ್ವಾಮಿ, ಬಾಲಕೃಷ್ಣ, ಜಮೀರ್ ಇತ್ಯಾದಿಗಳನ್ನ ಸರ್ವನಾಶಮಾಡದ ಹೊರತು ನೆಮ್ಮದಿಯಿಲ್ಲಾ. ಈಚೆಗೆ ಆ ಪಟ್ಟಿಗೆ ಕೆ.ಆರ್ ಪೇಟೆ ನಾರಾಯಣಗೌಡರು ಸೇರಿಕೊಂಡಿದ್ದಾರೆ. ಈ ನಾರಾಯಣಗೌಡರ ಕ್ಷೇತ್ರಕ್ಕೂ ಬಿಜೆಪಿಗೂ ಸಂಬಂಧವೇ ಇಲ್ಲ. ಇವರನ್ನ ಹೀನಾಯವಾಗಿ ನಡೆಸಿಕೊಂಡ ಕಾರಣವಾಗಿ ಕೆ.ಆರ್ ಪೇಟೆಯಲ್ಲಿ ಬಿಜೆಪಿ ಕಾಲೂರಿತು. ಇದರ ಜಾಡನ್ನೇ ಹಿಡಿದು ನೋಡುತ್ತಾ ಹೋದರೆ ಜೆಡಿಎಸ್ ಪಾರ್ಟಿ ಕರ್ನಾಟಕದಲ್ಲಿ ಬಿಜೆಪಿ ಕಾಲೂರುವಂತೆ ಮಾಡಲು ಬಹಳ ಶ್ರಮವಹಿಸುತ್ತಿರುವುದು ಎದ್ದು ಕಾಣುತ್ತಿದೆಯಲ್ಲಾ. ಕರ್ನಾಟಕದಲ್ಲಿ ಮೂರನೇ ಪಾರ್ಟಿಯೊಂದು ಇರಲೇಬೇಕೆಂದು, ಅದಕ್ಕಾಗಿ ಶ್ರಮಿಸಿದ್ದವರೆಲ್ಲಾ ಒಬ್ಬೊಬ್ಬರೇ ಹಲ್ಲುಕಳಚಿದಂತೆ ಬಿದ್ದುಹೋಗುತ್ತಿರುವ ಬಗ್ಗೆ ಯೋಚಿಸಿ ಕಣ್ಣೀರು ಹಾಕಬೇಕಿತ್ತು. ಅದರ ಬದಲು ಚಲುವರಾಯಸ್ವಾಮಿಯನ್ನ ಸೋಲಿಸಲೋಸ್ಕರ ಜನರನ್ನ ಭಾವುಕರನ್ನಾಗಿಸಲು ಕಣ್ಣೀರು ಹಾಕಬಾರದಿತ್ತು. ರೇವಣ್ಣ ಕುಮಾರಣ್ಣ ಅಳುವುದನ್ನ ನೋಡಿದ ನಾಗಮಂಗಲದ ಜನರು, ರೇವಣ್ಣ ಕಣ್ಣೀರು ಹಾಕಿದವರಲ್ಲ, ಅಂತಹ ಮನುಷ್ಯ ಅಳುತ್ತಿರಬೇಕಾದರೆ ಏನೋ ಭಾರಿ ಕುಟುಂಬ ಸಮಸ್ಯೆ ಇರಬೇಕೆಲ್ಲ, ಎಂದು ಗಾಬರಿ ಮುಖದಲ್ಲಿ ಚರ್ಚಿಸುತ್ತಿದ್ದಾರಂತಲ್ಲಾ, ಥೂತ್ತೇರಿ.


ಇದನ್ನೂ ಓದಿ: “ನಮ್ಮ ರೈಲ್ವೆ ಬೋಗಿಗಳನ್ನ ನೋಡಿದ್ದೀರಾ!”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...